Connect with us

ಸಿನಿ ಸುದ್ದಿ

ನನ್ನ ನೆನಪಲ್ಲಿ ಡಾ ರಾಜಕುಮಾರ್..!

Published

on

  • ಕ್ರಾಂತಿರಾಜ್ ಒಡೆಯರ್, ಪ್ರಾಧ್ಯಾಪಕರು, ಮೈಸೂರು

ಸನ್ 2000 ಅನ್ಸುತ್ತೆ. ಶಬ್ದವೇದಿ ಚಿತ್ರ ರಿಲೀಸ್ ಆಗಿದ್ದ ಸಂದರ್ಭ. 10 ನೇ ತರಗತಿ ಪರೀಕ್ಷೆ ಮುಗಿಸಿ ರಜಾ ದಿನಗಳನ್ನು ಅನುಭವಿಸಲು ಶಿವಾರಗುಡ್ಡದಿಂದ ಮೈಸೂರಿನ ಮಾರ್ಗವಾಗಿ ನಮ್ಮೂರಾದ ಪೂರಿಗಾಲಿಗೆ ಹೋಗುವ ಯೋಜನೆ. ಅಂದಿನ ದಿನಗಳಲ್ಲಿ ಮೈಸೂರಿನಿಂದ ನಮ್ಮೂರಿಗೆ ಇದ್ದ ಕೊನೆಯ ಬಸ್ಸು 7 ಗಂಟೆಗೆ. ಮ್ಯಾಟನಿ ಶೋ ನೋಡ್ಕಂಡು ಊರಿಗೆ ಹೋದರೆ ಆಯಿತು ಅಂತ, ಪ್ರಭಾ ಥೀಯೇಟರ್ ಗೆ ಹೋಗಿ, ಅಲ್ಲಿ ಟಿಕೆಟ್ ತೆಗೆದುಕೊಳ್ಳಲು ನಿಂತಿದ್ದ ಉದ್ದದ ಸಾಲಿನಲ್ಲಿ ನಿಂತಿದ್ದು ಬೆಳಿಗ್ಗೆ 11.30 ಗಂಟೆಗೆ.

ಆದರೆ ನಾನು ಟಿಕೆಟ್ ಕೌಂಟರ್ ಬಳಿ ಬರುವಷ್ಟರಲ್ಲಿ ಮ್ಯಾಟನಿ ಟಿಕೆಟ್ ಮುಗಿದು ಫಸ್ಟ್ ಶೋ ಟಿಕೆಟ್ ಕೊಡೋಕೆ ಶುರು ಮಾಡಿದ್ರು. 4.30 ಗೆ ಫಸ್ಟ್ ಶೋ ಶುರು ಆದ್ರೂ 7 ಗಂಟೆಗೆ ಚಿತ್ರ ಮುಗಿದು, ಹೇಗಾದ್ರು ಮಾಡಿ ಕೊನೆಯ ಬಸ್ ಹಿಡಿದು ಪೂರಿಗಾಲಿ ತಲುಪಬಹುದು ಎಂಬ ಧೈರ್ಯದಲ್ಲಿ ಫಸ್ಟ್ ಶೋ ಟಿಕೆಟ್ ತಕೊಂಡು ಚಿತ್ರ ನೋಡೋಕೆ ಕೂತೆ. ಚಿತ್ರ ಮುಗಿದಾಗ 7 ಗಂಟೆ 10 ನಿಮಿಷ. ಪ್ರಭಾ ಥಿಯೇಟರ್ ನಿಂದ ಓಡೋಡಿ ಛತ್ರಿ ಮರ ಬಸ್ ಸ್ಟಾಪ್ ತಲುಪುವಷ್ಟರಲ್ಲಿ 7 ಗಂಟೆ 15 ನಿಮಿಷ. ಅಷ್ಟು ಹೊತ್ತಿಗಾಗಲೇ ಲಾಸ್ಟ್ ಬಸ್ ಹೊರಟು ಹೋಗಿತ್ತು. ದಿಕ್ಕು ತೋಚದೆ ಅಲ್ಲೇ ನಿಂತಿದ್ದಾಗ ಚಾಮರಾಜನಗರಕ್ಕೆ ಹೋಗುವ ಬಸ್ಸು ಬಂತು.

ಆ ಬಸ್ಸಿನ ಕಂಡೆಕ್ಟರ್, “ಈಗ ಹೊರಟರೆ ನರಸೀಪುರದಲ್ಲಿ ನನಗೆ ಮಿಸ್ ಆದ ಬಸ್ ಸಿಗುತ್ತದೆ” ಎಂದು ಹೇಳಿದ. ಅವನ ಮಾತನ್ನು ನಂಬಿ, ಅದೇ ಬಸ್ಸಿನಲ್ಲಿ ಹೊರಟು ನರಸೀಪುರದಲ್ಲಿ ಇಳಿದುಕೊಂಡೆ. ಅಷ್ಟರಲ್ಲಾಗಲೇ ನಮ್ಮೂರಿನ ಲಾಸ್ಟ್ ಬಸ್ಸು ನರಸೀಪುರವನ್ನೂ ಬಿಟ್ಟು ಹೊರಟಿತ್ತು. ಅಂದು ರಾತ್ರಿ ನರಸೀಪುರದ ಬಸ್ ಸ್ಟ್ಯಾಂಡಿನಲ್ಲೇ ಮಲಗಿ, ಬೆಳಗ್ಗೆ ಎದ್ದು ಮೊದಲ ಬಸ್ಸಿನಲ್ಲೇ ಊರ ಕಡೆ ಪಯಣ. ಊರಲ್ಲಿ ಕಾದಿತ್ತು ನನಗೆ ಸುಪ್ರಭಾತ. ರಾತ್ರಿಯೆಲ್ಲಾ ಎಲ್ಲಿದ್ದೆ? ಏನು ಮಾಡ್ತಾ ಇದ್ದೆ? ಎಸ ಟಿ ಡಿ ಬೂತ್ ಇಂದ ಒಂದು ಫೋನ್ ಆದ್ರೂ ಮಾಡಬಾರದ? ಎಂಬ ಹಲವಾರು ಪ್ರಶ್ನೆಗಳಿಗೆ, ನಾನು ರಾಜಕುಮಾರ್ ಪಿಕ್ಚರ್ ನೋಡೋಕೆ ಹೋಗಿ ಹೀಗಾಯಿತು ಎಂಬ ಸತ್ಯವನ್ನು ಹೇಳಿದರೆ ಮತ್ತಷ್ಟು ಬೊಗಳವನ್ನು ಕೇಳಬೇಕಾದೀತು ಎಂದು ಅರಿತು, ಮನೆಯವರು ಏನಾದ್ರೂ ಅಂದುಕೊಳ್ಳಲಿ ಎಂದು ತೀರ್ಮಾನಿಸಿ, ಮೌನಕ್ಕೆ ಶರಣಾದೆ. ಇದು ರಾಜಕುಮಾರ್ ಅವರ ಅಭಿಮಾನಿಯಾಗಿ ನಾನು ಪಟ್ಟ ಪಾಡು.

ಅಂದ ಹಾಗೆ, ಅಂದಿನ ದಿನಗಳಲ್ಲಿ ನನ್ನ ಸಮಕಾಲೀನರಾಗಲಿ ಅಥವಾ ನಮ್ಮ ಊರಿನಲ್ಲಾಗಲಿ, ರಾಜಕುಮಾರ್ ಅವರ ಅಭಿಮಾನಿಗಳು ಅಂತ ಯಾರೂ ಇರಲಿಲ್ಲ. ಅವಾಗ ಬಂಧನ ವಿಷ್ಣುವರ್ಧನ್, ಏಕಲವ್ಯ ಅಂಬರೀಷ್, ಎಸ್ ಪಿ ಸಾಂಗ್ಲಿಯಾನ ಶಂಕರ್ ನಾಗ್ ಅವರ ಯುಗ. ನಮ್ಮೂರಿನಲ್ಲಿ ಹೆಚ್ಚಿನ ಅಭಿಮಾನಿಗಳು ಇವರಿಗಿದ್ದರೆ, ಕೆಲವರು ಬಾ ನಲ್ಲೆ ಮಧುಚಂದ್ರಕೆಯ ಶಿವರಾಂ ಹಾಗು ಎ ಚಿತ್ರದ ಉಪೇಂದ್ರ ಅವರ ಭಕ್ತರು। ಆಗ ನಾನು ವಿಷ್ಣುವರ್ಧನ್ ಅವರ ಅಭಿಮಾನಿ.

ವಯಸ್ಸಾಗ್ತಾ ಮನಸ್ಸು ಪರಿಪಕ್ವ ಆಗ್ತಾ ಆಗ್ತಾ ಸೆಲೆಕ್ಟಿವ್ ಚಿತ್ರಗಳನ್ನ ನೋಡೋಕೆ ಶುರು ಆಯಿತು. ಆವಾಗ ನಾನು ಟಿ ವಿ ಗಳಲ್ಲಿ ಬರುತ್ತಿದ್ದ ರಾಜಕುಮಾರ್ ಅವರ ಚಿತ್ರಗಳನ್ನು ನೋಡ್ತಾ ನೋಡ್ತಾ ಅವರು ಅಭಿನಯಿಸಿರುವ ಚಿತ್ರಗಳೂ ಇಷ್ಟ ಆದ್ವು. ಹೆಚ್ಚಾಗಿ ರಾಜಕುಮಾರ್ ಅವರ ಅದ್ಬುತ ಅಭಿನಯ ನನ್ನನ್ನು ಅವರಿಸಿಕೊಳ್ಳುತ್ತ ಹೋಯಿತು. ಹಾಗೆ ಶುರುವಾದದ್ದು ರಾಜಕುಮಾರ್ ಅವರ ಮೇಲಿನ ಅಭಿಮಾನ. ವಯಸ್ಸಾಗ್ತಾ ಆಗ್ತಾ ಚಿತ್ರಗಳ ವಿಶ್ಲೇಷಣೆ ಮಾಡೋಕೆ ಶುರು ಮಾಡಿದೆ ನೋಡಿ, ಅವಾಗ ರಾಜಣ್ಣ ಇನ್ನೂ ಇಷ್ಟ ಆಗಿ ಬಹಳ ಹತ್ತಿರವಾದ್ರು.

“ಆಡು ಮುಟ್ಟದ ಸೊಪ್ಪಿಲ್ಲ, ರಾಜಕುಮಾರ್ ಅವರು ಮಾಡದ ಪಾತ್ರಗಳಿಲ್ಲ” ಅಂತ ಸುಮ್ನೇನಾ ಹೇಳೋದು! ಎಂಥಾ ಅದ್ಬುತ ನಟ… ನಿರ್ದೇಶಕರ ನಟ ರಾಜಣ್ಣ. ಕನ್ನಡ ಚಿತ್ರರಂಗದಲ್ಲಿ ಬಂದ ಪೌರಾಣಿಕ ಕಥೆಯ ಚಿತ್ರಗಳು, ಸಾಮಾಜಿಕ ಕಳಕಳಿಯುಳ್ಳ ಚಿತ್ರಗಳು, ಸಂಸಾರದ ಕಥೆಯುಳ್ಳ ಚಿತ್ರಗಳು ಹಾಗು ಡಿಟೆಕ್ಟಿವ್ ಕಥೆ ಆಧಾರಿತ ಚಿತ್ರಗಳಿಗೆಲ್ಲ ಬಣ್ಣ ಹಚ್ಚಿದ ರಾಜಕುಮಾರ್ ಅವರು, ಚಿತ್ರರಂಗದಲ್ಲಿ ಆದ ಎಲ್ಲಾ ಬದಲಾವಣೆಗಳಿಗೂ ತಮ್ಮನ್ನು ಒಡ್ಡುಕೊಂಡು, ಎಲ್ಲಾ ತರಹದ ಪಾತ್ರಗಳಲ್ಲೂ ತಮ್ಮ ಮನೋಜ್ಞ ಅಭಿನಯದಿಂದ ಕನ್ನಡ ನಾಡಿನ ಚಿತ್ರರಸಿಕರ ಮನಸ್ಸನ್ನ ಗೆದ್ದವರು. ಅವರು ನಿರ್ವಹಿಸುವ ಪಾತ್ರದ ಆಳಕ್ಕೆ ಇಳಿದು ಅಭಿನಯಿಸುತ್ತಿದ್ದುದ್ದನ್ನು ನೋಡಿದರೆ, ಆ ಕಥೆ ನಿಜವಾಗಿಯೂ ನಮ್ಮ ಕಣ್ಣ ಮುಂದೆ ನೆಡೆಯುತ್ತಿರುವುದೇನೋ ಎಂದು ಭಾಸವಾಗುತ್ತದೆ.

ಅವರು ಅಭಿನಯಿಸಿದ ಚಿತ್ರದ ಪಾತ್ರಗಳಲ್ಲಷ್ಟೇ ಸರಳತೆಯನ್ನು ತೋರದೇ, ನಿಜಜೀವನದಲ್ಲಿಯೂ ಕೂಡ ತುಂಬ ಸರಳವಾಗಿ, ತಾವು ನಂಬಿರುವ ಸಿದ್ದಾಂತಕ್ಕೆ ಅನುಗುಣವಾಗಿ, ದೊಡ್ಡ ನಟನಾದರೂ ಕೂಡ ಯಾವುದೇ ಅಹಂ ಇಲ್ಲದೆ ಬದುಕಿ, ಬರೀ ಚಿತ್ರರಸಿಕರಿಗಲ್ಲದೇ ಎಲ್ಲರಿಗೂ ಆದರ್ಶವಾದ ಬಂಗಾರದ ಮನುಷ್ಯ ಡಾ ರಾಜಕುಮಾರ್ ಅವರ ಹುಟ್ಟಿದ ದಿನ ಈವತ್ತು. ಅವರ ಹುಟ್ಟಿದ ದಿನವೊಂದೇ ಅಲ್ಲದೇ, ಸರ್ವಕಾಲಕ್ಕೂ ನೆನಪಿನಲ್ಲಿ ಇಡಬೇಕಾದ ವ್ಯಕ್ತಿತ್ವ ನಮ್ಮ ರಾಜಣ್ಣನವರದು.

ಇಂತಹ ವ್ಯಕ್ತಿಯ 92 ನೇ ವರ್ಷದ ಹುಟ್ಟಿದ ದಿನಾಚರಣೆಯ ಸಂದರ್ಭದಲ್ಲಿ, ಬೆಳಿಗ್ಗೆಯೇ ಲೇಖನ ಬರೆಯಬೇಕೆಂದುಕೊಂಡಿದ್ದೆ. ಆದರೆ, ಹಲವು ಟಿ ವಿ ಚಾನಲ್ಲುಗಳಲ್ಲಿ ಬೆಳಿಗ್ಗೆಯಿಂದ ಪ್ರಸಾರವಾಗುತ್ತಿದ್ದ ರಾಜಣ್ಣ ಅವರ ಚಿತ್ರ ನೋಡುವುದರಲ್ಲಿ ಮಗ್ನನಾಗಿದ್ದು, ದಿನದ ಕೊನೆಯಲ್ಲಿ ಬಿಡುವು ಮಾಡಿಕೊಂಡು ಬರೆದಿರುವೆ. ರಾಜಣ್ಣ ಅವರ ಸರಳತೆ ಹಾಗು ಚಿಂತನೆ ಅಮರವಾಗಲಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮತ್ತೆ ತಾಯಿಯಾಗಬೇಕು : ನಟಿ ಸಮಂತಾ

Published

on

ಸುದ್ದಿದಿನಡೆಸ್ಕ್:ಇತ್ತೀಚೆಗೆ ನಟಿ ಸಮಂತಾ ಅವರ ಕಮೆಂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆ ಹೇಳಿಕೆಗಳ ಮೇಲೆ ನಾನಾ ರೀತಿಯ ಅನುಮಾನಗಳೂ ವ್ಯಕ್ತವಾಗಿವೆ.

ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಸದ್ಯ ಸಮಂತಾ ಸತತ ಚಿತ್ರಗಳಲ್ಲಿ ಬ್ಯುಸಿಯಾಗಿರುವುದು ಗೊತ್ತೇ ಇದೆ. ಇತ್ತೀಚಿಗೆ ಸಮಂತಾ ಅವರ ವೆಬ್ ಸಿರೀಸ್ ವಿಚಾರಕ್ಕೆ ಸುದ್ದಿಯಾಗಿದ್ದರು. ನಟಿಯ ಇತ್ತೀಚಿನ ವೆಬ್ ಸಿರೀಸ್ ಸಿಟಾಡೆಲ್ ಸಖತ್ ಸುದ್ದಿಯಾಗಿದೆ. ಸದ್ಯ ಈ ವೆಬ್ ಸೀರೀಸ್ ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ ಎಂದು ತಿಳಿದುಬಂದಿದೆ. ಈ ವೆಬ್ ಸರಣಿಯ ಪ್ರಚಾರದ ವೇಳೆ ಮಾಡಿದ ಕಾಮೆಂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಇದರ ಭಾಗವಾಗಿ ಸಮಂತಾ ರಾಜ್ ಮತ್ತು ಡಿಕೆ ಸಂದರ್ಶನವೊಂದರಲ್ಲಿ ಹೇಳಿದ್ದು ದಿ ಫ್ಯಾಮಿಲಿ ಮ್ಯಾನ್ 2 ಚಿತ್ರೀಕರಣದ ವೇಳೆ ನಾನು ಹಲವು ಭಾವನೆಗಳಿಗೆ ಒಳಗಾಗಿದ್ದೆ ಎಂದು ಸಮಂತಾ ಹೇಳಿದ್ದಾರೆ. ಅಲ್ಲದೇ ಅವರ ನಿರ್ದೇಶನದಲ್ಲಿ ನಟಿಸುವುದು ಕಷ್ಟ ಎಂದಿದ್ದಾರೆ. ನಂತರ ಅದೇ ಸಂದರ್ಶನದಲ್ಲಿ ನಟಿ ಬೇರೆ ವಿಚಾರವನ್ನೂ ಹೇಳಿದ್ದಾರೆ.

ಹನಿ ಬನ್ನಿ ವೆಬ್ ಸರಣಿಯಲ್ಲಿ ತಾಯಿ ಪಾತ್ರದ ಬಗ್ಗೆ ಮಾತನಾಡುತ್ತಾ, ಅವರು ಸಂವೇದನಾಶೀಲ ಕಾಮೆಂಟ್​ಗಳನ್ನು ಮಾಡಿದ್ದಾರೆ. ನನಗೆ ತಾಯಿಯಾಗುವ ಕನಸು ಇದೆ. ನಾನು ತಾಯಿಯಾಗಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.

ಇದಕ್ಕಾಗಿ ತಡವಾಗಿದೆ ಎಂದು ಅವರು ಭಾವಿಸುವುದಿಲ್ಲ. ನಾನು ಜೀವನದಲ್ಲಿ ತುಂಬಾ ಖುಷಿಯಾಗಿದ್ದೇನೆ ಎಂದು ಸಮಂತಾ ಹೇಳಿದ ಮಾತುಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಆದರೆ ಸಮಂತಾ ಈ ಕಾಮೆಂಟ್ ಮಾಡಿದ ನಂತರ ಮತ್ತೊಮ್ಮೆ ಅವರ ಎರಡನೇ ಮದುವೆಯ ಸುದ್ದಿಗೆ ವೇಗ ಸಿಕ್ಕಿದೆ. ಈ ಹಿಂದೆ ರಾಜ್ ಹಾಗೂ ಡಿಕೆಶಿಯಲ್ಲಿ ರಾಜ್ ನನ್ನು ಪ್ರೀತಿಸುತ್ತಿದ್ದು, ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂದು ಹೇಳಲಾಗಿತ್ತು.

ಆದರೆ ಇದೀಗ ಸಮಂತಾ ಎರಡನೇ ಮದುವೆಯ ಸುದ್ದಿ ಮುನ್ನೆಲೆಗೆ ಬಂದಿದ್ದು, ಮತ್ತೆ ತಾಯಿಯಾಗಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಇದರೊಂದಿಗೆ ರಾಜ್ ಎರಡನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಗೆ ವೇಗ ಸಿಕ್ಕಿದೆ. ಈ ಸುದ್ದಿಯಲ್ಲಿನ ಸತ್ಯಗಳ ಹೊರತಾಗಿ, ಈ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಹಾಟ್ ಟಾಪಿಕ್ ಆಗಿದೆ. ಈ ಸುದ್ದಿಗೆ ಸಮಂತಾ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡೋಣ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸಿಕ್ಕಾಬಟ್ಟೆ ಸಾಲ, ಸಾಲು ಸಾಲು ಚೆಕ್‌ಬೌನ್ಸ್‌ ಕೇಸ್‌ ; ನಿರ್ದೇಶಕ ಗುರುಪ್ರಸಾದ್ ಸಾವಿಗೆ ಕಾರಣವಾಯ್ತಾ..!?

Published

on

ಸುದ್ದಿದಿನಡೆಸ್ಕ್:ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ʻಮಠʼ ಗುರುಪ್ರಸಾದ್‌ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ.

ಗುರುಪ್ರಸಾದ್‌ ಮೇಲೆ ಸಾಲು ಸಾಲು ಚೆಕ್‌ಬೌನ್ಸ್‌ ಕೇಸ್‌ಗಳಿದ್ದವು. ಸಿಕ್ಕ ಸಿಕ್ಕವರ ಬಳಿ ಸಾಲ ಮಾಡಿಕೊಂಡಿದ್ದರು. ಶ್ರೀನಿವಾಸ್‌ ಗೌಡ ಎಂಬುವರ ಜೊತೆ ಹಣದ ವ್ಯವಹಾರಕ್ಕೆ ಕಿರಿಕ್‌ ಕೂಡ ಆಗಿತ್ತು. ಗುರುಪ್ರಸಾದ್‌ಗೆ ಅಭಿಮಾನಿಯಾಗಿದ್ದ ಶ್ರೀನಿವಾಸ್‌ ಗೌಡ 25 ಲಕ್ಷ ಹಣ ನೀಡಿದ್ದರು. ಗುರುಪ್ರಸಾದ್‌ ಬರವಣಿಗೆ ಮೆಚ್ಚಿ ಜೊತೆಯಲ್ಲೇ ಇದ್ದರು ಶ್ರೀನಿವಾಸ್‌ ಗೌಡ.

ಹಣ ವಾಪಸ್‌ ಕೊಡಲಾಗದೇ ಕಿರಿಕ್‌ ಮಾಡಿಕೊಂಡಿದ್ದರು ನಿರ್ದೇಶಕ ಗುರುಪ್ರಸಾದ್‌ ಅವರು. ಈ ಬಗ್ಗೆ ಕೋರ್ಟ್‌ ಮೆಟ್ಟಿಲೇರಿದ್ದ, ಗುರುಪ್ರಸಾದ್‌ ವಿರುದ್ದ ಕಾನೂನು ಸಮರ ಸಾರಿದ್ದರು. ಅಕ್ಟೋಬರ್‌ 24ರಂದು ಇದ್ದ ಕೋರ್ಟ್‌ವಿಚಾರಣೆಗೂ ಹಾಜರಾಗಿರಲಿಲ್ಲ ಗುರುಪ್ರಸಾದ್‌. ಮೆಡಿಕಲ್‌ ರಿಪೋರ್ಟ್‌ ನೀಡಿ ವಿಚಾರಣೆ ಮುಂದೂಡಿಸಿಕೊಂಡಿದ್ದರು.

ನಿನ್ನೆ ಅಂದರೆ ನವೆಂಬರ್‌ 2ಕ್ಕೆ ಗುರುಪ್ರಸಾದ್‌ ಹುಟ್ಟುಹಬ್ಬ ಇತ್ತು. ಶುಭಾಶಯ ಕೋರಲು ಕರೆಮಾಡಿದವರಿಗೂ ನಾಟ್‌ ರೀಚಬಲ್‌ ಬಂದಿತ್ತು ಮೊಬೈಲ್‌.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

‘ಮಠ’ ಸಿನೆಮಾ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ..!

Published

on

ಸುದ್ದಿದಿನಡೆಸ್ಕ್:ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ʻಮಠʼ ಗುರುಪ್ರಸಾದ್‌ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ.

52 ವರ್ಷದ ಕನಕಪುರ ಮೂಲದ ಗುರುಪ್ರಸಾದ್‌ ಇನ್ನಿಲ್ಲಾ.. ತುಮಕೂರು ರಸ್ತೆಯ ಅಪಾರ್ಟ್‌ಮೆಂಟ್‌ನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಲದ ಸುಳಿಗೆ ಸಿಲುಕಿದ್ದ ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಠ ಸಿನಿಮಾ ಮೂಲಕ ನಿರ್ದೇಶಕರಾಗಿ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದರು. ಮಠ, ಎದ್ದೇಳು ಮಂಜುನಾಥ್‌ ಚಿತ್ರದ ಮೂಲಕ ಮನೆಮಾತಾಗಿದ್ದರು.

ನಿರ್ದೇಶಕ ʻಮಠʼ ಗುರುಪ್ರಸಾದ್‌ ಅವರು ನವೆಂಬರ್ 02, 1972 ರಂದು ರಾಮನಗರದಲ್ಲಿ ಜನಿಸಿದ್ದರು, ಅಂದರೆ ನಿನ್ನೆ ನಿರ್ದೇಶಕ ಗುರುಪ್ರಸಾದ್‌ ಹುಟ್ಟುಹಬ್ಬ ಇತ್ತು, ನಿನ್ನೆ ಬರ್ತ್‌ ಡೇ ವಿಶ್‌ ಮಾಡಲು ಕರೆಮಾಡಿದವರಿಗೆ ನೋ ಆನ್ಸರ್‌ ಅಂತ ಬರುತ್ತಿತ್ತು, ನಿರ್ದೇಶಕ ಗುರುಪ್ರಸಾದ್‌ ಅವರ ಮೊಬೈಲ್‌ ನಾಟ್‌ ರೀಚಬಲ್‌ ಆಗಿತ್ತು, ಗುರುಪ್ರಸಾದ್‌ ತಮ್ಮ ಜನ್ಮದಿನಕ್ಕೆ ಮುನ್ನವೇ ಜೀವನಕ್ಕೆ ಅಂತ್ಯ ಹಾಡಿಕೊಂಡಿದ್ದಾರೆ. ಬರ್ತಡೇಗೂ ಮುನ್ನವೇ ಡೆತ್ ಡೇ ಮಾಡಿಕೊಂಡ ಗುರುಪ್ರಸಾದ್..!

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending