ದಿನದ ಸುದ್ದಿ
ಆಂದೋಲನ-ಈ ಜೀವ ಈ ಜೀವನ | ಅಂಗನವಾಡಿ ಕಾರ್ಯಕರ್ತೆಯ ಅಸಾಮಾನ್ಯ ಕರ್ತವ್ಯಪ್ರಜ್ಞೆ..!
- ಪಂಜು ಗಂಗೊಳ್ಳಿ, ವ್ಯಂಗ್ಯಚಿತ್ರಕಾರರು, ಮುಂಬೈ
28 ವರ್ಷ ಪ್ರಾಯದ ರೆಲು ವಸಾವೆ ಮಹಾರಾಷ್ಟ್ರದ ನಂದೂಬರ್ಾರ್ ಜಿಲ್ಲೆಯ ಆದಿವಾಸಿ ಪ್ರದೇಶದ, ಚಿಮಲ್ಖೇಡಿ ಎಂಬ ಹಳ್ಳಿಯ ಒಬ್ಬರು ಅಂಗನವಾಡಿ ಕಾರ್ಯ್ಯಕರ್ತೆ. ಈ ಹಳ್ಳಿಗೆ ರಸ್ತೆಗಳಿಲ್ಲ. ಹಾಗಾಗಿ, ಆ ಪ್ರದೇಶದ ಜನ ಎಲ್ಲಿಗೇ ಹೋಗಬೇಕಿದ್ದರೂ ದೋಣಿಯಲ್ಲಿ ಕುಳಿತು, ನರ್ಮದಾ ನದಿಯನ್ನು ದಾಟಬೇಕು.
ಚಿಮಲ್ಖೇಡಿಯೂ ಸೇರಿ ಏಳು ಹಳ್ಳಿಗಳ ಗರ್ಭಿಣಿಯರು ಮತ್ತು ಆರು ವರ್ಷದೊಳಗಿನ ಮಕ್ಕಳ ಆರೋಗ್ಯದ ಮೇಲೆ ನಿಗಾ ಇಡುವುದು, ಅವರಿಗೆ ಸರ್ಕಾರ ನಿಗದಿಪಡಿಸಿದ ಔಷಧಿ, ಹಾಲು, ಮೊಟ್ಟೆ ಮೊದಲಾದ ಪೋಷಕಾಂಶಯುಕ್ತ ಆಹಾರ ಒದಗಿಸುವುದು. ಸಾಮಾನ್ಯ ಸಂದರ್ಭಗಳಲ್ಲಿ ಮಕ್ಕಳು, ಮಹಿಳೆಯರು ದೋಣಿಯಲ್ಲಿ ಕುಳಿತು ತಾವೇ ಅಂಗನವಾಡಿ ಕೇಂದ್ರಕ್ಕೆ ಬರುತ್ತಾರೆ.
ಆದರೆ, ಕೆಲವು ವಿಶೇಷ ಅಥವಾ ತುರ್ತು ಸಂದರ್ಭಗಳಲ್ಲಿ, ರೆಲು ವಸಾವೆ ತಾವೇ ದೋಣಿಯಲ್ಲಿ ಅವರ ಮನೆಗಳಿಗೆ ಹೋಗಿ, ಲಸಿಕೆ ಹಾಕುವುದು, ಔಷಧಿನೀಡುವುದು ಮಾಡಬೇಕಾಗುತ್ತದೆ. ಬೆಳಗಿನ ಏಳುವರೆಗೆ ತನ್ನ ಅಂಗನವಾಡಿ ಕೇಂದ್ರಕ್ಕೆ ಹೋಗಿ, ಮಧ್ಯಾಹ್ನದ ತನಕ ಅಲ್ಲಿ ಕೆಲಸ ಮಾಡುತ್ತಾರೆ. ನಂತರ, ಔಷಧಿ, ಆಹಾರವಸ್ತು ಮತ್ತು ಮಕ್ಕಳನ್ನು ತೂಗುವ ತಕ್ಕಡಿ ಮೊದಲಾದವುಗಳನ್ನು ಹಿಡಿದುಕೊಂಡು, ದೋಣಿಯಲ್ಲಿ ಕುಳಿತು, ತನ್ನ ಕ್ಷೇತ್ರಮಿತಿಯಲ್ಲಿ ಬರುವ ಹಳ್ಳಿಗಳ ಮಕ್ಕಳು, ಗರ್ಭಿಣಿ ಯರ ಮನೆಗಳ `ಕ್ಷೇತ್ರ ಭೇಟಿ(ಫೀಲ್ಡ್ ವಿಸಿಟ್)’ಗಳಿಗೆ ಹೋಗುವುದು ಇವರು ಪ್ರತಿದಿನ ಮಾಡಬೇಕಾದ ಕೆಲಸ.
ಹೀಗೇ ನಡೆಯುತ್ತಿದ್ದ ರೆಲು ವಸಾವೆಯೆ ದಿನಚರಿಗೆ ಕೋವಿಡ್ ದಾಳಿಯ ಹಿನ್ನೆಲೆಯಲ್ಲಿ ಹೇರಲಾದ ಲಾಕ್ ಡೌನ್ ಭಾರೀ ಹೊಡೆತ ನೀಡಿತು. ಮಕ್ಕಳು ಮತ್ತು ಗಭರ್ಿಣಿಯರು ಅಂಗನವಾಡಿ ಕೇಂದ್ರಗಳಿಗೆ ಬರುವುದು ಸಂಪೂರ್ಣವಾಗಿ ನಿಂತಿತು. ರೆಲು ಸ್ವತಃ ಅವರುಗಳ ಮನೆಗೆ ಹೋಗಲಾಗದಂತಹ ಪರಿಸ್ಥಿತಿ. ಏಕೆಂದರೆ, ಹೊಳೆ ದಾಟಲು ದೋಣಿ ನಡೆಸಲು ಯಾರೂ ಮುಂದೆ ಬಾರರು. ಬಂದರೂ, ಅವರ ಸಮಯಕ್ಕೆ ಅನುಗುಣವಾಗಿ ರೆಲು ತನ್ನ ದಿನಚರಿಯನ್ನು ಹೊಂದಿಸಕೊಳ್ಳಬೇಕಾಗಿತ್ತಾದುದರಿಂದ, ಅವರ ಸಾಮಾನ್ಯ ದಿನಚರಿ ಅಸ್ತವ್ಯಸ್ತವಾಗುತ್ತಿತ್ತು. ಆದರೆ, ರೆಲು ಅಷ್ಟು ಬೇಗನೆ ತನ್ನ ಕರ್ತವ್ಯ ಪಾಲನೆಯಿಂದ ಹಿಮ್ಮಖರಾಗಲು ತಯಾರಿರಲಿಲ್ಲ. ಆಗ ಸ್ವತಃ ಅವರೇ ದೋಣಿ ನಡೆಸಿ, ತನ್ನ ಕರ್ತವ್ಯವನ್ನು ಪಾಲಿಸಲು ಮುಂದಾದರು!
ಏಪ್ರಿಲ್ ತಿಂಗಳಲ್ಲಿ ಅವರು ಸ್ಥಳೀಯ ಮೀನುಗಾರರೊಬ್ಬರಿಂದ ಒಂದು ಚಿಕ್ಕ ದೋಣಿಯನ್ನು ಕೇಳಿ ಪಡೆದರು. ಹೋಗುವ ಮತ್ತು ಬರುವ ಒಟ್ಟು ದೂರ 14 ಕಿಮಿ. ಎರಡೂ ಕೈಗಳಿಂದ ಹುಟ್ಟು ಹಾಕಿ, ಅಷ್ಟು ದೂರ ದೋಣಿ ನಡೆಸಲು ಅಪಾರ ದೈಹಿಕ ಶ್ರಮದ ಜೊತೆ ಅಷ್ಟೇ ಧೈರ್ಯ, ಆತ್ಮವಿಶ್ವಾಸವೂ ಬೇಕು. ಅದೂ ಅಲ್ಲದೆ, ರೆಲು ಚಿಕ್ಕಂದಿನಿಂದಲೂ ಹೊಳೆಯನ್ನು ನೋಡಿ ಬೆಳೆದವರಾದರೂ, ಹೀಗೆ ದೋಣಿ ನಡೆಸುವುದು ಅವರಿಗೆ ಮೊದಲ ಅನುಭವ. ಆದರೆ, ಕರ್ತವ್ಯಪ್ರಜ್ಞೆ ಅವರಿಗೆ ಇವೆಲ್ಲವನ್ನು ಹಿಮ್ಮೆಟ್ಟುವ ಅಪಾರ ಆತ್ಮವಿಶ್ವಾಸ ಮತ್ತು ಮಾನಸಿಕ ಸ್ಥೈರ್ಯವನ್ನು ನೀಡಿತು.
14 ಕಿಮಿ. ದೋಣಿ ನಡೆಸಿದ ನಂತರ, ಆದಿವಾಸಿಗಳ ಮನೆಗಳಿಗೆ ಹೋಗಲು ಸಾಮಾನುಗಳನ್ನು ಹೊತ್ತುಕೊಂಡು, ಗುಡ್ಡಗಳನ್ನು ಹತ್ತಿ ಇಳಿದು, ಕಾಲ್ನಡಿಗೆಯಲ್ಲಿ ಹೋಗಬೇಕು. ಮಳೆಗಾಲದ ತಿಂಗಳುಗಳಲ್ಲಿ ಮಳೆಯ ಜೊತೆ ನದಿಯಲ್ಲಿ ನೀರು ತುಂಬಿ ಹರಿಯುವಾಗ ರೆಲು ಗಾಬರಿಯಾಗುತ್ತಿದ್ದರೂ, ಕರ್ತವ್ಯಪ್ರಜ್ಞೆ ಅವರನ್ನು ಸೆಟೆದು ನಿಲ್ಲಿಸುತ್ತಿತ್ತು. ಹುಟ್ಟು ಹಾಕಿ ದೋಣಿ ನಡೆಸಿ, ಗುಡ್ಡಗಳನ್ನು ಹತ್ತಿಳಿದು, ಸಂಜೆ ಹೊತ್ತು ಮನೆ ತಲುಪಿದಾಗ, ಕೈಗಳಿಗೆ ಜೋಮು ಹಿಡಿದು, ಇಡೀ ಶರೀರ ಸುಸ್ತಾಗಿದ್ದರೂ, ಗಂಡ ಮತ್ತು ಇಬ್ಬರು ಚಿಕ್ಕ ಮಕ್ಕಳಿಗೆ ಅಡುಗೆ ಮಾಡುತ್ತಿದ್ದರು. ಅವರ ಗಂಡ ರಮೇಶ್ ಕೂಡಾ ಹೆಂಡತಿಯ ಕರ್ತವ್ಯಪ್ರಜ್ಞೆಯನ್ನು ಮನಸಾ ಕೊಂಡಾಡುತ್ತಾರೆ.
ಬಿಗಿ ಲಾಕ್ ಡೌನ್ನ ದುರಿತ ಕಾಲದಲ್ಲೂ ರೆಲು ವಸಾವೆ ತನ್ನ ಕರ್ತವ್ಯವನ್ನು ಪಾಲಿಸಲು ಹಿಂಜರಿಯದ ಕಾರಣ, 7 ಜನ ಗರ್ಭಿಣಿಯರು, 25 ನವಜಾತ ಶಿಶುಗಳು ಮತ್ತು ಸುಮಾರು 138 ಮಕ್ಕಳು, ನಿಯಮಿತವಾಗಿ ಮೂಲಭೂತ ಸೌಲಭ್ಯಗಳಾದ ಔಷಧಿ ಮತ್ತು ಪೋಷಕಾಂಶಯುಕ್ತ ಆಹಾರ ಪಡೆಯಲು ಸಾಧ್ಯವಾಯಿತು. ರೆಲು ವಸಾವೆಯ ಈ ಅಸಾಮಾನ್ಯ ಕರ್ತವ್ಯಪ್ರಜ್ಞೆಯನ್ನು ಗುರುತಿಸಿ, ಆರೋಗ್ಯ ಇಲಾಖೆ ಮತ್ತು ಜಿಲ್ಲಾ ಪರಿಷತ್ ಅವರನ್ನು ಕೊಂಡಾಡಿ, ಸನ್ಮಾನಿಸಿದರೂ, ಆ ಏಳು ಹಳ್ಳಿಗಳ ಜನತೆ ಇವರ ಋಣವನ್ನು ಅಷ್ಟು ಸುಲಭದಲ್ಲಿ ತೀರಿಸಲಾರರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಶಿವಮೊಗ್ಗಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ
ಸುದ್ದಿದಿನ, ಶಿವಮೊಗ್ಗ : ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡಲಿದ್ದಾರೆ.
ಯುವಜನರು, ಮಹಿಳೆಯರು, ರೈತರು ಸೇರಿ ಸುಮಾರು ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಬಾಂಡ್ ಕುರಿತ ದತ್ತಾಂಶ ಬಿಡುಗಡೆ
ಸುದ್ದಿದಿನ,ನವದೆಹಲಿ : ಚುನಾವಣಾ ಬಾಂಡ್ ಕುರಿತಂತೆ ಸುಪ್ರೀಂಕೋರ್ಟ್ನ ರಿಜಿಸ್ಟ್ರಿ ಇಂದ ಲಭ್ಯವಾದ ಅಂಕಿಕೃತ ದತ್ತಾಂಶ ಮಾದರಿಯನ್ನು ಚುನಾವಣಾ ಆಯೋಗ ಭಾನುವಾರ ತನ್ನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದೆ. www.eci.gov.in/candidate-politicalparty ವೆಬ್ಸೈಟ್ನಲ್ಲಿ ಈ ದತ್ತಾಂಶ ಲಭ್ಯವಿರುತ್ತದೆ.
ಸುಪ್ರೀಂಕೋರ್ಟ್ ನಿರ್ದೇಶಿಸಿದಂತೆ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ ಕುರಿತ ದತ್ತಾಂಶಗಳನ್ನು ಮೊಹರು ಹಾಕಿದ ಲಕೋಟೆಯಲ್ಲಿ ಸಲ್ಲಿಸಿದ್ದವು ಎಂದು ಚುನಾವಣಾ ಆಯೋಗದ ಹೇಳಿಕೆ ತಿಳಿಸಿದೆ. ರಾಜಕೀಯ ಪಕ್ಷಗಳಿಂದ ಸ್ವೀಕರಿಸಿದ ಮೊಹರು ಹಾಕಿದ ಲಕೋಟೆಗಳನ್ನು ತೆರೆಯದೇ ಸುಪ್ರೀಂಕೋರ್ಟ್ಗೆ ಸಲ್ಲಿಸಲಾಗಿತ್ತು.
ಇದೇ 15ರಂದು ಸುಪ್ರೀಂಕೋರ್ಟ್ ನೀಡಿದ ಆದೇಶದ ಮೇರೆಗೆ ಸುಪ್ರೀಂಕೋರ್ಟ್ನ ರಿಜಿಸ್ಟ್ರಿ, ಭೌತಿಕ ಪ್ರತಿ ಹಾಗೂ ಅದರ ಡಿಜಿಟಲ್ ದಾಖಲೆಯಿರುವ ಪೆನ್ಡ್ರೈವ್ ಒಳಗೊಂಡ ಮೊಹರು ಹಾಕಿದ ಲಕೋಟೆಯನ್ನು ಹಿಂತಿರುಗಿಸಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ರಶ್ಮಿ ಚಂದ್ರಗಿರಿ ಅವರಿಗೆ ಪಿಎಚ್.ಡಿ ಪದವಿ
ಸುದ್ದಿದಿನ,ಹಾವೇರಿ : ನಗರದ ರಶ್ಮಿ ಚಂದ್ರಗಿರಿ ಅವರು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮಂಡಿಸಿದ “ದಲಿತ ಬಂಡಾಯ ಕಾದಂಬರಿಗಳಲ್ಲಿ ಸಾಂಸ್ಕೃತಿಕ ನೆಲೆಗಳು” ಎಂಬ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ಪ್ರಧಾನ ಮಾಡಿದೆ.
ಇವರಿಗೆ ಡಾ.ಬಿಎಸ್.ಭಜಂತ್ರಿ , ಸಹಾಯಕ ಪ್ರಧ್ಯಾಪಕರು ಕರ್ನಾಟಕ ಕಲಾ ಮಹಾವಿದ್ಯಾಲಯ ಧಾರವಾಡ ಇವರು ಮಾರ್ಗದರ್ಶನ ಮಾಡಿದ್ದರು.
ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ರಶ್ಮಿ ಚಂದ್ರಗಿರಿಯವರ ಹಲವು ಲೇಖನಗಳು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಪ್ರಸ್ತುತ ಇವರು ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿತ್ತಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243