ಬಹಿರಂಗ
‘ಸನಾತನ ಧರ್ಮ’ದ ವಿರುದ್ದ ಬಂಡೆದ್ದ ಬಸವಣ್ಣ..!
ಕುರಿ ಕೋಳಿ ಕಿರಿಮೀನು ತಿಂಬುವರಿಗೆಲ್ಲ ಕುಲಜ ಕುಲಜರೆಂದಂಬರು.
ಶಿವಗೆ ಪಂಚಾಮೃತವ ಕರೆವ ಪಶುವ ತಿಂಬ ಮಾದಿಗ ಕೀಳುಜಾತಿಯೆಂಬರು.
ಅವರೆಂತು ಕೀಳುಜಾತಿಯಾದರು? ಜಾತಿಗಳು ನೀವೇಕೆ ಕೀಳಾಗಿರೊ?.
ಬ್ರಾಹ್ಮಣನುಂಡುದು ಪುಲ್ಲಿಗೆ ಶೋಭಿತವಾಗಿ ನಾಯಿ ನೆಕ್ಕಿ ಹೋಯಿತು.
ಮಾದಿಗರುಂಡುದು ಪುಲ್ಲಿಗೆ ಬ್ರಾಹ್ಮಣಗೆ ಶೋಭಿತವಾಯಿತು.
ಅದೆಂತೆಂದಡೆ;
ಸಿದ್ದಲಿಕೆಯಾಯಿತು,
ಸಗ್ಗಳೆಯಾಯಿತು.
ಸಿದ್ದಲಿಕೆಯ ತುಪ್ಪವನು,ಸಗ್ಗಳೆಯ ನೀರನು
ಶುದ್ದವೆಂದು ಕುಡಿವ ಬುದ್ದಿಗೇಡಿ ವಿಪ್ರರಿಗೆ ನಾಯಕ ನರಕ ತಪ್ಪದಯ್ಯಾ;
ಉರಿಲಿಂಗಪೆದ್ದಿಗಳ ಅರಸು ಒಲ್ಲನವ್ವಾ.
ಹನ್ನೆರಡನೆಯ ಶತಮಾನದ ಬಸವಣ್ಣನ ಸಮಕಾಲಿನಳಾದ ಶರಣೆ ಬಂಡಾಯಗಾರ್ತಿ ಉರಿಲಿಂಗಪೆದ್ದಿಗಳ ಪುಣ್ಯ ಸ್ತ್ರೀ
ಕಾಳವ್ವೆಯ ಈ ವಚನ ಬ್ರಾಹ್ಮಣರು ನಿರ್ಮಿಸಿದ ಸನಾತನ ಅಮಾನುಷ ಪರಂಪರೆಯ ಜಾತಿ ಸಂಕುರವನ್ನು ಪುಡಿಮಾಡುತ್ತಾದೆ.
ಒಬ್ಬ ಕೆಳ ಜಾತಿಯ ದಲಿತ ಮಹಿಳೆ ಈ ರೀತಿಯ ಜಾತಿಯನ್ನೆ ಪ್ರಶ್ನಿಸುತ್ತಾಳೆ ಎಂದರೆ ಅವತ್ತಿನ ಆ ಕಾಲದ ಚಳುವಳಿಯ ಧೈರ್ಯವನ್ನ ಮೆಚ್ಚಲೆಬೇಕಾಗುತ್ತದೆ.
ಇಡೀ ವಿಶ್ವದಲ್ಲೆ ಮೊತ್ತ ಮೊದಲು ಕಾಯಕಜೀವಿಗಳು.ಗುಲಾಮರು.ಮಹಿಳೆಯರು.ಶ್ರಮಿಕರು. ದಲಿತರು.ಹಿಂದುಳಿದವರು ಧೈರ್ಯದಿಂದ ಮಾತನಾಡಿದ್ದು.ಬರೆದಿದ್ದು.
ಪ್ರತಿರೋಧವನ್ನು ಒಡ್ಡಿದ್ದು ಎಂದರೆ ಹನ್ನೆರಡನೆ ಶತಮಾನದ ಬಸವಾದಿ ಶರಣರ ಕಲ್ಯಾಣ ರಾಜ್ಯದಲ್ಲಿ.
ಜಾತಿಯ ತಳಪಾಯದಿಂದ ನಿಂತಿರುವ ಹಿಂದುಧರ್ಮದಲ್ಲಿ ಕುರಿ.ಕೋಳಿ.ಮೀನು.
ತಿನ್ನುವರನ್ನು ಸ್ವಲ್ಪ ಶ್ರೇಷ್ಠ ಜಾತಿಗಳೆನ್ನುತ್ತಾರೆ.ಆದರೆ ಶಿವನಿಗೆ ಪಂಚಾಮೃತ ಕೊಡುವ ಗೋವು ತಿಂದರೆ ಕೀಳುಮಾದಿಗ ಎನ್ನುವರು ಎಂದು ಬಂಡಾಯ ಸಾರುತ್ತಲೆ ಇಂತಹ ಕಟ್ಟುಪಾಡನ್ನು ಹೇರಿದ ಬ್ರಾಹ್ಮಣರ ಪಾಂಡಿತ್ಯಕ್ಕೆ ದಿಕ್ಕಾರ ಹೇಳುತ್ತಾಳೆ.
ಪ್ರಸ್ತುತ ದಿನಗಳಲ್ಲಿ ಗೋಹತ್ಯೆಯ ಹೇಸರಿನಲ್ಲಿ ಮುಗ್ದ ಅಮಾಯಕ ದಲಿತ ಹಾಗು ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ದೌರ್ಜನ್ಯಗೈಯ್ಯುವ ಮನುವಾದಿಗಳ ಮರ್ಮಕ್ಕೆ ಈ ವಚನ ಕೊಡಲಿ ಏಟು ಹಾಕುತ್ತದೆ.
ಶರಣರ ಕಾಲವೆಂದರೆ ಇಡೀ ಪ್ರಪಂಚದಲ್ಲಿ ಮೊತ್ತಮೊದಲು ಸಮಾನತೆ.ಸ್ವಾತಂತ್ರ್ಯ. ಸಹೋದರತೆ ಎಂಬ ತತ್ವಗಳು ತಲೆ ಎತ್ತಿದ ಕಾಲ.ಅಂದರೆ ಎಲ್ಲಾ ದೇಶಗಳಿಗಿಂತ ಮೊದಲು ಕಾಯಕ ವರ್ಗ ಸಮಾನತೆಗಾಗಿ ಒಂದೆಡೆ ಸೇರಿ ವೈಚಾರಿಕ ವೈಜ್ಞಾನಿಕವಾಗಿ ಸತ್ಯವನ್ನ ಶೋಧಿಸುತ್ತಲೇ ಅಮಾನವೀಯ ಜಾತಿವ್ಯವಸ್ಥೆ ಅಸಮಾನತೆಯ ವರ್ಣವ್ಯವಸ್ಥೆ ಅಜ್ಞಾನದ ಲಿಂಗ ತಾರತಮ್ಯ ಅವಿವೇಕದ ಮೌಡ್ಯಕಂದಚಾರಗಳಂತ ಬ್ರಾಹ್ಮಣರು ಸ್ಥಾಪಿಸಿದ್ದ ವಿಷವರ್ತುಲ ವ್ಯವಸ್ಥೆಯ ವಿರುದ್ದ ಚಳುವಳಿ ಮಾಡಿದ ಕ್ರಾಂತಿಕಾರಿ ದಿನಗಳವು.
ವೇದ ನಡುಗಿಸಿ ಶಾಸ್ತ್ರಕ್ಕೆ ನಿಗಳವನಿಕ್ಕಿದ ಬಸವಣ್ಣ ನೇರವಾಗಿ ಬ್ರಾಹ್ಮಣರ ಸನಾತನ ಸಂಪ್ರದಾಗಳನ್ನು ವಿರೋದಿಸುತ್ತಿದ್ದ ಅನುತ್ಪಾದಕರಾದ ಅಲ್ಪಸಂಖ್ಯಾತ ಬ್ರಾಹ್ಮಣರು ಉತ್ಪಾದಕವರ್ಗದ ಬಹುಸಂಖ್ಯಾತ ಶೂದ್ರರ ಮೇಲೆ ನಡೆಸುವ ಶೋಷಣೆಯನ್ನು ಖಂಡಿಸುತಿದ್ದರು. ಸೂಕ್ಮಮತಿಗಳಾದ ಬಸವಣ್ಣನವರು ಶೋಷಣೆಯ ವಿವಿಧ ಮೂಲಗಳನ್ನು ಅರಿತು ಬಹಳ ಎಚ್ಚರಿಕೆಯಿಂದ ಕಾಯಕ ಪರಂಪರೆಯ ಶ್ರಮಿಕರ ಬೆವರಿನ ಚಳುವಳಿಯನ್ನು ಆರಂಭಿಸಿದರು.ಬಸವಾದಿ ಶರಣರ ಚಳುವಳಿಯೆಂದರೆ ಶೂದ್ರಾತಿಶೂದ್ರ ಸಮುದಾಯಗಳು ಒಂದಾಗಿ ಮನುಷ್ಯತ್ವದ ಉಳಿವಿಗಾಗಿ ಮಾಡಿದ ದೊಡ್ಡ ಚಳುವಳಿಯಾಗಿದೆ. ಈ ಸತ್ಯವನ್ನು ಪ್ರತಿಯೊಬ್ಬರಿಗು ಅರ್ಥಮಾಡಿಸಬೇಕಿದೆ.
ಯುರೋಪಿನಲ್ಲಿ ಬಂಡವಾಳ ಶಾಹಿವ್ಯವಸ್ಥೆ ಜನ್ಮ ತಾಳಿದ್ದು 13 ನೇ ಶತಮಾನದಲ್ಲಿ.18ನೇಶತಮಾನದಲ್ಲಿ ಯೋರೋಪಿನ ಕೆಲವು ರಾಷ್ಟ್ರಗಳಲ್ಲಿ ಔದ್ಯೋಗಿಕ ಕ್ರಾಂತಿಯ ನಂತರ ಸಂಘಟಿತ ದುಡಿಯುವ ವರ್ಗ ರೂಪಗೊಂಡಿತು.ಕಾರ್ಲ್ ಮಾರ್ಕ್ .ಪ್ರೆಡೆರಿಕ್ ಎಂಗೆಲ್ಸ್ ಮುಂತಾದ ತತ್ವಜ್ಞಾನಿಗಳು ಶ್ರಮಿಕರ ಕಾಯಕಜೀವಿಗಳ ಹಾಗು ದುಡಿತುವ ವರ್ಗಗಳ ತತ್ವ ಸಿದ್ದಾಂತವನ್ನು ವೈಜ್ಞಾನಿಕವಾಗಿ ಬರೆದದ್ದು 19ನೇ ಶತಮಾನದಲ್ಲಿ.
ಅಲ್ಲದೆ ಬಂಡವಾಳಶಾಹಿಗಳ ವಿರುದ್ದ ಕಾರ್ಮಿಕರು ಹೋರಾಡುವ ಹಾಗು ಅಥವಾ ಉಳ್ಳವರು ಹಾಗು ಇಲ್ಲದವರ ನಡುವೆ ನಡೆದ ಅನೇಕ ಚಳುವಳಿಗಳು ಸಹ 19ನೇ ಶತಮಾನದಲ್ಲಿ.
ಆದರೆ ದುಡಿಯದೆ ಕಾಲಹರಣಮಾಡುತ್ತಾ ಹೋಮ.ಹವನ.ಯಜ್ಞ.
ಯಾಗಗಳೆಂಬ ಮೌಡ್ಯಕಂದಾಚಾರಗಳ ಮೂಲಕ ಜನರಲ್ಲಿ ಭಯಹುಟ್ಟಿಸಿ ವಸೂಲಿ ಮಾಡುತಿದ್ದ ಸಮುದಾಯದ ವಿರುದ್ದ ದುಡಿಯುವ ಕಾಯಕ ವರ್ಗ ಹೋರಾಡಿದ್ದು ಬಸವಣ್ಣನ ನೇತೃತ್ವದಲ್ಲಿ. ಸಮಾಜದ ಕಟ್ಟಕಡೆಯಲ್ಲಿ ಅಸ್ಪೃಶ್ಯತೆಗೊಳಗಾದ ದಲಿತಸಮುದಾಯಗಳಿಂದ ಹಿಡಿದು ಎಲ್ಲಾ ಕಾಯಕಜಾತಿಗಳನ್ನುಒಂದುಗೂಡಿಸಿ”ಕಾಯಕವೆ ಕೈಲಾಸ “ದ ತತ್ವದೊಂದಿಗೆ ಹೊಸಕ್ರಾಂತಿಗೆ ಮುನ್ನುಡಿ ಬರೆದ ವಿಶ್ವದ ಮೊದಲಿಗ ಎಂದರೆ ಬಸವಣ್ಣ.ಇಂತ ಕಾಯಕ ಗುಂಪಿನ ನಾಯಕನಾದ ಬಸವಣ್ಣ ಶತಶತಮಾನದಿಂದ ನೊಂದಬೆಂದ ಜನರಿಗೆ ನಗುವಾಗುತ್ತಾನೆ.
ಬಸವಣ್ಣನ ಈ ಕಾಯಕ ಚಳುವಳಿ ಅನೇಕ ಮಹತ್ತರವಾದ ಹೊಸಹೊಸ ಪರಿವರ್ತನೆಗೆ ಹಾಗು ವೈಚಾರಿಕ ಚಿಂತನೆಗೆ ಪ್ರಥಮ ಪ್ರಾಶಸ್ತ್ಯ ಕೊಡುತ್ತದೆ.
ಜಾತಿಸಂಕೋಲೆಗಳಿಂದ ಸಮಾನ ಹಕ್ಕುಗಳನ್ನು ಪಡೆಯುವ. ಛಿದ್ರಛಿದ್ರಗೊಂಡಿರುವ ವಿವಿಧ ಕಾಯಕ ಜಾತಿಗಳ ನುಡುವೆ ಒಗ್ಗಟ್ಟು.ಕಷ್ಟಸುಖದಲ್ಲಿ ಭಾಗಿಯಾಗುವ ಮಾನವೀಯಗುಣ. ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುವಂತ ಏಕದೇವ ಪ್ರಜ್ಞೆ. ಜ್ಞಾನದ ವೃದ್ದಿಗೆ ಅಕ್ಷರದ ಅರಿವು.ಸ್ತ್ರೀ ಪುರುಷ ಸಮಾನ.ಕಾಯಕ ಸಿದ್ದಾಂತಗಳೆಂಬ ಬದುಕಿನ ವಿಧಾನಗಾಳ ಮೌಲ್ಯವನ್ನು ಈ ಶರಣ ಚಳುವಳಿ ಕೊಡುತ್ತದೆ.
ಅಸ್ಪೃಶ್ಯ ಬಡವನಾಗಿ ಹುಟ್ಟುವುದು ಜನ್ಮಜನ್ಮದ ಮಹಾಪಾಪ ಎಂದು ಹೇಳುವ ವೈದಿಕರಿಗೆ ಬಸವಣ್ಣ” ಮನೆ ನೋಡ…ಬಡವರ ಮನ ನೋಡ..ಘನ ಕೂಡಲಸಂಗನಶರಣರು ಸ್ವತಂತ್ರಧೀರರು”ಎಂದು ಶೋಷಿತರ ಎದೆಯೊಳಗೆ ಸ್ವಾಭಿಮಾನ ಬಿತ್ತಿ ಶೋಷಣೆಯ ಅರಿವನ್ನು ಶರಣರಿಗೆ ಸಾರಿಹೇಳುತ್ತಾರೆ.
ಪ್ರಸ್ತುತ ದಿನಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಸಾಲುಸಾಲಾಗಿ ಹತ್ಯೆಗಳಾಗುತ್ತಿವೆ.ಆದರೆ ಬಸವಣ್ಣ ಹನ್ನೆರಡನೆಯ ಶತಮಾನದಲ್ಲಿ “ಅನುಭವ ಮಂಟಪ” ನಿರ್ಮಿಸಿ ಪ್ರತಿಯೊಬ್ಬರ ಅನುಭವ ಹಾಗು ಅಭಿವ್ಯಕ್ತಿ ಗೌರವಯುತವಾದದ್ದು.ಎಲ್ಲಾರು ಅನಭವ ಮಂಟಪದಲ್ಲಿ ಜಾತಿಎಲ್ಲೆಯಿಲ್ಲದೆ. ಮೇಲುಕೀಳೆನ್ನದೆ.ಬಡವಬಲ್ಲಿದ. ಸ್ತ್ರೀ ಪುರುಷ ಎಂಬ ಬೇಧ ಭಾವವಿಲ್ಲದೆ ಪ್ರತಿಯೊಬ್ಬರೂ ಸಮಾಜಲ್ಲಿ ಬೇರೊರಿದ್ದ ಕಂದಾಚಾರ ಮೌಡ್ಯವನ್ನು ವಿರೋಧಿಸುತ್ತಾ ಸನಾತನವಾದಿಗಳ ಪೈಶಾಚಿಕ ರೀತಿನೀತಿಗಳನ್ನು ತಮ್ಮ ವಚನದ ಮೂಲಕ ಕಟುವಾಗಿ ಟೀಕಿಸುತಿದ್ದರು.
“ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಅನುಭವ ಮಂಟಪ ನಿರ್ಮಿಸಿದ ಬಸವಣ್ಣ ಅದರ ಇಡೀ ನಾಯಕತ್ವವನ್ನು ತಳಸಮುದಾಯಗಳಿಗೆ ನೀಡುತ್ತಾನೆ. 770 ಪ್ರತಿನಿಧಿಗಳು (ಶರಣರು) ಇದ್ದ ಈ ಅನುಭವ ಮಂಟಪ ಒಂದು ರೀತಿಯಲ್ಲಿ ವಿಶ್ವದ ಮೊದಲನೆ ಪಾರ್ಲಿಮೆಂಟ್ ಆಗಿ ಕಂಡುಬರುತ್ತದೆ.ಅನುಭವ ಮಂಟಪದ ಶೂನ್ಯ ಪೀಠಾಧ್ಯಕ್ಷಾರದ ಅಲ್ಲಮ ಪ್ರಭಗಳು(ದಲಿತ) ಮೊದಲ ಸ್ಪೀಕರ್ ಆಗಿ ಕಾಣುತ್ತಾರೆ.ಅಲ್ಲಿ ಅಕ್ಕಮಹಾದೇವಿ. ಗಂಗಾಂಬಿಕೆ.ನೀಲಾಂಬಿಕೆ.ಸೂಳೆಸಂಕವ್ವ.ದಾನಮ್ಮ.ಕಲ್ಯಾಣವ್ವ.ಆಯ್ದಕ್ಕಿ ಲಕ್ಕಮ್ಮ.ಸತ್ಯಕ್ಕ.ಮುಂತಾದ ಮಹಿಳಾ ಶರಣೆಯರು.ಮಾದರ ದೂಳಯ್ಯ .ಮಡಿವಾಳ ಮಾಚಯ್ಯ.ಸಮಗಾರ ಹರಳಯ್ಯ.ಚನ್ನಬಸವಣ್ಣ.
ಡೋಹಾರ ಕಕ್ಕಯ್ಯ.ಅಜಗಣ್ಣ.ಕುರಬರ ಬೊಮ್ಮಣ್ಣ.ಬ್ರಾಹ್ಮಣರ ಮದುವರಸ.ನೂರಾರು ಜಾತಿಯ ಶರಣರು ಒಂದೆಡೆ ಸೇರಿ ತಮ್ಮ ಕಾಯಕನಿರತ ಅನಭವಗಳು ಹಾಗು ಸಮಾಜದ ಅಂಕುಡೊಂಕು. ದೇಶದ ಸಮಸ್ಯೆಗಳು ಅವುಗಳಿಗೆ ಪರಿಹಾರಗಳನ್ನು ಸೂಚಿಸುತ್ತ ಅಧಿವೇಶನದಲ್ಲಿ ಚರ್ಚಿಸುತಿದ್ದರು.
ಮಹಿಳೆಯರಿಗೆ ಮೊದಲು ವಿಶ್ವದಲ್ಲೆ ರಾಜಕೀಯ ಪ್ರಜ್ಞೆ ಹಾಗು ಸಮಾನತೆ ಸ್ವಾತಂತ್ರ್ಯಗಳನ್ನು ನೀಡಿದ ಏಕೈಕ ವ್ಯಕ್ತಿ ಬಸವಣ್ಣ.ಅಲ್ಲದೆ ಶ್ರಮಿಕವರ್ಗವನ್ನು ಒಂದೆಡೆ ಸೇರಿಸಿ ವೈಜ್ಞಾನಿಕ ಕ್ರಾಂತಿಗೆ ಅನುಗೊಳಿಸಿದ ವಿಶ್ವದ ಮೂದಲ ಸಂಘಟಕ ಬಸವಣ್ಣ .
ಬಸವಣ್ಣ ವಯಸ್ಕರ ಶಿಕ್ಷಣ ಪದ್ದತಿಯನ್ನು ಜಾರಿಗೆ ತಂದಿರುವುದು ಕೆಲವು ತಳಸಮುದಾಯಗಳು ಶರಣರು ಅನುಭವ ಮಂಟಪದಲ್ಲಿ ಅಕ್ಷರ ಕಲಿತು ವಚನಗಳ ರಚನೆಗೆ ಮುಂದಾಗುತ್ತಾರೆ. ಅಲ್ಲದೆ ದಲಿತರಿಗು ಮಹಿಳೆಯರಿಗು ಅಕ್ಷರದ ಅರಿವು ನೀಡುತಿದ್ದ ಬಸವಣ್ಣ ಜ್ಞಾನಕ್ಕೆ ಜಾತಿಭೇಧವಿಲ್ಲ ಎಂಬ ಮಾತನ್ನು ಸಾಬೀತು ಮಾಡಿದ್ದರು.ಹಾಗಾಗಿ ಬಹುಸಂಖ್ಯಾತ ವಚನಕಾರರು ದಲಿತರು .ಮಹಿಳೆಯರು ಹಾಗು ಹಿಂದುಳಿದ ವರ್ಗದವರಾಗಿದ್ದಾರೆ.ಇದು ಇಡೀ ಭಾರತದಲ್ಲೆ ಒಂದು ಹೊಸ ವಿಶಿಷ್ಟ ಪ್ರಯೋಗವಾಗಿದೆ.
ಈ ದಲಿತರು.ಮಹಿಳೆಯರು.ಹಿಂದುಳಿದವರು ವಚನಗಳ ಮೂಲಕ ಕನ್ನಡದಲ್ಲಿ ಬರೆದ ವಿಶ್ವದ ಮೂದಲ ಸಾಹಿತ್ಯವಾಗುತ್ತದೆ.ಏಕೆಂದರೆ ಈ ಸಂಧರ್ಭದಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಸಾಹಿತ್ಯ ರಚನೆಯಾಗಿರುವುದಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ.
ಇಡೀ ವಿಶ್ವದಲ್ಲಿನ ಯಾವ ದೇಶದಲ್ಲೂ ಸಂವಿಧಾನ ರಚನೆಯಾಗದ ದಿನಮಾನಗಳಲ್ಲಿ ಕನ್ನಡದ ಶರಣರು ಸಮಾನತೆ. ಸಹೋದರತೆ.ಸ್ವಾತಂತ್ರ್ಯ. ಭ್ರಾತೃತ್ವ.ಮೀಸಲಾತಿ.ಧಾರ್ಮಿಕ ಹಕ್ಕು.ಮುಂತಾದವುಗಳ ಕುರಿತು ವೈಜ್ಞಾನಿಕ ವೈಚಾರಿಕ ವಚನಗಳನ್ನು ರಚಿಸಿದ್ದರು.
1215ರಲ್ಲಿ ಇಂಗ್ಲೆಂಡ್ ನಲ್ಲಿ ಕಿಂಗ್ ಜಾನ್ ಮತ್ತು ಜಮಿನ್ದಾರರ ನಡುವೆ ಒಂದು ಬಹುಮುಖ್ಯ ಒಪ್ಪಂದವಾಗುತ್ತದೆ.ರಾಜನ ಅಧಿಕಾರವನ್ನು ಮೊಟಕುಗೊಳಿಸಿದಂಥ ವಿಶ್ವದ ಮೂದಲ ಒಪ್ಪಂದಕ್ಕೆ”ಮ್ಯಾಗ್ನಾಕಾಟ್” ಮಹಾ ಒಪ್ಪಂದ ಎಂದುಕರೆಯುತ್ತಾರೆ. 13 ನೇ ಶತಮನದಲ್ಲಿ ನಡೆದ ಈ ಒಪ್ಪಂದ “ಜಗತ್ತಿನ ಸಂವಿಧಾನಗಳ ತಾಯಿ” ಎಂದು ಇತಿಹಾಸತಜ್ಞರ ಅಭಿಪ್ರಾಯವಾಗಿದೆ. ಇದಕ್ಕಿಂತ ಮುಂಚೆ ಮಾನವ ಹಕ್ಕುಗಳ ಘನತೆ ಗೌರವಗಳಿಂದ ತುಂಬಿರುವ ವಚನಗಳನ್ನು ವಿಶ್ವಕ್ಕೆ ಅರ್ಥಮಾಡಿಸಿಕೊಡುವಲ್ಲಿ ಇಂಡಿಯಾ ಸೋತಿರುವುದು ನಮ್ಮ ದುರಂತವಾಗಿದೆ.
ಕೇವಲ ಒಂದೆ ಒಂದು ತಲೆಮಾರಿನ ಶ್ರಮಿಕರ ವರ್ಗ ಬಸವಣ್ಣನವರ ನೇತೃತ್ವದಲ್ಲಿ ಏನೆಲ್ಲಾ ಕ್ರಾಂತಿ ಮಾಡಿತು ಎಂಬುದು ನಿಜಕ್ಕು ಅಚ್ಚರಿಯಾಗುತ್ತದೆ.
ಬಸವಣ್ಣ ಮತ್ತು ಅಲ್ಲಮಾದಿ ಶರಣರ ಚಳುವಳಿಯು ಕಾಯಕ ಸಿದ್ದಾಂತಕ್ಕೆ ಬದ್ದವಾಗಿದೆ.” ಕಾಯಕವೆ ಕೈಲಾಸವೆಂಬ” ವಾಸ್ತವಿಕ ನೆಲೆಗಟ್ಟಿನ ಮೇಲೆ ನಿಂತಿದೆ.ದುಡಿಮೆಯೆ ದೇವರು ಎಂಬ ಸತ್ವ ಶರಣರ ಸಿದ್ದಾಂತದಲ್ಲಿದೆ.
“ಕ್ರೈಸ್ತರು ಯುರೋಪಿಯನಲ್ಲಿ ಸೃಷ್ಟಿಸಿದ್ದಕ್ಕಿಂತಲು ಭಯಂಕರವಾದ ನರಕವನ್ನು ಬ್ರಾಹ್ಮಣರು ಭಾರತದಲ್ಲಿ ಸೃಷ್ಟಿಸಿದ್ದಾರೆ” ಎಂದು ಕಾರ್ಲ್ ಮಾರ್ಕ್ಸ್ ಸುಮಾರು 150ವರ್ಷಗಳ ಹಿಂದೆ ಬರೆದ “ಫಸ್ಟ್ ವಾರ್ ಆಫ್ ಇಂಡಿಯನ್ ಇಂಡಿಪೆಂಡೆನ್ಸ್” ಗ್ರಂಥದಲ್ಲಿ ಹೇಳಿದ್ದಾರೆ.ಇದು ಸತ್ಯವೂ ಕೂಡ.ಆದರೆ ನಮ್ಮ ಬಸವಾದಿ ಪ್ರಮಥರು ಈ ಅಸಮಾನತೆಯ ನರಕವನ್ನು ಅರಿವುಗಳ ಮೂಲಕ ಸಡುತ್ತಾರೆ. ಬ್ರಾಹ್ಮಣ್ಯದ ಹಾಗು ಹಿಂದುತ್ವದ ವಿರುದ್ದ ಹುಟ್ಟಿಕೊಂಡ ಕಾಯಕ ಸಿದ್ದಾಂತ ಜಾತಿವಿನಾಶಕ್ಕಾಗಿ ಅಣಿಯಾಯಿತು.
ಮನುಧರ್ಮ ಸೃಷ್ಟಿಸಿದ ವರ್ಣವ್ಯವಸ್ಥೆಯನ್ನು ಕಟ್ಟಕಡೆಯ ಅಸ್ಪೃಶ್ಯ ದಲಿತ ಜಾತಿಯ ಸಮಗಾರ ಹರಳಯ್ಯ ಇಷ್ಟ ಲಿಂಗ ದೀಕ್ಷೆಯ ನಂತರ ಲಿಂಗವಂತರಾದರು.ಅಲ್ಲದೆ ಬಿಜ್ಜಳನ ಆಸ್ಥಾನದಲ್ಲಿದ್ದ ಮದುವರಸ ತಮ್ಮ ಪೂರ್ವಿಕರು ಮಾಡಿದ ಮೋಸದ ಅರಿವಾಗಿ ಬಸವನ ಬಳಿಗೆ ಬಂದು ಲಿಂಗದೀಕ್ಷೆ ಪಡೆದು ಲಿಂಗವಂತನಾಗುತ್ತಾನೆ.ಕೊನೆಗೆ ಶರಣ ಸಂಗಮದಲ್ಲಿ ಒಂದಾಗಿ ಸಹಸಧಸ್ಯರಾಗುತ್ತಾರೆ. ಜಾತಿವಿನಾಶಕ್ಕೆ ಮುನ್ನುಡಿ ಬರೆಯಲು ಬಸವಣ್ಣ ಮತ್ತು ಶರಣರು ಸಿದ್ದರಾದರು. ಸಮಗಾರ ಹರಳಯ್ಯನ ಹಾಗು ಬ್ರಾಹ್ಮಣರ ಮದುವರಸನ ಮಕ್ಕಳಿಗೆ ಮದುವೆ ನಿಶ್ಚಯ ಮಾಡಿದರು.ನಾವು ಜಾತಿ ತೊಳೆದು ಲಿಂಗವಂತರಾಗಿದ್ದೇವೆ ಎಂಬುದು ಅವರ ವಾದವಾಗಿತ್ತು.ಅಲ್ಲದೆ ಮಾನವ ಹಕ್ಕುಗಳ ಉಳಿವಿಗೋಸ್ಕರ ಜಾತಿನಾಶಕ್ಕಾಗಿ ಈ ಮದುವೆಯನ್ನು ಏರ್ಪಡಿಸಿದಾಗ ಕೆಲವು ಬ್ರಾಹ್ಮಣಪಟ್ಟಭದ್ರ
ಹಿತಾಸಕ್ತಿಗಳು ರಾಜ್ಯಾದ್ಯಂತ ಸುಳ್ಳು ಮೋಸವನ್ನು ಸತ್ಯವೆಂದು ನಂಬಿಸಿ ನೂರಾರು ಶರಣನ್ನು ಕಗ್ಗೊಲೆ ಮಾಡುತ್ತಾರೆ ಸತ್ಯಜ್ವಾಲೆಯಂತೆ ಪ್ರಜ್ವಲಿಸುತಿದ್ದ ವಚನಗಳ ಕಟ್ಟುಗಳಿಗೆ ಬೆಂಕಿ ಹಚ್ಚಿ ಸುಡುತ್ತಾರೆ.
1939 ರಿಂದ 1945 ರವರೆಗೆ ನಡೆದ ಎರಡನೆ ಮಹಾಯುದ್ದದಲ್ಲಿ ಕೋಟ್ಯಾಂತರ ಜನರು ಸಾಯುತ್ತಾರೆ. ಆಗ 1945 ರಲ್ಲಿ ವಿಶ್ವ ಸಂಸ್ಥೆ ಮಾನವ ಹಕ್ಕುಗಳ ಉಳಿವಿಗಾಗಿ ಸ್ಥಾಪನೆಯಾಗುತ್ತದೆ.ಆದರೆ ಹನ್ನೆರಡನೆ ಶತಮಾನದಲ್ಲಿ ನೂರಾರು ಶರಣ ಹತ್ಯೆಯು ಮಾನವ ಹಕ್ಕುಗಳಿಗೆ.ಹಾಗು ಅಸಮಾನತೆಯ ವಿರುದ್ದ ನಡೆದ ಚಳುವಳಿಯಾಗಿದೆ.ಹರಳಯ್ಯ ಮದುವರಸರು ಲಿಂಗವಂತರಾಗುವ ಮೂಲಕ ಮನುಧರ್ಮದಿಂದ ಸೇರಿಕೊಂಡಿದ್ದ ವರ್ಣ. ಜಾತಿಸಂಕೋಲೆಯನ್ನು ಮೀರಿದ್ದರು ಮನುಷ್ಷತ್ವದ ಉಳಿವಿಗೆ ಮನುಷ್ಯರಾಗಿ ಚಿಂತಿಸಿದ್ದರು.ಹರಳಯ್ಯನವರ ಮಗ ಶೀಲವಂತ ಮದುವರಸರ ಮಗಳು ಲಾವಣ್ಯವತಿ ಇವರು ಲಿಂಗವಂತರಾಗಿದ್ದರಿಂದ ಇವರ ಮದುವೆ ಸಹಜ ಸ್ಥಿತಿಯಲ್ಲಿರಬೇಕಿತ್ತು.ಆದರೆ ಮನುವಾದಿಗಳ ಯಥಾಸ್ಥಿತಿವಾದಕ್ಕೆ ಇಷ್ಟವಾಗಿರಲಿಲ್ಲ.
ಹಾಗಾಗಿ ಈ ಮೂಲಕ ಧರ್ಮನಾಶಕ್ಕೆ.
ಸಂಪ್ರದಾಯಗಳ ದಿಕ್ಕರಿಸುವಿಕೆ.ಈ ದೇಶದ ನಾಶಕ್ಕೆ.ಹಾಗು ರಾಜಧರ್ಮದ ವಿರುದ್ದವಾದ ಮದುವೆಯೆಂದು ಸನಾತನವಾದಿಗಳು ಸುಳ್ಳಬ್ಬಿಸಿ ಗದ್ದಲ ಗಲಾಟೆ ಅಚ್ಚುತ್ತಾರೆ. ಆದರೆ ಶರಣರ ಅಭಿಪ್ರಾಯದಲ್ಲಿ ಧರ್ಮಬಾಹಿರ.ಮನುಷ್ಯರ.ನಾಗರೀಕ.ಲಿಂಗವಂತರ ಮದುವೆಯಾಗಿತ್ತು. ಒಂದು ರೀತಿಯಲ್ಲಿ ಈ ಶರಣ ಚಳುವಳಿ ಎಂಬುದು ಮೇಲುಕೀಳು ಎಂದು ಪ್ರತಿಪಾದಿಸುವ ಹಾಗು ಮೇಲುಕೀಳಿನ ಅಸಮಾನತೆಯ ಬೆನ್ನುಮೂಳೆ ಮುರಿದ ಲಿಂಗಾಯ್ತಧರ್ಮಕ್ಕು ನಡುವೆ ನಡೆವ ಸಮರವಾಗಿತ್ತು. ಮನುವಾದದ ಕ್ರೌರ್ಯದ ವಿರುದ್ದ ಚಳುವಳಿ ರೂಪಿಸಿದ್ದ ಶರಣರು ತಮ್ಮ ಕಾಯಕ ಬೆವರಿನ ಸಮಾನತೆಯ ಸಿದ್ದಾಂತಕ್ಕೆ ತಮ್ಮ ಪ್ರಾಣವನ್ನು ಕಳೆದುಕೊಳ್ಳಲು ಸಿದ್ದರಾದರು.
“ನಾಳೆ ಬಪ್ಪುದು ಇಂದೆ ಬರಲಿ
ಇಂದು ಬಪ್ಪುದು ಇಗೆ ಬರಲಿ”..ಎಂದು
ಕ್ರಾಂತಿಗೆ ಎದೆಕೊಟ್ಟು ನಿಂತರು.ಮಾನವೀಯತೆಯ ಕೊಂಡಿಯಂತಿರುವ ಈ ಶರಣರ ಮದುವೆಗೆ ವೈದಿಕರ ಹಾಗು ಬಿಜ್ಜಳನ ವಿರೋಧವಿದ್ದರು ಸಾವಿಗಂಜದೆ ಸಮಾನತೆಯ ಉಳಿವಿಗೆ ವಿಶ್ವದ ಮೊದಲ ಅಂತರ್ಜಾತಿ ವಿವಾಹವನ್ನು ಮಾಡಿಸಿದರು.ಆಗ ಸನಾತನವಾದಿ ವೈದಿಕಶಾಹಿ ಕ್ರೂರಿ ಬ್ರಾಹ್ಮಣರು ಶರಣರ ಕಣ್ಣುಗಳನು ಕೀಳಿಸಿ ಆನೆಕಾಲಿಗೆ ಕಟ್ಟಿ ಎಳೆಸಿ ಗಜಕಾಲುಗಳಿಂದ ಶರಣರ ತಲೆ ತುಳಿಸಿ ಕೊಲೆಗೈದರು.ಶರಣರ ತತ್ವ ಸಿದ್ದಾಂತ ಮಾನವಹಕ್ಕುಗಳ ಸಂಪತ್ತಾಗಿದ್ದ ವಚನಗಳನ್ನು ಉಳಿಸಲು ಶರಣರು ದೇಶಾಂತರ ಹೊರಟರು.ಸನಾತನಿ ವ್ಯಾಘ್ರರು ಸಿಕ್ಕಸಿಕ್ಕವರ ಶರಣರ ರುಂಡಗಳನ್ನು ಚಂಡಾಡಿ ದೇಹಗಳನ್ನು ತುಂಡು ತುಂಡಾಗಿ ಕತ್ತರಿಸಿದರು.ಒಂದು ಜಾತ್ಯಾತೀತ ಮದುವೆಗೆ ಶರಣರು ಸರ್ವಸ್ವವನ್ನೂ ಕಳೆದುಕೊಂಡರು.
ಸಮಾನತೆಗಾಗಿ ಹುತಾತ್ಮ ರಾದರು.
ಮಾನವ ಘನತೆಯ ರಕ್ಷಣೆಗಾಗಿ “ನಡೆ ಒಂದೆ ನುಡಿ ಒಂದೆ” ಸಿದ್ಧಾಂತದಿಂದ ಕೂಡಿದ ತತ್ವ ಕ್ಕಾಗಿ ಅನೇಕ ಸಾತ್ವಿಕರು ಹುತಾತ್ಮರಾಗಲು ಕಾರಣವಾದ”ಕಲ್ಯಾಣ ಕ್ರಾಂತಿ “ಎಂಬ ಘನಘೋರ ಘಟನೆ ಮಾನವ ಚರಿತ್ರೆಯಲ್ಲಿ ಮತ್ತೊಂದಿಲ್ಲ ಎಂದು ಶರಣ ಸಾಹಿತ್ಯದ ಸಂಶೋಧಕ ರಂಜಾನ್ ದರ್ಗರವರು ಹೇಳುತ್ತಾರೆ.ಅವರು ಮುಂದುವರೆದು “ನಿಜವಾದ ಅರ್ಥದಲ್ಲಿ ಆ ಘಟನೆ ಕಲ್ಯಾಣ ಕ್ರಾಂತಿ ಅಲ್ಲ.ಕಲ್ಯಾಣದಲ್ಲಿ ಬಸವಾದಿ ಶರಣರಿಂದ ನಡೆಯಬೇಕಿದ್ದ ಕ್ರಾಂತಿಯನ್ನು ತಡೆದಂಥ ಮನುವಾದಿಗಳ ಕ್ಷಿಪ್ರ ಕ್ರಾಂತಿ ಮಾನವೀಯತೆಯ ಮೇಲೆ ನಡೆದ ಅತ್ಯಾಚಾರವೆನ್ನುತ್ತಾರೆ.
ಬಾಬಸಾಹೇಬ ಅಂಬೇಡ್ಕರ್ ರವರು ಭಾರತದ ಚರಿತ್ರೆಯನ್ನು ವಿಶ್ಲೇಷಿಸುವಾಗ ಬುದ್ದನ ಕ್ರಾಂತಿಗೆ ಬ್ರಾಹ್ಮಣರ ಪ್ರತಿಕ್ರಾಂತಿಯಾಯಿತು ಇದರಿಂದ ಮನುವ್ಯವಸ್ಥೆಯ ವಿಸ್ತಾರವಾಗುತ್ತದೆ ತನ್ನ ಅಸಮಾನತೆಯ ಕ್ರೌರ್ಯದ ನಾಲಿಗೆಯನ್ನು ಚಾಚುತ್ತದೆ ಎಂದು ಹೇಳುತ್ತಾರೆ. ಕರ್ನಾಟಕದಲ್ಲಿ ಬಸವಶರಣರ ಕಲ್ಯಾಣ ಕ್ರಾಂತಿಯ ವಿರುದ್ದ ಕ್ಷಿಪ್ರ ಕ್ರಾಂತಿ ಮಾಡಿದ್ದು ಚರಿತ್ರೆಯ ದುರಂತ.
ಅದೇನೆ ಇರಲಿ ಆದರೆ ಸನಾತನಿಗಳ ಅನಿಷ್ಟ ಸಂಪ್ರದಾಯಗಳ ವಿರುದ್ದ ಈ ಕಲ್ಯಾಣ ಶರಣರ ಸಮಾನತೆ ಹಾಗು ಜಾತಿವಿನಾಶದ ಮದುವೆಯನ್ನು ಇತಿಹಾಸ ಮರೆಯಬಾರದು.ಬಸವಾದಿ ಶರಣರು ಮನುವ್ಯವಸ್ಥೆಯ ಮರಕ್ಕೆ ಕೊಡಲಿ ಏಟಾಕಿದ್ದು ನಿಜ. ಸತ್ಯಕ್ಕೆ.ಸಮಾನತೆಗೆ.ಮಾನವ ಹಕ್ಕುಗಳ ಘನತೆಗೆ.ಜಾತಿವಿನಾಶಕ್ಕೆ.ವರ್ಣನಿರ್ನಾಮಕ್ಕೆ.ಮೇಲುಕೀಳು ಸ್ತ್ರೀ ಪುರುಷ.ಬಡವ ಬಲ್ಲಿದ ಎಂಬ ಭೇಧಗಳ ವಿರುದ್ದ ಬಸವಣ್ಣನ ಕ್ರಾಂತಿಯಾಗಿತ್ತು. ಮನುಷ್ಯತ್ವದ ಉಳಿವಿಗಾಗಿ” ಕಾಯಕ ಸಿದ್ದಾಂತಕ್ಕಾಗಿ ಕಲ್ಯಾಣದ ಕ್ರಾಂತಿಯಾಯಿತು.ಅಲ್ಲಿ ನೊಂದವರು ನೋವುಗಳನ್ನು ಹಂಚಿಕೊಳ್ಳುವ ವಿಶ್ವದ ಮೊದಲ ಪಾರ್ಲಿಮೆಂಟ್ ಅನುಭವ ಮಂಟಪವಾಗಿತ್ತು.
ಶರಣರು ಹತ್ಯೆಯಾಗಿ ಸತ್ತರು.ಅವರ ವೈಚಾರಿಕ. ವೈಜ್ಞಾನಿಕ ಪ್ರಗತಿಪರ ನೆಲೆಗಟ್ಟಿನಲ್ಲಿ ವಚನಗಳ ಮೂಲಕ ಹಾಗು ತಾವು ಮಾಡಿದ ಜಾತಿವಿನಾಶದ ತ್ಯಾಗಕ್ಕಾಗಿ ಜೀವದ ಅರ್ಪಣೆ ಶೋಷಿತರ ಎದೆಯೊಳಗೆ ಇಂದಿಗು ಬೆಳಕಾಗಿ ನಂದಾದೀಪವಾಗಿ ಪ್ರಜ್ವಲಿಸುತ್ತಿದೆ.
ಇತ್ತೀಚೆಗೆ ಲಿಂಗಾಯ್ತರು ಬಸವಣ್ಣನವರನ್ನು ಜಾತಿಯ ನಾಯಕನಂತೆ ಬಿಂಬಿಸುತಿದ್ದಾರೆ ಕೆಲವು ಬಸವಭಕ್ತರು ಆರ್.ಎಸ್.ಎಸ್.ಚೆಡ್ಡಿಯೊಳಗೆ ಬಸವಣ್ಣನ ಸಿದ್ದಾಂತಗಳನ್ನ ಅದುಮಿಟ್ಟು ಹಿಂದು ದೇವರುಗಳನ್ನು ವೈಭವಿಕರೀಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.ಬಸವಣ್ಣನ ಹೆಸರಿನಲ್ಲಿ ಸಾವಿರಾರು ಮಠಮಾನ್ಯಗಳು ನಿರ್ಮಾಣವಾದರು ಇವತ್ತು ವ್ಯವಹಾರದ ಕೇಂದ್ರಗಳಾಗಿವೆ.ಪ್ರತ್ಯೇಕ ಲಿಂಗಾಯ್ತಧರ್ಮಕ್ಕೆ ಕೆಲವು ಮನುಚೇಲಗಳು ವಿರೋಧ ಮಾಡುತ್ತಿವೆ.ಬಸವಣ್ಣನ ಹೆಸರಿಗೆ ಕೆಸರೆರೆಚುವ ಸಂಘಪರಿವಾರದವರೊಂದಿಗೆ ಸೇರಿ ಹಾದಿತಪ್ಪುತಿದ್ದಾರೆ.
ಈ ಬಸವಾದಿ ಶರಣರ ಹತ್ಯೆಯನ್ನು ಕುರಿತು ಆಳವಾದ ಅಧ್ಯಯನ ಮಾಡಿ “ಕೆಟ್ಟಿತ್ತೊ ಕಲ್ಯಾಣ” ಎಂಬ ಸಂಶೋಧನಾ ಕೃತಿ ಬರೆದ ಪ್ರಗತಿಪರ ಸಂಶೋಧಕ ಎಂ.ಎಂ.ಕಲ್ಬುರ್ಗಿ ಹಿಂದುತ್ವದ ಬುಲೇಟಿಗೆ ಬಲಿಯಾದರು.ಬಸಾವದಿ ಶರಣ ಸಿದ್ದಾಂತವನ್ನು ಎದೆಗುಂದದೆ ದೈರ್ಯವಾಗಿ ಹೇಳುತಿದ್ದ ಗೌರಿ ಲಂಕೇಶ್ ಮನುಸೂಳೆಮಕ್ಕಳ ಬಂದೂಕಿಗೆ ಎದೆಕೊಟ್ಟು ಹತ್ಯಯಾದಳು.ಹೀಗೆ ಶರಣರ ಕ್ರಾಂತಿಕಾರಿ ವಿಚಾರಗಳನ್ನು ಹೇಳುವರನ್ನು ಕೊಲ್ಲುವ. ಶರಣರ ಬಗ್ಗೆ ಬರೆಯುವರ ಕೈಗಳನ್ನು ಕತ್ತರಿಸುವ ಸನಾತನವಾದಿಗಳ ದಿನೆದನೆ ಹಣಬೆಗಳಂತೆ ಬೆಳೆಯುತ್ತಿರುವುದು ಬಸವನ ಅನುಯಾಯಿಗಳು ಗಂಭೀರವಾಗಿ ಚಿಂತನೆ ಮಾಡಬೇಕಿದೆ.
ಬಸವಾದಿ ಶರಣರ ಸಿದ್ದಾಂತದಲ್ಲಿ ಈ ದೇಶದ ಸಂವಿಧಾನ ಅಡಗಿದೆ ಎಂಬುದನ್ನು ಪ್ರತಿಯೊಬ್ಬ ಇಂಡಿಯನ್ಸ್ ಅರ್ಥ ಮಾಡಿಕೊಂಡು ಮತ್ತೊಮ್ಮೆ ಕಲ್ಯಾಣವೆಂಬ ಚಳುವಳಿಯನ್ನು ಹೊಸ ರೀತಿಯಲ್ಲಿ ಕಟ್ಟ ಬೇಕಿದೆ. ಮಾನವನ ಘನತೆಯ ಚಳುವಳಿಗೆ ಎಲ್ಲರು ಸ್ವಾಭಿಮಾನದಂದ ಬರಬೇಕಾದ ದರ್ದು ಇಂದು ತುರ್ತಾಗಿದೆ.ಮಾನವೀಯತೆಯ ಕೊಂಡಿಯಂತಿರುವ ಈ ಶರಣರ ಮದುವೆಗೆ ವೈದಿಕರ ಹಾಗು ಬಿಜ್ಜಳನ ವಿರೋಧವಿದ್ದರು ಸಾವಿಗಂಜದೆ ಸಮಾನತೆಯ ಉಳಿವಿಗೆ ವಿಶ್ವದ ಮೂದಲ ಅಂತರ್ಜಾತಿ ವಿವಾಹವನ್ನು ಮಾಡಿಸಿದರು.
ಆಗ ಸನಾತನವಾದಿ ವೈದಿಕಶಾಹಿ ಕ್ರೂರಿ ಬ್ರಾಹ್ಮಣರು ಶರಣರ ಕಣ್ಣುಗಳನು ಕೀಳಿಸಿ ಆನೆಕಾಲಿಗೆ ಕಟ್ಟಿ ಎಳೆಸಿ ಗಜಕಾಲುಗಳಿಂದ ಶರಣರ ತಲೆ ತುಳಿಸಿ ಕೊಲೆಗೈದರು.ಶರಣರ ತತ್ವ ಸಿದ್ದಾಂತ ಮಾನವಹಕ್ಕುಗಳ ಸಂಪತ್ತಾಗಿದ್ದ ವಚನಗಳನ್ನು ಉಳಿಸಲು ಶರಣರು ದೇಶಾಂತರ ಹೊರಟರು. ಹಿಂದುತ್ವದವ್ಯಾಘ್ರರು ಸಿಕ್ಕಸಿಕ್ಕವರ ಶರಣರ ರುಂಡಗಳನ್ನು ಚಂಡಾಡಿ ದೇಹಗಳನ್ನು ತುಂಡು ತುಂಡಾಗಿ ಕತ್ತರಿಸಿದರು.ಒಂದು ಜಾತ್ಯಾತೀತ ಮದುವೆಗೆ ಶರಣರು ಸರ್ವಸ್ವವನ್ನೂ ಕಳೆದುಕೊಂಡರು.ಸಮಾನತೆಗಾಗಿ
ಹುತಾತ್ಮ ರಾದರು.
ಮಾನವ ಘನತೆಯ ರಕ್ಷಣೆಗಾಗಿ “ನಡೆ ಒಂದೆ ನುಡಿ ಒಂದೆ” ಸಿದ್ಧಾಂತದಿಂದ ಕೂಡಿದ
ತತ್ವಕ್ಕಾಗಿ ಅನೇಕ ಸಾತ್ವಿಕರು ಹುತಾತ್ಮರಾಗಲು ಕಾರಣವಾದ”ಕಲ್ಯಾಣ ಕ್ರಾಂತಿ ”
ಎಂಬ ಘನಘೋರ ಘಟನೆ ಮಾನವ ಚರಿತ್ರೆಯಲ್ಲಿ ಮತ್ತೊಂದಿಲ್ಲ ಎಂದು ಶರಣ ಸಾಹಿತ್ಯದ ಸಂಶೋಧಕ ರಂಜಾನ್ ದರ್ಗರವರು ಹೇಳುತ್ತಾರೆ. ಅವರು ಮುಂದುವರೆದು “ನಿಜವಾದ ಅರ್ಥದಲ್ಲಿ ಆ ಘಟನೆ ಕಲ್ಯಾಣ ಕ್ರಾಂತಿ ಅಲ್ಲ.ಕಲ್ಯಾಣದಲ್ಲಿ ಬಸವಾದಿ ಶರಣರಿಂದ ನಡೆಯಬೇಕಿದ್ದ ಕ್ರಾಂತಿಯನ್ನು ತಡೆದಂಥ ಮನುವಾದಿಗಳ ಕ್ಷಿಪ್ರ ಕ್ರಾಂತಿ ಮಾನವೀಯತೆಯ ಮೇಲೆ ನಡೆದ ಅತ್ಯಾಚಾರವೆನ್ನುತ್ತಾರೆ.
ಬಾಬಸಾಹೇಬ ಅಂಬೇಡ್ಕರ್ ರವರು ಭಾರತದ ಚರಿತ್ರೆಯನ್ನು ವಿಶ್ಲೇಷಿಸುವಾಗ ಬುದ್ದನ ಕ್ರಾಂತಿಗೆ ಬ್ರಾಹ್ಮಣರ ಪ್ರತಿಕ್ರಾಂತಿಯಾಯಿತು ಇದರಿಂದ ಮನುವ್ಯವಸ್ಥೆಯ ವಿಸ್ತಾರವಾಗುತ್ತದೆ ತನ್ನ ಅಸಮಾನತೆಯ ಕ್ರೌರ್ಯದ ನಾಲಿಗೆಯನ್ನು ಚಾಚುತ್ತದೆ ಎಂದು ಹೇಳುತ್ತಾರೆ. ಕರ್ನಾಟಕದಲ್ಲಿ ಬಸವಾದಿ ಶರಣರ ಕಲ್ಯಾಣ ಕ್ರಾಂತಿಯ ವಿರುದ್ದ ಕ್ಷಿಪ್ರ ಕ್ರಾಂತಿ ಮಾಡಿದ್ದು ಚರಿತ್ರೆಯ ದುರಂತ.
ಅದೇನೆ ಇರಲಿ ಆದರೆ ಸನಾತನಿಗಳ ಅನಿಷ್ಟ ಸಂಪ್ರದಾಯಗಳ ವಿರುದ್ದ ಈ ಕಲ್ಯಾಣ ಶರಣರ ಸಮಾನತೆ ಹಾಗು ಜಾತಿವಿನಾಶದ ಮದುವೆಯನ್ನು ಇತಿಹಾಸ ಮರೆಯಬಾರದು.ಬಸವಾದಿ ಶರಣರು ಮನುವ್ಯವಸ್ಥೆಯ ಮರಕ್ಕೆ ಕೊಡಲಿ ಏಟಾಕಿದ್ದು ನಿಜ. ಸತ್ಯಕ್ಕೆ.ಸಮಾನತೆಗೆ.ಮಾನವ ಹಕ್ಕುಗಳ ಘನತೆಗೆ.ಜಾತಿವಿನಾಶಕ್ಕೆ.ವರ್ಣನಿರ್ನಾಮಕ್ಕೆ.ಮೇಲುಕೀಳು ಸ್ತ್ರೀ ಪುರುಷ.ಬಡವ ಬಲ್ಲಿದ ಎಂಬ ಭೇದಗಳ ವಿರುದ್ದ ಬಸವಣ್ಣನ ಕ್ರಾಂತಿಯಾಗಿತ್ತು.
ಮನುಷ್ಯತ್ವದ ಉಳಿವಿಗಾಗಿ” ಕಾಯಕ ಸಿದ್ದಾಂತಕ್ಕಾಗಿ ಕಲ್ಯಾಣದ ಕ್ರಾಂತಿಯಾಯಿತು.ಅಲ್ಲಿ ನೊಂದವರು ನೋವುಗಳನ್ನು ಹಂಚಿಕೊಳ್ಳುವ ವಿಶ್ವದ ಮೂದಲ ಪಾರ್ಲಿಮೆಂಟ್ ಎಂಬುದು ಅನುಭವ ಮಂಟಪವಾಗಿತ್ತು.
ಶರಣರು ಹತ್ಯೆಯಾಗಿ ಸತ್ತರು.ಅವರ ವೈಚಾರಿಕ. ವೈಜ್ಞಾನಿಕ ಪ್ರಗತಿಪರ ನೆಲೆಗಟ್ಟಿನಲ್ಲಿ ವಚನಗಳ ಮೂಲಕ ಹಾಗು ತಾವು ಮಾಡಿದ ಜಾತಿವಿನಾಶದ ತ್ಯಾಗಕ್ಕಾಗಿ ಜೀವದ ಅರ್ಪಣೆ ಶೋಷಿತರ ಎದೆಯೊಳಗೆ ಇಂದಿಗು ಬೆಳಕಾಗಿ ನಂದಾದೀಪವಾಗಿ ಪ್ರಜ್ವಲಿಸುತ್ತಿದೆ.
ಇತ್ತೀಚೆಗೆ ಲಿಂಗಾಯ್ತರು ಬಸವಣ್ಣನವರನ್ನು ಜಾತಿಯ ನಾಯಕನಂತೆ ಬಿಂಬಿಸುತಿದ್ದಾರೆ ಕೆಲವು ಬಸವಭಕ್ತರು
ಆರ್.ಎಸ್.ಎಸ್.ಚೆಡ್ಡಿಯೊಳಗೆ ಬಸವಣ್ಣನ ಸಿದ್ದಾಂತಗಳನ್ನ ಅದುಮಿಟ್ಟು
ಹಿಂದು ದೇವರುಗಳನ್ನು ವೈಭವಿಕರೀಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಬಸವಣ್ಣನ ಹೆಸರಿನಲ್ಲಿ ಸಾವಿರಾರು ಮಠಮಾನ್ಯಗಳು ನಿರ್ಮಾಣವಾದರು ಇವತ್ತು ವ್ಯವಹಾರದ ಕೇಂದ್ರಗಳಾಗಿವೆ.ಪ್ರತ್ಯೇಕ ಲಿಂಗಾಯ್ತಧರ್ಮಕ್ಕೆ ಕೆಲವು ಮನುಚೇಲಗಳು ವಿರೋಧ ಮಾಡುತ್ತಿವೆ.ಬಸವಣ್ಣನ ಹೆಸರಿಗೆ ಮಸಿಬಳಿಯುವ ಸಂಘಪರಿವಾರದವರೊಂದಿಗೆ ಸೇರಿ ಹಾದಿತಪ್ಪುತಿದ್ದಾರೆ.
ಈ ಬಸವಾದಿ ಶರಣರ ಹತ್ಯಯನ್ನು ಕುರಿತು ಆಳವಾದ ಅಧ್ಯಯನ ಮಾಡಿ “ಕೆಟ್ಟಿತ್ತೊ ಕಲ್ಯಾಣ” ಎಂಬ ಸಂಶೋಧನಾ ಕೃತಿ ಬರೆದ ಪ್ರಗತಿಪರ ಸಂಶೋಧಕ ಎಂ.ಎಂ.ಕಲ್ಬುರ್ಗಿ ಹಿಂದುತ್ವದ ಬುಲೇಟಿಗೆ ಬಲಿಯಾದರು.ಬಸಾವದಿ ಶರಣ ಸಿದ್ದಾಂತವನ್ನು ಎದೆಗುಂದದೆ ದೈರ್ಯವಾಗಿ ಹೇಳುತಿದ್ದ ಗೌರಿ ಲಂಕೇಶ್ ಮನುಸೂಳೆಮಕ್ಕಳ ಬಂದೂಕಿಗೆ ಎದೆಕೊಟ್ಟು ಹತ್ಯೆಯಾದಳು.ಹೀಗೆ ಶರಣರ ಕ್ರಾಂತಿಕಾರಿ ವಿಚಾರಗಳನ್ನು ಹೇಳುವರನ್ನು ಕೊಲ್ಲುವ. ಶರಣರ ಬಗ್ಗೆ ಬರೆಯುವರ ಕೈಗಳನ್ನು ಕತ್ತರಿಸುವ ಸನಾತನವಾದಿಗಳು ದಿನೆದನೆ ಹಣಬೆಗಳಂತೆ ಬೆಳೆಯುತ್ತಿರುವುದು ಬಸವನ ಅನುಯಾಯಿಗಳು ಗಂಭೀರವಾಗಿ ಚಿಂತನೆ ಮಾಡಬೇಕಿದೆ.
ಬಸವಾದಿ ಶರಣರ ಸಿದ್ದಾಂತದಲ್ಲಿ ಈ ದೇಶದ ಸಂವಿಧಾನ ಅಡಗಿದೆ ಎಂಬುದನ್ನು ಪ್ರತಿಯೊಬ್ಬ ಇಂಡಿಯನ್ಸ್ ಅರ್ಥ ಮಾಡಿಕೊಂಡು “ಮತ್ತೊಮ್ಮೆ ಕಲ್ಯಾಣ”ವೆಂಬ ಚಳುವಳಿಯನ್ನು ಹೊಸ ರೀತಿಯಲ್ಲಿ ಕಟ್ಟ ಬೇಕಿದೆ. ಮಾನವನ ಘನತೆಯ ಚಳುವಳಿಗೆ ಎಲ್ಲರು ಸ್ವಾಭಿಮಾನದಂದ ಬರಬೇಕಾದ ದರ್ದು ಇಂದು ತುರ್ತಾಗಿದೆ.
–ಹುಚ್ಚಂಗಿ ಪ್ರಸಾದ್ ಸಂತೇಬೆನ್ನೂರು
ಈ ಲೇಖನ ಇಂಗ್ಲಿಷ್ ಭಾಷೆಗೆ ಅನುವಾದಗೊಂಡಿದ್ದು, ಅದರ ಲಿಂಕ್ ಇಲ್ಲಿದೆ. ಕ್ಲಿಕ್ ಮಾಡಿ ಓದಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಸಮರ್ಥ್ ಶಾಮನೂರು ಪ್ರಯಾಸದ ಗೆಲುವು ಮತ್ತು ಮುಂದಿನ ಸವಾಲುಗಳು
~ಗೋವರ್ಧನ ನವಿಲೇಹಾಳು
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು ಪ್ರಯಾಸದ ಗೆಲುವು ಸಾಧಿಸಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರ ನಿಧನದ ನಂತರ ಖಾಲಿಯಾದ ಈ ಕ್ಷೇತ್ರವು ಕುಟುಂಬದ ರಾಜಕೀಯ ಉತ್ತರಾಧಿಕಾರ, ಅಲ್ಪಸಂಖ್ಯಾತರ ಅಸಮಾಧಾನ ಮತ್ತು ಪಕ್ಷಾಂತರದ ಆರೋಪಗಳ ನಡುವೆ ತೀವ್ರ ಸ್ಪರ್ಧೆಯನ್ನು ಕಂಡಿತು. ಸುಮಾರು 5,708 ಮತಗಳ ಅಂತರದಿಂದ ಗೆದ್ದ ಸಮರ್ಥ್ ಅವರು ಶಾಮನೂರು ಕುಟುಂಬದ ಮೂರನೇ ಪೀಳಿಗೆಯ ಪ್ರತಿನಿಧಿಯಾಗಿ ವಿಧಾನಸಭೆಗೆ ಪ್ರವೇಶಿಸಿದ್ದಾರೆ. ಈ ಗೆಲುವು ಕಾಂಗ್ರೆಸ್ಗೆ ಸಂತೋಷದ ಸುದ್ದಿಯಾದರೂ, ಎಸ್ಡಿಪಿಐ ಪಡೆದ ಗಣನೀಯ 18,975 ಮತಗಳು ಮತ್ತು ಬಿಜೆಪಿಯ ತೀವ್ರ ಪೈಪೋಟಿ ರಾಜಕೀಯ ಸಮೀಕರಣಗಳಲ್ಲಿ ಹೊಸ ತಿರುವುಗಳನ್ನು ಸೂಚಿಸುತ್ತವೆ.
ಈ ಉಪಚುನಾವಣೆಯು ಕೇವಲ ಕ್ಷೇತ್ರೀಯ ಘಟನೆಯಾಗಿರದೆ, ಕರ್ನಾಟಕ ರಾಜಕೀಯದಲ್ಲಿ ಅಲ್ಪಸಂಖ್ಯಾತರ ಮತಬ್ಯಾಂಕ್, ಕುಟುಂಬ ರಾಜಕೀಯ ಮತ್ತು ಪ್ರತಿಪಕ್ಷದ ತಂತ್ರಗಳ ಬಗ್ಗೆ ದೊಡ್ಡ ಚರ್ಚೆಗೆ ಕಾರಣವಾಯಿತು. ಶಾಮನೂರು ಕುಟುಂಬದ ದೀರ್ಘಕಾಲದ ಸೇವೆಯನ್ನು ಜನರು ಮೆಚ್ಚಿದ್ದರೂ, ಕಾಂಗ್ರೆಸ್ನಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನಿರಾಕರಣೆಯಿಂದಾಗಿ ಉಂಟಾದ ಅಸಮಾಧಾನವು ಎಸ್ಡಿಪಿಐಗೆ ಅವಕಾಶ ಮಾಡಿಕೊಟ್ಟಿತು. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಅವರು ತೀವ್ರ ಪ್ರಚಾರ ನಡೆಸಿದ್ದರೂ, ಕಾಂಗ್ರೆಸ್ನ ಅಭಿವೃದ್ಧಿ ಕಾರ್ಯಗಳು ಮತ್ತು ಐದು ಗ್ಯಾರಂಟಿಗಳ ಪ್ರಭಾವವು ಗೆಲುವಿಗೆ ನೆರವಾಯಿತು. ಆದರೆ ಈ ಗೆಲುವು ಸುಲಭವಾಗಿರಲಿಲ್ಲ; ಅದು ಎಲ್ಲಾ ಪಕ್ಷಗಳಿಗೂ ಪಾಠವನ್ನು ಕಲಿಸುತ್ತದೆ.
ಸಮರ್ಥ್ ಶಾಮನೂರು ಅವರ ಮುಂದಿನ ನಡೆ
ಕಿರಿಯ ವಯಸ್ಸಿನಲ್ಲಿ (ದೇಶದ ಎರಡನೇ ಅತಿ ಕಿರಿಯ ಶಾಸಕರಾಗಿ) ಗೆದ್ದ ಸಮರ್ಥ್ ಅವರು ತಮ್ಮ ಅಜ್ಜರ ರಾಜಕೀಯ ಪರಂಪರೆಯನ್ನು ಮುಂದುವರಿಸುವ ಜವಾಬ್ದಾರಿಯಲ್ಲಿದ್ದಾರೆ. ಮುಂದಿನ ನಡೆಯು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕೇಂದ್ರೀಕರಣಗೊಳ್ಳಬೇಕು. ದಾವಣಗೆರೆಯಂತಹ ನಗರ-ಗ್ರಾಮೀಣ ಮಿಶ್ರ ಕ್ಷೇತ್ರದಲ್ಲಿ ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳನ್ನು ಬಲಪಡಿಸುವುದು ಮುಖ್ಯ. ಶಾಮನೂರು ಕುಟುಂಬದ ಹೆಸರು ಅಭಿವೃದ್ಧಿಗೆ ಸಮಾನವಾಗಿದೆ; ಇದನ್ನು ಮುಂದುವರಿಸಿ, ಎಲ್ಲಾ ಸಮುದಾಯಗಳ ನಡುವೆ ಸೇತುವೆಯಾಗಬೇಕು.
ವಿಶೇಷವಾಗಿ ಅಲ್ಪಸಂಖ್ಯಾತರ ಅಸಮಾಧಾನವನ್ನು ನಿವಾರಿಸುವುದು ಅಗತ್ಯ. ಟಿಕೆಟ್ ವಿವಾದದ ನಂತರ ಉಂಟಾದ ಬಿರುಕುಗಳನ್ನು ತುಂಬುವ ಮೂಲಕ ಏಕತೆಯ ಸಂದೇಶ ನೀಡಬೇಕು. ಯುವಕರಾಗಿರುವುದರಿಂದ ಆಧುನಿಕ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ಪಾರದರ್ಶಕ ಆಡಳಿತದ ಮೂಲಕ ಹೊಸ ಚಿಂತನೆ ತರಬಹುದು. ರಾಜಕೀಯದಲ್ಲಿ ವೈಯಕ್ತಿಕ ದಾಳಿ ಬದಲು ನಿರ್ಮಾಣಾತ್ಮಕ ವಿಮರ್ಶೆಯನ್ನು ಪ್ರೋತ್ಸಾಹಿಸುವುದು ಅವರ ಯಶಸ್ಸಿಗೆ ಕಾರಣವಾಗುತ್ತದೆ. ಜನಸಂಪರ್ಕವನ್ನು ನಿರಂತರವಾಗಿ ಉಳಿಸಿಕೊಂಡು, ಕ್ಷೇತ್ರದ ಸಮಸ್ಯೆಗಳನ್ನು ವಿಧಾನಸಭೆಯಲ್ಲಿ ಪ್ರಸ್ತುತಪಡಿಸುವುದು ಅವರ ಮುಂದಿನ ಗುರಿಯಾಗಬೇಕು. ಗೆಲುವು ಕುಟುಂಬದ ಆಸ್ತಿಯಲ್ಲ, ಜನರ ವಿಶ್ವಾಸದ ಫಲ; ಇದನ್ನು ಕಾಯ್ದುಕೊಳ್ಳುವುದು ದೊಡ್ಡ ಸವಾಲು.
ಬಿಜೆಪಿಯ ಮುಂದಿನ ಸವಾಲುಗಳು
ಬಿಜೆಪಿ ಈ ಚುನಾವಣೆಯಲ್ಲಿ ತೀವ್ರ ಪೈಪೋಟಿ ನೀಡಿದ್ದರೂ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್ನ ಒಳಜಗಳಗಳನ್ನು ಬಳಸಿಕೊಳ್ಳುವ ಅವಕಾಶವನ್ನು ಪೂರ್ಣವಾಗಿ ಬಳಸಿಕೊಳ್ಳಲು ವಿಫಲವಾಯಿತು ಎಂಬ ಮಾತುಗಳು ಕೇಳಿಬರುತ್ತಿವೆ. ಮುಂದೆ ಬಿಜೆಪಿಗೆ ಸವಾಲುಗಳು ಹಲವು: ಮೊದಲನೆಯದು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ನಡುವೆ ವಿಶ್ವಾಸಾರ್ಹತೆಯನ್ನು ಕಟ್ಟುವುದು. ಧ್ರುವೀಕರಣದ ತಂತ್ರಗಳು ಸೀಮಿತ ಯಶಸ್ಸು ನೀಡುತ್ತವೆ ಎಂಬುದು ಈ ಫಲಿತಾಂಶ ಸೂಚಿಸುತ್ತದೆ.
ಕ್ಷೇತ್ರದಲ್ಲಿ ಸ್ಥಳೀಯ ನಾಯಕರನ್ನು ಬಲಪಡಿಸುವುದು, ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಜನಸಂಪರ್ಕ ಹೆಚ್ಚಿಸುವುದು ಅಗತ್ಯ. ರಾಜ್ಯ ಮಟ್ಟದಲ್ಲಿ ಪ್ರತಿಪಕ್ಷದ ಪಾತ್ರವನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಾ, ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುವುದು ಮುಂದಿನ ಚುನಾವಣೆಗಳಲ್ಲಿ ನೆರವಾಗುತ್ತದೆ. ಈ ಗೆಲುವು ಕಾಂಗ್ರೆಸ್ಗೆ ಎಚ್ಚರಿಕೆಯಾಗಿದ್ದರೆ, ಬಿಜೆಪಿಗೆ ಕ್ರಿಯಾಶೀಲತೆಯ ಅಗತ್ಯವನ್ನು ತೋರಿಸುತ್ತದೆ.
ಎಸ್ಡಿಪಿಐ ಮುಂದಿನ ಸವಾಲು
ಎಸ್ಡಿಪಿಐ ಈ ಚುನಾವಣೆಯಲ್ಲಿ ಗಮನಾರ್ಹ ಮತಗಳನ್ನು ಪಡೆದು ತನ್ನ ಉಪಸ್ಥಿತಿಯನ್ನು ಸಾಬೀತುಪಡಿಸಿದೆ. ಅಲ್ಪಸಂಖ್ಯಾತರ, ವಿಶೇಷವಾಗಿ ಮುಸ್ಲಿಂ ಸಮುದಾಯದ ಅಸಮಾಧಾನವನ್ನು ಬಳಸಿಕೊಂಡು ತನ್ನ ಮತಬ್ಯಾಂಕ್ನ್ನು ವಿಸ್ತರಿಸಿದೆ. ಆದರೆ ಇದು ಸವಾಲುಗಳನ್ನೂ ತಂದಿದೆ. ಮುಂದೆ ಎಸ್ಡಿಪಿಐಗೆ ಬ್ರಾಡ್ ಆಪೀಲ್ ಅಗತ್ಯ – ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ, ಆರ್ಥಿಕ-ಸಾಮಾಜಿಕ ನ್ಯಾಯ, ಶಿಕ್ಷಣ ಮತ್ತು ಉದ್ಯೋಗದಂತಹ ವಿಷಯಗಳಲ್ಲಿ ಎಲ್ಲರಿಗೂ ಸ್ಪಂದಿಸುವ ಧೋರಣೆ ಬೆಳೆಸಬೇಕು.
ಚುನಾವಣಾ ಅನಿಯಮಗಳ ಆರೋಪಗಳು ಮತ್ತು ಮುಖ್ಯ ಪಕ್ಷಗಳ ನಡುವಿನ ತಂತ್ರಗಳ ನಡುವೆ ಸಿಲುಕದೆ, ಸ್ವತಂತ್ರ ರಾಜಕೀಯವನ್ನು ಬಲಪಡಿಸುವುದು ಮುಖ್ಯ. ದೀರ್ಘಕಾಲದ ಯಶಸ್ಸಿಗೆ ಸಮುದಾಯಗಳ ನಡುವಿನ ಸೇತುವೆಯಾಗುವುದು ಅಗತ್ಯ; ಇಲ್ಲದಿದ್ದರೆ ಮತ ವಿಭಜನೆಯ ಆರೋಪಗಳು ಮುಂದುವರಿಯುತ್ತವೆ.
ಈ ಫಲಿತಾಂಶವು ಭಾರತೀಯ ಜನತಂತ್ರದ ಜೀವಂತತೆಯನ್ನು ತೋರಿಸುತ್ತದೆ. ಗೆಲುವು ಸಂಭ್ರಮಿಸುವುದರ ಜೊತೆಗೆ, ಸೋಲಿನಿಂದ ಪಾಠ ಕಲಿಯುವುದು ಎಲ್ಲಾ ಪಕ್ಷಗಳ ಕರ್ತವ್ಯ. ಸಮರ್ಥ್ ಶಾಮನೂರು ಅವರು ತಮ್ಮ ಯುವಕರ ಉತ್ಸಾಹ ಮತ್ತು ಕುಟುಂಬ ಪರಂಪರೆಯನ್ನು ಸಂಯೋಜಿಸಿ, ಎಲ್ಲಾ ವರ್ಗಗಳ ಜನರ ಸೇವೆಗೆ ಮುಂದಾಗಬೇಕು. ಕಾಂಗ್ರೆಸ್ ಅಂತರ್ಗತ ಏಕತೆಯನ್ನು ಬಲಪಡಿಸಬೇಕು. ಬಿಜೆಪಿ ಮತ್ತು ಎಸ್ಡಿಪಿಐ ತಮ್ಮ ತಂತ್ರಗಳನ್ನು ಪುನರ್ ಪರಿಶೀಲಿಸಿ, ಜನಕೇಂದ್ರಿತ ರಾಜಕೀಯಕ್ಕೆ ಮರಳಬೇಕು.
ದಾವಣಗೆರೆ ದಕ್ಷಿಣದ ಜನರು ಅಭಿವೃದ್ಧಿ ಮತ್ತು ಸಾಮರಸ್ಯವನ್ನು ಬಯಸುತ್ತಾರೆ. ಹೊಸ ಶಾಸಕರು ಈ ನಿರೀಕ್ಷೆಯನ್ನು ಪೂರೈಸುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸುತ್ತೇವೆ. ರಾಜಕೀಯವು ಸೇವೆಯಾಗಬೇಕೇ ವಿನಾ ಕುಟುಂಬ ಅಥವಾ ಸಮುದಾಯ ದ್ವೇಷದ ಆಟವಾಗಬಾರದು. ಈ ಉಪಚುನಾವಣೆಯ ಪಾಠಗಳು ರಾಜ್ಯದ ಭವಿಷ್ಯದ ಚುನಾವಣೆಗಳಿಗೆ ದಾರಿ ತೋರಿಸುತ್ತವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ
~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಅಂಬೇಡ್ಕರ್ ಅವರು ಭಾರತದ ಚರಿತ್ರೆಗಳ ರಚನೆಗೆ ಪ್ರಾಯೋಗಿಕ ಉಪಕರಣಗಳನ್ನು (ಎಂಪರಿಕಲ್ ಟೂಲ್ಸ್) ಬಳಸಿರುತ್ತಾರೆ. ಆದರೆ ಈ ಎಲ್ಲ ಉಪಕರಣಗಳು ಕೇವಲ ಚರಿತ್ರೆಯ ರಚನೆಗೆ ಮಾತ್ರ ಕಾರಣವಾಗದೆ, ಸಮೂಹಗಳ ಸಾಮಾಜಿಕ-ರಾಜಕೀಯ ಸಮಾನತೆ, ಸ್ವಾಯತ್ತತೆಯನ್ನೂ ಕಲ್ಪಿಸುವುದಕ್ಕೂ ಬದ್ಧವಾಗಿರುತ್ತವೆ. ಆರ್ಥಿಕತೆಯ ನಿಲುವುಗಳ ಮೂಲಕ ಭಾರತದ ಚರಿತ್ರೆಯನ್ನು ವ್ಯಾಖ್ಯಾನಿಸುವ ಕ್ರಮಗಳನ್ನು ಅಂಬೇಡ್ಕರ್ ಅವರು ಅತ್ಯಂತ ಕಟುವಾಗಿಯೇ ವಿಮರ್ಶಿಸುತ್ತಾರೆ.
ಸಮಾಜವಾದಿಗಳು ಮತ್ತು ಮಾರ್ಕ್ಸ್ವಾದಿಗಳು ಆರ್ಥಿಕತೆಯ ನೆಲೆಯಿಂದ ಭಾರತದಲ್ಲಿ ಚರಿತ್ರೆಗಳನ್ನು ನಿರ್ವಚಿಸುವ ಪ್ರಯತ್ನವನ್ನು ಮಾಡಿರುತ್ತಾರೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಭಾರತದ ಚರಿತ್ರೆಗಳಲ್ಲಿ ದಾಖಲಾಗಿರುವ ಯಾವುದೇ ರಾಜಕೀಯ ಕ್ರಾಂತಿ/ಹೋರಾಟಗಳು ಯಾವಾಗಲೂ ಸಾಮಾಜಿಕ-ಧಾರ್ಮಿಕ ಕ್ರಾಂತಿಗಳಿಂದ ಮಾತ್ರ ಕೂಡಿರುವುದನ್ನೂ ಅಂಬೇಡ್ಕರ್ ಅವರು ಇಲ್ಲಿ ಗುರುತಿಸುತ್ತಾರೆ. ಭಾರತದಲ್ಲಿ ಅಷ್ಟೆಯಲ್ಲ, ಅಮೆರಿಕ, ಯುರೋಪ್, ಅರೇಬಿಯಾ ದೇಶಗಳಲ್ಲಿಯೂ ಇದೇ ಬಗೆಯ ಚರಿತ್ರೆಯ ನಿರ್ಮಾಣವು ನಡೆದಿರುವುದನ್ನು ನೋಡುತ್ತೇವೆ. ಮತ್ತು ಶಿವಾಜಿ, ಚಂದ್ರಗುಪ್ತ ಮೌರ್ಯ, ಸಿಖ್ ರಾಜ್ಯಗಳ ರಾಜರುಗಳಿಂದ ಕೈಗೊಳ್ಳಲಾದ ರಾಜಕೀಯ ಕ್ರಾಂತಿಗಳು, ಬುದ್ಧ, ಗುರು ನಾನಕ್ ಹಾಗೂ ಇತರ ಸಾಧು ಸಂತರ ಸಾಮಾಜಿಕ, ಧಾರ್ಮಿಕ ಚಳವಳಿಗಳ ಮೂಲಕ ಕಂಡಿರುತ್ತೇವೆ.
ಆದರೆ ಪರಿಣಾಮಗಳಲ್ಲಿ ಅಗಾಧವಾದ ವ್ಯತ್ಯಾಸಗಳನ್ನೂ ನಾವು ಇವತ್ತು ಕಾಣುತ್ತೇವೆ ಹಾಗೂ ಭಾರತದ ಚರಿತ್ರೆಗಳನ್ನು ಕುರಿತು ಬ್ರಿಟಿಶರು ತಾಳಿರುವ ಧೋರಣೆಗಳು ಅತ್ಯಂತ ದೋಷಪೂರಿತ ನೆಲೆಗಳಿಂದ ಕೂಡಿದ್ದವು ಎಂಬುದನ್ನು ಅಂಬೇಡ್ಕರ್ ಅವರು ಅತ್ಯಂತ ಬಲವಾಗಿ ನಂಬಿದ್ದರು. ಮತ್ತು ಅವುಗಳನ್ನು ಬಿಡಿಸಿ ತೋರಿಸುವುದಕ್ಕೆ ಬೇಕಾದ ಪರಿಕರಗಳನ್ನೂ ತಮ್ಮ ಅಧ್ಯಯನಗಳ ಮೂಲಕ ರೂಪಿಸಿರುತ್ತಾರೆ.
ಭಿನ್ನ ಸಂವೇದನೆಯ ಮೂಲಕ ಭಾರತವನ್ನು ಗ್ರಹಿಸಿದ ಅಂಬೇಡ್ಕರ್ ಚಿಂತನೆಗಳು ಹಾಗೂ ಸಾಮಾಜಿಕವಾಗಿ ಅತ್ಯಂತ ಸೂಕ್ಷ್ಮ ನಿಲುವುಗಳಾಗಿ ಯಾವತ್ತಿಗೂ ಚರ್ಚೆಗೆ ಒಳಪಡುತ್ತಿರುವ ‘ಅಲ್ಪಸಂಖ್ಯಾತರು’ ‘ಲಿಂಗ’ ಹಾಗೂ ‘ಜಾತಿ’ಗಳ ನಡುವೆ ಒಂದು ಬಗೆಯ ತಾರ್ಕಿಕ ನಂಟನ್ನು ಏರ್ಪಡಿಸಬಹುದು. ರಾಷ್ಟ್ರೀಯತೆಯ ಜೊತೆಗೆ ಅಲ್ಪಸಂಖ್ಯಾತರು, ಲಿಂಗ ಹಾಗೂ ಜಾತಿಯ ವಿನ್ಯಾಸಗಳನ್ನು ಇಟ್ಟು ನೋಡಿದರೆ, ರಾಷ್ಟ್ರೀಯತೆ ಎನ್ನುವುದು ಕೇವಲ ಏಕಾಕೃತಿಯ ನೆಲೆಯನ್ನಾಗಿ ಬಿಂಬಿಸಲಾಗುತ್ತದೆ. ಇಂತಹ ಏಕಾಕೃತಿ ನಿಲುವುಗಳನ್ನು ಭಗ್ನ ಮಾಡುವ ಅತ್ಯಂತ ಪ್ರಖರವಾದ ಚಿಂತನೆಗಳನ್ನು, ಅಲ್ಪಸಂಖ್ಯಾತ, ಲಿಂಗ, ಜಾತಿ ಮತ್ತು ಧರ್ಮಗಳ ವಿನ್ಯಾಸಗಳನ್ನು ನೆಲೆಯಾಗಿಸಿಕೊಂಡು ಅಂಬೇಡ್ಕರ್ ಅವರು ಚಿಂತಿಸಿರುತ್ತಾರೆ. ಹಾಗೂ ಈ ಚಿಂತನೆಗಳ ಮುಖೇನವೇ ಸಾಂಸ್ಕೃತಿಕ-ಚಾರಿತ್ರಿಕ ಬಹುಳತೆಯನ್ನು ಕಂಡರಿಸುವ ದಾರಿಗಳನ್ನೂ ಅವರ ಚಿಂತನೆಗಳಲ್ಲಿ ಕಾಣಬಹುದಾಗಿದೆ.
ಅಂದರೆ ಅಂಬೇಡ್ಕರ್ ಅವರ ಸೈದ್ಧಾಂತಿಕ ತಿಳಿವಿನ ಚೌಕಟ್ಟನ್ನು ಅರಿಯಬೇಕೆಂದರೆ, ಅವರು ಫ್ರೆಂಚ್ ಕ್ರಾಂತಿಯಿಂದ ಎರವಲು ಪಡೆದಿರುವ ಸಾಮಾಜಿಕ-ರಾಜಕೀಯ ‘ತ್ರಿಕೂಟ’ (ಟ್ರಿನಿಟಿ) ಪರಿಕಲ್ಪನೆಗಳನ್ನು ಇಲ್ಲಿ ನಾವು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ‘ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವ’ ಎಂಬುದಾಗಿ ಈ ತ್ರಿಕೂಟ ಪರಿಕಲ್ಪನೆಗಳನ್ನು ಗುರುತಿಸಬಹುದು.
ಫ್ರೆಂಚ್ ಕ್ರಾಂತಿಯ ನಿಲುವುಗಳನ್ನು ಕುರುಡಾಗಿ ಅನುಕರಿಸುವುದಾಗಲೀ ಇಲ್ಲವೇ ಆ ಕ್ರಾಂತಿಯ ನಿಲುವುಗಳನ್ನು ಯಥಾವತ್ತಾಗಿ ಪಾಲಿಸುವುದಾಗಲೀ ಅಂಬೇಡ್ಕರ್ ಅವರ ಉದ್ದೇಶವಾಗಿರಲಿಲ್ಲ. ಆದರೆ ಈ ಕ್ರಾಂತಿಯಿಂದ ಪ್ರೇರಣೆಯನ್ನು ಮಾತ್ರ ಪಡೆದುಕೊಂಡಿರುತ್ತಾರೆ. ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳನ್ನು ಮರುಪರೀಕ್ಷಿಸುವುದು ಅಷ್ಟೆಯಲ್ಲದೆ ಅವುಗಳನ್ನು ಮರು ವಿನ್ಯಾಸಗೊಳಿಸಿರುವುದನ್ನೂ ಇಲ್ಲಿ ನೋಡಬಹುದು. ಅಂದರೆ, ಫ್ರೆಂಚ್ ಕ್ರಾಂತಿಯ ಸನ್ನಿವೇಶಕ್ಕಿಂತ ಮಿಗಿಲಾದ ಸಾಮಾಜಿಕ-ಸಾಂಸ್ಕೃತಿಕ ಆಯಾಮ ಮತ್ತು ಅರ್ಥಗಳನ್ನು ಅಂಬೇಡ್ಕರ್ ಅವರು ಈ ಪರಿಕಲ್ಪನೆಗಳಿಗೆ ಕೊಟ್ಟಿರುತ್ತಾರೆ.
ಜಾತಿಕೇಂದ್ರಿತವಾದ ಭಾರತ ದೇಶವು ವರ್ಗಕೇಂದ್ರಿತವಾದ ಫ್ರೆಂಚ್ ದೇಶಕ್ಕಿಂತ ಸಹಜವಾಗಿಯೇ ಭಿನ್ನವಾಗಿದೆ. ಈ ಸಾಮಾಜಿಕ ವಿನ್ಯಾಸಕ್ಕೆ ಅನುಗುಣವಾಗಿಯೇ ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳ ತಾತ್ವಿಕತೆಯನ್ನು ರೂಪಿಸಿರುತ್ತಾರೆ. ಸಮೂಹಗಳ ಒಳ್ಳೆಯ ಬದುಕಿಗೆ ಈ ತ್ರಿಕೂಟಗಳು ಅತ್ಯಂತ ಅವಶ್ಯವೆಂಬುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು (ರೊಡ್ರಿಗಸ್, 2002). ಚರಿತ್ರೆಯ ನಿರ್ಮಾಣದಲ್ಲಿ ಹಾಗೂ ಸಾಮಾಜಿಕ ಬದುಕುಗಳನ್ನು ಕಟ್ಟಿಕೊಳ್ಳುವಲ್ಲಿ ಈ ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತ್ವವು ಎಷ್ಟೊಂದು ಮಹತ್ವದ ಪಾತ್ರವನ್ನು ವಹಿಸಬಲ್ಲವು ಎನ್ನುವುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು.
ಅಂಬೇಡ್ಕರ್ ಅವರು ಗಾಂಧಿ ಮತ್ತು ಕಾಂಗ್ರೇಸ್ ಸಂಘಟನೆಯನ್ನು ಕುರಿತು ‘ವ್ಹಾಟ್ ಗಾಂಧಿ ಆ್ಯಂಡ್ ಕಾಂಗ್ರೇಸ್ ಹ್ಯಾವ್ ಡನ್ ಟು ದ ಅನ್ಟಚೇಬಲ್ಸ್’ ಎಂಬ ಬರಹದಲ್ಲಿ ಸಮೂಹಗಳ ಏಳ್ಗೆಯ ನೆಲೆಯಿಂದ ವಿಶ್ಲೇಷಣೆ ಮಾಡಿರುತ್ತಾರೆ. ಅಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದಂತಹ ತ್ರಿಕೂಟ ಕಲ್ಪನೆಗಳು ಸಮೂಹಗಳ ಅಸ್ತಿತ್ವ, ಅಸ್ಮಿತೆ ಹಾಗೂ ಪ್ರಜ್ಞೆಯನ್ನು ಕುರಿತು ಮಾತ್ನಾಡಿದರೆ, ಕಾಂಗ್ರೆಸ್ ಸಂಘಟನೆಯು ರಾಷ್ಟ್ರೀಯತೆಯ ಕಲ್ಪನೆಯ ಬಗೆಗೆ ಮಾತ್ರ ಹೆಚ್ಚು ಕಾಳಜಿಯನ್ನು ವಹಿಸಿರುವುದನ್ನು ಇಲ್ಲಿ ನೋಡುತ್ತೇವೆ. ಆದರೆ ಗಾಂಧೀಜಿಯವರು ಸಾಂಪ್ರದಾಯಿಕ ರಾಷ್ಟ್ರೀಯತೆಯನ್ನು ಕುರಿತು ಯೋಚಿಸಿದರೆ, ನೆಹರೂ ಅವರು ಸಮಾಜವಾದದ ನೆಲೆಯಿಂದ ರಾಷ್ಟ್ರೀಯತೆಯ ಪ್ರಜ್ಞೆಯನ್ನು ರೂಪಿಸುವ ತುಡಿತವನ್ನು ಹೊಂದಿದ್ದರು. ಒಟ್ಟಾರೆ ರಾಷ್ಟ್ರೀಯತೆ ಬಗೆಗಿನ ನಿಲುವುಗಳಲ್ಲಿ ಬಹುಸಮಾಜಗಳು ಎದುರಿಸುವ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳು ಮಹತ್ವವನ್ನು ಪಡೆಯದೆ, ಕೇವಲ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಕುರಿತಾದ ಮೌಲ್ಯಗಳು ಮಾತ್ರ ಮುಂಚೂಣಿಗೆ ಬರುತ್ತವೆ.
ಹಾಗಾಗಿ ಭಾರತದ ಚರಿತ್ರೆಗಳಲ್ಲಿ ರಾಷ್ಟ್ರ, ರಾಷ್ಟ್ರ ಪ್ರಭುತ್ವ ಹಾಗೂ ರಾಷ್ಟ್ರೀಯತೆಗಳ ಮಹತ್ವ ಮತ್ತು ಹಿರಿಮೆಯ ಬಗೆಗಿರುವ ಕಾಳಜಿಗಳು, ಸಾಮಾಜಿಕ ಚರಿತ್ರೆಯನ್ನು ಬಿಂಬಿಸುವಲ್ಲಿ ಗೈರು ಆಗಿರುತ್ತವೆ. ಅಂಬೇಡ್ಕರ್ ಅವರು ಇಂತಹ ಚಾರಿತ್ರಿಕ ಲೋಪಗಳನ್ನು ಗುರುತಿಸುವ ಜೊತೆಗೆ, ರಾಜಕೀಯ ಪ್ರೇರಿತವಾದ ಚರಿತ್ರೆಗಳಿಗಿಂತ, ಸಾಮಾಜಿಕ ನೆಲೆಗಳಿಂದ ಚರಿತ್ರೆಯನ್ನು ಬರೆಯುವುದು ಎಷ್ಟೊಂದು ಮಹತ್ವದ ಕೆಲಸವೆಂಬುದನ್ನೂ ಮನಗಾಣಿಸಿದ್ದಾರೆ. ಸಾಮಾಜಿಕ ಚರಿತ್ರೆಗಳನ್ನು ಕಡೆಗಣಿಸಿ ರಾಷ್ಟ್ರೀಯತೆಯ ಕಲ್ಪನೆಯನ್ನು ಊಹಿಸುವುದು ಕೂಡ ದುಸ್ತರದ ಸಂಗತಿಯೆಂಬುದನ್ನು ಅಂಬೇಡ್ಕರ್ ಅವರು ಚಿಂತನೆಗಳು ನಮಗೆ ಮನವರಿಕೆ ಮಾಡುತ್ತವೆ. ಈ ಕಾರಣಗಳಿಂದ ‘ಚರಿತ್ರೆಯನ್ನು ಮರೆತವರು ಚರಿತ್ರೆಯನ್ನು ಸೃಷ್ಟಿಸಲಾರರು’ ಎಂಬ ನಿಲುವನ್ನು ಅತ್ಯಂತ ಬಲವಾಗಿಯೇ ಅಂಬೇಡ್ಕರ್ ಅವರು ನಂಬಿರುತ್ತಾರೆ ಎಂಬುದು ಅತ್ಯಂತ ಗಮನಾರ್ಹ ಸಂಗತಿ.
ಚರಿತ್ರೆ ಎಂಬುದು ಒಂದು ಕನಸಾಗಲೀ ಇಲ್ಲವೇ ಭ್ರಮೆಯಾಗಲೀ ಅಲ್ಲ ಹಾಗೂ ಚರಿತ್ರೆಯೆಂಬುದು ಒಂದು ನಿರ್ವಾತವೂ ಅಲ್ಲ ಮತ್ತು ತೆರಪುಗಳನ್ನು ತುಂಬುವ ಪ್ರಕ್ರಿಯೆಯೂ ಅಲ್ಲ. ಬದಲಾಗಿ ಅದೊಂದು ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಗ್ರಹಿಕೆ ಮತ್ತು ಜ್ಞಾನಶಿಸ್ತು ಆಗಿರುತ್ತದೆ. ಜ್ಞಾನಶಿಸ್ತುಗಳು ಮತ್ತು ಗ್ರಹಿಕೆಗಳು ಸಮೂಹ ಕೇಂದ್ರಿತವಾಗಿರುಬೇಕೆ ಹೊರತು ಕೇವಲ ರಾಜಕೀಯ-ಸಾಮಾಜಿಕ ಪ್ರಾಬಲ್ಯವನ್ನು ಹೊಂದಿರುವ ವ್ಯಕ್ತಿಗಳ ಇಲ್ಲವೇ ಆಳುವ ವರ್ಗಗಳನ್ನು ಮಾತ್ರ ಪ್ರತಿನಿಧಿಸುವ ವಿನ್ಯಾಸಗಳಾಗಿ ಇವುಗಳು ಇರಲಾರವು. ಚರಿತ್ರೆಯೂ ಒಂದು ಜ್ಞಾನಶಿಸ್ತೇ ಆಗಿರುವುದರಿಂದ, ಇದು ಬಹುಸಮೂಹಗಳನ್ನು ಪ್ರತಿನಿಧಿಸುವ ವಿನ್ಯಾಸವಾಗಬೇಕು ಎಂಬ ಅಚಲವಾದ ನಿಲುವನ್ನು ಅಂಬೇಡ್ಕರ್ ಅವರು ತಾಳಿದ್ದರು. ಯಾವುದೇ ಗ್ರಹಿಕೆಯು ಸಮೂಹ ಕೇಂದ್ರಿತವಾಗಿರುತ್ತದೆ ಎನ್ನುವ ನಿಲುವಿನಲ್ಲಿ ಅಂಬೇಡ್ಕರ್ ಅವರಿಗೆ ತಾತ್ವಿಕ ಹಾಗೂ ವೈಯಕ್ತಿಕವಾಗಿ ಅಪಾರವಾದ ನಂಬಿಕೆಯಿತ್ತು.
ಹಾಗಾಗಿ ಅಂಬೇಡ್ಕರ್ ಅವರು ನಿನ್ನೆಗಳನ್ನು ಕುರಿತಾದ ತಾತ್ವಿಕ ಪ್ರಶ್ನೆಗಳನ್ನು ಮೈಮೇಲೆ ಎಳೆದುಕೊಂಡು, ಅವುಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನವನ್ನು ಮಾಡಿರುತ್ತಾರೆ. ನಿನ್ನೆಗಳು ತಮ್ಮ ಹಕ್ಕುಗಳೆಂದು ಯಾರು ವಾದಿಸುವವರೋ ಅವರೆಲ್ಲರಿಗೂ, ವರ್ತಮಾನದಲ್ಲಿ ಉಂಟಾಗಿರುವ ಬಿಕ್ಕಟ್ಟುಗಳಿಗೆ ಈ ನಿನ್ನೆಗಳು ಹೇಗೆ ಹೊಣೆಯಾಗಿವೆ ಎಂಬ ದಿಟವನ್ನು ಅರಿಯುವುದಕ್ಕೆ ಬೇಕಾದ ವಿಶ್ಲೇಷಣೆಗಳನ್ನು ಇವರು ಮಾಡಿರುತ್ತಾರೆ. ಅಂಬೇಡ್ಕರ್ ಅವರ ಈ ಹಾದಿಯು ಎಲ್ಲರಿಗೂ ಒಪ್ಪಿತವಾಗುವ ಸತ್ಯವನ್ನು ಹೇಳುವುದಲ್ಲ. ಬದಲಾಗಿ, ಎಲ್ಲ ಸಮೂಹಗಳ ಇವತ್ತಿನ ಬದುಕಿಗೆ ಅಗತ್ಯವಾಗಿರುವ ಹಾದಿಗಳನ್ನು ರೂಪಿಸುವುದಾಗಿತ್ತು. ಆದ್ದರಿಂದ, ಸದ್ಯದ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಆರ್ಥಿಕತೆ ಹಾಗೂ ರಾಜಕಾರಣವನ್ನು ವಿಶ್ಲೇಷಿಸುವುದಕ್ಕೆ ಅಂಬೇಡ್ಕರ್ ಅವರು ರೂಪಿಸಿದ ಈ ತಾತ್ವಿಕ ವಿನ್ಯಾಸಗಳು ಅತ್ಯಂತ ಸಮರ್ಪಕವಾಗಿರುತ್ತವೆ. ಇವರ ಈ ತಾತ್ವಿಕ ವಿನ್ಯಾಸಗಳಲ್ಲಿ ಅನ್ಯ ಪ್ರಭಾವಕ್ಕಿಂತ ಪ್ರೇರಣೆಗಳನ್ನು ಮಾತ್ರ ನಾವು ಕಾಣುತ್ತೇವೆ. ಆದ್ದರಿಂದ ಅಂಬೇಡ್ಕರ್ ಅವರು ರೂಪಿಸಿದ ಮರುರಚನೆಯ (ರೀಕನ್ಸ್ಟ್ರಕ್ಸನ್) ಮಾದರಿಗಳು ಕೇವಲ ತೆರಪುಗಳನ್ನು ತುಂಬುವ ರಚನೆಗಳಾಗದೆ, ವರ್ತಮಾನದ ಬಿಕ್ಕಟ್ಟುಗಳಿಗೆ ಇವುಗಳು ಹೇಗೆ ಕಾರಣವಾಗಿರುತ್ತವೆ ಹಾಗೂ ಇವುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಬಗೆಗಳಾವುವು ಎಂಬೆಲ್ಲ ಸಂಗತಿಗಳನ್ನು ಕುರಿತು ಅತ್ಯಂತ ವಸ್ತುನಿಷ್ಠ ವಿಶ್ಲೇಷಣೆಗಳನ್ನು ತಮ್ಮ ಬರಹಗಳಲ್ಲಿ ಮಾಡಿರುತ್ತಾರೆ.
ಅಂಬೇಡ್ಕರ್ ಅವರಿಗಿಂತ ಮೊದಲು ಇಂತಹದೊಂದು ನೋಟಕ್ರಮಕ್ಕೆ ಚಾಲನೆಯನ್ನು ಕೊಟ್ಟವರು ಜ್ಯೋತಿರಾವ್ ಫುಲೆಯವರು. ಆದರೆ ಇವರಿಬ್ಬರ ತಿಳಿವಳಿಕೆಗಳನ್ನು ಹೋಲಿಸಿ ನೋಡುವ ಉದ್ದೇಶಕ್ಕಿಂತ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳು ಬೆಳೆಯುವುದಕ್ಕೆ ಬೇಕಾಗಿರುವ ಚಾರಿತ್ರಿಕ ಒತ್ತಡಗಳು ಹೇಗಿರುತ್ತವೆ ಎಂಬ ದಿಟವನ್ನು ಅರಿಯುವುದಕ್ಕೆ, ಫುಲೆಯವರ ಚಿಂತನೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಹಾಗೂ ಭಾರತದ ಸನ್ನಿವೇಶದಲ್ಲಿ ಚರಿತ್ರೆ ಕಥನಶಾಸ್ತ್ರಗಳ ವಿಭಿನ್ನ ಸ್ವರೂಪವನ್ನೂ ಈ ಮೂಲಕ ಅರಿಯಬಹುದಾಗಿದೆ. ಜ್ಞಾನಶಿಸ್ತುಗಳನ್ನು ರೂಪಿಸುವ ಪ್ರಕ್ರಿಯೆಯ ಭಾಗವಾಗಿ ಈ ಹಾದಿಯನ್ನು ಕರ್ನಾಟಕದ ವಿದ್ವತ್ ಲೋಕದಲ್ಲಿ ಇಡೀಯಾಗಿ ಅನುಸರಿಸುವುದನ್ನು ನಾನು ಕಾಣಲಾರೆ.
ಅಂದರೆ ಯಾರೂ ಈ ಹಾದಿಯನ್ನು ತುಳಿಯುತ್ತಿಲ್ಲವೆಂದು ಅರ್ಥವಲ್ಲ. ಬದಲಾಗಿ ಇದುವೇ ಮುಖ್ಯಧಾರೆ ಚಿಂತನೆಯ ಕ್ರಮವಾಗಿ ಭಾರತ ಇಲ್ಲವೇ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲವೆಂದರ್ಥ. ಆದರೆ ಅಂಬೇಡ್ಕರ್ ಚಿಂತನೆಯ ಮಾದರಿಯೆಂಬುದನ್ನು ಕೇವಲ ಪರ್ಯಾಯ ಆಲೋಚನೆಯ ಕ್ರಮವನ್ನಾಗಿ ಮಾತ್ರ ನೋಡಲಾಗಿದೆ. ಈ ನಿಲುವು ಸರಿಯಲ್ಲ. ಏಕೆಂದರೆ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳೇ ನಮ್ಮ ಮುಖ್ಯಧಾರೆಯ ಆಲೋಚನೆಯ ಕ್ರಮಗಳಾಗಬೇಕಾದ ತುರ್ತು ಇದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ
~ಗೋವರ್ಧನ ನವಿಲೇಹಾಳು
ಮಧ್ಯ ಕರ್ನಾಟಕದ ಹೃದಯಭಾಗವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈಗ ಉಪಚುನಾವಣೆಯ ಕಾವು ಏರುತ್ತಲೇ ಇದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಖಾಲಿಯಾದ ಈ ಕ್ಷೇತ್ರದಲ್ಲಿ ಏಪ್ರಿಲ್ 9, 2026ರಂದು ಮತದಾನ ನಡೆಯಲಿದೆ. ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ಈ ಉಪಚುನಾವಣೆಯು ಕೇವಲ ಒಂದು ಸೀಟಿನ ಹೋರಾಟವಲ್ಲ; ಇದು ಕರ್ನಾಟಕ ರಾಜಕೀಯದಲ್ಲಿ ಪ್ರತಿಷ್ಠೆ, ಕುಟುಂಬ ವಾರಸುದಾರಿಕೆ, ಸಮುದಾಯ ಸಮೀಕರಣಗಳು ಮತ್ತು ಅಭಿವೃದ್ಧಿ ನಿರೀಕ್ಷೆಗಳ ನಡುವಿನ ಸಂಕೀರ್ಣ ಸಮರವಾಗಿದೆ.
ಶಾಮನೂರು ಶಿವಶಂಕರಪ್ಪ ಅವರು ತಾನು ಸ್ಪರ್ಧಿಸಿದ ಈ ಕ್ಷೇತ್ರವನ್ನು ಎಂದೂ ಸೋಲದೆ ಉಳಿಸಿಕೊಂಡಿದ್ದರು. ಅವರ ನಂತರ ಕಾಂಗ್ರೆಸ್ ಪಕ್ಷವು ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದು ಕಾಂಗ್ರೆಸ್ ಹೇಳುವಂತೆ “ಕುಟುಂಬಕ್ಕೆ ಟಿಕೆಟ್ ನೀಡುವ ಸಾಂಪ್ರದಾಯಿಕ ನಡೆ”ಯಾಗಿದೆ. ಬಿಜೆಪಿ ಪಕ್ಷವು ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಇದರ ಜೊತೆಗೆ SDPIಯ ಅಫ್ಸರ್ ಕೊಡ್ಲಿಪೇಟೆ, ಸಾದಿಕ್ ಪೈಲ್ವಾನ್ ಸೇರಿದಂತೆ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಮುಖ್ಯ ಹೋರಾಟ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಇದೆ .
ಈ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪಾತ್ರ ನಿರ್ಣಾಯಕವಾಗಿದೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಸುಮಾರು 40% ಇದೆ ಎಂದು ಅಂದಾಜು. ಶಾಮನೂರು ಕುಟುಂಬಕ್ಕೆ ಐತಿಹಾಸಿಕ ಬೆಂಬಲವಿದ್ದರೂ, ಈ ಬಾರಿ ಮುಸ್ಲಿಂ ನಾಯಕರು ಟಿಕೆಟ್ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷವು ಕುಟುಂಬ ವಾರಸುದಾರಿಕೆಯನ್ನು ಆಯ್ಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಸಚಿವ ಜಮೀರ್ ಅಹಮದ್ ಅವರ ಪ್ರಚಾರ ಮತ್ತು ಸಿಎಂ ಸಿದ್ದರಾಮಯ್ಯ ಅವರ ಭೇಟಿಗಳು ಈ ಅಸಮಾಧಾನವನ್ನು ತಣಿಸುವ ಪ್ರಯತ್ನವಾಗಿದೆ. ಆದರೆ ಮುಸ್ಲಿಂ ಮತಗಳ ವಿಭಜನೆಯ ಸಾಧ್ಯತೆ ಇದೆ. SDPI ಮತ್ತು ಇತರ (ಕಾಂಗ್ರೆಸ್ ಸಾದಿಕ್ ಅವರನ್ನು ಪೈಲ್ವಾನ್ ತಟಸ್ಥರಾಗಿರುವಂತೆ ಹೇಳಿದೆ) ಮುಸ್ಲಿಂ ಅಭ್ಯರ್ಥಿಗಳು ಈ ವಿಭಜನೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಬಿಜೆಪಿ ಎಸ್ಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಹಿಂದ ಮತಗಳನ್ನು ಸೆಳೆಯುವ ತಂತ್ರ ರೂಪಿಸಿದೆ.
ಕಾಂಗ್ರೆಸ್ ಪಕ್ಷಕ್ಕೆ ಈ ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿ ತನ್ನ ಬಲವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ದಾವಣಗೆರೆ ದಕ್ಷಿಣಕ್ಕೆ 100 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದು, ಇದು ಉಪಚುನಾವಣೆಗೆ ಮುನ್ನ ಜನರನ್ನು ಆಕರ್ಷಿಸುವ ಪ್ರಯತ್ನವಾಗಿ ಕಾಣುತ್ತಿದೆ. ಅನುಕಂಪದ ಅಲೆಯೂ ಕಾಂಗ್ರೆಸ್ಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಆದರೆ ಪಕ್ಷದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಪಕ್ಷ ಚುನಾವಣೆಯಲ್ಲಿ ತಟಸ್ಥರಾಗಿರುವಂತೆ ಹೇಳಿದೆ. ಆದರೆ ಇದು ಮುಸಲ್ಮಾನರ ಒಳಮುನಿಸನ್ನು ತಣಿಸುತ್ತದೆಯೇ ಅಥವಾ ಮತ ವಿಭಜನೆಗೆ ಕಾರಣವಾಗುತ್ತದೆಯೇ ಎಂಬುದು ಫಲಿತಾಂಶದ ಮೇಲೆ ಪರಿಣಾಮವನ್ನಂತೂ ಬೀರುತ್ತದೆ.
ಬಿಜೆಪಿ ಪಕ್ಷಕ್ಕೆ ಇದು ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಅವಕಾಶ. 2023ರ ವಿಧಾನಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಅವರನ್ನು ಸುಮಾರು 27,888 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಬಿಜೆಪಿ “ಬದಲಾವಣೆ”ಯ ಸಂದೇಶವನ್ನು ನೀಡುತ್ತಿದೆ. ಅಭಿವೃದ್ಧಿ ಕೊರತೆ, ಗ್ಯಾರಂಟಿ ಯೋಜನೆಗಳ ವೆಚ್ಚ ಮತ್ತು ಸರ್ಕಾರದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಶ್ರೀನಿವಾಸ್ ದಾಸಕರಿಯಪ್ಪ ಅವರು ಕುಟುಂಬ ರಾಜಕಾರಣಕ್ಕೆ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಆದರೆ ಬಿಜೆಪಿಗೆ ಕ್ಷೇತ್ರದಲ್ಲಿ ಐತಿಹಾಸಿಕ ಬೆಂಬಲ ಕಡಿಮೆ. ಮುಸ್ಲಿಂ ಮತ್ತು ಅಹಿಂದ ಮತಗಳನ್ನು ತನ್ನತ್ತ ಸೆಳೆಯುವುದು ಅವರ ದೊಡ್ಡ ಸವಾಲು.
ದಾವಣಗೆರೆ ದಕ್ಷಿಣ ಕ್ಷೇತ್ರವು ಕೈಗಾರಿಕೆ, ವ್ಯಾಪಾರ ಮತ್ತು ಕೃಷಿಯ ಸಮ್ಮಿಶ್ರಣವಾಗಿದೆ. ರಸ್ತೆಗಳು, ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಜನರ ಮುಖ್ಯ ನಿರೀಕ್ಷೆಗಳು. ಹಿರಿಯ ಶಾಸಕರ ಕಾಲದಲ್ಲಿ ಕ್ಷೇತ್ರಕ್ಕೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಆದರೆ ಇಂದು ಯುವಕರ ಉದ್ಯೋಗ, ಮಹಿಳೆಯರ ಸುರಕ್ಷತೆ ಮತ್ತು ಸ್ಥಳೀಯ ಸಮಸ್ಯೆಗಳು ಬಗೆಹರಿಯಬೇಕಿದೆ. ಉಪಚುನಾವಣೆಯಲ್ಲಿ ಅಭ್ಯರ್ಥಿಗಳು ಭರವಸೆಗಳ ಮಳೆ ಸುರಿಸುತ್ತಿದ್ದಾರೆ. ಆದರೆ ಜನರು ನೋಡುವುದು ಕಾರ್ಯನಿರ್ವಹಣೆಯನ್ನು. 100 ಕೋಟಿ ಅನುದಾನ ಘೋಷಣೆಯಂತಹ ಕ್ರಮಗಳು ತಾತ್ಕಾಲಿಕ ಆಕರ್ಷಣೆಯಾಗಬಹುದು, ಆದರೆ ಸುಸ್ಥಿರ ಅಭಿವೃದ್ಧಿ ಅಗತ್ಯ.
ರಾಜಕೀಯವು ಜನಸೇವೆಗಾಗಿ ಇರಬೇಕು, ಅಧಿಕಾರಕ್ಕಾಗಿ ಅಲ್ಲ ಎಂಬುದು ಎಲ್ಲರೂ ಹೇಳುವ ಮಾತು. ಆದರೆ ವಾಸ್ತವದಲ್ಲಿ ಕುಟುಂಬ ರಾಜಕಾರಣ, ಜಾತಿ-ಸಮುದಾಯ ಲೆಕ್ಕಾಚಾರಗಳು ಪ್ರಬಲವಾಗಿವೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬದ ವರ್ಚಸ್ಸು ದೀರ್ಘಕಾಲದ್ದು. ಇದು ಜನಸೇವೆಯ ಫಲವೋ ಅಥವಾ ವ್ಯವಸ್ಥೆಯ ದೌರ್ಬಲ್ಯವೋ ಎಂಬುದನ್ನು ಜನರು ನಿರ್ಧರಿಸಬೇಕು. ಬಿಜೆಪಿ “ಬದಲಾವಣೆ”ಯ ಸಂದೇಶ ನೀಡುತ್ತಿದ್ದರೂ, ಅದು ಕೇವಲ ವಿರೋಧ ಪಕ್ಷದ ಧ್ವನಿಯಾಗಿ ಉಳಿಯದೆ ಸಕಾರಾತ್ಮಕ ಪರ್ಯಾಯವಾಗಬೇಕು.
ಈ ಉಪಚುನಾವಣೆಯಲ್ಲಿ ಮತದಾರರ ಜವಾಬ್ದಾರಿ ದೊಡ್ಡದು. ಅನುಕಂಪ, ಕುಟುಂಬ ನಿಷ್ಠೆ ಅಥವಾ ಸಮುದಾಯ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಅಭಿವೃದ್ಧಿ, ಪಾರದರ್ಶಕತೆ ಮತ್ತು ಜನೋಪಯೋಗಿ ಕಾರ್ಯಗಳನ್ನು ಆಧರಿಸಿ ಮತ ನೀಡಬೇಕು. ಯುವಕರು ಮತ್ತು ಮಹಿಳೆಯರು ಹೆಚ್ಚು ಸಕ್ರಿಯರಾಗಬೇಕು. ಮತದಾನ ಶೇಕಡಾ 80ಕ್ಕಿಂತ ಹೆಚ್ಚು ಆಗುವಂತೆ ಮಾಡುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸೂಚಕ.
ಕರ್ನಾಟಕ ರಾಜಕೀಯದಲ್ಲಿ ಉಪಚುನಾವಣೆಗಳು ಸಣ್ಣ ಪರೀಕ್ಷೆಗಳು. ದಾವಣಗೆರೆ ದಕ್ಷಿಣದ ಫಲಿತಾಂಶವು 2028ರ ವಿಧಾನಸಭಾ ಚುನಾವಣೆಗೆ ಸಂದೇಶ ನೀಡುತ್ತದೆ. ಕಾಂಗ್ರೆಸ್ ಗೆದ್ದರೆ ಅದು ತನ್ನ ಬಲವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುತ್ತದೆ. ಬಿಜೆಪಿ ಗೆದ್ದರೆ ಅದು ವಿರೋಧ ಪಕ್ಷವಾಗಿ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ. ಆದರೆ ಗೆಲುವು ಯಾರದ್ದಾದರೂ, ಜಯಿಸುವುದು ದಾವಣಗೆರೆ ದಕ್ಷಿಣದ ಜನರೇ ಆಗಬೇಕು.
ಈ ಹೋರಾಟದಲ್ಲಿ ರಾಜಕೀಯ ಪಕ್ಷಗಳು ಜನರ ಸಮಸ್ಯೆಗಳನ್ನು ಕೇಂದ್ರದಲ್ಲಿ ಇರಿಸಿಕೊಂಡು ಪ್ರಚಾರ ಮಾಡಲಿ. ಮತದಾರರು ತಮ್ಮ ಧ್ವನಿಯನ್ನು ಸ್ಪಷ್ಟವಾಗಿ ಮತ್ತು ನಿರ್ಭಯವಾಗಿ ವ್ಯಕ್ತಪಡಿಸಲಿ. ದಾವಣಗೆರೆ ದಕ್ಷಿಣ ಉಪಚುನಾವಣೆಯು ಪ್ರಜಾಪ್ರಭುತ್ವದ ಸೌಂದರ್ಯವನ್ನು ಪ್ರದರ್ಶಿಸುವ ಅವಕಾಶವಾಗಲಿ. ಅಭಿವೃದ್ಧಿ, ಸಮಾನತೆ ಮತ್ತು ಪಾರದರ್ಶಕ ಆಡಳಿತದತ್ತ ಕ್ಷೇತ್ರ ಸಾಗಲಿ ಎಂಬುದೇ ನಮ್ಮ ಆಶಯ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆ: ಸುಗಮ ಮತ ಎಣಿಕೆಗೆ ಸಜ್ಜು
-
ಅಂಕಣ2 days agoಸಮರ್ಥ್ ಶಾಮನೂರು ಪ್ರಯಾಸದ ಗೆಲುವು ಮತ್ತು ಮುಂದಿನ ಸವಾಲುಗಳು
-
ದಿನದ ಸುದ್ದಿ5 days agoದಾವಣಗೆರೆ | ದೇಗುಲಗಳಲ್ಲಿ ನಿಧಿ ಶೋಧನೆ ಯತ್ನ ; ಆರು ಜನರ ಬಂಧನ
-
ದಿನದ ಸುದ್ದಿ14 hours agoಸಂಶೋಧಕರಿಂದ ಪಶ್ಚಿಮ ಘಟ್ಟಗಳಲ್ಲಿ ಮೂರು ಅಣಬೆಯ ಹೊಸ ಶಿಲೀಂಧ್ರ ಜಾತಿಗಳ ಪತ್ತೆ

