Connect with us

ಸಿನಿ ಸುದ್ದಿ

ಜಂಟಲ್ಮನ್ ಕರ್ಣನಲ್ಲ ; ಕುಂಬಕರ್ಣ..!

Published

on

  • ಮಾಸ್ತಿ

ಚೆನ್ನಾಗಿ ನಿದ್ದೆ ಮಾಡಿದ್ರೆ ಯಾವುದೇ ಖಾಯಿಲೆನಾದ್ರೂ ವಾಸಿ ಆಗುತ್ತೆ ಅದ್ರೆ ಮಲಗಿರೋದೇ ಖಾಯಿಲೆ ಆದ್ರೆ ?
ಡಾಕ್ಟ್ರು ಹೇಳ್ತಾರೆ ಇವನಿಗೆ ಮಾರಕ ಖಾಯಿಲೆ ಇದೆ ದಿನದ ಇಪ್ಪತ್ನಾಲ್ಕು ತಾಸಲ್ಲಿ ಬರೋಬ್ಬರಿ ಹದಿನೆಂಟು ತಾಸು ಮಲಗಿರ್ತಾನೆ ಬರೀ ಆರು ತಾಸು ಮಾತ್ರ ಎದ್ದಿರ್ತಾನೆ ಅಂತ , ಆಗೊಬ್ಬ ಕೇಳ್ತಾನೆ ಅಲಾರಂ ಇಟ್ರು ಎದ್ದೇಳಲ್ವಾ ಅಂತ ? ಅದಕ್ಕೆ ಡಾಕ್ಟರ್ ‘ ಅಲಾರಂ ಅಲ್ಲ ಅಲ್ಲಾ ರಾಮ್ ಇಬ್ರು ಬಂದ್ರು ಇವನು ಎದ್ದೇಳಲ್ಲ !.

ಇದನ್ನ ಮಾರಕ ಖಾಯಿಲೆ ಅಂತೇಳೋ ಬದಲು ಮಂಪರು ಖಾಯಿಲೆ ಅಂತನ್ನಬಹುದು .ಬರೀ ಆರು ತಾಸಲ್ಲಿ ಅವನು ರೆಡಿಯಾಗ್ಬೇಕು ಕೆಲಸಕ್ಕೋಗ್ಬೇಕು ತಿನ್ನಬೇಕು ಟ್ರೀಟ್ಮೆಂಟ್ ತಗೋಬೇಕು ಒಂದಾ ಎರಡಾ, ಇವನಿಗೊಂದು ಸಣ್ಣ ಕುಟುಂಬ , ಇದರ ಮದ್ಯೆ ಇವನದೊಂದು ಲವ್ ಸ್ಟೋರಿ , ಸಮಯ ಒದಗಿಸಲಕ್ಕಾಗದೇ ಕೆಲಸ ಬಿಡ್ತಾನೆ , ಬಾಸ್ ಕೇಳ್ತಾನೆ ಅಲ್ಲಯ್ಯ ಯಾರಾದ್ರೂ ಲವ್ ಗೋಸ್ಕರ ಕೆಲಸ ಬಿಡ್ತಾರ ? ಅದಕ್ಕೆ ಹೀರೋ ಹೇಳ್ತಾನೆ ಲವ್ಗೋಸ್ಕರ ಪ್ರಾಣಾನೇ ಬಿಡ್ತಾರೆ ಅಂತದ್ರಲ್ಲಿ ಕೆಲಸ ಬಿಟ್ರೆ ಏನು ?. ದೇವರೇ ಅನ್ಯಾಯವೆಸಗಿರುವ ಈ ರೋಗಿಯ ಬದುಕಿನಲ್ಲಿ ಎದುರಾಗುವ ಸವಾಲುಗಳೇನು ಅದನ್ನವನು ಎದುರಿಸುವ ರೀತಿ ಏನು ಇದೇ ಈ ಸಿನಿಮಾದ ತಿರುಳು.

ಜಡೇಶ್ ಕುಮಾರ್ ಹಂಪಿ ವಯಸ್ಸಲ್ಲಿ ಅಂತಹ ಹಿರಿಯನಲ್ಲದಿದ್ದರೂ ಈ ತರಹದ ಮೆಚ್ಯೂರ್ಡ್ ಥ್ರಿಲ್ಲಿಂಗ್ ಸ್ಟೋರಿ ಮಾಡಿಕೊಂಡು ಚೆಂದದ ಸಿನಿಮಾ ಮಾಡಿದ್ದಾರೆ, ಅದಕ್ಕೆ ಅವರ ಗುರುಗಳಾದ ಗುರುದೇಶ್ಪಾಂಡೆ ಅವರೇ ಹಣ ಹೂಡಿದ್ದಾರೆ, ಪ್ರಜ್ವಲ್ ಈ ಸಿನಿಮಾದಲ್ಲಿ ತುಂಬಾನೇ ಚೆನ್ನಾಗಿ ಕಾಣ್ತಾರೆ, ಪಾತ್ರದಲ್ಲಿ ಮಲಗಿದ್ರೂ ಪಾತ್ರಪೋಷಣೆಯಲ್ಲಿ ಮಿಂದೆದ್ದಿದ್ದಾರೆ, ಪಾತ್ರದಲ್ಲಿ ಮಾಗಿದ್ದಾರೆ ಪಾತ್ರಕ್ಕಾಗಿ ಬಾಗಿದ್ದಾರೆ.

ನಿಶ್ವಿಕ ಅಪರೂಪದ ಅಲಾರಂ ಪೀಸ್ನಂತೆ ಸುಂದರವಾಗಿ, ಇಂಚರದಷ್ಟೇ ಇಂಪಾಗಿ ಸದ್ದು ಮಾಡುತ್ತಾರೆ. ಆರೂರು ಸುಧಾಕರ್ ಶೆಟ್ಟರ ಸಿನಿಮಾಟೋಗ್ರಫಿ ನೂರೂರಿನವರನ್ನು ಒಪ್ಪಿಸುವಂತಿದೆ, ತಾಂತ್ರಿಕತೆ ಉತ್ಕೃಷ್ಟವಾಗಿದೆ, ಅವರೇನು ಅಂತೇಳಲು ಸೆಲ್ಫಿ ಫೈಟ್ನಲ್ಲಿ ಅವರು ಮಾಡಿರುವ ಲೈಟಿಂಗ್ ಮತ್ತು ಕ್ಯಾಮರಾವನ್ನಾಡಿಸಿರುವ ರೀತಿಯೇ ಉದಾಹರಣೆ, ಸಾಹಸದಲ್ಲಾಗಲೀ ಸಂಗೀತದಲ್ಲಾಗಲಿ , ಹಾಸ್ಯದಲ್ಲಾಗಲಿ ಲಾಸ್ಯದಲ್ಲಾಗಲೀ, ಗಾತ್ರದ ಕ್ಯಾಮರಾವನ್ನು ಪಾತ್ರವನ್ನಾಗಿಸಿದ್ದಾರೆ.

ಸಿಕ್ಕ ಸಮಯದಲ್ಲೇ ಕತ್ತಲನ್ನೂತು ಬೆಳಕನ್ನು ಬೆಳೆದಿದ್ದಾರೆಂದರೆ ಸೋಜಿಗವಲ್ಲ. ಅಜನೀಶರ ಸಂಗೀತ ನಿಜಕ್ಕೂ ನಿದ್ದೆಕತೆಯಲ್ಲೂ ಲಾಲಿ ಹಾಡಿಸುತ್ತೆ, ಮಂಪರಲ್ಲೂ ಮನರಂಜಿಸುತ್ತೆ, ಹಿನ್ನೆಲೆಸಂಗೀತದಲ್ಲಿ ನಿಮ್ಮಿಂದೆ ನಾನಿದೀನಿ ಅಂತ ಧೈರ್ಯ ತುಂಬುತ್ತೆ , ಸಂಚಿತ್ ಹೆಗ್ಗಡೆಯೆಂಬ ” ಉಸಿರಾಡುವ ಮೈಕು ” ಕಿವಿಗಲ್ಲ ಮನಸ್ಸಿಗಿಡಿಸುವಂತಾಡಿದ್ದಾನೆ.

ಬರುವ ಎಲ್ಲಾ ಪಾತ್ರಗಳೂ ಅವಶ್ಯಕಥೆಯ ಹಾಗೂ ಜಡೇಶರ ಕಥೆಯ ಚೌಕಟ್ಟಿನಲ್ಲೇ ಇದೆ. ಸಂಚಾರಿ ವಿಜಯ್ ಖಾಕಿ ತೊಟ್ಟು ಖಡಕ್ ಪಾತ್ರದಲ್ಲಿ ಕಾಣಿಸಿದ್ದಾರೆ. ಮನೆಯಲ್ಲೊಂದು ಮಗು ಇದ್ದರೆ ಎಂಥಾವ್ರಿಗೂ ಮನೆ ಕಡೆ ಹೋಗ್ಬೇಕನ್ನಿಸುತ್ತದೆ ಹಾಗೆಯೇ ಬೇಬಿ ಅರಾಧ್ಯ ಎಂಬ ಆರು ವರುಷದ ಮಗು ಒಂದು ಪಾತ್ರ ಮಾಡಿದೆ ನಿಜಕ್ಕೂ ಆ ಪುಟ್ಟ ಪಾತ್ರಕ್ಕೆ ಈ ಹುಡುಗಿ ದೊಡ್ಡ ಮೆರಗು ತುಂಬಿದ್ದಾಳೆ. ಭಾವುಕಳಾದರಂತೂ ನಿರ್ಭಾವುಕರ ಕಣ್ಣಲ್ಲಿಯೂ ನೀರು ತುಂಬಿಸುತ್ತಾಳೆ .

ಕಿರುತೆರೆಯ ನಟ ಅರ್ಜುನ್ ಹಿರಿತೆರೆಯಲ್ಲಿ ಆರ್ಭಟಿಸಿದ್ದಾರೆ. ಅನಿಲ್ ಯಾದವ್ ಚಿಕ್ಕ ಪಾತ್ರವನ್ನು ಚೊಕ್ಕವಾಗಿಸಿದ್ದರೆ ಪ್ರಶಾಂತ್ ಪಾತ್ರವನ್ನು ಸಿದ್ದಿಸಿದ್ದಾರೆ. ಮಿಕ್ಕಂತೆ ಜಡೇಶ್ ವೆಂಕಿಯ ಸಂಕಲನವನ್ನು ಅತ್ಯುತ್ತಮವಾಗಿ ಉಪಯೋಗಿಸಿಕೊಂಡಿದ್ದಾರೆ. ಜಂಟಲ್ಮನ್ ಅಂದ್ರೆ ಸಂಭಾವಿತ, ಸಭ್ಯಸ್ಥ , ಸುಸಂಸ್ಕೃತ. ನಂಬಿ ಈ ಸಿನಿಮಾ ಸಹ ಇವುಗಳಷ್ಟೇ ಅರ್ಥಗರ್ಭಿತವಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

‘ಸಪ್ತ ಸಾಗರದಾಚೆ ಎಲ್ಲೋ – ಸೈಡ್‍ ಬಿ’ ಚಿತ್ರದ ಟಿಕೆಟ್‍ ಮೇಲೆ ಶೆ.20ರಷ್ಟು ಕಡಿತ

Published

on

ಸುದ್ದಿದಿನ ಡೆಸ್ಕ್ : ರಕ್ಷಿತ್‍ ಶೆಟ್ಟಿ ಮತ್ತು ರುಕ್ಷಿಣಿ ವಸಂತ್‍ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ – ಸೈಡ್‍ ಬಿ’ ಚಿತ್ರವು ಕಳೆದ ಶುಕ್ರವಾರ ಬಿಡುಗಡೆಯಾಗಿ, ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ.

ಈ ಮಧ್ಯೆ, ಇನ್ನಷ್ಟು ಹೆಚ್ಚು ಜನರನ್ನು ಚಿತ್ರಮಂದಿರಗಳಿಗೆ ಕರೆತರುವ ನಿಟ್ಟಿನಲ್ಲಿ ಚಿತ್ರತಂಡ ಇಂದಿನಿಂದ ಪ್ರತಿ ಟಿಕೆಟ್‍ ಶೇ. 20ರಷ್ಟು ರಿಯಾಯ್ತಿಯನ್ನು ಚಿತ್ರತಂಡ ಘೋಷಿಸಿದೆ. ಈ ಚಿತ್ರವನ್ನು ಹೇಮಂತ್‍ ರಾವ್ ನಿರ್ದೇಶಿಸಿದ್ದು, ಗೋಪಾಲಕೃಷ್ಣ ದೇಶಪಾಂಡೆ, ಚೈತ್ರಾ ಆಚಾರ್‍, ಅಚ್ಯುತ್‍ ಕುಮಾರ್‍, ರಮೇಶ್‍ ಅರವಿಂದ್‍ ಮುಂತಾದವರು ನಟಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ನೋಡಿದ ಮೊದಲ‌ ಪ್ರೇಕ್ಷಕ ದರ್ಶನ್

Published

on

ಸುದ್ದಿದಿನ ಡೆಸ್ಕ್ : ಸೂರಿ ನಿರ್ದೇಶನದಲ್ಲಿ ಅಭಿಷೇಕ್‍ ಅಂಬರೀಶ್‍ ಅಭಿನಯಿಸಿರುವ ‘ಬ್ಯಾಡ್‍ ಮ್ಯಾನರ್ಸ್’ ಚಿತ್ರವು ಇದೇ ನ.24ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಈ ಮಧ್ಯೆ, ಇತ್ತೀಚೆಗೆ ಚಿತ್ರತಂಡ ಆಯೋಜಿಸಿದ್ದ ವಿಶೇಷ ಪ್ರದರ್ಶನದಲ್ಲಿ ದರ್ಶನ್‍ ಮತ್ತು ಸುಮಲತಾ ಅಂಬರೀಷ್‍ ಅವರು ಚಿತ್ರವನ್ನು ನೋಡಿದ್ದಾರೆ. ಚಿತ್ರದ ಬಗ್ಗೆ ಖುಷಿಯಿಂದ ಮಾತನಾಡಿರುವ ದರ್ಶನ್‍, ಅಭಿ ಬೆನ್ನಿಗೆ ‘ನಿಮ್ಮ‌ಪ್ರೀತಿಯ ದಾಸ’ ಎಂದು ಬರೆದು 5ಕ್ಕೆ 5 ಸ್ಟಾರ್ ಗಳನ್ನ ಕೊಟ್ಟಿದ್ದಾರೆ.

“ಈ ಸಿನಿಮಾದಲ್ಲಿ ನೀವು ರಿಯಲ್ ರೆಬೆಲ್ ಸ್ಟಾರ್‍ನ ನೋಡ್ತೀರಿ. ಹೆಮ್ಮೆಯಾಗ್ತಿದೆ ಎರಡನೇ ಸಿನಿಮಾದಲ್ಲಿ ಈ ಲೆವ್ವೆಲ್ಲಿಗೆ ಅಭಿ ಮಾಗಿರೋದು. ಸಿನಿಮಾ ಬೇರೆ ಲೆವ್ವಲ್ ಇದೆ. ದೊಡ್ಡ ಯಶಸ್ಸು ಇದಕ್ಕೆ ಖಂಡಿತ ಧಕ್ಕಲಿದೆ’ ಎಂದು ಬರೆಯುವ ಮೂಲಕ ದರ್ಶನ್‍ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

10,000 ಅಡಿ ಉದ್ದದ ‘ಘೋಸ್ಟ್’ ಪೋಸ್ಟರ್ ಬಿಡುಗಡೆ

Published

on

ಸುದ್ದಿದಿನ ಡೆಸ್ಕ್ : ಶಿವರಾಜಕುಮಾರ್‍ ಅಭಿನಯದ ‘ಘೋಸ್ಟ್’ ಚಿತ್ರವು ಈಗಾಗಲೇ ನವೆಂಬರ್‌ 17ರಂದು ಜೀ5ನಲ್ಲಿ ಬಿಡುಗಡೆಯಾಗಿದೆ.

ಈ ಚಿತ್ರದ ಪ್ರಮೋಷನ್ಗೆ ಬರೋಬ್ಬರಿ 10 ಸಾವಿರ ಚದರ ಅಡಿಯ ‘ಘೋಸ್ಟ್’ ಪೋಸ್ಟರನ್ನು ಜೀ5 ಬಿಡುಗಡೆ ಮಾಡಿದೆ. ಜಯನಗರದ ಎಂ.ಇ.ಎಸ್ ಗ್ರೌಂಡ್ ನಲ್ಲಿ ‘ಘೋಸ್ಟ್’ ಸಿನಿಮಾದ 10,000 ಅಡಿ ಪೋಸ್ಟರ್ ಅನಾವರಣ ಮಾಡಲಾಗಿದೆ. ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾಗೆ ಬ್ಯಾನರ್, ಪೋಸ್ಟರ್ ಹಾಕೋದು ಸಹಜ. ಆದರೆ, ಈ ಬಾರಿ ಒಟಿಟಿ ರಿಲೀಸ್‌ಗೆ ಪೋಸ್ಟರ್ ಹಾಕಿ ವಿಭಿನ್ನವಾಗಿ ಪ್ರಚಾರ ಮಾಡಿದೆ ಜೀ ಕನ್ನಡ.

ಸಂದೇಶ್‍ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ‘ಘೋಸ್ಟ್’ ಚಿತ್ರವನ್ನು ಆರ್‍.ಜೆ. ಶ್ರೀನಿ ಬರೆದು, ನಿರ್ದೇಶಿಸಿದ್ದು, ಅರ್ಜುನ್‌ ಜನ್ಯಾ ಸಂಗೀತವಿದೆ. ಶಿವರಾಜಕುಮಾರ್ ಜೊತೆ ಮಲಯಾಳಂ ನಟ ಜಯರಾಮ್‌, ಹಿಂದಿ ನಟ ಅನುಪಮ್‌ ಖೇರ್‌, ಅರ್ಚನಾ ಜೋಯಿಸ್‌, ಸತ್ಯಪ್ರಕಾಶ್‌, ನಿರ್ದೇಶಕ ಎಂಜಿ ಶ್ರೀನಿವಾಸ್‌ ಹಾಗೂ ಇನ್ನಿತರರು ನಟಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ7 days ago

ಮಹಿಳೆಗೆ ಮೀಸಲಾತಿ ಬೇಡ, ಸಮಾನ ಪ್ರಾತಿನಿಧ್ಯ ಕೊಡಿ : ಡಾ.ಜ್ಯೋತಿ ಟಿ.ಬಿ

ಸುದ್ದಿದಿನ, ಚನ್ನಗಿರಿ (ಬಸವಾಪಟ್ಟಣ) : ಭಾರತೀಯ ಸಮಾಜದಲ್ಲಿ ಮೀಸಲಾತಿಯಿಂದ ಮಾತ್ರ ಮಹಿಳಾ ಪ್ರಗತಿ ಸಾಧ್ಯವಿಲ್ಲ. ಅವಳಿಗೆ ಪುರುಷನಂತೆ ಸಮಾನವಾದ ಪ್ರಾತಿನಿಧ್ಯ ನೀಡಿದಲ್ಲಿ‌ ಮಾತ್ರವೇ ಮಹಿಳಾ ಪ್ರಗತಿ ಸಾಧ್ಯ....

ದಿನದ ಸುದ್ದಿ1 week ago

ಭಾರತೀಯರೆಲ್ಲರ ಪವಿತ್ರಗ್ರಂಥ ಭಾರತದ ಸಂವಿಧಾನ : ಡಾ.ಕೆ.ಎ.ಓಬಳೇಶ್

ಸುದ್ದಿದಿನ,ದಾವಣಗೆರೆ : ಸಂವಿಧಾನ ಪೂರ್ವದ ಭಾರತದ ಸ್ಥಿತಿಗತಿ ಹಾಗೂ ಸಂವಿಧಾನದ ನಂತರ ಭಾರತದಲ್ಲಾದ ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಬದಲಾವಣೆಗ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಹಾಗೆಯೇ...

ದಿನದ ಸುದ್ದಿ1 week ago

ಸರ್ಕಾರಕ್ಕೆ ಸೆಡ್ಡು ಹೊಡೆದ ದಾವಣಗೆರೆ ರೈತರು

ಪುರಂದರ್ ಲೋಕಿಕೆರೆ ಸುದ್ದಿದಿನ, ದಾವಣಗೆರೆ : ಸರ್ಕಾರದ ಭದ್ರಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಇಲಾಖೆಯ ಚಿತಾವಣೆಗೆ ಸೆಡ್ಡು ಹೊಡೆದು ಕೇವಲ 110-120 ದಿನಗಳ ಒಳಗಾಗಿಅಲ್ಪಾವಧಿ ತಳಿ ನಾಟಿ...

ದಿನದ ಸುದ್ದಿ1 week ago

ಚನ್ನಗಿರಿ | ಅತಿಥಿ ಉಪನ್ಯಾಸಕರಿಂದ ಅನಿರ್ದಿಷ್ಟಾವಧಿ ಮುಷ್ಕರ ; ತಹಶೀಲ್ದಾರರಿಗೆ ಮನವಿ

ಸುದ್ದಿದಿನ, ಚನ್ನಗಿರಿ : ಪಟ್ಟಣದ ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ತಮ್ಮ ಸೇವಾ ಖಾಯಂಯಾತಿ ಆಗಿ ಸರ್ಕಾರಕ್ಕೆ ಒತ್ತಾಯಿಸಿ ಶುಕ್ರವಾರ...

ದಿನದ ಸುದ್ದಿ2 weeks ago

ದೇಹದಾಡ್ಯ ಸ್ಪರ್ಧೆ | ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಪ್ರೇಮ್ ಕುಮಾರ್ ಗೆ ‘ಮಿಸ್ಟರ್ ದಾವಣಗೆರೆ’ ಪ್ರಶಸ್ತಿ

ಸುದ್ದಿದಿನ, ಚನ್ನಗಿರಿ : ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿಎ ವಿದ್ಯಾರ್ಥಿ ಪ್ರೇಮ್ ಕುಮಾರ್ ದಾವಣಗೆರೆ ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಸರ್ಕಾರಿ ಪ್ರಥಮ...

ದಿನದ ಸುದ್ದಿ2 weeks ago

‘ಸಪ್ತ ಸಾಗರದಾಚೆ ಎಲ್ಲೋ – ಸೈಡ್‍ ಬಿ’ ಚಿತ್ರದ ಟಿಕೆಟ್‍ ಮೇಲೆ ಶೆ.20ರಷ್ಟು ಕಡಿತ

ಸುದ್ದಿದಿನ ಡೆಸ್ಕ್ : ರಕ್ಷಿತ್‍ ಶೆಟ್ಟಿ ಮತ್ತು ರುಕ್ಷಿಣಿ ವಸಂತ್‍ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ – ಸೈಡ್‍ ಬಿ’ ಚಿತ್ರವು ಕಳೆದ ಶುಕ್ರವಾರ ಬಿಡುಗಡೆಯಾಗಿ, ಯಶಸ್ವಿಯಾಗಿ...

ದಿನದ ಸುದ್ದಿ2 weeks ago

‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ನೋಡಿದ ಮೊದಲ‌ ಪ್ರೇಕ್ಷಕ ದರ್ಶನ್

ಸುದ್ದಿದಿನ ಡೆಸ್ಕ್ : ಸೂರಿ ನಿರ್ದೇಶನದಲ್ಲಿ ಅಭಿಷೇಕ್‍ ಅಂಬರೀಶ್‍ ಅಭಿನಯಿಸಿರುವ ‘ಬ್ಯಾಡ್‍ ಮ್ಯಾನರ್ಸ್’ ಚಿತ್ರವು ಇದೇ ನ.24ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಮಧ್ಯೆ, ಇತ್ತೀಚೆಗೆ ಚಿತ್ರತಂಡ ಆಯೋಜಿಸಿದ್ದ...

ದಿನದ ಸುದ್ದಿ2 weeks ago

ಕವಿತೆ | ಮಣ್ಣ ಮಕ್ಕಳು

ಸಿ.ಕೃಷ್ಣನಾಯಕ್, ಆಡಳಿತಾಧಿಕಾರಿ, ಐಟಿಐ ಕಾಲೇಜು ದಾವಣಗೆರೆ ಮಣ್ಣ ಮಕ್ಕಳು ನಾವು ಹಗಳಿರುಳೆನ್ನದೆ ಬೆವರು ಬಸಿದು ಹಸಿದ ಹೊಟ್ಟೆಯಲಿ ಉಸಿರು ಹಿಡಿದವರು ಕಸದಲಿ ರಸ ತೆಗದು ಬದುಕಿನುದ್ದಕ್ಕೂ ಉಳ್ಳವರ...

ದಿನದ ಸುದ್ದಿ2 weeks ago

10,000 ಅಡಿ ಉದ್ದದ ‘ಘೋಸ್ಟ್’ ಪೋಸ್ಟರ್ ಬಿಡುಗಡೆ

ಸುದ್ದಿದಿನ ಡೆಸ್ಕ್ : ಶಿವರಾಜಕುಮಾರ್‍ ಅಭಿನಯದ ‘ಘೋಸ್ಟ್’ ಚಿತ್ರವು ಈಗಾಗಲೇ ನವೆಂಬರ್‌ 17ರಂದು ಜೀ5ನಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದ ಪ್ರಮೋಷನ್ಗೆ ಬರೋಬ್ಬರಿ 10 ಸಾವಿರ ಚದರ ಅಡಿಯ...

ದಿನದ ಸುದ್ದಿ2 weeks ago

ಮ್ಯಾಸ ನಾಯಕ ಬುಡಕಟ್ಟನಲ್ಲಿ ದೀಪಾವಳಿ ಹಬ್ಬದ ಆಚರಣೆ

ಭಾರತ ತನ್ನ ಭೌಗೋಳಿಕ ಸ್ವರೂಪದಲ್ಲಿ ವೈವಿಧ್ಯತೆಯನ್ನು ಹೊಂದಿರುವಂತೆ ಅನೇಕ ಬಗೆಯ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿದೆ. ದೇಶದ ಪ್ರತಿಯೊಂದು ಸಮುದಾಯವು ಬದುಕಿನ ಕ್ರಮದಲ್ಲಿ ತನ್ನದೇ ಆದ ವೈವಿಧ್ಯತೆಯನ್ನು ಹೊಂದಿದ್ದು...

Trending