ದಿನದ ಸುದ್ದಿ
ನಿರುದ್ಯೋಗ ಮತ್ತು ಮೋದಿಯ ‘ಫಿಟ್ ಇಂಡಿಯಾ’ ಚಳವಳಿ

- ಸೋಮನಗೌಡ.ಎಸ್.ಎಂ.ಕಟ್ಟಿಗೆಹಳ್ಳಿ
ಪ್ರಧಾನಿಮೋದಿ ಅವರು ಫಿಟ್ ಇಂಡಿಯಾ ಚಳವಳಿಗೆಚಾಲನೆ ನೀಡಲಿದ್ದಾರೆ ಎಂದು ನಿರೂಪಕಿ ಹೇಳುತ್ತಿದ್ದಂತೆಒಮ್ಮೆಲೆ ನನಗೆ ಕೇಳಿಸಿದ್ದು ‘ಕ್ವಿಟ್ ಇಂಡಿಯಾ’ ಚಳವಳಿನಾ’ಎಂದು! ಅನಂತರ ದಿಟ್ಟಿಸಿ ಸೂಕ್ಷ್ಮವಾಗಿಟಿವಿ ನೋಡಿದಾಗ ಮೋದಿ ಅವರು ‘ಸದೃಢ ಭಾರತ ಸಶಕ್ತಭಾರತ’ಕ್ಕೆ ದೈಹಿಕ ಚಟುವಟಿಕೆ ಮತ್ತು ಕ್ರೀಡೆಗಳಲ್ಲಿಎಲ್ಲರೂ ತೊಡಗಿಕೊಳ್ಳಿ ಎಂದು ಹೇಳುವ ಸಾರವೇ ಫಿಟ್ಇಂಡಿಯಾ ಚಳವಳಿ ಎಂದಾಗ ಅರ್ಥವಾಯಿತು.
‘ಹಮ್ ಫಿಟ್, ತೋ ಇಂಡಿಯಾ ಫಿಟ್’ ಹ್ಯಾಶ್ಟ್ಯಾಗ್ನಲ್ಲಿ ಕಳೆದ ವರ್ಷ ಕೇಂದ್ರದ ಕ್ರೀಡಾ ಸಚಿವರಾಜವರ್ಧನ ಸಿಂಗ್ ರಾಥೋಡ್ (ಈಗ ಮಾಜಿ) ಟ್ಟೀಟರ್ನಲ್ಲಿ ಫಿಟ್ನೆಸ್ ಸವಾಲೆಸೆದಿದ್ದರು. ಇದಕ್ಕೆಕ್ರೀಡಾಪಟುಗಳು, ಸಿನಿಮಾ ತಾರೆಯರು ಸವಾಲುಸ್ವೀಕರಿಸಿ ಯೋಗ, ಜಿಮ್, ಕಚೇರಿಯಲ್ಲೇ ವ್ಯಾಯಾಮಮಾಡಿ ಸಶಕ್ತ ಭಾರತಕ್ಕೆ ನಾವು ಬದ್ಧ ಎಂದು ಸಾಮಾಜಿಕಜಾಲತಾಣಗಳಲ್ಲಿ ಪ್ರಚಾರಗಿಟ್ಟಸಿಕೊಂಡಿದ್ದರು.
1942 ಆಗಸ್ಟ್ 8 ರಂದು ಕ್ರಿಪ್ಸ್ ಶಿಫಾರಸ್ಸುಗಳನ್ನುತಿರಸ್ಕರಿಸಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಬಾಂಬೆಯಗೋವಳಿ ಮೈದಾನದಲ್ಲಿ ಸಭೆ ಸೇರಿ ‘ಭಾರತ ಬಿಟ್ಟುತೊಲಗಿ’ ಠರಾವನ್ನು ಅಂಗೀಕರಿಸಿತ್ತು. ಮಹಾತ್ಮಗಾಂಧಿಯವರು ‘ಬ್ರಿಟೀಷರು ತಕ್ಷಣ ಭಾರತ ಬಿಟ್ಟುತೊಲಗಿ. ಇಲ್ಲವಾದರೆ ಕಾನೂನು ಭಂಗ ಚಳವಳಿಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.ಭಾರತೀಯರಿಗೆ ‘ಮಾಡು ಇಲ್ಲವೇ ಮಡಿ’ ಎಂಬ ಕರೆನೀಡಿದ್ದರು.ಗಾಂಧೀಜಿಯವರು ಗುಜರಾತ್ ರಾಜ್ಯದವರು. ಈಗಪ್ರಧಾನಿ ಮೋದಿಯವರು ಕೂಡಾ ಗುಜರಾತ್ರಾಜ್ಯದವರೇ.‘ಕ್ವಿಟ್ ಇಂಡಿಯಾ’ ಚಳವಳಿಆರಂಭವಾಗಿದ್ದು 1942 ಆಗಸ್ಟ್ 8 ರಂದು.‘ಫಿಟ್ಇಂಡಿಯಾ’ ಚಳವಳಿ ಆರಂಭವಾಗಿದ್ದು 2019 ಆಗಸ್ಟ್29ರಂದು. ಆಗ ಭಾರತಕ್ಕೆ ಅಂಟಿದ್ದ ಬ್ರಿಟೀಷ್ ರೋಗತೊಳೆಯಲು ಕರೆ ನೀಡಿದ್ದು ಕ್ವಿಟ್ ಇಂಡಿಯಾ ಚಳವಳಿ.ಈಗ ಮೋದಿ ಅವರು ಸದೃಢ ಭಾರತ ಕಟ್ಟಲು ಫಿಟ್ಇಂಡಿಯಾ ಚಳವಳಿಗೆ ಕರೆ ನೀಡಿದ್ದಾರೆ.
ಕುಸಿಯುತ್ತಿರುವ ಆರ್ಥಿಕತೆಯಿಂದ ದೇಶತಲ್ಲಣಗೊಂಡಿದೆ. ಉದ್ಯೋಗಗಳು ಮರೀಚಿಕೆಯಾಗಿ. ಯುವಜನತೆ ಉದ್ಯೋಗವಿಲ್ಲದೇ ಬೀದಿಗೆ ಬಿದ್ದಿದ್ದಾರೆ. ಈದೇಶದ ಪರಿಸ್ಥಿತಿ ಅಲ್ಲೋಲ ಕಲ್ಲೋಲವಾಗಿದೆ. ಆರೋಗ್ಯ, ಬಡತನ, ಹಸಿವು, ದಾರಿದ್ರ್ಯ ಎಲ್ಲೆಲ್ಲೂ ಜೀವಂತವಾಗಿರುವಕಾಲದಲ್ಲಿ ಇಂಡಿಯಾ ‘ಫಿಟ್ ಇಂಡಿಯಾ’ ಆಗಿದೆಯೇ? ಎಂದು ಮೊದಲು ಪ್ರಧಾನಿಯವರು ಮನಗಾಣಬೇಕು.
ಸ್ವಾತಂತ್ರ್ಯ ಬಂದು 73 ವರ್ಷಗಳೇ ಕಳೆದಿವೆ. ಐತಿಹಾಸಿಕಕೆಂಪುಕೋಟೆಯಲ್ಲಿ ಭಾಷಣ ಮಾಡಿದ ಪ್ರಧಾನಿ ನರೇಂದ್ರಮೋದಿಯವರು ಈದೇಶದ ಬಡತನ ನಿವಾರಣೆ ಬಗ್ಗೆ, ಪರಿಸರ ರಕ್ಷಣೆಯ ಬಗ್ಗೆ ಮಾತನಾಡಿದ್ದರು.
2017ರಜುಲೈ 18ರಂದು ಕರ್ನಾಟಕದ ಗೋಕರ್ಣದ ದಲಿತಕುಟುಂಬದ ಮೂವರು ಹಸಿವಿನಿಂದ ಸತ್ತರು. ಕಳೆದಎರಡು ತಿಂಗಳ ಹಿಂದೆ ಆಂಧ್ರಪ್ರದೇಶದಲ್ಲಿ ಹಸಿವನ್ನುತಾಳಲಾರದೇ ಮಣ್ಣು ತಿಂದು ಇಬ್ಬರು ಮಕ್ಕಳುಮೃತಪಟ್ಟರು. ಈ ಸುದ್ದಿ ಇಡೀ ದೇಶದ ಹಸಿವು ಎಂಬಅಂಟು ಜಾಢ್ಯಕ್ಕೆ ಹಿಡಿದ ಕನ್ನಡಿ. ಆಹಾರದ ಹಕ್ಕುಅಭಿಯಾದನ ಭಾಗವಾಗಿ ಹಲವು ಸ್ವಯಂ ಸೇವಾಸಂಸ್ಥೆಗಳು ಸಿದ್ಧಪಡಿಸಿದ ಅಧ್ಯಯನ ವರದಿಯ ಪ್ರಕಾರ2015-2019ರವರೆಗೆ ಹಸಿವಿನಿಂದ ಸತ್ತವರ ಸಂಖ್ಯೆ 58. (ಜಾರ್ಖಂಡ್-16, ಉತ್ತರಪ್ರದೇಶ-16, ಒಡಿಶಾ-10, ಕರ್ನಾಟಕ-3, ದೆಹಲಿ-3, ಬಿಹಾರ-3, ಛತ್ತಿಸ್ಗಡ-3, ಆಂಧ್ರ-2 ರಾಜಸ್ಥಾನ-1, ಪ.ಬಂಗಾಳ-1) ಇದನ್ನುಮೊದಲು ಸರಿಪಡಿಸಿ ದಿಟ್ಟಕ್ರಮ ಕೈಗೊಂಡರೆ ಅದೇಅಲ್ಲವೇ ಫಿಟ್ ಇಂಡಿಯಾ?
2019 ಲೋಕಸಭೆಯ ಚುನಾವಣಾ ಆದ್ಯತಾವಿಷಯವಾಗಿ ಪ್ರಚಾರ ಮಾಡಿ,2ನೇ ಬಾರಿಗೆ ಆಡಳಿತಕ್ಕೆಬಂದ ಪ್ರಧಾನಿ ಮೋದಿ ಅವರ ಎನ್ಡಿಎ-2.0 ಸರ್ಕಾರಯುವಜನರಿಗೆ ಕೊಟ್ಟ ಉದ್ಯೋಗ ಭರವಸೆಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಉದ್ಯೋಗಕಳೆದುಕೊಂಡು ಬೀದಿಗೆ ಬಂದಿರುವ ನಿರುದ್ಯೋಗಿಗಳಸಂಖ್ಯೆ ದಿನೇ ದಿನೇ ಗಣನೀಯವಾಗಿ ಹೆಚ್ಚುತ್ತಲೇ ಇದೆ. ಆಟೊಮೊಬೈಲ್ ಕ್ಷೇತ್ರ, ಜವಳಿ ಕ್ಷೇತ್ರ ಹೀಗೆ ಎಲ್ಲೆಲ್ಲೂಉದ್ಯೋಗ ಕಳೆದುಕೊಂಡು ಅಭದ್ರರಾಗಿದ್ದಾರೆ. ಪ್ರಧಾನಿಮೋದಿ ಅವರ ಎನ್ಡಿಎ-1 ಸರ್ಕಾರ ಕಳೆದ 5 ವರ್ಷಗಳಲ್ಲಿ ಪ್ರಮುಖ ಯೋಜನೆಗಳ ಮೂಲಕಸೃಷ್ಟಿಯಾಗಿರುವ ಉದ್ಯೋಗ 27.5ರಷ್ಟು.
2022ರೊಳಗೆ‘ಮೇಕ್ ಇನ್ ಇಂಡಿಯಾ’ ಯೋಜನೆಯೊಂದರಲ್ಲೇ 10 ಕೋಟಿ ಉದ್ಯೋಗ ನೀಡುವ ಭರವಸೆಯನ್ನು ಕೇಂದ್ರನೀಡಿತ್ತು. ಆದರೆ ಸೃಷ್ಟಿಯಾದ ಉದ್ಯೋಗಸಾಸಿವೆಯಷ್ಟು. ಅತಿವೃಷ್ಠಿ-ಅನಾವೃಷ್ಠಿಗಳಿಂದಕೃಷಿರಂಗದಲ್ಲೂ ಉದ್ಯೋಗ ಪ್ರಮಾಣ ಕುಂಠಿತವಾಗಿದೆ.ದ್ವಿದಳ ದಾನ್ಯಗಳ ಉತ್ಪಾದನೆ ಕಡಿಮೆಯಾಗಿ ಬೆಲೆಗಳುಗಗನಕ್ಕೇರುತ್ತಿವೆ.ದುಡಿಯುವ ಯುವಜನರಿಗೆಉದ್ಯೋಗ ಭದ್ರತೆಕೊಟ್ಟರೆ ಅಲ್ಲವೇ ಫಿಟ್ಇಂಡಿಯಾವಾಗೋದು. ಮೊಣಕೈಗೆ ಬೆಣ್ಣೆ ಹಚ್ಚಿ ತಿನ್ನಿಎನ್ನುವಂತಾಗಿದೆ ಯುವಜನರ ಪಾಡು.
ಸದಾಅಭದ್ರತೆಯಲ್ಲೇ ಬದುಕುವ ಜನತೆ ಆರ್ಥಿಕವಾಗಿಸದೃಢವಾಗದಿದ್ದರೆ ‘ಫಿಟ್ ಇಂಡಿಯಾ’ ಚಳವಳಿಹಾಸ್ಯಾಸ್ಪದವೆನ್ನಿಸುತ್ತದೆ.ಲಿಂಗಾನುಪಾತ ಪ್ರಮಾಣ ಕಳವಳಕಾರಿಯಾಗಿದೆ. ಭಾರತದಲ್ಲಿ ಹೆಣ್ಣುಮಕ್ಕಳ ಪ್ರಮಾಣ ಗಮನಾರ್ಹವಾಗಿಇಳಿಮುಖವಾಗಿದೆ ಎಂದು ಭಾರತೀಯ ರಿಜಿಸ್ಟ್ರಾರ್ಜನರಲ್ ಸಿದ್ಧಪಡಿಸಿದ ಅಂಕಿಅಂಶಗಳುಬೆಚ್ಚಿಬೀಳಿಸುವಂತಹದ್ದು. ಕರ್ನಾಟಕದಲ್ಲಿ 2007 ರಲ್ಲಿ1004ರಷ್ಟಿದ್ದ ಲಿಂಗಾನುಪಾತ 2016ರ ವೇಳೆಗೆ 896ಕ್ಕೆಕುಸಿದಿದೆ. ಆಂಧ್ರ, ತಮಿಳುನಾಡು, ತೆಲಂಗಾಣರಾಜ್ಯಗಳಲ್ಲಿ ಶಿಶುಮರಣ ಪ್ರಮಾಣ ಇಳಿಕೆಯಾಗಿದ್ದರುಲಿಂಗಾನುಪಾತದ ಪ್ರಮಾಣ ಹೆಚ್ಚಾಗುತ್ತಲೇ ಇದೆ. ವಿಶ್ವಆರ್ಥಿಕ ವೇದಿಕೆ ಪ್ರಕಟಿಸಿರುವ ಜಾಗತಿಕ ಲಿಂಗತ್ವಅಸಮಾನತೆ ಸೂಚ್ಯಾಂಕದಲ್ಲಿ ಭಾರತವು 21ನೇಸ್ಥಾನದಲ್ಲಿದೆ. ಆರ್ಥಿಕ ಚಟುವಟಿಕೆ, ಉದ್ಯೋಗ, ಆರೋಗ್ಯ ಕ್ಷೇತ್ರಗಳಲ್ಲಿ ಮಹಿಳೆಯರ ಭಾಗವಹಿಸುವಿಕೆವಿಚಾರದಲ್ಲಿ ಭಾರತದ ಮುಂದೆ ಬಹುದೊಡ್ಡ ಸವಾಲುಇದೆ. ರಾಜಕೀಯ ಅಧಿಕಾರ, ಆರೋಗ್ಯ ಜೀವನ ನಿರೀಕ್ಷೆಮತ್ತು ಸಾಕ್ಷರತೆಯ ವಿಚಾರದಲ್ಲಿ ಲಿಂಗ ಸಮಾನತೆಹೆಚ್ಚಿರುವುದೇ ಜಾಗತಿಕ ಸೂಚ್ಯಾಂಕದಲ್ಲಿ ಭಾರತದ ಸ್ಥಾನಕುಸಿಯಲು ಕಾರಣ. ಮೊದಲು ಇಂತಹ ವಿಚಾರದಲ್ಲಿದೇಶ ಫಿಟ್ ಆಗಿದ್ದರೆ ಮಾತ್ರ ಸದೃಢ ಭಾರತವಾಗಲುಸಾಧ್ಯವಲ್ಲವೇ?
ತಾಯಂದಿರ ಮರಣ ಪ್ರಮಾಣ ಹೆಚ್ಚುತ್ತಲೇ ಇದೆ. ಹೆರಿಗೆಸಮಯದಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಹುಟ್ಟಿನ ಕೆಲವೇಹೊತ್ತಿನಲ್ಲಿ ಶಿಶುಗಳ ಸಂಖ್ಯೆ ಎಷ್ಟು ಎಂದುರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಸಿಕ್ಕ ಉತ್ತರಉಬ್ಬೇರಿಸುವಂತಿತ್ತು. ಅಸ್ಸಾಂ- ಉತ್ತರಪ್ರದೇಶ, ರಾಜಸ್ಥಾನ, ಒಡಿಶಾ, ಮಧ್ಯಪ್ರದೇಶ, ಛತ್ತಿಸ್ಗಡ, ಬಿಹಾರ,ಪಂಜಾಬ್ಗಳಲ್ಲಿ ಪ್ರತಿ ಒಂದು ಸಾವಿರಕ್ಕೆ 167 ಗರ್ಭಿಣಿಯರು-ಬಾಣಂತಿಯರು ಸಾವನ್ನಪ್ಪಿದ್ದಾರೆ. ಈದೇಶದಲ್ಲಿ 896 ರೋಗಿಗೆ ಒಬ್ಬ ವೈದ್ಯನಿದ್ದಾನೆ. ಹೀಗಾದರೆಹೇಗೆ ಫಿಟ್ ಇಂಡಿಯಾವಾಗಲು ಸಾಧ್ಯ?
ಇವಷ್ಟೇ ಅಲ್ಲ ಹೆಚ್ಚುತ್ತಿರುವ ವಾಯುಮಾಲಿನ್ಯ,ಜಲಮಾಲಿನ್ಯಗಳಿಂದ ದೇಶದಾದ್ಯಂತ ಕ್ಯಾನ್ಸರ್ ಪೀಡಿತರಸಂಖ್ಯೆ, ಹೃದಯರೋಗಿಗಳ ಸಂಖ್ಯೆ ಗಣನೀಯವಾಗಿಹೆಚ್ಚಾಗುತ್ತಿದೆ. ಪ್ರಕೃತಿಯ ಮೇಲೆ ಮಾನವನಸವಾರಿಯಿಂದ ಪರಿಸರ ಹಾಳಾಗಿ ಹೋಗುತ್ತಿದೆ. ಜಗತ್ತಿನಅನೇಕ ದೇಶಗಳನ್ನು ಸುತ್ತಿ ಬಂದಿರುವ ಪ್ರಧಾನಿಯವರುಭಾರತ ‘ಫಿಟ್ ಇಂಡಿಯಾ’ ಆಗಬೇಕು ಎಂಬ ಕನಸನ್ನುಒಪ್ಪೋಣ. ಮಾಧ್ಯಮಗಳಲ್ಲಿ ಬೊಬ್ಬೆ ಹಾಕಿದರೆ ಫಿಟ್ಇಂಡಿಯಾವಾಗದು.ಅದನ್ನು ಕಾರ್ಯರೂಪಕ್ಕೆತರಬೇಕಾದರೆ ಹಳಿತಪ್ಪಿರುವ ಅರ್ಥವ್ಯವಸ್ಥೆಯನ್ನುಸರಿಪರಿಸಬೇಕು. ಉದ್ಯೋಗ ಸೃಷ್ಟಿ, ಪರಿಸರಸಮತೋಲನ, ಆರೋಗ್ಯ ಹೀಗೆ ಎಲ್ಲಾ ಕ್ಷೇತ್ರಗಳುಅಭಿವೃದ್ಧಿ ಕಂಡು ಅದರ ಫಲ ಪ್ರತಿಯೊಬ್ಬ ನಾಗರಿಕನಮನೆಬಾಗಲಿಗೆ ಹೋದಾಗ ಮಾತ್ರವೇ ಫಿಟ್ಇಂಡಿಯಾವಾದೀತು. ಇವೆಲ್ಲದರಿಂದ ರೋಸಿ ಹೋದಯುವಜನತೆ ‘ಮೋದಿ ಕ್ವಿಟ್ ಇಂಡಿಯಾ’ ಎನ್ನವುದಕ್ಕೂಮೊದಲು ಜಾಗೃತರಾಗಿ. ಭಾರತವನ್ನು ಎಲ್ಲಾಅಂಶಗಳಿಂದಲೂ ಫಿಟ್ ಇಂಡಿಯಾ ಮಾಡಿ. ಆಗ ಎಲ್ಲವರ್ಗದ ಜನತೆಯೂ ‘ಫಿಟ್ ಇಂಡಿಯಾ’ ಚಳವಳಿಯನ್ನುಒಪ್ಪುತ್ತಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಹಿಳೆಗೆ ಮೀಸಲಾತಿ ಬೇಡ, ಸಮಾನ ಪ್ರಾತಿನಿಧ್ಯ ಕೊಡಿ : ಡಾ.ಜ್ಯೋತಿ ಟಿ.ಬಿ

ಸುದ್ದಿದಿನ, ಚನ್ನಗಿರಿ (ಬಸವಾಪಟ್ಟಣ) : ಭಾರತೀಯ ಸಮಾಜದಲ್ಲಿ ಮೀಸಲಾತಿಯಿಂದ ಮಾತ್ರ ಮಹಿಳಾ ಪ್ರಗತಿ ಸಾಧ್ಯವಿಲ್ಲ. ಅವಳಿಗೆ ಪುರುಷನಂತೆ ಸಮಾನವಾದ ಪ್ರಾತಿನಿಧ್ಯ ನೀಡಿದಲ್ಲಿ ಮಾತ್ರವೇ ಮಹಿಳಾ ಪ್ರಗತಿ ಸಾಧ್ಯ. ಆಗ ಮಾತ್ರವೇ ಸದೃಢವಾದ ಭಾರತ ನಿರ್ಮಾಣವಾಗಲು ಸಾಧ್ಯ ಎಂದು ಸಂತೆಬೆನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಜ್ಯೋತಿಯವರು ಅಭಿಪ್ರಾಯ ವ್ಯಕ್ತಪಡಿಸಿದರು.
ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಐಕ್ಯತ ಸಪ್ತಾಹದ ಅಡಿಯಲ್ಲಿ ‘ಭಾರತೀಯ ಸಮಾಜ ಹಾಗೂ ರಾಷ್ಟ್ರದ ಪ್ರಗತಿಯಲ್ಲಿ ಮಹಿಳೆಯರ ಪ್ರಾಮುಖ್ಯತೆ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಮಹಿಳೆಗೆ ಎಲ್ಲಿಯವರೆಗೆ ಮುಕ್ತವಾದ ಪ್ರಾತಿನಿಧ್ಯ ಲಭಿಸುವುದಿಲ್ಲವೋ ಅಲ್ಲಿಯವರೆಗೆ ಎಷ್ಟೇ ಕಾಯ್ದೆ, ಕಾನೂನುಗಳು ಜಾರಿಯಾದರೂ ಮಹಿಳೆಯರ ಬದುಕಿನಲ್ಲಿ ಸಮಗ್ರ ಬದಲಾವಣೆ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಪ್ರಾಂಶುಪಾಲರಾದ ಡಾ.ಎಂ.ಆರ್. ಲೋಕೇಶ್ ಅವರು ಮಾತನಾಡಿ ಭಾರತೀಯ ಸಮಾಜದಲ್ಲಿ ಹೆಣ್ಣು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳುವುದು ಕೇವಲ ಆರ್ಥಿಕತೆಯಿಂದ ಸಾಧ್ಯವಿಲ್ಲ ಎಂದರು.
ನೈತಿಕತೆ, ಸಂಸ್ಕಾರವು ಕೂಡ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿಯೇ ಶರಣರು ಗಂಡು-ಹೆಣ್ಣು ಎಂಬ ಬೇಧವನ್ನು ಮೆಟ್ಟಿ ನಿಂತು ‘ಒಳಗೆ ಸುಳಿವ ಆತ್ಮ ಹೆಣ್ಣು ಅಲ್ಲ, ಗಂಡು ಅಲ್ಲ’ ಎಂಬ ತಾತ್ವಿಕತೆಯ ಮೂಲಕ ಸರ್ವರನ್ನು ಸಮಾನವಾಗಿ ಕಾಣುವಂತಹ ಸಮಾಜಕ್ಕಾಗಿ ಶ್ರಮಿಸಿದರು. ಭಾರತದ ನೆಲದಲ್ಲಿ ಶರಣರು, ದಾರ್ಶನಿಕರು ರೂಪಿಸಿಕೊಟ್ಟ ಮಾರ್ಗದಲ್ಲಿ ನಡೆದು ಇಂದಿನ ಮಹಿಳೆಯರು ಸಬಲರಾಗಬೇಕು ಎಂಬುದಾಗಿ ತಿಳಿಸಿದರು.
ಸಮಾಜಶಾಸ್ತ್ರದ ಮುಖ್ಯಸ್ಥರಾದ ಡಾ.ಎ.ಡಿ.ಬಸವರಾಜ್ ಅವರು ಪ್ರಾಸ್ತವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಬೋಧಕರಾದ ಹನುಮಂತಪ್ಪ, ಪ್ರಕಾಶ್, ಮಧುಸೂಧನ್, ರೆಹಮತ್ಬಿ, ಸಂದೀಪ್ ಮುಂತಾದವರು ಹಾಜರಿದ್ದರು. ಕಾರ್ಯಕ್ರಮವನ್ನು ಗೋವಿಂದರೆಡ್ಡಿ ಅವರು ನಿರೂಪಿಸಿದರು. ವಿದ್ಯಾರ್ಥಿನಿ ಸೌಂದರ್ಯ ಸ್ವಾಗತಿಸಿದರು, ಯಶೋಧ, ಸಹನಾ ಪ್ರಾರ್ಥಿಸಿದರು, ರಕ್ಷಿತ ವಂದಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭಾರತೀಯರೆಲ್ಲರ ಪವಿತ್ರಗ್ರಂಥ ಭಾರತದ ಸಂವಿಧಾನ : ಡಾ.ಕೆ.ಎ.ಓಬಳೇಶ್

ಸುದ್ದಿದಿನ,ದಾವಣಗೆರೆ : ಸಂವಿಧಾನ ಪೂರ್ವದ ಭಾರತದ ಸ್ಥಿತಿಗತಿ ಹಾಗೂ ಸಂವಿಧಾನದ ನಂತರ ಭಾರತದಲ್ಲಾದ ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಬದಲಾವಣೆಗ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಹಾಗೆಯೇ ಸಂವಿಧಾನ ರಚನೆ ಮಾಡುವ ಸಮಯದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮುಂದಿದ್ದ ಬಿಕ್ಕಟ್ಟುಗಳನ್ನು ಏಕಾಂತಗಿರಿ ಟ್ರಸ್ಟ್ ನ ಕಾರ್ಯದರ್ಶಿ ಡಾ.ಕೆ.ಎ.ಓಬಳೇಶ್ ಅವರು ತಿಳಿಸಿಕೊಟ್ಟರು.
ನಗರದ ಪ್ರೇರಣ ಮಕ್ಕಳ ಆರೈಕೆ ಕೇಂದ್ರದಲ್ಲಿ ವಿ.ಬಿ.ಪಿ ಫೌಂಡೇಷನ್ ಹಾಗೂ ಏಕಾಂತಗಿರಿ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಸಂವಿಧಾನ ದಿನಾಚರಣೆಯನ್ನು ಭಾನುವಾರ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ದೇವನಗರಿ ಸುದ್ಧಿದಿನ ಪತ್ರಿಕೆಯ ಸಂಪಾದಕರಾದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು, ವಿದ್ಯಾರ್ಥಿಗಳಿಗೆ ಭಾರತದ ಸಂವಿಧಾನದ ಕಳಶದಂತಿರುವ ಸಂವಿಧಾನ ಪೀಠಿಕೆಯ ಮಹತ್ವವನ್ನು ಪರಿಚಯಿಸುವ ಮೂಲಕ ಸಂವಿಧಾನ ಪೀಠಿಕೆಯನ್ನು ಬೋಧಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸ್ಕೈ ಲೈನ್ ಸಂಸ್ಥೆಯ ಸಂಸ್ಥಾಪಕರಾದ ಬಾಲಚಂದ್ರ ಅವರು ಸಂವಿಧಾನ ಇರುವ ಕಾಲದಲ್ಲಿಯೇ ದಲಿತರು, ದಮನಿತರು ಹಾಗೂ ಮಹಿಳೆಯರ ಸ್ಥಿತಿಯು ಅತ್ಯಂತ ಶೋಚನೀಯವಾಗಿದೆ. ಆದರೆ ಸಂವಿಧಾನವಿಲ್ಲದ ಭಾರತವನ್ನು ನಾವು ಊಹಿಸಿಕೊಳ್ಳುವುದು ಕಷ್ಟ ಸಾಧ್ಯ ಎಂಬುದಾಗಿ ತಿಳಿಸಿದರು.
ಪ್ರೇರಣ ಆರೈಕೆ ಕೇಂದ್ರದ ಶಿಕ್ಷಕರಾದ ಕುಮಾರ್ ಅವರು ಮಾತನಾಡಿ, ಸರ್ವರನ್ನು ಸಮಾನವಾಗಿ ಕಾಣುವ ಸಂವಿಧಾನವು ನಮ್ಮೆಲ್ಲರ ಪವಿತ್ರ ಗ್ರಂಥ ಎಂಬುದಾಗಿ ತಿಳಿಸಿದರು. ಕುಮಾರಿ ಪೂಜಾ ಅವರು ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಪ್ರೇರಣ ಸಂಸ್ಥೆಯ ಮಕ್ಕಳು ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸರ್ಕಾರಕ್ಕೆ ಸೆಡ್ಡು ಹೊಡೆದ ದಾವಣಗೆರೆ ರೈತರು

- ಪುರಂದರ್ ಲೋಕಿಕೆರೆ
ಸುದ್ದಿದಿನ, ದಾವಣಗೆರೆ : ಸರ್ಕಾರದ ಭದ್ರಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಇಲಾಖೆಯ ಚಿತಾವಣೆಗೆ ಸೆಡ್ಡು ಹೊಡೆದು ಕೇವಲ 110-120 ದಿನಗಳ ಒಳಗಾಗಿಅಲ್ಪಾವಧಿ ತಳಿ ನಾಟಿ ಮಾಡಿ ಯಶಸ್ವಿಯಾಗಿ ಕಾಲುವೆ ನೀರು ಬಳಸಿಕೊಂಡು ಭತ್ತ ಬೆಳೆಯುವ ಮೂಲಕ ಮಾದರಿಯಾಗಿದ್ದಾರೆ ದಾವಣಗೆರೆ ಭಾಗದ ರೈತರು.
ಬೇಸಿಗೆ ಕಾಲದಲ್ಲಿ ನಮಗೆ ತೋಟಗಳಿಗೆ ನೀರು ಹರಿಸಲು ಆನ್ ಆಪ್ ಪದ್ದತಿ ಮಾಡಿ ಎಂದು ಒತ್ತಡ ಹಾಕಿದ ಶಿವಮೊಗ್ಗ ಜಿಲ್ಲೆಯ ಅಡಿಕೆ ದಣಿಗಳಿಗೇ ಮುಖಕ್ಕೆ ಹೊಡೆದಂತೆ ಭತ್ತ ಬೆಳೆದು ತೋರಿಸಿರುವುದು ಶ್ಲಾಘನೀಯ.
100 ದಿನಗಳು ನೀರು ಹರಿಸಲು ಆದೇಶ ಹೊರಡಿಸಿ ರೈತರೆಲ್ಲ ನಾಟಿ ಮಾಡಿದ ಮೇಲೆ ಎಂದೂ ಗದ್ದೆ ನೀರು ಕಟ್ಟದ ಐಷಾರಾಮೀ ರಾಜಕಾರಣಿ ಪುತ್ರ ರತ್ನ ಸಚಿವ ಮಧು ಬಂಗಾರಪ್ಪ ಅಡಿಕೆ ತೋಟದ ರೈತರಿಗೆ ಮನ ಸೋತವರು.
ಕಲ್ಲು ಬಂಡೆ ಹೊಡೆದು ಭರ್ಜರಿ ಜೀವನ ಸಾಗಿಸುವ ಸಂಪನ್ಮೂಲ ಸಚಿವ, ಉಸ್ತುವಾರಿ ಸಚಿವರ ನಿರ್ಲಕ್ಷ್ಯ ಬೇಸತ್ತ ರೈತ ರಸ್ತೆ ತಡೆದು ನೀರು ಕೊಡಿ ಎಂದು ಹೋರಾಟ ಮಾಡಿದರೂ ಕಿವಿ ಕೇಳೋಲ್ಲ ಎಂಬಂತೆ ವರ್ತಿಸಿದೆ ಆಡಳಿತ ಯಂತ್ರ.
ಆದರೆ ಈ ನಡುವೆ ಎರಡು ಭಾರಿ ಪ್ರಕೃತಿ ವರದಾನ ದಿಂದ ಭತ್ತ ಬೆಳೆಯುವ ಮೂಲಕ ಅನ್ನನೀಡುವ ರೈತ ಭತ್ತ ಬೆಳೆದು ಬಿಟ್ಟ. ಈ ಮೂರು ತಿಂಗಳ ಭತ್ತಕ್ಕೆ ನೀರು ಬಿಡುವುದು ಎಷ್ಟು ತ್ರಾಸದಾಯಕ. ಸರ್ಕಾರಗಳು ಯಾರು ಪರ ಎಂದು ಬೆತ್ತಲೆ ತೋರಿಸಿಕೊಂಡಿವೆ.
ಈಗಲಾದರೂ ಕಾಲ ಮಿಂಚಿಲ್ಲ ಕಟಾವು ಮಾಡಿದ ಭತ್ತ ಒಳ್ಳೆಯ ಗುಣಮಟ್ಟದ್ದು ಆಗಿದೆ.3000-3500 ರೂಂ ದರ ನಿಗದಿ ಮಾಡಿದರೆ ರೈತ ಸಾಲಶೂಲದಿಂದಮುಕ್ತಿ ಆಗಬಹುದು. ಭದ್ರಾ ನೀರು ಬೇಸಿಗೆ ಕಾಲದಲ್ಲಿ ಕೊಡುವುದೇ ಇಲ್ಲ ಎಂದು ಹೇಳಿರುವುದು ರೈತ ವಿರೋಧಿ ನೀತಿ.
ಗುಂಡುರಾವ್ ಕಾಲಾವಧಿಯಲ್ಲಿ 158ಅಡಿ ನೀರಿದ್ದರೂ ಭದ್ರಾ ನೀರು ಹರಿಸಲಾಗಿರುವ ದಾಖಲೆ ಇದೆ. ಕಡೆ ಪಕ್ಷ ಈ ಭಾರಿಯ ಭತ್ಖಕ್ಕೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ, ಇಲ್ಲವೇ ಯಾವ ರೈತರ ಬಳಿ ಭತ್ತ ಖರೀದಿ ನಿಲ್ಲಿಸಿ. ರೈತರೇ ಸ್ವಂತ ಮಾರುಕಟ್ಟೆ ಹುಡುಕಿಕೊಳ್ಳುವ ಪ್ರಯತ್ನ ಮಾಡಲಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days ago
ಚನ್ನಗಿರಿ | ಅತಿಥಿ ಉಪನ್ಯಾಸಕರಿಂದ ಅನಿರ್ದಿಷ್ಟಾವಧಿ ಮುಷ್ಕರ ; ತಹಶೀಲ್ದಾರರಿಗೆ ಮನವಿ
-
ದಿನದ ಸುದ್ದಿ6 days ago
ದೇಹದಾಡ್ಯ ಸ್ಪರ್ಧೆ | ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಪ್ರೇಮ್ ಕುಮಾರ್ ಗೆ ‘ಮಿಸ್ಟರ್ ದಾವಣಗೆರೆ’ ಪ್ರಶಸ್ತಿ
-
ದಿನದ ಸುದ್ದಿ2 days ago
ಭಾರತೀಯರೆಲ್ಲರ ಪವಿತ್ರಗ್ರಂಥ ಭಾರತದ ಸಂವಿಧಾನ : ಡಾ.ಕೆ.ಎ.ಓಬಳೇಶ್
-
ದಿನದ ಸುದ್ದಿ4 days ago
ಸರ್ಕಾರಕ್ಕೆ ಸೆಡ್ಡು ಹೊಡೆದ ದಾವಣಗೆರೆ ರೈತರು
-
ದಿನದ ಸುದ್ದಿ1 day ago
ಮಹಿಳೆಗೆ ಮೀಸಲಾತಿ ಬೇಡ, ಸಮಾನ ಪ್ರಾತಿನಿಧ್ಯ ಕೊಡಿ : ಡಾ.ಜ್ಯೋತಿ ಟಿ.ಬಿ