Connect with us

ದಿನದ ಸುದ್ದಿ

ಬೌದ್ಧ ಕ್ರಾಂತಿಗೆ ಮುನ್ನುಡಿ ಬರೆದ ಮಹಾಪುರುಷ ‘ಪಂಡಿತ ಅಯೋತಿ ಥಾಸ್’..! ಮಿಸ್ ಮಾಡ್ದೆ ಓದಿ

Published

on

  • ವಿಶ್ವನಾಥ ಎಸ್ ಕರಡಿ

ರಡು ಪ್ರತ್ಯೇಕ ಸಮಯ ಮತ್ತು ಸ್ಥಳಗಳಲ್ಲಿ ವಾಸಿಸುತ್ತಿದ್ದ ಇಬ್ಬರು ಮಹಾಪುರುಷರು ಒಂದೇ ಸಮಸ್ಯೆಯ ಬಗ್ಗೆ ಒಂದೇ ತೀರ್ಮಾನಕ್ಕೆ ಬಂದಿರುವ ಆ ಮಹಾ ಮನಸ್ಸುಗಳ ತೀರ್ಮಾನಕ್ಕೆ ನಾವಿನ್ನು ಬದ್ಧರಾಗಿಲ್ಲದೆ ಇರುವುದು ದುರಂತವೇ ಅನಿಸುತ್ತದೆ.

19ನೇ ಶತಮಾನದ ತಮಿಳು ವಿದ್ವಾಂಸ ಪಂಡಿತ ಅಯೋತಿ ಥಾಸ್ ಮತ್ತು 20 ನೇ ಶತಮಾನದ ಪಾಶ್ಚಿಮಾತ್ಯ ವಿದ್ಯಾ ಪಂಡಿತ ಡಾ. ಬಾಬಾಸಾಹೇಬ ಅಂಬೇಡ್ಕರ್ ಈ ಇಬ್ಬರು ಮಹಾಪುರುಷರು ಜಾತಿ ವ್ಯವಸ್ಥೆಯನ್ನು ಸರ್ವನಾಶ ಮಾಡಲು ಏಕೈಕ ಮಾರ್ಗವನ್ನು ಕಂಡುಕೊಂಡರು ಮತ್ತು ತಾವು ಬೌದ್ದ ಧಮ್ಮವನ್ನು ಸ್ವೀಕರಿ ತಮ್ಮ ಅನುಯಾಯಿಗಳು ಸ್ವೀಕರಿಸಲು ಮಾದರಿಯಾದರು.

ಬೌದ್ದ ಧಮ್ಮದ ಪತನದಿಂದ ಹುಟ್ಟಿದ ಜಾತಿಯತೆಯನ್ನು ಬೌದ್ದ ಧಮ್ಮ ಸ್ಥಾಪನೆಯ ಮೂಲಕವೇ ನಿರ್ಮೂಲನೆ ಮಾಡಬೇಕು ಎಂದು ನಂಬಿದ್ದರು ಆದರೆ ನಾವಿಂದು ಆ ಮಹಾಪುರುಷರ ಸೂಚನೆ ಪಾಲಿಸದೇ ಜಾತೀಯತೆಯ ವಿರುದ್ದ ಸುಖಾಸುಮ್ಮನೆ ಹೋರಾಟ ಮಾಡಿ ತೌಡು ಕುಟ್ಟುತ್ತಿದ್ದೇವೆ.

ನಾವು ಬಾಬಾಸಾಹೇಬ ಅಂಬೇಡ್ಕರ್ ಅವರ ಧಮ್ಮ ಕ್ರಾಂತಿಯ ಬಗ್ಗೆ ಕೇಳಿದ್ದೇವೆ ಕೆಲವರು ಅವರಂತೆ ನಾವು ಬೌದ್ಧರಾಗಿದ್ದೇವೆ. ಆದರೆ ಬಾಬಾಸಾಹೇಬರ ಕಿಂತ ಮೊದಲೇ ಪಂಡಿತ ಅಯೋತಿ ಥಾಸ್ ರು ಈ ನೆಲದಲ್ಲಿ ಬೌದ್ದ ಕ್ರಾಂತಿಗೆ ಮುನ್ನುಡಿ ಬರೆದಿದ್ದರು ಬನ್ನಿ ಆ ಮಹಾ ಪುರುಷನ ಬಗ್ಗೆ ತಿಳಿದುಕೊಳ್ಳೋಣ.

ಪಂಡಿತ ಅಯೋತಿ ಥಾಸ್ ರು 1845 ಮೇ 20 ರಂದು ಚೆನೈನ ರಾಯಪೆಟ್ಟಾದ ದಲಿತ ಕುಟುಂಬದಲ್ಲಿ ಜನಿಸಿದರು ಅವರು ಸಿದ್ದ ಔಷದಿ ಕಲೆಯಲ್ಲಿ ಪ್ರಾವೀಣ್ಯತೆ ಪಡೆದಿದ್ದರು ಮತ್ತು ತಮಿಳು ವಿದ್ವಾಂಸರಾಗಿದ್ದರು.

ಅವರು 1870 ರಲ್ಲಿ ಉದಗಮಂಡಲಂ ನಲ್ಲಿ ಅದ್ವೈದಾನಂದ ಸಭೆಯನ್ನು(ಅವರ ಜೀವನದ ಮೊದಲ ಸಂಸ್ಥೆ ಎಂದು ಪರಿಗಣಿಸಲಾಗುತ್ತದೆ) ಸ್ಥಾಪಿಸಿದರು. 1891ರಲ್ಲಿ ಅವರು ದ್ರಾವಿಡ ಮಹಾಜನ ಸಭೆ ಎಂಬ ಸಂಘಟನೆಯನ್ನು ಸ್ಥಾಪಿಸಿದರು. 1891 ಸೆಪ್ಟೆಂಬರ 1 ರಂದು ನೀಲಗಿರಿ ಜಿಲ್ಲೆಯಲ್ಲಿ ಸಭೆಯ ಪರವಾಗಿ ಸಮ್ಮೇಳನವನ್ನು ಆಯೋಜಿಸಿದರು.

ಆ ಸಮ್ಮೇಳನದಲ್ಲಿ…

ಅಸ್ಪೃಶ್ಯರನ್ನು ಅವಮಾನಿಸುವವರನ್ನು ಪರಿಯಾ ಎಂದು ಕರೆಯುವ ಮೂಲಕ ಶಿಕ್ಷಿಸಲು ಅಪರಾಧ ಕಾನೂನು ಜಾರಿಗೆ ತರುವುದು.

  1. ಪ್ರತ್ಯೇಕ ಶಾಲೆಗಳನ್ನು ತೆರೆಯುವುದು.
  2. ಅಸ್ಪೃಶ್ಯ ಮಕ್ಕಳಿಗೆ ಮೆಟ್ರಿಕ್ಯುಲೇಶನ್ ಶಿಕ್ಷಣಕ್ಕಾಗಿ ವಿದ್ಯಾರ್ಥಿ ವೇತನವನ್ನು ನೀಡುವುದು.
  3. ವಿದ್ಯಾವಂತ ಅಸ್ಪೃಶ್ಯರಿಗೆ ಉದ್ಯೋಗ ನೀಡುವುದು.
  4. ಜಿಲ್ಲಾ ಮಂಡಲ ಮತ್ತು ಮುನ್ಸಿಪಲ್ ಮಂಡಲಾಗಳಲ್ಲಿ ಪ್ರಾತಿನಿಧ್ಯ ನೀಡುವುದು.

ಹೀಗೆ ಹಲವು ಬೇಡಿಕೆಗಳ ನಿರ್ಣಯ ತೆಗೆದುಕೊಳ್ಳಲಾಯಿತು(ತಮಿಳನ, ಆಕ್ಟೊಬರ್ 1908) ಈ ನಿರ್ಣಯಗಳನ್ನು 1891 ರ 8 ಡಿಸೆಂಬರ್ 21 ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಮಹ್ಮದಿಯರ ಸಂಘಕ್ಕೆ ಕಳುಹಿಸಲಾಯಿತು.

1896 ರಲ್ಲಿ ರೇವರೆಂಡ್ ಜಾನ್ ರತ್ನಂ ಮತ್ತು ಅಯೋತಿ ಥಾಸ್ ಜಂಟಿಯಾಗಿ ದ್ರಾವಿಡ್ ಪಾಂಡಿಯನ್ ಎಂಬ ಜರ್ನಲ್ ನ್ನು ಪ್ರಾರಂಭಿಸಿದರು. ಮತ್ತೊಂದು ಕುತೊಹಲಕಾರಿ ಸಂಗತಿ ಎಂದರೇ1882 ರಲ್ಲಿ ರೇವರೆಂಡ್ ಜಾನ್ ರತ್ನಂ ಮತ್ತು ಅಯೋತಿ ಥಾಸರು ದ್ರಾವಿಡ ಕಜಗಂ ಎಂಬ ಹೆಸರಿನ ಒಂದು ಚಳುವಳಿ ಸ್ಥಾಪಿಸಿದರು ( ದಿ ಅಲೋಶಿಯಸ್ ನ್ಯಾಶನಲಿಸಂ ವಿತ್ಹೌಟ್ ಎ ನೇಷನ್ ಇನ್ ಇಂಡಿಯಾ, ಆಕ್ಸಪರ್ಡ್ 2000) ಈ ಸಂಗತಿಯನ್ನು ಮರೆಮಾಡಲಾಗಿದೆ. ದ್ರಾವಿಡ ಚಳುವಳಿಯ ಅಥವಾ ಬ್ರಾಹ್ಮಣ ವಿರೋಧಿ ಚಳುವಳಿಯ ಪ್ರವರ್ತಕನಾಗಿ ಅಯೋತಿ ಥಾಸ್ ಅವರನ್ನು ಈಗ ಯಾರು ನೆನಪಿಸಿಕೊಳ್ಳುವುದಿಲ್ಲ.

ಬೌದ್ದ ಧಮ್ಮಕ್ಕೆ ಮರಳುವುದು

ಜಾತಿ ವ್ಯವಸ್ಥೆಯನ್ನು ಸರ್ವನಾಶ ಮಾಡುವುದಕ್ಕಾಗಿ ದಲಿತರು ಬೌದ್ದ ಧಮ್ಮ ಸ್ವೀಕರಿಸಲು ಕರೆ ನೀಡಿದರು. ಈ ಉದ್ದೇಶಕ್ಕಾಗಿ ಅವರು ತಮಿಳು ಜಾನಪದ ಸಂಪ್ರದಾಯಗಳ ಸಹಾಯದಿಂದ ಪರ್ಯಾಯ ಇತಿಹಾಸವನ್ನು ನಿರ್ಮಿಸಿದರು ಮೂಲ ಬೌದ್ಧರ ಮೇಲೆ ಅಸ್ಪೃಶ್ಯತೆಯನ್ನು ಹೇರಿ ಆಚರಣೆಗೆ ತಂದಿರುವ ಪದ್ಧತಿಗಳನ್ನು ವಿರೋಧಿಸಿದರು. ಭಾರತದ ಇತಿಹಾಸದಲ್ಲಿ ಬೌದ್ದ ಧಮ್ಮವು ಮೊದಲ ಬ್ರಾಹ್ಮಣ ವಿರೋಧಿ ಚಳುವಳಿ ಎಂದು ಅವರು ಪ್ರತಿಪಾದಿಸಿದರು.

1898ರಲ್ಲಿ ಅಯೋತಿ ಥಾಸ್ ಪಂಚಮಾ ಶಾಲೆಯ ಮುಖ್ಯ ಶಿಕ್ಷಕರಾದ ಕೃಷ್ಣಸ್ವಾಮಿ ಅವರೊಂದಿಗೆ ಶ್ರೀಲಂಕಾಕ್ಕೆ ಭೇಟಿ ನೀಡಿದರು ಅಲ್ಲಿ ಅವರು ಬೌದ್ದ ಧಮ್ಮ ಸ್ವೀಕರಿಸಿದರು. ಥಿಯೋಸೋಪಿಸ್ಟ(ಚೆನೈ ಅಡ್ಯಾಕ್ ಮೂಲದ ಥಿಯೊಸೋಪಿಕಲ್ ಸೊಸೈಟಿಯ ಮಾಸಿಕ ಜರ್ನಲ್) ಈ ರೀತಿಯಾಗಿ ಧಾಖಲಿಸಿದೆ.

1898 ರಲ್ಲಿ ಸಿಲೊನ್ ಗೇ ಮದ್ರಾಸನ ಪಂಚಮ ಸಮುದಾಯದ ನಾಯಕರನ್ನು ಬಂತೆ ಸುಮಂಗಲ ಮಹಾ ಥೇರ್ ಅವರು ಬೌದ್ದ ಧಮ್ಮಕ್ಕೆ ಸೇರಿಸಿಕೊಂಡರು. ಮತ್ತು ದಕ್ಷಿಣ ಭಾರತದ ಪಂಚಮರು (ದಲಿತರು) ಇತಿಹಾಸದಲ್ಲಿ ಹೊಸ ಯುಗವನ್ನು ಪ್ರಾರಂಭಿಸಿದರು. ಅವರು ಬೌದ್ದ ಧಮ್ಮವನ್ನು ಸ್ವೀಕರಿಸಿದ ನಂತರ 1898 ರಲ್ಲಿ ಮದ್ರಾಸನ್ ರಾಯಪೆಟ್ಟಾದಲ್ಲಿ “ದಿ ಸಾಕ್ಯ ಬೌದ್ದ ಸಮಾಜ” ಎಂಬ ಸಂಸ್ಥೆಯನ್ನು ಸ್ಥಾಪಿಸಿದರು1907 ರಲ್ಲಿ ಸಂಸ್ಥೆಯಡಿಯಲ್ಲಿ ಒರು ಪೈಸಾ ತಮಿಲನ್ ಎಂಬ ಜರ್ನಲ್ ಅನ್ನು ಪ್ರಾರಂಭಿಸಿದರು.

1907 ರಿಂದ 5 ಮೇ 1914 ರ ವರೆಗೆ ಅವರ ಎಲ್ಲ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಜರ್ನಲ್ ನಲ್ಲಿ ದಾಖಲಿಸಲಾಗಿದೆ. ಅಯೋತಿ ಥಾಸ್ ರವರು ಕರ್ನಲ್ ಹೆನ್ರಿ ಸ್ಟಿಲ್ ಓಲ್ಕಾಟ (ಥಿಯೊಸೋಪಿಕಲ್ ಸೊಸೈಟಿಯನ್ನು ಸ್ಥಾಪಿಸಿದ ಅಮೆರಿಕದ ಮಿಲಿಟರಿ ಅಧಿಕಾರಿ) ಮತ್ತು ಅಡ್ಯಾರನಲ್ಲಿನ ಥಿಯೊಸೋಪಿಕಲ್ ಮೂವಮೆಂಟ ನೊಂದಿಗೆ ನಿಕಟ ಒಡನಾಟವನ್ನು ಹೊಂದಿದ್ದರು ಎಂದು ಕರ್ನಲ್ ಓಲ್ಕಾಟ್ ಬರೆದುಕೊಳ್ಳುತ್ತಾರೆ.

ಸಾಕ್ಯ ಬೌದ್ದ ಸಮಾಜವನ್ನು ತಿರುಪುತ್ತೂರ ಮತ್ತು ವೆಲ್ಲೂರಗಳಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಸ್ಥಾಪಿಸಲಾಯಿತು ಉದಾಹರಣೆಗೆ: ದಕ್ಷಿಣ ಆಫ್ರಿಕಾದ ನಟಾಲ್, ರಂಗೂನ ಮತ್ತು ಶ್ರೀಲಂಕಾದಲ್ಲಿ ಅದೇರೀತಿ ಚಾಂಪಿಯನ್ ರೀಪ್ಸ್, ಮಾರಿಕುಪ್ಪಂ, ಕೋಲಾರ ಗೋಲ್ಡ್ ಫೀಲ್ಡ್, ಹಾಗೂ ಹುಬ್ಬಳ್ಳಿಯ ರೇಲ್ವೆ ನಿಲ್ದಾಣದ ಹತ್ತಿರ ಶಾಖೆಗಳನ್ನು ಸ್ಥಾಪಿಸಿದರು.

ಸಾಕ್ಯ ಬೌದ್ದ ಸಮಾಜವು ಬುದ್ದ ಧಮ್ಮದ ಬಗ್ಗೆ ಬುದ್ದ ಧಮ್ಮ ಪಿರಸಂಗಮ(ಬೌದ್ದ ಧಮ್ಮದ ಉಪದೇಶ) ಆಯೋಜಿಸಲು ಪ್ರಾರಂಭಿಸಿತು ಈ ಉಪನ್ಯಾಸಗಳು ಮಧ್ಯರಾತ್ರಿಯ ವರೆಗೂ ನಡೆದವು. ಸಾಕ್ಯ ಬೌದ್ದ ಸಮಾಜದ ಕಾರ್ಯಕರ್ತರು ಪ್ರತಿಯೊಬ್ಬರು ತಮ್ಮ ಚಟುವಟಿಕೆಗಳ ಬಗ್ಗೆ ಪ್ರತಿನಿತ್ಯ ತಮಿಲನ್ ನಲ್ಲಿ ವರದಿ ಮಾಡುತ್ತಿದ್ದರು. ಅನೇಕರು ಅಯೋತಿ ದಾಸರ ನೇತೃತ್ವದಲ್ಲಿ ಬುದ್ದ ಧಮ್ಮ ಪ್ರಚಾರ ಮಾಡಲು ತಮ್ಮನ್ನು ತಾವು ತೊಡಗಿಸಿಕೊಂಡರು.

ಹೆಚ್ಚು ಹೆಚ್ಚು ಜನರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸ ತೊಡಗಿದರು. ದಲಿತರ ಸಾಂಸ್ಕೃತಿಕ ಜೀವನವು ಬೌದ್ಧಮಯವಾಯಿತು. ಜನನ, ಮರಣ, ಮದುವೆ ಮುಂತಾದ ಧಾರ್ಮಿಕ ವಿಧಿಗಳು ಬೌದ್ದ ಧಮ್ಮದ ಅಡಿಯಲ್ಲಿ ನಡೆಯತೊಡಗಿದವು. ಬೌದ್ದ ಧಮ್ಮಕ್ಕೆ ಧರ್ಮಾಂತರ ಗೊಂಡವರ ಹೆಸರುಗಳನ್ನು ತಮಿಳನ ನಲ್ಲಿ ಪ್ರಕಟಿಸಲಾಯಿತು. (24 ಆಗಸ್ಟ್ 1912) 1911ರಲ್ಲಿ ಮೈಸೂರಿನ ದಶಕದ ಜನಗಣತಿಯಲ್ಲಿ ಬೌದ್ಧರ ಪ್ರತ್ಯೇಕ ವರ್ಗವನ್ನು ವರ್ಗಿಕರಿಸಲಾಯಿತು.

1881ರಲ್ಲಿ ಸರ್ಕಾರವು ಎರಡನೇ ಜನಗಣತಿಯನ್ನು ನಡೆಸಲು ಯೋಜಿಸಿತು, ನೋಂದಣಿ ಅಧಿಕಾರಿಗಳು ಶೋಷಿತರನ್ನು ಹಿಂದೂ ಧರ್ಮದ ಭಾಗವೆಂದು ವರ್ಗಿಕರಿಸಲು ಪ್ರಯತ್ನಿಸಿದರು. ಆದರೆ ಅಯೋತಿ ಥಾಸರು ಬ್ರಿಟಿಷ್ ಸರ್ಕಾರಕ್ಕೆ ಒಂದು ಜ್ಞಾಪಕ ಪತ್ರವನ್ನು ನೀಡಿ ತಮಿಳು ಮಾತನಾಡುವ ಶೋಷಿತರನ್ನು ಆದಿ ತಮಿಳರು ಎಂದು ಪರಿಗಣಿಸಿ ಹಿಂದೂಗಳಂತೆ ಪರಿಗಣಿಸದಿರಲು ಹೇಳಿದರು.

ಅಯೋತಿ ಥಾಸರು ಬೌದ್ದ ಧಮ್ಮವನ್ನು ಅನುಸರಿಸಿದ ಮೂಲನಿವಾಸಿಗಳನ್ನ ಯಥಾರ್ಥ ಬ್ರಾಹ್ಮಣರು(ನಿಜವಾದ ಬ್ರಾಹ್ಮಣರು) ಎಂದು ಕರೆದರು. ಆದರೆ ಆರ್ಯರು ಬೌದ್ಧರ ಆಚರಣೆಗಳನ್ನು ನಕಲಿಸಿದ್ದರು ಮತ್ತು ಸ್ವಾರ್ಥ ಉದ್ದೇಶದಿಂದ ಮೋಸ ಮಾಡಲು ಪ್ರಾರಂಭಿಸಿದರು ಅವರನ್ನು ಅಯೋತಿ ಥಾಸರು ವೇಶಾ ಬ್ರಾಹ್ಮಣರು(ಹುಸಿ ಬ್ರಾಹ್ಮಣರು) ಎಂದು ಕರೆದರು.

‘ಒರು ಪೈಸಾ ತಮಿಳನ’ 3 ಜುಲೈ 1907

1907 ರ ಜೂನ 19 ರಂದು ಒರು ಪೈಸಾ ತಮಿಳನ ಎಂಬ ಹೆಸರನ್ನು ಹೊಂದಿರುವ ತಮಿಳು ವಾರಪತ್ರಿಕೆಯನ್ನು ಪ್ರಾರಂಭಿಸಲಾಯಿತು(ಒಂದು ವರ್ಷದ ನಂತರ ಈ ಹೆಸರನ್ನು ತಮಿಲನ ಎಂದು ಬದಲಿಸಲಾಯಿತು).

ದಲಿತ ಮುದ್ರಣ ಇತಿಹಾಸದಲ್ಲಿ ಅಯೋತಿ ಥಾಸರ ತಮಿಲನ್ ಪತ್ರಿಕೆ ಬಹುಮುಖ್ಯ ಪಾತ್ರ ವಹಿಸಿತ್ತು. ಈ ಪತ್ರಿಕೆಯಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ವಿಷಯಗಳ ಕುರಿತು ಸರಣಿ ಲೇಖನಗಳು ಪ್ರಕಟವಾಗಿವೆ. ಈ ಪತ್ರಿಕೆಯು ಬೌದ್ದ ಧಮ್ಮವನ್ನು ಪುನರುಜ್ಜೀವನ ಗೊಳಿಸಿ ಪುನರನಿರ್ಮಿಸುವತ್ತ ಗಮನಹರಿಸಿತ್ತು.

ದಲಿತ ವಿಮೋಚಕರ ಸಾಲಿನಲ್ಲಿ ಅಯೋತಿ ಥಾಸರು ಬಹುಮುಖ್ಯರು ಅವರು ಜಾತಿ ರಹಿತ ಸಮಾಜದ ಕನಸು ಕಂಡವರು ಮತ್ತು ಬೌದ್ದ ಧಮ್ಮ ಸರಿಯಾದ ಆಯ್ಕೆ ಎಂದು ಸೈದ್ಧಾಂತಿಕ ತೀರ್ಮಾನಕ್ಕೆ ಬಂದವರು. ಅವರು ಭಾರತದ ಇತಿಹಾಸವನ್ನು ಇಥಿರಾರಡೆಸ್ ಸಾರಿಥಿರಾಮನಲ್ಲಿ ಹೀಗೆ ಬರೆಯುತ್ತಾರೆ ಆರ್ಯರ ಆಕ್ರಮಣಕ್ಕೆ ಮುಂಚಿತವಾಗಿ ಬೌದ್ದ ಧಮ್ಮದ ಸಿದ್ಧಾಂತಗಳನ್ನು ಅನುಸರಿಸಿ ಭಾರತೀಯರು ಶಾಂತಿಯುತವಾಗಿ ಬದುಕಿದ್ದರು ಎಂದು ವಾದಿಸಿದ್ದಾರೆ.

ಕೇವಲ ವೃತ್ತಿ ಆಧಾರದ ಮೇಲೆ ವಿಭಾಗವಿದ್ದವು ಯಾವುದೇ ಶ್ರೇಣೀಕೃತ ಸ್ಥಾನಮಾನವಿರಲಿಲ್ಲ. ಅನಾಗರಿಕ ಆರ್ಯರು ಕೇವಲ ತಮ್ಮ ಹಿತಕ್ಕಾಗಿ ಜಾತಿ ವಿಭಾಗವಾಗಿ ಬದಲಾಯಿಸಿದರು. ಬೌದ್ದ ಧಮ್ಮದ ಅನೇಕ ಆಚರಣೆಗಳು ಮತ್ತು ಸಂಪ್ರದಾಯಗಳನ್ನು ಮರು ವ್ಯಾಖಾನಿಸಿದರು.

ಅಯೋತಿ ಥಾಸ ಅವರನ್ನು ಇಂದು ನೆನಪಿಸಿಕೊಳ್ಳುವುದು ಅವಶ್ಯವೆನಿಡುತ್ತದೆ ಭಾರತೀಯ ಸಮಾಜದ ಆಧುನೀಕರಣದ ನಿರ್ಣಾಯಕ ಸಮಯದಲ್ಲಿ ಪಂಡಿತ ಅಯೋತಿ ಥಾಸ್ ಆಧುನಿಕತೆಯ ಸಾಧನಗಳಲ್ಲಿ ಒಂದಾದ ಮುದ್ರಣ ಮಾದ್ಯಮವನ್ನು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ವ್ಯವಸ್ಥಿತವಾಗಿ ಬಳಸಿಕೊಂಡರು ಹಾಗೂ ಬೌದ್ದ ಧಮ್ಮದ ಪುನರುಂಜೀವನಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡು ಜಾತಿ ನಿರ್ಮೂಲನೆಗೆ ಬೌದ್ದ ಧಮ್ಮಕ್ಕೆ ಮರಳುವ ಉಪಾಯವನ್ನು ಕೊಟ್ಟು ದಲಿತರನ್ನು ಉದ್ದಾರ ಮಾಡಲು ಶ್ರಮಿಸಿದ ಅವರ ಕಾರ್ಯ ಇಂದಿನ ನಮ್ಮಂತಹ ಯುವಕರಿಗೆ ಸ್ಫೂರ್ತಿಯಾಗಿ ಅವರಂತೆ ನಾವು ಕೂಡ ನಮ್ಮ ಜನರನ್ನು ಬುದ್ದನ ಕಡೆಗೆ ಕರೆದೊಯ್ಯದು ಜಾತಿ ರಹಿತ ಸಮಾಜಕ್ಕಾಗಿ ದುಡಿಯೋಣ.

ದಲಿತರನ್ನು ಜಾಗೃತಗೊಳಿಸಲು ಮುದ್ರಣ ಸಾಧನವನ್ನು ಬಳಸಿಕೊಂಡು ರಾಜಕೀಯ ಪರಿವರ್ತನೆಗಿಂತ ಸಾಮಾಜಿಕ ಮತ್ತು ಧಾರ್ಮಿಕ ಪರಿವರ್ತನೆಗೆ ಒತ್ತು ಕೊಟ್ಟ ಅಯೋತಿ ಥಾಸ್ ಅವರ ವಿಚಾರವನ್ನು ತಮ್ಮ ಮುಂದೆ ಇಟ್ಟು ಅವರಂತೆ ನಾವು ಕೂಡ ಮೊದಲು ಧಮ್ಮ ಕ್ರಾಂತಿ ಮತ್ತು ಸಾಮಾಜಿಕ ಕ್ರಾಂತಿ ಮಾಡೋಣ ಎಂದು ಹೇಳುತ್ತಾ 20 ಮೇ ದಂದು ಅಯೋತಿ ಥಾಸ್ ರವರ ಜನ್ಮ ದಿನಾಚರಣೆ ಇದ್ದು ಆ ಮಹಾಪುರುಷನನ್ನು ನೆನೆಯುತ್ತಾ ತ್ರಿವಾರ ನಮಿಸುವೆ.

ಬುದ್ದ, ಧಮ್ಮ, ಸಂಘದ ಶ್ರೇಷ್ಠ ಸದ್ಗುಣಗಳು ಎಲ್ಲರಿಗೂ ಶಾಂತಿ ನೀಡಲಿ ಎಂದು ಹಾರೈಸುತ್ತಾ ಪಂಡಿತ ಅಯೋತಿ ಥಾಸ್ ರವರ ಜಯಂತಿ ನಿಮಿತ್ಯ ಹಾರ್ಧಿಕ ಶುಭಾಶಯಗಳು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು

Published

on

~ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ

ಆಗಸ್ಟ್ ದಿನಾಂಕ 8 ಮತ್ತು 9ನೇ ತಾರೀಕು,ಸಾಹಿತ್ಯದ ಬೃಹತ್ ಹಡಗೊಂದು ಶ್ರೀಮಂತನಗರಿ ದಾವಣಗೆರೆ. ಜ್ಞಾನದ ಗೂಡು ಸಾಹಿತ್ಯ ಕಲಾರಸಿಕರ ಬೀಡು. ವಿವಿಧ ಖಾದ್ಯಗಳ ರಸದೌತಣದ ನಾಡು,ಸರಸ್ವತಿ ನೆಲೆಸಿದ ನಾಡು ದಾವಣಗೆರೆ.

ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಬಹು ತಾಳ್ಮೆಯ ಕುಟುಂಬವನ್ನು ನಿರ್ವಹಿಸಿಕೊಂಡು ಸಂಸಾರದ ನೌಕೆಯನ್ನು ಸಾಗಿಸುತ್ತಾ ಅದರ ಜೊತೆಗೆ ತಮ್ಮ ಮನೋರಂಜನೆ ಸಾಹಿತ್ಯ ಸಮಾಜ ಜ್ಞಾನ ವಿಜ್ಞಾನಗಳ ಸಕಲ ಕಲಾವಿದ್ಯೆಗಳಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲರ ಮಹಿಳೆಯರ ಪರವಾಗಿ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಒಂದು ಅತ್ಯದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಕನ್ನಡ ಸಾಹಿತ್ಯ ಪರಿಷತ್ ಶ್ರೀ ಬಿ ವಾಮದೇವಪ್ಪ ತೊಗಲೇರಿ ಅಧ್ಯಕ್ಷರ ಸಮ್ಮುಖದಲ್ಲಿ ಈ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು . ಸಮ್ಮೇಳನದ ಅಧ್ಯಕ್ಷರು ಮಹಾಪೋಷಕರು ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್, ಹಾಗೆಯೇ ಉದ್ಘಾಟಕರಾಗಿ ಮಹಿಳಾ ಆಯೋಗದ ಡಾಕ್ಟರ್ ನಾಗಲಕ್ಷ್ಮಿ ಚೌದರಿ, ಪ್ರಧಾನ ಸಂಚಾಲಕರು ರಾಜ ಯೋಗಿನಿ ಬ್ರಹ್ಮಕುಮಾರಿ ನೀಲಾಜಿ ಅವರೆಲ್ಲರಿಗೂ ಸ್ವಾಗತವನ್ನು ಬಯಸುತ್ತಾ ,
ಸ್ವಾಗತ ಸಮಿತಿ, ಹಣಕಾಸು ಸಮಿತಿ ,ಸಾಹಿತ್ಯ ಸಮಿತಿ, ಆಹಾರ ಸಮಿತಿ ,ಸಾಂಸ್ಕೃತಿಕ ಸಮಿತಿ ,ವೇದಿಕೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಪ್ರಚಾರ ಸಮಿತಿ, ಶಿಸ್ತು ಸಮಿತಿ ಮೆರವಣಿಗೆ ಸಮಿತಿ,ಪುಸ್ತಕ ಮಳಿಗೆ ಸಮಿತಿ ,ಅತಿಥಿ ಸತ್ಕಾರ ಸಮಿತಿ, ಸ್ಪರ್ಧಾ ಸಮಿತಿ, ಎಲ್ಲದಕ್ಕೂ ಸಹಕಾರ ಕೊಟ್ಟಂತಹ ಶ್ರೀ ಸಮರ್ಥ್ ಶಾಮನೂರ್ ಮಲ್ಲಿಕಾರ್ಜುನ್ ಶಾಸಕರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳು.

 

ಎಲ್ಲ ಕಾರ್ಯಕ್ರಮಗಳನ್ನು ಸುಸಜ್ಜಿತವಾಗಿ ನಡೆಸಿ ಕೊಡುತ್ತಿರುವ ಶ್ರೀಮತಿ ಸುಮತಿ ಜಯಪ್ಪ, ಶ್ರೀಮತಿ ಯಶಾ ದಿನೇಶ್ ,ಶ್ರೀಮತಿ ವೀಣಾ ಕೃಷ್ಣಮೂರ್ತಿ , ಶ್ರೀಮತಿ ಸತ್ಯಭಾಮ ಮಂಜುನಾಥ್, ಶ್ರೀಮತಿ ಮಲ್ಲಮ್ಮ ಎಂ ಎಸ್ ,ಶ್ರೀಮತಿ ನೀಲಗುಂದ ಜಯಮ್ಮ, ಶ್ರೀಮತಿ ಜಯಲಕ್ಷ್ಮಿ ಮಹೇಶ್, ಶ್ರೀಮತಿ ಪ್ರೇಮ ಸೋಮಶೇಖರ್ ಹೇಮ ಗಣೇಶ್ ಶೇಟ್, ಸುನಿತಾ ಪ್ರಕಾಶ್, ವರದಿಗಾರರಾದ ಭಾರತಿ ಎಚ್ ,ಹಾಗೆ ಎ ಬಿ ರುದ್ರಮ್ಮ, ಆಮಂತ್ರಣ ಪತ್ರಿಕೆ ಎಲ್ಲಾ ಗೆಳತಿಯರು ಇವರೊೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡುತ್ತಿರುವ ಎಲ್ಲ ಪ್ರತಿಭೆಗಳಿಗೂ ಹಾಗೂ ಕವಿಗೋಷ್ಠಿ ಕವಿತೆಗಳನ್ನು ವಾಚಿಸುವವರೆಗೂ ಹಾಗೆಯೇ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ, ಪಡೆಯುತ್ತಿರುವ ಎಲ್ಲ ಸಹೋದರಿಯರಿಗೂ ಅಭಿನಂದನೆಗಳು ಹಾಗೆ ಎಲ್ಲ ಮಹಿಳಾ ಮಣಿಗಳ ಆಗಮನಕ್ಕೆ ಶುಭವನ್ನು ಕೋರುತ್ತಿರುವ ಶ್ರೀಮತಿ ವೀಣಾ ಮಹಂತೇಶ್ ಬಿ ಎಮ್ ದಾವಣಗೆರೆ.

ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ.

Continue Reading

ದಿನದ ಸುದ್ದಿ

ನಾನೇ ಮುಖ್ಯಮಂತ್ರಿ ಇದ್ದಂತೆ : ಶಾಸಕ ಶಿವಗಂಗಾ ಬಸವರಾಜ್

Published

on

ಸುದ್ದಿದಿನ,ದಾವಣಗೆರೆ: “ತಮ್ಮ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ತಾವು ಮುಖ್ಯಮಂತ್ರಿಯಂತೆ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದೇನೆ” ಎಂದು ಶಾಸಕ ಶಿವಗಂಗಾ ಬಸವರಾಜ್ ಹೇಳಿದರು.

ದಾವಣಗೆರೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಅವರು, ನಾನು ಡಿ.ಕೆ ಶಿವಕುಮಾರ್‌ ಅವರ ಮನೆಮಗ, ಶಿವನ ಮುಂದೆ ಇರುವ ಬಸವ ನಾನು. ನಾನೇ ಮುಖ್ಯಮಂತ್ರಿ ಇದ್ದಂತೆ, ಮನೆ ಮಗನಿಗೆ ಯಾವಾಗಲೂ ಅವರ ಆಶೀರ್ವಾದ ಇದ್ದೇ ಇರುತ್ತದೆ ಎಂದಿದ್ದಾರೆ.

ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಹಾಗೂ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ತಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ತಕ್ಕಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.

“ನಾನು ಮುಖ್ಯಮಂತ್ರಿ ಅಲ್ಲ. ಆದರೆ ನನ್ನ ಕ್ಷೇತ್ರದ ಅಭಿವೃದ್ಧಿ ವಿಚಾರ ಬಂದಾಗ ಮುಖ್ಯಮಂತ್ರಿಯಂತೆ ಜವಾಬ್ದಾರಿ ಹೊತ್ತು ಕೆಲಸ ಮಾಡುತ್ತಿದ್ದೇನೆ. ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವುದು ನನ್ನ ಮೊದಲ ಕರ್ತವ್ಯವಾಗಿದೆ. ರಸ್ತೆ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ,” ಎಂದು ಅವರು ಹೇಳಿದರು.

ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿದ್ದು, ಇನ್ನೂ ಅನೇಕ ಯೋಜನೆಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದ ಅವರು, ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಿರಂತರ ಸಮನ್ವಯ ಸಾಧಿಸಿ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುತ್ತಿದೆ ಎಂದರು.

“ಜನಪ್ರತಿನಿಧಿಯಾಗಿ ಚುನಾಯಿತರಾದ ಬಳಿಕ ಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿದ್ದೇನೆ. ಗ್ರಾಮಗಳ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಅಗತ್ಯ ಅನುದಾನ ತರುವ ಪ್ರಯತ್ನ ಮಾಡಲಾಗಿದೆ. ಕುಡಿಯುವ ನೀರಿನ ಯೋಜನೆಗಳು, ರಸ್ತೆ ಅಭಿವೃದ್ಧಿ, ಶಾಲೆಗಳ ಮೂಲಸೌಕರ್ಯ ಸುಧಾರಣೆ ಸೇರಿದಂತೆ ಹಲವು ಕಾಮಗಾರಿಗಳಿಗೆ ವೇಗ ನೀಡಲಾಗಿದೆ,” ಎಂದು ಹೇಳಿದರು.

ಕ್ಷೇತ್ರದ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೈಗಾರಿಕೆಗಳನ್ನು ಆಕರ್ಷಿಸುವ ಪ್ರಯತ್ನ ನಡೆಯುತ್ತಿದೆ. ಕೃಷಿ ಕ್ಷೇತ್ರಕ್ಕೆ ಅಗತ್ಯವಾದ ನೀರಾವರಿ ಹಾಗೂ ರೈತರಿಗೆ ಅನುಕೂಲಕರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಸರ್ಕಾರದ ಅಭಿವೃದ್ಧಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾವುದೇ ಅರ್ಹ ವ್ಯಕ್ತಿ ಯೋಜನೆಯಿಂದ ವಂಚಿತರಾಗಬಾರದು ಎಂಬುದು ತಮ್ಮ ಉದ್ದೇಶವಾಗಿದೆ ಎಂದು ಶಾಸಕರು ತಿಳಿಸಿದರು.

ವಿರೋಧ ಪಕ್ಷಗಳ ಟೀಕೆ ಕುರಿತು ಪ್ರತಿಕ್ರಿಯಿಸಿದ ಅವರು, “ಟೀಕೆಗಳು ಪ್ರಜಾಪ್ರಭುತ್ವದ ಭಾಗ. ಆದರೆ ಅಭಿವೃದ್ಧಿಯೇ ನಮ್ಮ ಉತ್ತರ. ಜನರ ಸಮಸ್ಯೆಗಳಿಗೆ ಪರಿಹಾರ ನೀಡುವುದು ಹಾಗೂ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸುವುದೇ ನಮ್ಮ ಗುರಿಯಾಗಿದೆ,” ಎಂದರು.

ಕ್ಷೇತ್ರದ ಜನರು ಅಭಿವೃದ್ಧಿಗೆ ಸಹಕಾರ ನೀಡುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಸಾರ್ವಜನಿಕರು ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ಸಂಪರ್ಕಿಸಬಹುದು. ಜನಸೇವೆಗಾಗಿ ತಮ್ಮ ಕಚೇರಿ ಸದಾ ತೆರೆದಿರುತ್ತದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ರಸ್ತೆ, ಗ್ರಾಮೀಣ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ದಿನದ ಸುದ್ದಿ

ದಾವಣಗೆರೆ ವಿಶ್ವವಿದ್ಯಾಲಯ | ಗುಣಮಟ್ಟದ ಸಂಶೋಧನೆ ಶೈಕ್ಷಣಿಕ ಪ್ರಗತಿ – ಜಾಗತಿಕ ಮಾನ್ಯತೆಯ ಮೂಲಾಧಾರ : ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯದ ಶಿವಗಂಗೋತ್ರಿಯ ನೂತನ ವಿಜ್ಞಾನ ಸಭಾಂಗಣದಲ್ಲಿ ಕಂಪ್ಯೂಟರ್ ಅಪ್ಲಿಕೇಷನ್ಸ್ (ಎಮ್.ಸಿ.ಎ) ಹಾಗೂ ಕಂಪ್ಯೂಟರ್ ಸೈನ್ಸ್ (ಎಮ್.ಎಸ್ಸಿ) ವಿಭಾಗಗಳ ಸಂಯುಕ್ತಾಶ್ರಯದಲ್ಲಿ “ಸಂಶೋಧನಾ ಸಮಸ್ಯೆಯನ್ನು ಗುರುತಿಸುವ ವಿವಿಧ ವಿಧಾನಗಳು, ಹೊಸ ಸಂಶೋಧನಾ ಕಲ್ಪನೆಗಳ ಸೃಷ್ಟಿ ಹಾಗೂ ಟೈಯರ್-1 ಸಂಶೋಧನಾ ಲೇಖನಗಳ ಬರಹದ ಪ್ರಮುಖ ಅಂಶಗಳು” ಎಂಬ ವಿಷಯದ ಕುರಿತು ಒಂದು ದಿನದ ರಾಷ್ಟ್ರೀಯ ಮಟ್ಟದ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.

ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ, ಗುಣಮಟ್ಟದ ಸಂಶೋಧನೆಯೇ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಪ್ರಗತಿ ಮತ್ತು ಜಾಗತಿಕ ಮಾನ್ಯತೆಯ ಮೂಲಾಧಾರವಾಗಿದೆ ಎಂದು ಹೇಳಿದರು.

ಸಂಶೋಧನೆ ಕೇವಲ ಪದವಿ ಪಡೆಯುವ ಪ್ರಕ್ರಿಯೆಯಾಗಬಾರದು, ಅದು ಸಮಾಜದ ಸಮಸ್ಯೆಗಳಿಗೆ ಪರಿಹಾರ ನೀಡುವ ದಿಕ್ಕಿನಲ್ಲಿ ಸಾಗಬೇಕು. ಅಂತರರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟದ ಪ್ರಕಟಣೆಗಳು ವಿಶ್ವವಿದ್ಯಾಲಯದ ಸಂಶೋಧನಾ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತವೆ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಯು ಕೆ ಮಾಂಚೆಸ್ಟರ್‌ನ ‘ಯೂನಿವರ್ಸಿಟಿ ಆಫ್ ಸ್ಯಾಲ್‌ಫೋರ್ಡ್’ನ ಕಂಪ್ಯೂಟರ್ ಸೈನ್ಸ್ ಪ್ರಾಧ್ಯಾಪಕ ಡಾ. ಶಿವಕುಮಾರ ಪಿ. ಮಾತನಾಡಿ, ಸಂಶೋಧನಾ ಸಮಸ್ಯೆ ಗುರುತಿಸುವಿಕೆ, ಸಂಶೋಧನಾ ಅಂತರ (Research Gap) ಪತ್ತೆ, ಸಾಹಿತ್ಯ ಸಮೀಕ್ಷೆ, ಪ್ರಯೋಗಾತ್ಮಕ ವಿನ್ಯಾಸ (Experimental Design), ಟೈಯರ್-1 ಜರ್ನಲ್ ಲೇಖನ ಬರಹ, ಪ್ರಕಟಣಾ ನೈತಿಕತೆ ಹಾಗೂ ವಿಮರ್ಶಕರ ಅಭಿಪ್ರಾಯಗಳಿಗೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸುವ ವಿಧಾನಗಳ ಕುರಿತು ಸಮಗ್ರ ಮಾಹಿತಿ ನೀಡಿದರು.

“ಒಂದು ಉತ್ತಮ ಸಂಶೋಧನಾ ಲೇಖನದ ಯಶಸ್ಸು ಅದರ ಹೊಸತನ, ವೈಜ್ಞಾನಿಕ ವಿಧಾನ ಮತ್ತು ಸ್ಪಷ್ಟವಾದ ಪ್ರಸ್ತುತೀಕರಣದಲ್ಲಿ ಅಡಗಿದೆ. ಸಂಶೋಧಕರು ಗುಣಮಟ್ಟದ ಸಮಸ್ಯೆಗಳನ್ನು ಆಯ್ಕೆ ಮಾಡಿಕೊಂಡು ಅಂತರರಾಷ್ಟ್ರೀಯ ಮಟ್ಟದ ಪ್ರಕಟಣೆಗೆ ಸಿದ್ಧರಾಗಬೇಕು,” ಎಂದು ಅವರು ಕರೆ ನೀಡಿದರು.

ಕಾರ್ಯಾಗಾರದಲ್ಲಿ 250ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ವಿವಿಧ ವಿಭಾಗಗಳ ಅಧ್ಯಾಪಕರು ಭಾಗವಹಿಸಿದ್ದರು. ಪೋಸ್ಟರ್ ಪ್ರಸೆಂಟೇಷನ್‌ಗಳು, ಸಂವಾದಾತ್ಮಕ ಚರ್ಚೆಗಳು ಮತ್ತು ಸಂಶೋಧನಾ ಲೇಖನ ಬರಹದ ಪ್ರಾಯೋಗಿಕ ಮಾರ್ಗದರ್ಶನ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು. ಭವಿಷ್ಯದಲ್ಲೂ ಇಂತಹ ಕಾರ್ಯಾಗಾರಗಳ ಸರಣಿಯನ್ನು ಆಯೋಜಿಸಲು ವಿಶ್ವವಿದ್ಯಾಲಯ ನಿರ್ಧರಿಸಿದೆ. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಕುಲಸಚಿವ ಶ್ರೀ ಎಸ್. ಬಿ. ಗಂಟಿ, ಪರೀಕ್ಷಾಂಗ ಕುಲಸಚಿವ ಡಾ. ಸಿ. ಕೆ. ರಮೇಶ್, ಡಾ. ಬಸವಣ್ಣ ಎಮ್. ಅಧ್ಯಕ್ಷರು, ಎಮ್.ಸಿ.ಎ ವಿಭಾಗ, ಡಾ. ಚಂದ್ರಕಾಂತ ಎನ್. ಅಧ್ಯಕ್ಷರು, ಕಂಪ್ಯೂಟರ್ ಸೈನ್ಸ್ ವಿಭಾಗ, ಹಣಕಾಸು ಅಧಿಕಾರಿ ಡಾ. ಆರ್. ಶಶಿಧರ್ ಹಾಗೂ ವಿವಿಧ ವಿಭಾಗಗಳ ಅಧ್ಯಕ್ಷರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending