ಬಹಿರಂಗ
ರಮಾಬಾಯಿ ಅಂಬೇಡ್ಕರ್ ಹೇಗಿದ್ದರು..?
- ಡಾ.ಬಾಬು ಅಣದೂರೆ
ಈ ಜಗತ್ತಿನ ಯಾವ ನಾಯಕರಿಗೂ ಸಿಗದಂತಹ ತ್ಯಾಗಮಯಿ ಸತಿ. ಮಾತೆ “ರಮಾಬಾಯಿ”ಯವರು ಸಂಗಾತಿಯಾಗಿ ಅಂಬೇಡ್ಕರ್ ರವರಿಗೆ ಸಿಕ್ಕಿದ್ದೆ ಒಂದು ರೀತಿಯಲ್ಲಿ ಅಂಬೇಡ್ಕರ್ ಭಾರತದೇಶಕ್ಕೆ ಸಂವಿಧಾನ ರಚಿಸಿ ಆ ಮೂಲಕ ಸಮಸಮಾಜಕ್ಕೆ ಅಡಿಗಲ್ಲು ಹಾಕಲು ಕಾರಣವಾಯಿತು.
ರಮಾಬಾಯಿಯವರು ಮಹಾರಾಷ್ಟ್ರದ ದಾಭೋಳ ನಗರದ ಸಮುದ್ರ ದಂಡೆಯ ಪಕ್ಕದ ವಣಂದಗಾವ ಎಂಬ ಊರಿನ ಭಿಕೊ ವಲಂಗಕರ ಮತ್ತು ರುಕ್ಮಿಣಿ ಎಂಬ ದಂಪತಿಗಳ 2ನೇ ಮಗಳು. ತಂದೆಯದು ಹಡಗಿನಿಂದ ಮೀನಿನ ಬುಟ್ಟಿಯನ್ನು ಹೊರುವ ಕಾಯಕ. ಈ ಕೆಲಸದಿಂದ ಅವರಿಗೆ ಎದೆ ನೋವು ಬಂದು ತೀರಿಕೊಂಡರು.
ತಾಯಿ ರುಕ್ಮಿಣಿಯವರು ಸಹ ಅದೆ ಯೋಚನೆಯಲ್ಲಿಯೆ ತೀರಿಹೋದಾಗ, ಭಿಕೋ ವಲಂಗಕರನ ಅಣ್ಣ ಗೋಪಾಲ ಬಾಬಾ ಈ ರಮಾಬಾಯಿ ಮತ್ತು ಇವರ ತಂಗಿ, ತಮ್ಮನನ್ನು ಮುಂಬೈಗೆ ಕರೆದುಕೊಂಡು ಬಂದರು. ಅಲ್ಲಿ ಗೋಪಾಲ ಬಾಬಾ ಸೌದೆ ಡಿಪೊ ಒಂದರಲ್ಲಿ ಕೆಲಸ ಮಾಡುತ್ತಿದ್ದರು.
ಈ ವೇಳೆಗೆ ಅಂಬೇಡ್ಕರ್ ರವರು ತಂದೆ ರಾಮಜಿ ಸಕ್ಪಾಲರು ಅಂಬೇಡ್ಕರ್ರಿಗೆ 4-5 ಕಡೆ ವಧು ನೋಡಿ ರಮಾನೇ ನಮ್ಮ ಮನೆಗೆ ತಕ್ಕ ಸೊಸೆ, ಚಿಕ್ಕ ವಯಸ್ಸಿನಲ್ಲೆ ತಂದೆ-ತಾಯಿ ಕಳೆದುಕೊಂಡು ತುಂಬ ಕಷ್ಟ ಅನುಭವಿಸಿದ್ದಾಳೆ.
ಇಂಥವಳೆ ನಮಗೆ ಸೊಸೆಯಾಗಲಿ ಎಂದು, 1906 ರಲ್ಲಿ ಆ ಕಾಲಕ್ಕೆ ಅಸ್ಪೃಶ್ಯರಿಗೆ ಮದುವೆ ನಡೆಸಲು ಜಾಗ ಸಿಗದಿಲ್ಲದ್ದರ ಕಾರಣದಿಂದ ಮುಂಬೈ ನಗರದ ಬಾಯಖಳಿ ಮೀನಿನ ಮಾರುಕಟ್ಟೆಯಲ್ಲಿ ಜಾಗದಲ್ಲಿ 9ನೇ ವಯಸ್ಸಿನ ರಮಾಬಾಯಿ ಜೊತೆ ಮಧ್ಯರಾತ್ರಿಯಲ್ಲಿ 10ನೇ ತರಗತಿ ಪಾಸಾದ 17ನೇ ವಯಸ್ಸಿನ ಅಂಬೇಡ್ಕರ್ ಅವರಿಗೆ ವಿವಾಹ ನಡೆಸಿದರು.ಅಲ್ಲಿಂದಲೆ ಬಡತನದ ಕ್ರೂರತೆ ರಮಾಬಾಯಿಯವರಿಗೆ ಹೆಚ್ಚುತ್ತಾ ಹೋಯಿತು.
ಅಂಬೇಡ್ಕರ್ ರವರು ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿದ್ದಾಗ ಅವರ 2ನೇ ಮಗ ರಮೇಶ್, ಲಂಡನ್ನಲ್ಲಿದ್ದಾಗ ಗಂಗಾಧರ್, ಹಾಗೆಯೇ ಅವರ ಒಬ್ಬಳ ಮಗಳು ಇಂದು ಹಾಗೂ ಕೊನೆಯ ಮಗ ರಾಜರತ್ನ ಸಹ ಅಪೌಷ್ಠಿಕತೆ ಮತ್ತು ನಿಮೋನಿಯದಿಂದ ತೀವ್ರತರವಾಗಿ ಬಳಲಿ ತೀರಿಕೊಂಡರು.
ಇಂತಹ ಸನ್ನಿವೇಶದಲ್ಲಿ ಗಟ್ಟಿ ನಿರ್ಧಾರ ಮಾಡಿ,ಎದೆಯೊಡೆದು ಹೋಗುವ ದುಃಖವನ್ನು ತಾವೋಬ್ಬರೆ ಅನುಭವಿಸಿ ಬಾಬಾ ಸಾಹೇಬರಿಗೆ ಅವರ ಶಿಕ್ಷಣಕ್ಕೆ ಮತ್ತು ಹೋರಾಟಕ್ಕೆ ಯಾವುದೇ ಭಂಗ ಬರದಂತೆ ನಿಭಾಯಿಸಿದ ತ್ಯಾಗಮಯಿ ಮಾತ ರಮಾಬಾಯಿ.
ಈ ತಾಯಿ ಇಂತಹ ಸನ್ನಿವೇಶದಲ್ಲೂ ಅಂಬೇಡ್ಕರ್ರಿಗೆ ಕಳೆದು ಹೋದ ಮಕ್ಕಳ ಬಗ್ಗೆ ಚಿಂತಿಸಬೇಡಿ. ಕೋಟ್ಯಾಂತರ ಶೋಷಿತರ ಮಕ್ಕಳು ಕೂಡ ನಮ್ಮ ಮಕ್ಕಳೆ. ನಿಮ್ಮ ಅಭ್ಯಾಸದೊಳಗೆ ನಮ್ಮ ಮತ್ತು ಈ ದೇಶದ ಹಿತವಿದೆ ಎಂದು ಪತ್ರ ಬರೆಯುತ್ತಾರೆ.
ರಮಾಬಾಯಿಯವರು ಎಂತಹ ಸ್ವಾಭಿಮಾನಿ ಎಂದರೆ 1923 ರಲ್ಲಿ ಲಂಡನ್ನಿಂದ ಅಂಬೇಡ್ಕರ್ ಬ್ಯಾರಿಸ್ಟರ್ ಪದವಿ ಪಡೆದು ಭಾರತಕ್ಕೆ ಬಂದಾಗ, ಅಂಬೇಡ್ಕರ್ ಈ ದೇಶಕ್ಕೆ ಮೊಟ್ಟ ಮೊದಲ ಬ್ಯಾರಿಸ್ಟರ್. ಅವರನ್ನು ಮುಂಬೈ ಹಡಗು ನಿಲ್ದಾಣದಲ್ಲಿ ಸ್ವಾಗತಿಸಲು ಸಾವಿರಾರು ಜನ ಸೇರಿದ್ದರು.
ಆದರೆ ರಮಾಬಾಯಿಯವರಿಗೆ ಬಹಳ ಕಠಿಣ ಸ್ಥಿತಿ, ಕಾರಣ ಇರುವ ಸೀರೆ ಹರಿದು ಹೋಗಿತ್ತು. ನಾನು ಹೋಗದಿದ್ದರೆ ಹೇಗೆ ಎಂದು ಬೇರೆ ಗತಿಯಿಲ್ಲದೆ ಶಾಹು ಮಹಾರಾಜರು ಅಂಬೇಡ್ಕರ್ ರವರಿಗೆ ಸನ್ಮಾನಿಸಿ ನೀಡಿದ್ದ ಜರಿ ಶಾಲನ್ನು ಸೀರೆಯಾಗಿ ಉಟ್ಟುಕೊಂಡು ಹೋಗಿದ್ದರು. ಇಂತಹ ಸ್ವಾಭಿಮಾನ ಮಾನಸಿಕ ಹಿಂಸೆಯನ್ನು ಆ ತಾಯಿ ಹೇಗೆ ಅನುಭವಿಸಿರಬೇಕು.
ರಮಾಬಾಯಿಯವರು ತನ್ನ ಗಂಡ ಬ್ಯಾರಿಸ್ಟರ್ ಆಗಿದ್ದರು ಎಂತಹ ಸರಳ ಜೀವನ ನಡೆಸುತ್ತಿದ್ದರೆಂದರೆ, ಅದೆಷ್ಟೋ ದಿನಗಳು ಮಿತಿಯಾಗಿರುತ್ತಿದ್ದ ರೊಟ್ಟಿಗಳನ್ನು ಮಕ್ಕಳಿಗೆ ನೀಡಿ ಅರ್ಧರಾತ್ರಿಯವರೆಗೂ ಅಂಬೇಡ್ಕರ್ರನ್ನು ಕಾದು ಅವರು ತಿಂದು ಉಳಿದರೆ ಮಾತ್ರ ತಿನ್ನುತಿದ್ದರು.
ಇಲ್ಲವೆಂದರೆ ತಿಂದಂತೆ ನಟಿಸುತ್ತಿದ್ದರು. ಹಾಗಾಗಿ ಬಡತನ ಅವರ ಅಂಗಾಂಗಗಳನ್ನು ತಿನ್ನುತಿತ್ತು. ಒಂದೆರಡು ಬೆಂಕಿ ಪೊಟ್ಟಣದಲ್ಲೆ ತಿಂಗಳುಗಳನ್ನು ಉರುಳಸುತ್ತಿದ್ದರು. ಹರಿದ ಸೀರೆಯ ಜೊತೆಗೆ ಸಂಸಾರಕ್ಕೆ ತೇಪೆ ಹಾಕುವುದು ಅವರ ಬದುಕಾಗಿತ್ತು. ಉಪ್ಪು, ಖಾರ, ಕಾಳು ಕಡ್ಡಿಗಳ ಮಿತಿಯಲ್ಲಿಯೇ ಬದುಕು ನಡೆಯುತಿತ್ತು.
ಅಂಬೇಡ್ಕರ್ ರವರು ಬ್ಯಾರಿಸ್ಟರ್ ಪಡೆದಿದ್ದು, ಸಂಪ್ರದಾಯವಾದಿ ಸಮಾಜದಲ್ಲಿ ಅಸೂಯೆ ಮೂಡಿಸಿತ್ತು. ಬ್ಯಾರಿಸ್ಟರ್ ಓದಿದವನ ಹೆಂಡತಿ ವಿದೇಶಕ್ಕೆ ಹೋಗದೆ ಇಲ್ಲೇಕೆ ಸೌದೆಗಾಗಿ ಅಲೆಯುತ್ತಿದ್ದಾಳೆ, ಅದು ಬಿಸಿಲಿನಲ್ಲಿ ಬರಿಗಾಲಿನಲ್ಲಿ, ಹರಿದ ಪತ್ತು ಹಾಕಿದ ಸೀರೆಯಲ್ಲಿ, ಮೈ ಮೇಲೆ ಒಂದು ಒಡವೆಯು ಇಲ್ಲ ಎಂದು ಹಂಗಿಸುತ್ತಿದ್ದರು.
ಹಾಗಾಗಿ ರಮಾಬಾಯಿ ಈ ನಿಂದನೆಗಳಿಂದ ತಪ್ಪಿಸಿಕೊಳ್ಳಲು ಬೆಳಗಿನ ಜಾವದಲ್ಲಿ ಅಥವಾ ಮುಸ್ಸಂಜೆ ಮುಸುಕಿನಲ್ಲಿ ಮಾತ್ರ ಉರುವಲಿಗಾಗಿ ಅಲೆಯುತಿದ್ದರು. ಈ ತಾಯಿ ಬಾಬಾ ಸಾಹೇಬರನ್ನ ಹೇಗೆ ಅರ್ಥಮಾಡಿಕೊಂಡಿದ್ದರೆಂದರೆ, ಇವರ ಕೊನೆಯ ಮಗ ರಾಜರತ್ನ 1926 ಎಲ್ಲಿ ತೀರಿಕೊಂಡಾಗ ಮಹಾಡ್ ಸಮ್ಮೇಳನದ ಸಿದ್ಧತೆಯಲ್ಲಿ ಹೊರಗೆ ಹೋಗಿದ್ದ ಬಾಬಾ ಸಾಹೇಬರು ಮನೆಗೆ ಬರುತ್ತಾರೆ. ರಮಾಬಾಯಿಯವರು ಗೋಳಾಡುತ್ತಾ ಒದ್ದಾಡುತ್ತಿರುತ್ತಾರೆ.
ಅಕ್ಕಪಕ್ಕದ ಮನೆಯವರು ಬಂದು ರಮಾಬಾಯಿಯವರಿಗೆ ಸಾಂತ್ವಾನ ಹೇಳಿ ಶವ ಸಂಸ್ಕಾರಕ್ಕೆ ಸಿದ್ಧತೆ ನಡೆಸುವಾಗ ಅಂಬೇಡ್ಕರ್ ರವರ ಬಳಿ ಬಂದು ಮಗುವಿನ ಪಾಥಿರ್ವ ಶರೀರಕ್ಕೆ ಬಟ್ಟೆ ಹೊದಿಸಲು, ಹೊಸ ಬಟ್ಟೆ ತರಲು ಹಣ ಕೇಳಿದಾಗ ಅಂಬೇಡ್ಕರ್ ತಮ್ಮ ಬಳಿ ಹಣವಿಲ್ಲದೆ ವಿಚಲಿತರಾಗಿ ಒದ್ದಾಡುತ್ತಿರುವಾಗ, ತಮ್ಮನ್ನು ತಾನೆ ಸಮಾಧಾನ ಪಡಿಸಿಕೊಂಡ, ತಾಯಿ ರಮಾಬಾಯಿ ತನ್ನ ಹರಿದ ಸೀರೆಯಲ್ಲಿಯೆ ಸ್ವಲ್ಪ ಹರಿದು ಪಾರ್ಥಿವ ಶರೀರಕ್ಕೆ ಸುತ್ತಿ ಅಂತ್ಯಕ್ರಿಯೆಗೆ ಅಣಿಗೊಳಿಸಿ, ತನ್ನ ಗಂಡನ ಗೌರವಕ್ಕೆ ಚ್ಯುತಿ ಬರದಂತೆ ಕಾಪಾಡಿದ ಮಹಾಸತಿ.
ಈ ಜಗತ್ತಿನ ಯಾವ ನಾಯಕರಿಗೂ ಇಂತಹ ಸ್ಥಿತಿ ಬಂದಿಲ್ಲ. ಹಾಗೂ ಈ ಜಗತ್ತಿನ ಯಾವ ನಾಯಕರಿಗೂ ಇಂತಹ ತ್ಯಾಗಮಯಿ ಬಾಳ ಸಂಗಾತಿಯಾಗಿ ಸಿಕ್ಕಿಲ್ಲ. ಈ ತಾಯಿ ನಮ್ಮ ಕರ್ನಾಟಕಕ್ಕೆ ಬಂದಿದ್ದನ್ನು ನಾವಿಲ್ಲಿ ಸ್ಮರಿಸಿಕೊಳ್ಳಲೇಬೇಕು. ಈ ಘಟನೆಯನ್ನು ತಾಯ್ತನದ ಮಮತೆ, ಕರುಣೆಯ ಸೆಲೆ ಗೋಚರಿಸುತ್ತದೆ. ಅಂಬೇಡ್ಕರ್ ದುಂಡು ಮೇಜಿನ ಪರಿಷತ್ನ ಸಲುವಾಗಿ 1930 ರಲ್ಲಿ ಲಂಡನ್ಗೆ ಹೋಗುವಾಗ ರಮಾಬಾಯಿಯವರು ಅನಾರೋಗ್ಯ ಪೀಡಿತರಾಗಿದ್ದರು.
ಆಗ ಅಂಬೇಡ್ಕರ್ ರವರ ಹಿತೈಸಿಗಳಾದ ವರಾಳೆ ದಂಪತಿಗಳೊಂದಿಗೆ ರಮಾಬಾಯಿ ಧಾರವಾಡಕ್ಕೆ ಬರುತ್ತಾರೆ. ಧಾರವಾಡದ ಕೊಪ್ಪದ ಕೇರಿಯಲ್ಲಿ ಡಾ. ಪರಾಂಜಪೆ ಅನ್ನೊ ಆಯುರ್ವೇದ ಪಂಡಿತರು ಚಿಕಿತ್ಸೆ ನೀಡುತ್ತಾರೆ. ಈ ಹಿಂದೆ ಅಂಬೇಡ್ಕರ್ ರವರು ಧಾರವಾಡದಲ್ಲಿ ಬುದ್ಧರಕ್ಕಿತ ವಸತಿ ಶಾಲೆಯನ್ನು ಸ್ಥಾಪಿಸಿದ್ದರು. ಅದಕ್ಕೆ ವರಾಳೆಯವರೆ ವಾರ್ಡನ್ ಆಗಿದ್ದರು. ರಮಾಬಾಯಿಯವರಿಗೆ ಚಿಕಿತ್ಸೆಯಿಂದ ಸ್ವಲ್ಪ ಚೇತರಿಕೆ ಕಂಡಾಗ, ಬುದ್ಧರಕ್ಕಿತ ವಸತಿ ನಿಲಯಕ್ಕೆ ಹೋಗುತ್ತಾರೆ.
ಅಲ್ಲಿ ಮಕ್ಕಳು ತಿಂಡಿ ತಿಂದಿಲ್ಲ ಎಂಬುದನ್ನು ತಿಳಿದು, ವರಾಳೆಯವರನ್ನು ವಿಚಾರಿಸಿದಾಗ ಅವರು ಸರಕಾರದಿಂದ ಅನುಧಾನ ತಡವಾಗಿದೆ ಮತ್ತು ಅಂಗಡಿಯವನು ನಾವು ಬಾಕಿ ನೀಡಿದೆ ದವಸ ಧಾನ್ಯ ನೀಡುತ್ತಿಲ್ಲ ಎನ್ನುತ್ತಾರೆ. ಆಗ ಈ ನಿಲಯ ಬಾಬಾರು ಸ್ಥಾಪಿಸಿದ್ದು, ಇಲ್ಲಿರುವ ಎಲ್ಲಾ ಮಕ್ಕಳು ನಮ್ಮ ಮಕ್ಕಳೆ ಇವರ ತಾಯಿಯಾದ ನಾನು ಹೇಗೆ ಸುಮ್ಮನಿರಲಿ ಎಂದು ಕೈಗಳಲಿದ್ದ 4 ಬಂಗಾರದ ಬಳೆಗಳನ್ನು ವರಾಳೆಯವರಿಗೆ ನೀಡಿ ಇದನ್ನು ಒತ್ತೆಯಿಡಿ ಇಲ್ಲ ಮಾರಿ. ಅದರಲ್ಲಿ ಬಂದ ಹಣದಲ್ಲಿ ಊಟಕ್ಕೆ ವ್ಯವಸ್ಥೆ ಮಾಡಿ ಎಂದು ನುಡಿದ ಆ ತಾಯಿಯ ತಾಯ್ತನದ ಮಮತೆಯನ್ನು ನಾವು ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಈ ತಾಯಿಯೆ ಒಮ್ಮೆ ತ್ಯಾಗದ ಕುರಿತು ಅಂಬೇಡ್ಕರ್ ರವರು ಹೇಳಿದ ಕತೆಯನ್ನು ಒಂದು ಸಣ್ಣ ಸಭೆಯಲ್ಲಿ ಹೇಳುತ್ತಾರೆ. ಅದೇನೆಂದರೆ, ಗ್ರೀಕ್ ಪುರಾಣದೊಳಗೆ ಬರುವ ಈ ಕತೆಯಲ್ಲಿ ಡಿಮೇಟರ್ ಅನ್ನೊದೇವತೆ, ಮಾನವ ರೂಪಧರಿಸಿ ಭೂಮಿಗೆ ಬಂದಾಗ ಇಲ್ಲಿರೋ ರಾಣಿ ಆ ಡಿಮೇಟರ್ಳನ್ನು, ತನ್ನ ದಾಸಿಯನ್ನಾಗಿ ನೇಮಿಸಿಕೊಳ್ಳುತ್ತಾಳೆ. ದಾಸಿಯ ಕೆಲಸ ಏನೆಂದರೆ ರಾಣಿಯ ಸಣ್ಣ ಮಗುವನ್ನು ನೋಡಿಕೊಳ್ಳೋದು, ಆದ್ರೆ ಮನುಷ್ಯ ರೂಪದಲ್ಲಿರುವ ಡಿಮೇಟರ್ಗೆ ಆ ಮಗುವನ್ನು ದೇವರು ಮಾಡಬೇಕು ಅನ್ನೋ ಆಸೆ.
ಅದಕ್ಕೆ ರಾತ್ರಿ ಎಲ್ಲಾ ಮಲಗಿದ ಮೇಲೆ ಮಗುವಿನ ಬಟ್ಟೆ ಎಲ್ಲಾ ತೆಗೆದು ಬಿಸಿ ಬೂದಿ ಮೇಲೆ ಮಲಗಿಸಿ ಅಭ್ಯಾಸ ಮಾಡಿಸ್ತಿದ್ಲು. ಅದು ಮಗುಗೆ ಅಭ್ಯಾಸ ಆಗ್ತಿತ್ತು. ತೇಜಸ್ಸು ಕಾಣ್ತಿತ್ತು. ಆದ್ರೆ ಒಂದುದಿನ ಆ ರಾಣಿ ಅಚಾನಕ್ಕಾಗಿ ಈ ಮಗುವಿನ ಕೋಣೆಗೆ ಬಂದು ನೋಡ್ತಾಳೆ. ಇಲ್ಲಿ ನಡೆಯೋದ್ನೆಲ್ಲಾ ನೋಡಿ, ಹೆದರಿ ತನ್ನ ಕೂಸನ್ನ ಎತ್ಕೊಂಡು ಎದೆಗೆ ಅವಚಿಕೊಂಡು, ಆ ದಾಸಿನ ಕೆಲಸದಿಂದ ಓಡಿಸಿದ್ಲು.
ಇಲ್ಲಿ ರಾಣಿಗೆ ತನ್ನ ಮಗುವೇನೂ ಸಿಕ್ತು. ಆದರೆ ಸಾಮಥ್ರ್ಯ ಶಾಲಿ ದೇವರಾಗಬೇಕಿದ್ದ ದೇವರನ್ನು ಕಳೆದುಕೊಂಡಳು. ಅಂದರೆ ಬೆಂಕಿಲಿ ಸುಟ್ಟರೆ ದೈವತ್ವ ಬರಲ್ಲ. ಅಸ್ಪೃಶ್ಯರಾದ ನಾವು ಎಷ್ಟೇ ಕಷ್ಟ ಬಂದ್ರು ಹೋರಾಟದ ಹಾದಿ ಬಿಡಬಾರದು. ತ್ಯಾಗ ಮಾಡದೆ ನಮ್ಮ ಉದ್ಧಾರ ಸಾಧ್ಯವಿಲ್ಲ ಅಂತ ಮಾತು ಮುಗಿಸುತ್ತಾರೆ.
ಈ ತಾಯಿ ನಮಗೆ ಈ ದೇಶಕೋಸ್ಕರ ಮಾಡಿದ ತ್ಯಾಗವನ್ನು ನಾವು ನಮ್ಮ ಅಕ್ಕ ತಂಗಿಯರಿಗೆ, ಮಕ್ಕಳಿಗೆ ಮತ್ತು ಮಡದಿ, ಗೆಳತಿ ಎಲ್ಲರಿಗೂ ತಿಳಿಸಬೇಕಾಗಿದೆ. ನಮ್ಮ ಮಕ್ಕಳಿಗೆ ನೆಗಡಿಯಾದರೂ ರೇಗಾಡುವ, ಸೀರೆ ಕೊಡಿಸಲಿಲ್ಲವೆಂದರೆ ಮುನಿಸಿಕೊಳ್ಳುವ, ಈ ದಿನಕ್ಕೆ ಇಂತದ್ದೆ ಬೇಕೆಂದು ಕೇಳುವ, ಇಂದಿನ ನಮ್ಮವರಿಗೆ ಈ ತಾಯಿ ಕುರಿತು ತಿಳಿಸಬೇಕಾಗಿದೆ. ಹಾಗೆಯೇ ನಮಗೆ ಈ ತಾಯಿಯ ಮಾತೃತ್ವದ ಗುಣ ಬರಬೇಕಾಗಿದೆ.
ಈ ತಾಯಿಯ ತ್ಯಾಗದಿಂದಲೇ ನಮಗೆ ಪ್ರಬುದ್ಧ ಭಾರತ ನಿರ್ಮಾತೃ ಅಂಬೇಡ್ಕರ್ ಸಿಕ್ಕಿದ್ದು. ಹಾಗಾಗಿಯೇ ರಮಾಬಾಯಿಯ ತ್ಯಾಗವೆ ಅಂಬೇಡ್ಕರ್ ರವರ ಶಕ್ತಿ. ದಿನಾಂಕ 7, ಫೆಬ್ರವರಿ ಈ ಮಾತೆಯ ಜನ್ಮದಿನ. ಈ ನೆನಪಿನಲ್ಲಿ ಈ ತಾಯಿಯ ಚೇತನ ನಮ್ಮ ಆವರಿಸಲಿ. ನಮಗೆ ದಾರಿದೀಪವಾಗಲಿ.
(ಡಾ.ಬಾಬು ಅಣದೂರೆ
ಪ್ರಧಾನ ಕಾರ್ಯದರ್ಶಿಗಳು
ಭಾರತೀಯ ಬೌದ್ಧ ಮಹಾ ಸಭೆ
ಬೀದರ ಜಿಲ್ಲಾ ಶಾಖೆ
ಮೊಬೈಲ್:9880802287)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಭಾರತದ ಜನಸಂಖ್ಯೆ ವರವೋ..? ಶಾಪವೋ..?
- ಅಂಬಿಕಾ. ಕೆ
ಎಂ.ಎ. ಪ್ರಥಮ ವರ್ಷದ ವಿದ್ಯಾರ್ಥಿನಿ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಬೆಂಗಳೂರು ವಿಶ್ವವಿದ್ಯಾಲಯ
ವಿಶ್ವ ಸಂಸ್ಥೆಯು ಪಾಪುಲೇಷನ್ ಫಂಡ್ ಮಾಡಿರುವ ಅಂದಾಜಿನ ಪ್ರಕಾರ ಭಾರತವು ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎನಿಸಿಕೊಂಡಿದೆ.
ದೇಶದ ಒಟ್ಟು ಜನಸಂಖ್ಯೆಯು 142.86 ಕೋಟಿಗೆ ಏರಿಕೆಯಾಗಿದ್ದು, ಚೀನಾ ಎರಡನೇ ಸ್ಥಾನಕ್ಕೆ ಇಳಿದಿದೆ, ಇಂತಹದೊಂದು ಹಿರಿಮೆಗೆ ಭಾರತವು ಪಾತ್ರವಾಗಲಿದೆ ಎಂಬುದರ ಅರಿವು ಹಿಂದೆಯೇ ಇತ್ತು. ಹೊಸ ಭಾರತದ ಜನಸಂಖ್ಯೆಯ ಸ್ವರೂಪವೇನು ಮತ್ತು ಯಾವ ವಯೋ ಮಾನದವರು ಎಷ್ಟಿದ್ದಾರೆ. ಆದಾಯ ಮಟ್ಟ ಹೇಗಿದೆ, ಆದಾಯ ಹಂಚಿಕೆ ಹೇಗಿದೆ ಎಂಬುದರ ಕುರಿತು ಕೂಡ ಚರ್ಚೆಗಳು ನಡೆಯುತ್ತಿವೆ. ಒಟ್ಟು ಜನಸಂಖ್ಯೆಯ ಜತೆಗೆ ಈ ಎಲ್ಲಾ ಅಂಶಗಳು ಕೂಡ ಸರ್ಕಾರದ ನೀತಿಗಳು ಮತ್ತು ಕಾರ್ಯಕ್ರಮ ರೂಪಿಸುವಿಕೆ ಮೇಲೆ ಪ್ರಭಾವ ಬೀರುತ್ತವೆ. ರಾಜಕೀಯ ಪಕ್ಷಗಳು ಮತ್ತು ಗುಂಪುಗಳು ರಾಜಕೀಯ ಹಾಗೂ ಸಾಮಾಜಿಕ ಸ್ಥಾನಗಳನ್ನು ನಿರ್ಧರಿಸುವಲ್ಲಿಯೂ ಈ ಅಂಶಗಳು ಪಾತ್ರವಹಿಸುತ್ತವೆ ಭಾರತದಲ್ಲಿ ಗರಿಷ್ಠ ಸಂಖ್ಯೆಯು ಯುವ ಜನರಿದ್ದಾರೆ.
ಹಾಗೆಯೇ ಮುಂದುವರೆಯಲಿದೆ 15 ರಿಂದ 24 ವರ್ಷದೊಳಗಿನವರ ಸಂಖ್ಯೆಯು 25.4 ಕೋಟಿ ಎಂದು ಅಂದಾಜಿಸಲಾಗಿದೆ ಇನ್ನು ದೀರ್ಘಕಾಲ ಭಾರತವು ಈ ಸ್ಥಿತಿ ಕಾಯ್ದುಕೊಳ್ಳಲಿದೆ ಎಂಬುದರಲ್ಲಿಯೂ ಅನುಮಾನ ಇಲ್ಲ ಜನಸಂಖ್ಯೆಯಲ್ಲಿ ಜಗತ್ತಿನಲ್ಲಿ ಮೊದಲ ಸ್ಥಾನಕ್ಕೆ ಏರುವುದು, ಗೌರವ ಏನು ಅಲ್ಲ ಬದಲಿಗೆ ಇದು ದೇಶಕ್ಕೆ ಹಲವು ಸವಾಲುಗಳನ್ನು ಹುಟ್ಟುತ್ತದೆ ಜತೆಗೆ ಅವಕಾಶಗಳ ಬಾಗಿಗಳನ್ನು ತೆರೆಯುತ್ತದೆ ಆದರೆ, ಜನರನ್ನು ಸಕಾಲಿಕವಾಗಿ ಮತ್ತು ಪರಿಣಾಮಕಾರಿಯಾಗಿ ಬಲಿಸಿಕೊಳ್ಳದೆ ಇದ್ದರೆ ಜನಸಂಖ್ಯೆಯೇ ಶಾಪವಾಗಿ ದೊಡ್ಡ ಸವಾಲಾಗಿ ಪರಿಣಮಿಸಬಹುದು. ದೇಶ ಪ್ರತಿ ವರ್ಷವೂ ಹೆಚ್ಚು ಹೆಚ್ಚು ಜನರಿಗೆ ಆಹಾರ ಬಟ್ಟೆ ಶಿಕ್ಷಣ ಆರೋಗ್ಯ ಸೇವೆ ಉದ್ಯೋಗಾವಕಾಶಗಳನ್ನು ಒದಗಿಸಬೇಕಾಗುತ್ತದೆ.
ಹೀಗೆ ಮುಂದುವರೆದರೆ ಉದ್ಯೋಗಾವಕಾಶಗಳು ದೊರೆಯದೆ ಜನರ ಜೀವನ ಮಟ್ಟ ಸುಧಾರಿಸಿಕೊಳ್ಳುವುದು ಕಷ್ಟವೇ ಸರಿ ಕೆಲಸ ಮಾಡುವ ವಯೋಮಾನದ ಜನರನ್ನು ಸಮಂಜಸವಾಗಿ ಬಳಸಿಕೊಂಡರೇ ಮಾತ್ರ ಜನಸಂಖ್ಯೆಯು ದೇಶದ ಅಭಿವೃದ್ಧಿಗೆ ಪೂರಕವಾಗಿ ಪರಿಣಮಿಸುತ್ತದೆ. ದೇಶದಲ್ಲಿ ದೊಡ್ಡ ಸಂಖ್ಯೆಯ ಜನರಿಗೆ ಈಗಲೂ ಮೂಲ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗಿಲ್ಲ ಆದ್ದರಿಂದ ಎಲ್ಲಾ ಕ್ಷೇತ್ರಗಳಲ್ಲಿಯೂ ಸಂಬಂಧಿಸಿದ ನೀತಿಗಳು ಮತ್ತು ಕಾರ್ಯತಂತ್ರ ಗಳಿಗೆ ಸಂಬಂಧಿಸಿದ ಪ್ರಯತ್ನಗಳನ್ನು ನಡೆಸದೇ ಇದ್ದರೆ ಜನಸಂಖ್ಯೆ ಹೆಚ್ಚಳದ ಲಾಭವು ದೊರೆಯದೆ ಹೋಗಬಹುದು ಇದರ ಪರಿಣಾಮವಾಗಿ ಲಾಭದ ಹೆಸರಿನಲ್ಲಿ ನಷ್ಟವೇ ಹೆಚ್ಚು ಅದುವೇ ಒಂದು ಹೊರೆಯುವಾಗಬಹುದು.
ಯುವ ಜನರಿಗೆ ಸೌಲಭ್ಯಗಳು ಮತ್ತು ಅವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ಹೆಚ್ಚುತ್ತಲೇ ಇರುವ ಹಿರಿಯ ನಾಗರಿಕರ ಹಾರೈಕೆಯು ವ್ಯವಸ್ಥೆ ಮಾಡಬೇಕಿದೆ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವುದು ಮತ್ತು ಸವಾಲುಗಳನ್ನು ಎದುರಿಸುವುದು ಭಾರತೀಯರ ಹೊರೆಗಾರಿಕೆ ದೇಶದ ಜನರ ಅಗತ್ಯಗಳನ್ನು ಪೂರೈಸಲು ವಿಫಲವಾದರೆ, ಸಾಮಾಜಿಕ ಸಂಘರ್ಷ ಮತ್ತು ರಾಜಕೀಯ ದೃಷ್ಟಿ ಉಂಟಾಗಿ ಅದು ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು. ಮುಂದೆ ಜನಸಂಖ್ಯಾ ಸ್ಫೋಟವಾದರೂ ಆಶ್ಚರ್ಯ ಪಡಬೇಕಾಗಿಲ್ಲ ಈಗಿನ ಸನ್ನಿವೇಶದಲ್ಲಿ ದೊರಕುತ್ತಿರುವ ಸಂಪನ್ಮೂಲಗಳ ಗರಿಷ್ಠ ಬಳಕೆ ಮತ್ತು ಪರಿಣಾಮಕಾರಿ ಬಳಕೆ ಬಹಳ ಮಹತ್ವವಾಗಿದೆ.
ಮೀಸಲಾತಿ, ವಲಸೆ , ರಾಜಕೀಯ ಪ್ರಾತಿನಿಧ್ಯ ಸಂಪನ್ಮೂಲಗಳ ಹಂಚಿಕೆ ಮತ್ತು ಇದರ ವಿಚಾರಗಳು ಚರ್ಚೆಗೆ ಒಳಗಾಗುವ ಸಾಧ್ಯತೆ ಇದೆ ಸಮಾಜದ ಎಲ್ಲಾ ವರ್ಗಗಳನ್ನು ಸಮಾನವಾಗಿ ಒಳಗೊಳ್ಳುವ ಆರ್ಥಿಕ ಪ್ರಗತಿಯು ಸಾಧ್ಯವಾದರೆ ಜನಸಂಖ್ಯೆ ಏರಿಕೆ ಸವಾಲಾಗಿ ಪರಿಣಮಿಸಬಹುದು ಮಾನವ ಅಭಿವೃದ್ಧಿಯೇ ಅತ್ಯುತ್ತಮ ಕುಟುಂಬ ಕಲ್ಯಾಣ ಯೋಜನೆ ಇದರಿಂದ ಜನಸಂಖ್ಯೆಯ ಏರಿಕೆಯನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದು ಜನಸಂಖ್ಯೆ ಹೆಚ್ಚಳ ಯಾವುದೋ ಒಂದು ಸಮುದಾಯ ಕಾರಣ ಎಂದು ದೂಷಿಸುವ ಪ್ರವೃತ್ತಿಗೆ ಜ್ಞಾನದಾದ ಆಧಾರ ಇಲ್ಲದ ಪೂರ್ವಗ್ರಹ ಕಾರಣದಿಂದ ಮತ್ತು ಇದು ತಪ್ಪು ನಡವಳಿಕೆಯ ಜನಸಂಖ್ಯೆಗೆ ಸಂಬಂಧಿಸಿದ ಸವಾಲುಗಳನ್ನು ಉತ್ತಮವಾಗಿ ಮತ್ತು ಜಾಣ್ಮೆಯಿಂದ ನಿರ್ವಹಿಸಿದರೆ ಈ ಶತಮಾನವನ್ನು ಭಾರತದ ಶತಮಾನವನ್ನಾಗಿ ಪರಿವರ್ತಿಸುವ ಅವಕಾಶ ನಮ್ಮ ಮುಂದೆ ಇದೆ ಜನರೇ ನಮ್ಮ ದೇಶದ ಸಂಪನ್ಮೂಲವನ್ನಾಗಿ ಮಾರ್ಪಾಡು ಮಾಡಿಕೊಳ್ಳುವ ಅವಕಾಶ ನಮ್ಮ ನಿಮ್ಮೆಲ್ಲರ ಮೇಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಬಾಬಾ ಸಾಹೇಬ ಅಂಬೇಡ್ಕರರ ‘ಧ್ಯಾನ’ ಗಾಯನ ; ವಿನೂತನ
- ವೆನ್ನೆಲಾ ಕೆ.
ಎಂ.ಎ. ಪ್ರಥಮ ವರ್ಷದ ವಿದ್ಯಾರ್ಥಿನಿ,
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,
ಬೆಂಗಳೂರು ವಿಶ್ವವಿದ್ಯಾಲಯ,ಬೆಂಗಳೂರು
ಇತ್ತೀಚೆಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಅನನ್ಯ ಮಾಧ್ಯಮ ಮತ್ತು ಬೆಳ್ಳಿತೆರೆ ಸಂಸ್ಥೆಯ ವತಿಯಿಂದ ಆಯೋಜಿಸಿದ 132ನೇ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ ಜನುಮ ನಿಮಿತ್ತವಾಗಿ “ಧಾನ್ಯ” ‘ಗಾಯನವು’ ವಿನೂತನವಾದ ಈ ಕಾರ್ಯಕ್ರಮವು 5 ಘಂಟೆ, 1ನಿಮಿಷ, 14 ಸೆಕೆಂಡ್ ಗೆ ಆರಂಭವಾಗಿದ್ದು ಅವಿಸ್ಮರಣೀಯವಾದ ದಿನ, ಇದೊಂದು ಭಾರತ ಇತಿಹಾಸದ ಪುಟದ ಚರಿತ್ರೆಯಲ್ಲೇ ಹೊಸ ದಾಖಲೆಯೂ ಅಂತ ಹೇಳಬಹುದು.
ಈ ಕಾರ್ಯಕ್ರಮವನ್ನು ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ವು ಇಡೀ ಭಾರತದಲ್ಲೇ ಯಾರು ಮಾಡಿರದ ಈ ವಿನೂತವಾದ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಬೆಂಗಳೂರು ನಗರದಲ್ಲಿರುವ ಗಾಂಧಿ ಭವನದ ಆವರಣದಲ್ಲಿ ‘ಅನನ್ಯ ಸಂಸ್ಥೆ’ ವತಿಯಿಂದ 132 ನೇ ‘ವಿಶ್ವದ ವೀರ ವಿದ್ಯಾರ್ಥಿ ಹುಟ್ಟಿದ ದಿನ’ ಹಾಗೂ ‘ರಾಷ್ಟ್ರದ ಸ್ಫೂರ್ತಿಯ ದಿನ’ ‘ಸರ್ವ ಸಮುದಾಯದ ಶಕ್ತಿಯ ದಿನ’ ಇದೊಂದು ನಮ್ಮೆಲ್ಲರ ಹಬ್ಬದ ದಿನ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಇಂತಹ ಮೇರು ಶಿಖರ ಟ್ಯಾಗ್ ಲೈನ್ ಗಳಿಂದ ಅದ್ಭುತವಾಗಿ
ಆಯೋಜಿಸಿದ ಕಾರ್ಯಕ್ರಮಕ್ಕೆ ರಾಜ್ಯ ಕಂಡ ಪ್ರಸಿದ್ಧ ಐಪಿಎಸ್ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು, ಸಿನಿಮಾ ಸೆಲೆಬ್ರಿಟಿಗಳು, ಸಮಸ್ತ ವಿದ್ಯಾರ್ಥಿ ಸಮೂಹ, ಸಾಮಾಜಿಕ ನ್ಯಾಯದ ವಿಚಾರಶೀಲರು, ಬರಹಗಾರರು, ಪತ್ರಕರ್ತರು ಇನ್ನೂ ಅನೇಕ ಮುಂತಾದವರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಇದಕ್ಕೆ ಮುಖ್ಯ ಕಾರಣಕರ್ತರಾದ ಅನನ್ಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶ್ರೀ ರಾಂಪುರ ರಾಜೇಶ್ ರವರ ನಿರ್ದೇಶನದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿದ್ದು ಹೆಮ್ಮೆಯ ವಿಷಯ.
ಇದರ ಹಿನ್ನೆಲೆ: ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ದಲ್ಲಿ ಅತ್ಯುತ್ತಮ ಹಾಗೂ ಅತ್ಯಂತ ತುಂಬಾ ಮನಸ್ಸಿನಿಂದಲ್ಲೇ ವಿಶೇಷವಾದ ಆಸಕ್ತಿಯನ್ನು ಅಂಬೇಡ್ಕರ್ ರವರು ಸಂಗೀತ ಪ್ರಿಯರು ಹಾಗೂ ಅಂಬೇಡ್ಕರ್ ರವರು ಸುಶ್ರಾವ್ಯವಾಗಿ ವಯಲಿನ್ ನುಡಿಸುತ್ತಿದ್ದರು. ಹಾಗೇಯೆ ಇವರಿಗೆ ಚಿತ್ರಕಲೆಯೂ ಸಹ ಒಲಿದಿತ್ತು ಎಂಬುದು ಗಮನಾರ್ಹ ಸಂಗತಿ. ಇಂತಹ ವಿಷಯವನ್ನು ಯಾರು ಸಹ ಬೆಳಕು ಚೆಲ್ಲುವ ಸಾಹಸಕ್ಕೆ ಕೈ ಹಾಕಿ ಇರಲಿಲ್ಲ. ಇದೊಂದು ಅನನ್ಯ ಸಂಸ್ಥೆ ವತಿಯಿಂದ ಇಂತಹ ಕಾರ್ಯಕ್ರಮ ನಡೆಸಿಕೊಟ್ಟಿದ್ದು ಐತಿಹಾಸಿಕ ಚರಿತ್ರೆಗೆ ಮುನ್ನುಡಿವಾಗಿದೆ.
ಅಂಬೇಡ್ಕರ್ ರವರಿಗೆ ತಮ್ಮ ಬಿಡುವಿನ ವೇಳೆಯಲ್ಲಿ ಅದ್ಭುತವಾದ ಒಬ್ಬ ಸಂಗೀತ ಪ್ರಿಯರಾಗಿದ್ದರು. ಇವರು ಸುಶ್ರಾವ್ಯವಾಗಿ ವಯಲಿನ್ ನುಡಿಸುತ್ತಿದ್ದರು ಹಾಗೂ ವಿಶೇಷವಾಗಿ ಚಿತ್ರಕಲೆ ಸಹ ಸರಳವಾಗಿ ಮಾಡುವ ಮೂಲಕ ತಮ್ಮ ಮನದಲ್ಲಿ ಆಸಕ್ತಿ ಹೊಂದಿದ್ದರು. ಇನ್ನು ಹಲವಾರು ವಿಷಯದಲ್ಲಿ ಅಂದರೆ ಅಂಬೇಡ್ಕರ್ ರವರಿಗೆ ವಿಶೇಷವಾದ ಇವುಗಳಲ್ಲಿ ಆಸಕ್ತಿ ಮತ್ತು ಅಭಿರುಚಿಯನ್ನು ಹೊಂದಿದ್ದರು ಎಂಬುದನ್ನು ಮನಗಂಡ ಅನನ್ಯ ಸಂಸ್ಥೆಯ ವತಿಯಿಂದ ಆಯೋಜಿಸಿದ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮವು ಅತ್ಯುತ್ತಮವಾಗಿ ಮೂಡಿಬಂದಿದೆ.
ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮದಲ್ಲಿ ವಿಶೇಷವಾಗಿ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕರು ಹಾಗೂ ಚಿತ್ರ ಸಾಹಿತ್ಯಗಳು, ಅಂಬೇಡ್ಕರ್ ವಾದಿಗಳು ಮತ್ತು ಚಿತ್ರರಂಗದ ಬಹುಮುಖ ಪ್ರತಿಭೆ, ಮಹಾಗುರುಗಳಾದ ಡಾ. ಹಂಸಲೇಖ ರವರು ಹೊಸದಾಗಿ ಹಾಡನ್ನು ಬರೆದದ್ದು ತುಂಬಾ ಅವಿಸ್ಮರಣೀಯ ಅಂತ ಹೇಳಬಹುದು. ಇವರು ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರೊತ್ಸಾಹ ನೀಡಿದ್ದು, ಸರ್ವ ಸಮುದಾಯದಕ್ಕೆ ಹೊಸ ಶಕ್ತಿ ತುಂಬಿದ್ದು ಮೇರು ವ್ಯಕ್ತಿಯಾಗಿದ್ದಾರೆ.
ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮದಲ್ಲಿ ಮುಖ್ಯವಾದ ಅಂಶವೆಂದರೆ ಇದರಲ್ಲಿ ಒಟ್ಟು ನಾಲ್ಕು ಭಗವಾನ್ ಬುದ್ಧ, ಅಂಬೇಡ್ಕರ್, ಬಸವೇಶ್ವರ ಮುಂತಾದರವರನ್ನು ವಿಷಯಗಳನ್ನು ಪರಿಗಣಿಸಿ ಅಂಬೇಡ್ಕರ್ ಧ್ಯಾನ ಹಾಡುಗಳ ರಚಿಸಿವುದರಲ್ಲಿ ಪ್ರಮುಖವಾಗಿ ರಾಜ್ಯದ ಹೆಸರಾಂತ ಸಾಹಿತಿ, ಪ್ರಗತಿಪರ ಚಿಂತಕರು ಹಾಗೂ ಮಾಜಿ ಅಧ್ಯಕ್ಷರಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರಿನ ಪ್ರೊ.ಎಸ್.ಜಿ.ಸಿದ್ದರಾಮಯ್ಯನವರ
‘ಧೀ ಶಕ್ತಿಯೇ … ಜ್ಞಾನ ಪರ್ವತದ … ಧೀಮಂತ ಧೀಶಕ್ತಿಯೇ …
ಇಂತಹ ಸಾಲುಗಳನ್ನು, ಡಾ. ಕೈ.ವೈ.ನಾರಾಯಣಸ್ವಾಮಿರವರ ದೀಪಾ …. ಎಲ್ಲರೆದೆಯಲಿ … ಹಚ್ಚಿದ ದೀಪಾ .. ಭೂಪಾ … ಭೂಪಾ … ಭೀಮಾ ಭೂಪಾ .. ಬಾಬಾ .. ಸಾಹೇಬ್.. ಜೀವಸ್ವರವೇ … ಬಾಬಾ.. ಹಾಗೂ ರವಿ ಮರಿಯಪ್ಪರವರ ಹತ್ತು ಸಾವಿರ ವಯಲಿನನ್ನು … ವೀಣೆಗಳು ನೂರೆಂಟು … ಕೋಟಿ ಕೋಟಿ ಎದೆ ಸದ್ದಿನ ಡೊಳ್ಳು … ಸಂಯೋಜಿಸಿದರೇ .. ಸಂವಿಧಾನಾ … ಮತ್ತು ಚಿತ್ರ ಸಾಹಿತಿ, ಹೆಸರಾಂತ ಸಂಗೀತ ನಿರ್ದೇಶಕರು ಡಾ. ಹಂಸಲೇಖ ರವರು ನಿನ್ನ ಮೌನಾ … ದೀನ ಗಾನಾ… ನಿನ್ನ ಧ್ಯಾನಾ .. ಸಂವಿಧಾನಾ … ಈ ನಾಲ್ಕು ಅಂಬೇಡ್ಕರ್ ಧ್ಯಾನ ರಚನೆಗೆ ಇವರುಗಳ ಬರೆದಿರುವ ಅದ್ಭುತವಾದ ಅಂಬೇಡ್ಕರ್ ರವರ ಧ್ಯಾನ ಹಾಡುಗಳನ್ನು ನಮ್ಮ ಹಿಂದುಸ್ತಾನಿ ಸಂಗೀತ ಹಾಡುಗಳ ಮೂಲಕ ಕನ್ವರ್ಟ್ ಮಾಡುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿತು.
ಹಾಗೆಯೇ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮವು ಬಹಳಷ್ಟು ಯಶಸ್ವಿಯಾಗಬೇಕಾದರೆ ಈ ಮೊದಲು ಪುಟ್ಟರಾಜ ಗವಾಯಿಗಳ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ಶ್ರೀ ಡಿ. ಕುಮಾರ್ ದಾಸ್ ಅವರ ವಿದ್ವತ್ ಶರೀರದಲ್ಲಿ ‘ಧ್ಯಾನ ಗಾಯನ’ ಹಾಗೂ ಇವರ ತಂಡದ ವತಿಯಿಂದ ನಡೆಸಿಕೊಟ್ಟ ಅದ್ಭತವಾದ ಅಂಬೇಡ್ಕರ್ ರವರ ಧ್ಯಾನವು ಹಿಂದುಸ್ತಾನಿ ಸಂಗೀತದ ಕನ್ವರ್ಟ್ ಮಾಡುವ ಮುಖಾಂತರ ಈ ಹಾಡುಗಳನ್ನು ಬಹಳ ಸೊಗಸಾಗಿ ಮೂಡಿಬಂದಿದ್ದು ಹೊಸ ದಾಖಲೆಗೆ ಸೇರ್ಪಡೆಯಾಗಿದೆ.
ಇನ್ನು ಮುಂಬರುವ ದಿನಗಳಲ್ಲಿ ಅದಷ್ಟು ಹಲವಾರು ವಿನೂತನವಾದ ಭಗವಾನ್ ಬುದ್ಧರ, ಬಸವೇಶ್ವರರ ಹಾಗೂ ವಿಶ್ವದ ವೀರ ವಿದ್ಯಾರ್ಥಿಯಾದ ಮೇರು ರಾಷ್ಟ್ರದ
ನಾಯಕರಾದ ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ರವರ ಹಲವಾರು ಹಾಡುಗಳನ್ನು
ಅನನ್ಯ ಮಾಧ್ಯಮ ಮತ್ತು ಬೆಳ್ಳಿತೆರೆ ಸಂಸ್ಥೆಯ ವತಿಯಿಂದ ಆಯೋಜಿಸಿದರೆ ಇನ್ನುಷ್ಟು ಭಾರತದ ಇತಿಹಾಸದ ಪುಟಗಳಲ್ಲಿ ಮರೆತು ಹೋಗಿರುವ ಹಲವು ಬಗ್ಗೆ ದಾಖಲೆ ಇಲ್ಲದ ನೈಜ ಸಂಗತಿಗಳನ್ನು ಪುನಃ ಹೊಸ ದಾಖಲೆಗೆ ಉಪಯುಕ್ತವಾದ ವಿಶಿಷ್ಟವಾದ ಮೇರು ನಾಯಕನ
ಅಂಬೇಡ್ಕರ್ ರವರ ವಿಚಾರ ಧಾರೆಗಳು ತಾವು ಅನುಭವಿಸಿದ ನೋವು, ನಲಿವು, ಭಾರತದ ರಾಜ್ಯಾಂಗದ ಶಿಲ್ಪಿಯನ್ನು ಮುಂಬರುವ ದಿನಗಳಲ್ಲಿ ಹೊಸ ಪೀಳಿಗೆಯ ಪರಿಚಯಿಸುವ ಕೀರ್ತಿದಾಯಿಕವಾಗಲಿ ಮತ್ತು ಅದಷ್ಟು ಮುಂಬರುವ ದಿನಗಳಲ್ಲಿ ಅಂಬೇಡ್ಕರ್ ರವರ ಆಸಕ್ತಿದಾಯಕ ವಿಚಾರಗಳು ಹಾಗೂ ಸಂಗೀತದ ಬಗ್ಗೆ ಹಲವಾರು ಮಾಹಿತಿಗಳು ಸಮಸಮಸಮಾಜಕ್ಕೆ ತಲುಪುವ ವ್ಯವಸ್ಥೆಗೆ ಸಾಕ್ಷಿಯಾಗಲಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಬಹಿರಂಗ
ರಷ್ಯಾದಲ್ಲಿ ಓಂ – ಭರತಾಸ್- ರಾಮ – ರಾವಣ ಲಂಕೇಶ – ಮಾರೀಚ – ಸೀತ ನದಿಗಳು..!
- ಲಕ್ಷ್ಮೀಪತಿ ಕೋಲಾರ, ಸಂಶೋಧಕರು, ಸಂಸ್ಕೃತಿ ಚಿಂತಕರು, ಬೆಂಗಳೂರು
ಸ್ಲಾವ್ ಸಮುದಾಯದ ಲಿತುವೇನಿಯ, ಲಾತ್ವಿಯ, ಬೆಲಾರಸ್,ಉಕ್ರೇನ್ ಮತ್ತು ರಷಿಯಾದಂತಹ ದೇಶಗಳ ನದಿ,ನಗರಗಳು ಸಂಸ್ಕೃತ ಮೂಲದ ಹೆಸರುಗಳನ್ನೆ ಇಂದಿಗು ಉಳಿಸಿಕೊಂಡಿರುವುದು ಆ ಭಾಷೆ ಮತ್ತು ಸಂಬಂಧಿತ ಸಂಸ್ಕೃತಿಯೊಂದಿಗೆ ಅವು ಹಿಂದೊಮ್ಮೆ ಹೊಂದಿದ್ದ ಬಲವಾದ ನಂಟಿಗೆ ಸಾಕ್ಷಿಯಾಗಬಲ್ಲವು.
ಇದರೊಂದಿಗೆ ಉತ್ತರ ಭಾರತದ ಆರ್ಯ ವೈದಿಕರ ಭಾಷೆ ಸಂಸ್ಕೃತಿಯೊಂದಿಗೆ ಸ್ಲಾವ್ ಸಮುದಾಯಕ್ಕೆ ಎಷ್ಟು ನಿಕಟ ಸಂಬಂಧವಿತ್ತೆಂಬುದನ್ನು ಮತ್ತು ನಾಲ್ಕೈದು ಸಾವಿರ ವರ್ಷಗಳ ಹಿಂದೆ ಈ ಎಲ್ಲ ಆರ್ಯ ಸಮುದಾಯಗಳು ಒಟ್ಟಿಗೆ ಒಂದೆಡೆಯೇ ಕಳ್ಳುಬಳ್ಳಿಗಳಾಗಿ ಜೀವಿಸಿದ್ದರೆಂಬುದನ್ನ ಈ ಹಿನ್ನೆಲೆಯಲ್ಲಿ ನಾವು ಗ್ರಹಿಸಬಹುದಾಗಿದೆ.
ಅದರಲ್ಲು ವಿಶೇಷವಾಗಿ ಲಿತುವೇನಿಯ ಮತ್ತು ರಷಿಯಾದ ನದಿಗಳ ಹೆಸರುಗಳು ಎಷ್ಟು ಸಂಸ್ಕೃತಮಯವು (ಇಂಡೋ – ಯುರೋಪಿಯನ್ ಭಾಷಾಮೂಲದ) ಮತ್ತು ವೈದಿಕರ ಪುರಾಣ ಮೂಲದವು ಆಗಿವೆ ಎಂದರೆ, ನಂಬಲಿಕ್ಕು ಅಸಾಧ್ಯ ಎಂಬಂತಿವೆ. ಇದರರ್ಥ ಸ್ಲಾವ್ ಜನರು ವೈದಿಕರ ಪುರಾಣಗಳಿಂದ ಪ್ರೇರಿತಗೊಂಡಿದ್ದಾರೆ ಎಂಬುದಲ್ಲ.
ಬದಲಿಗೆ ವೈದಿಕರ ಇಂದಿನ ಪುರಾಣ – ಸಂಸ್ಕೃತಿ – ಭಾಷೆಗಳು ವೈದಿಕರಿಗೆ ಎಷ್ಟು ಸಂಬಂಧಿಸಿದ್ದೋ ಅದಕ್ಕು ಹೆಚ್ಚಿನದಾಗಿ ಸ್ಲಾವ್ ಸಮುದಾಯಕ್ಕೂ ಸಂಬಂಧಿಸಿದ್ದಾಗಿದ್ದವು. ಹಾಗೆ ನೋಡಿದರೆ ಬ್ರಹ್ಮ – ವೇದ ಮೂಲವು ಕೂಡ ಸ್ಲಾವ್ ಸಮುದಾಯದ ಉತ್ತರ ಧ್ರುವ ಪ್ರದೇಶಕ್ಕೆ ಹೋಗಿ ನಿಲ್ಲುತ್ತದೆ ಎಂಬುದು ಸೋಜಿಗವಾದರು ನಿರ್ವಿವಾದವಾಗಿ ಚಾರಿತ್ರಿಕ ಸತ್ಯವಾಗಿದೆ. 12 – 13 ನೇ ಶತಮಾನಗಳಲ್ಲಿ ಸ್ಲಾವ್ ಜನರು ಕ್ರೈಸ್ತರಾಗಿ ಪರಿವರ್ತಿತರಾಗುವವರೆಗು ಅವರು ಶತಾಂಶ ಮತ್ತು ಥೇಟ್ ಶ್ರೇಷ್ಟ ಆರ್ಯ ವೈದಿಕರೆ ಆಗಿದ್ದರು.
ರಷ್ಯ ಮತ್ತು ಲಿತುವೇನಿಯಾಗಳಲ್ಲಿ ಭರತಾಸ್, ಓಂ, ರಾಮ, ಸೀತ, ಲಂಕೇಶ, ರಾವಣ, ಮಾರೀಚ, ನೆಮುನ (ಯಮುನ), ಕಾಮ, ಯಂತ್ರ, ಶ್ವೇತೆ, ದ್ರವ, ಮೋಕ್ಷ, ಋಗ್ವೇದದ ದಾನವ ಮಾತೆ ದನು ನೆನಪಿನ ದನುಬೆ ಮುಂತಾದ ನದಿಗಳು ಮತ್ತು ನಾರದ (ಈಗ ನರೋದ್ನಯ ಎಂದಿದ್ದರು ಸ್ಥಳೀಯರು ನಾರದ ಬೆಟ್ಟ ಎಂದೇ ಕರೆಯುತ್ತಾರೆ) ಹೆಸರಿನ ಬೆಟ್ಟವು ಇವೆ ಎಂದರೆ ಯಾರೂ ಅಚ್ಚರಿಪಡುವಂತದ್ದೆ.
ಯಾರಿಗಾದರು ಈ ಸಂಗತಿಗಳಲ್ಲಿ ಅನುಮಾನ ಹುಟ್ಟುವುದು ಸಹಜವೆ. ಯಾಕೆಂದರೆ ಸ್ಲಾವ್ – ವೈದಿಕ ಆರ್ಯರ ಮೂಲ ಪ್ರದೇಶವೆ ಉತ್ತರ ದ್ರುವ ಪ್ರದೇಶವಾಗಿತ್ತು ಎಂಬ ಚರಿತ್ರೆಯನ್ನೇ ನಮ್ಮಿಂದ ಮರೆಮಾಚಲಾಗಿತ್ತು ಮತ್ತು ಅದು ಬಹುದೊಡ್ಡ ಸಾಂಸ್ಕೃತಿಕ ರಾಜಕಾರಣವೂ ಆಗಿತ್ತು. ಆದರೆ ತಿಲಕರು ತಮ್ಮ “Arctic Home In the Vedas” ಎಂಬ ಪುಸ್ತಕದಲ್ಲಿ ಉತ್ತರ ಭಾರತದ ವೈದಿಕ ಆರ್ಯರ ತವರು ನೆಲ ಉತ್ತರ ದ್ರುವ ಪ್ರದೇಶವೆ, ಅಂದರೆ ಇಂದಿನ ಲಿತುವೇನಿಯ, ಲಾತ್ವಿಯ, ಬೆಲಾರಸ್ ಪ್ರದೇಶಗಳೇ ಆಗಿದ್ದವು ಎಂದು ಸಮರ್ಥ ಸಾಕ್ಷಾಧಾರಗಳೊಂದಿಗೆ ನಿರೂಪಿಸಿದ್ದಾರೆ.
ರಷ್ಯಾದಲ್ಲಿ ಸಂಸ್ಕೃತ ಭಾಷಾಮೂಲದ ನೂರಾರು ನದಿಗಳಿವೆ. ಭಾರತದಲ್ಲಿ ಕೆಲವು ನದಿಗಳನ್ನ ಹೊರತುಪಡಿಸಿದರೆ ಆ ಪ್ರಮಾಣದ ವೈದಿಕ ಪುರಾಣ ಮೂಲದ ನದಿ ಹೆಸರುಗಳು ಈ ನೆಲದಲ್ಲಿ ಇಲ್ಲವೆಂಬುದು ಪ್ರಾಚೀನ ಕಾಲದಿಂದಲು ಆರ್ಯ ವೈದಿಕರು ಇಲ್ಲಿರಲಿಲ್ಲವೆಂಬುದನ್ನೇ ಸೂಚಿಸುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243