ಬಹಿರಂಗ
ಕರ್ನಾಟಕದ ಅಂಬೇಡ್ಕರ್ ‘ಪ್ರೊ.ಬಿ.ಕೃಷ್ಣಪ್ಪ’..!
ಪ್ರೋ.ಬಿ.ಕೃಷ್ಣಪ್ಪ ಅಂದ್ರೆ ಅದೊಂದು ಅಂಬೇಡ್ಕರ್ ಸಿದ್ದಾಂತದ ಮಾತೃಕೆ.ಕರ್ನಾಟಕದ ಕೋಟ್ಯಂತರ ಶೋಷಿತರ ಎದೆಯೊಳಗೆ ಮನುಷ್ಯತ್ವಕ್ಕಾಗಿ ಹೋರಾಟದ ಕಿಚ್ಚಚ್ಚಿದ ಸಂಘರ್ಷದ ಬೆಂಕಿ. ಭೀಮವಾದವೆಂಬ ಬೀಜವನ್ನು ನಾಡಿನ ದಲಿತರ ತಲೆಯೊಳಗೆ ಬಿತ್ತಿದ ಅಪ್ಪಟ ಅಂಬೇಡ್ಕರ್ ವಾದಿ.
ಸಾಮಾಜಿಕ ಸಂಕಟಗಳಿಗೆ ಸಿಲುಕಿ ನಲುಗಿದ್ದ ಅಸ್ಪೃಶ್ಯರಿಗೆ ಧ್ವನಿಯಾದವರು.ತಾನು ಗಂಧದಂತೆ ತೇದು ನಾಶವಾಗಿ ದಲಿತರಿಗೆ ಸುಗಂದ ನೀಡಿದ ಮಹಾತ್ಮನೆಂದತೆ ಬಿ.ಕೃಷ್ಣಪ್ಪ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಎಂಬ ಹಳ್ಳಿಯಲ್ಲಿ ತಾಯಿ ಚೌಡಮ್ಮ ತಂದೆ ಬಸಪ್ಪರ ಮಗನಾಗಿ ಜನಿಸಿದ ಬಿಕೆ ಬಾಲ್ಯದ ಬದುಕಿನಲ್ಲಿಯೆ ಅನೇಕ ಅವಮಾನ ಅಪಮಾನ ಅನುಭವಿಸಿ ಅದರ ವಿರುದ್ದ ಪ್ರತಿರೋಧ ಒಡ್ಡುತ್ತಿದ್ದ ಛಲಗಾರ.
ಕನ್ನಡದಲ್ಲಿ ಎಮ್ ಎ ಮುಗಿಸಿ ಭದ್ರಾವತಿಯ ಸರ್ ಎಮ್.ವಿಶ್ವೇಶ್ವರಯ್ಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತಿದ್ದರು.
ಅಂಬೇಡ್ಕರ್ ಸಿದ್ದಾಂತಕ್ಕೆ ಬದ್ದನಾಗಿದ್ದ ಬಿಕೆ ತಾನು ಪ್ರೀತಿಸಿದ ಬ್ರಾಹ್ಣರ ಹುಡುಗಿಯಾದ ಇಂದಿರಾರವರನ್ನು ಮದುವೆಯಾಗುವುದರ ಮೂಲಕ ಬಸವಾದಿಶರಣರು ಪ್ರೋತ್ಸಾಹಿಸಿದ ಹಾಗು ಬಾಬಸಾಹೇಬರು ಒಪ್ಪಿಕೊಂಡಿದ್ದ ಅಂತರ್ಜಾತಿ ವಿವಾಹವಾದರು.ಇದರೊಂದಿಗೆ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾದರು.
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಉಕ್ಕಿನ ಕಾರ್ಖಾನೆಯಲ್ಲಿ ನಡೆಯುತಿದ್ದ ದಲಿತರ ಮೇಲಿನ ದೌರ್ಜನ್ಯಗಳು ದಲಿತ ಸಂಘರ್ಷ ಸಮಿತಿ ಸ್ಥಾಪಿಸಲು ತತ್ ಕ್ಷಣದ ಕಾರಣವಾಯಿತು. 1974ರಲ್ಲಿ ಬಿಕೆಯವರು ಟಿ.ರಾಜಣ್ಣ.ಎಸ್.ಟಿ.ರಾಜು,ಎನ್ .ಗಿರಿಯಪ್ಪ.ಈರಯ್ಯ.ಬೋರಯ್ಯ ಮುಂತಾದ ದಲಿತರ ಸಮ್ಮುಖದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯೆಂಬ ಸಂಘಟನೆಯನ್ನು ಹುಟ್ಟು ಹಾಕಿದರು.
ಎಲ್ಲೆಡೆ ನಡೆಯುತಿದ್ದ ದಲಿತರ ಶೋಷಣೆ. ದೌರ್ಜನ್ಯ. ಕೊಲೆ.ಹಲ್ಲೆಅತ್ಯಾಚಾರಗಳು ನಾಯಿಕೊಡೆಯಂತೆ ರಾರಜಿಸುತಿದ್ದವು ಇದೊಂದು ಸಂದಗ್ದ ಸಮಯ ಬಿಕೆಯವರಿಗೆ ಸಿಕ್ಕಿದ್ದೆ ತಡ ಈ ದಲಿತ ಸಂಘಟನೆ ರಾಜ್ಯಾದ್ಯಂತ ಕಾಳ್ಗಿಚ್ಚಿನಂತೆ ಹಬ್ಬಿತು.ಚಂದ್ರಗುತ್ತಿಯ ಬೆತ್ತಲೆ ಸೇವೆ ವಿರುದ್ದ .ತತ್ತೂರಿನಲ್ಲಿ ದಲಿತರಿಗೆ ಮಲ ತಿನಿಸಿದ ಪ್ರಕರಣ.ಕ್ಯಾಸಿನಕೆರೆ ಅಸ್ಪೃಶ್ಯತೆ ವಿರುದ್ದ.ಪತ್ರಸಂಗಪ್ಪನ ಕೊಲೆ.ದುರ್ಗಪ್ಪನ ಕೊಲೆ.ಭೂಪರವಾನಗಿ ನಿಷೇಧ ಕಾಯ್ದೆಯ ಪರ.ಸಿದ್ಲಿಪುರ ಭೂಮಿ ಹೋರಾಟ. ಮೊದಲಾದ ಅಮಾನವೀಯ ಪ್ರಕರಣಗಳ ವಿರುದ್ದ ಪ್ರತಿಭಟಿಸಿ ದೇಶಾದ್ಯಂತ ಹೆಸರಾಗಿತ್ತು.ಬಿಕೆಯವರು ಬಾಬಸಾಹೇಬರ ಬರಹಗಳನ್ನು ಸಂಪೂರ್ಣವಾಗಿ ಓದಿ ಕೊಂಡಿದ್ದರು ಬುದ್ದನ ಸಿದ್ದಾಂತ ಬಸವಣ್ಣನ ಕಾಯಕ ಪರಂಪರೆ ಬಿಕೆಯವರಿಗೆ ಶಕ್ತಿಸಾಧಕಗಳಾದವು.
ಬಿಕೆ ಕರ್ನಾಟಕದಾದ್ಯಂತ ಯುವಕನಂತೆ ತಿರುಗಿ ಬಾಬಸಾಹೇಬರ ಹೋರಾಟಗಳನ್ನು ತಿಳಿಸುವುದರ ಮೂಲಕ ಕೋಟ್ಯಂತರ ದಲಿತರಲ್ಲಿ ಹೋರಾಟದ ಕಿಚ್ಚು ಹೊತ್ತಿಸಿ ಸ್ವಾಭಿಮಾನದ ನಾಯಕರನ್ನು ಹುಟ್ಟುಹಾಕಿದರು. ದೇಶದ ಯಾವುದೆ ಮೂಲೆಯಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆದರೆ ದಸಂಸ ಅದನ್ನು ಖಂಡಿಸುತಿತ್ತು ಬಡಬಗ್ಗರಿಗೆ ದೀನದಲಿತರ ವಿರುದ್ದ ಮಾಡುವ ಕಾನೂನು ಕಾಯ್ದೆಗಳನ್ನು ವಿರೋಧಿಸುತ್ತಾ ಶೋಷಣೆ ತಡೆಯುವಲ್ಲಿ ವಿಪಲವಾದ ಸರ್ಕಾರಗಳಿಗೆ ದಸಂಸ ಸಿಂಹಸ್ವಪ್ನವಾಗಿ ಗುಡುಗುತಿತ್ತು.ಒಂದು ರೀತಿಯಲ್ಲಿ ವಿರೋಧಪಕ್ಷದನಾಯಕಂತೆ ಕಾರ್ಯವನ್ನು ನಿರ್ವಹಿಸುತಿತ್ತು.
ಅದಾಗಲೆ ಉತ್ತರ ಪ್ರದೇಶದಲ್ಲಿ ಬಹುಜನ ಚಳುವಳಿ ಆಳುವ ಮಟ್ಟಿಗೆ ಹಬ್ಬಿರುತ್ತದೆ”ಪೊಲಿಟಿಕಲ್ ಪವರ್ ಇಸ್ ದ ಮಾಸ್ಟರ್ ಕೀ”ಎಂಬ ಬಾಬಸಾಹೇಬರ ಮಹದಾಸೆಯಂತೆ ರಾಕೀಯ ವಿಜ್ಞಾನಿ ದಾದಾಸಾಹೇಬ್ ಕಾನ್ಷಿರಾಂ ಸಾಹೇಬರು ಉತ್ತರದಲ್ಲಿ ದಲಿತರನ್ನು ಬೇಡುವ ವರ್ಗಕ್ಕೆ ಮಾತ್ರ ಸೀಮಿತಗೊಳಿಸದೆ ಆಳುವ ವರ್ಗಮಾಡುವ ಕೆಲಸವನ್ನು ಪೂರ್ವಿಕರ ಇತಿಹಾಸದೊಂದಿಗೆ ರಾಜ್ಯಾಧಿಕಾರದ ಮಹತ್ವನ್ನು ಹೇಳಿ ಯಶಸ್ವಿಯಾಗಿದ್ದರು.ಇದು ಕೇವಲ ಉತ್ತರಪ್ರದೇಶದಕ್ಕೆ ಮಾತ್ರ ಸೀಮಿತವಾಗದೆ ಅಖಂಡ ಭಾರತದಾದ್ಯಂತ ಬಹುಜನ ಚಳುವಳಿಯನ್ನು ಕಟ್ಟಲಿಕೆ ಯೋಚಿಸುತ್ತಾರೆ ಅಂತಹ ಸಂದರ್ಭದಲ್ಲಿ ದಕ್ಷಿಣ ಭಾರತದಲ್ಲಿ ಸಿಕ್ಕಿದ ದೊಡ್ಡ ಶಕ್ತಿ ಒಳ್ಳೆ ವ್ಯಕ್ತಿ ಎಂದರೆ ಬಿಕೆಯವರು.
ಕಾನ್ಷೀರಾಮ್ ಸಾಹೇಬರು ಬಿಕೆಯೊಂದಿಗೆ ಮಾತನಾಡಿ ಬಾಬಸಾಹೇಬರ “ಕೊನೆ ಆಸೆ” ಯನ್ನು ಹೇಳುತ್ತಾರೆ.ಅಲ್ಲದೆ ದಲಿತ ಹೋರಾಟಗಳು ಮನವಿ ಕೊಡುವುದಕ್ಕೆ ಸೀಮಿತಗೊಳ್ಳದೆ ಮನಸ್ಸು ಮಾಡಿದರೆ ಮನವಿ ತೆಗೆದುಕೊಳ್ಳಬಹುದು ಎಂಬುದು ಬಿಕೆಯವರಲ್ಲಿ ಚಿಗೊರಡೆಯಿತು.ಬಿಕೆಯವರು ಒಂದು ದಿನ ಇಡೀ ದಲಿತ ನಾಯಕರನ್ನು ಸಭೆಕರೆದು “ನಾನು ಗುಡ್ಡಕ್ಕೆ ಕಲ್ಲೊತ್ತೆ” ಇಷ್ಟು ವರ್ಷ ಏನು ಸಾಧಿಸಲಿಕೆ ಆಗಲಿಲ್ಲ ಆಗಾಗಿ ದಲಿತರ ವಿಮೋಚನೆಗೆ ರಾಜ್ಯಾಧಿಕಾರವೆ ಮೂಲ ಮದ್ದು.ಬಾಬಸಾಹೇಬರ ಮಹದಾಸೆಯು ಇದೆ ಆಗಿತ್ತು ಆಗಾಗಿ ದಸಂಸವನ್ನು ಬಿಎಸ್ ಪಿಗೆ ವಿಲೀನಗೊಳಿಸೋಣ ದೇಶಾದ್ಯಂತ ಬೀಸುತ್ತಿರುವ ಪರಿವರ್ತನೆ ಗಾಳಿ ನಾಡಿನೆಲ್ಲೆಡೆ ಬೀಸಲಿ ಎಂದರು. ಅಲ್ಲದೆ ಎಲ್ಲರು ಒಪ್ಪಿದ್ದರು ರಾತ್ರಿಯ ವೇಳೆ ಜನತಾದಳದ ಬೂಟುನೆಕ್ಕಿ ಬೆಳಿಗ್ಗೆ ದೊಡ್ಡ ದಲಿತನಾಯಕರಂತೆ ನಟಿಸುತಿದ್ದ ಗೋಮುಖವ್ಯಾಘ್ರರು ಒಲ್ಲದ ಮನಸಿನಲ್ಲಿ ಒಪ್ಪುತ್ತಾರೆ.
ಬಿಕೆಯವರಿಗೆ ಈಗ ಆನೆಬಲ ಬರುತ್ತದೆ.”ಪರಿವರ್ತನೆಗಾಗಿ ಬಿಎಸ್ಪಿಗೆ”ಎಂಬ ಸ್ಲೋಗನ್ ಹಿಡಿದು ಊರೂರು ಅಲೆದು ಬಹುಜನ ಚಳುವಳಿಯನ್ನು ಕಟ್ಟುತ್ತಾರೆ.ಅಂಬೇಡ್ಕರ್ ವಾದಕ್ಕಿರುವ ಶಕ್ತಿಯನ್ನು ಎಲ್ಲರಿಗು ತಿಳಿಸುತ್ತಾರೆ.ಹೇಗಾದರು ಮಾಡಿ ಆಳುವ ವರ್ಗವಾಗಲೇಬೇಕು ಎಂಬ ಹಠ ಹಿಡಿಯುತ್ತಾರೆ.
ಅದೆ ಸಮಯದಲ್ಲಿ ಉತ್ತರಪ್ರದೇಶದಲ್ಲಿ ಬಿಎಸ್ಪಿ ಎಸ್ಪಿಯೊಂದಿಗೆ ಮೈತ್ರಿಕಡಿದುಕೊಂಡು ಬಿಜೆಪಿಯೊಂದಿಗೆ ಕೈ ಜೋಡಿಸಿ ಅಕ್ಕಾಮಾಯವತಿಯನ್ನು ಮುಖ್ಯಮಂತ್ರಿ ಮಾಡಿ ಮೈತ್ರಿ ಮುಂದುವರೆಸುತ್ತದೆ.
ಯಾರಾದರೇನು.?ನಮಗೆ ಬೇಕಾಗಿರುವುದು ರಾಜ್ಯಾಧಿಕಾರ.ಎಂಬ ತತ್ವ ಕಾನ್ಷಿರಾಂ ಅವರದಾಗಿತ್ತು.ಆದರೆ ದಲಿತ ಚಳುವಳಿಯ ಮೆದುಳಿನಂತೆ ಕೆಲಸ ಮಾಡುತಿದ್ದ ಬುದ್ದಿಗೇಡಿ ಬುದ್ದಿಜೀವಿಗಳು ಹಾಗು ಜನತಾದಳದ ಮಲಮೂತ್ರಕುಡಿಯಲು ಸಂಧರ್ಭಗಳನ್ನು ಕಾಯುತಿದ್ದ ದಲಿತ ನಾಯಕರು”ಅಯ್ಯೊ ಕೋಮುವಾದಿಗಳೊಂದಿಗೆ ಕೈ ಜೋಡಿಸಿದ್ದಾರೆ ಎಂದು ಡಂಗುರ ಸಾರುತ್ತಲೆ ದಸಂಸವನ್ನು ಕತ್ತಿಯಿಂದ ಎರಡು ಸೀಳು ಮಾಡಿದರು.
ಬಿಕೆಯೊಂದಿಗಿದ್ದ ಡಿಜಿ ಸಾಗರ್ ರವರು ಹೊರಬಂದು ಸಾಗರ್ ಬಣವೆಂದು ಮಾಡಿಕೊಂಡು ಜನತಾದಳಕ್ಕೆ ಬೇಷರತ್ತಾಗಿ ಬೆಂಬಲ ಸೂಚಿಸುತ್ತಾರೆ. ಇನ್ನು ಎದೆಯೊಳಗೆ ಗಾಂಧಿವಾದದ ಬೀಜ ಬೀಳಿಸಿಕೊಂಡಿದ್ದ ದೇವನೂರು ಮಹಾದೇವರು.ಕಮ್ಯುನಿಸ್ಟ್ ಚಳುವಳಿಯನ್ನು ಮೈಗಂಟಿಸಿಕೊಂಡು ಇಕ್ರಲಾ ವದಿರ್ಲಾ ಎಂದು ಹಾಡುತಿದ್ದ ಡಾ.ಸಿದ್ದಲಿಂಗಯ್ಯರವರು ಮುಂತಾದ ಸಾಹಿತಿಗಳು ಉತ್ತರದ ನಿರ್ಧಾರವನ್ನು ಖಡಾಖಂಡಿತವಾಗಿ ವಿರೋಧಿಸಿದರು.
ಇದರೊಂದಿಗೆ ಬಿಕೆಯವರನ್ನು ಒಬ್ಬಂಟಿಗಾರನ್ನಾಗಿ ಮಾಡಿದರು.
ಆದರೆ ಬಿಕೆಗೆ ನೋವಾದರು ಎದೆಗುಂದದೆ “ಕಾನ್ಷಿರಾಂ ಸಾಹೇಬರು ಏನೆ ನಿರ್ಧಾರ ತೆಗೆದುಕೊಂಡರು ಅದು ದಲಿತರಿಗೆ ಬಹುಜನರಿಗೆ ಒಳ್ಳೆಯದಾಗಲಿಕೆ ನಿರ್ಧಾರ ತೆಗೆದು ಕೊಂಡಿದ್ದಾರೆ ಎಂದು ಕಾನ್ಷಿರಾಂರ ಮೈತ್ರಿಯನ್ನು ಸಮರ್ಥಿಸಿಕೊಂಡರು.ಬಿಕೆ ಅಂದ್ರೆ ಅಂಬೇಡ್ಕರ್ ಬಂಡೆಯಂತೆ ಗಟ್ಟಿಯಾಗಿದ್ದರು. ಎಮ್.ಜಯಣ್ಣ. ಶ್ರೀಧರ್ ಕಲ್ವೀರ್.ಹೂಡಿ ವೆಂಕಟೇಶ್.ಕೋಲಾರದ ಶಿವಣ್ಣ.ಮಂಗಳೂರಿನ ಗಂಗಾದರಯ್ಯ.ಚಂದ್ರಪ್ರಸಾಧ್ ತ್ಯಾಗಿ.ಮಾವಳ್ಳಿ ಶಂಕರ್.ಮುಂತಾದ ದಲಿತ ನಾಯಕರನ್ನು ಒಟ್ಟುಗೊಡಿಸಿ ಎಮ್.ಜಯಣ್ಣರವರನ್ನು ದಸಂಸದ ರಾಜ್ಯಸಂಚಾಲಕರನ್ನಾ ಮಾಡಿ ತಾವುಗಳು ಎಲ್ಲರ ಸಹಕಾರದಿಂದ ಬಹುಜನ ಚಳುವಳಿಯನ್ನು ಮುಂದುವರೆಸಿದರು.
ಚಿತ್ರದುರ್ಗದಲ್ಲಿ ಎಮ್ ಜಯಣ್ಣನವರ ನೇತೃತ್ವದಲ್ಲಿ ” ದಲಿತರ ಪುನಶ್ಚೇತನ ಸಮಾವೇಶ” ಮಾಡಲು ನಿಂತಾಗ ಕೆಲವು ಬುದ್ದಿಜೀವಿಗಳು ಬರದೆ ಬರುವವರನ್ನು ಬಿಡದೆ ಬಿಕೆಯವರಿಗೆ ನೋವು ಮಾಡಿದರು.ಆದರೆ ಆ ಸಮಾವೇಶ ತುಂಬಾಯಶಸ್ವಿಯಾಯಿತು.ಕೆಲವು ಘಟಾನುಘಟಿ ದಲಿತ ನಾಯಕರು ಬರದಿದ್ದಕ್ಕೆ ಅಸಮಧಾನವು ಆಯಿತು.
ಬಿ.ಕೆಯವರು ಯಾವ ವಾದವನ್ನು ಬೆನ್ನತ್ತಲಿಲ್ಲ
“ನಮ್ಮ ರಾಷ್ಟನಾಯಕ ಬಾಬಸಾಹೇಬ ಅಂಬೇಡ್ಕರ್.ನಮ್ಮ ಸಿದ್ದಾಂತ ಅಂಬೇಡ್ಕರ್ ವಾದ.ನಮ್ಮ ಪಕ್ಷ ಬಹುಜನ ಸಮಾಜ ಪಕ್ಷ. ನಮ್ಮ ಧರ್ಮ ಬೌದ್ದ ಧರ್ಮ ಎಂಬ ಮಹಾಸಂದೇಶಗಳನ್ನು ದಲಿತರಿಗೆ ನೀಡಿದರು ಇದಲ್ಲದೆ ಇನ್ನ ಯಾವುದರಿಂದಲೂ ನೀವು ಉದ್ದಾರವಾಗುವುದಿಲ್ಲ ಎಂದು ಭವಿಷ್ಯ ನುಡಿದರು.
ಬಿಕೆಯವರಿಗೆ ತುಂಬಾ ನೋವಿನ ದಿನಗಳು ಬರಲಾರಂಬವಾದವು ಮನುವಾದಿಗಳಿಗಿಂತ ತನ್ನವರೆ ತನಗೆ ಮೇಲಿಂದ ಮೇಲೆ ಗಾಯಮಾಡಿದರು.ತಾನು ಬೆಳೆಸಿದ ಹುಡುಗರು ಹಾಗುನಾನು ಕಲಿಸಿದ ಸಂಘರ್ಷದ ಪಾಠವನ್ನು ಇಂದು ತನಗೆ ಕಲಿಸುತ್ತಿರುವುದು.ದಲಿತ ಸಂಘಟನೆಯಲ್ಲಿ.ಚೆಡ್ಡಿಹಾಕುವ ಬಾಲಕರೆಲ್ಲಾ ಬಿಕೆಯವರಿಗೆ ಅರಳುಮರಳು ಎಂದು ಛೇಡಿಸುವುದನ್ನು ಕಣ್ಣಾರೆ ಕಂಡು ಮಮ್ಮಲ ಮರುಗುತಿದ್ದರು.
ಬಿಕೆ ಬಾಬಸಾಹೇಬರಂತೆ ಶಿಸ್ತಿಗೆ ತುಂಬಾ ಒತ್ತುಕೊಡುತಿದ್ದರು ತಮ್ಮ ಬಟ್ಟೆಗಳನ್ನೆಲ್ಲಾ ತಾವೆ ತೊಳೆದುಕೊಳ್ಳುತಿದ್ದರು.ಕುಡಿತ ಸಿಗರೇಟ್ ಮಸ್ತ್ ಮಾಜಾನೆ ಇಲ್ಲದ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು.ಸರಾಯಿಬೇಡ “ಹೋಬಳಿಗೊಂದು ವಸತಿಶಾಲೆ” ಬೇಕು ಎಂದು ಬಿಕೆ ಚಳುವಳಿ ಮಾಡಿದರೆ ಕೆಲವು ಬುದ್ದಿಜೀವಿ ದಲಿತನಾಯಕರು ” ಕುಡಿಯುವುದು ದಲಿತರ ಹಕ್ಕು”ಎಂದು ಉದ್ದುದ್ದ ಲೇಖನ ಬರೆದಿದ್ದುಂಟು.
ಇನ್ನು “ಮಹಾತ್ಮಾ ಗಾಂಧಿ” ಸಿನಿಮಾ ಬಂದಾಗ ಅದರಲ್ಲಿ ಪೂನ ಒಪ್ಪಂದದ ಘಟನೆಯನ್ನು ಸಿನಿಮಾದಲ್ಲಿ ಸೇರಿಸಿರಲಿಲ್ಲ ಈ ವಿಚಾರ ತಿಳಿದ ಬಿಕೆ ಹಾಗು ದಸಂಸ ರಾಜ್ಯಾದ್ಯಂತ ಉಗ್ರವಾಗಿ ಹೋರಾಟ ಮಾಡಿ ಪೂನ ಒಪ್ಪಂದ ದೃಶ್ಯವಿಲ್ಲದ ಈ ಸಿನಿಮಾ ಸಂಪೂರ್ಣ ಬ್ಯಾನ್ ಆಗಬೇಕೆಂದು ಖಂಡಿಸಿದರು. ಆದರೆ ದೇವನೂರು ಮಹಾದೇವರವರು ಮಾತ್ರ”ನಾನು ಗಾಂಧಿ ಸಿನಿಮಾ ನೋಡಿದೆ ಅದರಲ್ಲಿ ದಲಿತರಿಗೆ ಅಪಮಾನದ ಅಂಶಗಳಿಲ್ಲ ಎಂದು ಪತ್ರಿಕೆಯಲ್ಲಿ ಲೇಖನ ಬರೆದರು.
ಬಿ.ಕೃಷ್ಣಪ್ಪರ ಕೊನೆಯ ದಿನಗಳು ತುಂಬಾ ನೋವಿನಿಂದ ಕೂಡಿದ್ದವು.ಹೆಜ್ಜೆ ಹೆಜ್ಜೆಗು ಮುಳ್ಳಾಗಿ ಕಾಡುತಿದ್ದ ಮನುವಾದಿಗಳು ಒಂದೆಡೆಯಾದರೆ ತಮ್ಮವರೆ ತನಗೆ ಚೂರಿಹಾಕಿದ್ದು ಒಂದುಕಡೆಯಾಗುತ್ತದೆ.
ಬಿಕೆಯವರು ಕೋಲಾರದಲ್ಲಿ ಚುನಾವಣೆಗೆ ನಿಂತಾಗ ಹೀನಾಯ ಸೋಲನ್ನು ಉಣ್ಣುತ್ತಾರೆ ಅಂದಿನ ಜನತಾದಳ ಹಾಗು ಕಾಂಗ್ರೆಸ್ ಬಿಕೆಯವರನ್ನು ಸೋಲಿಸಿತು.ಅಂದು ಬಾಬಸಾಹೇಬ ಅಂಬೇಡ್ಕರ್ ಅವರನ್ನು ಸೋಲಿಸಿದಂತೆ ಬಿಕೆಯವರನ್ನು ಸೋಲಿಸಿದರು.ಅವರೆ ಸಾಕಿಬೆಳೆಸಿದ ದಲಿತನಾಯಕರಿಂದ ಅವಮಾನಕ್ಕೆ ಗುರಿಯಾದರು.ಇದು ಬಿಕೆಯವರ ಸೋಲಾಗಿರಲಿಲ್ಲ ಅಂಬೇಡ್ಕರ್ ವಾದದ ಸೋಲಾಗಿತ್ತು.
ಅವರೆ ಕಟ್ಟಿ ಬೆಳೆಸಿದ ದಸಂಸ ತನ್ನ ಕಣ್ಣೆದುರಿಗೆ ಹೊಡೆದು ಚೂರುಚೂರಾಗಿರುತ್ತಿರುವುದನ್ನು ಕಂಡು ಸಂಕಟ ವೇಧನೆ ಪಡುತಿದ್ದರು.ಬಹುಸಂಖ್ಯಾತ ಶೋಷಿತರ ಹಕ್ಕುಗಳನ್ನು ರಕ್ಷಿಸುವಂತ ದಲಿತ ಸಾಹಿತಿಬುದ್ದಿಜೀವಿಗಳು ವ್ಯವಸ್ಥೆ ಯೊಂದಿಗೆ ರಾಜಿಯಾಗಿ ಗುಲಾಮರಾಗಿ ಚಮಚಗಳಾಗಿ ಬದುಕುತಿದ್ದು ಬಿಕೆಯವರಿಗೆ ಅಗಾಧ ನೋವು ತರಿಸುತ್ತೆ.ಹೇಗಾದರು ಮಾಡಿ ಬಿಎಸ್ಪಿಯನ್ನು ಅಧಿಕಾರಕ್ಕೆ ತರಬೇಕೆಂದು ಹಾಗು ಕೊನೆ ಪಕ್ಷ ವಿರೋಧ ಪಕ್ಷದ ನಾಯಕನಾಗಬೇಕು ಎಂದು ಬಹುದೊಡ್ಡ ಕನಸ್ಸ ಕಂಡರು.
ಅಂದು ಗದಗದಲ್ಲಿ ಬಾಬಸಾಹೇಬ ಅಂಬೇಡ್ಕರವರ ಜನ್ಮ ದಿನೋತ್ಸವಕ್ಕೆ ಉದ್ಘಾಟಕರಾಗಿ ಹೋಗಿದ್ದರು ಸ್ಟೇಟ್ ಕನ್ವಿನರ್ ಆಗಿದ್ದ ಎಮ್.ಜಯಣ್ಣ ಆ ಕಾರ್ಯಕ್ರಮದ ಉಸ್ತುವಾರಿ ಆಗಿದ್ದರು.ಕಾರ್ಯಕ್ರಮ ಆರಂಭಗೊಂಡಿದೆ .ಬಿಕೆ ಗದಗದ ಲಾಡ್ಜನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತಿದ್ದರು.ಇನ್ನೇನು ಸಾವಿರಾರು ಜನರನ್ನು ಕುರಿತು ಮಾತನಾಡಲು ಎಲ್ಲ ಸಿದ್ದತೆ ಮಾಡಿಕೊಂಡಿದ್ದರು.ಆಯೋಜಕರಿಗೆ ನೀವು ಕಾರ್ಯಕ್ರಮ ಆರಂಭಿಸಿ ನಂತರ ಬರುತ್ತೇನೆ ಎಂದು ಸಂದೇಶ ರವಾನೆ ಮಾಡಿದರು.ಕಾರ್ಯಕ್ರಮ ಆರಂಭವಾಗಿದೆ ಎಲ್ಲರು ಬಿಕೆಯವರ ಮಾತುಗಳನ್ನು ಆಲಿಸಲು ಹಳ್ಳಿಹಳ್ಳಿಗಳಿಂದ ತಂಡೋಪತಂಡವಾಗಿ ಆಗಮಿಸಿ ಕಾದು ಕುಳಿತಿದ್ದಾರೆ.ವೇದಿಕೆ ಮೇಲಿದ್ದ ವ್ಯಕ್ತಿಯೊಬ್ಬ ಮೈಕಿನ ಮುಂದೆ ಬಂದು ಬಿ.ಕೆಯವರಿಗೆ ಹೃದಯಘಾತವಾಯಿತಂತೆ ಆಸ್ಪತ್ರೆಗೆ ದಾಖಲಿಸಿದೆ ಎಂದಾಗ ಇಡೀ ಸಭೆಯೆ ಆತಂಕಕ್ಕೆ ಸಿಲುಕುತ್ತದೆ.
ಏನಾಗುತ್ತೊ..ಎಂಬ ಭಯದಿಂದಲೆ ಬೇಗ ಗುಣಮುಖರಾಗಿ ಬರಲಿ ಎಂದು ಹಾರೈಸುತಿದ್ದರು.ಆಸ್ಪತ್ರೆಗೆ ಆಗಮಿಸಿದ ಜಯಣ್ಣನವರಿಗೆ ಬಿ.ಕೆ.ಕೇಳಿದ್ದು ಪ್ರೋಗ್ರಾಂ ಚನ್ನಗಾಯ್ತೇನೊ ಎಂದು.ಹೂಂ ಚನ್ನಾಗಾಯ್ತು ನೀವು ಮೊದಲು ಗುಣವಾಗ್ರಿ ಎಂದಾಗ .ನನ್ಗೇನು ಆಗಿಲ್ಲ ನಾ ಚನ್ನಾಗಿದಿನಿ ಎಂದರು.ಬಿಕೆಯವರ ಹೆಂಡತಿಯಾದ ಶ್ರೀಮತಿ ಇಂದಿರಾ ಹಾಗು ಮಕ್ಕಳು ಬಂದು ಬಿಕೆಯವರನ್ನು ನೋಡುತ್ತಾರೆ ,ಬಿಕೆ ಇನ್ನೇನು ಮೇಲೇಳಿ ಮಾತನಾಡಬೇಕೆಂದು ತವಕಿಸುತ್ತಲೇ ಕೊನೆಯುಸಿರೆಳೆದರು. ಈ ಅಘಾತದ ಸುದ್ದಿ ತಿಳಿದ ದಲಿತರಿಗೆ ತಂದೆ ಕಳೆದುಕೊಂಡ ಅನಾಥ ಪ್ರಜ್ಞೆ ಕಾಡಲಾರಂಭಿಸುತ್ತದೆ.ನೆರೆದಿದ್ದವರ ಕಣ್ಣಾಲೆಗಳು ತುಂಬಿ ಬಂದವು.ಕರ್ನಾಟಕದ ಶೋಷಿತರು ದಲಿತಚಳುವಳಿಯ ಮಾತೃಕೆಯನ್ನೆ ಕಳೆದುಕೊಂಡತಾಯಿತು.
ಬಿಕೆ ಎಂದು ಅಧಿಕಾರದ ಆಸೆಗೆ ಒಳಗಾಗಲಿಲ್ಲ.ಮಂತ್ರಿ MLA.MP.ನಿಗಮ ಮಂಡಳಿ ಸ್ಥಾನಮಾನದ ಆಸೆಆಕಾಂಶೆಗಳು ಸಾಲಾಗಿ ಹರಿದು ಬಂದರು ಯಾವುದಕ್ಕೊ ತಲೆ ಕೆಡಿಸಿಕೊಳ್ಳಲಿಲ್ಲ.ಎಲ್ಲವನ್ನು ತಮ್ಮ ಕಾಲಿನಿಂದ ತಳ್ಳಿದರು.ತಾವು ನಂಬಿದ್ದ ಅಂಬೇಡ್ಕರ್ ವಾದಕ್ಕೆ ಯಾವತ್ತು ರಾಜಿಮಾಡಿಕೊಳ್ಳಲಿಲ್ಲ.ಅಂಬೇಡ್ಕರ್ ವಾದವೆಂಬ ಹಣತೆಯನ್ನು ಎಲ್ಲರ ಮನಮನೆಯಲ್ಲೂ ಹಚ್ಚಿದರು. ದಲಿತರು ಅಂಬೇಡ್ಕರ್ ವಾದದಿಂದ ಮಾತ್ರ ಮುಕ್ತಿ ಎಂದು ಸಾರಿಸಾರಿ ಹೇಳುತಿದ್ದರು.
ಬಿಕೆ ಇವತ್ತು ಇಲ್ಲ ಆದರೆ ಅವರು ಹೇಳಿದ” ದಲಿತರ ಗುಡಿಸಲಲ್ಲಿ ಹೋರಾಟದ ಹಣತೆ ಹಚ್ಚಿದ್ದೇನೆ ಹೊರಗೆ ಬಿರುಗಾಳಿ ರಭಸವಾಗಿ ಬೀಸುತ್ತಿದೆ.ಈ ಹಣತೆ ಆರದಂತೆ ನೋಡಿಕೊಳ್ಳಿ.ನಮ್ಮ ನಾಯಕ ಬಾಬಸಾಹೇಬರು,ನಮ್ಮ ಪಕ್ಷ ಬಹುಜನ ಸಮಾಜ ಪಕ್ಷ,ನಮ್ಮ ಸಿದ್ದಾಂತ ಅಂಬೇಡ್ಕರ್ ವಾದ.ನಮ್ಮ ಧರ್ಮ ಬೌದ್ದ ಧರ್ಮ ಈ ನನ್ನ ಮಾತುಗಳೆ ಅಂತಿಮ ನನ್ನ ಮಹದಾಸೆ ಎಂದು ಕಣ್ಣೀರಾಕಿ ಹೇಳಿದ ಬಿಕೆಯವರ ಮಾತುಗಳನ್ನು ಇಂದಿನ ದಲಿತರು ಬಹುಜನರು ಅರ್ಥಮಾಡಿಕೊಳ್ಳಬೇಕಾಗಿದೆ.
ವರ್ತಮಾನವು ಸಂವಿಧಾನ ಹಾಗು ಅಂಬೇಡ್ಕರ್ ವಾದ ಅಪಾಯಕಾರಿ ಸಂಧರ್ಭದಲ್ಲಿ ನಿಂತಿದೆ ಇಗ್ಲಾದ್ರು ತಮ್ಮ ದಲಿತ ನಾಯಕರು ಒಣಪ್ರತಿಷ್ಟೆಗಳನ್ನು ಬಿಟ್ಟು ಬಿಕೆಯವರ ಹಾದಿಯಲ್ಲಿ ನಡೆಯಲಿ.
–ಹುಚ್ಚಂಗಿ ಪ್ರಸಾದ್
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್ಮೆಂಟ್ಗೆ ‘ಡೆಮಾಲಿಷನ್’ ಶುರು!
ಕೂಡ್ಲುಗೇಟ್ನ ಎಸ್ಎನ್ಎನ್ ರಾಜ್ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ
ಸುದ್ದಿದಿನ,ಬೆಂಗಳೂರು: ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್ನ ಎಸ್ಎನ್ಎನ್ ಎಸ್ಟೇಟ್ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್ಎನ್ಎನ್ ರಾಜ್ ಕಾರ್ಪ್ ಸಂಸ್ಥೆಯು ಎಚ್ಎಸ್ಆರ್ ಲೇಔಟ್ನಲ್ಲಿರುವ ತನ್ನ ಎಸ್ಎನ್ಎನ್ ರಾಜ್ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್ಮೆಂಟ್ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.
₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ
ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ
ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್ಎನ್ಎನ್ ಅಪಾರ್ಟ್ಮೆಂಟ್ ನಿರ್ದೇಶಕ ಅನೂಜ್ ತಿಳಿಸಿದ್ದಾರೆ. ಫ್ಲ್ಯಾಟ್ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.
ಅದೇ ಜಾಗದಲ್ಲಿ ಹೊಸ ಅಪಾರ್ಟ್ಮೆಂಟ್ ನಿರ್ಮಾಣ
ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್ಮೆಂಟ್ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್ಗಳು ಮುಂಗಡವಾಗಿ ಬುಕ್ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.
ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.

ದಿನದ ಸುದ್ದಿ
ಪಾಕ್ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ
ಸುದ್ದಿದಿನ,ಜಮ್ಮುಕಾಶ್ಮೀರ: ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಮತ್ತೆ ಡ್ರೋನ್ ಹಾರಾಟದ ಆತಂಕ ಎದುರಾಗಿದೆ. ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್ನಲ್ಲಿ ಪಾಕಿಸ್ತಾನ ಮೂಲದ್ದೆಂದು ಶಂಕಿಸಲಾದ ಡ್ರೋನ್ವೊಂದು ಕಾಣಿಸಿಕೊಂಡಿರುವುದು ಭದ್ರತಾ ಪಡೆಗಳನ್ನು ಅಲರ್ಟ್ ಮಾಡಿದೆ. ಗಡಿಯಾಚೆಯಿಂದ ನಡೆಯಬಹುದಾದ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ತಡೆಯಲು ಸೇನೆ ಹಾಗೂ ಭದ್ರತಾ ಪಡೆಗಳು ನಿಗಾ ಮತ್ತಷ್ಟು ಬಿಗಿಗೊಳಿಸಿವೆ.
ಹೈಲೈಟ್ಸ್ |
|
http://Visit : www.suddidina.com
ಬೆಹ್ರೂಟಿ ಗ್ರಾಮದ ಬಳಿ ಕಾಣಿಸಿಕೊಂಡ ಶಂಕಿತ ಡ್ರೋನ್
ಶುಕ್ರವಾರ ಸಂಜೆ ಬಾಲಕೋಟೆ ಪ್ರದೇಶದ ಬೆಹ್ರೂಟಿ ಗ್ರಾಮದ ಸಮೀಪ ಆಕಾಶದಲ್ಲಿ ಶಂಕಿತ ಡ್ರೋನ್ ಹಾರಾಟ ನಡೆಸಿರುವುದು ಸ್ಥಳೀಯರ ಹಾಗೂ ಭದ್ರತಾ ಪಡೆಗಳ ಗಮನಕ್ಕೆ ಬಂದಿದೆ. ಬಳಿಕ ಅದು ಮಂಗಲ್ನಾರ್-ದಬ್ರೋಟ್ ಪ್ರದೇಶದತ್ತ, ಅಂದರೆ ಗಡಿ ಪ್ರದೇಶದ ಸಮೀಪಕ್ಕೆ ತೆರಳಿ ಪಾಕಿಸ್ತಾನದ ದಿಕ್ಕಿನಲ್ಲಿ ವಾಪಸ್ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ರೋನ್ ಕಾಣಿಸಿಕೊಂಡ ಮಾಹಿತಿ ಸಿಗುತ್ತಿದ್ದಂತೆ LoC ವ್ಯಾಪ್ತಿಯಲ್ಲಿ ಭದ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ಬೆಳಗ್ಗೆಯಿಂದಲೇ ಸರ್ಚ್ ಆಪರೇಷನ್ ಆರಂಭಿಸಲಾಗಿದ್ದು, ಡ್ರೋನ್ ಮೂಲಕ ಯಾವುದೇ ವಸ್ತು, ಶಸ್ತ್ರಾಸ್ತ್ರ ಅಥವಾ ಅನುಮಾನಾಸ್ಪದ ಸಾಮಗ್ರಿಗಳನ್ನು ಕೆಳಗೆ ಇಳಿಸಲಾಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.
3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಶೋಧ
ಡ್ರೋನ್ ಆತಂಕದ ನಡುವೆಯೇ ಜಮ್ಮು-ಕಾಶ್ಮೀರದ ಉಧಂಪುರ, ಕಥುವಾ ಮತ್ತು ರಾಜೌರಿ ಜಿಲ್ಲೆಗಳ ವಿಶಾಲ ಅರಣ್ಯ ಪ್ರದೇಶಗಳಲ್ಲೂ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ತೀವ್ರಗೊಳಿಸಿವೆ.
ಉಧಂಪುರ-ಕಥುವಾ ಅರಣ್ಯ ಪ್ರದೇಶದ ಖುಬನ್, ನಾಗೈನ್, ಖ್ಟ್ರೈಲ್, ಗೋಡು ಫಲಾಲ್, ಪದೇತಾರ್, ಚೋರ್ ಮೊಟ್ಟು, ಕಿಯಾ, ಖೇಬಾ, ಭೇದ್, ಮಾರ್ತಾ ಹಾಗೂ ಜೋಫರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೊಲೀಸರು, ಸೇನೆ ಮತ್ತು ಅರೆಸೇನಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ.
ರಾಜೌರಿಯಲ್ಲಿ ಶಸ್ತ್ರಸಜ್ಜಿತರ ಶಂಕೆ
ರಾಜೌರಿ ಜಿಲ್ಲೆಯ ಗೈಬಾಸ್, ಮಿಥಿಯಾನಿ, ಮೊಗ್ಲಾ ಮತ್ತು ನಾರ್ಲಾ ಪ್ರದೇಶಗಳಲ್ಲೂ ಪ್ರತ್ಯೇಕ ಸರ್ಚ್ ಆಪರೇಷನ್ ಕೈಗೊಳ್ಳಲಾಗಿದೆ. ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಸಂಚರಿಸುತ್ತಿರುವುದನ್ನು ಗ್ರಾಮಸ್ಥರು ಗಮನಿಸಿ ಭದ್ರತಾ ಪಡೆಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಮಾಹಿತಿ ಆಧರಿಸಿ ಭದ್ರತಾ ಪಡೆಗಳು ವ್ಯಾಪಕ ಶೋಧ ನಡೆಸಿದರೂ, ಇದುವರೆಗೆ ಯಾವುದೇ ಶಂಕಿತ ವ್ಯಕ್ತಿಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಡಿಯಲ್ಲಿ ಹೆಚ್ಚಿದ ಕಣ್ಗಾವಲು
ಡ್ರೋನ್ ಹಾರಾಟ ಹಾಗೂ ಅರಣ್ಯ ಪ್ರದೇಶಗಳಲ್ಲಿ ಶಂಕಿತ ವ್ಯಕ್ತಿಗಳ ಚಲನವಲನದ ಮಾಹಿತಿ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೂ ತಕ್ಷಣ ಮಾಹಿತಿ ನೀಡುವಂತೆ ಸ್ಥಳೀಯರಿಗೂ ಸೂಚನೆ ನೀಡಲಾಗಿದೆ.
ಪ್ರಸ್ತುತ ಕಾರ್ಯಾಚರಣೆಯ ಪ್ರಮುಖ ಉದ್ದೇಶ ಗಡಿಯಾಚೆಯಿಂದ ಸಂಭವಿಸಬಹುದಾದ ಒಳನುಸುಳುವಿಕೆ ಅಥವಾ ಅನುಮಾನಾಸ್ಪದ ಸಾಗಾಟವನ್ನು ತಡೆಯುವುದು ಮತ್ತು ಪ್ರದೇಶದಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ.

ದಿನದ ಸುದ್ದಿ
ಭರವಸೆ ಕೊಟ್ಟು ಯುವಜನರನ್ನು ಮನೆಗೆ ಕಳುಹಿಸಿದ ಸರ್ಕಾರಕ್ಕೆ ಈಗ ಪ್ರತಿಭಟನೆಯ ಬಿಸಿ: ಸೆ.5ಕ್ಕೆ ದೆಹಲಿಯಲ್ಲಿ CJP ಬೃಹತ್ ಮೆರವಣಿಗೆ!
ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ
- ಜುಲೈ 25ರ ಭರವಸೆ ಜಾರಿಗೆ ವಿಳಂಬ: CJP ತೀವ್ರ ಆಕ್ರೋಶ
- ಇಂಡಿಯಾ ಗೇಟ್ನಿಂದ ಪೊಲೀಸ್ ಕೇಂದ್ರ ಕಚೇರಿವರೆಗೆ ಮೆರವಣಿಗೆ
- NEET ಅಭ್ಯರ್ಥಿಗಳ ಕುಟುಂಬಸ್ಥರು, ಪೊಲೀಸ್ ದೌರ್ಜನ್ಯ ಸಂತ್ರಸ್ತರು ಮುಂಚೂಣಿಯಲ್ಲಿ
- “ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ” ಎಂದ CJP
ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ
ಸುದ್ದಿದಿನ,ನವದೆಹಲಿ: ದೇಶದ ಯುವಜನರಿಗೆ ನೀಡಿರುವ ಭರವಸೆಗಳನ್ನು ಸರ್ಕಾರ ಈಡೇರಿಸಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ಸೆಪ್ಟೆಂಬರ್ 5ರಂದು ನವದೆಹಲಿಯಲ್ಲಿ ಶಾಂತಿಯುತ ಪ್ರತಿಭಟನಾ ಮೆರವಣಿಗೆ ನಡೆಸಲು ಕರೆ ನೀಡಿದೆ. ಜುಲೈ 25ರಂದು ಸಾರ್ವಜನಿಕವಾಗಿ ನೀಡಲಾಗಿದ್ದ ಭರವಸೆಗಳಿಗೆ ಒಂದು ತಿಂಗಳು ಕಳೆದರೂ ಅವುಗಳ ಅನುಷ್ಠಾನಕ್ಕೆ ಸ್ಪಷ್ಟ ಕ್ರಮಗಳು ಗೋಚರಿಸುತ್ತಿಲ್ಲ ಎಂಬುದು CJPಯ ಪ್ರಮುಖ ಆರೋಪವಾಗಿದೆ.
CJP ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿದ್ದು, ಸರ್ಕಾರ ಹಾಗೂ ಬಿಜೆಪಿ-ಎನ್ಡಿಎ ಆಡಳಿತದ ರಾಜ್ಯಗಳು ಯುವಜನರಿಗೆ ನೀಡಿದ್ದ ಭರವಸೆಗಳ ಅನುಷ್ಠಾನವನ್ನು ಪರಿಶೀಲಿಸಿದ ಬಳಿಕ ಪ್ರತಿಭಟನೆ ನಡೆಸುವ ನಿರ್ಧಾರವನ್ನು ಸರ್ವಾನುಮತದಿಂದ ಕೈಗೊಳ್ಳಲಾಗಿದೆ ಎಂದು ಪಕ್ಷ ತಿಳಿಸಿದೆ.
http://Visit : www.suddidina.com
ಇಂಡಿಯಾ ಗೇಟ್ನಿಂದ ಮೆರವಣಿಗೆ
ಸೆಪ್ಟೆಂಬರ್ 5ರಂದು ಇಂಡಿಯಾ ಗೇಟ್ನಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ನವದೆಹಲಿ ಪೊಲೀಸ್ ಕೇಂದ್ರ ಕಚೇರಿಯತ್ತ ಸಾಗಲಿದೆ. ಮೃತ NEET ಅಭ್ಯರ್ಥಿಗಳ ಕುಟುಂಬಸ್ಥರು ಹಾಗೂ ಪೊಲೀಸ್ ದೌರ್ಜನ್ಯಕ್ಕೆ ಒಳಗಾದವರು ಮೆರವಣಿಗೆಯ ಮುಂಚೂಣಿಯಲ್ಲಿ ಸಾಗಲಿದ್ದಾರೆ ಎಂದು CJP ಹೇಳಿದೆ.
ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು, ಯುವ ಸಂಘಟನೆಗಳ ಪ್ರತಿನಿಧಿಗಳು ಮತ್ತು ಯುವಜನರು ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಸರ್ಕಾರ ನೀಡಿದ್ದ ಭರವಸೆಗಳನ್ನು ಜಾರಿಗೆ ತರಬೇಕು ಎಂಬ ಒಂದೇ ಪ್ರಮುಖ ಬೇಡಿಕೆಯೊಂದಿಗೆ ಯುವಜನರು ಶಾಂತಿಯುತವಾಗಿ ಧ್ವನಿ ಎತ್ತಲಿದ್ದಾರೆ ಎಂದು ಪಕ್ಷ ಹೇಳಿದೆ.
‘ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ’
ಜುಲೈ 25ರಂದು ನೀಡಿದ ಭರವಸೆಗಳನ್ನು ನಂಬಿ ದೇಶಾದ್ಯಂತ ನಡೆದಿದ್ದ ಪ್ರತಿಭಟನೆಗಳನ್ನು ಯುವಜನರು ಉತ್ತಮ ನಂಬಿಕೆಯಿಂದ ಹಿಂಪಡೆದಿದ್ದರು. ಆದರೆ, ಭರವಸೆಗಳ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವುದು ಯುವಜನರಲ್ಲಿ ಮತ್ತೆ ಅಸಮಾಧಾನ ಮೂಡಿಸಿದೆ ಎಂದು CJP ಆರೋಪಿಸಿದೆ.
“ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ. ನಮ್ಮ ಸದುದ್ದೇಶವನ್ನು ಸರ್ಕಾರ ಯುವಜನರಿಗೆ ದ್ರೋಹ ಮಾಡುವ ಅವಕಾಶವಾಗಿ ಬಳಸಿಕೊಳ್ಳಬಾರದು” ಎಂದು CJP ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಎಚ್ಚರಿಕೆ ನೀಡಿದೆ.
“ಭರವಸೆಗಳನ್ನು ಜಾರಿಗೆ ತರುವ ಬದಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವುದನ್ನು ವಿಳಂಬಿಸುತ್ತಿದೆ, ತಾಂತ್ರಿಕ ಕಾರಣಗಳ ಹಿಂದೆ ಅಡಗಿಕೊಳ್ಳುತ್ತಿದೆ ಹಾಗೂ ಸುಪ್ರೀಂ ಕೋರ್ಟ್ನ ಮುಂದೆಯೂ ಸ್ಪಷ್ಟ ಭರವಸೆ ನೀಡುವುದನ್ನು ತಪ್ಪಿಸುತ್ತಿದೆ”
|
ಮಾತಿನಿಂದ ಹಿಂದೆ ಸರಿಯಲು ಸಾಧ್ಯವಿಲ್ಲ
ಜುಲೈ 25ರಂದು ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಸಾರ್ವಜನಿಕವಾಗಿ ನೀಡಿದ್ದ ಭರವಸೆಗಳನ್ನು ಸರ್ಕಾರ ಈಡೇರಿಸಬೇಕು ಎಂಬುದು CJPಯ ಆಗ್ರಹ. ಮಕ್ಕಳನ್ನು ಕಳೆದುಕೊಂಡ ಕುಟುಂಬಗಳು ಹಾಗೂ ಪೊಲೀಸ್ ದೌರ್ಜನ್ಯಕ್ಕೆ ಒಳಗಾದವರ ನೋವಿನ ನಡುವೆ ನಡೆಯಲಿರುವ ಈ ಮೆರವಣಿಗೆ, ಯುವಜನರ ವಿಶ್ವಾಸ ಮತ್ತು ಸರ್ಕಾರದ ಹೊಣೆಗಾರಿಕೆಯ ಪ್ರಶ್ನೆಯನ್ನು ಮುನ್ನೆಲೆಗೆ ತರುವ ಪ್ರಯತ್ನವಾಗಿದೆ.
ಕೇಂದ್ರ ಸರ್ಕಾರ ಭರವಸೆಗಳನ್ನು ಜಾರಿಗೆ ತರುವ ಬದಲು ಕ್ರಮ ಕೈಗೊಳ್ಳುವುದನ್ನು ವಿಳಂಬಿಸುತ್ತಿದೆ, ತಾಂತ್ರಿಕ ಕಾರಣಗಳ ಹಿಂದೆ ಅಡಗಿಕೊಳ್ಳುತ್ತಿದೆ ಹಾಗೂ ಸುಪ್ರೀಂ ಕೋರ್ಟ್ನ ಮುಂದೆಯೂ ಸ್ಪಷ್ಟ ಭರವಸೆ ನೀಡುವುದನ್ನು ತಪ್ಪಿಸುತ್ತಿದೆ ಎಂದು CJP ಆರೋಪಿಸಿದೆ.
ಸೆಪ್ಟೆಂಬರ್ 5ರಂದು ಹೆಚ್ಚಿನ ಸಂಖ್ಯೆಯಲ್ಲಿ ಇಂಡಿಯಾ ಗೇಟ್ನಲ್ಲಿ ಸೇರಿ ಶಾಂತಿಯುತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಯುವಜನರು, ವಿದ್ಯಾರ್ಥಿಗಳು ಹಾಗೂ ಯುವ ಸಂಘಟನೆಗಳಿಗೆ CJP ಮನವಿ ಮಾಡಿದೆ. ಪ್ರತಿಭಟನೆ ಸಂಪೂರ್ಣವಾಗಿ ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆಯಲಿದೆ ಎಂದು ಅದು ಪುನರುಚ್ಚರಿಸಿದೆ.

-
ಅಂತರಂಗ7 days agoಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
-
ದಿನದ ಸುದ್ದಿ4 days agoವಂಚನೆ | ಪ್ರಭಾರ ಕಾರ್ಯಪಾಲಕ ಅಭಿಯಂತರ ಸೋಮ್ಲನಾಯ್ಕ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ4 days agoಭರವಸೆ ಕೊಟ್ಟು ಯುವಜನರನ್ನು ಮನೆಗೆ ಕಳುಹಿಸಿದ ಸರ್ಕಾರಕ್ಕೆ ಈಗ ಪ್ರತಿಭಟನೆಯ ಬಿಸಿ: ಸೆ.5ಕ್ಕೆ ದೆಹಲಿಯಲ್ಲಿ CJP ಬೃಹತ್ ಮೆರವಣಿಗೆ!
-
ದಿನದ ಸುದ್ದಿ4 days agoKPSC ಪರೀಕ್ಷಾ ಹಗರಣ: 329 ಅಭ್ಯರ್ಥಿಗಳಿಗೆ CID ನೋಟಿಸ್, IAS ಅಧಿಕಾರಿ ವಿರುದ್ಧ ED ಆರೋಪ
-
ದಿನದ ಸುದ್ದಿ4 days agoಇಂಗ್ಲಿಷ್ ಕಲಿಯಲು ಬಂದ ಜಪಾನ್ ಯುವಕ ಜೈಲು ಸೇರಿದ ; 75000 ಪರಿಹಾರ ಪಡೆದ
-
ದಿನದ ಸುದ್ದಿ5 days agoಸರ್ವರ್ ಡೌನ್, ಅಧಿಕಾರಿಗಳ ವಿಳಂಬ: ‘ಎ-ಖಾತೆ’ಗಾಗಿ ಕಾದು ಕುಳಿತ 60 ಸಾವಿರಕ್ಕೂ ಹೆಚ್ಚು ಅರ್ಜಿದಾರರು!
-
ದಿನದ ಸುದ್ದಿ5 days ago₹25 ಕೋಟಿ ಮೌಲ್ಯದ ಬಿಡಿಎ ಆಸ್ತಿ ವಶಕ್ಕೆ: ರಾಜಾಜಿನಗರ ಬಡಾವಣೆಯಲ್ಲಿ ಅನಧಿಕೃತ ನಿರ್ಮಾಣಕ್ಕೆ ಬಿತ್ತು ಬೀಗ
-
ದಿನದ ಸುದ್ದಿ5 days agoಭದ್ರಾ ಡ್ಯಾಂ ನೀರು ಹರಿಸುವಂತೆ ಆಗ್ರಹಿಸಿ ಕರೆ ನೀಡಿದ್ದ ದಾವಣಗೆರೆ ಬಂದ್ ನೀರಸ



