ಅಂತರಂಗ
ರಾಜ್ಯದ ಗಡಿಯಿಂದ ದೇಶದ ಗಡಿಗೆ ಪ್ರವಾಸದ ಕ್ಷಣಗಳು..!
- ಕೆ.ಶ್ರೀಧರ್ (ಕೆ.ಸಿರಿ), ಯುವ ಸಾಹಿತಿ
ಗಡಿ ಪ್ರದೇಶಗಳೆ ಹಾಗೆ ವಿವಿಧ ರೀತಿಯ ವೈಶಿಷ್ಟ್ಯ ಹಾಗೂ ಪ್ರಪಂಚದ ಮೂಲೆಯಲ್ಲಾಗುವ ಕ್ರಿಯೆಗಳಿಗೆ ಪ್ರತಿಕ್ರಿಯಿಸುವ ಸ್ಪಂದನಾಶೀಲತೆಯನ್ನು ಗಡಿರೇಖೆಯಲ್ಲಿರುವ ಜಿಲ್ಲೆಗಳಾಗಲಿ,ರಾಜ್ಯಗಳಾಗಲಿ ಅಥವಾ ದೇಶದ ಗಡಿಯಲ್ಲಾಗಲಿ ಹೊಂದಿರುತ್ತವೆ ಗಡಿರೇಖೆಯಲ್ಲಿನ ಚಟುವಟಿಕೆಗಳು, ಸಂಪ್ರದಾಯಗಳು, ಜನಜೀವನ ಪದ್ದತಿಗಳುಆಡಳಿತಾತ್ಮಕ ವಿಚಾರಗಳು ವಿಭಿನ್ನವಾಗಿರುತ್ತವೆ.
ನಮಗೆಲ್ಲರಿಗೂ ತಿಳಿದಿರುವ ಹಾಗೆ ಚಾಮರಾಜನಗರ ಹಚ್ಚ ಹಸಿರುಳ್ಳ ಬೆಟ್ಟ ಗುಡ್ಡಗಳು, ನದ-ನದಿಗಳನ್ನೊಳಗೊಂಡಿರುವ ಒಂದು ಪ್ರವಾಸಿಗರನ್ನು ಸೆಳೆಯುವ ಭೂ ಲೋಕದ ಸ್ವರ್ಗ ಎಂದರೆ ಬಹುಶಃ ತಪ್ಪಾಗಲಾರದು. ಇಂತಹ ಗಡಿಜಿಲ್ಲೆಯಿಂದ ಕನ್ಯಾಕುಮಾರಿ ಪ್ರಸಿದ್ದ ಪ್ರವಾಸಿ ತಾಣಕ್ಕೆ ಹೋಗಬೇಕೆಂದು ಗೆಳೆಯರೆಲ್ಲರೂ ನಿರ್ಧರಿಸಿ ದಿನಾಂಕ 30/04/2022 ರ ಸಂಜೆ ಹೊತ್ತಿಗೆ ವಾಹನವೇರಿ ಕನ್ಯಾಕುಮಾರಿಯ ಕಡೆಗೆ ಹೊರಟೆವು.
ಲಗೇಜುಗಳು, ಶೂಗಳು, ಚಾರ್ಜರ್, ಪವರ್ ಬ್ಯಾಂಕ್ ಎಲ್ಲವೂ ತುಂಬಿಕೊಂಡು ಪುಣಜನೂರು ಚೆಕ್ ಪೋಸ್ಟ್ ದಾಟಿ ಹೊರಟೆವು ಆರಂಭದಲ್ಲಿಯೇ ದಾರಿಯಲ್ಲಿ ನಮಗೆ ಆನೆಗಳ ದಂಡು ಕಂಡು ಸಂತೋಷವಾಯಿತು ಆನೆ ಅಂದ್ರೆ ಎಂತಾ ಆನೆಗಳಿಂತೀರಾ ದೊಡ್ಡ ದೊಡ್ಡ ಕಾಡಾನೆಗಳು ರೋಡಿನ ಪಕ್ಕದ ಹುಲ್ಲುಗಾವಲಿನಲ್ಲಿ ಬೆಟ್ಟದಂತೆ ನಿಂತು ಸೊಂಡಿಲಾಡಿಸುತ್ತಿದ್ದವು.
ಹಾಗೆಯೇ ವಾಹನದಲ್ಲಿ ಪ್ರಯಾಣಿಸುತ್ತಾ ಸಿನೆಮಾ ಹಾಡುಗಳಿಗೆ ಹೆಜ್ಜೆ ಹಾಕುತ್ತಾ, ಹಾಡುಗಳನ್ನು ಹಾಡುತ್ತಾ ನಾನ ತರಹದ ಚೇಷ್ಟೆಗಳೊಂದಿಗೆ ನಮ್ಮ ಪ್ರಯಾಣ ಸಾಗಿ ಬಣ್ಣಾರಿಯ ಬಣ್ಣಾರಮ್ಮನ ದರ್ಶನ ಪಡೆದು ಡಾಬಾವೊಂದರಲ್ಲಿ ಊಟ ಸೇವಿಸಿ ಮುಂದೆ ಸಾಗಿದೆವು ಊಟದ ನಂತರ ಎಲ್ಲರೂ ಮೊಬೈಲ್ ಎಂಬ ಮಾಯಲೋಕದಲ್ಲಿ ಮುಳುಗಿ ಮಗ್ನರಾದೆವು ಮಧ್ಯದಲ್ಲಿ ಒಬ್ಬ ಗೆಳೆಯ ಬಸಣ್ಣಿ ಬಾ….ಬಸಣ್ಣಿ..ಬಾ ಎಂಬ ಹಾಡು ಪ್ಲೇ ಆಗಿದ್ದೆ ತಡ ಕುಳಿತಿರುವ ಹಾಸನದಿಂದ ಎದ್ದು ಬಂದು ಕುಣಿಯಲಾರಂಭಿಸಿ ಉಳಿದವರು ಕುಣಿಯಲಾರಂಭಿಸಿದೆವುಕುಣಿಯಲಾರಂಭಿಸಿದೆವು.
ಬೆವರು ಹರಿದು ದಮ್ಮತ್ತಿದಾಗ ರಾತ್ರಿಯ ಆ ಕಿಟಕಿಯ ಗಾಳಿಗೆ ತಲೆಗಳು ತೂಗಿ ಕುಳಿತಲ್ಲಿಯೇ ಎಲ್ಲರೂ ನಿದ್ರೆಗೆ ಜಾರಿದೆವು ನಿದ್ದೆ ಯಾವಾಗ ಬಂತೋ ಕಾಣೆ ಬೆಳಿಗ್ಗೆ 6.18 ಕ್ಕೆ ಕಣ್ಣು ತೆರೆದು ನೋಡಿದರೆ ಯಾವುದೋ ನಮ್ಮದಲ್ಲದ ಊರಿಗೆ ಬಂದಂತೆನಿಸಿತು, ತಮಿಳು ಭಾಷೆಯ ಗಂಧವೆ ತಿಳಿಯದ ನಮಗೆ ದಿಕ್ಕುತಪ್ಪಿ ಬಂದಂತಾಯಿತು ” ವಾಂಗ್ ತಂಬಿ ನಲ್ಲ ರೂಂ ಇರುಕಾ ಕುಲೀರಂತ ನೀರ್, ವೆನ್ನೀರ್ ಅಂಕು ಉಲ್ಲತ್, ಆಯಿರಮ್ ವಾಟಕೈಕ್ಕು ವಾಕನತ್ತೈ ನಿರುತ್ತುವತ್ತಮ್” ಎಂದು ಯಾರೋ ಒಬ್ಬ ಕೊಂಗರ ನಾಡಿನವನು ನಮ್ಮನ್ನು ಕರೆದಾಗ ನಮ್ಮ ವಾಹನ ಆಗಾಗಲೇ ಸಮುದ್ರದ ತೀರದ ಹತ್ತಿರವಿರುವ ಶ್ರೀ ರಾಮೇಶ್ವರ ದೇವಾಲಯದ ಬಳಿ ನಿಂತಿತ್ತು ಕುತೂಹಲದಿಂದ ನಮಗೆ ಬರುವ ಹರಕು ಮುರುಕು ತಮಿಳಿನಲ್ಲ “ಇಂಕ ಸಮುದ್ರಕ್ ಪೇರು ಸೊಲ್ಲು” ಎಂದಾಗ “ಅಗ್ನಿತೀರ್ಥಂ” ಎಂದು ಟೀ ಬೋಂಡಾ ಬೇಯಿಸುತ್ತಲೇ ಒಬ್ಬ ವ್ಯಾಪಾರಿ ತಿಳಿಸಿದ ಗಾಡಿ ಹೊರಟು ದಾರಿ ಕಾಣದೆ ಟ್ರಾಫಿಕಿನಲ್ಲಿ ನಿಂತಾಗ ನಮ್ಮ ಹುಡುಗರು ಸಮುದ್ರ ದಡ ನೋಡಿ ಸುಮ್ಮನೆ ಬಿಡುವರೆ ಆಗಲೇ ಅನ್ವೇಷಕರಂತೆ ಗೂಗಲ್ ಮ್ಯಾಪ್ ಹುಡುಕಿ ಭಾರತದ ಕೆಳಭಾಗದ ಶ್ರೀಲಂಕಾದ ಗಡಿಯಲ್ಲಿದ್ದೇವೆಂದರಿತು ಗೂಗಲ್ ಮ್ಯಾಪ್ ನ್ನು ಸ್ಕ್ರೀನ್ ಶಾಟ್ ತೆಗೆದು ವಾಟ್ ಆಫ್ ಸ್ಟೇಟಸ್ ಹಾಕಿದ್ದೇ ಹಾಕಿದ್ದು ಇನ್ನು ಹಲವು ಪೋಟೋ ಪ್ರೇಮಿಗಳು ಹಾಳು ಮುಖದಲ್ಲಿಯೇ ಸಮುದ್ರ ತೀರದಲ್ಲಿ ನಿಂತು ಆ ಬೋಟ್ ಗಳು ಕಾಣುವಂತೆ ಪೋಟೋ ತೆಗೆಸಿಕೊಂಡು ವಾಟ್ಸ್ ಆಫ್ ಸ್ಟೇಟಸ್ಸಿನಲ್ಲಿ ಹಂಚಿಕೊಂಡು ಸಂಭ್ರಮಿಸಿದರು ಅಂತೂ ಇಂತೂ ರಾಮೇಶ್ವರಂ ನ ಬಾಡಿಗೆ ರೂಂ ಗೆ ಹೋಗಿ ಬೇಗ ಬೇಗನೆ ಜಳಕ ಮಾಡಿ ಎಷ್ಟು ಸಾಧ್ಯವೋ ಅಷ್ಟು ಪ್ರೇಕ್ಷಣೀಯ ಸ್ಥಳಗಳನ್ನು ಕವರ್ ಮಾಡುವ ಆಸೆಯಿಂದ ಹೋದರೆ ಕೆಲವರು ಜಳಕ ಮಾಡಿ ರೆಡಿಯಾದರೆ ಇನ್ನು ಕೆಲವರು ಮಲಗಿ ಮೊಬೈಲ್ನಲ್ಲಿ ಹರಟುತ್ತಾ ಕುಳಿತು ನೀ ಬಾ…ನಾ …ಬಾ ನಿನ್ನಿಂದ ಲೇಟು….ನಿನ್ನಿಂದಾ ಲೇಟು ಎಂದು ವಾದಿಸುತ್ತಾ ಅಲ್ಲಿಯೇ ಪುಟ್ ಪಾತ್ ಮೇಲಿರುವ ಹೋಟೆಲ್ಲೊಂದರಲ್ಲಿ ಇಡ್ಲಿ ಸವಿದೆವು ಇಲ್ಲಿಯೂ ಕೂಡ ಅರೆ ಬರೆ ತಮಿಳು ಕಲಿತ ನನ್ನ ದೋಸ್ತ್ ರಾಕೇಶ್ ನಮ್ಮ ಮೇಸ್ತ್ರೀಯಂತೆ ‘ಇಡ್ಲಿ ಕೊಡಂಗ, ತಣ್ಣೀ ಕೊಡಂಗ’ ಎಂದು ಹಾವ ಭಾವ ಮಾಡಿ ಬಲು ಜೋಕಾಗಿ ತಿಣುಕಾಡಿ ಹೇಳಹತ್ತಿದ ನಾವು ಕೂಡಾ ಭಾಷೆ ಬಾರದೆ ಇತ್ತ ಸುಮ್ಮನೆ ಇರದೆ ತೆಲುಗು ಕನ್ನಡ ತಮಿಳು ಸೇರಿಸಿ “ರಂಡು ಇಡ್ಲಿ ಕೊಡಿ ” ಎಂದು ಕೇಳಿ ಮುಖ ಮುಖ ನೋಡಿಕೊಂಡು ನಕ್ಕು ತಿಂದು ಧನುಷ್ ಕೋಡಿ ಮತ್ತು ಆರ್ಚಲ್ ಮುನಾಯ್ ನೋಡಬೇಕು ಬಿಸಿಲು ನೆತ್ತಿಗೇರುವ ಹೊತ್ತಿಗಾಗಲೇ ಎಂದು ಅವಸರವಸರವಾಗಿ ಹೊರಟೆವು ಸಮುದ್ರ ತೀರದ ತಾಪ ಯಪ್ಪಾ ! ಹೇಳತೀರದು.
ಧಗೆಗೆ ಮೈಯಲ್ಲಿ ಹರಿಯುವ ಬೆವರಿಗೆ ಎಷ್ಟು ಸ್ನಾನ ಮಾಡಿದರೂ ವ್ಯರ್ಥ ಆ ಧಗೆಗೆ ಮುಖಗಳುರಿದು ನಿದ್ದೆಗೆಟ್ಟ ನಮ್ಮ ಮುಖಗಳು ಇನ್ನಷ್ಟು ಕಳೆಗುಂದಿದವು….. ಹಾಗೆಯೇ ಕಿಟಕಿಯಲ್ಲಿ ಕಣ್ಣಾಡಿಸಿ ನೋಡಿದರೆ ಆಕಾಶ ಯಾವುದೋ ಸಮುದ್ರ ಯಾವುದೋ ಒಂದು ಕಾಣೆ ಎಲ್ಲವೂ ಕರತಲಾಮಲಕ ಧೊಪ್ಪೆಂದು ಫೀನಿಕ್ಸ್ ನಂತೆ ಬರುವ ಆ ರಕ್ಕಸ ಅಲೆಗಳ ಕಂಡು ನಾವು ವಿಚಲಿತರಾದೆವು ಹೋ……. ಎಂದು ಕೂಗಿ ವಾವ್ಹ್ ಎಂದು ಅರಚಿ ಅಲೆಗಳನ್ನು ನೋಡಿ ಸಮುದ್ರದಲ್ಲಿ ಒತ್ತಡ ಎಷ್ಟಿರಬೇಕೆಂದು ಚರ್ಚಿಸಿ ತಮ ತಮಗೆ ತಿಳಿದ ಅನಿಸಿಕೆಗಳನ್ನು ವ್ಯಕ್ತಪಡಿಸಿ ಆರ್ಚಲ್ ಮುನಾಯ್ ಪ್ರಸಿದ್ದ ಸ್ಥಳಕ್ಕೆ ಬಂದೆವು ಅದು ಮೂರು ಸಮುದ್ರಗಳು ಸಂಗಮವಾಗುವ ಜಾಗ , ಸ್ವರ್ಗದ ಗಡಿಯೆಂದರೂ ತಪ್ಪಾಗಲಾರದೂ ಆ ಸಮುದ್ರದ ಅಲೆಗಳ ನರ್ತನ ಕಂಡು ಕ್ಲಿಚಕ್… ಕ್ಲಿಚಕ್… ಎಂದು
ಪೋಟೋ ತೆಗಿಸಿಕೊಂಡು ಹುಚ್ಚೆದ್ದು ಕುಣಿದು ಲೋಕವನ್ನೆ ಮರೆತು ಸಂಭ್ರಮಿಸಿ ಮುಂದೆ ಧನುಷ್ ಕೋಡಿ ಎಂಬ ಬೇಚಿರಾಕ್ ಗ್ರಾಮಕ್ಕೆ ಬಂದೆವು ಧನುಷ್ ಕೋಡಿ ಶ್ರೀ ರಾಮನು ಬಾಣ ಬಿಟ್ಟ ಊರು 1964 ರಲ್ಲಿ ಸೈಕ್ಲೋನ್ ಬಂದು ಇಡೀ ಗ್ರಾಮಕ್ಕೆ ಗ್ರಾಮವೇ ಕೊಚ್ಚಿಕೊಂಡು ನೀರುಪಾಲಾಗಿದೆ ಅಲ್ಲಿ ಇಂದಿಗೂ ಪಾಳು ಮನೆಗಳು ರೈಲ್ವೇ ಜಂಕ್ಷನ್ ಇದ್ದು ಅಲ್ಲಿ ರಾಮಸೇತುವೆಗೆ ಬಳಸಿದ ‘ನೀರಿನಲ್ಲಿ ತೇಲುವ ಕಲ್ಲು’ ನೋಡಿ ಖುಷಿಪಟ್ಟೆವು ಮುಂದೆ ಸಾಗಿ ರಾವಣನು ತನ್ನ ಸಹೋದರನಿಗೆ ಪಟ್ಟಾಭಿಷೇಕ ಮಾಡಿದ ಸ್ಥಳವನ್ನು ನೋಡಿ ಕೈ ಮುಗಿದು, ಎಳನೀರು, ಐಸ್ ಕ್ರೀಂ ತಿಂದು ರಾಮೇಶ್ವರಂ ಕಡೆಗೆ ಹೊರಟು ಸೀದಾ ರಾಮೇಶ್ವರ ದೇವಾಲಯಕ್ಕೆ ಹೊರಟೆವು ಅಬ್ಬಾಬ್ಬ ! ಅದೆಂತ ಅದ್ದೂರಿ ದೇವಾಲಯ ಆ ಕಂಬಗಳು ಆ ಹಜಾರಗಳು, ಆ ಮಂಟಪಗಳು, ಆ ಮೇಲ್ಚಾವಣಿಗಳು, ಆ ದೇವರ ದರ್ಶನಕ್ಕೆ ಸಾಲುಗಟ್ಟಿ ನಿಂತ ಭಕ್ತರು, ಆ 21 ಕೊಳದ ನೀರಿನಲ್ಲಿ ಸ್ನಾನ ಮಾಡಲು ನಿಂತ ಜನರು ಕಲೆ ಮತ್ತು ವಾಸ್ತುಶಿಲ್ಪ ನೋಡಿ ಯಾವ ಶತಮಾನದ ದೇವಾಲಯಗಳೆಂದು ನೋಡಿದರೆ 7-8 ನೇ ಶತಮಾನದ ಭವ್ಯವಾದ ರಾಮೇಶ್ವರ ದೇವಾಲಯದ ಶಿಲ್ಪಿಗಳಿಗೆ ನನ್ನ ಧೀರ್ಘದಂಡ ನಮಸ್ಕಾರಗಳು.
ದರ್ಶನ ಮುಗಿಸಿಕೊಂಡು ಮಜ್ಜಿಗೆ ಕುಡಿದು ಜನನ-ಮರಣ ನಾಗೇಂದ್ರನ ಕಪಿಚೇಷ್ಟೇ ಗೂಗಲ್ ಮ್ಯಾಪ್ ರೂಟ್ ಹಿಡಿದು ದಾರಿ ಸಿಗದೆ ಹೆಣಗಾಡಿ ನಾಗನಿಗೆ ಬೈದಾಡಿ ಬಸವಳಿದು ರೂಂ ತಲುಪಿದ್ದಾಯ್ತು ಪುನ: ನೇರ ಕನ್ಯಾಕುಮಾರಿಗೆ ಹೋಗಲು ನಿರ್ಧರಿಸಿ ಕೆಲಹೊತ್ತು ವಿಶ್ರಮಿಸಿ ಹೋಗೋಣವೆಂದು ವಾಗ್ವಾದ ನಡೆಸಿ ಯಾರ ಮಾತಿಗೂ ಒಲಿಯದ ನಮ್ಮ ಹುಡುಗರು ಧಗೆಯ ಏಟಿಗೆ ಒಲಿದು ಗಂಟುಮೂಟೆ ಕಟ್ಟಿಕೊಂಡು ಕನ್ಯಾಕುಮಾರಿಯ ಹಾದಿ ಹಿಡಿದೆವು.
ಉಫ್ss…ಧಗೆಯ ಛಡಿ ಏಟಿಗೆ ಹಸಿದ ಹೊಟ್ಟೆಗೆ ಊಟ ಮಾಡಲು ನಿರ್ಧರಿಸಿ ಯಾವುದಾದರೂ ಚೀಫ್ ಅಂಡ್ ಬೆಸ್ಟ್ ಹೋಟೆಲ್ ಹತ್ತಿರ ವಾಹನ ನಿಲ್ಲಿಸಲು ಹೇಳಿದೆವು ಸಮುದ್ರದ ಮಧ್ಯೆ ಮೇಲ್ಸುತೆವೆಯ ಹತ್ತಿ ಮಾವಿನ ಹಣ್ಣು, ಪೈನಾಪಲ್ ಸವಿಯುತ್ತಾ ಸಮುದ್ರದ ವಿಹಂಗಮ ನೋಟ ನೋಡಿ ಕಣ್ತುಂಬಿಕೊಂಡು ಮುಂದೆ ಸಾಗಿ ಒಂದೆರೆಡು ಹೋಟೆಲ್ಲುಗಳ ನೋಡಿ ಕೊನೆಗೆ ಒಂದು ಪುಟ್ಟ ಗುಡಿಸಲಿನ ಹೋಟೆಲ್ ಹತ್ತಿರ ಊಟಕ್ಕೆ ಹೋದಾಗ ಅಲ್ಲಿ ಅನ್ನ ಮೀನುಳಿ ಮತ್ತು ಫಿಶ್ ಫ್ರೈ ಮಾತ್ರವೇ ಇದ್ದುದಾಗಿ ಹೇಳಿದರು ನಾವು ಅಲ್ಲಿಯೇ ಊಟ ಮಾಡಲು ಕುಳಿತೆವು ಊಟ, ಅಂದ್ರೆ ಅದು ಕಣ್ರೀ ಆ ಹೋಟೆಲ್ಲಿನ ಬೀಟ್ ರೋಟ್ ಪಲ್ಯಾ, ಅಲಸಂದೆ ಪಲ್ಯಾ, ಆಮ್ಲೇಟ್, ಆ ಮೀನಿನ ಫ್ರೈ ಅಬ್ಬಾ ನಾಲಿಗೆ ಮೇಲೆ ಆ ರುಚಿ ಇನ್ನೂ ಹಾಗೆಯೇ ಇದೆ ಸಮುದ್ರದ ಮೀನಲ್ವಾ ಹೊಳೆಯ ಮೀನು ತಿಂದ ನಮಗೆ ಸಮುದ್ರದ ಮೀನು ಬಲು ರುಚಿ ಕೊಡ್ತು ಈ ಬರಗೆಟ್ಟ ನಾಲಿಗೆಗೆ ಪ್ರಯಾಣ ಹಾಗೆಯೇ ಸಾಗಿತು.
ಒಂದೆರಡು ಕಡೆ ಟೀ ಕುಡಿದು ಹೊರಟು ಸೀದಾ ಬಾಲಮುರುಗನ್ ದೇವಾಲಯಕ್ಕೆ ಹೊರಟೆವು ಬೀಚ್ನಲ್ಲಿ ಕೆಲವರು ಈಜಿ ಕೆಲವರು ದರ್ಶನ ಪಡೆದು ಸಂಭ್ರಮಿಸಿ ಮುಂದೆ ಡಾಬ ಒಂದರಲ್ಲಿ ಊಟ ಮುಗಿಸಿ ವಾಹನದಲ್ಲಿ ಸಿನೆಮಾ ಹಾಡುಗಳ ಮಧ್ಯೆ ಪ್ರಯಾಣ ಸಾಗಿ ರಾತ್ರಿ 12 ಗಂಟೆಯ ಮೇಲೆ ಕನ್ಯಾಕುಮಾರಿ ತಲುಪಿ ವಾಗ್ ಯುದ್ಧಕ್ಕಿಳಿದು ಎರಡು ರೂಂ ಮಾಡಿ ಬೆಳಗ್ಗೆ ಕನ್ಯಾಕುಮಾರಿಯ ಪ್ರಸಿದ್ಧ ಸೂರ್ಯೋದಯ ಆಗುವ ದೃಶ್ಯವನ್ನು ನೋಡಬೇಕೆಂದು ಚರ್ಚಿಸಿ ಮೊಬೈಲ್ ಚಾರ್ಜ್ ಗೆ ಹಾಕಿ, ಹಸಿ ಬಟ್ಟೆಗಳ ಒಣಗಾಕಿ ಮಲಗಿ ಅಲಾರಾಂ ಸದ್ದಿಗೆ ನೀ ಏಳು, ನಾ ಏಳು ಎಂದು ಕೊನೆಗೆ ಒಂದ್ಮೂರ್ನಾಲ್ಕು ಜನ ಮಾತ್ರವೇ ಕನ್ಯಾಕುಮಾರಿಯ ಕವಿ ತಿರುವಳ್ಳೂರು ಪ್ರತಿಮೆ ಮತ್ತು ಸ್ವಾಮಿ ವಿವೇಕಾನಂದ ರಾಕ್ ಗಾರ್ಡನ್ ಹತ್ತಿರದ ಕಡಲ ತೀರಕ್ಕೆ ಹೊರಟೆವು ” ಸ್ವರ್ಗ ಮೇಲೆಲ್ಲೂ ಇಲ್ಲ ಕನ್ಯಾಕುಮಾರಿಯಲ್ಲೆ ಇದೆ ಅಂತ ನನಗನಿಸ್ತು ಏನ್ರೀ ಆ ಸಮುದ್ರದ ಅಲೆಗಳ ಶಬ್ಧ ಅಬ್ಬಾ…..! ಏನ್ರೀ ಸೂರ್ಯೋದಯಕ್ಕೂ ಮುನ್ನ ಸಮುದ್ರದಾಸಿಗೆಯ ಮೇಲೆ ಬೀಳೋ ಹೊಂಬಣ್ಣ, ಕೆಂಬಣ್ಣ ಮತ್ತು ಮೀನುಗಾರಾರು ಸಮುದ್ರದ ಸಣ್ಣ ಹಡಗಿನಲ್ಲಿ ಬಲೆಯನಾಕುವ ದೃಶ್ಯ ಎಲ್ಲವೂ ಸ್ವರ್ಗಸದೃಶ್ಯವೇ ಸರಿ” ಅಂತೂ ಇಂತೂ ಸಮುದ್ರದಿಂದಲೇ ಸೂರ್ಯ ಹುಟ್ಟೋದೇನೋ ಅನಿಸ್ತು ಆ ಸೂರ್ಯೋದಯ ಆ ಚೆಲುವನ್ನು ವರ್ಣಿಸೋಕೆ ನನ್ನ ಹತ್ತಿರ ಪದಗಳೇ ಇಲ್ಲ ಆ ಸಮುದ್ರದಲೆಯ ನರ್ತನದ ಮುಂದೆ ನನ್ನ ಶಬ್ದ ಕೋಶವೇ ಸೋತು ಹೋಗಿದೆ.
ಸೂರ್ಯನನ್ನು ಕೈಯಲ್ಲಿ ಸೆರೆಹಿಡಿಯುವುದು, ವಿಡಿಯೋ ಮಾಡಿಕೊಳ್ಳುವುದು ಬೆಳ್ಳಂಬೆಳಗ್ಗೆ ಇಂದ್ರಲೋಕಕ್ಕೆ ಹೋಗಿ ಬಂದಂಗಾಯ್ತು ನನಗೆ ಇದನ್ನ ನೋಡಿದ ನಾವೇ ಧನ್ಯರು ಅಲ್ಲಿಯವರೆಗೆ ಬಂದು ಸೂರ್ಯೋದಯ ನೋಡದೆ ಕುಂಭಕರ್ಣನಂತೆ ನಿದ್ರಿಸಿದ ನಮ್ಮ ಹುಡುಗರೆ ನತದೃಷ್ಟರು. ಅಂತೂ ಇಂತೂ ಸೂರ್ಯೋದಯ ನೋಡಿ ಬೋಟ್ನಲ್ಲಿ ಸ್ವಾಮಿ ವಿವೇಕಾನಂದ ರಾಕ್ ಪ್ರತಿಮೆ ಹತ್ತಿರ ಹೋಗಬೇಕು ಅಂತ ಕ್ಯೂನಲ್ಲಿ ಮಧ್ಯ ಹೋಗಿ ಸೇರಿಕೊಂಡಾಗ ನಮ್ಮ ಹಿಂದೆ ಇದ್ದ ಕೆಲವರು ತಿಳಿಯದ ತಮಿಳು ಭಾಷೆಯಲ್ಲಿ ಶಪಿಸಿ ಪೋಲಿಸರಿಗೆ ಹೇಳಿದರು ಪ್ರಯೋಜನವಾಗಲಿಲ್ಲ ಅವರು ಬೈಯ್ಯೋದೆಲ್ಲ ನಮಗೆ “ಹಳೆಗನ್ನಡದ ಪದ್ಯದ” ತರ ಕೇಳಿಸ್ತು ಅಂತೂ ಇಂತೂ ಬೋಟ್ನಲ್ಲಿ ಪ್ರತಿಮೆ ಹತ್ತಿರ ಹೋಗಿ ಸಮುದ್ರದ ಮಧ್ಯೆ ನಿಂತು ಕುಣಿದು ಕುಪ್ಪಳಿಸಿ, ಕಣ್ಣಿಗೆ ಎಟಕುವಷ್ಟು ಸಮುದ್ರ ನೋಡಿ ವಾಪಾಸ್ ರೂಂಗೆ ಬಂದು ಮಧುರೈಗೆ ಊಟ ಮುಗಿಸಿಕೊಂಡು ಹೊರಟೆವು ಮಧ್ಯೆ ಒಂದು ಬೀಚ್ನಲ್ಲಿ ಸಂಜೆ ಈಜಾಡಿ ಸಮುದ್ರದ ದಡದಲ್ಲಿ ಕಬ್ಬಡಿ ಆಟ ಆಡಿ ಮತ್ತೆ ಪ್ರಯಾಣ ಸಾಗಿತು.
ನನ್ನ ಮಧುರೈ ‘ದೇವಾಲಯಗಳ ನಾಡು’ ಸಾಹಿತ್ಯಿಕ ಪುಷ್ಪಮಯ & ಧಾರ್ಮಿಕ ಉತ್ಸಾಹಕ್ಕೆ ಮಧುರೈ ಹೆಸರುವಾಸಿ ‘ಮತಿರೈ’, ‘ಕೂಡಲ್’ & ‘ಆಲವ್ಯಡಿನರು’ ಮಧುರೈನ ಮೂಲ ಹೆಸರು ಮಧುರೈ ಮೀನುಗಾರಿಕೆ ಉದ್ಯಮಕ್ಕೆ ಹೆಸರುವಾಸಿ ಗ್ರೀಕ್, ರೋಮನ್, ಅರೇಬಿಕ್ ವಿದೇಶಿ ವ್ಯಾಪಾರಿಗಳು ಮಧುರೈಗೆ ಭೇಟಿ ನೀಡಿದ್ದಾರೆ. ‘ದೇವಾಲಯಗಳ ನಗರ’, ‘ಹಬ್ಬಗಳ ನಗರ’ ಅದೆಂತಹ ವೈಭವ ರೀ ಆ ದೇವಾಲಯದ್ದು. ಮಧುರೈ ಭಾರತೀಯ ಉಪಖಂಡದ ಪ್ರಾಚೀನ & ವೈಭವದ ನಗರಗಳಲ್ಲಿ ಒಂದು ಇದು ಭಾರತೀಯ ಪರ್ಯಾಯ ದ್ವೀಪದ ದಕ್ಷಿಣ ಭಾಗದಲ್ಲಿದೆ.
ಅಬ್ಬಾ ರಾತ್ರಿ ಹೊತ್ತಿಗೆ ಮಧುರೈಗೆ ಬಂದು ವಸತಿ ಮಾಡಿ ಬೆಳಗ್ಗೆ ಎದ್ದು ಮಧುರೈ “ಅರಳ್ಮಿಗು ಮೀನಾಕ್ಷಿ ಸುಂದರೇಶ್ವರ” ದೇವಾಲಯದ ಗೋಪುರ ಕೋಟೆ ವಿನ್ಯಾಸದ ಆ ಶೈಲಿ ನೋಡಿ ನಾವು ಅಕ್ಷರಶಃ ದಂಗಾಗಿ ಹೋದ್ವಿ. ಬಾದಾಮಿ ಐಹೊಳೆ ಪಟ್ಟದಕಲ್ಲು ಹಿಂದೂ ಶಿಲ್ಪಕಲೆಯ ಸಂಪ್ರದಾಯದ ತೊಟ್ಟಿಲುಗಳು. ಆದರೆ ಮೀನಾಕ್ಷಿ ದೇವಾಲಯವನ್ನು ಸೂಕ್ಷ್ಮರೂಪ ಅಥವಾ ಬ್ರಹ್ಮಾಂಡ ಮಾದರಿಯ ಸ್ಥೂಲಕಾಯ ಎಂದು ಕಲ್ಪಿಸಲಾಗಿದೆ . ತಮಿಳರಿಗೆ ‘ಸಂಗಂ’ ಶಿಲ್ಪಕಲೆ ಚೆನ್ನಾಗಿ ಪರಿಚಿತವಿತ್ತು ಮಧುರೈ ದೇವಾಲಯ ಯಾವ ಒಬ್ಬರ ಆಳ್ವಿಕೆಯಲ್ಲಿ ಪೂರ್ಣಗೊಂಡ ದೇವಾಲಯವಲ್ಲ ಆರಂಭದಲ್ಲಿ ಪಲ್ಲವರು,ಪಾಂಡ್ಯರು, ಚೋಳರು, ಗಂಗರು, ಹಾಗೂ ವಿಜಯನಗರ ಸಾಮ್ರಾಜ್ಯದ ಮಧುರೈನ ನಾಯಕರ ಕೊಡುಗೆ ಅಪಾರ ದೆಹಲಿಯ ಸುಲ್ತಾನರು, ಮುಸ್ಲಿಂ ಆಡಳಿತಗಾರರು, ಆಳ್ವಿಕೆ ನಡೆಸಿದರು ಆದ್ದರಿಂದ ಮಧುರೈಯನ್ನ ಜಾತ್ಯತೀತ ವಾಸ್ತುಶಿಲ್ಪ & ಶಿಲ್ಪಕಲೆ ಅಲಂಕಾರಗಳ ಆಕರ್ಷಣೆ & ವಿವಿಧ ಧರ್ಮಗಳು & ಸಾಮಾಜಿಕ ವ್ಯವಸ್ಥೆಗಳಿಗೆ ಸೇರಿದ ಜನರು ಸಾಮರಸ್ಯದಿಂದ ಬದುಕಿದ ನಾಡೆಂದು ಪ್ರಸಿದ್ದಿ ಹಿಂದೂ ಪ್ರತಿಮಾಶಾಸ್ತ್ರ ಮತ್ತು ಧರ್ಮಶಾಸ್ತ್ರ, ಪಂಚಾಯತನ & ಶರ್ಮತಾ ಪರಿಕಲ್ಪನೆಗಳ ಚಿತ್ರಣ ದೈವತ್ವಗಳ ಚಿತ್ರಣ,ವಿಶ್ಣುವಿನ ಹತ್ತು ಅವತಾರಗಳು ವೈಷ್ಣವ ಧರ್ಮದ ಒಲವು, ಕೃಷ್ಣ, ರಾಮಾಯಣ, ಮಹಾಭಾರತ, ಬೇಟೆಯ ದೃಶ್ಯಗಳು, ನೃತ್ಯಗಳು, ಕೋಲಾಟ, ಜಾನಾನದ ಕಲೆಗಳ ಸಾಮಾಜಿಕ ಚಟುವಟಿಕೆಗಳ ಚಿತ್ರಣ, ರತಿ&ಮನ್ಮಥನ ಪ್ರತಿಮೆಗಳು ಕಾಮಾಯಣದ ಆಧಾರ, ಆಡಳಿತಾಧಿಕಾರಿಗಳು ಮತ್ತು ಅಧಿಕಾರಿಗಳ ಭಾವಚಿತ್ರ & 2000 ವರ್ಷಗಳ ಬ್ರಾಹ್ಮಿ & ತಮಿಳು ಶಾಸನಗಳನ್ನು ಹೊಂದಿದೆ.
ಮೀನಾಕ್ಷಿ ಕಾಂಚನಮಾಲ, ನೆಲಮಾಳಿಗೆ, ಮಧುರೈ ಮಂಟಪ, ಆನಂದ ನಂದಿ, ಅಗ್ನಿ ವೀರಭದ್ರ, ಅಘೋರ ವೀರಭದ್ರ, ನವಗ್ರಹಮಂಟಪ, 49 ಕವಿಗಳ ಶಿಲ್ಪ, ಕದಂಬ ವೃಕ್ಷಗಳು , ನಾಗರಮಂಟಪ, ಸಂಗೀತ ವಾದ್ಯಗಳು, ಅಷ್ಟಶಕ್ತಿ ಮಂಟಪ, ವೇದಮರಬಡ್ಡೆ, ನೃತ್ಯ ಗಣಪತಿ & ಸುಬ್ರಮಣ್ಯ, ಎರಡು ಗೋಲ್ಡನ್ ಟವರ್ 12 ಗೋಪುರಗಳು, ರೋಸ್ ಪೀಟರ್ ಎಂಬ ಆಂಗ್ಲ ಜಿಲ್ಲಾಧಿಕಾರಿ ಮೀನಾಕ್ಷಿ ದೇವಿಯ ಪವಾಡದಿಂದ ಜೀವ ಉಳಿದುದಕ್ಕಾಗಿ ಬಂಗಾರದ & ಅಮೂಲ್ಯವಾದ ಕಲ್ಲುಗಳಿಂದ ಹೊದಿಸಿದ ಸ್ಟಿರಫ್ ಅನ್ನು ಮಾಡಿಸಿದನೆಂಬ ಐತಿಹ್ಯವಿದೆ 45 ಎಕರೆಯಲ್ಲಿರುವ ದೇವಾಲಯವನ್ನು ಅಲ್ಲಾವುದ್ದೀನ್ ಖಿಲ್ಜಿಯ ದಂಡನಾಯಕ ಮಲ್ಲಿಕಾಫರ್ ಒಮ್ಮೆ ದಾಳಿ ಅಪಾರ ಪ್ರಮಾಣದ ಸಂಪತ್ತನ್ನು ಲೂಟಿ ಮಾಡಿದ್ದನು ಮತ್ತು ದೇವಾಲಯದ ಒಳಗಡೆ ಇರುವ ಒಂದು ಕೊಳದಲ್ಲಿ ಬಂಗಾರದ ತಾವರೆಗಳು ಅರಳುತ್ತಿದ್ದವು ಆ ಕಾಲದಲ್ಲಿ ಕವಿಗಳು ಬರೆದ ಪುಸ್ತಕಳು ಗಟ್ಟಿಯಾಗಿದ್ದರೆ ನೀರಿನಲ್ಲಿ ತೇಲುತ್ತಿದ್ದವು ಜೊಳ್ಳಾಗಿದ್ದರೆ ನೀರಿನಲ್ಲಿ ಮುಳುಗುತ್ತಿದ್ದವು ಈ ರೀತಿಯಾಗಿ ಪುಸ್ತಕಗಳ ಸತ್ವವನ್ನು ತಿಳಿಯಲು ಈ ಕೊಳವನ್ನು ಬಳಸಲಾಗುತ್ತಿತ್ತು ಎಂಬ ಐತಿಹ್ಯವಿದೆ. ಮಧುರೈ ನಗರವು ದೇವಾಲಯದ ತಾವರೆಯ ಎಲೆಗಳಂತೆ ಚಾಚಿಕೊಂಡು ಬೆಳೆದಿದೆ.
ಮಧುರೈನ ಮೀನಾಕ್ಷಿ ದೇವಾಲಯ ನೋಡಿಕೊಂಡು ಪಳನಿ ಬೆಟ್ಟಕ್ಕೆ ಹೋಗಿ ಪಳನಿ ಸುಬ್ರಮ್ಯ ಸ್ವಾಮಿಯ ದರ್ಶನವನ್ನು ಮೆಟ್ಟಿಲು ಏರಿ ಹತ್ತಿ ದರ್ಶನ ಪಡೆದು ಪುನಃ ಚಾಮರಾಜನಗರಕ್ಕೆ ಹೊರಟೆವು ಇಂತಹ ಸಮುದ್ರಗಳೊಂದಿಗೆ ಮಾತು, ದೇಗುಲಗಳ ದರ್ಶನ, ಸಂಭ್ರಮದೊಂದಿಗೆ ಪ್ರಯಾಣ ಜೀವನವೆಂಬ ಪುಸ್ತಕರ ಒಂದೊಳ್ಳೆ ಪುಟವಾಗಿದೆ.
(ಕೆ.ಶ್ರೀಧರ್ (ಕೆ.ಸಿರಿ)
ಯುವ ಸಾಹಿತಿ
636229492)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು
~ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ
ಆಗಸ್ಟ್ ದಿನಾಂಕ 8 ಮತ್ತು 9ನೇ ತಾರೀಕು,ಸಾಹಿತ್ಯದ ಬೃಹತ್ ಹಡಗೊಂದು ಶ್ರೀಮಂತನಗರಿ ದಾವಣಗೆರೆ. ಜ್ಞಾನದ ಗೂಡು ಸಾಹಿತ್ಯ ಕಲಾರಸಿಕರ ಬೀಡು. ವಿವಿಧ ಖಾದ್ಯಗಳ ರಸದೌತಣದ ನಾಡು,ಸರಸ್ವತಿ ನೆಲೆಸಿದ ನಾಡು ದಾವಣಗೆರೆ.
ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಬಹು ತಾಳ್ಮೆಯ ಕುಟುಂಬವನ್ನು ನಿರ್ವಹಿಸಿಕೊಂಡು ಸಂಸಾರದ ನೌಕೆಯನ್ನು ಸಾಗಿಸುತ್ತಾ ಅದರ ಜೊತೆಗೆ ತಮ್ಮ ಮನೋರಂಜನೆ ಸಾಹಿತ್ಯ ಸಮಾಜ ಜ್ಞಾನ ವಿಜ್ಞಾನಗಳ ಸಕಲ ಕಲಾವಿದ್ಯೆಗಳಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲರ ಮಹಿಳೆಯರ ಪರವಾಗಿ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಒಂದು ಅತ್ಯದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಕನ್ನಡ ಸಾಹಿತ್ಯ ಪರಿಷತ್ ಶ್ರೀ ಬಿ ವಾಮದೇವಪ್ಪ ತೊಗಲೇರಿ ಅಧ್ಯಕ್ಷರ ಸಮ್ಮುಖದಲ್ಲಿ ಈ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು . ಸಮ್ಮೇಳನದ ಅಧ್ಯಕ್ಷರು ಮಹಾಪೋಷಕರು ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್, ಹಾಗೆಯೇ ಉದ್ಘಾಟಕರಾಗಿ ಮಹಿಳಾ ಆಯೋಗದ ಡಾಕ್ಟರ್ ನಾಗಲಕ್ಷ್ಮಿ ಚೌದರಿ, ಪ್ರಧಾನ ಸಂಚಾಲಕರು ರಾಜ ಯೋಗಿನಿ ಬ್ರಹ್ಮಕುಮಾರಿ ನೀಲಾಜಿ ಅವರೆಲ್ಲರಿಗೂ ಸ್ವಾಗತವನ್ನು ಬಯಸುತ್ತಾ ,
ಸ್ವಾಗತ ಸಮಿತಿ, ಹಣಕಾಸು ಸಮಿತಿ ,ಸಾಹಿತ್ಯ ಸಮಿತಿ, ಆಹಾರ ಸಮಿತಿ ,ಸಾಂಸ್ಕೃತಿಕ ಸಮಿತಿ ,ವೇದಿಕೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಪ್ರಚಾರ ಸಮಿತಿ, ಶಿಸ್ತು ಸಮಿತಿ ಮೆರವಣಿಗೆ ಸಮಿತಿ,ಪುಸ್ತಕ ಮಳಿಗೆ ಸಮಿತಿ ,ಅತಿಥಿ ಸತ್ಕಾರ ಸಮಿತಿ, ಸ್ಪರ್ಧಾ ಸಮಿತಿ, ಎಲ್ಲದಕ್ಕೂ ಸಹಕಾರ ಕೊಟ್ಟಂತಹ ಶ್ರೀ ಸಮರ್ಥ್ ಶಾಮನೂರ್ ಮಲ್ಲಿಕಾರ್ಜುನ್ ಶಾಸಕರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳು.
ಎಲ್ಲ ಕಾರ್ಯಕ್ರಮಗಳನ್ನು ಸುಸಜ್ಜಿತವಾಗಿ ನಡೆಸಿ ಕೊಡುತ್ತಿರುವ ಶ್ರೀಮತಿ ಸುಮತಿ ಜಯಪ್ಪ, ಶ್ರೀಮತಿ ಯಶಾ ದಿನೇಶ್ ,ಶ್ರೀಮತಿ ವೀಣಾ ಕೃಷ್ಣಮೂರ್ತಿ , ಶ್ರೀಮತಿ ಸತ್ಯಭಾಮ ಮಂಜುನಾಥ್, ಶ್ರೀಮತಿ ಮಲ್ಲಮ್ಮ ಎಂ ಎಸ್ ,ಶ್ರೀಮತಿ ನೀಲಗುಂದ ಜಯಮ್ಮ, ಶ್ರೀಮತಿ ಜಯಲಕ್ಷ್ಮಿ ಮಹೇಶ್, ಶ್ರೀಮತಿ ಪ್ರೇಮ ಸೋಮಶೇಖರ್ ಹೇಮ ಗಣೇಶ್ ಶೇಟ್, ಸುನಿತಾ ಪ್ರಕಾಶ್, ವರದಿಗಾರರಾದ ಭಾರತಿ ಎಚ್ ,ಹಾಗೆ ಎ ಬಿ ರುದ್ರಮ್ಮ, ಆಮಂತ್ರಣ ಪತ್ರಿಕೆ ಎಲ್ಲಾ ಗೆಳತಿಯರು ಇವರೊೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡುತ್ತಿರುವ ಎಲ್ಲ ಪ್ರತಿಭೆಗಳಿಗೂ ಹಾಗೂ ಕವಿಗೋಷ್ಠಿ ಕವಿತೆಗಳನ್ನು ವಾಚಿಸುವವರೆಗೂ ಹಾಗೆಯೇ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ, ಪಡೆಯುತ್ತಿರುವ ಎಲ್ಲ ಸಹೋದರಿಯರಿಗೂ ಅಭಿನಂದನೆಗಳು ಹಾಗೆ ಎಲ್ಲ ಮಹಿಳಾ ಮಣಿಗಳ ಆಗಮನಕ್ಕೆ ಶುಭವನ್ನು ಕೋರುತ್ತಿರುವ ಶ್ರೀಮತಿ ವೀಣಾ ಮಹಂತೇಶ್ ಬಿ ಎಮ್ ದಾವಣಗೆರೆ.
ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ.

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಸಚಿವರಾಗಿ ಆಯ್ಕೆ: ದಾವಣಗೆರೆಯಲ್ಲಿ ಸಂಭ್ರಮ ಆಚರಣೆ
-
ಅಂತರಂಗ2 days agoಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು
-
ದಿನದ ಸುದ್ದಿ3 days agoದಾವಣಗೆರೆ ವಿಶ್ವವಿದ್ಯಾಲಯ | ಗುಣಮಟ್ಟದ ಸಂಶೋಧನೆ ಶೈಕ್ಷಣಿಕ ಪ್ರಗತಿ – ಜಾಗತಿಕ ಮಾನ್ಯತೆಯ ಮೂಲಾಧಾರ : ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ
-
ದಿನದ ಸುದ್ದಿ2 days agoನಾನೇ ಮುಖ್ಯಮಂತ್ರಿ ಇದ್ದಂತೆ : ಶಾಸಕ ಶಿವಗಂಗಾ ಬಸವರಾಜ್


