Connect with us

ರಾಜಕೀಯ

ಬರಿದಾದ ಖಜಾನೆ-ಮೋದಿ ಸರ್ಕಾರದ ಬಳುವಳಿ

Published

on

  • ಮೋದಿ ಸರ್ಕಾರದ ಆಡಳಿತಾವಧಿಯ ಕಡೆಯ ವರ್ಷದಲ್ಲಿ ಪ್ರತ್ಯಕ್ಷ ಮತ್ತು ಅಪ್ರತ್ಯಕ್ಷ ತೆರಿಗೆ ಸಂಗ್ರಹದಲ್ಲಿ ಕಮ್ಮಿಯೆಂದರೂ ರೂ. 1.75 ಲಕ್ಷ ಕೋಟಿಗಳಷ್ಟು ಕೊರತೆ ಉಂಟಾಗಿದೆ. ಇದು ಒಟ್ಟು ಜಿಡಿಪಿಯ ಶೇ. 1 ಕ್ಕೆ ಹತ್ತಿರ ಇದೆ. ಈ ಮೊತ್ತದ ಪ್ರಮಾಣ ಎಷ್ಟೆಂದರೆ ಇದರಿಂದ ಮೋದಿ ಸರಕಾರ ಕೊನೆಯ ಬಜೆಟಿನಲ್ಲಿ ಸಣ್ಣ ರೈತರಿಗೆಂದು ಪ್ರಕಟಿಸಿದ ವಾರ್ಷಿಕ 6000 ರೂ. ಆದಾಯ ಬೆಂಬಲವನ್ನು ಅವರಿಗೆ ಮಾತ್ರವಲ್ಲ ದೇಶದ ಎಲ್ಲ ಕುಟುಂಬಗಳಿಗೂ ಕೊಡಬಹುದು. ಅಥವ 15 ಕೋಟಿ ಕುಟುಂಬಗಳಿಗೆ ಅಂದರೆ ನಮ್ಮ ದೇಶದ ಜನ ಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರಿಗೆ ಪ್ರತಿ ತಿಂಗಳು ರೂ.1000 ದಂತೆ ಒಂದಿಲ್ಲೊಂದು ರೀತಿಯಲ್ಲಿ ಆದಾಯ ಬೆಂಬಲ ಕೊಡಬಹುದಾಗಿತ್ತು ಈ ಹಿನ್ನೆಲೆಯಲ್ಲಿ ದೇಶದ ಮುಂದಿರುವ ಪ್ರಶ್ನೆ- ಮೇ ತಿಂಗಳ ಕೊನೆಯಲ್ಲಿ ಬಲಿಷ್ಟ ಹಿತಾಸಕ್ತಿಗಳನ್ನು ಎದುರಿಸಿ ನಿಲ್ಲಬಲ್ಲ ಮತ್ತು ಜನಪರವಾದ ಪರ್ಯಾಯವನ್ನು ದಿಟ್ಟತನದಿಂದ ಆಯ್ದುಕೊಳ್ಳಬಲ್ಲ ಒಂದು ಮಜಬೂತ್ ಸರಕಾರ ಬರುವುದೇ ಎಂಬುದು.

ಪ್ರೊ. ಸುರಜಿತ್ ಮಜುಂದಾರ್

1 ಏಪ್ರಿಲ್ 2019 ರಂದು ಹಣಕಾಸು ಸಚಿವಾಲಯ ಮಾರ್ಚ್ 2019 ರ ಜಿಎಸ್‌ಟಿ ಸಂಗ್ರಹದ ಬಗ್ಗೆ ಹೇಳಿಕೆ ನೀಡಿದ್ದು ಅದು ಪ್ರಸಕ್ತ ಹಣಕಾಸು ವರ್ಷದ ಕಡೆಯ ತಿಂಗಳು ಆಗಿದೆ. ಈ ಹೇಳಿಕೆ ಪ್ರಕಾರ ಮಾರ್ಚ್ ತಿಂಗಳಲ್ಲಿ ಸಂಗ್ರಹವಾದ ರೂ. 1,06,577 ಕೋಟಿ ಜಿಎಸ್‌ಟಿ ಕಾರ್ಯರೂಪಕ್ಕೆ ಬಂದನಂತರ ಗಳಿಸಿರುವ ಅತ್ಯದಿಕ ಮೊತ್ತವಾಗಿದೆ. ಆದರೆ ಈ ವಿಷಯದಲ್ಲಿ ಮರೆಮಾಚುತ್ತಿರುವ ಸಂಗತಿಯೆಂದರೆ ಫೆಬ್ರುವರಿ 1, 2019 ರಂದು ಮಂಡಿಸಿದ ಬಜೆಟ್‌ನಲ್ಲಿ ಪರಿಷ್ಕರಿಸಿದ ಜಿಎಸ್‌ಟಿ ಆದಾಯದ ಪುನರ್ ಅಂದಾಜಿಗಿಂತಲೂ ಬಹಳ ಕಡಿಮೆಯಿದೆ. ವಾಸ್ತವವಾಗಿ ಈ ಪರಿಷ್ಕೃತ ಅಂದಾಜೇ ಕಳೆದ ವರ್ಷದ ಬಜೆಟಿನಲ್ಲಿ ಇರಿಸಿಕೊಂಡಿದ್ದ ಗುರಿಗಿಂತ ಒಂದು ಲಕ್ಷ ಕೋಟಿ ರೂ. ಕಡಿಮೆಯಾಗಿದೆ.

ಕೇಂದ್ರ ಸರ್ಕಾರದ ಕಂಟ್ರೊಲರ್ ಜನರಲ್ ಆಫ್ ಅಕೌಂಟ್ಸ್ ಅವರ ವೆಬ್‌ಸೈಟ್‌ನಲ್ಲಿ ಫೆಬುವರಿ 2019 ರ ವರೆಗಿನ ಲೆಕ್ಕದ ವಿವರವನ್ನು ಪ್ರಕಟಿಸಲಾಗಿದೆ. ಇದರಂತೆ ಜಿಎಸ್‌ಟಿಯ ಎಲ್ಲಾ ಆದಾಯಗಳ ಮೊತ್ತ ಫೆಬ್ರವರಿ ೨೦೧೯ ಕ್ಕೆ ರೂ. 5,26,680 ಕೋಟಿ, ಈ ಬಜೆಟಿನ ಪರಿಷ್ಕೃತ ಅಂದಾಜು ರೂ. 6,43,900 ಕೋಟಿ, ಅಂದರೆ ಆದಾಯ ಗಳಿಕೆಯ ಗುರಿಗಿಂತ ರೂ.1,17,220 ಕೋಟಿ ಕಡಿಮೆ ಮತ್ತು ಕಳೆದ ಬಜೆಟ್‌ನಲ್ಲಿ ಮಂಡಿಸಿದ ಅಂದಾಜು ರೂ.7,43,900 ಕೋಟಿ.

ಅಂದರೆ ಒಟ್ಟು ಸಂಗ್ರಹವಾಗಿರುವ ಮೊತ್ತ ಪರಿಷ್ಕೃತ ಅಂದಾಜಿನ ಗುರಿ ಮುಟ್ಟಿರುವುದಿಲ್ಲ. ಮಾರ್ಚ್ ತಿಂಗಳಲ್ಲಿ ಸಂಗ್ರಹಿಸಿದ ದಾಖಲೆ ಆದಾಯದಲ್ಲಿ 51,209 ಕೋಟಿ ರೂ. ಗಳನ್ನು ರಾಜ್ಯ ಸರ್ಕಾರಗಳಿಗೆ ನೀಡಬೇಕಿದ್ದು ಮತ್ತು ಉಳಿದ ರೂ. 55,368 ಕೋಟಿ ಯಲ್ಲಿ ಜಿಎಸ್‌ಟಿ ಪರಿಹಾರಕ್ಕಾಗಿ ಇಟ್ಟಿರುವ ರೂ. 8000 ಕೋಟಿ ಸೇರಿರುತ್ತದೆ. ಈ ಎಲ್ಲವನ್ನೂ ಕೇಂದ್ರದ ಲೆಕ್ಕಕ್ಕೆ ಸೇರಿಸಿದರೂ ಮೊತ್ತ ರೂ5,82,048 ಕೋಟಿ ಆಗುತ್ತದಷ್ಟೇ. ಒಟ್ಟು ಕೇಂದ್ರ ಸರ್ಕಾರದ ಸಂಗ್ರಹಿಸಿರುವ ಜಿಎಸ್‌ಟಿ ತೆರಿಗೆ ಸಂಗ್ರಹ 5,82,048 ಕೋಟಿಯಾಗಿದ್ದು. ಇದು ಪರಿಷ್ಕೃತ ಬಜೆಟ್ ಅಂದಾಜಿಗಿಂತ ರೂ.61,852 ಕೋಟಿ ಕಡಿಮೆಯಾಗಿದ್ದರೆ, ಮೂಲ ಬಜೆಟ್‌ಗಿಂತ ರೂ. 1.62 ಲಕ್ಷ ಕೋಟಿ ಕಡಿಮೆಯಾಗಿದೆ.

ಜಿಎಸ್‌ಟಿ ತೆರಿಗೆ ಸಂಗ್ರಹದಲ್ಲಿನ ತೀವ್ರ ಕೊರತೆ ಕೇಂದ್ರ ಸರ್ಕಾರದ ಅಪ್ರತ್ಯಕ್ಷ ತೆರಿಗೆ ಸಂಗ್ರಹವನ್ನು ತೀವ್ರವಾಗಿ ತಟ್ಟುತ್ತದೆ, ಏಕೆಂದರೆ ಇದು ಅಪ್ರತ್ಯಕ್ಷ ತೆರಿಗೆ ಆದಾಯಗಳ ಬಹುಮುಖ್ಯವಾದ ಭಾಗವಾಗಿದೆ. 2018-19ಪರಿಷ್ಕೃತ ಅಂದಾಜಿನ ಪ್ರಕಾರ ಜಿಎಸ್‌ಟಿ ಒಟ್ಟು ಅಪ್ರತ್ಯಕ್ಷ ತೆರಿಗೆ ಸಂಪನ್ಮೂಲದ ಶೇ. 60 ಭಾಗವಾಗಿದೆ. ಉಳಿದ ಅಪ್ರತ್ಯಕ್ಷ ತೆರಿಗೆ ಸಂಗ್ರಹವೂ ತೃಪ್ತಿಕರವಾಗಿಲ್ಲವೆಂದು ಕಂಡು ಬರುತ್ತಿದೆ.

ಎಪ್ರಿಲ್ 2018ರಿಂದ-ಫೆಬ್ರುವರಿ 2019ರ ಅಂಕಿಅಂಶಗಳನ್ನು ಗಮನಿಸಿದರೆ ನಾಮಿನಲ್ ಜಿಡಿಪಿ ಹಿಂದಿನ ಸಾಲಿಗಿಂತ ಶೇ. 11.5 ಹೆಚ್ಚಳ ಸಾಧಿಸಿದ್ದರೂ, ಈ 11 ತಿಂಗಳ ಅವಧಿಯಲ್ಲಿ (ಏಪ್ರಿಲ್- ಫೆಬ್ರವರಿ) ಹಿಂದಿನ ಹಣಕಾಸು ವರ್ಷದ ಅದೇ 11ತಿಂಗಳ ಆದಾಯದೊಂದಿಗೆ ಹೋಲಿಸಿದರೆ ಅಪ್ರತ್ಯಕ್ಷ ತೆರಿಗೆ ಹೆಚ್ಚಳ ಕೇವಲ ಶೇ2%ಆಗಿದೆ. ಆದ್ದರಿಂದ ಮಾರ್ಚ್ 2019ರ ಈ ‘ಬೃಹತ್’ ಹೆಚ್ಚಳ ಸಹಾ ಒಟ್ಟಾರೆ ಕೊರತೆಯನ್ನು ಕಡಿಮೆ ಮಾಡುವುದಿಲ್ಲ. ಮಾರ್ಚ್ ತಿಂಗಳಿನಲ್ಲಿ ಅಪ್ರತ್ಯಕ್ಷ ತೆರಿಗೆಗಳ ಸಂಗ್ರಹದಲ್ಲಿ 20% ಆಗಿದ್ದರೂ ಕೂಡ, ಒಟ್ಟಾರೆ ಕೊರತೆ 1 ಲಕ್ಷ ಕೋಟಿ ರೂ. ಮೀರಲಿದೆ ಮತ್ತು ಮೂಲ ಬಜೆಟ್‌ಗಿಂತ 2 ಲಕ್ಷ ಕೋಟಿಗಳಿಗಿಂತ ಹೆಚ್ಚಾಗಲಿದೆ.

ನಿಚ್ಚಳವಾಗಿ ಜಿಎಸ್‌ಟಿ ಮೂಲಕ ಅಪ್ರತ್ಯಕ್ಷ ತೆರಿಗೆ ಆದಾಯ ಹೆಚ್ಚುವುದೆಂಬ ಆಶಯ ಕುಸಿಯುತ್ತಿದೆ. ಇದೇ ಸಂದರ್ಭದಲ್ಲಿ ನೇರ ತೆರಿಗೆ ಸಂಗ್ರಹವೂ ಹೆಚ್ಚಾಗಿರುವುದಿಲ್ಲ. ಕಾರ್ಪೋರೇಟ್ ತೆರಿಗೆ ಸಂಗ್ರಹ ಪರಿಷ್ಕೃತ ಬಜೆಟ್ ಅಂದಾಜಿನಂತೆ ಇರಬೇಕಾದರೆ ಮಾರ್ಚ್ 2018 ಗಿಂತ ಮಾರ್ಚ್ 2019 ರಲ್ಲಿ 22.74% ಹೆಚ್ಚಳ ಕಾಣಬೇಕಿದೆ. ಎಪರಿಲ್-ಫೆಬ್ರುವರಿ ಅವಧಿಯಲ್ಲಿ ಕಾಣ ಬಂದಿರುವ ಹೆಚ್ಚಳದ ಪ್ರಮಾಣ ೧೫.೪೩, ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಣೆ ಆಗಬೇಕಿದೆ.

ವೈಯುಕ್ತಿಕ ವರಮಾನ ತೆರಿಗೆ ಸಂಗ್ರಹಕ್ಕೆ ಸಂಬಂಧಪಟ್ಟಂತೆ ಕಳೆದ ವರ್ಷದ ಬಜೆಟ್ ಬಹಳ ಆಶಾದಾಯಕ ಅಂದಾಜು ಮಾಡಿತ್ತು, ಇದನ್ನು ಈ ಬಾರಿಯ ಪರಿಷ್ಕೃತ ಅಂದಾಜಿನಲ್ಲೂ ಉಳಿಸಿಕೊಳ್ಳಲಾಗಿದೆ. ಆದರೆ ನೋಟ್‌ರದ್ಧತಿಯ ನಂತರ ಸತತವಾಗಿ ಎರಡನೇಯ ವರ್ಷವೂ ಈ ಬಾಬ್ತಿನ ಸಂಪನಮೂಲ ಸಂಗ್ರಹ ಮೂಲ ಬಜೆಟ್/ ಪರಿಷ್ಕೃತ ಅಂದಾಜಿನ ಹತ್ತಿರವೂ ಬರುವಂತಿಲ್ಲ. ಎಪ್ರಿಲ್-ಫೆಬ್ರವರಿ 11 ತಿಂಗಳ ಅವಧಿಯಲ್ಲಿನ ಸಂಗ್ರಹವನ್ನು ಗಮನಿಸಿದರೆ, ಕನಿಷ್ಠ ರೂ. 50,000 ಕೋಟಿ ಕೊರತೆ ತೋರಿಸಲಿದೆ. ಇದರ ಫಲಿತಾಂಶವೆಂದರೆ, ಒಟ್ಟು ವರಮಾನ ತೆರಿಗೆ ಜಿಡಿಪಿಯ ಕೇವಲ 2.5% ಮಾತ್ರ ಆಗಬಹುದು. ಅಂದರೆ ಅದೇ ನಿಧಾನಗತಿಯ ಏರಿಕೆ.

ತೆರಿಗೆ ತೆರಬೇಕಾದ ಶ್ರೀಮಂತ ವಿಭಾಗಗಳ ಆದಾಯಗಳಲ್ಲಿ ತ್ವರಿತ ಹೆಚ್ಚಳವಾಗಿದ್ದರೂ, ನೊಟುರದ್ಧತಿಯ ನಂತರವೂ ವರಮಾನ ತೆರಿಗೆಯ ಆದಾಯದ ಸಂಗ್ರಹದ ಏರಿಕೆಯ ಗತಿ ಮಾತ್ರ ಹಿಂದಿನಂತೆಯೇ ನಿಧಾನವಾಗಿಯೇ ಇದೆ.

ನೋಟುರದ್ಧತಿ ಕ್ರಮದಿಂದಾಗಿ ತೆರಿಗೆ ರಿಟರ್ನ್ ಸಲ್ಲಿಸುವರ ಸಂಖ್ಯೆ ಹೆಚ್ಚಾಗಿದೆ ಎಂದು ಸರಕಾರೀ ಪ್ರಚಾರಯಂತ್ರ ಸಾರುತ್ತಿದೆ. ವಾಸ್ತವವಾಗಿ ಈ ಪ್ರವೃತ್ತಿ ನೋಟುರದ್ಧತಿಯ ಮೊದಲೇ ಕಂಡು ಬಂದಿತ್ತು. ಈಗ ಇದೇ ರೀತಿಯ ಕತೆಯನ್ನು ಜಿಎಸ್‌ಟಿ ಬಗ್ಗೆಯೂ ಹೇಳಲಾಗುತ್ತಿದೆ. ಈ ಅಂಕಿ ಅಂಶಗಳು ಮರೆಮಾಚುತ್ತಿರುವ ಸಂಗತಿಯೆಂದರೆ, ತೆರಿಗೆ ಬಲೆಯಲ್ಲಿನ ಸಂಖ್ಯೆಗಳಿಗೂ ಮತ್ತು ತೆರಿಗೆ ಆದಾಯಕ್ಕೂ ಯಾವುದೇ ನೇರ ಸಂಬಂಧವಿಲ್ಲವೆಂಬುದು.

ವರಮಾನ ತೆರಿಗೆ ರಿಟರ್ನ್ ಸಲ್ಲಿಸುವ ಶೇ. 90 ರಷ್ಟು ಜನ ಯಾವ ತೆರಿಗೆಯನ್ನು ಕಟ್ಟಿರುವುದಿಲ್ಲ ಅಥವಾ ಬಹಳ ಕಡಿಮೆ ತೆರಿಗೆ ಕಟ್ಟುತ್ತಾರೆ ಮತ್ತು 57% ತೆರಿಗೆ ಮೊತ್ತ ಸಂಬಳಗಳ ಮೂಲದಿಂದ ಬರುತ್ತಿದೆ, ವ್ಯಾಪಾರ-ವ್ಯವಹಾರಗಳ ಮೂಲದಿಂದ ಬರುವ ತೆರಿಗೆ ಆದಾಯಗಳ ಪ್ರಮಾಣ ಇದರ ಅರ್ಧದಷ್ಟು ಮಾತ್ರ. ಈ ಅಂಶಗಳನ್ನು ಗಮನಿಸಿ- ಆದಾಯ ತೆರಿಗೆ ಇಲಾಖೆ ಡಿಸೆಂಬರ್ 2018ರ ವರೆಗೆ 37 ಕೋಟಿ ವ್ಯಕ್ತಿಗಳಿಗೆ ವ್ಯಕ್ತಿಗಳಿಗೆ ಪಾನ್ ಕಾರ್ಡ್ ಅಂದರೆ ತೆರಿಗೆದಾರರ ಶಾಶ್ವತ ಅಕೌಂಟ್ ಸಂಖ್ಯೆ ನೀಡಿದೆ.

ಇದು ತೆರಿಗೆ ರಿಟರ್ನ್ ಸಲ್ಲಿಸುವವರ ಸಂಖ್ಯೆಯ 5 ಪಟ್ಟಿಗಿಂತಲೂ ಹೆಚ್ಚು ಮತ್ತು ದೇಶದ ಒಟ್ಟು ದುಡಿಮೆಗಾರರ 75% ದಷ್ಟು!ಆದ್ದರಿಂದ ಮೋದಿ ಸರ್ಕಾರದ ಆಡಳಿತಾವಧಿಯ ಕಡೆಯ ವರ್ಷದಲ್ಲಿ ಪ್ರತ್ಯಕ್ಷ ಮತ್ತು ಅಪ್ರತ್ಯಕ್ಷ ತೆರಿಗೆ ಸಂಗ್ರಹದಲ್ಲಿ ರೂ. 1.5 ಲಕ್ಷ ಕೋಟಿ ಕೊರತೆಯಿರುವುದು ಕೇವಲ ಎರಡು ತಿಂಗಳ ಹಿಂದಿನ ಪರಿಷ್ಕೃತ ಅಂದಾಜಿನಲ್ಲಿ ವ್ಯಕ್ತವಾಗಿದೆ. ಈ ಪರಿಷ್ಕೃತ ಅಂದಾಜು ಈ ಹಣಕಾಸು ವರ್ಷಧ ಆರಂಭದ ಅಂದಾಜಿಗಿಂತ 23,000 ಕೋಟಿ ರೂ.ಗಳಷ್ಟು ಕಡಿಮೆಯಿರುವುದರಿಂದ ಒಟ್ಟು ತೆರಿಗೆ ಆದಾಯ ಸಂಗ್ರಹಣೆಯಲ್ಲಿ ಒಟ್ಟು ಕೊರತೆ ಕಮ್ಮಿಯೆಂದರೂ ರೂ. 1.75 ಲಕ್ಷ ಕೋಟಿಗಳಷ್ಟಾಗುತ್ತದೆ.

ಇದು ಒಟ್ಟು ಜಿಡಿಪಿಯ ಶೇ. 1 ಕ್ಕೆ ಹತ್ತಿರ ಇದೆ. ಈ ಮೊತ್ತದ ಪ್ರಮಾಣ ಎಷ್ಟೆಂದರೆ ಇದರಿಂದ ಮೋದಿ ಸರಕಾರ ಅದರ ಕೊನೆಯ ಬಜೆಟಿನಲ್ಲಿ ಸಣ್ಣ ರೈತರಿಗೆಂದು ಪ್ರಕಟಿಸಿದ ವಾರ್ಷಿಕ 6000 ರೂ. ಆದಾಯ ಬೆಂಬಲವನ್ನು ಅವರಿಗೆ ಮಾತ್ರವಲ್ಲ ದೇಶದ ಎಲ್ಲ ಕುಟುಂಬಗಳಿಗೂ ಕೊಡಬಹುದು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ೧೫ ಕೋಟಿ ಕುಟುಂಬಗಳಿಗೆ ಅಂದರೆ ನಮ್ಮ ದೇಶದ ಜನ ಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರಿಗೆ ಪ್ರತಿ ತಿಂಗಳು ರೂ. 1000 ದಂತೆ ಒಂದಿಲ್ಲೊಂದು ರೀತಿಯಲ್ಲಿ ಆದಾಯ ಬೆಂಬಲ ಕೊಡಬಹುದಾಗಿತ್ತು. ಕಡಿಮೆ ತೆರಿಗೆ ಸಂಗ್ರಹದಿಂದ ರಾಜ್ಯಗಳ ಪಾಲು ಸಹಿತ ಕಡಿತಗೊಳ್ಳಲಿದೆ. ಇದರೊಂದಿಗೆ ಜಿಎಸ್‌ಟಿ ತೆರಿಗೆ ಸಂಗ್ರಹದ ಕೊರತೆ ರಾಜ್ಯ ಸರ್ಕಾರಗಳಿಗೆ ತೀವ್ರ ಹೊಡೆತ ನೀಡಲಿದೆ.

2018-19 ರ ತೆರಿಗೆ ಸಂಗ್ರಹದಲ್ಲಿ ಕೊರತೆ ಉಂಟಾಗಿರುವುದರ ಅರ್ಥ, ವಿತ್ತೀಯ ಕೊರತೆ ಅಂದಾಜಿಗಿಂತ ಬಹಳ ಹೆಚ್ಚಿದೆ ಅಥವಾ ಮಾರ್ಚ್ ತಿಂಗಳಲ್ಲಿ ತೀವ್ರ ವೆಚ್ಚಗಳನ್ನು ತೀವ್ರವಾಗಿ ಕಡಿತ ಮಾಡಲಾಗಿದೆ ಎಂದೇ ಆಗುತ್ತದೆ. ಫೆಬ್ರವರಿ ತಿಂಗಳ ವರೆಗಿನ ಆದಾಯ ಮತ್ತು ಖರ್ಚಿನ ಪ್ರವೃತ್ತಿಯನ್ನು ನೋಡಿದಾಗ, ಹಣಕಾಸು ವರ್ಷ ಮುಗಿಯುವ ಒಂದು ತಿಂಗಳ ಹಿಂದೆಯೇ ಬಜೆಟ್ ಅಂದಾಜಿಗಿಂತ ೩೪% ಹೆಚ್ಚಾಗಿರುವುದು, ಅಥವ ಜಿಡಿಪಿಯ 4.5% ರಷ್ಟು ಆಗಿರುವುದು ಕಂಡು ಬರುತ್ತದೆ.

ಈ ಹಿನ್ನೆಲೆಯಲ್ಲಿ, ಮೇ ತಿಂಗಳ ಕೊನೆಯಲ್ಲಿ ಬರಲಿರುವ ಹೊಸ ಸರ್ಕಾರದ ಮುಂದಿರುವ ಸವಾಲೆಂದರೆ ವಿತ್ತೀಯ ಕೊರತೆಯನ್ನು ಜಿಡಿಪಿಯ 3% ಮಿತಿಯಲ್ಲಿಡಬೇಕು ಎಂಬ ಎಫ್‌ಆರ್‌ಬಿಎಂ ಕಾಯ್ದೆ ಹೇರಿರುವ ವಿಚಾರಹೀನ ಗೀಳನ್ನು ತ್ಯಜಿಸುವುದು, ಮತ್ತು ಶ್ರೀಮಂತರಿಂದ, ಸಂಪತ್ತುಳ್ಳವರಿಂದ ಹಾಗೂ ಬೃಹತ್ ಉದ್ದಿಮೆಗಳಿಂದ ಮುಲಾಜಿಲ್ಲದೆ ತೆರಿಗೆ ಸಂಗ್ರಹಿಸುವುದು. ಈ ಮೂಲಕ, ತೆರಿಗೆಗಳ್ಳತನ ತಮ್ಮ ದಿಂಬುಗಳ ಅಡಿಯಲ್ಲಿ ನೋಟಿನ ಕಂತೆಗಳನ್ನು ಬಚ್ಚಿಟ್ಟರಿಗಿಂತ ಹೆಚ್ಚಾಗಿ, ಬಹುಪಾಲು ತೆರಿಗೆ ಬಲೆಯಲ್ಲಿರುವವರಿಂದಲೇ ನಡೆಯುತ್ತಿದೆ ಎಂಬುದನ್ನು ಒಪ್ಪಿಕೊಳ್ಳ ಬೇಕಾಗುತ್ತದೆ. ಆದಾಯ ತೆರಿಗೆ ಮತ್ತು ಜಿಎಸ್‌ಟ್ ಸಂಗ್ರಹದಲ್ಲಿ ಕಂಡು ಬಂದಿರುವ ಪ್ರವೃತ್ತಿ ಕೂಡ ಇಂತಹುದೇ.

ಇದರ ಬದಲಾಗಿ ಹೊಸ ಸರಕಾರಕ್ಕೆ ಇರುವ ಏಕೈಕ ದಾರಿಯೆಂದರೆ, ಒಂದು ತೀವ್ರತರದ ಮಿತವ್ಯಯ ಎಂದು ಹೇಳುವ ದಾರಿ. ಅಂದರೆ ಜನಸಾಮಾನ್ಯರಿಗಾಗಿ ಮಾಡುವ ವೆಚ್ಚಗಳನ್ನು ಕಡಿತಗೊಳಿಸುವುದು. ಕಳೆದ ಒಂದು ದಶಕದಲ್ಲಿ ಬಂದ ಸರಕಾರಗಳು ಇದನ್ನೇ ಅನುಸರಿಸಿವೆ. ಇದು ಜನಸಾಮಾನ್ಯರ ಬದುಕನ್ನು ನರಕಗೊಳಿಸಿರುವ ದಾರಿ. ಮೋದಿ ಸರ್ಕಾರ ಮತ್ತೆ ಬಂದರೆ ಇದೇ ದಾರಿಯನ್ನು ಮುಂದುವರೆಸುತ್ತದೆ ಎಂಬುದು ಖಡಾಖಂಡಿತ.

ಆದ್ದರಿಂದಲೇ, ಜನಸಾಮಾನ್ಯರ ಮೇಲೆ ಇನ್ನೂ ಹೆಚ್ಚಿನ ದಾಳಿಯನ್ನು ತಪ್ಪಿಸಬೇಕಾದರೆ ಈ ಮೋದಿ ಸರ್ಕಾರವನ್ನು ಸೋಲಿಸುವುದು ಆದ್ಯ ಕರ್ತವ್ಯವಾಗಬೇಕು. ಆದರೆ ಪ್ರಶ್ನೆಯಿರುವುದು-ದೇಶಕ್ಕೆ ಒಂದು ನಿಜವಾಗಿಯೂ ಹೊಸ ಸರ್ಕಾರ ಬರುವುದೇ, ಬಲಿಷ್ಟ ಹಿತಾಸಕ್ತಿಗಳನ್ನು ಎದುರಿಸಿ ನಿಲ್ಲಬಲ್ಲ ಮತ್ತು ಜನಪರವಾದ ಒಂದು ಧೀರ ಪರ್ಯಾಯವನ್ನು ಆಯ್ದುಕೊಳ್ಳಬಲ್ಲ ಒಂದು ಮಜಬೂತ್ ಸರಕಾರ ಬರುವುದೇ ಎಂಬುದು.

(ಕೃಪೆ-ಈ ವಾರದ ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಅನುವಾದ : ಎಂ.ಜಿ.ವೆಂಕಟೇಶ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕಲಬುರಗಿ ಪಾಲಿಕೆಯಲ್ಲಿ ಮತ್ತೆ ಕಾಂಗ್ರೆಸ್ ಮೇಲುಗೈ: ಮೇಯರ್‌-ಉಪ ಮೇಯರ್ ಸ್ಥಾನವೂ ‘ಕೈ’ ತೆಕ್ಕೆಗೆ!

Published

on

kalaburagi-municipal-corporation-mayor-deputy-mayor-election-congress-win
ಕಲಬುರಗಿ ಪಾಲಿಕೆಯಲ್ಲಿ ಮತ್ತೆ ಕಾಂಗ್ರೆಸ್ ಮೇಲುಗೈ: ಮೇಯರ್‌-ಉಪ ಮೇಯರ್ ಸ್ಥಾನವೂ ‘ಕೈ’ ತೆಕ್ಕೆಗೆ!

ಸುದ್ದಿದಿನ,ಕಲಬುರಗಿ: ಇಲ್ಲಿನ ಮಹಾನಗರ ಪಾಲಿಕೆಯ 24ನೇ ಅವಧಿಯ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮೇಲುಗೈ ಸಾಧಿಸಿದೆ. ತೀವ್ರ ಕುತೂಹಲ ಕೆರಳಿಸಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು 35 ಮತಗಳನ್ನು ಪಡೆಯುವ ಮೂಲಕ ಜಯಗಳಿಸಿದ್ದು, ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ಮತ್ತೊಮ್ಮೆ ತನ್ನದಾಗಿಸಿಕೊಂಡಿದ್ದಾರೆ. ಬಿಜೆಪಿಯ ಅಭ್ಯರ್ಥಿಗಳು 29 ಮತಗಳನ್ನು ಪಡೆದು ಹಿನ್ನಡೆ ಅನುಭವಿಸಿದ್ದಾರೆ.

ಈ ಫಲಿತಾಂಶದೊಂದಿಗೆ ಕಲಬುರಗಿ ಮಹಾನಗರ ಪಾಲಿಕೆಯ ರಾಜಕೀಯದಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ. ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣಗೊಂಡಿದೆ.

ಮೇಯರ್ ಸ್ಥಾನಕ್ಕೆ ಅಜಿಲ್ ಅಹಮದ್ ಗೋಲಾ

ಈ ಚುನಾವಣೆಯಲ್ಲಿ 21ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯ ಅಜಿಲ್ ಅಹಮದ್ ಗೋಲಾ ಅವರು ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಮತದಾನದ ಬಳಿಕ ಕಾಂಗ್ರೆಸ್ ಅಭ್ಯರ್ಥಿಗೆ ಬಹುಮತ ದೊರೆತಿದ್ದು, ಅವರು ಮೇಯರ್ ಸ್ಥಾನವನ್ನು ಅಲಂಕರಿಸಿದ್ದಾರೆ.

ಪಾಲಿಕೆಯ ಮುಂದಿನ ಆಡಳಿತದಲ್ಲಿ ಮೇಯರ್ ಸ್ಥಾನ ಪ್ರಮುಖವಾಗಿರುವ ಹಿನ್ನೆಲೆಯಲ್ಲಿ ಅಜಿಲ್ ಅಹಮದ್ ಗೋಲಾ ಅವರ ಆಯ್ಕೆ ಇದೀಗ ಗಮನ ಸೆಳೆದಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ 35 ಮತಗಳು ದೊರೆತಿರುವುದು ಚುನಾವಣೆಯಲ್ಲಿ ಪಕ್ಷದ ಬಲವನ್ನು ತೋರಿಸಿದೆ.

ಉಪ ಮೇಯರ್ ಸ್ಥಾನವೂ ಕಾಂಗ್ರೆಸ್ ಪಾಲು

20ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯೆ ಫಹಾನಾ ಖಮ್ರೋ ಜಗೀರ್ದಾರ್ ಅವರು ಉಪ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ದೊರೆತ ಬಹುಮತದ ಹಿನ್ನೆಲೆಯಲ್ಲಿ ಫಹಾನಾ ಖಮ್ರೋ ಜಗೀರ್ದಾರ್ ಅವರು ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಮೇಯರ್ ಹಾಗೂ ಉಪ ಮೇಯರ್ ಎರಡೂ ಸ್ಥಾನಗಳು ಕಾಂಗ್ರೆಸ್ ಪಾಲಾಗಿರುವುದರಿಂದ ಪಾಲಿಕೆಯ ಆಡಳಿತದ ಮೇಲೆ ಪಕ್ಷದ ಹಿಡಿತ ಮತ್ತಷ್ಟು ಬಲಗೊಂಡಿದೆ.

ಆಗಸ್ಟ್ 7ರಿಂದ ಆಗಸ್ಟ್ 29ಕ್ಕೆ ಮುಂದೂಡಿಕೆ

ಆರಂಭದಲ್ಲಿ ಈ ಚುನಾವಣೆ ಆಗಸ್ಟ್ 7ರಂದು ನಡೆಯಬೇಕಿತ್ತು. ಆದರೆ ಕೆಲವು ಅನಿವಾರ್ಯ ಕಾರಣಗಳಿಂದ ಚುನಾವಣೆ ಮುಂದೂಡಲ್ಪಟ್ಟಿತ್ತು. ಬಳಿಕ ಪ್ರಾದೇಶಿಕ ಆಯುಕ್ತರ ಆದೇಶದ ನಂತರ ಪರಿಷ್ಕೃತ ದಿನಾಂಕ ನಿಗದಿಪಡಿಸಿ ಆಗಸ್ಟ್ 29ರಂದು ಚುನಾವಣೆ ನಡೆಸಲಾಯಿತು.

ಅದರಂತೆ ಶನಿವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳನ್ನು ಗೆದ್ದುಕೊಂಡಿದ್ದಾರೆ. ಒಟ್ಟು ಮತಗಳ ಲೆಕ್ಕಾಚಾರದಲ್ಲಿ ಕಾಂಗ್ರೆಸ್ 35 ಮತಗಳನ್ನು ಪಡೆದರೆ, ಬಿಜೆಪಿ 29 ಮತಗಳಿಗೆ ಸೀಮಿತವಾಯಿತು.

ಈ ಮೂಲಕ ಕಲಬುರಗಿ ಮಹಾನಗರ ಪಾಲಿಕೆಯ 24ನೇ ಅವಧಿಯ ಆಡಳಿತದ ಚುಕ್ಕಾಣಿ ಮತ್ತೊಮ್ಮೆ ಕಾಂಗ್ರೆಸ್ ಕೈಗೆ ಬಂದಂತಾಗಿದೆ. ಮುಂದಿನ ದಿನಗಳಲ್ಲಿ ಪಾಲಿಕೆಯ ಅಭಿವೃದ್ಧಿ ಹಾಗೂ ಆಡಳಿತಾತ್ಮಕ ವಿಚಾರಗಳಲ್ಲಿ ಹೊಸ ಮೇಯರ್ ಮತ್ತು ಉಪ ಮೇಯರ್ ಅವರ ಕಾರ್ಯವೈಖರಿ ಹೇಗಿರಲಿದೆ ಎಂಬುದು ಇದೀಗ ಕುತೂಹಲ ಮೂಡಿಸಿದೆ.

Continue Reading

ದಿನದ ಸುದ್ದಿ

ವಾಲ್ಮೀಕಿ ಹಗರಣದ ಕಿಡಿ ಮತ್ತೆ ಬಳ್ಳಾರಿಯಲ್ಲಿ: ನಾಗೇಂದ್ರ ವಿರುದ್ಧ ಜನಾರ್ಧನ ರೆಡ್ಡಿ ವಾಗ್ದಾಳಿ, ಕಾಂಗ್ರೆಸ್‌ಗೆ ರಾಜೀನಾಮೆ ಸವಾಲು!

Published

on

janardhana-reddy-attacks-b-nagendra-valmiki-scam-ballari-political-war
ಚಂದ್ರಶೇಖರ್ ಸಾವು, ನಿಗಮದ ಹಣ ದುರ್ಬಳಕೆ ವಿಚಾರ ಮುಂದಿಟ್ಟುಕೊಂಡು ಮಾಜಿ ಸಚಿವ ನಾಗೇಂದ್ರ ವಿರುದ್ಧ ರೆಡ್ಡಿ ಗಂಭೀರ ಆರೋಪ

ಸುದ್ದಿದಿನ, ಬಳ್ಳಾರಿ: ಬಳ್ಳಾರಿಯಲ್ಲಿ ರಾಜಕೀಯ ವಾಕ್ಸಮರ ಮತ್ತೊಮ್ಮೆ ತೀವ್ರಗೊಂಡಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣವನ್ನು ಮುಂದಿಟ್ಟುಕೊಂಡು ಮಾಜಿ ಸಚಿವ ಬಿ. ನಾಗೇಂದ್ರ ವಿರುದ್ಧ ಮಾಜಿ ಸಚಿವ ಜನಾರ್ಧನ ರೆಡ್ಡಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನಿಗಮದ ಹಣ ದುರ್ಬಳಕೆ ಹಾಗೂ ಚಂದ್ರಶೇಖರ್ ಸಾವಿನ ವಿಚಾರವನ್ನು ಪ್ರಸ್ತಾಪಿಸಿ ನಾಗೇಂದ್ರ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಹೈಲೈಟ್ಸ್

  • ನಾಗೇಂದ್ರ ವಿರುದ್ಧ ಜನಾರ್ಧನ ರೆಡ್ಡಿ ತೀವ್ರ ವಾಗ್ದಾಳಿ
  • ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಆರೋಪ ಮತ್ತೆ ಮುನ್ನೆಲೆ
  • ಚಂದ್ರಶೇಖರ್ ಸಾವಿನ ವಿಚಾರದಲ್ಲಿ ಗಂಭೀರ ಆರೋಪ
  • ಬಳ್ಳಾರಿಯ 10 ಕ್ಷೇತ್ರಗಳಿಗೆ ರಾಜೀನಾಮೆ ನೀಡಿ ಚುನಾವಣೆ ಎದುರಿಸುವಂತೆ ಸವಾಲು
  • ಸಂಸದ ತುಕಾರಾಂ ರಾಜೀನಾಮೆ ನೀಡಬೇಕೆಂದು ರೆಡ್ಡಿ ಆಗ್ರಹ

ನಾಗೇಂದ್ರ ಅವರು ಕಣ್ಣೀರು ಹಾಕುವ ಮೂಲಕ ತಮ್ಮ ಮೇಲಿನ ಆರೋಪಗಳನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ರೆಡ್ಡಿ ಟೀಕಿಸಿದ್ದಾರೆ. ಚಂದ್ರಶೇಖರ್ ಸಾವಿಗೆ ಸಂಬಂಧಿಸಿದಂತೆ ನಾಗೇಂದ್ರ ಅವರ ವಿರುದ್ಧ ನೇರ ಆರೋಪದ ಧಾಟಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದ ಸಂಪೂರ್ಣ ಸತ್ಯ ಹೊರಬರಬೇಕಿದೆ ಎಂದು ಹೇಳಿದ್ದಾರೆ.

http://Visit : www.suddidina.com

₹187 ಕೋಟಿ ಹಗರಣದ ಆರೋಪ ಮತ್ತೆ ಮುನ್ನೆಲೆಗೆ

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮವಾಗಿ ವರ್ಗಾವಣೆಯಾಗಿದೆ ಎಂಬ ಆರೋಪವನ್ನು ಪುನರುಚ್ಚರಿಸಿದ ಜನಾರ್ಧನ ರೆಡ್ಡಿ, ಪ್ರಕರಣದಲ್ಲಿ ಹಲವು ವ್ಯಕ್ತಿಗಳು ಮತ್ತು ನೂರಾರು ಬ್ಯಾಂಕ್ ಖಾತೆಗಳ ಬಳಕೆಯಾಗಿದೆ ಎಂದು ಹೇಳಿದ್ದಾರೆ. ತಮ್ಮ ಹೇಳಿಕೆಯಲ್ಲಿ ಕೆಲವರ ಖಾತೆಗಳಿಗೆ ₹6.50 ಕೋಟಿ ವರ್ಗಾವಣೆಯಾಗಿದೆ ಎಂದು ಉಲ್ಲೇಖಿಸಿದ ಅವರು, ನಗದು ಹಾಗೂ ಚಿನ್ನಾಭರಣ ಖರೀದಿಯ ಬಗ್ಗೆಯೂ ಆರೋಪ ಮಾಡಿದ್ದಾರೆ.

ಹಗರಣದಲ್ಲಿ ನಾಗೇಂದ್ರ ಅವರ ಪಾತ್ರವಿದೆ ಎಂಬುದು ಸ್ಪಷ್ಟ ಎಂದು ರೆಡ್ಡಿ ಆರೋಪಿಸಿದ್ದು, ತಪ್ಪು ಮಾಡಿಲ್ಲ ಎನ್ನುವ ನಾಗೇಂದ್ರ ಅವರಿಗೆ ಕಾಂಗ್ರೆಸ್ ಪಕ್ಷ ಏಕೆ ಸಚಿವ ಸ್ಥಾನದಿಂದ ರಾಜೀನಾಮೆ ಪಡೆಯಿತು ಎಂಬ ಪ್ರಶ್ನೆಯನ್ನೂ ಮುಂದಿಟ್ಟಿದ್ದಾರೆ.

ರಾಜಕೀಯ ಹಿನ್ನೆಲೆ ಕೆದಕಿದ ರೆಡ್ಡಿ

ನಾಗೇಂದ್ರ ಅವರ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿಯ ಪಾತ್ರವಿತ್ತು ಎಂದು ಹೇಳಿದ ರೆಡ್ಡಿ, ಬಿಜೆಪಿ ವಿರುದ್ಧ ಮಾತನಾಡುವ ಮೊದಲು ತಮ್ಮ ರಾಜಕೀಯ ಆರಂಭವನ್ನು ನೆನಪಿಸಿಕೊಳ್ಳಬೇಕು ಎಂದು ಟಾಂಗ್ ನೀಡಿದ್ದಾರೆ. ಮನुस್ಮೃತಿ, ಬಿಜೆಪಿ ಹಾಗೂ ವಾಲ್ಮೀಕಿ ಸಮುದಾಯದ ವಿಚಾರದಲ್ಲಿ ನಾಗೇಂದ್ರ ನೀಡಿರುವ ಹೇಳಿಕೆಗಳಿಗೂ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ಕಾಂಗ್ರೆಸ್ ನಾಯಕರು ಚುನಾವಣೆಯಲ್ಲಿ ಸೋಲು-ಗೆಲುವು ಕಂಡಿರುವುದನ್ನು ಉಲ್ಲೇಖಿಸಿದ ರೆಡ್ಡಿ, ಶ್ರೀರಾಮುಲು ಅವರನ್ನು ‘ರಿಜೆಕ್ಟೆಡ್ ಪೀಸ್’ ಎಂದು ಟೀಕಿಸಿದ್ದ ನಾಗೇಂದ್ರ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

10 ಕ್ಷೇತ್ರಗಳಿಗೆ ರಾಜೀನಾಮೆ ನೀಡಿ ಚುನಾವಣೆ ಎದುರಿಸುವಂತೆ ಸವಾಲು

ಅಖಂಡ ಬಳ್ಳಾರಿ ಜಿಲ್ಲೆಯ 10 ವಿಧಾನಸಭಾ ಕ್ಷೇತ್ರಗಳ ಶಾಸಕರು ಹಾಗೂ ಸಂಸದರು ರಾಜೀನಾಮೆ ನೀಡಿ ಮತ್ತೆ ಚುನಾವಣೆಗೆ ಬಂದರೆ ಬಿಜೆಪಿ ಸಿದ್ಧವಿದೆ ಎಂದು ಜನಾರ್ಧನ ರೆಡ್ಡಿ ಸವಾಲು ಹಾಕಿದ್ದಾರೆ. ಹತ್ತು ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಿಸುವ ಮೂಲಕ ತಮ್ಮ ರಾಜಕೀಯ ಶಕ್ತಿ ಪ್ರದರ್ಶಿಸುವುದಾಗಿ ಅವರು ಹೇಳಿದ್ದಾರೆ.

ನಾಗೇಂದ್ರ ರಾಜೀನಾಮೆ ನೀಡಿದ್ದರೂ ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಹೋರಾಟ ಮುಂದುವರಿಸಲಿದೆ ಎಂದು ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ತುಕಾರಾಂ ರಾಜೀನಾಮೆಗೂ ಆಗ್ರಹ

ವಾಲ್ಮೀಕಿ ಹಗರಣದ ಹಣದ ಪ್ರಭಾವದಿಂದಲೇ ತುಕಾರಾಂ ಸಂಸದರಾಗಿದ್ದಾರೆ ಎಂದು ಆರೋಪಿಸಿದ ಜನಾರ್ಧನ ರೆಡ್ಡಿ, ಮೊದಲು ಕಾಂಗ್ರೆಸ್ ತುಕಾರಾಂ ಅವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಈ ಆರೋಪಗಳು ರಾಜಕೀಯ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.

Continue Reading

ದಿನದ ಸುದ್ದಿ

Trump Oil Deal: ವೆನೆಜುವೆಲಾದ 65 ಬಿಲಿಯನ್ ಬ್ಯಾರೆಲ್ ತೈಲದ ಮೇಲೆ ಅಮೆರಿಕದ ಕಣ್ಣು; ಇದು ವಿಶ್ವದ ಅತಿದೊಡ್ಡ ಡೀಲ್‌ನಾ?

Published

on

Trump Oil Deal: ವೆನೆಜುವೆಲಾದ 65 ಬಿಲಿಯನ್ ಬ್ಯಾರೆಲ್ ತೈಲದ ಮೇಲೆ ಅಮೆರಿಕದ ಕಣ್ಣು; ಇದು ವಿಶ್ವದ ಅತಿದೊಡ್ಡ ಡೀಲ್‌ನಾ?

ಸುದ್ದಿದಿನ,ಅಮೆರಿಕ: ಅಮೆರಿಕ-ವೆನೆಜುವೆಲಾ ನಡುವಿನ ಹೊಸ ತೈಲ ಒಪ್ಪಂದ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಒಪ್ಪಂದವನ್ನು ‘ವಿಶ್ವದ ಅತಿದೊಡ್ಡ ತೈಲ ಡೀಲ್’ ಎಂದು ಬಣ್ಣಿಸಿದ್ದಾರೆ.

ವೆನೆಜುವೆಲಾದ ಬೃಹತ್ ತೈಲ ಸಂಪತ್ತನ್ನು ಅಭಿವೃದ್ಧಿಪಡಿಸುವುದು ಮಾತ್ರವಲ್ಲದೆ, ಅಮೆರಿಕದ ಇಂಧನ ಭದ್ರತೆಯನ್ನು ಬಲಪಡಿಸುವ ಉದ್ದೇಶವೂ ಇದರ ಹಿಂದೆ ಇದೆ ಎನ್ನಲಾಗಿದೆ.

ಹೈಲೈಟ್ಸ್

  • ಅಮೆರಿಕ-ವೆನೆಜುವೆಲಾ ನಡುವೆ ಬೃಹತ್ ತೈಲ ಒಪ್ಪಂದ
  • 65 ಬಿಲಿಯನ್ ಬ್ಯಾರೆಲ್‌ಗೂ ಹೆಚ್ಚು ತೈಲ ಸಂಗ್ರಹದ ಮೇಲೆ ಗಮನ
  • 17 ಪ್ರಮುಖ ತೈಲ ಕ್ಷೇತ್ರಗಳ ಅಭಿವೃದ್ಧಿ ಯೋಜನೆ
  • $100 ಬಿಲಿಯನ್‌ಗೂ ಹೆಚ್ಚು ಹೂಡಿಕೆ ಸಾಧ್ಯತೆ
  • ಉತ್ಪಾದನೆ ಹೆಚ್ಚಾದರೆ ಜಾಗತಿಕ ತೈಲ ಮಾರುಕಟ್ಟೆಯ ಮೇಲೂ ಪರಿಣಾಮ

http://Visit : www.suddidina.com

65 ಬಿಲಿಯನ್ ಬ್ಯಾರೆಲ್ ತೈಲದತ್ತ ಗಮನ

ಒಪ್ಪಂದದ ಪ್ರಮುಖ ಅಂಶವೆಂದರೆ ವೆನೆಜುವೆಲಾದಲ್ಲಿರುವ ಸುಮಾರು 65 ಬಿಲಿಯನ್ ಬ್ಯಾರೆಲ್‌ಗಳಿಗೂ ಹೆಚ್ಚು ತೈಲ ಸಂಗ್ರಹ. ಈ ಸಂಪತ್ತಿನ ಅಭಿವೃದ್ಧಿಯಲ್ಲಿ ಅಮೆರಿಕ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ, ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹಾಗೂ ವೆನೆಜುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ನೇತೃತ್ವದಲ್ಲಿ ಮಾತುಕತೆ ನಡೆದಿರುವುದಾಗಿ ವರದಿಯಾಗಿದೆ.

17 ತೈಲ ಕ್ಷೇತ್ರಗಳ ಅಭಿವೃದ್ಧಿಗೆ ಬೃಹತ್ ಹೂಡಿಕೆ

ವೆನೆಜುವೆಲಾದ 17 ಪ್ರಮುಖ ತೈಲ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸುವ ಯೋಜನೆ ರೂಪಿಸಲಾಗಿದೆ. ಈ ಯೋಜನೆಗೆ 100 ಬಿಲಿಯನ್ ಡಾಲರ್‌ಗೂ ಹೆಚ್ಚು ಹೂಡಿಕೆ ಬರಬಹುದೆಂಬ ನಿರೀಕ್ಷೆ ಇದೆ. ಇದರಿಂದ ವೆನೆಜುವೆಲಾ ಸರ್ಕಾರಕ್ಕೆ ದೀರ್ಘಾವಧಿಯಲ್ಲಿ 209 ಬಿಲಿಯನ್ ಡಾಲರ್‌ಗೂ ಅಧಿಕ ತೆರಿಗೆ ಆದಾಯ ದೊರೆಯುವ ಸಾಧ್ಯತೆಯನ್ನೂ ಅಲ್ಲಿನ ಆಡಳಿತ ಉಲ್ಲೇಖಿಸಿದೆ.

https://x.com/SecRubio/status/2093472965404860812

ಅಮೆರಿಕಕ್ಕೆ ಏನು ಲಾಭ?

ತೈಲ ಉತ್ಪಾದನೆ ಹೆಚ್ಚಾದರೆ ಅಮೆರಿಕಕ್ಕೆ ಕಡಿಮೆ ದರದಲ್ಲಿ ಕಚ್ಚಾ ತೈಲ ಲಭ್ಯವಾಗುವ ಸಾಧ್ಯತೆ ಇದೆ. ಇದರಿಂದ ದೇಶೀಯ ಇಂಧನ ಬೆಲೆಗಳ ಮೇಲೆ ಒತ್ತಡ ಕಡಿಮೆಯಾಗಬಹುದು ಎಂಬುದು ಟ್ರಂಪ್ ಆಡಳಿತದ ನಿರೀಕ್ಷೆ. ಉತ್ಪಾದನೆಯ ಒಂದು ಭಾಗವನ್ನು ಅಮೆರಿಕದ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್‌ಗೆ ಬಳಸುವುದರ ಜೊತೆಗೆ ಸೇನಾ ಅಗತ್ಯಗಳಿಗೂ ಬಳಸುವ ಸಾಧ್ಯತೆ ಇದೆ.

ತಕ್ಷಣ ಉತ್ಪಾದನೆ ಹೆಚ್ಚುವುದು ಸುಲಭವಲ್ಲ

ಆದರೆ ಒಪ್ಪಂದ ಘೋಷಣೆಯಾದ ತಕ್ಷಣ ವೆನೆಜುವೆಲಾದ ತೈಲ ಉತ್ಪಾದನೆ ಗಗನಕ್ಕೇರುವುದಿಲ್ಲ. ಹಲವು ವರ್ಷಗಳ ನಿರ್ಲಕ್ಷ್ಯದಿಂದ ತೈಲ ಕ್ಷೇತ್ರಗಳ ಮೂಲಸೌಕರ್ಯ ದುರ್ಬಲಗೊಂಡಿದೆ. ಹಳೆಯ ಘಟಕಗಳ ಪುನರ್‌ನಿರ್ಮಾಣ, ಪೈಪ್‌ಲೈನ್‌ಗಳು, ಸಂಸ್ಕರಣಾ ಘಟಕಗಳು ಮತ್ತು ಸಾರಿಗೆ ವ್ಯವಸ್ಥೆ ಸುಧಾರಣೆಗೆ ಭಾರೀ ಬಂಡವಾಳ ಹಾಗೂ ಹಲವು ವರ್ಷಗಳ ಸಮಯ ಬೇಕಾಗಬಹುದು.

ಜಾಗತಿಕ ತೈಲ ಮಾರುಕಟ್ಟೆಗೆ ಸವಾಲು?

ವೆನೆಜುವೆಲಾ ಅಪಾರ ತೈಲ ಸಂಗ್ರಹ ಹೊಂದಿದ್ದರೂ, ಅದರ ಉತ್ಪಾದನೆ ಸಂಗ್ರಹದ ಪ್ರಮಾಣಕ್ಕೆ ಹೋಲಿಸಿದರೆ ಕಡಿಮೆಯಾಗಿದೆ. ಹೊಸ ಹೂಡಿಕೆಗಳ ಮೂಲಕ ಉತ್ಪಾದನೆ ಗಣನೀಯವಾಗಿ ಹೆಚ್ಚಾದರೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಪೂರೈಕೆ ಹೆಚ್ಚಬಹುದು. ಇದರಿಂದ ತೈಲ ಬೆಲೆ, ಅಮೆರಿಕದ ಇಂಧನ ನೀತಿ ಮತ್ತು ಇತರ ತೈಲ ಉತ್ಪಾದಕ ರಾಷ್ಟ್ರಗಳ ತಂತ್ರಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

Continue Reading
Advertisement

Title

ದಿನದ ಸುದ್ದಿ11 hours ago

ಬೆಂಗಳೂರು ಜಲಸಂಚಾರಕ್ಕೆ ಹೊಸ ವೇಗ: ಬಿನ್ನಿಗಾನಹಳ್ಳಿ-ಬೈಯಪ್ಪನಹಳ್ಳಿ ನಡುವೆ 65 ಕಿ.ಮೀ. ನೀರು ಮಾರ್ಗ!

ಸುದ್ದಿದಿನ,ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆ ಬಂದಾಗಲೆಲ್ಲಾ ಎದುರಾಗುವ ನೀರು ನಿಲ್ಲುವಿಕೆ ಹಾಗೂ ಪ್ರವಾಹದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತಾಂತ್ರಿಕ ಕ್ರಮಗಳಿಗೆ ಒತ್ತು ನೀಡಲಾಗುತ್ತಿದೆ. ಇದರ ಭಾಗವಾಗಿ...

bengaluru-koodlugate-snn-raj-eternia-18-floor-building-demolition bengaluru-koodlugate-snn-raj-eternia-18-floor-building-demolition
ದಿನದ ಸುದ್ದಿ11 hours ago

ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್‌ಮೆಂಟ್‌ಗೆ ‘ಡೆಮಾಲಿಷನ್’ ಶುರು!

ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ ಸುದ್ದಿದಿನ,ಬೆಂಗಳೂರು: ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ...

kalaburagi-municipal-corporation-mayor-deputy-mayor-election-congress-win kalaburagi-municipal-corporation-mayor-deputy-mayor-election-congress-win
ದಿನದ ಸುದ್ದಿ11 hours ago

ಕಲಬುರಗಿ ಪಾಲಿಕೆಯಲ್ಲಿ ಮತ್ತೆ ಕಾಂಗ್ರೆಸ್ ಮೇಲುಗೈ: ಮೇಯರ್‌-ಉಪ ಮೇಯರ್ ಸ್ಥಾನವೂ ‘ಕೈ’ ತೆಕ್ಕೆಗೆ!

ಸುದ್ದಿದಿನ,ಕಲಬುರಗಿ: ಇಲ್ಲಿನ ಮಹಾನಗರ ಪಾಲಿಕೆಯ 24ನೇ ಅವಧಿಯ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮೇಲುಗೈ ಸಾಧಿಸಿದೆ. ತೀವ್ರ ಕುತೂಹಲ ಕೆರಳಿಸಿದ್ದ ಚುನಾವಣೆಯಲ್ಲಿ ಕಾಂಗ್ರೆಸ್...

ravichandran-political-entry-dk-shivakumar-mlc-nomination ravichandran-political-entry-dk-shivakumar-mlc-nomination
ದಿನದ ಸುದ್ದಿ11 hours ago

ರಾಜಕೀಯಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಎಂಟ್ರಿ? ಡಿಕೆಶಿ ಭೇಟಿಯ ಹಿಂದೆ ಇದೆ ‘ಕೈ’ ಲೆಕ್ಕ!

ಸಿಎಂ ಡಿಕೆ ಶಿವಕುಮಾರ್ ಭೇಟಿ ಬಳಿಕ ಹೆಚ್ಚಿದ ಕುತೂಹಲ; ವಿಧಾನ ಪರಿಷತ್‌ಗೆ ನಾಮನಿರ್ದೇಶನದ ಚರ್ಚೆ ಸುದ್ದಿದಿನ,ಬೆಂಗಳೂರು: ಸ್ಯಾಂಡಲ್‌ವುಡ್‌ನ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಕ್ರೇಜಿಸ್ಟಾರ್ ರವಿಚಂದ್ರನ್...

ದಿನದ ಸುದ್ದಿ11 hours ago

ರಸ್ತೆ ನಿಯಮ ಉಲ್ಲಂಘನೆಗೆ ಬ್ರೇಕ್ ಯಾವಾಗ? 4 ವರ್ಷದಲ್ಲಿ 5.67 ಕೋಟಿ ಪ್ರಕರಣ, ₹2,361 ಕೋಟಿ ದಂಡ ಸಂಗ್ರಹ!

ಸುದ್ದಿದಿನ,ಬೆಂಗಳೂರು: ರಾಜ್ಯದಲ್ಲಿ ವಾಹನ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಆತಂಕಕಾರಿ ಪ್ರಮಾಣದಲ್ಲಿ ದಾಖಲಾಗುತ್ತಿವೆ. ರಸ್ತೆ ಸುರಕ್ಷತೆ ಕುರಿತು ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದ್ದರೂ, ನಿಯಮ ಉಲ್ಲಂಘನೆಗೆ...

janardhana-reddy-attacks-b-nagendra-valmiki-scam-ballari-political-war janardhana-reddy-attacks-b-nagendra-valmiki-scam-ballari-political-war
ದಿನದ ಸುದ್ದಿ11 hours ago

ವಾಲ್ಮೀಕಿ ಹಗರಣದ ಕಿಡಿ ಮತ್ತೆ ಬಳ್ಳಾರಿಯಲ್ಲಿ: ನಾಗೇಂದ್ರ ವಿರುದ್ಧ ಜನಾರ್ಧನ ರೆಡ್ಡಿ ವಾಗ್ದಾಳಿ, ಕಾಂಗ್ರೆಸ್‌ಗೆ ರಾಜೀನಾಮೆ ಸವಾಲು!

ಸುದ್ದಿದಿನ, ಬಳ್ಳಾರಿ: ಬಳ್ಳಾರಿಯಲ್ಲಿ ರಾಜಕೀಯ ವಾಕ್ಸಮರ ಮತ್ತೊಮ್ಮೆ ತೀವ್ರಗೊಂಡಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣವನ್ನು ಮುಂದಿಟ್ಟುಕೊಂಡು ಮಾಜಿ ಸಚಿವ ಬಿ. ನಾಗೇಂದ್ರ ವಿರುದ್ಧ ಮಾಜಿ...

bengaluru-strr-ring-road-traffic-relief-40-percent-reduction bengaluru-strr-ring-road-traffic-relief-40-percent-reduction
ದಿನದ ಸುದ್ದಿ14 hours ago

ಬೆಂಗಳೂರಿನ ಟ್ರಾಫಿಕ್‌ಗೆ ಬಿಗ್ ರಿಲೀಫ್‌! ವರ್ಷಾಂತ್ಯಕ್ಕೆ STRR ಸಂಚಾರ ಮುಕ್ತ: ನಗರ ದಟ್ಟಣೆ ಶೇ.40ರಷ್ಟು ಇಳಿಕೆ ನಿರೀಕ್ಷೆ

ಸುದ್ದಿದಿನ,ಬೆಂಗಳೂರು: ಬೆಂಗಳೂರು ನಗರ ದಿನದಿಂದ ದಿನಕ್ಕೆ ವಿಸ್ತರಿಸುತ್ತಿರುವಂತೆ ವಾಹನ ದಟ್ಟಣೆಯ ಸಮಸ್ಯೆಯೂ ಹೆಚ್ಚುತ್ತಿದೆ. ಅದರಲ್ಲೂ ಹೊರರಾಜ್ಯಗಳಿಂದ ನಗರವನ್ನು ದಾಟಿ ಸಾಗುವ ಭಾರಿ ವಾಹನಗಳು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರದ...

toxic-movie-kichcha-sudeepa-supports-yash-negative-reviews toxic-movie-kichcha-sudeepa-supports-yash-negative-reviews
ದಿನದ ಸುದ್ದಿ15 hours ago

ವಿಭಿನ್ನ ಪ್ರಯೋಗಕ್ಕೆ ಸುದೀಪ್‌ ಫಿದಾ; ‘ಟಾಕ್ಸಿಕ್’ ವಿರುದ್ಧದ ಟೀಕೆಗಳ ನಡುವೆ ಯಶ್‌ಗೆ ಭರ್ಜರಿ ಬೆಂಬಲ

ಸುದ್ದಿದಿನ,ಸಿನಿಮಾ: ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ ಬಿಡುಗಡೆಯಾದ ಬಳಿಕ ನಿರೀಕ್ಷೆಗಿಂತ ಹೆಚ್ಚಾಗಿ ಚರ್ಚೆ ಮತ್ತು ಟೀಕೆಗೆ ಕಾರಣವಾಗಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಹಾಗೂ ಗೀತು...

ದಿನದ ಸುದ್ದಿ15 hours ago

ಶನಿವಾರ ಕಲಬುರಗಿ ಪಾಲಿಕೆಯ ಹೊಸ ಮೇಯರ್‌, ಉಪ ಮೇಯರ್‌ ಆಯ್ಕೆ: ಯಾರಿಗೆ ಒಲಿಯಲಿದೆ ಅಧಿಕಾರದ ಪಟ್ಟ?

ಸುದ್ದಿದಿನ, ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್‌ ಹಾಗೂ ಉಪ ಮೇಯರ್‌ ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್‌ ಆಗಿದೆ. ಶನಿವಾರ ನಡೆಯಲಿರುವ ಚುನಾವಣೆಯಲ್ಲಿ ಮೇಯರ್‌ ಸ್ಥಾನವನ್ನು ಬಿಸಿಎ ವರ್ಗಕ್ಕೆ...

ದಿನದ ಸುದ್ದಿ15 hours ago

ಹೆದ್ದಾರಿಯಲ್ಲಿ ಹಾಲಿನ ಹೊಳೆ! ಪಲ್ಟಿಯಾದ ನಂದಿನಿ ಟ್ಯಾಂಕರ್‌ನಿಂದ 21 ಸಾವಿರ ಲೀಟರ್ ಹಾಲು ರಸ್ತೆಗೆ

ತುಮಕೂರು: ಸಾಮಾನ್ಯವಾಗಿ ಮಳೆ ಬಂದಾಗ ರಸ್ತೆಯಲ್ಲಿ ನೀರು ಹರಿಯುವುದನ್ನು ನೋಡುತ್ತೇವೆ. ಆದರೆ ತುಮಕೂರಿನ ಶಿರಾ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ನಡೆದ ಘಟನೆ ಮಾತ್ರ ವಿಭಿನ್ನ. ಇಲ್ಲಿ ನೀರಿನ ಬದಲು...

Trending