ಲೈಫ್ ಸ್ಟೈಲ್
‘ಕೊರೊನ’ ಇದು ಪ್ರಕೃತಿ ಸೃಷ್ಟಿಸೋ ಅವತಾರ..! HANDS UP ಮಾನವನೇ..!

“ಮಾನವ ಸಂಕುಲದ ನಾಗಲೋಟಕ್ಕೊಂದು ಮಾರಕ ತಡೆ” “LOCK DOWN : ಇದೊಂದು ಆತ್ಮ ವಿಮರ್ಶೆಯ ಸಮಯ.”
- ಡಾ. ಬಿನಯ್ ಕುಮಾರ್ ಸಿಂಗ್ , ಸನ್ಶೈನ್ ಪುರಂತರ ಆಸ್ಪತ್ರೆ, ದಾವಣಗೆರೆ
ಅಸಂಖ್ಯಾತ ಜೀವರಾಶಿಗಳ ನೆಲೆಯಾಗಿರುವ ಪ್ರಕೃತಿ ಮತ್ತು ಭೂಮಿಯ ಮೇಲೆ ತನ್ನನ್ನು ತಾನು ಪರಮಶಕ್ತನೆಂದು ಬಿಂಬಿಸಿಕೊಂಡಿರುವ ಅತ್ಯಂತ ನೀಚ ಬುದ್ದಿಯ ಜೀವಿಯಾದ ಮನುಷ್ಯ ಇವುಗಳ ಮಧ್ಯೆ ಯುದ್ದ ಸಾರಿದಂತಿದೆ.ಇದು ಒಂದು ರೀತಿಯ ಮೂರನೇ ಮಹಾಯುದ್ದವನ್ನು ಸಾರಿದಂತಿದೆ. ಇಲ್ಲಿ ಭೂಮಿಯ ಮೇಲಿನ ಅತ್ಯಂತ ಸೂಕ್ಷ್ಮ ಜೀವಿಯಾದ ವೈರಾಣು ತಮ್ಮ ಉಳಿವಿಗೋಸ್ಕರ ತಮ್ಮ ಸ್ಥಾನವನ್ನು ಆಕ್ರಮಿಸುತ್ತಿರುವ ಮಾನವನ ವಿರುದ್ದ ತಿರುಗಿ ಬಿದ್ದಂತಿದೆ.
ಸಂಶೋಧನೆಗಳು ಧೃಡಪಡಿಸಿರುವ ಪ್ರಕಾರ ಸಕಲ ಜೀವರಾಶಿಗಳಿಗೆ ಜೀವಿಸಲು ಯೋಗ್ಯವಾದ ಸ್ಥಳ ಭೂಮಿ ಮಾತ್ರ. ಭೂಮಿಯ ಮೇಲೆ ಜೀವಿಸಲು ಒಂದು ಸಾಮಾನ್ಯ ನಿಯಮವಿದ್ದು,ಅದೇನೆಂದರೆ ಎಲ್ಲಾ ಜೀವರಾಶಿಗಳು ಪರಸ್ಪರ ಗೌರವಿಸುವುದು, ಎಲ್ಲರುಗಳ ಸ್ವಂತಂತ್ರವನ್ನು ಕಾಪಾಡುವುದು ಮತ್ತು ಪರಿಸರವನ್ನು ರಕ್ಷಿಸುವುದು ಈ ನಿಯಮಗಳಿಗೆ ಚ್ಯುತಿ ಬಂದಾಗ ಈ ತರಹದ ಸ್ವಯಂಕೃತ ವಿಪತ್ತುಗಳಿಗೆ (MANMADE DISASTER) ಎಡೆ ಮಾಡಿಕೊಡುತ್ತದೆ. ಇಂದಿನ ಈ ಸನ್ನಿವೇಶಕ್ಕೆ ಇದೇ ಮೂಲಭೂತವಾದ ಕಾರಣವಾಗಿದೆ.
ಕೇವಲ ಕಳೆದ ನೂರು ವರ್ಷಗಳಲ್ಲಿ ಮಾನವ ತನ್ನ ಆಸೆ ಮತ್ತು ಲಾಭಕ್ಕೋಸ್ಕರ ಪರಿಸರ ಮತ್ತು ಜೀವರಾಶಿಗಳ ಮೇಲೆ ಅಟ್ಟಹಾಸ ಮೆರೆದಿದ್ದಾನೆ. ಪ್ರಕೃತಿಯ ಆಗಿಂದಾಗ್ಗೆ ಅತಿವೃಷ್ಠಿಯಿಂದಲೋ, ಅನಾವೃಷ್ಠಿಯಿಂದಲೋ, ಬಿರುಗಾಳಿಗಳಿಂದಲೋ ತನ್ನ ಮೇಲೆ ಮಾನವ ನೀಡುತ್ತಿರುವ ದೌರ್ಜನ್ಯದ ವಿರುದ್ದ ಸೂಚನೆ ಸಂಕೇತಗಳನ್ನು ನೀಡುತ್ತಿದ್ದರೂ ತಾತ್ಸಾರ ಮಾಡುವ ಮನುಷ್ಯ ತನ್ನ ನೀಚ ಕೃತ್ಯದಿಂದಾಗಿ ಭೂ ತಾಯಿಯನ್ನು ವಿನಾಶಗೊಳಿಸುವುದರಲ್ಲಿ ತೊಡಗಿದ್ದಾನೆ.
ಮಹಾಭಾರತದಲ್ಲಿ ಉಲ್ಲೇಖಿಸಿದಂತೆ, “ಅಭ್ಯುತ್ಥಾನಂ ಅಧರ್ಮಸ್ಯ,ಸಂಭವಾಮಿ ಯುಗೇ ಯುಗೇ..” ಮಾನವನ ಪಾಪ ಕರ್ಮಗಳು ಪರಿಸರ ಮತ್ತು ಜೀವರಾಶಿಗಳ ಮೇಲೆ ಎಲ್ಲಾ ಎಲ್ಲೆಯನ್ನು (ಮಿತಿಗಳನ್ನು) ದಾಟಿವೆ. (ಈ)ಇಂತಹ ಸನ್ನಿವೇಶದಲ್ಲಿ ಮನುಷ್ಯನ ಕಣ್ಣಿಗೆ ಕಾಣದ ಒಂದು ವೈರಾಣು ತಿರುಗಿಬಿದ್ದಿದೆ. ಕೇವಲ ಒಂದೇ ಒಂದು ವೈರಾಣು ಇಡೀ ಮಾನವ ಸಂಕುಲವನ್ನೇ ಮಂಡಿಯೂರಿ ಪರಿತಪಿಸುವಂತೆ ಮಾಡಿದೆ. ಎಲ್ಲವನ್ನೂ ತಾನು ಜಯಿಸಬಹುದೆಂಬ ದುರಹಂಕಾರದಲ್ಲಿ ಮೆರೆಯುತ್ತಿರುವ ಮಾನವನಿಗೆ, ಆ ಭಗಂವಂತ ತನ್ನ ಜೀವರಾಶಿಗಳಲ್ಲೇ ಇರುವ ಅತ್ಯಂತ ಸೂಕ್ಷ್ಮ ಜೀವಿಯಿಂದ, ಮಾನವನನ್ನು ಸಂಹರಿಸುವುದು ಎಷ್ಟು ಸುಲಭವೆಂದು ತೋರಿಸುತ್ತಿರುವಂತಿದೆ. ಹೀಗಿರುವಾಗ ಮಾನವ ತನ್ನನ್ನು ತಾನು ಜಗತ್ತಿನ ಪ್ರಭುವೆಂದು ಭಾವಿಸುವುದರಲ್ಲಿ ಅರ್ಥವಿದೆಯೇ?
ಈ ಸಂಧರ್ಭದಲ್ಲಿ ” ಪ್ರಕೃತಿಯು ಎಲ್ಲವನ್ನು ಸಮತೋಲನಗೊಳಿಸುತ್ತದೆ ” ಎಂಬ ಮಾತು ಎಷ್ಟು ಅರ್ಥಗರ್ಭಿತವಾಗಿದೆ ಮತ್ತು ಈಗಿರುವ ಪರಿಸ್ಥಿತಿಯನ್ನು ಗಮನಿಸಿದರೆ ಅದು ನಿಜವೆನ್ನಿಸುತ್ತದೆ. ಅತ್ಯಂತ ಶಕ್ತಿಶಾಲಿಯಾದ ಮಾನವ ಸಂಕುಲ ತನ್ನನ್ನು ಸಂರಕ್ಷಿಸಿಕೊಳ್ಳಲು ಪಂಜರದಲ್ಲಿ (ಮನೆಗಳಲ್ಲಿ–HOME QUARANTINE) ಬಂಧಿಯಾಗಿದ್ದಾನೆ. ಆದರೆ ಉಳಿದ ಎಲ್ಲಾ ಜೀವರಾಶಿಗಳು ತಮ್ಮ ಜೀವನವನ್ನು ಪರಿಸರದಲ್ಲಿ ಯಾವ ಅಡೆತಡೆಗಳಿಲ್ಲದೆ ಆನಂದದಿಂದ ಅನುಭವಿಸುತ್ತಿವೆ. ಸೂರ್ಯನ ಸುತ್ತಲಿರುವ ಪ್ರಭೆಯಂತೆ ಗೋಚರಿಸುತ್ತಿರುವ ಕಾಂತಿಯು (CORONA) ಈ ಅವಕಾಶವು ಮಾನವನು ಪರಿಸರದ ಮೇಲೆ ಮಾಡಿರುವ ದೌರ್ಜನ್ಯಗಳನ್ನು ಆತ್ಮಾವಲೋಕನ ಮಾಡುವ ಸಮಯ ಇದಾಗಲಿ.
ನಾವೀಗ ವೈರಾಣುಗಳ ಪ್ರಪಂಚದ ಬಗ್ಗೆ ಅವಲೋಕಿಸೋಣ
- ವೈರಾಣುಗಳು ಕೇವಲ ರಾಸಾಯನಿಕ ಸೂಕ್ಷ್ಮತೆಗಳು (Chemical Living Beings) ಇವುಗಳನ್ನು ಜೀವಕೋಶಗಳೆಂದು ಕರೆಯಲಾಗುವುದಿಲ್ಲ. ಏಕೆಂದರೆ ಜೀವಕೋಶಗಳಲ್ಲಿ ಕಂಡುಬರುವ ವಿವಿಧ ಭಾಗಗಳು ಇರುವುದಿಲ್ಲ. ಒಂದು ವೈರಾಣುವಿನಲ್ಲಿ ಕೇವಲ ಜೀನೋಮ್ (Genome) ಮತ್ತು ಅದರ ಮೇಲ್ಮೈಯಲ್ಲಿ ಪ್ರೋಟೀನ್ನ ಕವಚವಿರುತ್ತದೆ. ವೈರಾಣುಗಳಲ್ಲಿ ತಾವು ಸ್ವತಂತ್ರವಾಗಿ ಬೆಳೆದು ದ್ವಿಗುಣವಾಗುವ ಸಾಮಾಥ್ರ್ಯವಿರುವುದಿಲ್ಲ. ಇವುಗಳು ತಮ್ಮ ಬೆಳೆವಣಿಗೆಗೆ ಆಶ್ರಯದಾತನ (ಮನುಷ್ಯನ) ಜೀವಕೋಶಗಳ ಮೇಲೆ ಅವಲಂಭಿತವಾಗಿರುತ್ತದೆ. ಮಾನವ ಸೃಷ್ಟಿಯಾದ ಕಾಲದಿಂದಲೂ ಈ ವೈರಾಣುಗಳೂ ಭೂಮಿಯ ಮೇಲಿವೆ. ಅವುಗಳ ಸಹಜವಾದ ಆಶ್ರಯ ತಾಣಗಳು ಯಾವುವೆಂದರೆ ಮಾನವ, ಸಸ್ತನಿಗಳು(mammals) ಮತ್ತು ಪಕ್ಷಿಗಳು(birds). ಭೂಮಿಯ ಮೇಲೆ ಅನೇಕ ವಿಧದ ವೈರಾಣುಗಳಿದ್ದು, ಅದರಲ್ಲಿ ಬಹಳಷ್ಟು ವೈರಾಣುಗಳು ರೋಗಕಾರಕಗಳಲ್ಲ.
- ಕೊರೊನ ವೈರಸ್ RNA ಗುಂಪಿನ ವೈರಾಣುವಾಗಿದ್ದು ಇದರ ಮೇಲ್ಮೈಯಲ್ಲಿ ಚೆಂಡು ಹೂವಿನ ಆಕಾರದ ಬಹು ಪ್ರಕ್ಷೇಪಗಳ ಹಂಚನ್ನು ಹೊಂದಿದ್ದು, ಸೌರ ಕೊರೊನವನ್ನು ಹೋಲುತ್ತದೆ ಆದ್ದರಿಂದ ಈ ವೈರಾಣು ಸೃಷ್ಠಿಸುವ ವಿಶೇಷ ನೋಟಕ್ಕೆ ಕೊರೊನ ವೈರಸ್ ಎಂದು ಹೆಸರಿಸಲ್ಪಟ್ಟಿದೆ. ಇದರ ಗಾತ್ರ ಕೇವಲ 100nM ( 10-9 ).
- ಈ corona ವೈರಾಣುಗಳು ಮನುಷ್ಯರು, ಪಕ್ಷಿಗಳು, ಪ್ರಾಣಿಗಳು, ಕೀಟಗಳು ಮತ್ತು ಜಲಚರಗಳಲ್ಲಿ ಸಹಜವಾಗಿ ಬದುಕಿರುತ್ತವೆ. ಮಾನವರಲ್ಲಿ ಸಾಮಾನ್ಯ ನೆಗಡಿ(common cold) ಕಾಯಿಲೆಯನ್ನು ಭರಿಸುವ ಪ್ರಮುಖ ವೈರಾಣುಗಳಲ್ಲಿ ಎರಡನೆಯದಾಗಿದೆ. (Rhino virus ಗಳು ಮೊದಲನೆಯದಾಗಿದೆ).
- ಈ ಕೋರೊನ ವೈರಸ್ ನಮಗೆ ಹೊಸದೇನಲ್ಲ, ಈ ಹಿಂದೆಯೇ 2002ರಲ್ಲಿ SARS ಎಂಬ ಸಾಂಕ್ರಮಿಕ ರೋಗವನ್ನು ಮತ್ತು 2012ರಲ್ಲಿ MERS ಎಂಬ ಸಾಂಕ್ರಮಿಕ ರೋಗವನ್ನು ಕೊರೊನ ವೈರಸ್ನ ತಳಿಗಳು ಹರಡಿ ಹೆಸರುವಾಸಿಯಾಗಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಈ ಹಿಂದೆ SARS ಎಂಬ ಸಾಂಕ್ರಮಿಕವು 30 ರಾಷ್ಟ್ರಗಳಲ್ಲಿ ಹರಡಿತ್ತು ಮತ್ತು ಅದರ ನಿಯಂತ್ರಣವನ್ನು ಪಡೆಯಲು ಸುಮಾರು 15-18 ತಿಂಗಳುಗಳ ಕಾಲ ಸೆಣಸಾಡಬೇಕಾಯಿತು ಮತ್ತು ಅದೇ ತರಹ MERS ಸಾಂಕ್ರಾಮಿಕ ರೋಗವು 7 ದೇಶಗಳಲ್ಲಿ ಹರಡಿ ಅದನ್ನು ನಿಯಂತ್ರಿಸಲು ಸುಮಾರು 12 ತಿಂಗಳುಗಳ ಕಾಲ ಸೆಣಸಾಡಬೇಕಾಯಿತು.
ಇಷ್ಟೆಲ್ಲಾ ತಿಳಿದ ಮೇಲೆ ಕಾಡುವ ಯಕ್ಷ ಪ್ರಶ್ನೆ ಏನೆಂದರೆ ಹೀಗಿರುವ corona virus ಇಷ್ಟೊಂದು ಮಾರಾಣಾಂತಿಕ ಏಕೆ? [covid-19= COrona VIrus Disease-2019]
- ಈ ವೈರಾಣುವಿನ ಮುಖ್ಯ ಲಕ್ಷಣವೇನೆಂದರೆ ಅವುಗಳು ಪದೇ ಪದೇ ಅನುವಂಶಿಕ ಬದಲಾವಣೆಯನ್ನು ಹೊಂದುವುದು (Genetic Modification) ಈ ಪ್ರಕ್ರಿಯೆಯಲ್ಲಿ ಒಂದೇ ಕುಲಕ್ಕೆ ಸೇರಿದ ಎರಡು ತಳಿಗಳ ವೈರಾಣುಗಳು ಒಂದೇ ಜೀವಕೋಶದಲ್ಲಿ ಪ್ರವೇಶಿಸಿದಾಗ ಅವೆರಡರ ಮದ್ಯೆದಲ್ಲಿ genomeನ ಒಂದು ಭಾಗವು ವಿನಿಮಯವಾಗಿ (RECOMBINATION) ಮೂರನೇಯ ತಳಿಯು ಸೃಷ್ಠಿಯಾಗುತ್ತದೆ. ಹೀಗೆ ಸೃಷ್ಠಿಯಾದ ಹೈಬ್ರೀಡ್ ತಳಿಯು ತನ್ನ ಮಾತೃ ವೈಶಿಷ್ಠ್ಯಗಳ ಜೊತೆಗೆ ಹೊಸದಾದ ಗುಣಗಳನ್ನು ಹೊಂದಿರುತ್ತದೆ. ಈ ಹೊಸ ಗುಣಗಳೇ ಇದನ್ನು ಮತ್ತಷ್ಟು ಆಕ್ರಮಣಕಾರಿಯಾಗಿ ಸೃಷ್ಠಿಸುತ್ತದೆ.
- ಒಂದು ಶಂಕೆಯ ಪ್ರಕಾರ covid-19 ಎಂಬ ವೈರಾಣು ಹಾವು ಮತ್ತು ಬಾವಲಿಗಳಲ್ಲಿ ಕಂಡುಬರುವ corona ವೈರಾಣುಗಳ ಹೈಬ್ರೀಡ್ ತಳಿಯಾಗಿರಬಹುದು ಆದ್ದರಿಂದ ಈ ವೈರಾಣುವು ಅಷ್ಟೊಂದು ಮಾರಕವಾಗಿದೆ. ಒಂದು ಗಮನಿಸಬೇಕಾದ ಅಂಶವೆಂದರೆ ಇಂತಹ ವೈರಾಣು ಮನುಷ್ಯನಲ್ಲಿ ಕಾಣಬೇಕಾದರೆ, ಮಾನವರು ವೈರಾಣುಗಳ ನಿಕಟ ಸಂಪರ್ಕದಲ್ಲಿರಬೇಕಾಗುತ್ತದೆ. ಇಂತಹ ಸನ್ನಿವೇಶ ಕೇವಲ ಚೈನಾ (china) ದೇಶದಲ್ಲಿ ಸಹಜವಾಗಿ ಕಾಣಬಹುದಾಗಿದೆ. ಏಕೆಂದರೆ ಇಲ್ಲಿಯ ಜನರು ಮೇಲೆ ತಿಳಿಸಿದ ಹಾವು & ಬಾವಲಿಗಳ ನಿಕಟ ಸಂಪರ್ಕದಲ್ಲಿ ಬರುವುದಲ್ಲದೇ ಅವುಗಳನ್ನು ಭಕ್ಷಿಸುತ್ತಾರೆ ಆದ್ದರಿಂದ ಈ ಹೈಬ್ರೀಡ್ ವೈರಾಣು (covid-19) ಮಾನವನಲ್ಲಿ ಸುಲಭವಾಗಿ ಪ್ರವೇಶಿಸಿರಬಹುದಾಗಿದೆ. ಆದ್ದರಿಂದಲೇ ಚೈನಾ ದೇಶದ WUHAN ಪ್ರಾಂತ್ಯವು (covid-19)ಉತ್ಪತ್ತಿ ತಾಣವಾಗಿದ್ದು ಇದಕ್ಕೆ ಮತ್ತಷ್ಟು ಪುಷ್ಠಿ ನೀಡುವಂತಿದೆ.
- covid-19 ವೈರಾಣು ಮೂಗು, ಬಾಯಿ, ಕಣ್ಣಿನ ಮುಖಾಂತರ ಮನುಷ್ಯನಲ್ಲಿ ಪ್ರವೇಶಿಸುತ್ತದೆ. ಈ ವೈರಾಣು Upper Respiratory Tract ನಲ್ಲಿ ದ್ವಿಗುಣಗೊಳ್ಳುವ (replication) ಪ್ರಕ್ರಿಯೆಯನ್ನು ಆಂರಭಿಸುತ್ತದೆ. ಸೊಂಕು ತಗುಲಿದ ಸುಮಾರು5 ರಿಂದ 10 ದಿನಗಳ ಕಾಲದವರೆಗೆ ಈ ದ್ವಿಗುಣಗೊಳ್ಳುವ ಪ್ರಕ್ರಿಯೆ ನಡೆಯುತ್ತಿರುತ್ತದೆ. ಇದೇ ಸಮಯದಲ್ಲಿ ಈ ವೈರಾಣುವಿನ ವಿಶಿಷ್ಠ ಲಕ್ಷಣವಾದ ಶ್ವಾಸಕೋಶದ ALVEOLI ಗಳವರೆಗೂ ತಲುಪಿ ಅಲ್ಲಿಯೂ replication process (ಪ್ರಕ್ರಿಯೆ) ಯನ್ನು ಮುಂದುವರೆಸುತ್ತದೆ. ಈ ವೈರಾಣುಗಳು ನಮ್ಮ ದೇಹದಲ್ಲಿ ಬೆಳೆಯುವಾಗ ಅದರ ಸುತ್ತಮುತ್ತಲಿನ ಜೀವಕೋಶಗಳನ್ನು ನಾಶ ಪಡಿಸುತ್ತದೆ. ಈ ಪ್ರಕ್ರಿಯೆಯು ಗಂಟಲು ಮತ್ತು ಶ್ವಾಸನಾಳದಲ್ಲಿ ನಡೆಯುವುದರಿಂದ ಅನಿಯಮಿತವಾದ ಒಣ ಕೆಮ್ಮು ಬರುತ್ತದೆ. ಈ ವೈರಾಣುವಿನಹಾವಳಿಯೂ ಶ್ವಾಸಕೋಶಗಳಲ್ಲು ನಡೆಯುವುದರಿಂದ ಆಮ್ಲಜನಕ ವಿನಿಮಯ ಪ್ರಕ್ರಿಯೆಯಲ್ಲಿ ಭಾದಿಸುತ್ತದೆ ಮತ್ತು ALVEOLI ಗಳನ್ನು ನಷ್ಟಪಡಿಸಿ ಕೀವುಂಟು ಮಾಡಿ VIRAL-PNEMONIA ವನ್ನು ಉಂಟು ಮಾಡುತ್ತದೆ ಆದ್ದರಿಂದಲೇ covid-19 ಪೀಡಿತ ಜನರಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಇದರಿಂದ ನಮ್ಮ ದೇಹದ ಅಂಗಾಂಗಳಲ್ಲಿ ಆಮ್ಲಜನಕದ ಕೊರತೆಯಾಗಿ, ಬಹು ಅಂಗಾಂಗಳ ವೈಪಲ್ಯಕ್ಕೆ ಎಡೆ ಮಾಡಿಕೊಡುತ್ತದೆ, ಆದ್ದರಿಂದಲೇ ಈ covid-19 ಸೊಂಕು ಇಷ್ಟೊಂದು ಮಾರಾಣಾಂತಿಕ.
ಈ ಕೊವಿಡ್-19 ಸೊಂಕಿನ ಲಕ್ಷಣಗಳು
- ಇದರ ಪ್ರಾರಂಭಿಕ ಲಕ್ಷಣಗಳು ತನ್ನ ಮೂಲ ವೈರಾಣುವಿನಂತೆಯೇ ಸಾಮಾನ್ಯ ನೆಗಡಿ/ಸೀನು/ಜ್ವರ/ಮೈ ಕೈ ನೋವು ಕ್ರಮೇಣವಾಗಿ ಒಣಕೆಮ್ಮು/ ಅತಿಯಾದ ಜ್ವರ ಶುರುವಾಗಿ ತದನಂತರ ಉಸಿರಾಟದಲ್ಲಿ ತೊಂದರೆ ಕಂಡುಬರುತ್ತದೆ.
- ವೈರಸ್ನ ಸೊಂಕು ತಗುಲಿ ಅದರ ಲಕ್ಷಣಗಳು ಗೋಚರಿಸುವ ಸಮಯವಾದ 5 ರಿಂದ 10 ದಿನಗಳಲ್ಲಿ ಈ ವೈರಾಣುಗಳು Upper Respiratory Tract ನಲ್ಲಿ ಅಸಂಖ್ಯಾತವಾಗಿ ನೆಲೆಯೂರಿರುತ್ತದೆ. ನಾವು ಸೀನುವಾಗ, ಕೆಮ್ಮುವಾಗ, ಉಗುಳುವಾಗ, ಮಾತಾನಾಡುವಾಗ ಈ ವೈರಾಣುಗಳು ಗಾಳಿಯಲ್ಲಿ ಹೊರಬರುತ್ತವೆ. ಒಂದು ಹನಿಯಷ್ಟು ಬಾಯಿ-ಮೂಗಿನಿಂದ ಬರುವ ದ್ರಾವರಸದಲ್ಲಿ ಲಕ್ಷಾಂತರ ವೈರಾಣುಗಳಿರುತ್ತವೆ. ಆದ್ದರಿಂದ ಈ ಸೊಂಕು ಹತ್ತಿರದ ಸಂಪರ್ಕದಲ್ಲಿ ಬರುವವರಿಗೆಲ್ಲಾ ಸಹಜ ಮತ್ತು ಸುಲಭವಾಗಿ ತಗಲುತ್ತದೆ. ಈ ಸಮಯದಲ್ಲಿ ರೋಗಿಯಲ್ಲಿ ಕಾಯಿಲೆಯ ಲಕ್ಷಣಗಳು ಕಾಣದೆ ಇರುವುದರಿಂದ ಇಬ್ಬರ ಗಮನಕ್ಕೂ ಬಾರದೆ ಸೊಂಕು ಹರಡುವ ಪ್ರಕ್ರಿಯೆ ಶುರುವಾಗಿರುತ್ತದೆ. ನಾವು ಮಾತಾನಾಡುವಾಗ ಬಾಯಿಂದ (Droplet) ಬರುವ ದ್ರಾವಣ ಸುಮಾರು 1 ರಿಂದ 1ಳಿ ಅಡಿಯವರೆಗೂ ಪಸರಿಸುತ್ತದೆ. ಅದೇ ತರಹ ಸೀನುವಾಗ ಮತ್ತು ಕೆಮ್ಮುವಾಗ ಬಾಯಿಯಿಂದ ಬರುವ ದ್ರಾವರಸ ಸುಮಾರು 1 ಮೀಟರ್ ವರೆಗು ಚಲಿಸುತ್ತದೆ. ಇದರಿಂದ ತಿಳಿಯುವುದೇನೆಂದರೇ ಸಾಮಾಜಿಕ ಅಂತರವನ್ನು (SOCIAL DISTANCING)ಕನಿಷ್ಟ 1 ಮೀಟರ್ ಪಾಲಿಸಿದರೆ, ಒಬ್ಬರಿಂದೊಬ್ಬರಿಗೆ ವೈರಾಣು ಹರಡುವುದನ್ನು ಸರಳವಾಗಿ ಮತ್ತು ಸಹಜವಾಗಿ ತಡೆಯಬಹುದು.
- ಸುಮಾರು 60 ರಿಂದ 70% ಜನರಲ್ಲಿ ಈ ಸೊಂಕು ಸಾಮಾನ್ಯ ವೈರಲ್ ಜ್ವರದಂತೆ ವರ್ತಿಸುತ್ತದೆ. ಇಂತಹ ಜನರಲ್ಲಿ ರೋಗ ನಿರೋಧಕ ಶಕ್ತಿ ಬಹಳ ಚೆನ್ನಾಗಿರುತ್ತದೆ.
- ಸುಮಾರು 10 ರಿಂದ 25% ಜನರಲ್ಲಿ, ಈ ಸೊಂಕು ಹೆಚ್ಚು ತೊಂದರೆ ನೀಡುತ್ತದೆ. ಅವರಲ್ಲಿ ಹೆಚ್ಚಿನ ಜ್ವರ, ನಿರಂತರ ಒಣಕೆಮ್ಮು ಮತ್ತು ಉಸಿರಾಟದ ತೊಂದರೆ ಕಾಣಬಹುದು. ಈ ತರಹದ ಸೊಂಕು ಎಲ್ಲಾ ವಯೋಮಾನದವರಿಗೂ ಬರಬಹುದು ಮತ್ತು ಇವರಲ್ಲಿ ರೋಗ ನಿರೋಧಕ ಶಕ್ತಿ ಚೆನ್ನಾಗಿದ್ದರೂ, ಇದರ ಜೊತೆಗೆ ಸುಸಜ್ಜಿತವಾದ ಔಷಧೋಪಚಾರದಿಂದ ಇವರನ್ನು ಸೊಂಕಿನಿಂದ ಮುಕ್ತಗೊಳಿಸಬಹುದು.
- ಸುಮಾರು 5 ರಿಂದ 15% ಜನರಲ್ಲಿ ಈ ಸೊಂಕು ತೀವ್ರವಾಗುವ ಸಂಭವವಿರುತ್ತದೆ. ಅದರಲ್ಲಿ 2 ರಿಂದ 5% ಜನರು ಮರಣವನ್ನು ಹೊಂದಬಹುದು ಅವರುಗಳಲ್ಲಿ ಪ್ರಮುಖವಾಗಿ ಗಂಭೀರ ಖಾಯಿಲೆಗಳ ಹಿನ್ನಲೆ ಇರುತ್ತದೆ.
ಉದಾಹರಣೆಗೆ
- ಸಕ್ಕರೆ ಖಾಯಿಲೆ
- ಕಿಡ್ನಿ ಸಮಸ್ಯೆ (Chronic kidney Dieseas)
- ಶ್ವಾಸಕೋಶದ ತೊಂದರೆಗಳು
- ಕೀಮೋ ಥೆರೆಫಿ ರೋಗಿಗಳು (Chemotherapy)
- Steroid ಬಳಸುವವರು
- Bone marrow ತೊಂದರೆ ಇರುವವರು
- ಮಧ್ಯಪಾನ ಮತ್ತು ಧೂಮಪಾನಿಗಳು
- 8.8 ವರ್ಷದ ಕೆಳಗಿನ ಮಕ್ಕಳು
- 9.60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರು
- ಗರ್ಭಿಣಿಯರು
- ರೋಗ ನಿರೋಧಕ ಶಕ್ತಿ ಕಡಿಮೆಯಿರುವ (ಯಾವುದೇ ಕಾರಣದಿಂದ)
ವೈರಾಣುವಿನ ಸೊಂಕನ್ನು ತಡೆಯಲು ನಮ್ಮ ದೇಹದಲ್ಲಿನ ರಕ್ಷಣಾ ವ್ಯವಸ್ಥೆಗಳು ಮಾನವನ ಶರೀರವು ಎರಡು ರೀತಿಯ ರಕ್ಷಣಾ ವ್ಯವಸ್ಥೆಯನ್ನು ಹೊಂದಿದೆ.
- ಸಹಜ ರಕ್ಷಣೆ (Innate immunity) -ಜನ್ಮ ತಳಿ ಬಂದಿರುವುದು
- ಅರ್ಜಿಸಿದ ರಕ್ಷಣೆ (acquired immunity)
- ಅರ್ಜಿಸಿದ ರಕ್ಷಣೆ – ಲಸಿಕಾ ವಿದಾನದಿಂದ
ಒಂದು ವೈರಾಣು ದೇಹದಲ್ಲಿ ಪ್ರವೇಶಿಸುತ್ತಿದ್ದ ಹಾಗೆಯೇ ಅದನ್ನು ನಿಷ್ಕ್ರಿಯಗೊಳಿಸುವ ಪ್ರಕ್ರಿಯೆಯು lymphocytes ಮತ್ತು microphages ಗಳಿಂದ ಶುರುವಾಗುತ್ತದೆ. ಈ ಪ್ರಕ್ರಿಯೆಯಲ್ಲಿ ವೈರಾಣುವು ಬಹಳ ಪ್ರಭಲವಾಗಿದ್ದಲ್ಲಿ, ಖಾಯಿಲೆ ಪ್ರಕ್ರಿಯೆಯು ಮುಂದುವರೆಯುತ್ತದೆ. ಇಲ್ಲವಾದಲ್ಲಿ ಈ ಪ್ರಕ್ರಿಯೆಯು ಇಲ್ಲಿಗೆ ನಿಲ್ಲುತ್ತದೆ.ಇದೇ ಸಮಯದಲ್ಲಿ ನಮ್ಮ ದೇಹದಲ್ಲಿರುವ IgA antibodyಗಳು ಮತ್ತು INTERFERONS ಗಳು ಸಹ ತಕ್ಷಣ ರಕ್ಷಣೆಗೆ ಬಂದು ವೈರಸ್ನ್ನು ನಿಷ್ಕ್ರಿಯಗೊಳಿಸಲು ಪ್ರಯತ್ನಿಸುತ್ತದೆ.
ಮೇಲೆ ತಿಳಿಸಿದ ಎರಡೂ ವಿಧಾನಗಳು ಯಶಸ್ವಿಯಾಗದಿದ್ದಾಗ ನಮ್ಮ B-LYMPHOCYTES (Plasma Cells) ಗಳು ಸಕ್ರಿಯವಾಗಿ ವೈರಾಣುವಿನ ವಿರುದ್ದ ನಿರ್ದಿಷ್ಟವಾದ ಚಿ antibody ಗಳನ್ನು ಉತ್ಪನ್ನ ಮಾಡುತ್ತದೆ. ಅದರಂತೆಯೇ T-Lymphocytes ಗಳು ವೈರಸ್ಗಳನ್ನು ನಿಷ್ಕ್ರಿಯಗೊಳಿಸುವ ಕಾರ್ಯದಲ್ಲಿ ತೊಡಗುತ್ತದೆ. ಈ ಎರಡು ಕ್ರಿಯೆಗಳು ರೋಗ ಲಕ್ಷಣ ಶುರುವಾದ 48 ರಿಂದ 72 ತಾಸುಗಳ ನಂತರ ಶುರುವಾಗುತ್ತದೆ. ಸುಮಾರು 2 ರಿಂದ 3 ವಾರಗಳ ಕಾಲ ಮುಂದುವರೆದು ಮೈಯಲ್ಲಿ ಒಂದು ವೈರಾಣು ಇರದ ಹಾಗೆ ನೋಡಿಕೊಳ್ಳುತ್ತವೆ. ಈ ಎರಡೇ ವಿಧಾನದಿಂದ ಮೈಯಲ್ಲಿ ಬರುವ ರೋಗನಿರೋಧಕ ಶಕ್ತಿಯು ಆ ವೈರಾಣುವಿನ ವಿರುದ್ದ ಜೀವನ ಪೂರ್ತಿ ಉಳಿಯುತ್ತದೆ. ಮತ್ತೊಮ್ಮೆ ಇದೇ ವೈರಾಣು ದೇಹದಲ್ಲಿ ಸೊಂಕು ಬರದ ಹಾಗೆ ನೋಡಿಕೊಳ್ಳುತ್ತದೆ (ಈ ಮೇಲೆ ತಿಳಿಸಿದ ಪ್ರಕ್ರಿಯೆಯನ್ನೆ ನಾವು ಲಸಿಕಾ ವಿಧಾನದಿಂದ ಬಳಸಿ, ದೀರ್ಘಕಾಲದ ರೋಗ ನಿರೋಧಕ ಶಕ್ತಿ ಬರುವ ಹಾಗೆ ಮಾಡಲಾಗುತ್ತದೆ Vaccination/ Immunization process) ನಮ್ಮ ದೇಹದ ರಕ್ಷಣಾ ವ್ಯವಸ್ಥೆಯ ಪ್ರಕ್ರಿಯೆಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಒಬ್ಬ ವ್ಯಕ್ತಿಯ ಅನುವಂಶಿಕತೆ, ವಯಸ್ಸು, ಊಟೋಪಚಾರ ಮತ್ತು ಆರೋಗ್ಯ ಸ್ಥಿತಿಯ ಮೇಲೆ ಅವಲಂಭಿಸಿರುತ್ತದೆ.
ಈ ವೈರಾಣುವನ್ನು ತಡೆಗಟ್ಟುವ ಬಗೆ
- ನಮ್ಮ ದೇಹದ ರೋಗ ನಿರೋಧಕ ಶಕ್ತಿ
- ಸದ್ಯದಲ್ಲಿ ಯಾವುದೇ ಪರಿಣಾಮಕಾರಿ ಔಷಧಿಗಳಿಲ್ಲ. ಹಾಗೆಂದು ನಿರಾಶೆಗೊಳ್ಳುವುದು ಬೇಕಿಲ್ಲ. ಈ ಮೊದಲು ಸಂಶೋಧನೆಗೊಂಡಿರುವ ಕೆಲವೊಂದು anti-viral medicine ಗಳನ್ನು ವಿವಿಧ ಸಂಯೋಜನೆಯಲ್ಲಿ ಬಳಸಿ ಸಕಾರಾತ್ಮಕವಾದ ಫಲಿತಾಂಶವನ್ನು ಪಡೆದ ನಿದರ್ಶನಗಳಿವೆ.
- ಇವೆಲ್ಲದಕ್ಕಿಂತ ಪರಿಣಾಮಕಾರಿ ಮತ್ತು ಸರಳವಾದ ವಿಧಾನವೆಂದರೆ
- A. ಖಾಯಿಲೆ ಇರುವವರನ್ನು ಪ್ರತ್ಯೇಕಿಸುವುದು. (isolation)
- ಖಾಯಿಲೆ ಇದ್ದವರ ನಿಕಟ ಸಂಪರ್ಕದಲ್ಲಿದ್ದವರನ್ನು ಬೇರ್ಪಡಿಸುವುದು. (Home Quarantine)
- C. ಸಮುದಾಯದಲ್ಲಿ ಸಾಮಾಜಿಕ ಅಂತರವನ್ನು (Social Distancing) ಕಡ್ಡಾಯವಾಗಿ ಪಾಲಿಸುವುದು.
ಮೇಲೆ ತಿಳಿಸಿದ ವಿಚಾರದ ಸಾರಾಂಶವೇನೆಂದರೆ ನಮ್ಮ ಶತ್ರುವಾದ ವೈರಸ್ನಿಂದ ದೂರವಿರುವುದು ಅಥವಾ ತಪ್ಪಿಸಿಕೊಂಡು ಓಡುವುದು. ಇದು ಕೇಳಲಿಕ್ಕೆ ಎಷ್ಟು ಹಾಸ್ಯಸ್ಪದವಲ್ಲವೇ??? ಜಗತ್ತಿನ ಅತ್ಯಂತ ಬಲಿಷ್ಠ ಮತ್ತು ಬುದ್ದಿಶಾಲಿ ಜೀವಿ ಒಂದು ಸೂಕ್ಷ್ಮಾಣುವಿನಿಂದ ತಪ್ಪಿಸಿಕೊಂಡು ಓಡುವುದು. ಆದರೆ ಈ ಸೊಂಕನ್ನು ಮತ್ತು ಸಾಂಕ್ರಮಿಕವನ್ನು ಯಶಸ್ವಿಯಾಗಿ ತಡೆಯಬೇಕೆಂದರೆ ಮೇಲೆ ತಿಳಿಸಿರುವ ವಿಧಾನವೇ ಅತ್ಯಂತ ಸರಳ ಮತ್ತು ಸೂಕ್ತ.
covid-19 ವೈರಸ್ ಮೇಲೆ ಬಾಹ್ಯ ವಸ್ತುಗಳ ಪ್ರಭಾವವೇನು?
- >540c ಕ್ಕಿಂತ ಹೆಚ್ಚಿನ ತಾಪಮಾನದಲ್ಲಿ ವೈರಾಣು ಸಾಯುತ್ತದೆ.
- ರಾಸಾಯನಿಕ ದ್ರವಗಳಾದ ÁzÀ FORMALDEHYDE, GLUTARALDEHYDE, SODIUM HYPOCHLORIDE (BLEECHING POWDER), BETA PROPIO-LACTONE ಈ ದ್ರವಗಳ ಸಿಂಪಡನೆಯಿಂದ ವೈರಾಣುವನ್ನು ಕೆಲವು ನಿಮಿಷಗಳಲ್ಲೆ ನಿಷ್ಕ್ರಿಯೆಗೊಳಿಸಬಹುದು. ಮೇಲೆ ತಿಳಿಸಿದ ಉಳಿದ ರಾಸಾಯನಿಕ ದ್ರವಗಳನ್ನು ಸಮುದಾಯ ಸ್ವಚ್ಛತೆಗೆ ಬಳಸಬೇಕು. ಈ ದ್ರವ ರಾಸಾಯನಿಕಗಳ ಸಂಪರ್ಕವನ್ನು ನಮ್ಮ ಚರ್ಮಕ್ಕೆ ದುಷ್ಪರಿಣಾಮ ಮಾಡುವುದರಿಂದ ಎಚ್ಚರಿಕೆ ವಹಿಸುವುದು ಸೂಕ್ತ.
- >70% alcohol ಇರುವ ದ್ರಾವಣಗಳಿಂದ ಕೆಲವು ಸೆಕೆಂಡ್ಗಳಲ್ಲಿಯೇ ವೈರಸ್ ನಿಷ್ಕ್ರಿಯಗೊಳ್ಳುತ್ತದೆ. ನಾವು ಬಳಸುವ ಹ್ಯಾಂಡ್ ಸ್ಯಾನಿಟೈಜರ್ಗಳಲ್ಲಿ ಚಿಟಛಿohoಟ ನ ಪ್ರತಿಶತ >70% ಇರುತ್ತದೆ. ಆದ್ದರಿಂದ ಅದು ಬಹು ಉಪಯೋಗಿಯಾಗಿರುತ್ತದೆ.
- ನಿರ್ಜೀವ ವಸ್ತುಗಳ ಮೇಲೆ ಹತ್ತಿರುವ ವೈರಾಣು 15-20ನಿಮಿಷದವರೆಗೆ ಮಾತ್ರ ಬದುಕಿರುತ್ತದೆ.
ಈ ರೋಗ ಹರಡುವ ಹಂತಗಳು
stage I:-ಸೊಂಕಿರುವ ದೇಶದಿಂದ, ಸೊಂಕಿರುವ ವ್ಯಕ್ತಿ ಸ್ವದೇಶಕ್ಕೆ ಆಗಮಿಸಿರುವುದು. (ನಮ್ಮ ದೇಶದಲ್ಲಿ ಸೊಂಕು ಪ್ರಾರಂಭ) (Primary/ Index Case)
stage II:- ಸೊಂಕಿತರ ನಿಕಟ ಸಂಪರ್ಕದಲ್ಲಿರುವವರಲ್ಲಿ ಸೊಂಕು ಕಾಣಿಸಿಕೊಳ್ಳುವುದು.
stage III:- ವಿದೇಶದಿಂದ ಬಂದಿರದೇ, ಮತ್ತು ಬಂದಿರುವವರ ನಿಕಟ ಸಂಪರ್ಕದಲ್ಲಿರದ, ವ್ಯಕ್ತಿಗಳಲ್ಲಿ ಕಂಡುಬರುವ ಸೊಂಕು (Community Spread)
stage IV:- ದೇಶದ ವಿವಿಧ ಭಾಗಗಳಲ್ಲಿ ಸೋಂಕು ಹರಡುವುದು. (ex:- ನಿಜಾಮುದ್ದೀನ್ ಪ್ರಕರಣ)
ಈಗ ಲಭ್ಯವಿರುವ ಮಾಹಿತಿಯ ಪ್ರಕಾರ ದೇಶದ ಬಹಳಷ್ಟು ಭಾಗಗಳು ಎರಡನೇ ಹಂತದಲ್ಲಿದ್ದು, ಕೆಲವೊಂದು ಭಾಗಗಳು 3ನೇ ಹಂತ ಪ್ರವೇಶಿಸುತ್ತಿದೆ.
ದೇಶವನ್ನು Lock-down ಮಾಡುವುದು ಹೇಗೆ ಸಹಕಾರಿ?
ಈ ವೈರಾಣುವು ತಾನಾಗಿಯೇ ಚಲನಶೀಲವಲ್ಲ. ಈ ವೈರಾಣುವನ್ನು ಸೊಂಕಿತ ವ್ಯಕ್ತಿಯೇ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ತೆಗೆದುಕೊಂಡು ಹೋಗಬಹುದು. ಮತ್ತು ಸೊಂಕಿತ ವ್ಯಕ್ತಿಯಿಂದಲೇ ಮತ್ತೊಂದು ನಿಕಟ ಸಂಪರ್ಕದಲ್ಲಿ ಬಂದ ವ್ಯಕ್ತಿಗೆ ಹರಡಬೇಕು. Lock-down ಮತ್ತು Social-distancing ನ ಮರ್ಮ ಮೇಲಿನ ವಿಚಾರದಲ್ಲಿ ಅಡಗಿದೆ.
covid-19 ಭಾರತದಲ್ಲಿ ಏನಿದರ ಪಾಡು?
ಈಗಾಗಲೇ ಅತಿಯಾಗಿ ಸೋಂಕು ಪೀಡಿತರಾಗಿರುವ ಪಾಶ್ಚಿಮಾತ್ಯ ದೇಶಗಳನ್ನು ಗಮನಿಸಿವಿಶ್ಲೇಶಿಸುವುದಾದರೆ ಕೆಲವೊಂದು ದಿಗ್ಬ್ರಮೆಗೊಳಿಸುವ ವಿಚಾರಗಳು ಹೊರಹೊಮ್ಮುತ್ತದೆ.
1) ಈ ವೈರಾಣುವಿನ ಸೊಂಕು ತಾಗಿಸುವ ಕ್ಷಮತೆ(Infectivity) ತುಂಬಾ ಹೆಚ್ಚಾಗಿದೆ. ಅಂದರೆ ಕ್ಷಣ ಮಾತ್ರದಲ್ಲಿ ದೊಡ್ಡ ಸಮುದಾಯವನ್ನೇ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಸಾಮಥ್ರ್ಯವಿದೆ
2) ವೃದ್ಧರಲ್ಲಿ ಮತ್ತು ದೀರ್ಘಸ್ವರೂಪದ ಖಾಯಿಲೆಗಳ ಹಿನ್ನೆಲೆಯವರಿಗೆ ಮಾರಣಂತಿಕವಾಗಿದೆ. (Virulence)
3) ಕನಿಷ್ಠ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದ ಮತ್ತು ಸ್ವಯಂ ಪ್ರತ್ಯೇಕಿಸಿಕೊಳ್ಳದವರು (Self Quarantine) ಸೊಂಕಿಗೆ ಗುರಿಯಾಗಿದ್ದಾರೆ.
4) ಅತ್ಯಂತ ಪರಿಣಾಮಕಾರಿ ಆರೋಗ್ಯ ಸೇವೆಗಳನ್ನು ಹೊಂದಿದ್ದರೂ, ಸೊಂಕಿತರ ಸಂಖ್ಯೆ ಕ್ಷಿಪ್ರಗತಿಯಲ್ಲಿ ಮಿತಿಮೀರುವ ಪರಿಸ್ಥಿತಿಯಿಂದ, ಒಂದು ಒಳ್ಳೆಯ ಆರೋಗ್ಯ/ಆಸ್ಪತ್ರೆಯ ವ್ಯವಸ್ಥೆಯನ್ನು ಸಹ ವಿಫಲಗೊಳಿಸಿ, ನರಳುವ-ಸಾಯುವ ರೋಗಿಗಳನ್ನು ಮೂಕ ಪ್ರೇಕ್ಷಕರಾಗಿ ನೋಡುವಂತೆ ಮಾಡುತ್ತದೆ.
5) ಸರ್ಕಾರಗಳು ನೀಡಿದ ಮಾರ್ಗಸೂಚಿಗಳನ್ನು ಪಾಲಿಸದೇ ತಮ್ಮನ್ನು ತಾವು ಶಿಸ್ತುಬದ್ಧಗೊಳಿಸದೇ ಇರುವುದರಿಂದ, ಅವರಲ್ಲಿ (ಪಾಶ್ಚಿಮಾತ್ಯ ದೇಶಗಳು) ಸೋಂಕಿತರ ಸಂಖ್ಯೆಯು ಕೈ ಮೀರಿ ಹೋಗಿರುವುದನ್ನು ಕಾಣಬಹುದಾಗಿದೆ.
ಈ ಮೇಲಿನ ಎಲ್ಲಾ ಅಂಶಗಳನ್ನು ಗಮನಿಸಿದರೆ ನಮ್ಮ ದೇಶದಲ್ಲಿ ಬಹಳ ಪೂರಕ ವಾತವರಣವಿದೆ. ನಮ್ಮ ಜನರು ವಿದೇಶಿಗರು ಮಾಡಿದ ತಪ್ಪುಗಳನ್ನು ಪುನಾರವರ್ತಿಸಬಾರದಷ್ಟೇ.
ಮುಂದುವರೆದ ರಾಷ್ಟ್ರಗಳಿಗೆ ಹೋಲಿಸಿದಲ್ಲಿ ನಮ್ಮ ದೇಶವು ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರವಾಗಿದ್ದು, ನಮ್ಮಲ್ಲಿ ಆರೋಗ್ಯ ಸೇವೆಯು ಅಷ್ಟಕ್ಕಷ್ಟೆ ಮತ್ತು ನಮ್ಮ ಜೀವನಶೈಲಿಯೂ ಅತ್ಯಂತ ಉತ್ಕøಷ್ಟವಾಗಿಲ್ಲದಿರುವುದರಿಂದ, ನಾವು ಚಿಕ್ಕ ವಯಸ್ಸಿನಿಂದಲೇ ಬಹಳಷ್ಟು ಬ್ಯಾಕ್ಟೀರಿಯಾ ಮತ್ತು ವೈರಸ್ಗಳ ಸಾಮ್ಯವಾದ ಸೋಂಕುಗಳಿಗೆ ತುತ್ತಾಗಿರುತ್ತೇವೆ. ಇದರಿಂದ ನಮ್ಮ ದೇಹದಲ್ಲಿ ಸಾಕಷ್ಟು ಆರ್ಜಿಸಿದ ರೋಗ ನಿರೋಧಕ ಶಕ್ತಿ ಬಂದಿರುತ್ತದೆ. ಇದು ಇಂತಹ ಸನ್ನಿವೇಶಗಳಲ್ಲಿ ಬಹಳಷ್ಟು ಸಹಾಯಕಾರಿ. ನಮ್ಮ ದೇಶದಲ್ಲಿ ಯುವ ಪೀಳಿಗೆಯ ಜನಸಂಖ್ಯೆ ಯಥೇಚ್ಛವಾಗಿರುವುದರಿಂದ, ಈ covid-19 ವೈರಸ್ನ ಪ್ರಭಾವ ಮತ್ತು ಹಾವಳಿಯನ್ನು ತಡೆಗಟ್ಟುವಲ್ಲಿ ಅನೂಕೂಲಕರವಾದ ವಾತಾವರಣವಿದೆ.
ನಮ್ಮ ದೇಶದಲ್ಲಿ ಒಟ್ಟಾರೆ ಸುಮಾರು 10ಲಕ್ಷ ಜನರನ್ನು ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಕೊಡುವ ವ್ಯವಸ್ಥೆ ಇದೆ ಮತ್ತು ಸುಮಾರು 12 ಸಾವಿರ ಜನರಿಗೆ ತೀವ್ರಾ ನಿಗಾ ಘಟಕದಲ್ಲಿಟ್ಟು ventilator ನಲ್ಲಿ ಇರಿಸಿ, ಚಿಕಿತ್ಸೆ ಮಾಡುವ ಸಾಮಾಥ್ರ್ಯವಿದೆ.
ಹೀಗೊಂದು ಪರಿಸ್ಥಿತಿಯನ್ನು ಅವಲೋಕಿಸೋಣ
ನಮ್ಮ ದೇಶದ ಜನಸಂಖ್ಯೆ ಸುಮಾರು130 ಕೋಟಿ, ಅದರಲ್ಲಿ ಕೇವಲ 15% ಜನರಿಗೆ ಸೊಂಕು ತಗುಲಿದರೆ 2 ಕೋಟಿ ಜನ ಆಸ್ಪತ್ರೆ ಕಡೆ ಮುಖ ಮಾಡಿ, ಅದರಲ್ಲಿ ಕೇವಲ 15% ಜನರಿಗೆ ಅಂದರೆ 30 ಲಕ್ಷ ಜನರಿಗೆ ಒಳರೋಗಿಯಾಗಿ ಚಿಕಿತ್ಸೆ ಕೊಡುವುದು ಮತ್ತು ಅದರಲ್ಲಿ ಕೇವಲ 15% ಜನರಿಗೆ ಅಂದರೆ 45 ಸಾವಿರ ರೋಗಿಗಳಿಗೆ ತೀವ್ರಾ ನಿಗಾ ಘಟಕದ ಅವಶ್ಯಕತೆ ಬಂದಲ್ಲಿ ನಮ್ಮಲ್ಲಿ ಅವರಿಗೆ ಚಿಕಿತ್ಸೆ ಕೊಡುವ ಶಕ್ತಿ ಇದೆಯೇ?? ಇದು ಸಾದ್ಯವೇ??
ಇದು ನಮ್ಮ ಕನಸಿನಲ್ಲಿ ಊಹಿಸಿದರೂ ಸಾದ್ಯವಾಗದ ಕಟು ಸತ್ಯ, ಆದ್ದರಿಂದ ಆ ದುಸ್ಥಿತಿಗೆ ತಲುಪದ ಹಾಗೆ ಮಾಡಬೇಕೆಂದರೆ ಇದುವರೆಗೂ ನಮ್ಮ ಸರ್ಕಾರವು ಸೂಚಿಸಿರುವ ಎಲ್ಲಾ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವ ಸಂಕಲ್ಪದಿಂದ ಸಮರೋಪಾದಿಯಲ್ಲಿ ಕಾರ್ಯೊನ್ಮುಖರಾಗೋಣ ಮತ್ತು ದೇಶವನ್ನು ಉಳಿಸುವ ಪ್ರಕ್ರಿಯೆಯಲ್ಲಿ ನಮ್ಮದೊಂದು ಅಳಿಲು ಸೇವೆಯನ್ನು ಮಾಡಿ ದೇಶದ ಋಣ ತೀರಿಸೋಣ.
ಅನುಸರಿಸಬೇಕಾದ ಮುಂಜಾಗ್ರತೆಗಳು
- ಮನೆಯಲ್ಲಿ ಯಾವುದೇ ಸೋಂಕಿಲ್ಲದವರು ಪಾಲಿಸಬೇಕಾದ ನಿಯಮಗಳು.
- A. Lock down ಪಾಲಿಸಿ
- ಪದೇ ಪದೇ ಹ್ಯಾಂಡ್ವಾಷ್ ಮಾಡುವುದು ಮತ್ತು ಸ್ಯಾನಿಟೈಜರ್ ಗಳನ್ನು ಬಳಸುವ ಅವಶ್ಯಕತೆ ಇಲ್ಲ.
- C. ಮನೆಯಲ್ಲಿ AC ಇದ್ದರೆ 270C ಗಿಂತ ಅಧಿಕ ತಾಪಮಾನದಲ್ಲಿ ಇಡುವುದು.
- D. ಪ್ರೋಟೀನ್ಗಳು ಮತ್ತು vit-c (ಹುಳಿ ಇರುವ ಹಣ್ಣುಗಳು) ಮತ್ತು vit-a (ಕೆಂಪು ಬಣ್ಣದ ತರಕಾರಿಗಳು) ಯಥೇಚ್ಛವಾಗಿ ಬಳಸುವುದರಿಂದ ರೋಗ ನಿರೋಧಕ ಶಕ್ತಿಯು ಉತ್ತಮವಾಗಿರುತ್ತದೆ.
- ಶ್ವಾಸಕೋಶದ ಸಾಮಾಥ್ರ್ಯವನ್ನು ಬಲಗೊಳಿಸಲು ಯೋಗ ಮತ್ತು ಪ್ರಾಣಯಾಮ ಕ್ರಿಯೆಗಳನ್ನು ಮಾಡುವುದು.
- ಮನೆಯಲ್ಲಿ ಯಾರಾದರೂ ಸೋಂಕಿತರ ಸಂಪರ್ಕಕ್ಕೆ ಬಂದು ಸ್ವಯಂ ಪ್ರತ್ಯೇಕಿಸಲ್ಪಟ್ಟಾಗ (Home Quarantine)
- A. ಮೇಲೆ ತಿಳಿಸಿದ ಎಲ್ಲಾ ನಿಯಮಗಳನ್ನು ಪಾಲಿಸುವುದು.
- Quarantine ನಲ್ಲಿರೋ ವ್ಯಕ್ತಿಯನ್ನು ಪ್ರತ್ಯೇಕ ಕೊಠಡಿಯಲ್ಲಿಡುವುದು.
- C. ಅವರ ನಿಕಟ ಸಂಪರ್ಕದಲ್ಲಿ ಮನೆಯ ಯಾವ ಸದಸ್ಯರು ಬರದಂತೆ ನೋಡಿಕೊಳ್ಳುವುದು.
- D. Quarantine ನಲ್ಲಿರೋ ವ್ಯಕ್ತಿ ಮತ್ತು ಅವರ ಸೇವೆಯಲ್ಲಿರುವವರು ನಿಯಮಿತವಾಗಿ ಕೈ ಗಳನ್ನು ತೊಳೆಯುವುದು ಮತ್ತು ಆಗಾಗ ಸ್ಯಾನಿಟೈಜರ್ ಬಳಸುವುದು.
- Quarantine ನಲ್ಲಿರೋ ವ್ಯಕ್ತಿಯ ಬಟ್ಟೆಗಳು ಮತ್ತು ಹೊದಿಕೆಗಳನ್ನು ಅವರ ಕೊಠಡಿಯಲ್ಲೆ ಒಂದು ಬಕೇಟ್ ಕುದಿಯುವ ನೀರಿನಲ್ಲಿ 20 ನಿಮಿಷಗಳ ಕಾಲ ಇಡುವುದು.
ಜಿ. Quarantine e ನಲ್ಲಿರೋ ವ್ಯಕ್ತಿ ಬಳಸುವ ದಿನನಿತ್ಯದ ಎಲ್ಲಾ ಸಾಮಾನುಗಳನ್ನು (ತಟ್ಟೆ, ಲೋಟ, ಮೋಬೈಲ್ ಇತ್ಯಾದಿ) ಇತರರು ಮುಟ್ಟದಂತೆ ಕ್ರಮ ತೆಗೆದುಕೊಳ್ಳುವುದು.
- ಕೆಮ್ಮುವಾಗ ಅಥವಾ ಸೀನುವಾಗ ಭುಜ ಮತ್ತು ಮೊಣಕೈನಿಂದ ಬಾಯಿಯನ್ನು ಮುಚ್ಚಿಕೊಳ್ಳುವುದು.
- ರೋಗದ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ, ತಕ್ಷಣ ನಿರ್ದಿಷ್ಟವಾದ ಆಸ್ಪತ್ರೆಯ ವೈದ್ಯರ ತಪಾಸಣೆಗೆ ಒಳಪಡುವುದು.
- ಸುಮಾರು 14 ದಿನಗಳ Quarantine ಅವಧಿಯ ನಂತರ ಯಾವುದೇ ಲಕ್ಷಣಗಳು ಕಂಡುಬರದೆ ಇದ್ದಲ್ಲಿ, ಸಾಮಾನ್ಯವಾಗಿ ಮನೆಯವರೊಂದಿಗೆ ಬೆರೆಯಬಹುದು.
III. ಈ ಸಾಂಕ್ರಮಿಕವನ್ನು ನಿಯಂತ್ರಿಸುವ ಕಾರ್ಯದಲ್ಲಿ ತೊಡಗಿರುವ ಕಾರ್ಯ ಪಡೆಯವರು.
- ಕಡ್ಡಾಯವಾಗಿ ಓ-95 ಮಾಸ್ಕ್ಗಳನ್ನು ಬಳಸುವುದು
- ಸಾಮಾಜಿಕ ಅಂತರ ಕಾಯ್ದುಕೊಳ್ಳುವುದ
- ಯಾವುದೇ ಸೋಂಕಿತ ವ್ಯಕ್ತಿಯನ್ನು ಮುಟ್ಟಬೇಕಾದ ಪರಿಸ್ಥಿತಿಯಲ್ಲಿ Hand Glove ಮತ್ತು Transperent Face Shield ಬಳಸುವುದು.
- ಮನೆಗೆ ಹಿಂದುರುಗಿದಾಗ ಧರಿಸಿದ ಬಟ್ಟೆಗಳನ್ನು ಹೊರಗಡೆಯೇ ಕುದಿಯುವ ನೀರಿನಲ್ಲಿ ಹಾಕುವುದು ಮತ್ತು ಸ್ನಾನ ಮಾಡುವುದು.
- ಮನೆಯಲ್ಲಿ ಯಾವುದೇ ವಸ್ತುವನ್ನು ಮುಟ್ಟುವ ಮುಂಚೆ ಹ್ಯಾಂಡ್ ಸ್ಯಾನಿಟೈಜರ್ ಬಳಸುವುದು.
STAY HOME | STAY SAFE |SAVE NATION|ಮನೆಯಲ್ಲೇ ಇರಿ | ಸುರಕ್ಷಿತವಾಗಿರಿ | ದೇಶವನ್ನು ರಕ್ಷಿಸಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಆರೋಗ್ಯಕರ ಡಯಟ್ ಮಾಡಲು ಈ ಟಿಪ್ಸ್ ಗಳನ್ನು ಅನುಸರಿಸಿ

ಆರೋಗ್ಯಕರ ಡಯಟ್ ಮಾಡಲು ಈ ಟಿಪ್ಸ್ ಗಳನ್ನು ಅನುಸರಿಸಿ
1.ಪೌಷ್ಟಿಕತೆಯ ಸಮತೋಲನ
ಆರೋಗ್ಯಕರ ಡಯಟ್ನಲ್ಲಿ ಮ್ಯಾಕ್ರೋನ್ಯೂಟ್ರಿಯೆಂಟ್ಗಳು (ಕಾರ್ಬೋಹೈಡ್ರೇಟ್ಗಳು, ಪ್ರೋಟೀನ್ಗಳು, ಕೊಬ್ಬು) ಮತ್ತು ಮೈಕ್ರೋನ್ಯೂಟ್ರಿಯೆಂಟ್ಗಳು (ವಿಟಮಿನ್ಗಳು, ಖನಿಜಗಳು) ಸಮತೋಲನವಿರಬೇಕು. ಉದಾಹರಣೆಗೆ, ಭಾರತೀಯ ಆಹಾರದಲ್ಲಿ ರಾಗಿ, ಜೋಳ, ಕ್ವಿನೋವಾ, ದ್ವಿದಳ ಧಾನ್ಯಗಳು, ಮತ್ತು ಸೊಪ್ಪುಗಳು ಸಮತೋಲಿತ ಆಹಾರವನ್ನು ಒದಗಿಸುತ್ತವೆ.
ಗ್ಲೈಸೆಮಿಕ್ ಇಂಡೆಕ್ಸ್ (GI) : ಕಡಿಮೆ GI ಆಹಾರಗಳಾದ ಓಟ್ಸ್, ಕಂದು ಅಕ್ಕಿ, ಮತ್ತು ಕಾಳುಗಳು ರಕ್ತದ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡುತ್ತವೆ, ಇದು ಡಯಾಬಿಟೀಸ್ ನಿರ್ವಹಣೆಗೆ ಸಹಾಯಕವಾಗಿದೆ.
2. ಸ್ಥಳೀಯ ಮತ್ತು ಋತುಮಾನದ ಆಹಾರಗಳ ಆಯ್ಕೆ
ಕರ್ನಾಟಕದಂತಹ ಪ್ರದೇಶಗಳಲ್ಲಿ, ರಾಗಿ ರೊಟ್ಟಿ, ತರಕಾರಿ ಸಾಂಬಾರ್, ಕೋಸಂಬರಿ, ಮತ್ತು ಒಣಗಿದ ಹಣ್ಣುಗಳು (ಬಾದಾಮಿ, ಗೋಡಂಬಿ) ಸ್ಥಳೀಯವಾಗಿ ಲಭ್ಯವಿರುವ ಆರೋಗ್ಯಕರ ಆಯ್ಕೆಗಳಾಗಿವೆ. ಇವು ಪರಿಸರ ಸ್ನೇಹಿಯಾಗಿರುತ್ತವೆ ಮತ್ತು ತಾಜಾತನವನ್ನು ಖಾತ್ರಿಪಡಿಸುತ್ತವೆ.
ಋತುಮಾನದ ಹಣ್ಣುಗಳು : ಮಾವಿನಹಣ್ಣು, ಜಾಮೂನ್, ದಾಳಿಂಬೆ ಇತ್ಯಾದಿಗಳು ವಿಟಮಿನ್ಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತವೆ.
3. ಗಟ್ ಹೆಲ್ತ್ (ಕರುಳಿನ ಆರೋಗ್ಯ)
ಆರೋಗ್ಯಕರ ಕರುಳು ಒಟ್ಟಾರೆ ಆರೋಗ್ಯಕ್ಕೆ ಮುಖ್ಯವಾಗಿದೆ. ಮೊಸರು, ಮಜ್ಜಿಗೆ, ಒಣಗಿದ ಹಣ್ಣುಗಳು, ಮತ್ತು ಫೈಬರ್ ಶ್ರೀಮಂತ ಆಹಾರಗಳಾದ ತರಕಾರಿಗಳು ಮತ್ತು ಧಾನ್ಯಗಳು ಪ್ರೋಬಯಾಟಿಕ್ಗಳು ಮತ್ತು ಪ್ರಿಬಯಾಟಿಕ್ಗಳನ್ನು ಒದಗಿಸುತ್ತವೆ. ಉದಾಹರಣೆ: ರಾಗಿ ಮತ್ತು ತರಕಾರಿಗಳಿಂದ ತಯಾರಿಸಿದ ಖಿಚಡಿ ಕರುಳಿನ ಆರೋಗ್ಯಕ್ಕೆ ಒಳ್ಳೆಯದು.
4. ಸಂಸ್ಕರಿತ ಆಹಾರದಿಂದ ದೂರ
ಸಂಸ್ಕರಿತ ಆಹಾರಗಳು (ಚಿಪ್ಸ್, ಸಕ್ಕರೆಯಿಂದ ಕೂಡಿದ ಪಾನೀಯಗಳು, ಫಾಸ್ಟ್ ಫುಡ್) ದೀರ್ಘಕಾಲೀನವಾಗಿ ಒಬೇಸಿಟಿ, ಡಯಾಬಿಟೀಸ್, ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗಬಹುದು. ಇವುಗಳ ಬದಲಿಗೆ ತಾಜಾ, ಗೃಹ ತಯಾರಿಕೆಯ ಆಹಾರವನ್ನು ಆದ್ಯತೆ ನೀಡಿ.
5. ವೈಯಕ್ತಿಕಗೊಳಿಸಿದ ಡಯಟ್
ವಯಸ್ಸು, ಲಿಂಗ, ದೈಹಿಕ ಚಟುವಟಿಕೆ, ಮತ್ತು ಆರೋಗ್ಯ ಸ್ಥಿತಿಗೆ ತಕ್ಕಂತೆ ಡಯಟ್ ರೂಪಿಸಿ. ಉದಾಹರಣೆಗೆ, ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ಗಳು ಬೇಕಾಗುತ್ತವೆ, ಆದರೆ ವಯಸ್ಸಾದವರಿಗೆ ಕಡಿಮೆ ಕ್ಯಾಲೋರಿ ಆದರೆ ವಿಟಮಿನ್ಗಳ ಶ್ರೀಮಂತ ಆಹಾರ ಸೂಕ್ತವಾಗಿರುತ್ತದೆ.
6. ಹೈಡ್ರೇಷನ್ ಮತ್ತು ಜೀವನಶೈಲಿ
ದಿನಕ್ಕೆ 2-3 ಲೀಟರ್ ನೀರು ಕುಡಿಯಿರಿ. ತೆಂಗಿನೀರು, ಮಜ್ಜಿಗೆ, ಅಥವಾ ಗಿಡಮೂಲಿಕೆ ಚಹಾವನ್ನು ಸೇವಿಸಿ. ಆರೋಗ್ಯಕರ ಡಯಟ್ನ ಜೊತೆಗೆ, 30 ನಿಮಿಷಗಳ ದೈಹಿಕ ಚಟುವಟಿಕೆ (ಯೋಗ, ವಾಕಿಂಗ್, ಅಥವಾ ಜಿಮ್) ಮತ್ತು 7-8 ಗಂಟೆಗಳ ನಿದ್ರೆಯನ್ನು ಸಂಯೋಜಿಸಿ.
ನಿರ್ದಿಷ್ಟ ಆರೋಗ್ಯಕರ ಡಯಟ್ ಯೋಜನೆ
ಬೆಳಗಿನ ಉಪಾಹಾರ:ರಾಗಿ ದೋಸೆ + ಚಟ್ನಿ, ಅಥವಾ ಓಟ್ಸ್ ಉಪ್ಮಾ + ತರಕಾರಿಗಳು. ಮಧ್ಯಾಹ್ನದ ತಿಂಡಿ: ತೆಂಗಿನೀರು ಅಥವಾ ಮೊಸರು + ಒಂದು ಹಣ್ಣು (ಸೀಬೆ, ಬಾಳೆಹಣ್ಣು).
ಮಧ್ಯಾಹ್ನದ ಊಟ: ಕಂದು ಅಕ್ಕಿ, ಸಾಂಬಾರ್, ಪಾಲಕ್ ಸೊಪ್ಪಿನ ಪಲ್ಯ, ಮತ್ತು ಕೋಸಂಬರಿ. ಸಂಜೆಯ ತಿಂಡಿ: ಬೇಯಿಸಿದ ಕಾಳುಗಳು (ಕಡಲೆಕಾಯಿ, ಕಡಲೆ) ಅಥವಾ ಒಣಗಿದ ಹಣ್ಣುಗಳು.ರಾತ್ರಿಯ ಊಟ: ರಾಗಿ ರೊಟ್ಟಿ + ತರಕಾರಿ ಕೂಟು, ಅಥವಾ ಜೋಳದ ರೊಟ್ಟಿ + ಮೊಸರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
FOR STUDENTS | ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಹೀಗಿರಲಿ ನಿಮ್ಮ ತಯಾರಿ..!

ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಬಹುದು:
1. ಪರೀಕ್ಷೆಯನ್ನು ಅರ್ಥಮಾಡಿಕೊಳ್ಳಿ: ಪರೀಕ್ಷೆಯ ಪಠ್ಯಕ್ರಮ, ಪ್ರಶ್ನೆ ಪತ್ರಿಕೆಯ ಮಾದರಿ, ಅಂಕಗಳ ವಿಂಗಡಣೆ ಮತ್ತು ಸಮಯದ ಮಿತಿಯನ್ನು ಅಧ್ಯಯನ ಮಾಡಿ. ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಪರಿಶೀಲಿಸಿ, ಯಾವ ವಿಷಯಗಳು ಪ್ರಮುಖವಾಗಿವೆ ಎಂದು ತಿಳಿಯಿರಿ.
2. ಅಧ್ಯಯನ ಯೋಜನೆ ರೂಪಿಸಿ:ಪಠ್ಯಕ್ರಮವನ್ನು ಚಿಕ್ಕ ಚಿಕ್ಕ ಭಾಗಗಳಾಗಿ ವಿಂಗಡಿಸಿ, ದಿನನಿತ್ಯದ ಗುರಿಗಳನ್ನು ನಿಗದಿಪಡಿಸಿ.ಕಠಿಣ ವಿಷಯಗಳಿಗೆ ಹೆಚ್ಚು ಸಮಯ ಮೀಸಲಿಡಿ ಮತ್ತು ದೈನಂದಿನ/ಸಾಪ್ತಾಹಿಕ ಗುರಿಗಳನ್ನು ರಚಿಸಿ.
3. ಗುಣಮಟ್ಟದ ಅಧ್ಯಯನ ಸಾಮಗ್ರಿ:ಪ್ರಮಾಣಿತ ಪುಸ್ತಕಗಳು, ಆನ್ಲೈನ್ ಸಂಪನ್ಮೂಲಗಳು, ಮತ್ತು ಕೋಚಿಂಗ್ ಸಾಮಗ್ರಿಗಳನ್ನು ಬಳಸಿ.NCERT ಪುಸ್ತಕಗಳು (UPSC, SSC ಗೆ) ಅಥವಾ ಇತರ ಪ್ರಮಾಣಿತ ಉಲ್ಲೇಖ ಪುಸ್ತಕಗಳನ್ನು ಆಯ್ಕೆ ಮಾಡಿ.
4.ಸಮಯ ವ್ಯವಸ್ಥಾಪನೆ:ದಿನಕ್ಕೆ 5-6 ಗಂಟೆ ಗುಣಮಟ್ಟದ ಅಧ್ಯಯನಕ್ಕೆ ಮೀಸಲಿಡಿ, ಆದರೆ ವಿರಾಮಗಳನ್ನು ಒಳಗೊಂಡಿರಿ.ಪರೀಕ್ಷೆಯ ಸಮಯದಂತೆ ಅಭ್ಯಾಸ ಮಾಡಿ, ಉದಾಹರಣೆಗೆ, ಮಾಕ್ ಟೆಸ್ಟ್ಗಳನ್ನು ನಿಗದಿತ ಸಮಯದಲ್ಲಿ ಬರೆಯಿರಿ.
5.ಮಾಕ್ ಟೆಸ್ಟ್ ಮತ್ತು ಹಿಂದಿನ ಪ್ರಶ್ನೆಗಳು: ನಿಯಮಿತವಾಗಿ ಮಾಕ್ ಟೆಸ್ಟ್ಗಳನ್ನು ತೆಗೆದುಕೊಳ್ಳಿ, ತಪ್ಪುಗಳನ್ನು ವಿಶ್ಲೇಷಿಸಿ.ಹಿಂದಿನ ವರ್ಷಗಳ ಪ್ರಶ್ನೆಗಳನ್ನು ಅಭ್ಯಾಸ ಮಾಡಿ, ಪರೀಕ್ಷೆಯ ಮಾದರಿಯನ್ನು ಅರ್ಥಮಾಡಿಕೊಳ್ಳಿ.
6.ಪುನರಾವರ್ತನೆ ಮತ್ತು ಟಿಪ್ಪಣಿಗಳು: ಪ್ರಮುಖ ವಿಷಯಗಳ ಸಂಕ್ಷಿಪ್ತ ಟಿಪ್ಪಣಿಗಳನ್ನು ತಯಾರಿಸಿ, ಇದು ಕೊನೆಯ ಕ್ಷಣದ ಪುನರಾವರ್ತನೆಗೆ ಸಹಾಯಕವಾಗುತ್ತದೆ. ಸೂತ್ರಗಳು, ದಿನಾಂಕಗಳು, ಮತ್ತು ಪ್ರಮುಖ ಸಂಗತಿಗಳನ್ನು ನಿಯಮಿತವಾಗಿ ಓದಿರಿ.
7.ವಿಷಯಾಧಾರಿತ ಕೌಶಲ: ಗಣಿತ/ತಾರ್ಕಿಕತೆ: ದಿನನಿತ್ಯ ಗಣಿತದ ಸಮಸ್ಯೆಗಳನ್ನು ಬಿಡಿಸಿ, ಕಾಲಗಣನೆಯನ್ನು ಅಭ್ಯಾಸ ಮಾಡಿ. ಭಾಷೆ/ಇಂಗ್ಲಿಷ್: ಓದುವಿಕೆ, ವ್ಯಾಕರಣ, ಮತ್ತು ಶಬ್ದಕೋಶವನ್ನು ಸುಧಾರಿಸಿ.ಸಾಮಾನ್ಯ ಜ್ಞಾನ: ದಿನಪತ್ರಿಕೆಗಳು, ಆನ್ಲೈನ್ ಸಂಪನ್ಮೂಲಗಳಿಂದ ಕರೆಂಟ್ ಅಫೇರ್ಸ್ ಓದಿರಿ.
8.ಆರೋಗ್ಯ ಮತ್ತು ಮಾನಸಿಕ ಶಕ್ತಿ:ಆರೋಗ್ಯಕರ ಆಹಾರ, ವ್ಯಾಯಾಮ, ಮತ್ತು 6-8 ಗಂಟೆ ನಿದ್ದೆಯನ್ನು ಕಾಪಾಡಿಕೊಳ್ಳಿ. ಧ್ಯಾನ ಅಥವಾ ಯೋಗದಿಂದ ಒತ್ತಡವನ್ನು ನಿಯಂತ್ರಿಸಿ.
9.ಸಕಾರಾತ್ಮಕ ಮನೋಭಾವ:ಸ್ಥಿರವಾದ ಕೆಲಸದ ಶೈಲಿಯನ್ನು ಇರಿಸಿಕೊಳ್ಳಿ, ಸಣ್ಣ ಯಶಸ್ಸುಗಳನ್ನು ಆಚರಿಸಿ. ವಿಫಲತೆಯಿಂದ ಕಲಿಯಿರಿ ಮತ್ತು ಧೈರ್ಯವಾಗಿರಿ.
10.ತಂತ್ರಜ್ಞಾನದ ಬಳಕೆ: ಆನ್ಲೈನ್ ಕೋರ್ಸ್ಗಳು, ಯೂಟ್ಯೂಬ್ ಚಾನೆಲ್ಗಳು, ಮತ್ತು ಆಪ್ಗಳನ್ನು (Unacademy, BYJU’s, ಇತ್ಯಾದಿ) ಬಳಸಿ. ಆನ್ಲೈನ್ ಗುಂಪುಗಳಲ್ಲಿ ಚರ್ಚೆಗಳಿಗೆ ಸೇರಿ, ಜ್ಞಾನವನ್ನು ಹಂಚಿಕೊಳ್ಳಿ.
ಹೆಚ್ಚುವರಿ ಸಲಹೆ:ಒಂದೇ ಸಮಯದಲ್ಲಿ ಒಂದು ವಿಷಯಕ್ಕೆ ಗಮನ ಕೊಡಿ, ಗೊಂದಲವನ್ನು ತಪ್ಪಿಸಿ.ಗುಂಪು ಅಧ್ಯಯನ ಅಥವಾ ಕೋಚಿಂಗ್ಗೆ ಸೇರಿಕೊಂಡರೆ, ಚರ್ಚೆಗಳಿಂದ ಕಲಿಯಿರಿ. ನಿಮ್ಮ ದೌರ್ಬಲ್ಯಗಳನ್ನು ಗುರುತಿಸಿ, ಅವುಗಳನ್ನು ಸುಧಾರಿಸಲು ಕೆಲಸ ಮಾಡಿ.
ನಿರಂತರ ಅಭ್ಯಾಸ, ಶಿಸ್ತು, ಮತ್ತು ಸಕಾರಾತ್ಮಕ ಮನೋಭಾವದಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಬಹುದು. ಶುಭವಾಗಲಿ..!
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಬೂಕರ್ ಪ್ರಶಸ್ತಿ ಬಗ್ಗೆ ನಿಮಗಿಷ್ಟು ತಿಳಿದಿರಲಿ..!

ಬೂಕರ್ ಪ್ರಶಸ್ತಿಯು ವಿಶ್ವದ ಅತ್ಯಂತ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿಗಳಲ್ಲಿ ಒಂದಾಗಿದೆ. ಇದರ ಇತಿಹಾಸ ಹೀಗಿದೆ..
ಸ್ಥಾಪನೆ ಮತ್ತು ಆರಂಭಿಕ ವರ್ಷಗಳು (1969 – 2001)
ಬೂಕರ್ ಪ್ರಶಸ್ತಿಯನ್ನು 1968 ರಲ್ಲಿ “ಬೂಕರ್ ಪ್ರೈಜ್ ಫಾರ್ ಫಿಕ್ಷನ್” (Booker Prize for Fiction) ಎಂದು ಸ್ಥಾಪಿಸಲಾಯಿತು. ಬೂಕರ್ ಮೆಕ್ಕಾನೆಲ್ (Booker McConnell) ಎಂಬ ಬಹುರಾಷ್ಟ್ರೀಯ ಕಂಪನಿಯು ಈ ಪ್ರಶಸ್ತಿಯನ್ನು ಪ್ರಾಯೋಜಿಸಿತು. ಫ್ರಾನ್ಸ್ನ ಪ್ರಿಕ್ಸ್ ಗಾಂಕೂರ್ (Prix Goncourt) ಪ್ರಶಸ್ತಿಗೆ ಸಮಾನವಾಗಿ ಇಂಗ್ಲಿಷ್ ಭಾಷೆಯಲ್ಲಿ ಉತ್ತಮ ಕಾದಂಬರಿಗಳನ್ನು ಗುರುತಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು.
ಆರಂಭದಲ್ಲಿ, ಈ ಪ್ರಶಸ್ತಿಯು ಕಾಮನ್ವೆಲ್ತ್ ರಾಷ್ಟ್ರಗಳು, ಐರ್ಲೆಂಡ್ ಮತ್ತು ಝಿಂಬಾಬ್ವೆ ದೇಶದ ನಾಗರಿಕರು ಇಂಗ್ಲಿಷ್ ಭಾಷೆಯಲ್ಲಿ ಬರೆದ ಪೂರ್ಣ ಪ್ರಮಾಣದ ಕಾದಂಬರಿಗಳಿಗೆ ಮಾತ್ರ ಸೀಮಿತವಾಗಿತ್ತು.
1969 ರಲ್ಲಿ ಪಿ. ಹೆಚ್. ನ್ಯೂಬಿ (P.H. Newby) ಅವರ “ಸಮ್ಥಿಂಗ್ ಟು ಆನ್ಸರ್ ಫಾರ್” (Something to Answer For) ಕೃತಿಗೆ ಮೊದಲ ಬೂಕರ್ ಪ್ರಶಸ್ತಿ ಲಭಿಸಿತು.
1970 ರಲ್ಲಿ ಬೆರ್ನಿಸ್ ರೂಬೆನ್ಸ್ (Bernice Rubens) ಅವರು “ದಿ ಎಲೆಕ್ಟೆಡ್ ಮೆಂಬರ್” (The Elected Member) ಕೃತಿಗೆ ಪ್ರಶಸ್ತಿ ಪಡೆದ ಮೊದಲ ಮಹಿಳಾ ಲೇಖಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ವಿ.ಎಸ್. ನೈಪಾಲ್ (V.S. Naipaul) 1971 ರಲ್ಲಿ “ಇನ್ ಎ ಫ್ರೀ ಸ್ಟೇಟ್” (In a Free State) ಕೃತಿಗೆ ಬೂಕರ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮೂಲದ ಲೇಖಕರಾದರು (ಅವರು ಟ್ರಿನಿಡಾಡ್ನಲ್ಲಿ ಜನಿಸಿದರು).
ಮ್ಯಾನ್ ಬೂಕರ್ ಪ್ರಶಸ್ತಿ ಯುಗ (2002 – 2019):
2002 ರಲ್ಲಿ, ಬೂಕರ್ ಪ್ರಶಸ್ತಿಯ ಆಡಳಿತವನ್ನು ಬುಕ್ ಟ್ರಸ್ಟ್ನಿಂದ (Book Trust) ಮ್ಯಾನ್ ಗ್ರೂಪ್ ಪಿಎಲ್ಸಿ (Man Group PLC) ಎಂಬ ಹೂಡಿಕೆ ನಿರ್ವಹಣಾ ಸಂಸ್ಥೆಗೆ ವರ್ಗಾಯಿಸಲಾಯಿತು. ಈ ಸಮಯದಲ್ಲಿ ಪ್ರಶಸ್ತಿಯ ಹೆಸರನ್ನು “ಮ್ಯಾನ್ ಬೂಕರ್ ಪ್ರಶಸ್ತಿ” (Man Booker Prize) ಎಂದು ಬದಲಾಯಿಸಲಾಯಿತು.
2013 ರಲ್ಲಿ, ಪ್ರಶಸ್ತಿಯ ಅರ್ಹತೆಯನ್ನು ವಿಸ್ತರಿಸಲಾಯಿತು. ಇಂಗ್ಲಿಷ್ ಭಾಷೆಯಲ್ಲಿ ಬ್ರಿಟನ್ ಅಥವಾ ಐರ್ಲೆಂಡ್ನಲ್ಲಿ ಪ್ರಕಟವಾದ ಯಾವುದೇ ಕಾದಂಬರಿಗೆ ಈ ಪ್ರಶಸ್ತಿಯನ್ನು ನೀಡಲು ಪ್ರಾರಂಭಿಸಲಾಯಿತು, ಅಮೆರಿಕಾದ ಲೇಖಕರನ್ನು ಸಹ ಒಳಗೊಂಡಂತೆ. ಈ ಬದಲಾವಣೆಯು ಸಾಕಷ್ಟು ಚರ್ಚೆಗೆ ಒಳಗಾಯಿತು.
ಪ್ರಸ್ತುತ ಬೂಕರ್ ಪ್ರಶಸ್ತಿ (2019 ರಿಂದ)
2019 ರಲ್ಲಿ, ಚಾರಿಟಬಲ್ ಫೌಂಡೇಶನ್ ಕ್ರ್ಯಾಂಕ್ಸ್ಟಾರ್ಟ್ (Crankstart) ಪ್ರಾಯೋಜಕತ್ವವನ್ನು ವಹಿಸಿಕೊಂಡ ನಂತರ ಪ್ರಶಸ್ತಿಯು ತನ್ನ ಮೂಲ ಹೆಸರಾದ “ಬೂಕರ್ ಪ್ರಶಸ್ತಿ” ಗೆ ಮರಳಿತು.
ಇತ್ತೀಚೆಗೆ, (ಮೇ 20-2025) ಕನ್ನಡದ ಖ್ಯಾತ ಸಾಹಿತಿ ಬಾನು ಮುಷ್ತಾಕ್ ಅವರು ತಮ್ಮ ಅನುವಾದಿತ “ಹಾರ್ಟ್ ಲ್ಯಾಂಪ್” (Heart Lamp) ಕೃತಿಗೆ 2025 ರ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ (International Booker Prize) ಪಡೆದಿದ್ದಾರೆ. ಇದು ಕನ್ನಡದ ಕೃತಿಗೆ ಲಭಿಸಿದ ಮೊದಲ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಯಾಗಿದೆ.
ಬೂಕರ್ ಪ್ರಶಸ್ತಿಯಲ್ಲಿ ಎರಡು ವಿಧಗಳಿವೆ ಅವುಗಳೆಂದರೆ, ‘ಬೂಕರ್ ಪ್ರಶಸ್ತಿ ಮತ್ತು ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ.’
ಬೂಕರ್ ಪ್ರಶಸ್ತಿ (Booker Prize): ಇದು ಯುನೈಟೆಡ್ ಕಿಂಗ್ಡಮ್ ಅಥವಾ ಐರ್ಲೆಂಡ್ನಲ್ಲಿ ಪ್ರಕಟವಾದ, ಇಂಗ್ಲಿಷ್ ಭಾಷೆಯಲ್ಲಿ ಬರೆದ ಅತ್ಯುತ್ತಮ ಮೂಲ ಕಾದಂಬರಿಗೆ ನೀಡಲಾಗುತ್ತದೆ.
ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ (International Booker Prize): ಇದು ಇಂಗ್ಲಿಷ್ಗೆ ಅನುವಾದಗೊಂಡ, ವಿಶ್ವದ ಯಾವುದೇ ಭಾಷೆಯ ಅತ್ಯುತ್ತಮ ಕಾದಂಬರಿಗೆ ನೀಡಲಾಗುತ್ತದೆ. ಪ್ರಶಸ್ತಿಯ ಮೊತ್ತವನ್ನು ಮೂಲ ಲೇಖಕರು ಮತ್ತು ಅನುವಾದಕರು ಸಮಾನವಾಗಿ ಹಂಚಿಕೊಳ್ಳುತ್ತಾರೆ.
ಬೂಕರ್ ಪ್ರಶಸ್ತಿಯು ಸಾಹಿತ್ಯ ಕ್ಷೇತ್ರದಲ್ಲಿ ಅತ್ಯಂತ ಪ್ರತಿಷ್ಠಿತ ಗೌರವಗಳಲ್ಲಿ ಒಂದಾಗಿದೆ ಮತ್ತು ವಿಶ್ವದಾದ್ಯಂತ ಓದುಗರ ಮತ್ತು ಬರಹಗಾರರ ಗಮನ ಸೆಳೆಯುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂಕಣ5 days ago
ಹನಿಗವಿತೆಗಳು | ಬೆಳಕಿನ ಬೆನ್ನ ಹಿಂದೆ
-
ದಿನದ ಸುದ್ದಿ4 days ago
ದಾವಣಗೆರೆ | ಕಾಂಗ್ರೆಸ್ ಸಾಧನೆಯ ಸಮರ್ಪಣೆ ಕಾರ್ಯಕ್ರಮ : ಮೇ.20 ರಂದು ಸಾರಿಗೆ ಬಸ್ಸುಗಳ ಸಂಚಾರದಲ್ಲಿ ವ್ಯತ್ಯಯ
-
ದಿನದ ಸುದ್ದಿ4 days ago
ಹೊಸಪೇಟೆ ನಗರದ ತುಂಬೆಲ್ಲಾ ಜಾಹೀರಾತುಗಳ ಹಾವಳಿ ; ಕಣ್ಣ್ಮುಚ್ಚಿ ಕುಳಿತ ಅಧಿಕಾರಿಗಳು
-
ದಿನದ ಸುದ್ದಿ4 days ago
ದಾವಣಗೆರೆ | ಬ್ಯಾಂಕ್ ಆಫ್ ಬರೋಡದಲ್ಲಿ ಮಾಜಿ ಸೈನಿಕರಿಗೆ ಆಫೀಸ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ಮಲೇಬೆನ್ನೂರು ಪುರಸಭೆ | ಗೌರವಧನ ಆಧಾರದ ಮೇಲೆ ತಾತ್ಕಾಲಿಕ ಸೇವೆ ಪಡೆಯಲು ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ಹೃದಯಾಘಾತದಿಂದ ತಪ್ಪಿಸಿಕೊಳ್ಳುವುದು ಹೇಗೇ..?
-
ದಿನದ ಸುದ್ದಿ3 days ago
ಇಂದಿನ ಅಡಿಕೆ ದರ ಪಟ್ಟಿ
-
ದಿನದ ಸುದ್ದಿ4 days ago
ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ