Connect with us

ಸಿನಿ ಸುದ್ದಿ

ಡಾ.ರಾಜ್ ಚಿತ್ರಗಳ, ಹಾಡುಗಳ ಹಬ್ಬವೂ ; ನೆನಪಿನ ಅಲೆಗಳೂ..!

Published

on

  • ರಘೋತ್ತಮ ಹೊ‌.ಬ

ಇಂದು ಡಾ.ರಾಜಕುಮಾರ್ ಹುಟ್ಟುಹಬ್ಬ. ಡಾ.ರಾಜ್ ನಮ್ಮ ನಡುವಿನ, ನಮ್ಮ ನಡುವೆ ಈ ನೆಲದಲ್ಲಿ ನಡೆದಾಡಿದ ಅಪರೂಪದ ನಟ. ಕನ್ನಡದ ಏಕತೆ, ಅಸ್ಮಿತೆಗೆ ರಾಜ್ ಕೊಡುಗೆ ಅನನ್ಯ. ಅವರ ವೈವಿದ್ಯಮಯ ಪಾತ್ರಗಳು “ರಾಮನಿಂದು ಹಿಡಿದು ಗೌತಮ ಬುದ್ಧನವರೆಗೆ… ಲವರ್ ಬಾಯ್‌ನಿಂದ್ ಹಿಡಿದು ಜೇಮ್ಸ್ ಬಾಂಡ್ ಮಾದರಿ ಪತ್ತೇದಾರಿ ಹೀರೋವರೆಗೆ…” ಬಹುಶಃ ಕನ್ನಡದ ಬೇರಾವ ನಟರೂ ಅವರಷ್ಟು ವೈವಿಧ್ಯತೆಯನ್ನು ಮೆರೆಯಲೇ ಇಲ್ಲ, ನೀಡಲು ಸಾಧ್ಯವೇ ಇಲ್ಲ. ಅಂತಹ ಅನನ್ಯ, ಅದ್ಭುತ ಡಾ.ರಾಜ್. ದುರಂತವೆಂದರೆ ನನ್ನಂತಹವರು ಮನೆಯವರ ಅನುಮತಿ ಇಲ್ಲದೆ ಚಲನಚಿತ್ರ ನೋಡುವ ಮಟ್ಟಕ್ಕೆ ಬೆಳೆಯುವಷ್ಟೊತ್ತಿಗೆ ರಾಜ್ ಇರಲೇ ಇಲ್ಲ!

ಈ ನಡುವೆಯೂ ರಾಜ್ ಕುರಿತು ಅದರಲ್ಲೂ ಅವರ ಹಾಡುಗಳ ಕುರಿತು ಹೇಳುವುದಾದರೆ ಶಾಲೆಯಲ್ಲಿ 7ನೇ ತರಗತಿ ವಿದ್ಯಾರ್ಥಿಯಾಗಿದ್ದಾಗ 10ನೇ ತರಗತಿಯ ದೊರೆರಾಜು ಹುಡುಗಿಯ ಧ್ವನಿಯಲ್ಲಿ ಮತ್ತು ನನ್ನ ತರಗತಿ ಸಹಪಾಠಿ ಮಿತ್ರ ಹೊನ್ನೂರು ಲಿಂಗರಾಜು ಡಾ.ರಾಜ್ ದನಿಯಲ್ಲಿ ಜ್ವಾಲಾಮುಖಿ ಚಿತ್ರದ “ಏಕೋ ಏನೋ… ಈ ನನ್ನ ಮನವು…” ಹಾಡನ್ನು ಕೀಬೋರ್ಡ್ ಮತ್ತು ಗಿಟಾರ್ ಸಮೇತ ಹಾಡಿದಾಗ ಮಕ್ಕಳಾದ ನಮಗಂತೂ ರಾಜ್ ನಮ್ಮ ಕಣ್ಣಮುಂದೆಯೇ ಹಾದು ಹೋದ ಅನುಭವ. ಆ ನೆನಪು ಈಗಲೂ ಚಿರಸ್ಥಾಯಿ. ಅಂದಹಾಗೆ ನಾನು ಕೇಳಿದ ಆ ಗಾಯನ ರಾಜ್ ಮೇಲಿನ ನನ್ನ ಅಭಿಮಾನವನ್ನು ಮತ್ತಷ್ಟು ಅವರ ಬಳಿ ಹೊಯ್ದಿತು. ಮುಂದೆ ಆರ್ಕೆಸ್ಟ್ರಾವೊಂದರಲ್ಲಿ ಅಶ್ವಮೇಧ ಚಿತ್ರದ “ಹೃದಯ ಸಮುದ್ರ ಕಲಕಿ…’ ಹಾಡನ್ನು ಕೇಳಿದಾಗ ಅಂತಹದ್ದು ಮತ್ತೂ ಹೆಚ್ಚಾಯಿತು. ಹ್ಞಾಂ, ಹಾಗೆಯೇ ಬಾಲ್ಯದಲ್ಲಿ ನಮ್ಮ ಎದುರು ಮನೆಯ ಗುರುದಾಸ ತಾತಾ ಟೈಲರಿಂಗ್ ಕೆಲಸ ಮಾಡುತ್ತಾ ಡಾ.ರಾಜ್‌ರ “ಬಾನಿಗೊಂದು ಎಲ್ಲೆ ಎಲ್ಲಿದೆ…” ಹಾಡನ್ನು ಹಾಡುತ್ತಿದ್ದರೆ… ಚಿಕ್ಕ ಹುಡುಗನಾಗಿ ನಾನದನ್ನು ಕೇಳುತ್ತಿದ್ದರೆ… ಆ ಅನುಭವವೇ ಒಂದು ರೋಚಕ! ಆ ಕಾರಣಕ್ಕೆ ಈಗಲೂ ನಾನು ಡಾ.ರಾಜ್ ಸ್ವರದಲ್ಲಿ ಆಗಾಗ ಅನುಕರಿಸಿ ಹಾಡುತ್ತಿರುತ್ತೇನೆ. ಡಾ.ರಾಜ್ ಹಾಡುಗಳ ಸ್ವರ್ಗದಲ್ಲಿ ತೇಲುತ್ತಿರುತ್ತೇನೆ.

ಇನ್ನು ರಾಜಕುಮಾರ್‌ರ ನಟನೆ ಬಗ್ಗೆ ಹೇಳುವುದಾದರೆ, ನಮ್ಮೂರ ಬೀದಿಯಲ್ಲಿ ಯಾವುದೋ ಹಬ್ಬದ ಸಂದರ್ಭದಲ್ಲಿ ಹಾಕಿದ್ದ ವಿಡಿಯೋದಲ್ಲಿ ಡಾ.ರಾಜ್‌ರ ‘ಭಾಗ್ಯವಂತರು’ ಸಿನಿಮಾ ನೋಡಿದಾಗ, ಆ ಸಿನಿಮಾದಲ್ಲಿ “3 ಗಂಡು ಮಕ್ಕಳು, ಒಬ್ಬ ಹೆಣ್ಣು ಮಗಳು, ಅಪ್ಪ-ಅಮ್ಮ ಇಷ್ಟೇ ಇದ್ದ ನಮ್ಮಿಡೀ ಕುಟುಂಬ”ವೇ ಅದರಲ್ಲಿ ನಟಿಸಿದ ಅನುಭವವಾಗಿತ್ತು! ಹಾಗೆಯೇ ಊರ ಮಾರಿಹಬ್ಬದಲ್ಲಿ ಮೈಕ್‌ನಲ್ಲಿ ಆಗಿನ ಕಾಲದಲ್ಲಿ ಕಾಂತೀಯ ಪ್ಲೇಟ್‌ಗಳನ್ನು ಬಳಸಿ ಹಾಕುತ್ತಿದ್ದ ಡಾ.ರಾಜ್ ಚಿತ್ರಗಳ ಗೀತೆಗಳ ಕೇಳುತ್ತಿದ್ದಾಗ ಅನುಭವಿಸುತ್ತಿದ್ದ ಆನಂದ ಬಹುಶಃ ನೆನೆಪಿನ ಬಹುದೊಡ್ಡ ಹಿನ್ನೆಲೆಗೆ ರಾಜ್ ನಮ್ಮನ್ನು ಕರೆದೊಯ್ಯುತ್ತಾರೆ. ಮುಂದೆ ಟೇಪ್‌ರಿಕಾರ್ಡರ್ ಬಂದಾಗ ಕೇಳಿದ ‘ಅನುರಾಗ ಅರಳಿತು’, ‘ಪರಶುರಾಮ್’ ಚಿತ್ರಗಳ ಸ್ಟೋರಿ… ಅಬ್ಬಾ! ಅಂದಹಾಗೆ ತೆರೆಯಲ್ಲಿ ಅವರ ಚಿತ್ರಗಳನ್ನು ವಯಕ್ತಿಕವಾಗಿ ನಾನು ಸ್ವತಂತ್ರವಾಗಿ ನೋಡುವ ಮಟ್ಟಕ್ಕೆ ಬೆಳೆದಾಗ ನಾನು ನೋಡಿದ ಚಿತ್ರ ‘ಶಬ್ಧವೇಧಿ’ಯಾಗಿತ್ತು. ದುರಂತವೆಂದರೆ ಅದೇ ರಾಜ್ ರ ಕೊನೆಯ ಚಿತ್ರವಾಗಿತ್ತು!

ಆದರೆ ಈಗೀಗ ಟಿವಿಯಲ್ಲಿ, ಯೂಟ್ಯೂಬ್‌ನಲ್ಲಿ, ‘ಗಾನಾ’ app ನಲ್ಲಿ ರಾಜ್‌ರ ಎಲ್ಲಾ ಹಳೆಯ ಚಿತ್ರಗಳನ್ನು, ಹಾಡುಗಳನ್ನು ನೋಡಿದ್ದೇ ನೋಡಿದ್ದು, ಕೇಳಿದ್ದೇ ಕೇಳಿದ್ದು. ಅದರಲ್ಲೂ ಶಂಕರ್ ಗುರು ಚಿತ್ರದ ‘ಲವ್ ಮಿ ಆರ್ ಹೇಟ್ ಮಿ…’, ಹುಲಿಯ ಹಾಲಿನ ಮೇವು ಚಿತ್ರದ ‘ಚಿನ್ನದ ಮಲ್ಲಿಗೆ ಹೂವೇ’ ಹಾಡುಗಳನ್ನು ಕೇಳುತ್ತಿದ್ದರೆ… ಜತೆಗೆ ದನಿಗೂಡಿಸುತ್ತಿದ್ದರೆ… ಬಹುಶಃ ಬದುಕಿನ ಮೇಲಿನ ಪ್ರೀತಿಗೆ ರಾಜ್ ಒಂದು ಸಹಜ ಮಾದರಿಯಾಗುತ್ತಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮತ್ತೆ ತಾಯಿಯಾಗಬೇಕು : ನಟಿ ಸಮಂತಾ

Published

on

ಸುದ್ದಿದಿನಡೆಸ್ಕ್:ಇತ್ತೀಚೆಗೆ ನಟಿ ಸಮಂತಾ ಅವರ ಕಮೆಂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆ ಹೇಳಿಕೆಗಳ ಮೇಲೆ ನಾನಾ ರೀತಿಯ ಅನುಮಾನಗಳೂ ವ್ಯಕ್ತವಾಗಿವೆ.

ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಸದ್ಯ ಸಮಂತಾ ಸತತ ಚಿತ್ರಗಳಲ್ಲಿ ಬ್ಯುಸಿಯಾಗಿರುವುದು ಗೊತ್ತೇ ಇದೆ. ಇತ್ತೀಚಿಗೆ ಸಮಂತಾ ಅವರ ವೆಬ್ ಸಿರೀಸ್ ವಿಚಾರಕ್ಕೆ ಸುದ್ದಿಯಾಗಿದ್ದರು. ನಟಿಯ ಇತ್ತೀಚಿನ ವೆಬ್ ಸಿರೀಸ್ ಸಿಟಾಡೆಲ್ ಸಖತ್ ಸುದ್ದಿಯಾಗಿದೆ. ಸದ್ಯ ಈ ವೆಬ್ ಸೀರೀಸ್ ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ ಎಂದು ತಿಳಿದುಬಂದಿದೆ. ಈ ವೆಬ್ ಸರಣಿಯ ಪ್ರಚಾರದ ವೇಳೆ ಮಾಡಿದ ಕಾಮೆಂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಇದರ ಭಾಗವಾಗಿ ಸಮಂತಾ ರಾಜ್ ಮತ್ತು ಡಿಕೆ ಸಂದರ್ಶನವೊಂದರಲ್ಲಿ ಹೇಳಿದ್ದು ದಿ ಫ್ಯಾಮಿಲಿ ಮ್ಯಾನ್ 2 ಚಿತ್ರೀಕರಣದ ವೇಳೆ ನಾನು ಹಲವು ಭಾವನೆಗಳಿಗೆ ಒಳಗಾಗಿದ್ದೆ ಎಂದು ಸಮಂತಾ ಹೇಳಿದ್ದಾರೆ. ಅಲ್ಲದೇ ಅವರ ನಿರ್ದೇಶನದಲ್ಲಿ ನಟಿಸುವುದು ಕಷ್ಟ ಎಂದಿದ್ದಾರೆ. ನಂತರ ಅದೇ ಸಂದರ್ಶನದಲ್ಲಿ ನಟಿ ಬೇರೆ ವಿಚಾರವನ್ನೂ ಹೇಳಿದ್ದಾರೆ.

ಹನಿ ಬನ್ನಿ ವೆಬ್ ಸರಣಿಯಲ್ಲಿ ತಾಯಿ ಪಾತ್ರದ ಬಗ್ಗೆ ಮಾತನಾಡುತ್ತಾ, ಅವರು ಸಂವೇದನಾಶೀಲ ಕಾಮೆಂಟ್​ಗಳನ್ನು ಮಾಡಿದ್ದಾರೆ. ನನಗೆ ತಾಯಿಯಾಗುವ ಕನಸು ಇದೆ. ನಾನು ತಾಯಿಯಾಗಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.

ಇದಕ್ಕಾಗಿ ತಡವಾಗಿದೆ ಎಂದು ಅವರು ಭಾವಿಸುವುದಿಲ್ಲ. ನಾನು ಜೀವನದಲ್ಲಿ ತುಂಬಾ ಖುಷಿಯಾಗಿದ್ದೇನೆ ಎಂದು ಸಮಂತಾ ಹೇಳಿದ ಮಾತುಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಆದರೆ ಸಮಂತಾ ಈ ಕಾಮೆಂಟ್ ಮಾಡಿದ ನಂತರ ಮತ್ತೊಮ್ಮೆ ಅವರ ಎರಡನೇ ಮದುವೆಯ ಸುದ್ದಿಗೆ ವೇಗ ಸಿಕ್ಕಿದೆ. ಈ ಹಿಂದೆ ರಾಜ್ ಹಾಗೂ ಡಿಕೆಶಿಯಲ್ಲಿ ರಾಜ್ ನನ್ನು ಪ್ರೀತಿಸುತ್ತಿದ್ದು, ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂದು ಹೇಳಲಾಗಿತ್ತು.

ಆದರೆ ಇದೀಗ ಸಮಂತಾ ಎರಡನೇ ಮದುವೆಯ ಸುದ್ದಿ ಮುನ್ನೆಲೆಗೆ ಬಂದಿದ್ದು, ಮತ್ತೆ ತಾಯಿಯಾಗಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಇದರೊಂದಿಗೆ ರಾಜ್ ಎರಡನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಗೆ ವೇಗ ಸಿಕ್ಕಿದೆ. ಈ ಸುದ್ದಿಯಲ್ಲಿನ ಸತ್ಯಗಳ ಹೊರತಾಗಿ, ಈ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಹಾಟ್ ಟಾಪಿಕ್ ಆಗಿದೆ. ಈ ಸುದ್ದಿಗೆ ಸಮಂತಾ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡೋಣ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸಿಕ್ಕಾಬಟ್ಟೆ ಸಾಲ, ಸಾಲು ಸಾಲು ಚೆಕ್‌ಬೌನ್ಸ್‌ ಕೇಸ್‌ ; ನಿರ್ದೇಶಕ ಗುರುಪ್ರಸಾದ್ ಸಾವಿಗೆ ಕಾರಣವಾಯ್ತಾ..!?

Published

on

ಸುದ್ದಿದಿನಡೆಸ್ಕ್:ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ʻಮಠʼ ಗುರುಪ್ರಸಾದ್‌ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ.

ಗುರುಪ್ರಸಾದ್‌ ಮೇಲೆ ಸಾಲು ಸಾಲು ಚೆಕ್‌ಬೌನ್ಸ್‌ ಕೇಸ್‌ಗಳಿದ್ದವು. ಸಿಕ್ಕ ಸಿಕ್ಕವರ ಬಳಿ ಸಾಲ ಮಾಡಿಕೊಂಡಿದ್ದರು. ಶ್ರೀನಿವಾಸ್‌ ಗೌಡ ಎಂಬುವರ ಜೊತೆ ಹಣದ ವ್ಯವಹಾರಕ್ಕೆ ಕಿರಿಕ್‌ ಕೂಡ ಆಗಿತ್ತು. ಗುರುಪ್ರಸಾದ್‌ಗೆ ಅಭಿಮಾನಿಯಾಗಿದ್ದ ಶ್ರೀನಿವಾಸ್‌ ಗೌಡ 25 ಲಕ್ಷ ಹಣ ನೀಡಿದ್ದರು. ಗುರುಪ್ರಸಾದ್‌ ಬರವಣಿಗೆ ಮೆಚ್ಚಿ ಜೊತೆಯಲ್ಲೇ ಇದ್ದರು ಶ್ರೀನಿವಾಸ್‌ ಗೌಡ.

ಹಣ ವಾಪಸ್‌ ಕೊಡಲಾಗದೇ ಕಿರಿಕ್‌ ಮಾಡಿಕೊಂಡಿದ್ದರು ನಿರ್ದೇಶಕ ಗುರುಪ್ರಸಾದ್‌ ಅವರು. ಈ ಬಗ್ಗೆ ಕೋರ್ಟ್‌ ಮೆಟ್ಟಿಲೇರಿದ್ದ, ಗುರುಪ್ರಸಾದ್‌ ವಿರುದ್ದ ಕಾನೂನು ಸಮರ ಸಾರಿದ್ದರು. ಅಕ್ಟೋಬರ್‌ 24ರಂದು ಇದ್ದ ಕೋರ್ಟ್‌ವಿಚಾರಣೆಗೂ ಹಾಜರಾಗಿರಲಿಲ್ಲ ಗುರುಪ್ರಸಾದ್‌. ಮೆಡಿಕಲ್‌ ರಿಪೋರ್ಟ್‌ ನೀಡಿ ವಿಚಾರಣೆ ಮುಂದೂಡಿಸಿಕೊಂಡಿದ್ದರು.

ನಿನ್ನೆ ಅಂದರೆ ನವೆಂಬರ್‌ 2ಕ್ಕೆ ಗುರುಪ್ರಸಾದ್‌ ಹುಟ್ಟುಹಬ್ಬ ಇತ್ತು. ಶುಭಾಶಯ ಕೋರಲು ಕರೆಮಾಡಿದವರಿಗೂ ನಾಟ್‌ ರೀಚಬಲ್‌ ಬಂದಿತ್ತು ಮೊಬೈಲ್‌.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

‘ಮಠ’ ಸಿನೆಮಾ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ..!

Published

on

ಸುದ್ದಿದಿನಡೆಸ್ಕ್:ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ʻಮಠʼ ಗುರುಪ್ರಸಾದ್‌ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ.

52 ವರ್ಷದ ಕನಕಪುರ ಮೂಲದ ಗುರುಪ್ರಸಾದ್‌ ಇನ್ನಿಲ್ಲಾ.. ತುಮಕೂರು ರಸ್ತೆಯ ಅಪಾರ್ಟ್‌ಮೆಂಟ್‌ನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಲದ ಸುಳಿಗೆ ಸಿಲುಕಿದ್ದ ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಠ ಸಿನಿಮಾ ಮೂಲಕ ನಿರ್ದೇಶಕರಾಗಿ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದರು. ಮಠ, ಎದ್ದೇಳು ಮಂಜುನಾಥ್‌ ಚಿತ್ರದ ಮೂಲಕ ಮನೆಮಾತಾಗಿದ್ದರು.

ನಿರ್ದೇಶಕ ʻಮಠʼ ಗುರುಪ್ರಸಾದ್‌ ಅವರು ನವೆಂಬರ್ 02, 1972 ರಂದು ರಾಮನಗರದಲ್ಲಿ ಜನಿಸಿದ್ದರು, ಅಂದರೆ ನಿನ್ನೆ ನಿರ್ದೇಶಕ ಗುರುಪ್ರಸಾದ್‌ ಹುಟ್ಟುಹಬ್ಬ ಇತ್ತು, ನಿನ್ನೆ ಬರ್ತ್‌ ಡೇ ವಿಶ್‌ ಮಾಡಲು ಕರೆಮಾಡಿದವರಿಗೆ ನೋ ಆನ್ಸರ್‌ ಅಂತ ಬರುತ್ತಿತ್ತು, ನಿರ್ದೇಶಕ ಗುರುಪ್ರಸಾದ್‌ ಅವರ ಮೊಬೈಲ್‌ ನಾಟ್‌ ರೀಚಬಲ್‌ ಆಗಿತ್ತು, ಗುರುಪ್ರಸಾದ್‌ ತಮ್ಮ ಜನ್ಮದಿನಕ್ಕೆ ಮುನ್ನವೇ ಜೀವನಕ್ಕೆ ಅಂತ್ಯ ಹಾಡಿಕೊಂಡಿದ್ದಾರೆ. ಬರ್ತಡೇಗೂ ಮುನ್ನವೇ ಡೆತ್ ಡೇ ಮಾಡಿಕೊಂಡ ಗುರುಪ್ರಸಾದ್..!

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending