Connect with us

ದಿನದ ಸುದ್ದಿ

ಕೊರೊನಾ ಮತ್ತು ನಮ್ಮ IASಗಳು..!

Published

on

ಇಲ್ಲಿರುವ ಚಿತ್ರ ನಿನ್ನೆ ದಿಲ್ಲಿಯ ಕಶ್ಮೀರ್ ಗೇಟ್ ಪ್ರದೇಶದಲ್ಲಿ ಪತ್ರಕರ್ತರೊಬ್ಬರಿಗೆ ಸಿಕ್ಕಿದ್ದು, ವ್ಯಕ್ತಿಯನ್ನು ಈಗ ಕ್ಷಯ ಆಸ್ಪತ್ರೆಗೆ ದಾಖಲಿಸಲಾಗಿದೆಯಂತೆ.

 

  • ರಾಜಾರಾಮ್ ತಲ್ಲೂರ್

ತ್ರುದಾಳಿ ನಡೆದಾಗ ಕೋಟೆಯ ಬಾಗಿಲು ಭದ್ರಪಡಿಸಿಕೊಳ್ಳುವುದೇ ಯುದ್ಧ ಅಲ್ಲ. ಅದು ಯುದ್ಧದ ತಯಾರಿಗೆ ಮೊದಲ ಹಂತ. ಶತ್ರು ಹಠಾತ್ ಎರಗದಂತೆ ಬಾಗಿಲು ಭದ್ರಪಡಿಸಿ, ಹತ್ಯಾರುಗಳು, ಸೈನಿಕರು ತಯಾರಾಗಬೇಕು.

ನಮ್ಮಲ್ಲೀಗ ಕೋಟೆಬಾಗಿಲು ಭದ್ರಪಡಿಸಿ 23 ದಿನಗಳು ಕಳೆದಿವೆ. ಮತ್ತೆ ಮೇ 3ರ ತನಕ ಕೋಟೆಬಾಗಿಲು ಮುಚ್ಚಿಯೇ ಇರಲಿದೆ ಎಂಬ ಸೂಚನೆ ನಿನ್ನೆ ಹೊರಬಿದ್ದಿದೆ. ತಯಾರಿ ಏನಾಗಿದೆ ಎಂದರೆ ಚಿತ್ರಣ ಆಶಾದಾಯಕ ಇಲ್ಲ.

ಕೊರೊನಾ ಬರಿಯ ಬಾಗಿಲು ಭದ್ರಪಡಿಸಿದರೆ ಹೊರಟು ಹೋಗುವ ಆತಂಕ ಅಲ್ಲ. ಹಾಗಿದ್ದಿದ್ದರೆ ಈ ಜಗತ್ತಿನಲ್ಲಿ ಫ್ಲೂ ವೈರಸ್ ಗಳೇ ಇರುತ್ತಿರಲಿಲ್ಲ. ಪ್ರತೀ ಸೀಸನ್ನಿನಲ್ಲಿ ಮೂರು-ನಾಲ್ಕು ಸುತ್ತು ಬರುವ ಎಲ್ಲ ವೈರಸ್ ಗಳ ರೀತಿಯೇ ತಾನೂ ಕೂಡ ಎಂದು ಕೊರೊನಾ ಈಗಾಗಲೇ ಚೀನಾದ ವುಹಾನ್, ದಕ್ಷಿಣ ಕೊರಿಯಾ ಮೊದಲಾದೆಡೆ ಸಾಬೀತುಪಡಿಸುತ್ತಿದೆ. ಅಲ್ಲಿ ಸೋಂಕಿನ ಎರಡನೇ ಅಲೆ ಹರಡುತ್ತಿದೆ.

ಅಂದರೆ, ಬರಿಯ ಲಾಕ್ ಡೌನ್ ಮಾಡಿಕೊಂಡು ಕುಳಿತರೆ ಇನ್ನು ಐದಾರು ವರ್ಷ ಹೋದರೂ ಜಗತ್ತು ಇದೇ ಸ್ಥಿತಿಯಲ್ಲಿ ಇರಬೇಕಾಗುತ್ತದೆ ಎಂಬುದು ವಾಸ್ತವ. ಕೊರೊನಾ ಜೊತೆ ಬದುಕುವುದು ನಮಗೆ ಅಭ್ಯಾಸ ಆಗದೆ ಬೇರೆ ದಾರಿ ಇಲ್ಲ.

ನಾನು ಇಲ್ಲಿ ಹೇಳಹೊರಟಿರುವುದು, ನಮ್ಮ ದೇಶದ ನಿಯಮಗಳನ್ನು ರೂಪಿಸುವ IAS ಕೆಡೇರ್ ಬಗ್ಗೆ. ಕಳೆದ 20 ದಿನಗಳಲ್ಲಿ ಅವರು ಮುಂದಿನ ದಿನಗಳಿಗೆ ಒಂದು ಸ್ಪಷ್ಟ-ನಿಖರ-ಕಾರ್ಯರೂಪಕ್ಕೆ ತರಬಲ್ಲ ಒಂದಿಷ್ಟು ನಿಯಮಗಳನ್ನು ರೂಪಿಸಬಲ್ಲರು ಎಂಬ ನಿರೀಕ್ಷೆ ಇತ್ತು.

ಆದರೆ ನಿನ್ನೆ ಲಾಕ್ ಡೌನ್ 2.0 ಗೆ ಮಾರ್ಗದರ್ಶಿಯನ್ನು ವಿವರವಾಗಿ ನೋಡಿದ ಬಳಿಕ ತುಂಬಾ ನಿರಾಸೆ ಆಯ್ತು. ಅಲ್ಲಿ ಹೇಳಲಾಗಿರುವ ಎಲ್ಲ ನಿಯಮಗಳೂ ಎಷ್ಟು ಆಂಬಿಗ್ಯುಯಿಟಿಯಿಂದ ತುಂಬಿವೆ ಎಂದರೆ ಕಳೆದ ಸಾರಿಯಂತೆ ಕ್ಲಾರಿಫಿಕೇಷನ್ ಗಳಿಗೆ ಕ್ಲಾರಿಫಿಕೇಷನ್ ಗಳ ಮತ್ತೊಂದು ಸರಣಿಯನ್ನು ಮುಂದಿನ ದಿನಗಳಲ್ಲಿ ನಿರೀಕ್ಷಿಸಬಹುದು. ಇದೆಲ್ಲ ಬೊಟ್ಟುಮಾಡುವುದು ಹಠಾತ್ ವಿಪತ್ತು ಸನ್ನಿವೇಶಗಳನ್ನು ಎದುರಿಸುವುದಕ್ಕೆ ನಮ್ಮ ತಯಾರಿಯ ಕೊರತೆಯನ್ನೇ.

ಇನ್ನಾದರೂ ಕೊರೊನೋತ್ತರ ಬದುಕಿಗೆ ಸ್ಪಷ್ಟ ಚಿತ್ರಣವೊಂದನ್ನು ತಯಾರಿ ಮಾಡದಿದ್ದರೆ, ದೇಶದ ಆರ್ಥಿಕ – ಸಾಮಾಜಿಕ ಸಂಕಟಗಳು ಎಲ್ಲರನ್ನೂ ಒಟ್ಟಾಗಿ ಮುಳುಗಿಸಲಿವೆ. ಈವತ್ತಲ್ಲ ನಾಳೆ ದೇಶದ ಎಲ್ಲ ಚಟುವಟಿಕೆಗಳಿಗೆ ಅವಕಾಶ ಕೊಡಲೇಬೇಕಾಗುತ್ತದೆ. ಕೊರೊನಾ ನಾಲ್ಕನೇ ಹಂತಕ್ಕೆ ಹರಡದಂತೆ ನಿಗಾ ಇರಿಸಿಕೊಂಡೇ ದೇಶ ಸಹಜ ಚಟುವಟಿಕೆಗಳೊಂದಿಗೆ ಮುನ್ನಡೆಯುವುದು ಹೇಗೆ ಎಂಬ ನಿಖರ ಯೋಜನೆಗಳನ್ನು ಇಂದೇ ಮಾಡದಿದ್ದರೆ, ಈಗ ಆಗುತ್ತಿರುವ ಮುಕ್ಕುಗಳು ಶಾಶ್ವತವಾಗಿ ಉಳಿಯಲಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ವಿಜ್ಞಾನ ವಿಭಾಗಕ್ಕೆ ಅಗ್ರಸ್ಥಾನ

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲೆಯ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯು ಒಟ್ಟಾರೆ ಶೇಕಡ 81.99 ರಷ್ಟು ಸಾಧನೆ ಮಾಡಿದ್ದು, ರಾಜ್ಯದಲ್ಲಿ 25 ನೇ ಸ್ಥಾನ ಪಡೆದಿದೆ. ಈ ಬಾರಿಯೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಅತಿ ಹೆಚ್ಚು ಶೇಕಡ 90.91 ರಷ್ಟು ಫಲಿತಾಂಶ ಪಡೆದು ಮೇಲುಗೈ ಸಾಧಿಸಿದ್ದಾರೆ.

ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು 20,810 ವಿದ್ಯಾರ್ಥಿಗಳ ಪೈಕಿ 16,046 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಶೇಕಡ 77.11 ರಷ್ಟು ಹಾಗೂ ಹೊಸದಾಗಿ ಪರೀಕ್ಷೆ ಬರೆದ (Freshers) 18,949 ವಿದ್ಯಾರ್ಥಿಗಳಲ್ಲಿ 15,540 ಮಂದಿ ಉತ್ತೀರ್ಣರಾಗಿದ್ದಾರೆ ಶೇಕಡ 82.01 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ವಿಭಾಗವಾರು ಫಲಿತಾಂಶದ ವಿಶ್ಲೇಷಣೆ

ವಿಜ್ಞಾನ ವಿಭಾಗ (Science): ಜಿಲ್ಲೆಯಲ್ಲಿ ಅತಿ ಹೆಚ್ಚು ಸಾಧನೆ ಈ ವಿಭಾಗದಲ್ಲಿ ದಾಖಲಾಗಿದೆ. ಒಟ್ಟು 12,536 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 10,936 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ (ಶೇ. 87.24). ಹೊಸ ವಿದ್ಯಾರ್ಥಿಗಳ ಪೈಕಿ 11,770 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 10,736 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಶೇ. 90.91 ರಷ್ಟು ಅದ್ಭುತ ಫಲಿತಾಂಶ ಬಂದಿದೆ.

ವಾಣಿಜ್ಯ ವಿಭಾಗ (Commerce)

ಈ ವಿಭಾಗದಲ್ಲಿ ಹಾಜರಾದ 4,295 ವಿದ್ಯಾರ್ಥಿಗಳಲ್ಲಿ 3,075 ಮಂದಿ ಉತ್ತೀರ್ಣರಾಗಿದ್ದಾರೆ (ಶೇ. 71.59). ಹೊಸ ವಿದ್ಯಾರ್ಥಿಗಳ ಪೈಕಿ 3858 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 2960 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಶೇ. 76.72 ರಷ್ಟು ಫಲಿತಾಂಶ ಬಂದಿದೆ.

ಕಲಾ ವಿಭಾಗ (Arts): ಕಲಾ ವಿಭಾಗದಲ್ಲಿ ಒಟ್ಟು 3,979 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 2,035 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ (ಶೇ. 51.14). ಹೊಸ ವಿದ್ಯಾರ್ಥಿಗಳ ಪೈಕಿ 3321 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 1880 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಶೇ. 56.61 ರಷ್ಟು ಫಲಿತಾಂಶ ಬಂದಿದೆ.

ಜಿಲ್ಲೆಯ ಒಟ್ಟಾರೆ ಫಲಿತಾಂಶದಲ್ಲಿ ವಿಜ್ಞಾನ ವಿಭಾಗವು ಪ್ರಥಮ ಸ್ಥಾನದಲ್ಲಿದ್ದರೆ, ವಾಣಿಜ್ಯ ಮತ್ತು ಕಲಾ ವಿಭಾಗಗಳು ನಂತರದ ಸ್ಥಾನ ಪಡೆದಿವೆ ಎಂದು ಉಪ ನಿರ್ದೇಶಕ ಪಳಿನಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆ: ಶೇ. 68.55ರಷ್ಟು ಮತದಾನ

Published

on

ಸುದ್ದಿದಿನ,ದಾವಣಗೆರೆ:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಇಂದು ನಡೆದ ಉಪ ಚುನಾವಣೆಯು ಅತ್ಯಂತ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಒಟ್ಟಾರೆ ಶೇ. 68.55ರಷ್ಟು ಮತದಾನ ದಾಖಲಾಗಿದೆ.

ಬೆಳಿಗ್ಗೆಯಿಂದಲೇ ಮತಗಟ್ಟೆಗಳ ಮುಂದೆ ಮತದಾರರು ಉತ್ಸಾಹದಿಂದ ಸರದಿಯಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು. ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮಗಳು ಹಾಗೂ ಪೊಲೀಸ್ ಬಂದೋಬಸ್ತ್ನಿಂದಾಗಿ ಯಾವುದೇ ಅಹಿತಕರ ಘಟನೆಗಳಿಲ್ಲದೆ ಮತದಾನ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಿತು.

ಯುವಕರು ಹಾಗೂ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತದಾನ ಮಾಡಿದ್ದು ಕಂಡುಬಂದಿತು. ಚುನಾವಣಾ ಸಿಬ್ಬಂದಿ ಹಾಗೂ ಭದ್ರತಾ ಪಡೆಯ ಸಹಕಾರದೊಂದಿಗೆ ಮತದಾನ ಪ್ರಕ್ರಿಯೆಯು ಸುಗಮವಾಗಿ ಜರುಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸಮಾನತೆಯ ಸಂಭ್ರಮ | ಹದಡಿಯಲ್ಲಿ ತೃತೀಯ ಲಿಂಗತ್ವ ಮದಾರರಿಂದ ಮತಚಲಾವಣೆ

Published

on

ಸುದ್ದಿದಿನಡೆಸ್ಕ್:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಹದಡಿ ಗ್ರಾಮದ ಮತಗಟ್ಟೆಯಲ್ಲಿ ತೃತೀಯ ಲಿಂಗತ್ವ ಮತದಾರರು ಮತಗಟ್ಟೆಗೆ ಆಗಮಿಸಿ ಸಂತೋಷದಿಂದ ಮತ ಚಲಾಯಿಸಿದರು.

ಸಮಾಜದ ಪ್ರತಿಯೊಬ್ಬರಿಗೂ ಸಮಾನ ಹಕ್ಕು ಎಂಬ ಸಂದೇಶವನ್ನು ಸಾರಿದ ಕ್ಷಣ! ತಮ್ಮ ಅಮೂಲ್ಯ ಮತದಾನದ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಿದ ತೃತೀಯ ಲಿಂಗತ್ವ ಮತದಾರರಿಗೆ ಅಭಿನಂದನೆಗಳು ಎಂದು ಜಿಲ್ಲಾ ಪಂಚಾಯತ್ ಸಿಇಓ ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending