Connect with us

ದಿನದ ಸುದ್ದಿ

ನಾಳೆ ಸಾಹಿತಿ ಬಿ. ಶ್ರೀನಿವಾಸ ಅವರ ‘ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು’ ಕೃತಿ ಬಿಡುಗಡೆ

Published

on

ಸುದ್ದಿದಿನ, ದಾವಣಗೆರೆ : ಸಾಹಿತಿ ಬಿ. ಶ್ರೀನಿವಾಸ ಅವರ ಸಣ್ಣ ಕಥೆಗಳ (ನ್ಯಾನೋ) ಸಂಕಲನ ‘ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು’ ಕೃತಿ ಬಿಡುಗಡೆಯ ಕಾರ್ಯಕ್ರಮವು ನಗರದ ಆರ್ ಎಲ್ ಲಾ ಕಾಲೇಜಿನ ಸಭಾಂಗಣದಲ್ಲಿ ನಾಳೆ ( ಜುಲೈ-23) ಬೆಳಗ್ಗೆ 11 ಗಂಟೆಗೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ಚಿಂತಕ ಕೆ. ಪಿ. ಸುರೇಶ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಪಿ. ಭಾರತಿದೇವಿ ಅವರು ಕೃತಿಯ ಕುರಿತು ಮಾತನಾಡಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಂದ್ರಶೇಖರ ತಾಳ್ಯ ಅವರು ವಹಿಸಲಿದ್ದಾರೆ.

ಮುಖ್ಯ ಅಥಿತಿಯಾಗಿ ಎಂ.ಜಿ. ಈಶ್ವರಪ್ಪ ಹಾಗೂ ಕತೆಯ ಓದಿನಲ್ಲಿ ವಿ. ಹರಿನಾಥ ಬಾಬು, ಶಿವಕುಮಾರ ಕಂಪ್ಲಿ, ಪೂಜಾ ಸಿಂಘೆ ಇವರು ಪಾಲ್ಗೊಳ್ಳಲಿದ್ದಾರೆ.

ಕೊಪ್ಪಳದ ತಳಮಳ ಪ್ರಕಾಶನದಿಂದ ‘ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು’ ಕೃತಿ ಪ್ರಕಟವಾಗಿದೆ. ಕಾರ್ಯಕ್ರಮದ ಸಂಯೋಜನೆ ನಿರ್ವಹಣೆಯನ್ನು ಸನಾವುಲ್ಲ ನವಿಲೇಹಾಳು ಅವರು ವಹಿಸಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮುಖ್ಯಮಂತ್ರಿ ಪದಕ ; ಮುಖ್ಯ ಪೊಲೀಸ್ ಪೇದೆ ಕೊಟ್ರೇಶ್ ಅಯ್ಕೆ

Published

on

ಸುದ್ದಿದಿನ,ಕೊಟ್ಟೂರು:ತಾಲೂಕಿನ ಬೋರನಹಳ್ಳಿ ಗ್ರಾಮ ಮುಖ್ಯಪೊಲೀಸ್ ಪೇದೆ ಕೊಟ್ರೇಶ್ ಚಿಮ್ಮನಹಳ್ಳಿ ಅವರಿಗೆ 2024 ನೇ ಸಾಲಿನ ಮುಖ್ಯಮಂತ್ರಿ ಪದಕ ಪ್ರದಾನ ಮಾಡಲು 02.04.2025 ರಂದು ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ಕೊಟ್ರೇಶ್ ಅವರು 2005 ರಿಂದ ಪೊಲೀಸ್ ಇಲಾಖೆಯಲ್ಲಿ 20 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಅಪರಾಧ ವಿಭಾಗದಲ್ಲಿ ಅಪಾರ ಸೇವೆ ಸಲ್ಲಿಸಿ, ಮಾಡಿದ ಸಾಧನೆಗೆ ಸುಮಾರು 37 ನಗದು ಬಹುಮಾನ, 54 ಪ್ರಶಸ್ತಿ, 3 ಪ್ರಶಂಸೆ ಪತ್ರ, ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಈಗಾಗಲೇ ಗೌರವಿಸಲಾಗಿದೆ.

ಪ್ರಸ್ತುತ ಇವರು ಕೂಡ್ಲಿಗಿಯ ಡಿವೈಎಸ್ಪಿ ಕಛೇರಿಯ ಅಪರಾಧ ವಿಭಾಗದಲ್ಲಿ ಮುಖ್ಯ ಪೊಲೀಸ್ ಪೇದೆ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯದ ಒಟ್ಟು 197 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮುಖ್ಯಮಂತ್ರಿ ಪದಕ ಪ್ರದಾನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮುಖ್ಯಮಂತ್ರಿ ಪದಕಕ್ಕೆ ಕೊಟ್ರೇಶ್‌ ಅವರು ಆಯ್ಕೆಯಾಗಿರುವುದು ಊರಿಗೆ ಮತ್ತು ಹೆಮ್ಮೆಯ ವಿಷಯವಾಗಿದೆ. ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾದ ಇವರಿಗೆ ಗ್ರಾಮಸ್ಥರು, ಸ್ನೇಹಿತರು ಶುಭ ಹಾರೈಸಿ ಹರ್ಷವನ್ನು ವ್ಯಕ್ತಪಡಿಸುತ್ತಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ವೃತ್ತಿಪರ ಕೋರ್ಸ್‍ಗಳಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿಗೆ ಐಐಎಸ್ಸಿ, ಐಐಟಿ ಮತ್ತು ನೀಟ್ ಸಂಸ್ಥೆಗಳ ಮೂಲಕ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅಂಡ್ ಮಶಿನ್ ಲರ್ನಿಂಗ್ ವೃತ್ತಿಪರ ಕೋರ್ಸ್‍ಗಳಲ್ಲಿ ಭಾಗವಹಿಸುವ ಪರಿಶಿಷ್ಟ ಪಂಗಡದ 200 ಇಂಜಿನಿಯರಿಂಗ್ ಪದವೀಧರರಿಗೆ ಶಿಷ್ಯವೇತನ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ಮೊದಲನೇ ಮಹಡಿ, ಜಯವಿಭವನಿಲಯ, ರಾಂ & ಕೋ ಅಂಗಡಿ ಎದುರು, 4ನೇ ಮೇನ್, ಪಿ.ಜೆ ಬಡಾವಣೆ ದಾವಣಗೆರೆ ಇಲ್ಲಿ ಪಡೆದು ಏಪ್ರಿಲ್ 9 ರೊಳಗಾಗಿ ಸೂಕ್ತ ದಾಖಲೆಗಳೊಂದಿಗೆ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಚನ್ನಗಿರಿ ತಾಲ್ಲೂಕು ಪ.ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ ಸಂಪರ್ಕಿಸಬೇಕೆಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಜನಪದ ಕಲೆ ಗ್ರಾಮೀಣ ಜನರ ಜೀವನಾಡಿ : ಪ್ರಾಚಾರ್ಯೆ ಡಾ.ಶಶಿಕಲಾ‌.ಎಸ್

Published

on

ಸುದ್ದಿದಿನ,ಭರಮಸಾಗರ:ಜನಪದ ಕಲೆ ನಮ್ಮ ನಾಡಿನ ಗ್ರಾಮೀಣ ಜನರ ಜೀವನಾಡಿಯಾಗಿದೆ. ಜಾನಪದ ಕಲೆ ಮತ್ತು ಕಲಾವಿದರು ಗ್ರಾಮೀಣ ಸಂಸ್ಕೃತಿಯ ಬೇರುಗಳಿದ್ದಂತೆ. ಗ್ರಾಮೀಣ ಸಂಸ್ಕೃತಿಯನ್ನು ಬಿಂಬಿಸುವ ಆಚರಣೆಯೇ ಜಾನಪದ ಉತ್ಸವವೆಂದು ಪ್ರಾಚಾರ್ಯೆ ಡಾ.ಶಶಿಕಲಾ ಎಸ್ ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ( 27 ಮಾರ್ಚ್) ನಡೆದ ‘ಜಾನಪದ ಉತ್ಸವ-2025’ ರ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜನರಿಂದ ಜನರಿಗೆ ವರ್ಗಾವಣೆ ಯಾಗುವ ಕಲೆಯೇ ಜಾನಪದ. ಇಂತಹ ಜಾನಪದ ಉತ್ಸವಗಳಿಂದ ಗ್ರಾಮೀಣ ಸಂಸ್ಕೃತಿಯನ್ನು ಉನ್ನತೀಕರಿಸಬಹುದು. ಇದನ್ನ ಬೆಳೆಸುವ ಸಂರಕ್ಷಿಸುವ ಜವಾಬ್ದಾರಿ ಯುವಜನತೆಯ ಮೇಲಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಾನಪದ ಕಲಾವಿದರಾದ ಪರಮೇಶ್ವರಪ್ಪ ಕಟ್ಟಿಗೆ ಯವರು ಮಾತನಾಡಿ, ತತ್ವಪದಗಳು ಜಾನಪದ ಸಾಹಿತ್ಯದ ಅಂಗವಾಗಿದೆ. ತತ್ವಪದಗಳಿಂದ ಸಮಾಜದ ಸ್ವಾಸ್ಥ್ಯವನ್ನು ತಿದ್ದುವ ಹಸನುಗೊಳಿಸುವ ಕೆಲಸವನ್ನು ನಿರ್ವಹಿಸುತ್ತಿದೆ. ಇಂತಹ ಕಲೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಎಂದರು.

ಇಂತಹ ಕಲೆಯನ್ನು ನಂಬಿಕೊಂಡವರ ಬದುಕು ಕಷ್ಟವಾಗುತ್ತಿದೆ. ಇಂತಹ ಉತ್ಸವಗಳಿಂದ ನಮ್ಮ ಕಲೆಗೆ ಪ್ರೋತ್ಸಾಹ ನೀಡಿದರೆ ಜಾನಪದ ಕಲೆಯು ಉಳಿಯುತ್ತದೆ ಎಂದು ಅನೇಕ ತತ್ವಪದಗಳನ್ನು ಹಾಡುವ ಮೂಲಕ ವಿದ್ಯಾರ್ಥಿಗಳನ್ನು ರಂಜಿಸುವ ಮೂಲಕ ಅದರ ಮಹತ್ಚ ಸಾರಿದರು.

ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಸತ್ಯನಾರಾಯಣ ಹಾಗೂ ಸಮಿತಿಯ ಸದಸ್ಯರಾದ ಚಂದ್ರಕುಮಾರ್ ಎಸ್. ಡಾ.ಗಿರೀಶ್, ಮಸೂದ್ ಅಹಮ್ಮದ್ ಕೆ.ಎಚ್. ಮಮತ, ರಿಯಾಜ್ ಮತ್ತು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending