Connect with us

ದಿನದ ಸುದ್ದಿ

ಮಾನ್ಯ ಮುಖ್ಯಮಂತ್ರಿಗಳೇ “ವಿಥೌಟ್ ಲಾಠಿ ಡ್ಯೂಟಿ” ಎಂಬ ಕಾನೂನು ಜಾರಿ ಮಾಡಿ

Published

on

  • ಕಾವ್ಯ ಪ್ರಿಯ ಶಿವು

ನಸೇವೆಯೇ ಜನಾರ್ದನ ಸೇವೆ ಸರಕಾರದ ಕೆಲಸ ದೇವರ ಕೆಲಸವೆಂದು ನಮ್ಮ ರಾಜ್ಯದ ಆಡಳಿತ ಶಕ್ತಿ ಕೇಂದ್ರ ವಿಧಾನಸೌಧದ ಪೂರ್ವದಿಕ್ಕಿನ ಪ್ರವೇಶದ್ವಾರದ ಗೋಡೆಯ ಮೇಲೆ ಬರೆದಿರುವ ಉಕ್ತಿ. ದೇಶ ಸಂವಿಧಾನ ಕಾನೂನು ಸುವ್ಯವಸ್ಥೆ ರಕ್ಷಣೆ ಆಡಳಿತ ಅಧಿಕಾರ ಯಾರಿಗಾಗಿ ಜನಸೇವೆಗಾಗಿ ದೇಶದ ಅಭಿವೃದ್ಧಿಗಾಗಿ ದೇಶದ ಒಕ್ಕೂಟ ವ್ಯವಸ್ಥೆಯನ್ನು ಆಡಳಿತದ ಅನುಕೂಲಕ್ಕಾಗಿ ಅಧಿಕಾರವನ್ನು ವಿಭಜಿಸಿಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಮ್ಮನ್ನು ಅಳುತ್ತಾವೆ.

ಆಳುವ ದೊರೆ ದೇಶದ ಮತ್ತು ರಾಜ್ಯದ ಪ್ರಜೆಗಳನ್ನು ತನ್ನ ಮನೆಯ ಸದಸ್ಯರಂತೆ ಸ್ವಂತ ಮಕ್ಕಳಂತೆ ಸೋದರ ಸೋದರಿಯರಂತೆ ಜಾತಿಭೇದವಿಲ್ಲದೆ ಲಿಂಗಬೇಧವಿಲ್ಲದೆ ವರ್ಗಭೇದವಿಲ್ಲದೆ ಭಾರತೀಯರಾದ ನಾವೆಲ್ಲರೂ ಒಂದೇ ಎಂಬ ಐಕ್ಯತೆ ಮನೋಭಾವದಿಂದ ಪ್ರತಿಯೊಬ್ಬ ವ್ಯಕ್ತಿಯ ಜೀವನದ ಮೌಲ್ಯವನ್ನು ಎತ್ತಿ ಹಿಡಿದು ಮತ್ತು ಅವನ ತಪ್ಪುಗಳನ್ನು ತಿದ್ದುವ ಮೂಲಕ ವಿಚಾರ ವಿನಿಮಯಳಲ್ಲಿ ಆದ ತಪ್ಪುಗಳನ್ನು ಪರಿಶೀಲಿಸಿ ಸರಿಪಡಿಸಿಕೊಳ್ಳಬೇಕು. ಕಾಪಾಡುವ ನೈತಿಕತೆ ಇಲ್ಲದವನಿಗೆ ಶಿಕ್ಷ ಕೊಡುವ ನೈತಿಕತೆಯು ಕೂಡ ಇರುವುದಿಲ್ಲ. ಇಡೀ ದೇಶ ಕರೋನ ಎಂಬ ಕಾಯಿಲೆಗೆ ತತ್ತರಿಸಿಹೋಗಿದೆ.

ಜನಸಾಮಾನ್ಯರು ಮೂಲಭೂತ ಅಗತ್ಯತೆಗಳನ್ನು ಹುಡುಕಿಕೊಂಡು ಅನಿವಾರ್ಯವಾಗಿ ರೋಡಿಗೆ ಬರುವಂತಾಗಿದೆ. ಬಂದ ನಾಗರಿಕರನ್ನು ಕರ್ತವ್ಯ ನಿರತ ಪೊಲೀಸರು ಆತ್ಮೀಯವಾಗಿ ಅವರ ಜೊತೆಗೆ ಚರ್ಚಿಸಿ ಸತ್ಯಾಸತ್ಯತೆಗಳ ಬಗ್ಗೆ ಅವಲೋಕನ ಮಾಡಿ ಸರಿಯಾದ ರೀತಿಯಲ್ಲಿ ಸರಕಾರ ಕೈಗೊಂಡಿರುವ ಕಾನೂನುಗಳ ಬಗ್ಗೆ ಅರಿವು ಮೂಡಿಸಬೇಕು. ಹಾಗೂ ಒಂದು ವೇಳೆ ಒಬ್ಬ ಪ್ರಜೆ ತಪ್ಪು ಮಾಡಿದ್ದೆ ಆದರೆ ಅವನನ್ನು ಕೂಡಲೇ ಬಂಧಿಸಿ ಕಾನೂನಿನ ರೀತಿಯಲ್ಲಿ ಕ್ರಮಕೈಗೊಂಡು ತಪ್ಪಿಗೆ ಶಿಕ್ಷೆಯನ್ನು ವಿಧಿಸಲು ನ್ಯಾಯಾಂಗಕ್ಕೆ ಒಪ್ಪಿಸಬೇಕು. ತಪ್ಪು ಮಾಡಿದ ಅಪರಾಧಿಯ ಮೇಲೆ ಯಾವುದೇ ಕಾರಣಕ್ಕೂ ಕೈ ಮಾಡುವಂತಿಲ್ಲ.

ಬಂಧಿಸಿದ 24 ಗಂಟೆ ಒಳಗಡೆ ಅವನನ್ನು ನ್ಯಾಯಾಲಯಕ್ಕೆ ಒಪ್ಪಿಸಬೇಕು. ಹೀಗಿರುವಾಗ ಒಬ್ಬ ಅಮಾಯಕನ ಮೇಲೆ ನಾಲ್ಕು ಐದು ಜನ ಪೊಲೀಸರು ಸೇರಿಕೊಂಡು ಜೀವ ಹೋಗುವರೆಗೆ ಹೊಡೆದು ಸಾಯಿಸುವುದು ಎಂದರೆ ಎಂಥ ಅಮಾನವೀಯ ಕೃತ್ಯ. ನಮ್ಮ ದೇಶ ಪ್ರಪಂಚದ ಇತರೆ ರಾಷ್ಟ್ರಗಳಿಗೆ ಮಾದರಿ ರಾಷ್ಟ್ರ. ಉತ್ತರ ಕೊರಿಯಾ ಜಪಾನ್ ಜರ್ಮನಿ ಫ್ರಾನ್ಸ್ ಇಟಲಿ ಇತರೆ ಸರ್ವಾಧಿಕಾರಿ ಧೋರಣೆ ರಾಷ್ಟ್ರಗಳಂತೆ ನಮ್ಮಲ್ಲಿ ಅರಸೊತ್ತಿಗೆ ಆಳ್ವಿಕೆ ಇಲ್ಲ. ಇಲ್ಲಿ ಪ್ರಜೆಗಳೇ ಪ್ರಭುಗಳು ಪ್ರಜೆಗಳಿಂದ ಪ್ರಭು. ಅಧಿಕಾರ ಎಂಬುದು ದೇಶದ ಪ್ರಜೆಗಳು ರೂಪಿಸಿದ ಶಕ್ತಿಯೆಂದು ಸಂವಿಧಾನದ ಪಿತಾಮ ವಿಶ್ವರತ್ನ ಮಹಾಜ್ಞಾನಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ವ್ಯಾಖ್ಯಾನಿಸುತ್ತಾರೆ.

ಪ್ರತಿಯೊಂದಕ್ಕೂ ಕಾನೂನು ಇದೆ ಆ ಕಾನೂನನ್ನು ಯಾರು ಕೂಡ ಕೈಗೆತ್ತಿಕೊಳ್ಳಬಾರದು. ಒಂದು ವೇಳೆ ಅಂತ ದುಸ್ಸಾಹಸಕ್ಕೆ ಕೈ ಹಾಕಿದರೆ ಆ ವ್ಯಕ್ತಿ ಯಾರೇ ಆಗಿರಲಿ ಅಂಥವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕಾನೂನಿನ ಸೂಕ್ತ ಕ್ರಮಗಳನ್ನು ಜರುಗಿಸಿ ತಪ್ಪಿಗೆ ತಕ್ಕ ಶಿಕ್ಷೆಯನ್ನು ವಿಧಿಸಬೇಕು. ಪೊಲೀಸರಲ್ಲಿ ಮಾನಸಿಕ ಸಾಮರ್ಥ್ಯದ ಶಕ್ತಿ ಅತ್ಯಂತ ಕಡಿಮೆ ಪ್ರಮಾಣದಲ್ಲಿರುತ್ತದೆ. ಅವರಿಗೆ ಮಾನವೀಯತೆ ಮನುಷ್ಯತ್ವ ಭ್ರಾತೃತ್ವ ಜೀವನದ ಮೌಲ್ಯ ಎತ್ತಿಹಿಡಿಯುವ ನೈತಿಕ ಮೌಲ್ಯದ ಪಾಠ ಮಾಡಿಸಬೇಕು. ಬಾಯಿಬಿಟ್ಟರೆ ವೇದ ಉಪನಿಷತ್ತು ಭಗವದ್ಗೀತೆಯ ಸಂಸ್ಕೃತ ವಾಕ್ಯವನ್ನು ನಾಲಿಗೆ ಮೇಲೆ ಹರಿದಾಡುತ್ತವೆ.

ಇವರೇನು ತಾಯಿ ಗರ್ಭದಿಂದ ಜನಿಸಿ ಬಂದವರಲ್ಲವೇ. ಇವರಿಗೆ ಅಕ್ಕ-ತಂಗಿ ಅಣ್ಣ-ತಮ್ಮ ಹೆಂಡತಿ ಮಕ್ಕಳು ಬಂಧು ಭಗಿನಿಯರು ಇಲ್ಲದ ಅನಾಥರೇ. ಅವಾಚ್ಯ ಶಬ್ದಗಳನ್ನು ಬಳಸಿದರೆ ಅಂಥವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿ ರಿಟ್ ಅರ್ಜಿಯ ಮೂಲಕ ಪರಿಹಾರವನ್ನು ಪಡೆದುಕೊಳ್ಳುವ ಅವಕಾಶ ನಮ್ಮ ನ್ಯಾಯಾಂಗದಲ್ಲಿ ಇದೆ. ನಮ್ಮ ದೇಶ ಸುಸಂಸ್ಕೃತವಾದ ದೇಶ ಇಲ್ಲಿ ಯಹೂದಿಗಳು ತತ್ವಜ್ಞಾನಿಗಳು ಚಿಂತಕರು ಸಾಹಿತಿಗಳು ಧಾರ್ಮಿಕ ಸುಧಾರಕರು ಸಾಮಾಜಿಕ ಚಿಂತಕರು ವಚನಕಾರರು ಕೀರ್ತನಕಾರರು ದಾಸರು ಸಂತರು ಶರಣರು ಸೂಫಿಗಳು ಕಾಲಜ್ಞಾನಿಗಳು ಹುಟ್ಟಿ ತಮ್ಮ ಜ್ಞಾನದ ಬೆಳಕನ್ನು ನೀಡಿ ಹೋಗಿದ್ದಾರೆ.

ಶಾಂತಿ ಸುವ್ಯವಸ್ಥೆ ಸಹಬಾಳ್ವೆ ಸೌಹಾರ್ದತೆ ಬ್ರಾತುತ್ವ ಮನುಷ್ಯ ಪ್ರೇಮ ಸಾಮರಸ್ಯ ಐಕ್ಯತೆಯ ಮನೋಭಾವನ್ನು ಬಿತ್ತಿ ಹೋಗಿದ್ದಾರೆ. ಇಂಥ ಮಹನೀಯರ ಜೀವನದ ಆದರ್ಶಗಳು ವಾರದಲ್ಲಿ ಒಂದು ದಿನವಾದರೂ ಉತ್ತರಕುಮಾರನ ಪೌರುಷತ್ವದ ಪೊಲೀಸರಿಗೆ ಪಾಠ ಮಾಡಬೇಕಾಗಿದೆ. ಏಕೆಂದರೆ ಇವರ ದರ್ಪ ದೌರ್ಜನ್ಯ ದಬ್ಬಾಳಿಕೆ ಆಡಳಿತ ಅಧಿಕಾರ ಚಲಾಯಿಸುವುದು ಹೇನ್ನಿದ್ದರೂ ನಿರ್ಗತಿಕರ ಮೇಲೆ ಬಡವರ ಮೇಲೆ ಶೋಷಿತರ ಮೇಲೆ ಕೂಲಿಕಾರ್ಮಿಕರ ಮೇಲೆ ಅನಾಥರ ಮೇಲೆ ಬಡವನ ಸಿಟ್ಟು ದವಡೆಗೆ ಮೂಲ ಎಂಬ ಗಾದೆಯಂತೆ ಶಕ್ತಿ ಹೀನರೇ ಇಲ್ಲಿ ಬಲಿಪಶುವಾಗಿದ್ದಾರೆ.

ಒಬ್ಬ ರಾಜಕಾರಣಿಯ ಮಗ ಉದ್ಯಮಿಯ ಮಗ ಒಬ್ಬ ಎಸ್ಪಿ ಅಥವಾ ಜಿಲ್ಲಾಧಿಕಾರಿಯ ಮಗ ಸಿನಿಮಾ ನಟರ ಮಗ ಅನ್ಯಾಯ ಕೊಲೆ ಸುಲಿಗೆ ಶೋಷಣೆ ಅತ್ಯಾಚಾರ ಕೋಮು ಸಂಘರ್ಷ ಗದ್ದಲಗಳು ಉಂಟು ಮಾಡಿದರೂ ಕಂಡರೂ ಕಾಣದಂತೆ ಬಾಲ ಮುದುರಿಕೊಂಡು ಹುಲ್ಲು ಕಿತ್ತಿದ ಹಾವಿನಂತೆ ತಲೆಯಾಡಿಸುವ ನಪುಂಸಕ ಪೊಲೀಸರ ವರ್ತನೆ ಹೆಚ್ಚಾಗುತ್ತಿದೆ. ಹಾಗಂತ ಎಲ್ಲಾ ಪೊಲೀಸರು ಕೆಟ್ಟವರಲ್ಲ ಹಾಗೆಯೇ ಎಲ್ಲಾ ಪೊಲೀಸರು ಒಳ್ಳೆಯವರು ಅಲ್ಲ. ಅಲ್ಪಬುದ್ಧಿ ವಿನಾಶಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಪೊಲೀಸರೇ ಜೀವಂತ ಉದಾಹರಣೆ. ಲಾಕ್ ಡೌನ್ ಎಂಬ ನೆಪದಲ್ಲಿ ಪೋಲಿಸ್ ಗೂಂಡಾ ವರ್ತನೆ ದೇಶದ್ಯಾಂತ ಕ್ರೂರ ಪ್ರವೃತ್ತಿಯ ನರ್ತನೆ ತಾಂಡವಾಡುತ್ತಿದೆ.

ಇಂಥ ಅವಹೇಳನಕಾರಿ ದುರ್ಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸುತ್ತಿವೆ ನಾಡಿನ ಮತ್ತು ದೇಶದ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ದೃಶ್ಯಗಳು ಕಂಡರೂ ಕಾಣದಂತೆ ಆಡಳಿತವರ್ಗದ ಅಧಿಕಾರಿಗಳು ಮತ್ತು ರಾಜಕಾರಣಿಗಳು ಷಂಡರಂತೆ ಸಂಬಂಧವಿಲ್ಲದಂತೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಬೀದಿಗಳಲ್ಲಿ ಗಲ್ಲಿಗಳಲ್ಲಿ ಲಾಠಿಯೇಟು ತಿಂದವರು ಗಂಜಿಗೆ ಗತಿಯಿಲ್ಲದ ನಿರ್ಗತಿಕರು.

ದಿನನಿತ್ಯದ ಜೀವನಕ್ಕೆ ಅತ್ಯಗತ್ಯ ವಸ್ತುಗಳನ್ನು ಸಿಗದೇ ಇದ್ದ ಸಂದರ್ಭದಲ್ಲಿ ಅನಿವಾರ್ಯವಾಗಿ ಅವುಗಳನ್ನು ಹುಡುಕಿಕೊಂಡು ಬಂದ ಅಮಾಯಕರ ಮೇಲೆ ಏಕಾಏಕಿ ಮಾರಣಾಂತಿಕ ಹಲ್ಲೆ ಮಾಡುವುದು ಯಾವ ಪುರುಷಾರ್ಥ. ಇದನ್ನು ನೋಡಿಕೊಂಡು ಸುಮ್ಮನೆ ಕುಳಿತಿರುವ ಮಂತ್ರಿ ಮಹನೀಯರು ಪುರುಷ ಹೀನರು ಸಂಬಂಧಪಟ್ಟ ಮಂತ್ರಿಗಳು ಕೂಡಲೇ ಗೂಂಡಾ ಪ್ರವೃತ್ತಿಯ ಪೊಲೀಸ್ ವ್ಯಕ್ತಿಯ ಮೇಲೆ ಸೂಕ್ತವಾದ ಕಾನೂನು ಕ್ರಮಗಳನ್ನು ಕೈಗೊಂಡು ಅವನನ್ನು ಶಿಕ್ಷೆಗೆ ಒಳಪಡಿಸಿ ಸೇವೆಯಿಂದ ಖಾಯಂ ಆಗಿ ವಜಾಗೊಳಿಸಬೇಕು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ತೋತಾಪುರಿ ಮಾವಿನ ಹಣ್ಣುಗಳಿಗೆ ಆಂಧ್ರಪ್ರದೇಶದಲ್ಲಿ ನಿಷೇಧ ; ತೆರವುಗೊಳಿಸುವಂತೆ ಸಿಎಂ ಸಿದ್ದರಾಮಯ್ಯ ಪತ್ರ

Published

on

ಸುದ್ದಿದಿನಡೆಸ್ಕ್:ಕರ್ನಾಟಕದ ತೋತಾಪುರಿ ಮಾವಿನ ಹಣ್ಣುಗಳಿಗೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲಾಧಿಕಾರಿ ವಿಧಿಸಿರುವ ನಿಷೇಧ ಆದೇಶ ರದ್ದು ತೆರವುಗೊಳಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಪತ್ರ ಮೂಲಕ ಮನವಿ ಮಾಡಿದ್ದಾರೆ.

ಇದು ಮುಂದಿನ ದಿನಗಳಲ್ಲಿ ತರಕಾರಿಗಳು ಮತ್ತು ಇತರ ಕೃಷಿ ಸರಕುಗಳ ಅಂತಾರಾಜ್ಯ ಸಾಗಾಣೆಗೆ ಅಡ್ಡಿ ಉಂಟುಮಾಡುವ ಸಾಧ್ಯತೆಯಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ನಿರ್ಬಂಧವು ಸಾವಿರಾರು ರೈತರ ಜೀವನ ಉಪಾಯದ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಐಎಎಸ್ – ಐಪಿಎಸ್ ಅಧಿಕಾರಿಗಳ ವರ್ಗಾವಣೆ ; ಆದೇಶ

Published

on

ಬೆಂಗಳೂರು ನಗರ ಕಾರ್ಯಪಡೆಯ ಎಡಿಜಿಪಿಯಾಗಿ ನೇಮಕಗೊಂಡಿರುವ ಐಪಿಎಸ್‌ ಅಧಿಕಾರಿ ರೂಪಾ ಡಿ. ಅವರು ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದರು.

ಸುದ್ದಿದಿನಡೆಸ್ಕ್:ರಾಜ್ಯ ಸರ್ಕಾರ ಇಂದು ಕೆಲವು ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಐಪಿಎಸ್ ಅಧಿಕಾರಿ ಡಿ. ರೂಪಾ ಅವರನ್ನು ಬೆಂಗಳೂರು ಮೆಟ್ರೋ ಪಾಲಿಟನ್ ಟಾಸ್ಕ್‌ಪೋರ್ಸ್ ಎಡಿಜಿಪಿ ಯಾಗಿ ವರ್ಗಾವಣೆ ಮಾಡಿದೆ.

ಕೆಎಸ್‌ಆರ್‌ಟಿಸಿ ಮಹಾನಿರ್ದೆಶಕರನ್ನಾಗಿ ಅಕ್ರಂ ಪಾಶಾ ಅವರನ್ನು ನೇಮಕ ಮಾಡಲಾಗಿದೆ. ಇದೇ ವೇಳೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯವರನ್ನು ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

ಬೆಂಗಳೂರು ನಗರ ಕಾರ್ಯಪಡೆಯ ಎಡಿಜಿಪಿಯಾಗಿ ನೇಮಕಗೊಂಡಿರುವ ಐಪಿಎಸ್‌ ಅಧಿಕಾರಿ ರೂಪಾ ಡಿ. ಅವರು ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ ಪ್ರಕರಣ ; ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮಧ್ಯಪ್ರವೇಶಕ್ಕೆ ಪ್ರತಿಪಕ್ಷ ನಾಯಕ ಆರ್. ಅಶೋಕ ಮನವಿ

Published

on

ಸುದ್ದಿದಿನಡೆಸ್ಕ್:ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣದ ಬಗ್ಗೆ ಮಧ್ಯಸ್ಥಿಕೆ ವಹಿಸುವಂತೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಸಂತ್ರಸ್ಥರು ಮತ್ತು ಅವರ ಕುಟುಂಬಗಳಿಗೆ ಪಾರದರ್ಶಕತೆ ನ್ಯಾಯ ದೊರಕುವಂತಾಗಲು ತನಿಖೆಯ ಮೇಲ್ವಿಚಾರಣೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಸಂತ್ರಸ್ಥರಿಗೆ ನ್ಯಾಯ ಒದಗಿಸುವುದು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ತಡೆಯುವುದು ಎಲ್ಲರ ಕರ್ತವ್ಯವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ನಡುವೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದಿಂದ ಸಮಸ್ಯೆಗೆ ಒಳಗಾದ ಮಕ್ಕಳ ವಿವರವನ್ನು ಕೋರಿ ಸಿಐಡಿಗೆ ಮಕ್ಕಳ ಹಕ್ಕು ಆಯೋಗ ನೋಟಿಸ್ ಜಾರಿ ಮಾಡಿದೆ.

ಸಾರ್ವಜನಿಕ ದೂರು ಆಧರಿಸಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಆಯೋಗ ಈ ಬಗ್ಗೆ ಹೆಚ್ಚಿನ ನಿಖರ ಮಾಹಿತಿ ನೀಡುವಂತೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending