ಲೈಫ್ ಸ್ಟೈಲ್
ಮೇಡ್ ಇನ್ ಚೈನಾ

ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ ಉಂಟಾದಾಗ ಅಥವಾ ಭಾರತದಲ್ಲಿ ಭಯೋತ್ಪಾದಕರ ದಾಳಿ ನಡೆದಾಗ ಅಥವಾ ಅಜರ್ ಮಸೂದ್ ವಿಷಯ ಬಂದಾಗ ಅಥವಾ ಚೀನಾದ ಗಡಿಯಲ್ಲಿ ಘರ್ಷಣೆ ಉಂಟಾದಲೆಲ್ಲ ಎಲ್ಲರು ನಮ್ಮ ದೇಶದಲ್ಲಿ ಒಂದೇ ಮಾತುಗಳನ್ನ ನಾವು ಕೇಳಬಹುದು, ಅದು ಏನೆಂದರೆ ಚೀನಿ ವಸ್ತುಗಳನ್ನ ಬಹಿಷ್ಕರಿಸಿ ಯನ್ನುವುದು. ಆದರೆ ಒಂದು ಸರಿ ನಿಮ್ಮೆದೆ ಮೇಲೆ ಕೈಯಿಟ್ಟುಕೊಂಡು ಹೇಳಿ, ಚೀನಾದ ಎಲ್ಲ ವಸ್ತುಗಳನ್ನು ಬಹಿಷ್ಕರಿಸಿ ಬಿಡೋದಕ್ಕೆ ಸಾಧ್ಯವೇ?
ನಾವು ಬಳಕೆ ಮಾಡುವುದು ಎಲ್ಲವೂ ಮೇಡ್ ಇನ್ ಚೀನಾ ಇರುತ್ತವೆ. ನಮ್ಮ ಕಂಪ್ಯೂಟರ್ಗಳು ಮೇಡ್ ಇನ್ ಚೀನಾ, ನಮ್ಮ ಸೆಲ್ಫೋನ್ಗಳು ಮೇಡ್ ಇನ್ ಚೀನಾ ಕಡೆಗೆ ಸ್ವದೇಶಿ ಕಂಪನಿ ಅಂತ ಹೇಳಿಕೊಳ್ಳುವಷ್ಟು ಎಲೆಕ್ಟ್ರಾನಿಕ್ಸ್ ಕಂಪನಿಗಳು ತಮ್ಮ ವಸ್ತುಗಳನ್ನು ತಯಾರುಮಾಡುವುದು ಚಿನಾದಲ್ಲಿಯೇ. ಇನ್ನು ಅಮೇರಿಕಾದ ಐಫೋನ್ ಐಪ್ಯಾಡ್ ಎಲ್ಲವೂ ತಯಾರಗೋದು ಚಿನದಲ್ಲಿಯೇ! ಅವುಗಳ ಮೇಲೆ ಇರೋದು ಕೂಡ ಮೇಡ್ ಇನ್ ಚೀನಾ ಲೇಬಲ್.
ಚೀನಾ ಉತ್ಪಾದನಾ ಕ್ಷೇತ್ರದಲ್ಲಿ ಅತ್ಯಂತ ವ್ಯಾಪಿಸಿಕೊಂಡಿದಕ್ಕೆ ಕಾರಣವೇನು? ನಾವು ಬಳಸುವ ಆಹಾರ ಪದಾರ್ಥಗಳನ್ನು ಬಿಟ್ರೆ ಭಾರತದ ಹೋಟೆಲುಗಳಲ್ಲಿ ನಮ್ಮ ಫುಟ್ ಪಾತ್ ಗಳಲ್ಲಿ ನಾವು ತಿನ್ನುವ ಚಿನಿಸ್ ಪುಡ್ನ ಹೊರತುಪಡಿಸಿದರೆ ಉಳಿದೆಲ್ಲ ಎಲೆಕ್ಟ್ರೋನಿಕ್ ಐಟೆಮ್ಸ ಚೀನಾದಲ್ಲಿ ತಯಾರಾಗುವುದಕ್ಕೆ ಕಾರಣಗಳೇನು?
ಪಟಾಕಿಗಳಿಂದ ಹಿಡಿದು ರೋಬೋಗಳವರೆಗೆ ಕ್ಯಾಮರಾಗಳಿಂದ ಹಿಡಿದು ಜಗತ್ತಿನ ಅತಿ ದೊಡ್ಡ ಮಿಷನರಿಗಳ ವರೆಗೆ ಪ್ರತಿಯೊಂದು ಚೀನಾ ತಯಾರಿಸುವುದಕ್ಕೆ ಸಾಧ್ಯವಾಗ್ತಿರುವುದು ಹೇಗೆ? ನಾವು ಬಳಸುವ ಬಹುತೇಕ ವಸ್ತುಗಳ ಮೇಲೆ ಮೇಡ್ ಇನ್ ಚೀನಾ ಅಂತಯಾಕಿರುತ್ತದೆ? ಈ ಪ್ರಶ್ನೆಗೆ ಸಾಮಾನ್ಯವಾಗಿ ನಮಗೆ ಸಿಗುವ ಉತ್ತರ ಏನು ಅಂದ್ರೆ ಚೀನಾದಲ್ಲಿ ಲೇಬರ್ ಚೀಪು ಉತ್ಪಾದನಾ ವೆಚ್ಚ ಕಡಿಮೆ ಅನ್ನೋ ಕಾರಣಕ್ಕೆ ಎಲ್ಲ ಕಂಪನಿಗಳು ಎಲ್ಲವನ್ನು ಅಲ್ಲಿಯೇ ತಯಾರಿಸುತ್ತಾರೆ ಅನ್ನೋದು ನಿಜಾನ?
ಇವತ್ತು ಇಡೀ ಜಗತ್ತನ್ನು ಆವರಿಸುವುದಕ್ಕೆ ಇದೊಂದೇ ಕಾರಣವೇ? ಚೀನಾ ಅನ್ನುವುದು ಅಪ್ಪಟ ಕಮ್ಯುನಿಸ್ಟ್ ರಾಷ್ಟ್ರ, ಅಲ್ಲಿ ಲೇಬರ್ ಕಡಿಮೆ ವಿರುವುದು ಸಾಧ್ಯವಿಲ್ಲ, ಹಾಗಾದ್ರೆ ಭಾರತದಲ್ಲಿನ ಕಮ್ಯುನಿಸ್ಟ್ ಆಡಳಿತದ ರಾಜ್ಯಗಳಲ್ಲಿ ಕೂಡ ಹೀಗೆ ಇರಬೇಕಿತ್ತಲ್ಲವೇ?
ನಿಮಗೆ ನೆನಪಿರಲಿ ಈಗಿನ ಚೀನಾ, ಮಾವೋ ಪ್ರೆಸಿಡೆಂಟ್ ಆಗಿ ಇದ್ದ ಚಿನಗಿಂತ ಬಹಳ ವ್ಯತ್ಯಾಸವಿದೆ. ಮಾವೋ ಕಾಲದಲ್ಲಿ ಉತ್ಪಾದನೆ, ವ್ಯಾಪಾರ ಪ್ರತಿಯೊಂದನ್ನು ಸರ್ಕಾರವೇ ನೋಡಿಕೊಳ್ಳುತ್ತಿತ್ತು. ಚೀನಿ ಪ್ರಜೆಗಳಿಗೆ ತಮಗಾಗಿ ಏನನ್ನೂ ಮಾಡಿಕೊಳ್ಳುವ ಸ್ವಾತಂತ್ರ್ಯ ಇರಲಿಲ್ಲ ಆದರೆ 1976ರಲ್ಲಿ ಮಾವೋ ವಿಧಿವಶರಾದ ನಂತರ ಚೀನಾದ ಆಡಳಿತ ಹಾಗೂ ಆರ್ಥಿಕತೆಯಲ್ಲಿ ಸಾಕಷ್ಟು ಬದಲಾವಣೆಗಳಾದವು ಕೈಗಾರಿಕೀಕರಣಕ್ಕೆ ಆದ್ಯತೆ ಕೊಡಲಾಯಿತು.
ಚೀನಾದಲ್ಲಿ ಫ್ಯಾಕ್ಟರಿಗಳು ಶುರುವಾದವು. ಕಾಲಕ್ರಮೇಣ ಚೀನಾದಲ್ಲಿ ಜಾಗ ಇದ್ದಲೆಲ್ಲ ಫ್ಯಾಕ್ಟರಿಗಳು ತುಂಬಿಕೊಂಡವು. ಈಗ ಚೀನಾ ವಿಶ್ವ ಮಾರುಕಟ್ಟೆಯಲ್ಲಿ ಎರಡನೇ ಅತಿದೊಡ್ಡ ರಫ್ತು ದೇಶ. ಅಮೇರಿಕಾ ಕೂಡ ಒಂದೇ ವರ್ಷದಲ್ಲಿ 220 ಬಿಲಿಯನ್ ಡಾಲರ್ ಗಳಷ್ಟು ವಸ್ತುಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತದೆ. ಪ್ರತಿವರ್ಷ ಭಾರತ ಮಾರುಕಟ್ಟೆಗೆ 57 ಬಿಲಿಯನ್ ಡಾಲರ್ಗಳಷ್ಟು ವಸ್ತುಗಳು ಚೀನಾದಿಂದ ಆಮದು ಮಾಡಿಕೊಳ್ಳುತ್ತದೆ.
ಚೀನಾ ಇವತ್ತು ನಾನಾ ರಾಷ್ಟ್ರಗಳ ಜನರ ಹಣ ಮತ್ತು ಉದ್ಯೋಗ ಕಸಿದುಕೊಂಡು ಒಂದು ದೊಡ್ಡ ದೈತ್ಯ ರಾಷ್ಟ್ರವಾಗಿ ಬೆಳೆಯುತ್ತಿದೆ. ಆದರೆ ಚೀನಾ ಅನ್ನೋ ದೇಶ ಹೇಗೆ ರಫ್ತು ಮಾರುಕಟ್ಟೆಯಲ್ಲಿ ದೈತ್ಯನಾಗಿ ಬೆಳೆಯೋದಕ್ಕೆ ಸಾಧ್ಯವಾಯಿತು, ಈ ಪ್ರಶ್ನೆಗೆ ಉತ್ತರ ಹುಡುಕಬೇಕು ಅಂದರೆ ಕಳೆದ 40 ವರ್ಷಗಳಲ್ಲಿ ಆದೇಶ ಗಳಿಸಿಕೊಂಡಿರುವ ಶಕ್ತಿ ಎಂಥದ್ದು ಅನ್ನೋದು ನಮಗೆ ಅರ್ಥ ಆಗಬೇಕು.
ಚೀನಾದಲ್ಲಿಲೇಬರ್ ಖರ್ಚು ಕಡಿಮೆ ಹಾಗಾಗಿ ಎಲ್ಲ ಕಂಪನಿಗಳು ತಮ್ಮ ವಸ್ತುಗಳನ್ನು ಚೀನಾದಲ್ಲಿ ತಯಾರಿಸುತ್ತಾರೆ ಎನ್ನುವುದಾದರೆ, ಕಡಿಮೆ ಬೆಲೆ ಕೆಲಸದವರು ಸಿಗುವ ಸಾಕಷ್ಟು ದೇಶಗಳು ಜಗತ್ತಲ್ಲಿ ಇಲ್ಲವೇ ಅಲ್ಲಿಗೆ ಯಾಕೆ ಕಂಪನಿಗಳು ಹೋಗ್ತಿಲ್ಲ? ಚೀನಾ ಕೈಗಾರಿಕರಣವನ್ನು ತೆರೆಯುತ್ತಿದಂತಲೆ ಅಲ್ಲಿ ಕೆಲಸಗಾರರ ಕ್ಷಮತೆಯನ್ನು ಹೆಚ್ಚಿಸುವ ಕೆಲಸಕ್ಕೆ ಕೈಹಾಕಿತು.
ಇವತ್ತು ಒಬ್ಬ ಅಮೆರಿಕನ್ ಒಂದು ವಾರದಲ್ಲಿ ಮಾಡಬಹುದಾದ ಕೆಲಸವನ್ನು ಚೀನಿಯರು ಎರಡು ದಿನಗಳಲ್ಲಿ ಮುಗಿಸುತ್ತಾರೆ.
ಉದಾಹರಣೆಗೆ, ಐಫೋನ್ ತನ್ನ ಸ್ಕ್ರೀನನ್ನು ಬದಲಾವಣೆ ಮಾಡಿ ಒಂದೇ ತಿಂಗಳಲ್ಲಿ ಪ್ರಾಡಕ್ಟನ್ನು ಮಾರುಕಟ್ಟೆಗೆ ಬರಬೇಕು ಅಂದುಕೊಂಡಾಗ ಚೀನಾದ ತಯಾರಿಕಾ ಕಂಪನಿ ಒಂದೇ ದನದಲ್ಲಿ 8000 ಕಾರ್ಮಿಕರನ್ನು ಒಗ್ಗೂಡಿಸಿ 10000ಐಫೋನು ಗಳಂತೆ ಸತತ 96 ಗಂಟೆಗಳ ಕಾಲ ಕೆಲಸ ಮಾಡುತ್ತಿತ್ತು. ಇದು ಚೀನಾದ ತಾಕತ್ತು. ಇಲ್ಲಿ ನುರಿತ ಕೆಲಸಗಾರರು ಸಿಗುತ್ತಾರೆ ಮತ್ತು ಅವರು ಮೈ ಬಗ್ಗಿಸಿ ದುಡಿತಾರೆ. ಇನ್ನು ಚೀನಾದಲ್ಲಿ ಎಲ್ಲ ರೀತಿಯ ಕಾರ್ಖಾನೆಗಳು ಇವೆ.
ಅಲ್ಲಿ ಕನೆಕ್ಟಿವಿಟಿ ಅನ್ನೋದು ಸಮಸ್ಯೆನೆಯಿಲ್ಲ. ಅಷ್ಟು ದೊಡ್ಡ ದೇಶದಲ್ಲಿ ಉತ್ತಮವಾದ ರೈಲು ಸಂಪರ್ಕ ಹಾಗೂ ಅತೀ ವೇಗದ ರೈಲುಗಳು ಇರುವುದರಿಂದ ದೇಶದ ನಾನಾ ಭಾಗಗಳನ್ನು ಏರ್ಪೋರ್ಟ್ ಮತ್ತು ಪೋರ್ಟ್ಗಳ ಜೊತೆಗೆ ಜೋಡಿಸೋದು ಸುಲಭವಾಗಿದೆ. ಸಾವಿರಾರು ಕಾರ್ಖಾನೆಗಳು ಸಮುದ್ರದ ತೀರದಲ್ಲಿಯೇ ಇರುವುದರಿಂದ ತಯಾರಿಸಿದ ವಸ್ತುಗಳನ್ನ ಆದಷ್ಟು ಬೇಗ ಅನ್ಯ ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಅಲ್ಲಿ ವಿದ್ಯುತ್ ಸಮಸ್ಯೆ ಇಲ್ಲ. ಕಾರ್ಮಿಕರ ಮುಷ್ಕರ ಕೂಡ ಇಲ್ಲ. ಟ್ರಾನ್ಸ್ಪೋರ್ಟೇಷನ್ ಕೂಡ ಅತಿ ಸುಲಭವಾಗಿದೆ.
ಯಾವುದಕ್ಕೂ ಅಲ್ಲಿ ಕೊರತೆ ಇಲ್ಲ. ಇದೆರೆಲ್ಲರ ಜೊತೆ ಅಲ್ಲಿ ಪೊಲಿಟಿಕಲ್ ಸ್ಟೇಬಿಲಿಟಿ ಇದೆ. ಈ ಎಲ್ಲ ಕಾರಣಗಳಿಂದ ಚೀನಾ ಆರ್ಥಿಕವಾಗಿ ಗಟ್ಟಿಗೊಳ್ತಿರೋದೆ ಅಲ್ಲ ವಿಶ್ವ ಮಾರುಕಟ್ಟೆಗಳನ್ನ ಆಳುವುದಕ್ಕೆ ಆ ದೇಶಕ್ಕೆ ಸಾಧ್ಯವಾಗಿದೆ. ಹಾಗಂತ ಆ ಡ್ರ್ಯಾಗನ್ ದೇಶ ಮುಂದೇನು ಹೀಗೆ ಇರುತ್ತಾ, ಅದು ಆ ದೇವರಿಗೆ ಗೊತ್ತು. ಯಾಕೆ ಅಂದ್ರೆ ಅತಿಯಾದ ಕೈಗಾರಿಕರಣ ಚೀನಾದ ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರಿದೆ.
ಮುಂದೆ 10 ವರ್ಷದ ನಂತರ ನೀವು ಚೀನಾದಲ್ಲಿ ವಾಸಮಾಡ್ತೀನಿ ಅಂದ್ರು, ಅಲ್ಲಿ ನಿಮಿಷಕ್ಕೆ 5 ಸಿಗರೇಟ್ ಸೇದಿದಷ್ಟು ಹೊಗೆ ನಿಮ್ಮ ಶತೀರವನ್ನು ಸೇರಿಕೊಳ್ಳುತ್ತದೆ. ವಿಶ್ವದ ನಾನಾ ದೇಶಗಳ ಮೇಲಿನ ಮಾರುಕಟ್ಟೆ ಅವಲಂಬನೆ ಕೂಡ ಮುಂದೊಂದಿನ ಚೀನಾದ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರಲಿದೆ. ಅದು ಪಾಕಿಸ್ತಾನ ಸೇರಿದಂತೆ ಹಲವು ಏಷ್ಯಾಯದ ದೇಶಗಳ ಮೇಲೆ ತನ್ನ ಬಂಡವಾಳ ಹೂಡುವ ಮೂಲಕ ತನ್ನ ಜನರಿಗೆ ಹೊಸ ಕೆಲಸ ಗಳನ್ನು ಕೊಡುವ ಪ್ರಯತ್ನದಲ್ಲಿದೆ.
ಒಂದು ಬಲಿಷ್ಠ ನಾಯಕತ್ವ ಮತ್ತು ಸ್ಥಿರ ಸರ್ಕಾರ ಹಾಗೂ ಅಲ್ಲಿನ ನಾಯಕರ ದೂರಲೋಚನೆ ಹಾಗೂ ಇಚ್ಚಾಶಕ್ತಿಗಳು ಇವತ್ತು ಚೀನಾದ ವಸ್ತುಗಳ ಮೇಲೆ ಇಡೀ ಜಗತ್ತು ಇವತ್ತು ಆಧಾರ ಪಡುವ ಹಾಗೆ ಮಾಡಿದೆ ಎಂದರೆ ಅದು ಖಂಡಿತ ಅತಿಶಯೋಕ್ತಿ ಅಲ್ಲ.
ನಮ್ಮ ಭಾರತದ ಮೇಕ್ ಇನ್ ಇಂಡಿಯಾ, ಮೇಡ್ ಇನ್ ಚೀನಾ ನ ಸಡ್ಡು ಹೊಡಿಯೋದಕ್ಕೆ ಆಗ್ಲಿ ಹತ್ತಿರ ಹೋಗಕ್ಕೆ ಕೂಡ ಅದು ಎಷ್ಟು ವರ್ಷಗಳು ಬೇಕಾಗಬಹುದೇನೋ
ಇದೇ ಜಗತ್ತಿನ ಬಹುತೇಕ ವಸ್ತುಗಳು ಮೇಡ್ ಇನ್ ಚೀನಾ ಇರುವ ಕಾರಣಗಳು. ಇದನ್ನು ನಿಮ್ಮವರೊಂದಿಗೆ ಶೇರ್ ಮಾಡಿ.
– ಮನನ್ ಜೈನ್
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ
ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ಪ್ರಮುಖ ಸುದ್ದಿಗಳು

ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ಪ್ರಮುಖ ಸುದ್ದಿಗಳು
1. ಮುಖ್ಯಮಂತ್ರಿ ಸಿದ್ದರಾಮಯ್ಯ ನವದೆಹಲಿ ತಲುಪಿದ್ದಾರೆ. ಇಂದು ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ, 5 ಪ್ರಮುಖ ಮಸೂದೆಗಳಿಗೆ ಅಂಗೀಕಾರ ನೀಡುವಂತೆ ಮನವಿ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ, ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ, ಕೇಂದ್ರದ ಜಲಶಕ್ತಿ ಖಾತೆ ಸಚಿವರನ್ನು ಕೋರುವುದಾಗಿ, ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
2. ರಾಜ್ಯದ ಗ್ರಾಮ ಪಂಚಾಯ್ತಿಗಳ ಹಂತದಲ್ಲಿ ಜುಲೈ 15ರಿಂದ, ಸಾರ್ವಜನಿಕರ ಆಸ್ತಿಗಳ ಇ-ಖಾತೆ ರೂಪಿಸುವ ಅಭಿಯಾನವನ್ನು ಕಂದಾಯ ಇಲಾಖೆ ಆಯೋಜಿಸಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
3. ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಗೆ ಸಂಬಂಧಿಸಿ, ಇಲ್ಲಿಯವರೆಗೆ ಹೆಸರು ನೋಂದಾಯಿಸದವರು, ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ, ಈ ತಿಂಗಳ 30ರವರೆಗೆ ಮಾಹಿತಿ ನೀಡಲು ಅವಕಾಶವಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದ್ದಾರೆ.
4. ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್. ಅಣೆಕಟ್ಟೆ ಭಾಗಶ: ಭರ್ತಿಯಾಗಿದ್ದು, ಒಳ ಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅಣೆಕಟ್ಟೆಯಿಂದ 5 ಸಾವಿರದಿಂದ 15 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗಿದೆ.
5. ಕತಾರ್ನಲ್ಲಿರುವ ಅಲ್ ಉದೈದ್ ಅಮೇರಿಕ ವಾಯುನೆಲೆಯ ಮೇಲೆ ಇರಾನ್ ನಡೆಸಿದ ದಾಳಿಯ ನಂತರ ಜಾಗತಿಕ ತೈಲ ಬೆಲೆಗಳು ಐದು ವರ್ಷಗಳಲ್ಲಿ ನಿನ್ನೆ ಒಂದೇ ದಿನದಲ್ಲಿ ತೀವ್ರ ಕುಸಿತವನ್ನು ದಾಖಲಿಸಿದೆ.
6. ಕರ್ನಾಟಕ, ಮಧ್ಯಪ್ರದೇಶ, ಬಿಹಾರ, ಜಾಖಂಡ್, ಒಡಿಶಾ, ಛತ್ತೀಸ್ಗಢ, ಪಶ್ಚಿಮ ಬಂಗಾಳ, ಸಿಕ್ಕಿಂ, ಅರುಣಾಚಲ ಪ್ರದೇಶ, ಕೊಂಕಣ, ಗೋವಾ, ಮಹಾರಾಷ್ಟ್ರ, ಗುಜರಾತ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಶ್ಚಿಮ ಉತ್ತರ ಪ್ರದೇಶ, ರಾಜಸ್ಥಾನ, ಕೇರಳದ ಕೆಲವು ಸ್ಥಳಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
7. ಅಯೋವಾದಲ್ಲಿ ನಾಳೆ ಆರಂಭವಾಗಲಿರುವ ಯುಎಸ್ ಓಪನ್ 2025 ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಹರಿಹರನ್ ಅಂಶಕರುಣನ್ ಮತ್ತು ರೂಬನ್ ಕುಮಾರ್ ರೆಥಿನಸಬಪತಿ, ಭಾರತವನ್ನು ಮುನ್ನಡೆಸಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ರಾಜ್ಯದಲ್ಲಿ ಜಾತಿ ಗಣತಿ ಮರು ಸಮೀಕ್ಷೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ : ಸಿಎಂ ಸಿದ್ದರಾಮಯ್ಯ

ಸುದ್ದಿದಿನಡೆಸ್ಕ್:ಜಾತಿಗಣತಿ ಮರು ಸಮೀಕ್ಷೆಗೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ.
ಸಂಪುಟ ಸಭೆಯ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿಗಣತಿ ಮರು ಸಮೀಕ್ಷೆಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ ಎಂದು ಹೇಳಿದ್ದಾರೆ.
54 ಮಾನದಂಡಗಳನ್ನು ಇಟ್ಟುಕೊಂಡು ಹೋಗಿ ಮನೆ ಮನೆ ಸಮೀಕ್ಷೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಹೈಕಮಾಂಡ್ ನೀಡಿದ ಸೂಚನೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಗಣತಿ ವಿಚಾರದಲ್ಲಿ ಸರಿಯಾದ ಸ್ಪಷ್ಟತೆ ನೀಡಬೇಕು ಎಂದು ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯನವರೇ ಜಾತಿ ಗಣತಿಗೆ 200 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು161 ಕೋಟಿ ರೂಪಾಯಿ ಖರ್ಚಾಗಿದೆ ಎಂದು ಹೇಳಿ, ಇದೀಗ ಜಾತಿ ಜನಗಣತಿಯನ್ನು ವಾಪಸ್ ಪಡೆಯುವುದಾಗಿ ಹೇಳುತ್ತಿರುವುದು ಹಾಸ್ಯಸ್ಪದವಾಗಿದೆ ಎಂದು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
RCB ಸಂಭ್ರಮಾಚರಣೆ : 18 ರೂಪಾಯಿಗೆ ಬಿರಿಯಾನಿ ಮಾರಾಟ

ಸುದ್ದಿದಿನ,ಬೆಂಗಳೂರು:ಆರ್ಸಿಬಿ ವಿಜಯೋತ್ಸವದಲ್ಲಿ ಬೆಂಗಳೂರು ಮಿಂದೆದ್ದಿದೆ. ಜನ ವಿಭಿನ್ನ ರೀತಿಯಲ್ಲಿ ತಮ್ಮ ಸಂಭ್ರಮಾಚರಣೆ ವ್ಯಕ್ತಪಡಿಸಿದ್ದಾರೆ. ಹೋಟೆಲ್ ರೆಸ್ಟೋರೆಂಟ್ಗಳೂ ಕೂಡ ಇದನ್ನೇ ಬಂಡವಾಳ ಮಾಡಿಕೊಂಡು ಭರ್ಜರಿ ವ್ಯಾಪಾರ ಮಾಡಿವೆ.
ಬೆಂಗಳೂರಿನ #NativeCooks ಫುಡ್ ಡೆಲಿವರಿ ಸಂಸ್ಥೆಯು ಕೇವಲ 18 ರೂಪಾಯಿಗೆ ಬಿರಿಯಾನಿ ಮಾರಾಟ ಮಾಡುವ ಮೂಲಕ ಆರ್ಸಿಬಿ ಅಭಿಮಾನಿಗಳ ಮನ ಗೆದ್ದಿದೆ.
ಹೌದು, ಹೆಬ್ಬಾಳ, ಆರ್ಟಿ ನಗರ, ಸದಾಶಿವನಗರದಲ್ಲಿ ಡೆಲಿವರಿ ಶುಲ್ಕವಿಲ್ಲದೆ ಅತಿ ಕಡಿಮೆ ದರದಲ್ಲಿ ಫುಡ್ ಡೆಲಿವರಿ ಮಾಡುತ್ತಿರುವ #NativeCooks ಸಂಸ್ಥೆಯು ಆರ್ಸಿಬಿ ಅಭಿಮಾನಿಗಳನ್ನು ಖುಷಿಪಡಿಸಲು ಈ ರೀತಿ ಹೊಸ ಆಫರ್ ಬಿಟ್ಟಿತ್ತು. ಮೂಲಗಳ ಪ್ರಕಾರ ಸುಮಾರು ಒಂದು ಸಾವಿರ ಬಿರಿಯಾನಿ ಲಂಚ್ಬಾಕ್ಸ್ಗಳನ್ನು ತಲಾ 18ರೂಪಾಯಿಯಂತೆ ಮಾರಾಟ ಮಾಡಿದೆ.
ಮನೆಯಲ್ಲೇ ಮಾಡಿದ ಆಹಾರ ಪದಾರ್ಥಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವ ನೇಟೀವ್ ಕುಕ್ಸ್ ಸಂಸ್ಥೆಯು ಹೆಣ್ಣುಮಕ್ಕಳೇ ಸೇರಿ ನಡೆಸುತ್ತಿರುವ ಪುಟ್ಟ ಕೇಟರಿಂಗ್ ಆಗಿದೆ. ವಾರದಲ್ಲಿ 6 ದಿನಗಳ ಕಾಲ ಕಾರ್ಯ ನಿರ್ವಹಿಸುವ ಈ ಕೇಟರಿಂಗ್. ವೆಜ್ ಊಟವನ್ನು ಕೇವಲ 80 ರೂಪಾಯಿಗೆ ಹಾಗೂ ನಾನ್ವೆಜ್ ಊಟವನ್ನು 135 ರೂಪಾಯಿಗೆ ಹಾಗೂ ಎಕ್ ಮೀಲ್ಅನ್ನು ಕೇವಲ 110 ರೂಪಾಯಿಗೆ ಮಾರಾಟ ಮಾಡುತ್ತಿದೆ.
ಸದ್ಯಕ್ಕೆ ಹೆಬ್ಬಾಳ, ಆರ್ಟಿನಗರ ಹಾಗೂ ಸದಾಶಿವನಗರಕ್ಕೆ ಡೆಲಿವರಿ ಶುಲ್ಕ ಇಲ್ಲದೇ ಆಹಾರ ವಿತರಿಸುತ್ತಿದ್ದು, ಹೆಚ್ಚಿನ ಮಾಹಿತಿಗೆ 80 4853 6206 ಸಂಪರ್ಕಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days ago
ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ, ಗಿಗ್, ಸಿನಿ ಹಾಗೂ ಮನೆಗೆಲಸ ಕಾರ್ಮಿಕರ ಕಲ್ಯಾಣಕ್ಕಾಗಿ ಅಧಿನಿಯಮ ಜಾರಿಗೆ ಕ್ರಮ : ಸಚಿವ ಸಂತೋಷ್ ಲಾಡ್
-
ಅಂಕಣ3 days ago
ಆತ್ಮಕತೆ | ಕೃಷ್ಣಪ್ಪನವರ ನಿಧನ : (09.06.1938 – 30.04.1997)
-
ದಿನದ ಸುದ್ದಿ5 days ago
500 ಪಡಿತರ ಚೀಟಿಗಳಿಗೆ ಒಂದು ಪಡಿತರ ಅಂಗಡಿ ತೆರೆಯಲು ಸರ್ಕಾರ ನಿರ್ಧಾರ
-
ದಿನದ ಸುದ್ದಿ4 days ago
ರಾಷ್ಟ್ರೀಯ ಲೋಕ ಅದಾಲತ್ನಲ್ಲಿ 9360 ಪ್ರಕರಣ ಇತ್ಯರ್ಥ ; ವಿಚ್ಚೇದನ ಕೋರಿ ಸಲ್ಲಿಸಿದ್ದ 23 ಜೋಡಿ ವೈವಾಹಿಕ ಜೀವನ ಸುಖಾಂತ್ಯ
-
ದಿನದ ಸುದ್ದಿ6 days ago
ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರೆಣೆ
-
ದಿನದ ಸುದ್ದಿ5 days ago
ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಮೂಲ ಸೌಲಭ್ಯಗಳ ಕೊರತೆ : ಕರವೇ ಮನವಿ
-
ದಿನದ ಸುದ್ದಿ6 days ago
ಪಿಹೆಚ್ಡಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿವೇತನ : ಅರ್ಜಿ ಆಹ್ವಾನ
-
ದಿನದ ಸುದ್ದಿ5 days ago
ದತ್ತಾಂಶ ನಿರ್ವಾಹಕ ಗ್ರೇಡ್ ಎ ಪರೀಕ್ಷೆಗೆ ಅರ್ಜಿ ಆಹ್ವಾನ