Connect with us

ಬಹಿರಂಗ

‘ಸನಾತನ ಧರ್ಮ’ದ ವಿರುದ್ದ ಬಂಡೆದ್ದ ಬಸವಣ್ಣ..!

Published

on

 

ಕುರಿ ಕೋಳಿ ಕಿರಿಮೀನು ತಿಂಬುವರಿಗೆಲ್ಲ ಕುಲಜ ಕುಲಜರೆಂದಂಬರು.
ಶಿವಗೆ ಪಂಚಾಮೃತವ ಕರೆವ ಪಶುವ ತಿಂಬ ಮಾದಿಗ ಕೀಳುಜಾತಿಯೆಂಬರು‌.
ಅವರೆಂತು ಕೀಳುಜಾತಿಯಾದರು? ಜಾತಿಗಳು ನೀವೇಕೆ ಕೀಳಾಗಿರೊ?.
ಬ್ರಾಹ್ಮಣನುಂಡುದು ಪುಲ್ಲಿಗೆ ಶೋಭಿತವಾಗಿ ನಾಯಿ ನೆಕ್ಕಿ ಹೋಯಿತು.
ಮಾದಿಗರುಂಡುದು ಪುಲ್ಲಿಗೆ ಬ್ರಾಹ್ಮಣಗೆ ಶೋಭಿತವಾಯಿತು.
ಅದೆಂತೆಂದಡೆ;
ಸಿದ್ದಲಿಕೆಯಾಯಿತು,
ಸಗ್ಗಳೆಯಾಯಿತು.
ಸಿದ್ದಲಿಕೆಯ ತುಪ್ಪವನು,ಸಗ್ಗಳೆಯ ನೀರನು
ಶುದ್ದವೆಂದು ಕುಡಿವ ಬುದ್ದಿಗೇಡಿ ವಿಪ್ರರಿಗೆ ನಾಯಕ ನರಕ ತಪ್ಪದಯ್ಯಾ;
ಉರಿಲಿಂಗಪೆದ್ದಿಗಳ ಅರಸು ಒಲ್ಲನವ್ವಾ.

ಹನ್ನೆರಡನೆಯ ಶತಮಾನದ ಬಸವಣ್ಣನ ಸಮಕಾಲಿನಳಾದ ಶರಣೆ ಬಂಡಾಯಗಾರ್ತಿ ಉರಿಲಿಂಗಪೆದ್ದಿಗಳ ಪುಣ್ಯ ಸ್ತ್ರೀ
ಕಾಳವ್ವೆಯ ಈ ವಚನ ಬ್ರಾಹ್ಮಣರು ನಿರ್ಮಿಸಿದ ಸನಾತನ ಅಮಾನುಷ ಪರಂಪರೆಯ ಜಾತಿ ಸಂಕುರವನ್ನು ಪುಡಿಮಾಡುತ್ತಾದೆ.
ಒಬ್ಬ ಕೆಳ ಜಾತಿಯ ದಲಿತ ಮಹಿಳೆ ಈ ರೀತಿಯ ಜಾತಿಯನ್ನೆ ಪ್ರಶ್ನಿಸುತ್ತಾಳೆ ಎಂದರೆ ಅವತ್ತಿನ ಆ ಕಾಲದ ಚಳುವಳಿಯ ಧೈರ್ಯವನ್ನ ಮೆಚ್ಚಲೆಬೇಕಾಗುತ್ತದೆ.

ಇಡೀ ವಿಶ್ವದಲ್ಲೆ ಮೊತ್ತ ಮೊದಲು ಕಾಯಕಜೀವಿಗಳು.ಗುಲಾಮರು.ಮಹಿಳೆಯರು.ಶ್ರಮಿಕರು. ದಲಿತರು.ಹಿಂದುಳಿದವರು ಧೈರ್ಯದಿಂದ ಮಾತನಾಡಿದ್ದು.ಬರೆದಿದ್ದು.
ಪ್ರತಿರೋಧವನ್ನು ಒಡ್ಡಿದ್ದು ಎಂದರೆ ಹನ್ನೆರಡನೆ ಶತಮಾನದ ಬಸವಾದಿ ಶರಣರ ಕಲ್ಯಾಣ ರಾಜ್ಯದಲ್ಲಿ.

ಜಾತಿಯ ತಳಪಾಯದಿಂದ ನಿಂತಿರುವ ಹಿಂದುಧರ್ಮದಲ್ಲಿ ಕುರಿ.ಕೋಳಿ.ಮೀನು.
ತಿನ್ನುವರನ್ನು ಸ್ವಲ್ಪ ಶ್ರೇಷ್ಠ ಜಾತಿಗಳೆನ್ನುತ್ತಾರೆ.ಆದರೆ ಶಿವನಿಗೆ ಪಂಚಾಮೃತ ಕೊಡುವ ಗೋವು ತಿಂದರೆ ಕೀಳುಮಾದಿಗ ಎನ್ನುವರು ಎಂದು ಬಂಡಾಯ ಸಾರುತ್ತಲೆ ಇಂತಹ ಕಟ್ಟುಪಾಡನ್ನು ಹೇರಿದ ಬ್ರಾಹ್ಮಣರ ಪಾಂಡಿತ್ಯಕ್ಕೆ ದಿಕ್ಕಾರ ಹೇಳುತ್ತಾಳೆ.
ಪ್ರಸ್ತುತ ದಿನಗಳಲ್ಲಿ ಗೋಹತ್ಯೆಯ ಹೇಸರಿನಲ್ಲಿ ಮುಗ್ದ ಅಮಾಯಕ ದಲಿತ ಹಾಗು ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ದೌರ್ಜನ್ಯಗೈಯ್ಯುವ ಮನುವಾದಿಗಳ ಮರ್ಮಕ್ಕೆ ಈ ವಚನ ಕೊಡಲಿ ಏಟು ಹಾಕುತ್ತದೆ.

ಶರಣರ ಕಾಲವೆಂದರೆ ಇಡೀ ಪ್ರಪಂಚದಲ್ಲಿ ಮೊತ್ತಮೊದಲು ಸಮಾನತೆ.ಸ್ವಾತಂತ್ರ್ಯ. ಸಹೋದರತೆ ಎಂಬ ತತ್ವಗಳು ತಲೆ ಎತ್ತಿದ ಕಾಲ.ಅಂದರೆ ಎಲ್ಲಾ ದೇಶಗಳಿಗಿಂತ ಮೊದಲು ಕಾಯಕ ವರ್ಗ ಸಮಾನತೆಗಾಗಿ ಒಂದೆಡೆ ಸೇರಿ ವೈಚಾರಿಕ ವೈಜ್ಞಾನಿಕವಾಗಿ ಸತ್ಯವನ್ನ ಶೋಧಿಸುತ್ತಲೇ ಅಮಾನವೀಯ ಜಾತಿವ್ಯವಸ್ಥೆ ಅಸಮಾನತೆಯ ವರ್ಣವ್ಯವಸ್ಥೆ ಅಜ್ಞಾನದ ಲಿಂಗ ತಾರತಮ್ಯ ಅವಿವೇಕದ ಮೌಡ್ಯಕಂದಚಾರಗಳಂತ ಬ್ರಾಹ್ಮಣರು ಸ್ಥಾಪಿಸಿದ್ದ ವಿಷವರ್ತುಲ ವ್ಯವಸ್ಥೆಯ ವಿರುದ್ದ ಚಳುವಳಿ ಮಾಡಿದ ಕ್ರಾಂತಿಕಾರಿ ದಿನಗಳವು.

ವೇದ ನಡುಗಿಸಿ ಶಾಸ್ತ್ರಕ್ಕೆ ನಿಗಳವನಿಕ್ಕಿದ ಬಸವಣ್ಣ ನೇರವಾಗಿ ಬ್ರಾಹ್ಮಣರ ಸನಾತನ ಸಂಪ್ರದಾಗಳನ್ನು ವಿರೋದಿಸುತ್ತಿದ್ದ ಅನುತ್ಪಾದಕರಾದ ಅಲ್ಪಸಂಖ್ಯಾತ ಬ್ರಾಹ್ಮಣರು ಉತ್ಪಾದಕವರ್ಗದ ಬಹುಸಂಖ್ಯಾತ ಶೂದ್ರರ ಮೇಲೆ ನಡೆಸುವ ಶೋಷಣೆಯನ್ನು ಖಂಡಿಸುತಿದ್ದರು. ಸೂಕ್ಮಮತಿಗಳಾದ ಬಸವಣ್ಣನವರು ಶೋಷಣೆಯ ವಿವಿಧ ಮೂಲಗಳನ್ನು ಅರಿತು ಬಹಳ ಎಚ್ಚರಿಕೆಯಿಂದ ಕಾಯಕ ಪರಂಪರೆಯ ಶ್ರಮಿಕರ ಬೆವರಿನ ಚಳುವಳಿಯನ್ನು ಆರಂಭಿಸಿದರು.ಬಸವಾದಿ ಶರಣರ ಚಳುವಳಿಯೆಂದರೆ ಶೂದ್ರಾತಿಶೂದ್ರ ಸಮುದಾಯಗಳು ಒಂದಾಗಿ ಮನುಷ್ಯತ್ವದ ಉಳಿವಿಗಾಗಿ ಮಾಡಿದ ದೊಡ್ಡ ಚಳುವಳಿಯಾಗಿದೆ. ಈ ಸತ್ಯವನ್ನು ಪ್ರತಿಯೊಬ್ಬರಿಗು ಅರ್ಥಮಾಡಿಸಬೇಕಿದೆ.

ಯುರೋಪಿನಲ್ಲಿ ಬಂಡವಾಳ ಶಾಹಿವ್ಯವಸ್ಥೆ ಜನ್ಮ ತಾಳಿದ್ದು 13 ನೇ ಶತಮಾನದಲ್ಲಿ.18ನೇಶತಮಾನದಲ್ಲಿ ಯೋರೋಪಿನ ಕೆಲವು ರಾಷ್ಟ್ರಗಳಲ್ಲಿ ಔದ್ಯೋಗಿಕ ಕ್ರಾಂತಿಯ ನಂತರ ಸಂಘಟಿತ ದುಡಿಯುವ ವರ್ಗ ರೂಪಗೊಂಡಿತು.ಕಾರ್ಲ್ ಮಾರ್ಕ್ .ಪ್ರೆಡೆರಿಕ್ ಎಂಗೆಲ್ಸ್ ಮುಂತಾದ ತತ್ವಜ್ಞಾನಿಗಳು ಶ್ರಮಿಕರ ಕಾಯಕಜೀವಿಗಳ ಹಾಗು ದುಡಿತುವ ವರ್ಗಗಳ ತತ್ವ ಸಿದ್ದಾಂತವನ್ನು ವೈಜ್ಞಾನಿಕವಾಗಿ ಬರೆದದ್ದು 19ನೇ ಶತಮಾನದಲ್ಲಿ.
ಅಲ್ಲದೆ ಬಂಡವಾಳಶಾಹಿಗಳ ವಿರುದ್ದ ಕಾರ್ಮಿಕರು ಹೋರಾಡುವ ಹಾಗು ಅಥವಾ ಉಳ್ಳವರು ಹಾಗು ಇಲ್ಲದವರ ನಡುವೆ ನಡೆದ ಅನೇಕ ಚಳುವಳಿಗಳು ಸಹ 19ನೇ ಶತಮಾನದಲ್ಲಿ.

ಆದರೆ ದುಡಿಯದೆ ಕಾಲಹರಣಮಾಡುತ್ತಾ ಹೋಮ.ಹವನ.ಯಜ್ಞ.
ಯಾಗಗಳೆಂಬ ಮೌಡ್ಯಕಂದಾಚಾರಗಳ ಮೂಲಕ ಜನರಲ್ಲಿ ಭಯಹುಟ್ಟಿಸಿ ವಸೂಲಿ ಮಾಡುತಿದ್ದ ಸಮುದಾಯದ ವಿರುದ್ದ ದುಡಿಯುವ ಕಾಯಕ ವರ್ಗ ಹೋರಾಡಿದ್ದು ಬಸವಣ್ಣನ ನೇತೃತ್ವದಲ್ಲಿ. ಸಮಾಜದ ಕಟ್ಟಕಡೆಯಲ್ಲಿ ಅಸ್ಪೃಶ್ಯತೆಗೊಳಗಾದ ದಲಿತಸಮುದಾಯಗಳಿಂದ ಹಿಡಿದು ಎಲ್ಲಾ ಕಾಯಕಜಾತಿಗಳನ್ನುಒಂದುಗೂಡಿಸಿ”ಕಾಯಕವೆ ಕೈಲಾಸ “ದ ತತ್ವದೊಂದಿಗೆ ಹೊಸಕ್ರಾಂತಿಗೆ ಮುನ್ನುಡಿ ಬರೆದ ವಿಶ್ವದ ಮೊದಲಿಗ ಎಂದರೆ ಬಸವಣ್ಣ.ಇಂತ ಕಾಯಕ ಗುಂಪಿನ ನಾಯಕನಾದ ಬಸವಣ್ಣ ಶತಶತಮಾನದಿಂದ ನೊಂದಬೆಂದ ಜನರಿಗೆ ನಗುವಾಗುತ್ತಾನೆ.
ಬಸವಣ್ಣನ ಈ ಕಾಯಕ ಚಳುವಳಿ ಅನೇಕ ಮಹತ್ತರವಾದ ಹೊಸಹೊಸ ಪರಿವರ್ತನೆಗೆ ಹಾಗು ವೈಚಾರಿಕ ಚಿಂತನೆಗೆ ಪ್ರಥಮ ಪ್ರಾಶಸ್ತ್ಯ ಕೊಡುತ್ತದೆ.

ಜಾತಿಸಂಕೋಲೆಗಳಿಂದ ಸಮಾನ ಹಕ್ಕುಗಳನ್ನು ಪಡೆಯುವ. ಛಿದ್ರಛಿದ್ರಗೊಂಡಿರುವ ವಿವಿಧ ಕಾಯಕ ಜಾತಿಗಳ ನುಡುವೆ ಒಗ್ಗಟ್ಟು.ಕಷ್ಟಸುಖದಲ್ಲಿ ಭಾಗಿಯಾಗುವ ಮಾನವೀಯಗುಣ. ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುವಂತ ಏಕದೇವ ಪ್ರಜ್ಞೆ. ಜ್ಞಾನದ ವೃದ್ದಿಗೆ ಅಕ್ಷರದ ಅರಿವು.ಸ್ತ್ರೀ ಪುರುಷ ಸಮಾನ.ಕಾಯಕ ಸಿದ್ದಾಂತಗಳೆಂಬ ಬದುಕಿನ ವಿಧಾನಗಾಳ ಮೌಲ್ಯವನ್ನು ಈ ಶರಣ ಚಳುವಳಿ ಕೊಡುತ್ತದೆ.

ಅಸ್ಪೃಶ್ಯ ಬಡವನಾಗಿ ಹುಟ್ಟುವುದು ಜನ್ಮಜನ್ಮದ ಮಹಾಪಾಪ ಎಂದು ಹೇಳುವ ವೈದಿಕರಿಗೆ ಬಸವಣ್ಣ” ಮನೆ ನೋಡ…ಬಡವರ ಮನ ನೋಡ..ಘನ ಕೂಡಲಸಂಗನಶರಣರು ಸ್ವತಂತ್ರಧೀರರು”ಎಂದು ಶೋಷಿತರ ಎದೆಯೊಳಗೆ ಸ್ವಾಭಿಮಾನ ಬಿತ್ತಿ ಶೋಷಣೆಯ ಅರಿವನ್ನು ಶರಣರಿಗೆ ಸಾರಿಹೇಳುತ್ತಾರೆ.

ಪ್ರಸ್ತುತ ದಿನಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಸಾಲುಸಾಲಾಗಿ ಹತ್ಯೆಗಳಾಗುತ್ತಿವೆ.ಆದರೆ ಬಸವಣ್ಣ ಹನ್ನೆರಡನೆಯ ಶತಮಾನದಲ್ಲಿ “ಅನುಭವ ಮಂಟಪ” ನಿರ್ಮಿಸಿ ಪ್ರತಿಯೊಬ್ಬರ ಅನುಭವ ಹಾಗು ಅಭಿವ್ಯಕ್ತಿ ಗೌರವಯುತವಾದದ್ದು.ಎಲ್ಲಾರು ಅನಭವ ಮಂಟಪದಲ್ಲಿ ಜಾತಿಎಲ್ಲೆಯಿಲ್ಲದೆ. ಮೇಲುಕೀಳೆನ್ನದೆ.ಬಡವಬಲ್ಲಿದ. ಸ್ತ್ರೀ ಪುರುಷ ಎಂಬ ಬೇಧ ಭಾವವಿಲ್ಲದೆ ಪ್ರತಿಯೊಬ್ಬರೂ ಸಮಾಜಲ್ಲಿ ಬೇರೊರಿದ್ದ ಕಂದಾಚಾರ ಮೌಡ್ಯವನ್ನು ವಿರೋಧಿಸುತ್ತಾ ಸನಾತನವಾದಿಗಳ ಪೈಶಾಚಿಕ ರೀತಿನೀತಿಗಳನ್ನು ತಮ್ಮ ವಚನದ ಮೂಲಕ ಕಟುವಾಗಿ ಟೀಕಿಸುತಿದ್ದರು.

“ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಅನುಭವ ಮಂಟಪ ನಿರ್ಮಿಸಿದ ಬಸವಣ್ಣ ಅದರ ಇಡೀ ನಾಯಕತ್ವವನ್ನು ತಳಸಮುದಾಯಗಳಿಗೆ ನೀಡುತ್ತಾನೆ. 770 ಪ್ರತಿನಿಧಿಗಳು (ಶರಣರು) ಇದ್ದ ಈ ಅನುಭವ ಮಂಟಪ ಒಂದು ರೀತಿಯಲ್ಲಿ ವಿಶ್ವದ ಮೊದಲನೆ ಪಾರ್ಲಿಮೆಂಟ್ ಆಗಿ ಕಂಡುಬರುತ್ತದೆ.ಅನುಭವ ಮಂಟಪದ ಶೂನ್ಯ ಪೀಠಾಧ್ಯಕ್ಷಾರದ ಅಲ್ಲಮ ಪ್ರಭಗಳು(ದಲಿತ) ಮೊದಲ ಸ್ಪೀಕರ್ ಆಗಿ ಕಾಣುತ್ತಾರೆ.ಅಲ್ಲಿ ಅಕ್ಕಮಹಾದೇವಿ. ಗಂಗಾಂಬಿಕೆ.ನೀಲಾಂಬಿಕೆ.ಸೂಳೆಸಂಕವ್ವ.ದಾನಮ್ಮ.ಕಲ್ಯಾಣವ್ವ.ಆಯ್ದಕ್ಕಿ ಲಕ್ಕಮ್ಮ.ಸತ್ಯಕ್ಕ.ಮುಂತಾದ ಮಹಿಳಾ ಶರಣೆಯರು.ಮಾದರ ದೂಳಯ್ಯ .ಮಡಿವಾಳ ಮಾಚಯ್ಯ.ಸಮಗಾರ ಹರಳಯ್ಯ.ಚನ್ನಬಸವಣ್ಣ.
ಡೋಹಾರ ಕಕ್ಕಯ್ಯ.ಅಜಗಣ್ಣ.ಕುರಬರ ಬೊಮ್ಮಣ್ಣ.ಬ್ರಾಹ್ಮಣರ ಮದುವರಸ.ನೂರಾರು ಜಾತಿಯ ಶರಣರು ಒಂದೆಡೆ ಸೇರಿ ತಮ್ಮ ಕಾಯಕನಿರತ ಅನಭವಗಳು ಹಾಗು ಸಮಾಜದ ಅಂಕುಡೊಂಕು. ದೇಶದ ಸಮಸ್ಯೆಗಳು ಅವುಗಳಿಗೆ ಪರಿಹಾರಗಳನ್ನು ಸೂಚಿಸುತ್ತ ಅಧಿವೇಶನದಲ್ಲಿ ಚರ್ಚಿಸುತಿದ್ದರು.

ಮಹಿಳೆಯರಿಗೆ ಮೊದಲು ವಿಶ್ವದಲ್ಲೆ ರಾಜಕೀಯ ಪ್ರಜ್ಞೆ ಹಾಗು ಸಮಾನತೆ ಸ್ವಾತಂತ್ರ್ಯಗಳನ್ನು ನೀಡಿದ ಏಕೈಕ ವ್ಯಕ್ತಿ ಬಸವಣ್ಣ.ಅಲ್ಲದೆ ಶ್ರಮಿಕವರ್ಗವನ್ನು ಒಂದೆಡೆ ಸೇರಿಸಿ ವೈಜ್ಞಾನಿಕ ಕ್ರಾಂತಿಗೆ ಅನುಗೊಳಿಸಿದ ವಿಶ್ವದ ಮೂದಲ ಸಂಘಟಕ ಬಸವಣ್ಣ .

ಬಸವಣ್ಣ ವಯಸ್ಕರ ಶಿಕ್ಷಣ ಪದ್ದತಿಯನ್ನು ಜಾರಿಗೆ ತಂದಿರುವುದು ಕೆಲವು ತಳಸಮುದಾಯಗಳು ಶರಣರು ಅನುಭವ ಮಂಟಪದಲ್ಲಿ ಅಕ್ಷರ ಕಲಿತು ವಚನಗಳ ರಚನೆಗೆ ಮುಂದಾಗುತ್ತಾರೆ. ಅಲ್ಲದೆ ದಲಿತರಿಗು ಮಹಿಳೆಯರಿಗು ಅಕ್ಷರದ ಅರಿವು ನೀಡುತಿದ್ದ ಬಸವಣ್ಣ ಜ್ಞಾನಕ್ಕೆ ಜಾತಿಭೇಧವಿಲ್ಲ ಎಂಬ ಮಾತನ್ನು ಸಾಬೀತು ಮಾಡಿದ್ದರು.ಹಾಗಾಗಿ ಬಹುಸಂಖ್ಯಾತ ವಚನಕಾರರು ದಲಿತರು .ಮಹಿಳೆಯರು ಹಾಗು ಹಿಂದುಳಿದ ವರ್ಗದವರಾಗಿದ್ದಾರೆ.ಇದು ಇಡೀ ಭಾರತದಲ್ಲೆ ಒಂದು ಹೊಸ ವಿಶಿಷ್ಟ ಪ್ರಯೋಗವಾಗಿದೆ.

ಈ ದಲಿತರು.ಮಹಿಳೆಯರು.ಹಿಂದುಳಿದವರು ವಚನಗಳ ಮೂಲಕ ಕನ್ನಡದಲ್ಲಿ ಬರೆದ ವಿಶ್ವದ ಮೂದಲ ಸಾಹಿತ್ಯವಾಗುತ್ತದೆ.ಏಕೆಂದರೆ ಈ ಸಂಧರ್ಭದಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಸಾಹಿತ್ಯ ರಚನೆಯಾಗಿರುವುದಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ.

ಇಡೀ ವಿಶ್ವದಲ್ಲಿನ ಯಾವ ದೇಶದಲ್ಲೂ ಸಂವಿಧಾನ ರಚನೆಯಾಗದ ದಿನಮಾನಗಳಲ್ಲಿ ಕನ್ನಡದ ಶರಣರು ಸಮಾನತೆ. ಸಹೋದರತೆ.ಸ್ವಾತಂತ್ರ್ಯ. ಭ್ರಾತೃತ್ವ.ಮೀಸಲಾತಿ.ಧಾರ್ಮಿಕ ಹಕ್ಕು.ಮುಂತಾದವುಗಳ ಕುರಿತು ವೈಜ್ಞಾನಿಕ ವೈಚಾರಿಕ ವಚನಗಳನ್ನು ರಚಿಸಿದ್ದರು.

1215ರಲ್ಲಿ ಇಂಗ್ಲೆಂಡ್ ನಲ್ಲಿ ಕಿಂಗ್ ಜಾನ್ ಮತ್ತು ಜಮಿನ್ದಾರರ ನಡುವೆ ಒಂದು ಬಹುಮುಖ್ಯ ಒಪ್ಪಂದವಾಗುತ್ತದೆ.ರಾಜನ ಅಧಿಕಾರವನ್ನು ಮೊಟಕುಗೊಳಿಸಿದಂಥ ವಿಶ್ವದ ಮೂದಲ ಒಪ್ಪಂದಕ್ಕೆ”ಮ್ಯಾಗ್ನಾಕಾಟ್” ಮಹಾ ಒಪ್ಪಂದ ಎಂದುಕರೆಯುತ್ತಾರೆ. 13 ನೇ ಶತಮನದಲ್ಲಿ ನಡೆದ ಈ ಒಪ್ಪಂದ “ಜಗತ್ತಿನ ಸಂವಿಧಾನಗಳ ತಾಯಿ” ಎಂದು ಇತಿಹಾಸತಜ್ಞರ ಅಭಿಪ್ರಾಯವಾಗಿದೆ. ಇದಕ್ಕಿಂತ ಮುಂಚೆ ಮಾನವ ಹಕ್ಕುಗಳ ಘನತೆ ಗೌರವಗಳಿಂದ ತುಂಬಿರುವ ವಚನಗಳನ್ನು ವಿಶ್ವಕ್ಕೆ ಅರ್ಥಮಾಡಿಸಿಕೊಡುವಲ್ಲಿ ಇಂಡಿಯಾ ಸೋತಿರುವುದು ನಮ್ಮ ದುರಂತವಾಗಿದೆ.

ಕೇವಲ ಒಂದೆ ಒಂದು ತಲೆಮಾರಿನ ಶ್ರಮಿಕರ ವರ್ಗ ಬಸವಣ್ಣನವರ ನೇತೃತ್ವದಲ್ಲಿ ಏನೆಲ್ಲಾ ಕ್ರಾಂತಿ ಮಾಡಿತು ಎಂಬುದು ನಿಜಕ್ಕು ಅಚ್ಚರಿಯಾಗುತ್ತದೆ.

ಬಸವಣ್ಣ ಮತ್ತು ಅಲ್ಲಮಾದಿ ಶರಣರ ಚಳುವಳಿಯು ಕಾಯಕ ಸಿದ್ದಾಂತಕ್ಕೆ ಬದ್ದವಾಗಿದೆ.” ಕಾಯಕವೆ ಕೈಲಾಸವೆಂಬ” ವಾಸ್ತವಿಕ ನೆಲೆಗಟ್ಟಿನ ಮೇಲೆ ನಿಂತಿದೆ.ದುಡಿಮೆಯೆ ದೇವರು ಎಂಬ ಸತ್ವ ಶರಣರ ಸಿದ್ದಾಂತದಲ್ಲಿದೆ.

“ಕ್ರೈಸ್ತರು ಯುರೋಪಿಯನಲ್ಲಿ ಸೃಷ್ಟಿಸಿದ್ದಕ್ಕಿಂತಲು ಭಯಂಕರವಾದ ನರಕವನ್ನು ಬ್ರಾಹ್ಮಣರು ಭಾರತದಲ್ಲಿ ಸೃಷ್ಟಿಸಿದ್ದಾರೆ” ಎಂದು ಕಾರ್ಲ್‌ ಮಾರ್ಕ್ಸ್‌ ಸುಮಾರು 150ವರ್ಷಗಳ ಹಿಂದೆ ಬರೆದ “ಫಸ್ಟ್‌ ವಾರ್ ಆಫ್ ಇಂಡಿಯನ್ ಇಂಡಿಪೆಂಡೆನ್ಸ್” ಗ್ರಂಥದಲ್ಲಿ ಹೇಳಿದ್ದಾರೆ.ಇದು ಸತ್ಯವೂ ಕೂಡ.ಆದರೆ ನಮ್ಮ ಬಸವಾದಿ ಪ್ರಮಥರು ಈ ಅಸಮಾನತೆಯ ನರಕವನ್ನು ಅರಿವುಗಳ ಮೂಲಕ ಸಡುತ್ತಾರೆ. ಬ್ರಾಹ್ಮಣ್ಯದ ಹಾಗು ಹಿಂದುತ್ವದ ವಿರುದ್ದ ಹುಟ್ಟಿಕೊಂಡ ಕಾಯಕ ಸಿದ್ದಾಂತ ಜಾತಿವಿನಾಶಕ್ಕಾಗಿ ಅಣಿಯಾಯಿತು.

ಮನುಧರ್ಮ ಸೃಷ್ಟಿಸಿದ ವರ್ಣವ್ಯವಸ್ಥೆಯನ್ನು ಕಟ್ಟಕಡೆಯ ಅಸ್ಪೃಶ್ಯ ದಲಿತ ಜಾತಿಯ ಸಮಗಾರ ಹರಳಯ್ಯ ಇಷ್ಟ ಲಿಂಗ ದೀಕ್ಷೆಯ ನಂತರ ಲಿಂಗವಂತರಾದರು.ಅಲ್ಲದೆ ಬಿಜ್ಜಳನ ಆಸ್ಥಾನದಲ್ಲಿದ್ದ ಮದುವರಸ ತಮ್ಮ ಪೂರ್ವಿಕರು ಮಾಡಿದ ಮೋಸದ ಅರಿವಾಗಿ ಬಸವನ ಬಳಿಗೆ ಬಂದು ಲಿಂಗದೀಕ್ಷೆ ಪಡೆದು ಲಿಂಗವಂತನಾಗುತ್ತಾನೆ.ಕೊನೆಗೆ ಶರಣ ಸಂಗಮದಲ್ಲಿ ಒಂದಾಗಿ ಸಹಸಧಸ್ಯರಾಗುತ್ತಾರೆ. ಜಾತಿವಿನಾಶಕ್ಕೆ ಮುನ್ನುಡಿ ಬರೆಯಲು ಬಸವಣ್ಣ ಮತ್ತು ಶರಣರು ಸಿದ್ದರಾದರು. ಸಮಗಾರ ಹರಳಯ್ಯನ ಹಾಗು ಬ್ರಾಹ್ಮಣರ ಮದುವರಸನ ಮಕ್ಕಳಿಗೆ ಮದುವೆ ನಿಶ್ಚಯ ಮಾಡಿದರು.ನಾವು ಜಾತಿ ತೊಳೆದು ಲಿಂಗವಂತರಾಗಿದ್ದೇವೆ ಎಂಬುದು ಅವರ ವಾದವಾಗಿತ್ತು.ಅಲ್ಲದೆ ಮಾನವ ಹಕ್ಕುಗಳ ಉಳಿವಿಗೋಸ್ಕರ ಜಾತಿನಾಶಕ್ಕಾಗಿ ಈ ಮದುವೆಯನ್ನು ಏರ್ಪಡಿಸಿದಾಗ ಕೆಲವು ಬ್ರಾಹ್ಮಣಪಟ್ಟಭದ್ರ
ಹಿತಾಸಕ್ತಿಗಳು ರಾಜ್ಯಾದ್ಯಂತ ಸುಳ್ಳು ಮೋಸವನ್ನು ಸತ್ಯವೆಂದು ನಂಬಿಸಿ ನೂರಾರು ಶರಣನ್ನು ಕಗ್ಗೊಲೆ ಮಾಡುತ್ತಾರೆ ಸತ್ಯಜ್ವಾಲೆಯಂತೆ ಪ್ರಜ್ವಲಿಸುತಿದ್ದ ವಚನಗಳ ಕಟ್ಟುಗಳಿಗೆ ಬೆಂಕಿ ಹಚ್ಚಿ ಸುಡುತ್ತಾರೆ.

1939 ರಿಂದ 1945 ರವರೆಗೆ ನಡೆದ ಎರಡನೆ ಮಹಾಯುದ್ದದಲ್ಲಿ ಕೋಟ್ಯಾಂತರ ಜನರು ಸಾಯುತ್ತಾರೆ. ಆಗ 1945 ರಲ್ಲಿ ವಿಶ್ವ ಸಂಸ್ಥೆ ಮಾನವ ಹಕ್ಕುಗಳ ಉಳಿವಿಗಾಗಿ ಸ್ಥಾಪನೆಯಾಗುತ್ತದೆ.ಆದರೆ ಹನ್ನೆರಡನೆ ಶತಮಾನದಲ್ಲಿ ನೂರಾರು ಶರಣ ಹತ್ಯೆಯು ಮಾನವ ಹಕ್ಕುಗಳಿಗೆ.ಹಾಗು ಅಸಮಾನತೆಯ ವಿರುದ್ದ ನಡೆದ ಚಳುವಳಿಯಾಗಿದೆ.ಹರಳಯ್ಯ ಮದುವರಸರು ಲಿಂಗವಂತರಾಗುವ ಮೂಲಕ ಮನುಧರ್ಮದಿಂದ ಸೇರಿಕೊಂಡಿದ್ದ ವರ್ಣ. ಜಾತಿಸಂಕೋಲೆಯನ್ನು ಮೀರಿದ್ದರು ಮನುಷ್ಷತ್ವದ ಉಳಿವಿಗೆ ಮನುಷ್ಯರಾಗಿ ಚಿಂತಿಸಿದ್ದರು.ಹರಳಯ್ಯನವರ ಮಗ ಶೀಲವಂತ ಮದುವರಸರ ಮಗಳು ಲಾವಣ್ಯವತಿ ಇವರು ಲಿಂಗವಂತರಾಗಿದ್ದರಿಂದ ಇವರ ಮದುವೆ ಸಹಜ ಸ್ಥಿತಿಯಲ್ಲಿರಬೇಕಿತ್ತು.ಆದರೆ ಮನುವಾದಿಗಳ ಯಥಾಸ್ಥಿತಿವಾದಕ್ಕೆ ಇಷ್ಟವಾಗಿರಲಿಲ್ಲ.

ಹಾಗಾಗಿ ಈ ಮೂಲಕ ಧರ್ಮನಾಶಕ್ಕೆ.
ಸಂಪ್ರದಾಯಗಳ ದಿಕ್ಕರಿಸುವಿಕೆ.ಈ ದೇಶದ ನಾಶಕ್ಕೆ.ಹಾಗು ರಾಜಧರ್ಮದ ವಿರುದ್ದವಾದ ಮದುವೆಯೆಂದು ಸನಾತನವಾದಿಗಳು ಸುಳ್ಳಬ್ಬಿಸಿ ಗದ್ದಲ ಗಲಾಟೆ ಅಚ್ಚುತ್ತಾರೆ. ಆದರೆ ಶರಣರ ಅಭಿಪ್ರಾಯದಲ್ಲಿ ಧರ್ಮಬಾಹಿರ.ಮನುಷ್ಯರ.ನಾಗರೀಕ.ಲಿಂಗವಂತರ ಮದುವೆಯಾಗಿತ್ತು. ಒಂದು ರೀತಿಯಲ್ಲಿ ಈ ಶರಣ ಚಳುವಳಿ ಎಂಬುದು ಮೇಲುಕೀಳು ಎಂದು ಪ್ರತಿಪಾದಿಸುವ ಹಾಗು ಮೇಲುಕೀಳಿನ ಅಸಮಾನತೆಯ ಬೆನ್ನುಮೂಳೆ ಮುರಿದ ಲಿಂಗಾಯ್ತಧರ್ಮಕ್ಕು ನಡುವೆ ನಡೆವ ಸಮರವಾಗಿತ್ತು. ಮನುವಾದದ ಕ್ರೌರ್ಯದ ವಿರುದ್ದ ಚಳುವಳಿ ರೂಪಿಸಿದ್ದ ಶರಣರು ತಮ್ಮ ಕಾಯಕ ಬೆವರಿನ ಸಮಾನತೆಯ ಸಿದ್ದಾಂತಕ್ಕೆ ತಮ್ಮ ಪ್ರಾಣವನ್ನು ಕಳೆದುಕೊಳ್ಳಲು ಸಿದ್ದರಾದರು.

ನಾಳೆ ಬಪ್ಪುದು ಇಂದೆ ಬರಲಿ
ಇಂದು ಬಪ್ಪುದು ಇಗೆ ಬರಲಿ”..ಎಂದು
ಕ್ರಾಂತಿಗೆ ಎದೆಕೊಟ್ಟು ನಿಂತರು.ಮಾನವೀಯತೆಯ ಕೊ‌ಂಡಿಯಂತಿರುವ ಈ ಶರಣರ ಮದುವೆಗೆ ವೈದಿಕರ ಹಾಗು ಬಿಜ್ಜಳನ ವಿರೋಧವಿದ್ದರು ಸಾವಿಗಂಜದೆ ಸಮಾನತೆಯ ಉಳಿವಿಗೆ ವಿಶ್ವದ ಮೊದಲ ಅಂತರ್ಜಾತಿ ವಿವಾಹವನ್ನು ಮಾಡಿಸಿದರು.ಆಗ ಸನಾತನವಾದಿ ವೈದಿಕಶಾಹಿ ಕ್ರೂರಿ ಬ್ರಾಹ್ಮಣರು ಶರಣರ ಕಣ್ಣುಗಳನು ಕೀಳಿಸಿ ಆನೆಕಾಲಿಗೆ ಕಟ್ಟಿ ಎಳೆಸಿ ಗಜಕಾಲುಗಳಿಂದ ಶರಣರ ತಲೆ ತುಳಿಸಿ ಕೊಲೆಗೈದರು.ಶರಣರ ತತ್ವ ಸಿದ್ದಾಂತ ಮಾನವಹಕ್ಕುಗಳ ಸಂಪತ್ತಾಗಿದ್ದ ವಚನಗಳನ್ನು ಉಳಿಸಲು ಶರಣರು ದೇಶಾಂತರ ಹೊರಟರು.ಸನಾತನಿ ವ್ಯಾಘ್ರರು ಸಿಕ್ಕಸಿಕ್ಕವರ ಶರಣರ ರುಂಡಗಳನ್ನು ಚಂಡಾಡಿ ದೇಹಗಳನ್ನು ತುಂಡು ತುಂಡಾಗಿ ಕತ್ತರಿಸಿದರು.ಒಂದು ಜಾತ್ಯಾತೀತ ಮದುವೆಗೆ ಶರಣರು ಸರ್ವಸ್ವವನ್ನೂ ಕಳೆದುಕೊಂಡರು.
ಸಮಾನತೆಗಾಗಿ ಹುತಾತ್ಮ ರಾದರು.

ಮಾನವ ಘನತೆಯ ರಕ್ಷಣೆಗಾಗಿ “ನಡೆ ಒಂದೆ ನುಡಿ ಒಂದೆ” ಸಿದ್ಧಾಂತದಿಂದ ಕೂಡಿದ ತತ್ವ ಕ್ಕಾಗಿ ಅನೇಕ ಸಾತ್ವಿಕರು ಹುತಾತ್ಮರಾಗಲು ಕಾರಣವಾದ”ಕಲ್ಯಾಣ ಕ್ರಾಂತಿ “ಎಂಬ ಘನಘೋರ ಘಟನೆ ಮಾನವ ಚರಿತ್ರೆಯಲ್ಲಿ ಮತ್ತೊಂದಿಲ್ಲ ಎಂದು ಶರಣ ಸಾಹಿತ್ಯದ ಸಂಶೋಧಕ ರಂಜಾನ್ ದರ್ಗರವರು ಹೇಳುತ್ತಾರೆ.ಅವರು ಮುಂದುವರೆದು “ನಿಜವಾದ ಅರ್ಥದಲ್ಲಿ ಆ ಘಟನೆ ಕಲ್ಯಾಣ ಕ್ರಾಂತಿ ಅಲ್ಲ.ಕಲ್ಯಾಣದಲ್ಲಿ ಬಸವಾದಿ ಶರಣರಿಂದ ನಡೆಯಬೇಕಿದ್ದ ಕ್ರಾಂತಿಯನ್ನು ತಡೆದಂಥ ಮನುವಾದಿಗಳ ಕ್ಷಿಪ್ರ ಕ್ರಾಂತಿ ಮಾನವೀಯತೆಯ ಮೇಲೆ ನಡೆದ ಅತ್ಯಾಚಾರವೆನ್ನುತ್ತಾರೆ.

ಬಾಬಸಾಹೇಬ ಅಂಬೇಡ್ಕರ್ ರವರು ಭಾರತದ ಚರಿತ್ರೆಯನ್ನು ವಿಶ್ಲೇಷಿಸುವಾಗ ಬುದ್ದನ ಕ್ರಾಂತಿಗೆ ಬ್ರಾಹ್ಮಣರ ಪ್ರತಿಕ್ರಾಂತಿಯಾಯಿತು ಇದರಿಂದ ಮನುವ್ಯವಸ್ಥೆಯ ವಿಸ್ತಾರವಾಗುತ್ತದೆ ತನ್ನ ಅಸಮಾನತೆಯ ಕ್ರೌರ್ಯದ ನಾಲಿಗೆಯನ್ನು ಚಾಚುತ್ತದೆ ಎಂದು ಹೇಳುತ್ತಾರೆ. ಕರ್ನಾಟಕದಲ್ಲಿ ಬಸವಶರಣರ ಕಲ್ಯಾಣ ಕ್ರಾಂತಿಯ ವಿರುದ್ದ ಕ್ಷಿಪ್ರ ಕ್ರಾಂತಿ ಮಾಡಿದ್ದು ಚರಿತ್ರೆಯ ದುರಂತ.

ಅದೇನೆ ಇರಲಿ ಆದರೆ ಸನಾತನಿಗಳ ಅನಿಷ್ಟ ಸಂಪ್ರದಾಯಗಳ ವಿರುದ್ದ ಈ ಕಲ್ಯಾಣ ಶರಣರ ಸಮಾನತೆ ಹಾಗು ಜಾತಿವಿನಾಶದ ಮದುವೆಯನ್ನು ಇತಿಹಾಸ ಮರೆಯಬಾರದು.ಬಸವಾದಿ ಶರಣರು ಮನುವ್ಯವಸ್ಥೆಯ ಮರಕ್ಕೆ ಕೊಡಲಿ ಏಟಾಕಿದ್ದು ನಿಜ. ಸತ್ಯಕ್ಕೆ.ಸಮಾನತೆಗೆ.ಮಾನವ ಹಕ್ಕುಗಳ ಘನತೆಗೆ.ಜಾತಿವಿನಾಶಕ್ಕೆ.ವರ್ಣನಿರ್ನಾಮಕ್ಕೆ.ಮೇಲುಕೀಳು ಸ್ತ್ರೀ ಪುರುಷ.ಬಡವ ಬಲ್ಲಿದ ಎಂಬ ಭೇಧಗಳ ವಿರುದ್ದ ಬಸವಣ್ಣನ ಕ್ರಾಂತಿಯಾಗಿತ್ತು. ಮನುಷ್ಯತ್ವದ ಉಳಿವಿಗಾಗಿ” ಕಾಯಕ ಸಿದ್ದಾಂತಕ್ಕಾಗಿ ಕಲ್ಯಾಣದ ಕ್ರಾಂತಿಯಾಯಿತು.ಅಲ್ಲಿ ನೊಂದವರು ನೋವುಗಳನ್ನು ಹಂಚಿಕೊಳ್ಳುವ ವಿಶ್ವದ ಮೊದಲ ಪಾರ್ಲಿಮೆಂಟ್ ಅನುಭವ ಮಂಟಪವಾಗಿತ್ತು.

ಶರಣರು ಹತ್ಯೆಯಾಗಿ ಸತ್ತರು.ಅವರ ವೈಚಾರಿಕ. ವೈಜ್ಞಾನಿಕ ಪ್ರಗತಿಪರ ನೆಲೆಗಟ್ಟಿನಲ್ಲಿ ವಚನಗಳ ಮೂಲಕ ಹಾಗು ತಾವು ಮಾಡಿದ ಜಾತಿವಿನಾಶದ ತ್ಯಾಗಕ್ಕಾಗಿ ಜೀವದ ಅರ್ಪಣೆ ಶೋಷಿತರ ಎದೆಯೊಳಗೆ ಇಂದಿಗು ಬೆಳಕಾಗಿ ನಂದಾದೀಪವಾಗಿ ಪ್ರಜ್ವಲಿಸುತ್ತಿದೆ.

ಇತ್ತೀಚೆಗೆ ಲಿಂಗಾಯ್ತರು ಬಸವಣ್ಣನವರನ್ನು ಜಾತಿಯ ನಾಯಕನಂತೆ ಬಿಂಬಿಸುತಿದ್ದಾರೆ ಕೆಲವು ಬಸವಭಕ್ತರು ಆರ್.ಎಸ್.ಎಸ್.ಚೆಡ್ಡಿಯೊಳಗೆ ಬಸವಣ್ಣನ ಸಿದ್ದಾಂತಗಳನ್ನ ಅದುಮಿಟ್ಟು ಹಿಂದು ದೇವರುಗಳನ್ನು ವೈಭವಿಕರೀಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.ಬಸವಣ್ಣನ ಹೆಸರಿನಲ್ಲಿ ಸಾವಿರಾರು ಮಠಮಾನ್ಯಗಳು ನಿರ್ಮಾಣವಾದರು ಇವತ್ತು ವ್ಯವಹಾರದ ಕೇಂದ್ರಗಳಾಗಿವೆ.ಪ್ರತ್ಯೇಕ ಲಿಂಗಾಯ್ತಧರ್ಮಕ್ಕೆ ಕೆಲವು ಮನುಚೇಲಗಳು ವಿರೋಧ ಮಾಡುತ್ತಿವೆ.ಬಸವಣ್ಣನ ಹೆಸರಿಗೆ ಕೆಸರೆರೆಚುವ ಸಂಘಪರಿವಾರದವರೊಂದಿಗೆ ಸೇರಿ ಹಾದಿತಪ್ಪುತಿದ್ದಾರೆ.

ಈ ಬಸವಾದಿ ಶರಣರ ಹತ್ಯೆಯನ್ನು ಕುರಿತು ಆಳವಾದ ಅಧ್ಯಯನ ಮಾಡಿ “ಕೆಟ್ಟಿತ್ತೊ ಕಲ್ಯಾಣ” ಎಂಬ ಸಂಶೋಧನಾ ಕೃತಿ ಬರೆದ ಪ್ರಗತಿಪರ ಸಂಶೋಧಕ ಎಂ.ಎಂ.ಕಲ್ಬುರ್ಗಿ ಹಿಂದುತ್ವದ ಬುಲೇಟಿಗೆ ಬಲಿಯಾದರು.ಬಸಾವದಿ ಶರಣ ಸಿದ್ದಾಂತವನ್ನು ಎದೆಗುಂದದೆ ದೈರ್ಯವಾಗಿ ಹೇಳುತಿದ್ದ ಗೌರಿ ಲಂಕೇಶ್ ಮನುಸೂಳೆಮಕ್ಕಳ ಬಂದೂಕಿಗೆ ಎದೆಕೊಟ್ಟು ಹತ್ಯಯಾದಳು.ಹೀಗೆ ಶರಣರ ಕ್ರಾಂತಿಕಾರಿ ವಿಚಾರಗಳನ್ನು ಹೇಳುವರನ್ನು ಕೊಲ್ಲುವ. ಶರಣರ ಬಗ್ಗೆ ಬರೆಯುವರ ಕೈಗಳನ್ನು ಕತ್ತರಿಸುವ ಸನಾತನವಾದಿಗಳ ದಿನೆದನೆ ಹಣಬೆಗಳಂತೆ ಬೆಳೆಯುತ್ತಿರುವುದು ಬಸವನ ಅನುಯಾಯಿಗಳು ಗಂಭೀರವಾಗಿ ಚಿಂತನೆ ಮಾಡಬೇಕಿದೆ.

ಬಸವಾದಿ ಶರಣರ ಸಿದ್ದಾಂತದಲ್ಲಿ ಈ ದೇಶದ ಸಂವಿಧಾನ ಅಡಗಿದೆ ಎಂಬುದನ್ನು ಪ್ರತಿಯೊಬ್ಬ ಇಂಡಿಯನ್ಸ್ ಅರ್ಥ ಮಾಡಿಕೊಂಡು ಮತ್ತೊಮ್ಮೆ ಕಲ್ಯಾಣವೆಂಬ ಚಳುವಳಿಯನ್ನು ಹೊಸ ರೀತಿಯಲ್ಲಿ ಕಟ್ಟ ಬೇಕಿದೆ. ಮಾನವನ ಘನತೆಯ ಚಳುವಳಿಗೆ ಎಲ್ಲರು ಸ್ವಾಭಿಮಾನದಂದ ಬರಬೇಕಾದ ದರ್ದು ಇಂದು ತುರ್ತಾಗಿದೆ.ಮಾನವೀಯತೆಯ ಕೊ‌ಂಡಿಯಂತಿರುವ ಈ ಶರಣರ ಮದುವೆಗೆ ವೈದಿಕರ ಹಾಗು ಬಿಜ್ಜಳನ ವಿರೋಧವಿದ್ದರು ಸಾವಿಗಂಜದೆ ಸಮಾನತೆಯ ಉಳಿವಿಗೆ ವಿಶ್ವದ ಮೂದಲ ಅಂತರ್ಜಾತಿ ವಿವಾಹವನ್ನು ಮಾಡಿಸಿದರು.

ಆಗ ಸನಾತನವಾದಿ ವೈದಿಕಶಾಹಿ ಕ್ರೂರಿ ಬ್ರಾಹ್ಮಣರು ಶರಣರ ಕಣ್ಣುಗಳನು ಕೀಳಿಸಿ ಆನೆಕಾಲಿಗೆ ಕಟ್ಟಿ ಎಳೆಸಿ ಗಜಕಾಲುಗಳಿಂದ ಶರಣರ ತಲೆ ತುಳಿಸಿ ಕೊಲೆಗೈದರು.ಶರಣರ ತತ್ವ ಸಿದ್ದಾಂತ ಮಾನವಹಕ್ಕುಗಳ ಸಂಪತ್ತಾಗಿದ್ದ ವಚನಗಳನ್ನು ಉಳಿಸಲು ಶರಣರು ದೇಶಾಂತರ ಹೊರಟರು. ಹಿಂದುತ್ವದವ್ಯಾಘ್ರರು ಸಿಕ್ಕಸಿಕ್ಕವರ ಶರಣರ ರುಂಡಗಳನ್ನು ಚಂಡಾಡಿ ದೇಹಗಳನ್ನು ತುಂಡು ತುಂಡಾಗಿ ಕತ್ತರಿಸಿದರು.ಒಂದು ಜಾತ್ಯಾತೀತ ಮದುವೆಗೆ ಶರಣರು ಸರ್ವಸ್ವವನ್ನೂ ಕಳೆದುಕೊಂಡರು.ಸಮಾನತೆಗಾಗಿ
ಹುತಾತ್ಮ ರಾದರು.

ಮಾನವ ಘನತೆಯ ರಕ್ಷಣೆಗಾಗಿ “ನಡೆ ಒಂದೆ ನುಡಿ ಒಂದೆ” ಸಿದ್ಧಾಂತದಿಂದ ಕೂಡಿದ
ತತ್ವಕ್ಕಾಗಿ ಅನೇಕ ಸಾತ್ವಿಕರು ಹುತಾತ್ಮರಾಗಲು ಕಾರಣವಾದ”ಕಲ್ಯಾಣ ಕ್ರಾಂತಿ ”
ಎಂಬ ಘನಘೋರ ಘಟನೆ ಮಾನವ ಚರಿತ್ರೆಯಲ್ಲಿ ಮತ್ತೊಂದಿಲ್ಲ ಎಂದು ಶರಣ ಸಾಹಿತ್ಯದ ಸಂಶೋಧಕ ರಂಜಾನ್ ದರ್ಗರವರು ಹೇಳುತ್ತಾರೆ. ಅವರು ಮುಂದುವರೆದು “ನಿಜವಾದ ಅರ್ಥದಲ್ಲಿ ಆ ಘಟನೆ ಕಲ್ಯಾಣ ಕ್ರಾಂತಿ ಅಲ್ಲ.ಕಲ್ಯಾಣದಲ್ಲಿ ಬಸವಾದಿ ಶರಣರಿಂದ ನಡೆಯಬೇಕಿದ್ದ ಕ್ರಾಂತಿಯನ್ನು ತಡೆದಂಥ ಮನುವಾದಿಗಳ ಕ್ಷಿಪ್ರ ಕ್ರಾಂತಿ ಮಾನವೀಯತೆಯ ಮೇಲೆ ನಡೆದ ಅತ್ಯಾಚಾರವೆನ್ನುತ್ತಾರೆ.

ಬಾಬಸಾಹೇಬ ಅಂಬೇಡ್ಕರ್ ರವರು ಭಾರತದ ಚರಿತ್ರೆಯನ್ನು ವಿಶ್ಲೇಷಿಸುವಾಗ ಬುದ್ದನ ಕ್ರಾಂತಿಗೆ ಬ್ರಾಹ್ಮಣರ ಪ್ರತಿಕ್ರಾಂತಿಯಾಯಿತು ಇದರಿಂದ ಮನುವ್ಯವಸ್ಥೆಯ ವಿಸ್ತಾರವಾಗುತ್ತದೆ ತನ್ನ ಅಸಮಾನತೆಯ ಕ್ರೌರ್ಯದ ನಾಲಿಗೆಯನ್ನು ಚಾಚುತ್ತದೆ ಎಂದು ಹೇಳುತ್ತಾರೆ. ಕರ್ನಾಟಕದಲ್ಲಿ ಬಸವಾದಿ ಶರಣರ ಕಲ್ಯಾಣ ಕ್ರಾಂತಿಯ ವಿರುದ್ದ ಕ್ಷಿಪ್ರ ಕ್ರಾಂತಿ ಮಾಡಿದ್ದು ಚರಿತ್ರೆಯ ದುರಂತ.

ಅದೇನೆ ಇರಲಿ ಆದರೆ ಸನಾತನಿಗಳ ಅನಿಷ್ಟ ಸಂಪ್ರದಾಯಗಳ ವಿರುದ್ದ ಈ ಕಲ್ಯಾಣ ಶರಣರ ಸಮಾನತೆ ಹಾಗು ಜಾತಿವಿನಾಶದ ಮದುವೆಯನ್ನು ಇತಿಹಾಸ ಮರೆಯಬಾರದು.ಬಸವಾದಿ ಶರಣರು ಮನುವ್ಯವಸ್ಥೆಯ ಮರಕ್ಕೆ ಕೊಡಲಿ ಏಟಾಕಿದ್ದು ನಿಜ. ಸತ್ಯಕ್ಕೆ.ಸಮಾನತೆಗೆ.ಮಾನವ ಹಕ್ಕುಗಳ ಘನತೆಗೆ.ಜಾತಿವಿನಾಶಕ್ಕೆ.ವರ್ಣನಿರ್ನಾಮಕ್ಕೆ.ಮೇಲುಕೀಳು ಸ್ತ್ರೀ ಪುರುಷ.ಬಡವ ಬಲ್ಲಿದ ಎಂಬ ಭೇದಗಳ ವಿರುದ್ದ ಬಸವಣ್ಣನ ಕ್ರಾಂತಿಯಾಗಿತ್ತು.
ಮನುಷ್ಯತ್ವದ ಉಳಿವಿಗಾಗಿ” ಕಾಯಕ ಸಿದ್ದಾಂತಕ್ಕಾಗಿ ಕಲ್ಯಾಣದ ಕ್ರಾಂತಿಯಾಯಿತು.ಅಲ್ಲಿ ನೊಂದವರು ನೋವುಗಳನ್ನು ಹಂಚಿಕೊಳ್ಳುವ ವಿಶ್ವದ ಮೂದಲ ಪಾರ್ಲಿಮೆಂಟ್ ಎಂಬುದು ಅನುಭವ ಮಂಟಪವಾಗಿತ್ತು.

ಶರಣರು ಹತ್ಯೆಯಾಗಿ ಸತ್ತರು.ಅವರ ವೈಚಾರಿಕ. ವೈಜ್ಞಾನಿಕ ಪ್ರಗತಿಪರ ನೆಲೆಗಟ್ಟಿನಲ್ಲಿ ವಚನಗಳ ಮೂಲಕ ಹಾಗು ತಾವು ಮಾಡಿದ ಜಾತಿವಿನಾಶದ ತ್ಯಾಗಕ್ಕಾಗಿ ಜೀವದ ಅರ್ಪಣೆ ಶೋಷಿತರ ಎದೆಯೊಳಗೆ ಇಂದಿಗು ಬೆಳಕಾಗಿ ನಂದಾದೀಪವಾಗಿ ಪ್ರಜ್ವಲಿಸುತ್ತಿದೆ.
ಇತ್ತೀಚೆಗೆ ಲಿಂಗಾಯ್ತರು ಬಸವಣ್ಣನವರನ್ನು ಜಾತಿಯ ನಾಯಕನಂತೆ ಬಿಂಬಿಸುತಿದ್ದಾರೆ ಕೆಲವು ಬಸವಭಕ್ತರು
ಆರ್.ಎಸ್.ಎಸ್.ಚೆಡ್ಡಿಯೊಳಗೆ ಬಸವಣ್ಣನ ಸಿದ್ದಾಂತಗಳನ್ನ ಅದುಮಿಟ್ಟು
ಹಿಂದು ದೇವರುಗಳನ್ನು ವೈಭವಿಕರೀಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಬಸವಣ್ಣನ ಹೆಸರಿನಲ್ಲಿ ಸಾವಿರಾರು ಮಠಮಾನ್ಯಗಳು ನಿರ್ಮಾಣವಾದರು ಇವತ್ತು ವ್ಯವಹಾರದ ಕೇಂದ್ರಗಳಾಗಿವೆ.ಪ್ರತ್ಯೇಕ ಲಿಂಗಾಯ್ತಧರ್ಮಕ್ಕೆ ಕೆಲವು ಮನುಚೇಲಗಳು ವಿರೋಧ ಮಾಡುತ್ತಿವೆ.ಬಸವಣ್ಣನ ಹೆಸರಿಗೆ ಮಸಿಬಳಿಯುವ ಸಂಘಪರಿವಾರದವರೊಂದಿಗೆ ಸೇರಿ ಹಾದಿತಪ್ಪುತಿದ್ದಾರೆ.

ಈ ಬಸವಾದಿ ಶರಣರ ಹತ್ಯಯನ್ನು ಕುರಿತು ಆಳವಾದ ಅಧ್ಯಯನ ಮಾಡಿ “ಕೆಟ್ಟಿತ್ತೊ ಕಲ್ಯಾಣ” ಎಂಬ ಸಂಶೋಧನಾ ಕೃತಿ ಬರೆದ ಪ್ರಗತಿಪರ ಸಂಶೋಧಕ ಎಂ.ಎಂ.ಕಲ್ಬುರ್ಗಿ ಹಿಂದುತ್ವದ ಬುಲೇಟಿಗೆ ಬಲಿಯಾದರು.ಬಸಾವದಿ ಶರಣ ಸಿದ್ದಾಂತವನ್ನು ಎದೆಗುಂದದೆ ದೈರ್ಯವಾಗಿ ಹೇಳುತಿದ್ದ ಗೌರಿ ಲಂಕೇಶ್ ಮನುಸೂಳೆಮಕ್ಕಳ ಬಂದೂಕಿಗೆ ಎದೆಕೊಟ್ಟು ಹತ್ಯೆಯಾದಳು.ಹೀಗೆ ಶರಣರ ಕ್ರಾಂತಿಕಾರಿ ವಿಚಾರಗಳನ್ನು ಹೇಳುವರನ್ನು ಕೊಲ್ಲುವ. ಶರಣರ ಬಗ್ಗೆ ಬರೆಯುವರ ಕೈಗಳನ್ನು ಕತ್ತರಿಸುವ ಸನಾತನವಾದಿಗಳು ದಿನೆದನೆ ಹಣಬೆಗಳಂತೆ ಬೆಳೆಯುತ್ತಿರುವುದು ಬಸವನ ಅನುಯಾಯಿಗಳು ಗಂಭೀರವಾಗಿ ಚಿಂತನೆ ಮಾಡಬೇಕಿದೆ.

ಬಸವಾದಿ ಶರಣರ ಸಿದ್ದಾಂತದಲ್ಲಿ ಈ ದೇಶದ ಸಂವಿಧಾನ ಅಡಗಿದೆ ಎಂಬುದನ್ನು ಪ್ರತಿಯೊಬ್ಬ ಇಂಡಿಯನ್ಸ್ ಅರ್ಥ ಮಾಡಿಕೊಂಡು “ಮತ್ತೊಮ್ಮೆ ಕಲ್ಯಾಣ”ವೆಂಬ ಚಳುವಳಿಯನ್ನು ಹೊಸ ರೀತಿಯಲ್ಲಿ ಕಟ್ಟ ಬೇಕಿದೆ. ಮಾನವನ ಘನತೆಯ ಚಳುವಳಿಗೆ ಎಲ್ಲರು ಸ್ವಾಭಿಮಾನದಂದ ಬರಬೇಕಾದ ದರ್ದು ಇಂದು ತುರ್ತಾಗಿದೆ.

ಹುಚ್ಚಂಗಿ ಪ್ರಸಾದ್ ಸಂತೇಬೆನ್ನೂರು

ಈ ಲೇಖನ ಇಂಗ್ಲಿಷ್ ಭಾಷೆಗೆ ಅನುವಾದಗೊಂಡಿದ್ದು, ಅದರ ಲಿಂಕ್ ಇಲ್ಲಿದೆ. ಕ್ಲಿಕ್ ಮಾಡಿ ಓದಿ.

Basavanna – A man who rebelled against Sanatana Tradition

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್‌ಮೆಂಟ್‌ಗೆ ‘ಡೆಮಾಲಿಷನ್’ ಶುರು!

Published

on

bengaluru-koodlugate-snn-raj-eternia-18-floor-building-demolition
ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ

ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ


ಸುದ್ದಿದಿನ,ಬೆಂಗಳೂರು:
ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ಎಸ್ಟೇಟ್‌ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್‌ಎನ್‌ಎನ್‌ ರಾಜ್‌ ಕಾರ್ಪ್‌ ಸಂಸ್ಥೆಯು ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ತನ್ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್‌ಮೆಂಟ್‌ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.

₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ

ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ

ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್‌ಎನ್‌ಎನ್‌ ಅಪಾರ್ಟ್‌ಮೆಂಟ್‌ ನಿರ್ದೇಶಕ ಅನೂಜ್‌ ತಿಳಿಸಿದ್ದಾರೆ. ಫ್ಲ್ಯಾಟ್‌ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.

ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್‌ ನಿರ್ಮಾಣ

ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್‌ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್‌ಗಳು ಮುಂಗಡವಾಗಿ ಬುಕ್‌ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.

ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.

Continue Reading

ದಿನದ ಸುದ್ದಿ

ಪಾಕ್‌ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್‌ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ

Published

on

ಪಾಕ್‌ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್‌ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ

ಸುದ್ದಿದಿನ,ಜಮ್ಮುಕಾಶ್ಮೀರ: ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಮತ್ತೆ ಡ್ರೋನ್ ಹಾರಾಟದ ಆತಂಕ ಎದುರಾಗಿದೆ. ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್‌ನಲ್ಲಿ ಪಾಕಿಸ್ತಾನ ಮೂಲದ್ದೆಂದು ಶಂಕಿಸಲಾದ ಡ್ರೋನ್‌ವೊಂದು ಕಾಣಿಸಿಕೊಂಡಿರುವುದು ಭದ್ರತಾ ಪಡೆಗಳನ್ನು ಅಲರ್ಟ್ ಮಾಡಿದೆ. ಗಡಿಯಾಚೆಯಿಂದ ನಡೆಯಬಹುದಾದ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ತಡೆಯಲು ಸೇನೆ ಹಾಗೂ ಭದ್ರತಾ ಪಡೆಗಳು ನಿಗಾ ಮತ್ತಷ್ಟು ಬಿಗಿಗೊಳಿಸಿವೆ.

ಹೈಲೈಟ್ಸ್

  • ಪೂಂಚ್‌ನ ಮೆಂಧರ್ ಸೆಕ್ಟರ್‌ನಲ್ಲಿ ಶಂಕಿತ ಡ್ರೋನ್ ಹಾರಾಟ
  • 🇵🇰 ಡ್ರೋನ್ ಪಾಕಿಸ್ತಾನದ ದಿಕ್ಕಿಗೆ ವಾಪಸ್ ತೆರಳಿದ ಶಂಕೆ
  • ಡ್ರೋನ್‌ನಿಂದ ವಸ್ತುಗಳನ್ನು ಕೆಳಗೆ ಹಾಕಲಾಗಿದೆಯೇ ಎಂದು ಶೋಧ
  • ಉಧಂಪುರ, ಕಥುವಾ, ರಾಜೌರಿಯಲ್ಲಿ ಜಂಟಿ ಸರ್ಚ್ ಆಪರೇಷನ್
  • ಶಸ್ತ್ರಸಜ್ಜಿತ ವ್ಯಕ್ತಿಗಳ ಮಾಹಿತಿ ಹಿನ್ನೆಲೆ ರಾಜೌರಿಯಲ್ಲೂ ಹೈ ಅಲರ್ಟ್

http://Visit : www.suddidina.com

ಬೆಹ್ರೂಟಿ ಗ್ರಾಮದ ಬಳಿ ಕಾಣಿಸಿಕೊಂಡ ಶಂಕಿತ ಡ್ರೋನ್

ಶುಕ್ರವಾರ ಸಂಜೆ ಬಾಲಕೋಟೆ ಪ್ರದೇಶದ ಬೆಹ್ರೂಟಿ ಗ್ರಾಮದ ಸಮೀಪ ಆಕಾಶದಲ್ಲಿ ಶಂಕಿತ ಡ್ರೋನ್ ಹಾರಾಟ ನಡೆಸಿರುವುದು ಸ್ಥಳೀಯರ ಹಾಗೂ ಭದ್ರತಾ ಪಡೆಗಳ ಗಮನಕ್ಕೆ ಬಂದಿದೆ. ಬಳಿಕ ಅದು ಮಂಗಲ್ನಾರ್-ದಬ್ರೋಟ್ ಪ್ರದೇಶದತ್ತ, ಅಂದರೆ ಗಡಿ ಪ್ರದೇಶದ ಸಮೀಪಕ್ಕೆ ತೆರಳಿ ಪಾಕಿಸ್ತಾನದ ದಿಕ್ಕಿನಲ್ಲಿ ವಾಪಸ್ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡ್ರೋನ್ ಕಾಣಿಸಿಕೊಂಡ ಮಾಹಿತಿ ಸಿಗುತ್ತಿದ್ದಂತೆ LoC ವ್ಯಾಪ್ತಿಯಲ್ಲಿ ಭದ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ಬೆಳಗ್ಗೆಯಿಂದಲೇ ಸರ್ಚ್ ಆಪರೇಷನ್ ಆರಂಭಿಸಲಾಗಿದ್ದು, ಡ್ರೋನ್ ಮೂಲಕ ಯಾವುದೇ ವಸ್ತು, ಶಸ್ತ್ರಾಸ್ತ್ರ ಅಥವಾ ಅನುಮಾನಾಸ್ಪದ ಸಾಮಗ್ರಿಗಳನ್ನು ಕೆಳಗೆ ಇಳಿಸಲಾಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.

3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಶೋಧ

ಡ್ರೋನ್ ಆತಂಕದ ನಡುವೆಯೇ ಜಮ್ಮು-ಕಾಶ್ಮೀರದ ಉಧಂಪುರ, ಕಥುವಾ ಮತ್ತು ರಾಜೌರಿ ಜಿಲ್ಲೆಗಳ ವಿಶಾಲ ಅರಣ್ಯ ಪ್ರದೇಶಗಳಲ್ಲೂ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ತೀವ್ರಗೊಳಿಸಿವೆ.

ಉಧಂಪುರ-ಕಥುವಾ ಅರಣ್ಯ ಪ್ರದೇಶದ ಖುಬನ್, ನಾಗೈನ್, ಖ್ಟ್ರೈಲ್, ಗೋಡು ಫಲಾಲ್, ಪದೇತಾರ್, ಚೋರ್ ಮೊಟ್ಟು, ಕಿಯಾ, ಖೇಬಾ, ಭೇದ್, ಮಾರ್ತಾ ಹಾಗೂ ಜೋಫರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೊಲೀಸರು, ಸೇನೆ ಮತ್ತು ಅರೆಸೇನಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ.

ರಾಜೌರಿಯಲ್ಲಿ ಶಸ್ತ್ರಸಜ್ಜಿತರ ಶಂಕೆ

ರಾಜೌರಿ ಜಿಲ್ಲೆಯ ಗೈಬಾಸ್, ಮಿಥಿಯಾನಿ, ಮೊಗ್ಲಾ ಮತ್ತು ನಾರ್ಲಾ ಪ್ರದೇಶಗಳಲ್ಲೂ ಪ್ರತ್ಯೇಕ ಸರ್ಚ್ ಆಪರೇಷನ್ ಕೈಗೊಳ್ಳಲಾಗಿದೆ. ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಸಂಚರಿಸುತ್ತಿರುವುದನ್ನು ಗ್ರಾಮಸ್ಥರು ಗಮನಿಸಿ ಭದ್ರತಾ ಪಡೆಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಮಾಹಿತಿ ಆಧರಿಸಿ ಭದ್ರತಾ ಪಡೆಗಳು ವ್ಯಾಪಕ ಶೋಧ ನಡೆಸಿದರೂ, ಇದುವರೆಗೆ ಯಾವುದೇ ಶಂಕಿತ ವ್ಯಕ್ತಿಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಡಿಯಲ್ಲಿ ಹೆಚ್ಚಿದ ಕಣ್ಗಾವಲು

ಡ್ರೋನ್ ಹಾರಾಟ ಹಾಗೂ ಅರಣ್ಯ ಪ್ರದೇಶಗಳಲ್ಲಿ ಶಂಕಿತ ವ್ಯಕ್ತಿಗಳ ಚಲನವಲನದ ಮಾಹಿತಿ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೂ ತಕ್ಷಣ ಮಾಹಿತಿ ನೀಡುವಂತೆ ಸ್ಥಳೀಯರಿಗೂ ಸೂಚನೆ ನೀಡಲಾಗಿದೆ.

ಪ್ರಸ್ತುತ ಕಾರ್ಯಾಚರಣೆಯ ಪ್ರಮುಖ ಉದ್ದೇಶ ಗಡಿಯಾಚೆಯಿಂದ ಸಂಭವಿಸಬಹುದಾದ ಒಳನುಸುಳುವಿಕೆ ಅಥವಾ ಅನುಮಾನಾಸ್ಪದ ಸಾಗಾಟವನ್ನು ತಡೆಯುವುದು ಮತ್ತು ಪ್ರದೇಶದಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ.

Continue Reading

ದಿನದ ಸುದ್ದಿ

ಭರವಸೆ ಕೊಟ್ಟು ಯುವಜನರನ್ನು ಮನೆಗೆ ಕಳುಹಿಸಿದ ಸರ್ಕಾರಕ್ಕೆ ಈಗ ಪ್ರತಿಭಟನೆಯ ಬಿಸಿ: ಸೆ.5ಕ್ಕೆ ದೆಹಲಿಯಲ್ಲಿ CJP ಬೃಹತ್ ಮೆರವಣಿಗೆ!

Published

on

ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ

ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ

  • ಜುಲೈ 25ರ ಭರವಸೆ ಜಾರಿಗೆ ವಿಳಂಬ: CJP ತೀವ್ರ ಆಕ್ರೋಶ
  • ಇಂಡಿಯಾ ಗೇಟ್‌ನಿಂದ ಪೊಲೀಸ್ ಕೇಂದ್ರ ಕಚೇರಿವರೆಗೆ ಮೆರವಣಿಗೆ
  • NEET ಅಭ್ಯರ್ಥಿಗಳ ಕುಟುಂಬಸ್ಥರು, ಪೊಲೀಸ್ ದೌರ್ಜನ್ಯ ಸಂತ್ರಸ್ತರು ಮುಂಚೂಣಿಯಲ್ಲಿ
  • “ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ” ಎಂದ CJP 

ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ

ಸುದ್ದಿದಿನ,ನವದೆಹಲಿ: ದೇಶದ ಯುವಜನರಿಗೆ ನೀಡಿರುವ ಭರವಸೆಗಳನ್ನು ಸರ್ಕಾರ ಈಡೇರಿಸಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾಕ್‌ರೋಚ್ ಜನತಾ ಪಾರ್ಟಿ (CJP) ಸೆಪ್ಟೆಂಬರ್ 5ರಂದು ನವದೆಹಲಿಯಲ್ಲಿ ಶಾಂತಿಯುತ ಪ್ರತಿಭಟನಾ ಮೆರವಣಿಗೆ ನಡೆಸಲು ಕರೆ ನೀಡಿದೆ. ಜುಲೈ 25ರಂದು ಸಾರ್ವಜನಿಕವಾಗಿ ನೀಡಲಾಗಿದ್ದ ಭರವಸೆಗಳಿಗೆ ಒಂದು ತಿಂಗಳು ಕಳೆದರೂ ಅವುಗಳ ಅನುಷ್ಠಾನಕ್ಕೆ ಸ್ಪಷ್ಟ ಕ್ರಮಗಳು ಗೋಚರಿಸುತ್ತಿಲ್ಲ ಎಂಬುದು CJPಯ ಪ್ರಮುಖ ಆರೋಪವಾಗಿದೆ.

CJP ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿದ್ದು, ಸರ್ಕಾರ ಹಾಗೂ ಬಿಜೆಪಿ-ಎನ್‌ಡಿಎ ಆಡಳಿತದ ರಾಜ್ಯಗಳು ಯುವಜನರಿಗೆ ನೀಡಿದ್ದ ಭರವಸೆಗಳ ಅನುಷ್ಠಾನವನ್ನು ಪರಿಶೀಲಿಸಿದ ಬಳಿಕ ಪ್ರತಿಭಟನೆ ನಡೆಸುವ ನಿರ್ಧಾರವನ್ನು ಸರ್ವಾನುಮತದಿಂದ ಕೈಗೊಳ್ಳಲಾಗಿದೆ ಎಂದು ಪಕ್ಷ ತಿಳಿಸಿದೆ.

http://Visit : www.suddidina.com

ಇಂಡಿಯಾ ಗೇಟ್‌ನಿಂದ ಮೆರವಣಿಗೆ

ಸೆಪ್ಟೆಂಬರ್ 5ರಂದು ಇಂಡಿಯಾ ಗೇಟ್‌ನಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ನವದೆಹಲಿ ಪೊಲೀಸ್ ಕೇಂದ್ರ ಕಚೇರಿಯತ್ತ ಸಾಗಲಿದೆ. ಮೃತ NEET ಅಭ್ಯರ್ಥಿಗಳ ಕುಟುಂಬಸ್ಥರು ಹಾಗೂ ಪೊಲೀಸ್ ದೌರ್ಜನ್ಯಕ್ಕೆ ಒಳಗಾದವರು ಮೆರವಣಿಗೆಯ ಮುಂಚೂಣಿಯಲ್ಲಿ ಸಾಗಲಿದ್ದಾರೆ ಎಂದು CJP ಹೇಳಿದೆ.

ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು, ಯುವ ಸಂಘಟನೆಗಳ ಪ್ರತಿನಿಧಿಗಳು ಮತ್ತು ಯುವಜನರು ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಸರ್ಕಾರ ನೀಡಿದ್ದ ಭರವಸೆಗಳನ್ನು ಜಾರಿಗೆ ತರಬೇಕು ಎಂಬ ಒಂದೇ ಪ್ರಮುಖ ಬೇಡಿಕೆಯೊಂದಿಗೆ ಯುವಜನರು ಶಾಂತಿಯುತವಾಗಿ ಧ್ವನಿ ಎತ್ತಲಿದ್ದಾರೆ ಎಂದು ಪಕ್ಷ ಹೇಳಿದೆ.

ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ

ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ

‘ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ’

ಜುಲೈ 25ರಂದು ನೀಡಿದ ಭರವಸೆಗಳನ್ನು ನಂಬಿ ದೇಶಾದ್ಯಂತ ನಡೆದಿದ್ದ ಪ್ರತಿಭಟನೆಗಳನ್ನು ಯುವಜನರು ಉತ್ತಮ ನಂಬಿಕೆಯಿಂದ ಹಿಂಪಡೆದಿದ್ದರು. ಆದರೆ, ಭರವಸೆಗಳ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವುದು ಯುವಜನರಲ್ಲಿ ಮತ್ತೆ ಅಸಮಾಧಾನ ಮೂಡಿಸಿದೆ ಎಂದು CJP ಆರೋಪಿಸಿದೆ.

“ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ. ನಮ್ಮ ಸದುದ್ದೇಶವನ್ನು ಸರ್ಕಾರ ಯುವಜನರಿಗೆ ದ್ರೋಹ ಮಾಡುವ ಅವಕಾಶವಾಗಿ ಬಳಸಿಕೊಳ್ಳಬಾರದು” ಎಂದು CJP ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಎಚ್ಚರಿಕೆ ನೀಡಿದೆ.

“ಭರವಸೆಗಳನ್ನು ಜಾರಿಗೆ ತರುವ ಬದಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವುದನ್ನು ವಿಳಂಬಿಸುತ್ತಿದೆ, ತಾಂತ್ರಿಕ ಕಾರಣಗಳ ಹಿಂದೆ ಅಡಗಿಕೊಳ್ಳುತ್ತಿದೆ ಹಾಗೂ ಸುಪ್ರೀಂ ಕೋರ್ಟ್‌ನ ಮುಂದೆಯೂ ಸ್ಪಷ್ಟ ಭರವಸೆ ನೀಡುವುದನ್ನು ತಪ್ಪಿಸುತ್ತಿದೆ” 

  • CJP ಆರೋಪ

ಮಾತಿನಿಂದ ಹಿಂದೆ ಸರಿಯಲು ಸಾಧ್ಯವಿಲ್ಲ

ಜುಲೈ 25ರಂದು ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಸಾರ್ವಜನಿಕವಾಗಿ ನೀಡಿದ್ದ ಭರವಸೆಗಳನ್ನು ಸರ್ಕಾರ ಈಡೇರಿಸಬೇಕು ಎಂಬುದು CJPಯ ಆಗ್ರಹ. ಮಕ್ಕಳನ್ನು ಕಳೆದುಕೊಂಡ ಕುಟುಂಬಗಳು ಹಾಗೂ ಪೊಲೀಸ್ ದೌರ್ಜನ್ಯಕ್ಕೆ ಒಳಗಾದವರ ನೋವಿನ ನಡುವೆ ನಡೆಯಲಿರುವ ಈ ಮೆರವಣಿಗೆ, ಯುವಜನರ ವಿಶ್ವಾಸ ಮತ್ತು ಸರ್ಕಾರದ ಹೊಣೆಗಾರಿಕೆಯ ಪ್ರಶ್ನೆಯನ್ನು ಮುನ್ನೆಲೆಗೆ ತರುವ ಪ್ರಯತ್ನವಾಗಿದೆ.

ಕೇಂದ್ರ ಸರ್ಕಾರ ಭರವಸೆಗಳನ್ನು ಜಾರಿಗೆ ತರುವ ಬದಲು ಕ್ರಮ ಕೈಗೊಳ್ಳುವುದನ್ನು ವಿಳಂಬಿಸುತ್ತಿದೆ, ತಾಂತ್ರಿಕ ಕಾರಣಗಳ ಹಿಂದೆ ಅಡಗಿಕೊಳ್ಳುತ್ತಿದೆ ಹಾಗೂ ಸುಪ್ರೀಂ ಕೋರ್ಟ್‌ನ ಮುಂದೆಯೂ ಸ್ಪಷ್ಟ ಭರವಸೆ ನೀಡುವುದನ್ನು ತಪ್ಪಿಸುತ್ತಿದೆ ಎಂದು CJP ಆರೋಪಿಸಿದೆ.

ಸೆಪ್ಟೆಂಬರ್ 5ರಂದು ಹೆಚ್ಚಿನ ಸಂಖ್ಯೆಯಲ್ಲಿ ಇಂಡಿಯಾ ಗೇಟ್‌ನಲ್ಲಿ ಸೇರಿ ಶಾಂತಿಯುತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಯುವಜನರು, ವಿದ್ಯಾರ್ಥಿಗಳು ಹಾಗೂ ಯುವ ಸಂಘಟನೆಗಳಿಗೆ CJP ಮನವಿ ಮಾಡಿದೆ. ಪ್ರತಿಭಟನೆ ಸಂಪೂರ್ಣವಾಗಿ ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆಯಲಿದೆ ಎಂದು ಅದು ಪುನರುಚ್ಚರಿಸಿದೆ.

Continue Reading
Advertisement

Title

ದಿನದ ಸುದ್ದಿ11 hours ago

ಬೆಂಗಳೂರು ಜಲಸಂಚಾರಕ್ಕೆ ಹೊಸ ವೇಗ: ಬಿನ್ನಿಗಾನಹಳ್ಳಿ-ಬೈಯಪ್ಪನಹಳ್ಳಿ ನಡುವೆ 65 ಕಿ.ಮೀ. ನೀರು ಮಾರ್ಗ!

ಸುದ್ದಿದಿನ,ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆ ಬಂದಾಗಲೆಲ್ಲಾ ಎದುರಾಗುವ ನೀರು ನಿಲ್ಲುವಿಕೆ ಹಾಗೂ ಪ್ರವಾಹದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತಾಂತ್ರಿಕ ಕ್ರಮಗಳಿಗೆ ಒತ್ತು ನೀಡಲಾಗುತ್ತಿದೆ. ಇದರ ಭಾಗವಾಗಿ...

bengaluru-koodlugate-snn-raj-eternia-18-floor-building-demolition bengaluru-koodlugate-snn-raj-eternia-18-floor-building-demolition
ದಿನದ ಸುದ್ದಿ12 hours ago

ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್‌ಮೆಂಟ್‌ಗೆ ‘ಡೆಮಾಲಿಷನ್’ ಶುರು!

ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ ಸುದ್ದಿದಿನ,ಬೆಂಗಳೂರು: ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ...

kalaburagi-municipal-corporation-mayor-deputy-mayor-election-congress-win kalaburagi-municipal-corporation-mayor-deputy-mayor-election-congress-win
ದಿನದ ಸುದ್ದಿ12 hours ago

ಕಲಬುರಗಿ ಪಾಲಿಕೆಯಲ್ಲಿ ಮತ್ತೆ ಕಾಂಗ್ರೆಸ್ ಮೇಲುಗೈ: ಮೇಯರ್‌-ಉಪ ಮೇಯರ್ ಸ್ಥಾನವೂ ‘ಕೈ’ ತೆಕ್ಕೆಗೆ!

ಸುದ್ದಿದಿನ,ಕಲಬುರಗಿ: ಇಲ್ಲಿನ ಮಹಾನಗರ ಪಾಲಿಕೆಯ 24ನೇ ಅವಧಿಯ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮೇಲುಗೈ ಸಾಧಿಸಿದೆ. ತೀವ್ರ ಕುತೂಹಲ ಕೆರಳಿಸಿದ್ದ ಚುನಾವಣೆಯಲ್ಲಿ ಕಾಂಗ್ರೆಸ್...

ravichandran-political-entry-dk-shivakumar-mlc-nomination ravichandran-political-entry-dk-shivakumar-mlc-nomination
ದಿನದ ಸುದ್ದಿ12 hours ago

ರಾಜಕೀಯಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಎಂಟ್ರಿ? ಡಿಕೆಶಿ ಭೇಟಿಯ ಹಿಂದೆ ಇದೆ ‘ಕೈ’ ಲೆಕ್ಕ!

ಸಿಎಂ ಡಿಕೆ ಶಿವಕುಮಾರ್ ಭೇಟಿ ಬಳಿಕ ಹೆಚ್ಚಿದ ಕುತೂಹಲ; ವಿಧಾನ ಪರಿಷತ್‌ಗೆ ನಾಮನಿರ್ದೇಶನದ ಚರ್ಚೆ ಸುದ್ದಿದಿನ,ಬೆಂಗಳೂರು: ಸ್ಯಾಂಡಲ್‌ವುಡ್‌ನ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಕ್ರೇಜಿಸ್ಟಾರ್ ರವಿಚಂದ್ರನ್...

ದಿನದ ಸುದ್ದಿ12 hours ago

ರಸ್ತೆ ನಿಯಮ ಉಲ್ಲಂಘನೆಗೆ ಬ್ರೇಕ್ ಯಾವಾಗ? 4 ವರ್ಷದಲ್ಲಿ 5.67 ಕೋಟಿ ಪ್ರಕರಣ, ₹2,361 ಕೋಟಿ ದಂಡ ಸಂಗ್ರಹ!

ಸುದ್ದಿದಿನ,ಬೆಂಗಳೂರು: ರಾಜ್ಯದಲ್ಲಿ ವಾಹನ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಆತಂಕಕಾರಿ ಪ್ರಮಾಣದಲ್ಲಿ ದಾಖಲಾಗುತ್ತಿವೆ. ರಸ್ತೆ ಸುರಕ್ಷತೆ ಕುರಿತು ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದ್ದರೂ, ನಿಯಮ ಉಲ್ಲಂಘನೆಗೆ...

janardhana-reddy-attacks-b-nagendra-valmiki-scam-ballari-political-war janardhana-reddy-attacks-b-nagendra-valmiki-scam-ballari-political-war
ದಿನದ ಸುದ್ದಿ12 hours ago

ವಾಲ್ಮೀಕಿ ಹಗರಣದ ಕಿಡಿ ಮತ್ತೆ ಬಳ್ಳಾರಿಯಲ್ಲಿ: ನಾಗೇಂದ್ರ ವಿರುದ್ಧ ಜನಾರ್ಧನ ರೆಡ್ಡಿ ವಾಗ್ದಾಳಿ, ಕಾಂಗ್ರೆಸ್‌ಗೆ ರಾಜೀನಾಮೆ ಸವಾಲು!

ಸುದ್ದಿದಿನ, ಬಳ್ಳಾರಿ: ಬಳ್ಳಾರಿಯಲ್ಲಿ ರಾಜಕೀಯ ವಾಕ್ಸಮರ ಮತ್ತೊಮ್ಮೆ ತೀವ್ರಗೊಂಡಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣವನ್ನು ಮುಂದಿಟ್ಟುಕೊಂಡು ಮಾಜಿ ಸಚಿವ ಬಿ. ನಾಗೇಂದ್ರ ವಿರುದ್ಧ ಮಾಜಿ...

bengaluru-strr-ring-road-traffic-relief-40-percent-reduction bengaluru-strr-ring-road-traffic-relief-40-percent-reduction
ದಿನದ ಸುದ್ದಿ15 hours ago

ಬೆಂಗಳೂರಿನ ಟ್ರಾಫಿಕ್‌ಗೆ ಬಿಗ್ ರಿಲೀಫ್‌! ವರ್ಷಾಂತ್ಯಕ್ಕೆ STRR ಸಂಚಾರ ಮುಕ್ತ: ನಗರ ದಟ್ಟಣೆ ಶೇ.40ರಷ್ಟು ಇಳಿಕೆ ನಿರೀಕ್ಷೆ

ಸುದ್ದಿದಿನ,ಬೆಂಗಳೂರು: ಬೆಂಗಳೂರು ನಗರ ದಿನದಿಂದ ದಿನಕ್ಕೆ ವಿಸ್ತರಿಸುತ್ತಿರುವಂತೆ ವಾಹನ ದಟ್ಟಣೆಯ ಸಮಸ್ಯೆಯೂ ಹೆಚ್ಚುತ್ತಿದೆ. ಅದರಲ್ಲೂ ಹೊರರಾಜ್ಯಗಳಿಂದ ನಗರವನ್ನು ದಾಟಿ ಸಾಗುವ ಭಾರಿ ವಾಹನಗಳು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರದ...

toxic-movie-kichcha-sudeepa-supports-yash-negative-reviews toxic-movie-kichcha-sudeepa-supports-yash-negative-reviews
ದಿನದ ಸುದ್ದಿ16 hours ago

ವಿಭಿನ್ನ ಪ್ರಯೋಗಕ್ಕೆ ಸುದೀಪ್‌ ಫಿದಾ; ‘ಟಾಕ್ಸಿಕ್’ ವಿರುದ್ಧದ ಟೀಕೆಗಳ ನಡುವೆ ಯಶ್‌ಗೆ ಭರ್ಜರಿ ಬೆಂಬಲ

ಸುದ್ದಿದಿನ,ಸಿನಿಮಾ: ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ ಬಿಡುಗಡೆಯಾದ ಬಳಿಕ ನಿರೀಕ್ಷೆಗಿಂತ ಹೆಚ್ಚಾಗಿ ಚರ್ಚೆ ಮತ್ತು ಟೀಕೆಗೆ ಕಾರಣವಾಗಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಹಾಗೂ ಗೀತು...

ದಿನದ ಸುದ್ದಿ16 hours ago

ಶನಿವಾರ ಕಲಬುರಗಿ ಪಾಲಿಕೆಯ ಹೊಸ ಮೇಯರ್‌, ಉಪ ಮೇಯರ್‌ ಆಯ್ಕೆ: ಯಾರಿಗೆ ಒಲಿಯಲಿದೆ ಅಧಿಕಾರದ ಪಟ್ಟ?

ಸುದ್ದಿದಿನ, ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್‌ ಹಾಗೂ ಉಪ ಮೇಯರ್‌ ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್‌ ಆಗಿದೆ. ಶನಿವಾರ ನಡೆಯಲಿರುವ ಚುನಾವಣೆಯಲ್ಲಿ ಮೇಯರ್‌ ಸ್ಥಾನವನ್ನು ಬಿಸಿಎ ವರ್ಗಕ್ಕೆ...

ದಿನದ ಸುದ್ದಿ16 hours ago

ಹೆದ್ದಾರಿಯಲ್ಲಿ ಹಾಲಿನ ಹೊಳೆ! ಪಲ್ಟಿಯಾದ ನಂದಿನಿ ಟ್ಯಾಂಕರ್‌ನಿಂದ 21 ಸಾವಿರ ಲೀಟರ್ ಹಾಲು ರಸ್ತೆಗೆ

ತುಮಕೂರು: ಸಾಮಾನ್ಯವಾಗಿ ಮಳೆ ಬಂದಾಗ ರಸ್ತೆಯಲ್ಲಿ ನೀರು ಹರಿಯುವುದನ್ನು ನೋಡುತ್ತೇವೆ. ಆದರೆ ತುಮಕೂರಿನ ಶಿರಾ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ನಡೆದ ಘಟನೆ ಮಾತ್ರ ವಿಭಿನ್ನ. ಇಲ್ಲಿ ನೀರಿನ ಬದಲು...

Trending