ರಾಜಕೀಯ
NRC, CAB ಮತ್ತು ವಲಸಿಗರು
NRC ಹಾಗೂ CABನ್ನು ಸರಳೀಕರಿಸಿ ಹೇಳುವುದಾದರೆ ಅಸ್ಸಾಂನ ಉದಾಹರಣೆ ತೆಗೆದುಕೊಳ್ಳಬೇಕು. ಅಸ್ಸಾಂನಲ್ಲಿ ಹೀಗೋ ಹಾಗೋ NRC ಮುಗಿದಿದೆ. ಬಿಜೆಪಿಯ ಪ್ರಕಾರ ಅಸ್ಸಾಂನಲ್ಲಿ ಒಂದು ಕೋಟಿ ಅಕ್ರಮ ಮುಸ್ಲೀಮ್ ಬಾಂಗ್ಲಾದೇಶಿಗರಿದ್ದರು. ಹಾಗಾಗಿ NRC ನಡೆಯಿತು. NRCಯ ಮೊದಲ ಕರಡುಪ್ರತಿಯ ಪ್ರಕಾರ ಅಕ್ರಮ ಬಾಂಗ್ಲಾದೇಶಿಗಳ ಸಂಖ್ಯೆ ಒಂದು ಕೋಟಿಯಿದ್ದದ್ದು ನಲವತ್ತು ಲಕ್ಷಕ್ಕಿಳಿಯಿತು.
ಈ ಕರಡು NRCಯ ಫೈನಲ್ ಆದಾಗ ಭಾರತದಲ್ಲಿ ತಮ್ಮ ಇರುವಿಕೆಯ, ಬಾಳ್ವೆಯ ದಾಖಲೆಗಳನ್ನು ಕೊಡಲಾಗದೆ ಉಳಿದದ್ದು ಬರೀ ಹತ್ತೊಂಬತ್ತು ಲಕ್ಷ ಜನ. ಇದಾಗುವಾಗ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು ಎನ್ನುವುದನ್ನು ಮರೆಯಬಾರದು. ಕೊನೆಗೆ ಉಳಿದ ಹತ್ತೊಂಬತ್ತು ಲಕ್ಷ ಜನರಲ್ಲಿ NRC ಪ್ರಕಾರ ಹನ್ನೆರಡು ಲಕ್ಷ ಹಿಂದೂಗಳೆಂದಾಯಿತು. ಯಾವಾಗ ದಾಖಲೆ ಕೊಡಲಾಗದ ವಲಸಿಗರಲ್ಲಿ ಮುಸ್ಲೀಮರ ಸಂಖ್ಯೆ ಕಡಿಮೆಯಾಗಿ ಹಿಂದೂಗಳ ಸಂಖ್ಯೆ ಜಾಸ್ತಿಯಾಯಿತೋ, ಆವಾಗ ಸ್ವತ: ಅಸ್ಸಾಂ ಬಿಜೆಪಿ NRC ಬಗ್ಗೆ ಉಲ್ಟಾ ಹೊಡೆಯಿತು. NRCಯನ್ನೇ ತಿರಸ್ಕರಿಸಿ ಅದನ್ನು ಒಂದು ರದ್ದಿ ಪೇಪರ್ ಎಂದು ಬಣ್ಣಿಸಿತು.
ಇದು NRC ಮಹಾತ್ಮೆಯಾದರೆ ಈವಾಗ CABಯನ್ನು ತಂದು ಭಾರತದಲ್ಲಿ ತಮ್ಮ ಬಾಳ್ವೆಯ ಸೂಕ್ತ ದಾಖಲೆಗಳನ್ನು ಕೊಡಲಾಗದ ಈ ಹನ್ನೆರಡು ಲಕ್ಷ ಹಿಂದೂಗಳನ್ನು ಭಾರತದ ಪೌರರನ್ನಾಗಿ ಮಾಡುತ್ತಾರೆ. ಉಳಿದ ಏಳು ಲಕ್ಷ ಮುಸ್ಲೀಮರನ್ನು ಏನು ಮಾಡುತ್ತಾರೆ? ಅವರನ್ನು ಹೊರಹಾಕಲು ಆಗುವುದಿಲ್ಲ. ಅವರು ತಮ್ಮ ಅನರ್ಹತೆಯನ್ನು NRC Tribunalನಲ್ಲಿ ಪ್ರಶ್ನಿಸಬಹುದು.
ಅಲ್ಲೂ ಅವರು ಸೂಕ್ತ ದಾಖಲೆ ಕೊಟ್ಟಿಲ್ಲವೆಂದರೆ? ಅವರು ಭಾರತದವರಲ್ಲ ಬದಲಾಗಿ ಬಾಂಗ್ಲಾದೇಶದಿಂದ ಬಂದವರು ಎಂದು ಹೇಳಲು ದಾಖಲೆಗಳಿರಬೇಕಲ್ವಾ? ಹಾಗೆ ದಾಖಲೆಗಳಿಲ್ಲವೆಂದರೆ ಬಾಂಗ್ಲಾದೇಶವೂ ಅವರನ್ನು ಬರಮಾಡಿಕೊಳ್ಳುವುದಿಲ್ಲ. ಅಲ್ಲಿಗೆ ಈ ದಾಖಲೆಗಳಿಲ್ಲದ ಅಷ್ಟೂ ಮಂದಿಯನ್ನು ಜೈಲಿಗಾಗಬೇಕು ಇಲ್ಲಾಂದ್ರೆ Detention Centreಗಳಿಗೆ ಹಾಕಬೇಕು. ಅಸ್ಸಾಂನಲ್ಲಿ ಸದ್ಯಕ್ಕೆ ತಲಾ ಐವತ್ತು ಕೋಟಿ ವೆಚ್ಚದಲ್ಲಿ ಹನ್ನೊಂದು Detention Centreಗಳನ್ನು ಕಟ್ಟಲಾಗುತ್ತಿದೆ. ಸದ್ಯಕ್ಕೆ ಒಂದು Detention Centre ತಯಾರಾಗಿದೆಯಷ್ಟೇ. ಪ್ರತೀ Detention Centreನಲ್ಲಿ ಮೂರು ಸಾವಿರ ಅಕ್ರಮ ವಲಸಿಗರನ್ನು ಇಡಬಹುದು. ಈ ಹನ್ನೊಂದು Detention Centreಗಳ ಹೊರತಾಗಿ ಅಸ್ಸಾಂನ ಆರು ಜಿಲ್ಲಾ ಕಾರಾಗ್ರಹಗಳಲ್ಲಿ ಸಣ್ಣ Detention Centreಗಳಿವೆ. ಈ Detention Centreಗಳಿಗೆ ಸೇರಿಸಿದ ಅಕ್ರಮ ವಲಸಿಗರನ್ನು ಸಂಪೂರ್ಣವಾಗಿ ನೋಡಿಕೊಳ್ಳುವ ಜವಾಬ್ದಾರಿ ರಾಜ್ಯ ಹಾಗೂ ಕೇಂದ್ರ ಸರಕಾರದ್ದು.
ಇದುವರೆಗೂ ಕೂಲಿನಾಲಿ ಮಾಡಿ ಬದುಕುತ್ತಿದ್ದ ಇವರು ಈವಾಗ ಸಂಪೂರ್ಣವಾಗಿ ಸರಕಾರದ ಜವಾಬ್ದಾರಿ. ಇವರ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿನೂ ಸರಕಾರದ ಮೇಲೆ, ಇವರೆಲ್ಲರ ಊಟ, ಆರೋಗ್ಯ ಎಲ್ಲಾ ಜವಾಬ್ದಾರಿನೂ ಸರಕಾರದ ಮೇಲೆ. ಸರಕಾರದ ಮೇಲೆ ಎಂದರೆ ನಮ್ಮ ಮೇಲೆ. ಪರವಾಗಿಲ್ಲ. ನಮ್ಮಲ್ಲಿ ಪೆಟ್ರೋಲಿಗೆ ಇನ್ನೂರು ರೂಪಾಯಿಯಾದರೆ ಬೈಕನ್ನು ತಲೆಮೇಲೆ ಹೊತ್ತುಕೊಂಡು ಹೋಗುವವರು, ಈರುಳ್ಳಿಗೆ ನೂರ ಐವತ್ತು ರೂಪಾಯಿಯಾದರೆ ಈರುಳ್ಳಿಯನ್ನೇ ತ್ಯಜಿಸುವವರಿದ್ದಾರೆ. ಅವರು ಉಳಿಸಿದ ದುಡ್ಡನ್ನು ಈ Detention Centreಗಳ ವಾಸಿಗಳ ಅಭ್ಯುದಯಕ್ಕೆ ಬಳಸಬಹುದು.
ನಮ್ಮ ಪಿರಮಂಡೆಪೆಟ್ ಭಕ್ತರ ಪ್ರಕಾರ ಮೋದಿ, ಶಾ ಅಕ್ರಮ ವಲಸಿಗ ಮುಸ್ಲೀಮರನ್ನು ದೇಶದ ಹೊರಗೆ ಕಳುಹಿಸುತ್ತಾರೆ. ಆದರೆ ಎಲ್ಲಿ, ಯಾರಪ್ಪನ ಮನೆಗೆ? ಬಾಂಗ್ಲಾದೇಶ ಆಗಲಿ, ಪಾಕೀಸ್ಥಾನ ಆಗಲಿ, ಅಫ್ಘನಿಸ್ಥಾನ ಆಗಲಿ ಅವರನ್ನು ತಮ್ಮವರೆಂದು ಒಪ್ಪಿಕೊಂಡು ವಾಪಾಸ್ ತೆಗೆದುಕೊಳ್ಳುವುದಿಲ್ಲ. ಅವರು ಈ ದೇಶದವರೆಂದು ರುಜು ಮಾಡುವ ಜವಾಬ್ದಾರಿ ಭಾರತದ್ದು. ಈ ಏಳು ಲಕ್ಷ ಮಂದಿ ತಮ್ಮ ಅನರ್ಹತೆಯನ್ನು NRC ಟ್ರಿಬ್ಯೂನಲ್ನಲ್ಲಿ ಪ್ರಶ್ನಿಸಬಹುದು. ಆದರೆ ಅದಕ್ಕೆ ಪ್ರತೀ ವ್ಯಕ್ತಿಗೆ ಲಾಯರ್ ಫೀಸ್, ದಾಖಲೆ ಸಂಗ್ರಹ, ಸಾಕ್ಷಿಗಳನ್ನು ಹಿಯರಿಂಗ್ಗಳಿಗೆ ಕರೆದುಕೊಂಡು ಹೋಗುವುದು ಇತ್ಯಾದಿಯೆಂದು ಕನಿಷ್ಟ Rs 75000-100000 ಖರ್ಚು ಮಾಡಬೇಕಾಗುತ್ತದೆ.
ಆದರೆ ಇವರಲ್ಲಿ ಹೆಚ್ಚಿನವರು ಬಡವರು. ದಿನಕ್ಕೆ ಎರಡೊತ್ತಿನ ಊಟಕ್ಕೂ ಪರದಾಡುವವರು. ಅವರು ಎಲ್ಲಿಂದ ಈ ಹಣವನ್ನು ಜೋಡಿಸುವುದು? ಹಾಗಾಗಿ ಅವರು NRC ದಾಖಲೆಗಳನ್ನು ಪ್ರಶ್ನಿಸದೇ ಜೈಲು ಇಲ್ಲವೇ Detention Centreಗೆ ಹೋಗುತ್ತಾರೆ. ಪಾಕೀಸ್ಥಾನಕ್ಕೂ ಹೋಗುವುದಿಲ್ಲ, ಬಾಂಗ್ಲಾದೇಶಕ್ಕೂ ಹೋಗುವುದಿಲ್ಲ. ಯಾಕೆಂದರೆ ಹೆಚ್ಚಿನವರು ಅಲ್ಲಿನವರೇ ಅಲ್ಲ. ಇಲ್ಲೇ ಹುಟ್ಟಿ ಬೆಳೆದವರು. ಅವರ ಪೂರ್ವಜರಲ್ಲಿ ಯಾರೋ ಒಬ್ಬರು ಬಾಂಗ್ಲಾದೇಶ/ಪಾಕೀಸ್ಥಾನದವರು ಆಗಿರಬಹುದು. ಅದರೆ ಅವರು ಒಮ್ಮೆ ಭಾರತಕ್ಕೆ ಬಂದನಂತರ ಬಾಂಗ್ಲಾ/ಪಾಕೀಸ್ಥಾನದಲ್ಲೂ ಅವರಿಗೆ ಯಾರೂ ಇಲ್ಲ, ಯಾವ ದಾಖಲೆಗಳೂ ಇಲ್ಲ. ಹಾಗಾಗಿ ಅವರು ಎಲ್ಲಿಯೂ ಹೋಗುವುದಿಲ್ಲ. ಇಲ್ಲೇ ಇರುತ್ತಾರೆ ನಮ್ಮದೇ ದೇಶದಲ್ಲಿ ಸರಕಾರದ ಅತಿಥಿಗಳಾಗಿ. ಇದು ಮೂರುವರೆ ಕೋಟಿ ಜನಸಂಖ್ಯೆಯ ಒಂದು ರಾಜ್ಯದ ಪರಿಸ್ಥಿತಿ.
ಇಡೀ ದೇಶಕ್ಕೆ ಇದು ಅನ್ವಯವಾಗುವಾಗ ಎಂಥ ದಯನೀಯ ಪರಿಸ್ಥಿತಿ ಉಂಟಾಗುತ್ತೆಯೆಂದು ಊಹಿಸುವುದೂ ಕಷ್ಟ. ಅಸ್ಸಾಂನ NRCಗೆ ಖರ್ಚಾಗಿರುವ ಹಣ Rs 1600 ಕೋಟಿಯೆಂದು ಸರಕಾರಿ ದಾಖಲೆಗಳು ಹೇಳುತ್ತಿವೆ. ಇದರ ಜೊತೆ Detention Centre ಕಟ್ಟಲು ತಗಲುವ ಖರ್ಚು ಬೇರೆ. ಪ್ರತಿಯೊಂದೂ Detention Centre ಕಟ್ಟಲು ತಗಲುವ ಖರ್ಚು Rs 45-50 ಕೋಟಿ. ಇಡೀ ದೇಶದಲ್ಲಿ CAB ಆಗಿ ಅಕ್ರಮವಾಗಿ ಭಾರತದಲ್ಲಿ ನೆಲೆಸಿರುವ ಇಲ್ಲವೇ ತಮ್ಮ ಇರುವಿಕೆಯ ದಾಖಲೆ ಕೊಡಲಾಗದ ಹಿಂದೂ, ಕ್ರೈಸ್ತ, ಸಿಖ್, ಜೈನ, ಬೌದ್ಧ ಹಾಗೂ ಪಾರ್ಸಿಗಳಿಗೆ ಭಾರತದ ಪೌರತ್ವ ಸಿಗುತ್ತೆ. ಅಂದರೆ ಈ ಆರು ಸಮುದಾಯಗಳು ಹಾಗೂ ಮುಸ್ಲೀಮರದ್ದು ಒಂದೇ ಕಥೆ. ಯಾರಲ್ಲೂ ತಾವು ಭಾರತದಲ್ಲಿ ಯಾವತ್ತಿನಿಂದ ನೆಲೆಸಿದ್ದೇವೆ, ನಾವು ಭಾರತೀಯರೇ ಎನ್ನುವ ದಾಖಲೆಗಳಿಲ್ಲ. ಹಾಗಾಗಿ ಎಲ್ಲರೂ ‘ಅಕ್ರಮ’ಗಳು.
ಆದರೆ ಈ ಎಲ್ಲಾ ‘ಅಕ್ರಮ’ಗಳಲ್ಲಿ ಹಿಂದೂ, ಕ್ರೈಸ್ತ, ಸಿಖ್, ಜೈನ, ಬೌದ್ಧ ಹಾಗೂ ಪಾರ್ಸಿಗಳು ಯಾವುದೇ ಶ್ರಮವಿಲ್ಲದೆ ‘ಸಕ್ರಮ’ಗಳಾದರೆ, ಅವರಂತೆಯೇ ದಾಖಲೆಗಳಿಲ್ಲದ ಮುಸ್ಲೀಮರು ಅತಂತ್ರರಾಗುತ್ತಾರೆ. ಆದರೆ ನಮ್ಮ ಭಕ್ತರ ಪ್ರಕಾರ ಇದು ತಾರತಮ್ಯ ಅಲ್ಲ ಶೋಷಣೆನೂ ಅಲ್ಲ ಮುಸ್ಲೀಮ್ ದ್ವೇಷವೂ ಅಲ್ಲ. ಹೋಗ್ಲಿ ಇದನ್ನೆಲ್ಲಾ ಅರ್ಥ ಮಾಡಿಕೊಳ್ಳುವಷ್ಟು ಬ್ರೈನು ಅವರಿಗಿಲ್ಲ. ಇರುವ ಸಣ್ಣದೊಂದು ತುಂಡು ನಾಗ್ಪುರದ ಬ್ಲಡಿ ಬ್ಯಾಂಕ್ನಲ್ಲಿ ಅಡವಿಟ್ಟಾಗಿದೆ.
ಹೀಗೆ ದಾಖಲೆಗಳಿಲ್ಲದ ಮುಸ್ಲೀಮರನ್ನು NRCಯಡಿಯಲ್ಲಿ ತರುತ್ತಾರೆ. ಎಷ್ಟು ಮುಸ್ಲೀಮರು ಸಿಗುತ್ತಾರೋ ಎಂದು ತಿಳಿಯೋಲ್ಲ. ಆದರೆ ಸಿಕ್ಕ ಒಬ್ಬನೇ ಒಬ್ಬ ದಾಖಲೆಗಳಿಲ್ಲದ ಮುಸ್ಲೀಮರನ್ನು ದೇಶದ ಗಡಿ ಹೊರಗೆ ಕಳುಹಿಸಲಾಗುವುದಿಲ್ಲ ಬಾಂಗ್ಲಾ, ಪಾಕೀಸ್ಥಾನಗಳು ಅವರನ್ನು ಬರಮಾಡಿಕೊಳ್ಳದೆ. ಅಂದರೆ ದೇಶದೆಲ್ಲೆಡೆ ಎಷ್ಟು Detention Centreಗಳನ್ನು ಕಟ್ಟಬೇಕೋ? ಇದು ತಿಳಿಯುವ ಹೊತ್ತಿಗೆ ತಲೆಗೇರಿದ ಧರ್ಮದ ಅಫೀಮು ಇಳಿದು, ಮನುಷ್ಯ ರೂಪಕ್ಕೆ ಬರುತ್ತಾರೆ.
–Almedia Gladson
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ
ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.
ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.
ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಡಿಕೇರಿಯಲ್ಲಿ ನಡೆದ ಜನಧ್ವನಿ-2 ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದೆ.
ಸಂವಿಧಾನಕ್ಕೆ ಅಪಾಯ ಎಂದರೆ ದೇಶದ ಮಹಿಳೆಯರು, ಬಡವರು, ಮಧ್ಯಮ ವರ್ಗದವರು, ಶೂದ್ರರು, ಶ್ರಮಿಕರ ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ.
ಭಾರತದಲ್ಲಿ ಪ್ರಜಾತಂತ್ರ ಅಪಾಯದಲ್ಲಿದೆ. ಇದನ್ನು ಉಳಿಸುವ ಅನಿವಾರ್ಯತೆ ನಮ್ಮೆಲ್ಲರ ಮುಂದಿದೆ. ಈ ಲೋಕಸಭಾ ಚುನಾವಣೆ ನಮಗೊಂದು… pic.twitter.com/UapeRxBcZP
— Siddaramaiah (@siddaramaiah) April 14, 2024
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ವಿವಿಧ ಜಿಲ್ಲೆಗಳಲ್ಲಿ ಡಾ. ಬಾಬು ಜಗಜೀವನ್ ರಾಮ್ 117ನೇ ಜನ್ಮ ದಿನಾಚರಣೆ
ಸುದ್ದಿದಿನ ಡೆಸ್ಕ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಾ. ಬಾಬು ಜಗಜೀವನ್ ರಾಮ್ ಅವರ 117ನೇ ಜನ್ಮ ದಿನಾಚರಣೆ ಪ್ರಯುಕ್ತ ವಿಧಾನ ಸೌದದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ್ಪ, ಹಿರಿಯ ಶಾಸಕ ಈ. ತುಕಾರಾಮ್, ಮಾಜಿ ಸಚಿವ ಹೆಚ್.ಆಂಜನೇಯ, ವಿಧಾನ ಪರಿಷತ್ ಸದಸ್ಯ ಸುದಾಮ ದಾಸ್, ಮಹಿಳಾ ಆಯೋಗದ ಅದ್ಯಕ್ಷೆ ಡಾ. ನಾಗಲಕ್ಷ್ಮಿ ಸೇರಿ ಹಲವರು ಉಪಸ್ಥಿತರಿದ್ದರು. ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ ರಾಂ ಅವರ ಜನ್ಮ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು.
ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಜಗಜೀವನರಾಂ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಮಂಡ್ಯದ ಡಿಸಿ ಪಾರ್ಕ್ ಎದುರು ಇರುವ ಜಗಜೀವನ್ರಾಮ್ ಪ್ರತಿಮೆಗೆ ಜಿಲ್ಲಾಡಳಿತದ ವತಿಯಿಂದ ಮಾಲಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಎಸ್ಪಿ ಎನ್.ಯತೀಶ್ ಸೇರಿದಂತೆ ಅಧಿಕಾರಿಗಳ ವರ್ಗ ಹಾಗೂ ಜಗಜೀವನ್ರಾಮ್ ಅನುಯಾಯಿಗಳು ಭಾಗವಹಿಸಿದ್ದರು.
ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಬಾಬು ಜಗಜೀವನ ರಾಂ ಅವರ ಅವರ 117ನೇ ಜಯಂತಿಯನ್ನು ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾಂಕೇತಿಕವಾಗಿ ಆಚರಿಸಲಾಯಿತು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಾಬು ಜಗಜೀವನ್ ರಾಂ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಇಂದು ಚುನಾವಣಾ ಆಯೋಗ ಸಮಾವೇಶ
ಸುದ್ದಿದಿನ ಡೆಸ್ಕ್ : ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ 11 ರಾಜ್ಯಗಳ ನಗರ ಪಾಲಿಕೆ ಆಯುಕ್ತರು ಮತ್ತು ಆಯ್ದ ಜಿಲ್ಲಾ ಚುನಾವಣಾ ಅಧಿಕಾರಿಗಳೊಂದಿಗೆ ಕೇಂದ್ರ ಚುನಾವಣಾ ಆಯೋಗ ಇಂದು ದೆಹಲಿಯಲ್ಲಿ ಸಮಾವೇಶ ನಡೆಸಲಿದೆ.
ಈ ಸಮಾವೇಶದಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಚರ್ಚಿಸಲಾಗುವುದು ಮತ್ತು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಡಿಮೆ ಮತದಾನದ ಸಮಸ್ಯೆಯನ್ನು ಪರಿಹರಿಸಲು ಉದ್ದೇಶಿತ ಮತ್ತು ನಿರ್ದಿಷ್ಟ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಲಾಗುವುದು.
ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಹೈದರಾಬಾದ್, ಅಹಮದಾಬಾದ್, ಪುಣೆ, ಥಾಣೆ, ನಾಗ್ಪುರ, ಪಾಟ್ನಾ ಸಾಹಿಬ್, ಲಖನೌ ಮತ್ತು ಕಾನ್ಪುರ ನಗರ ಪಾಲಿಕೆಯ ಆಯುಕ್ತರು ಮತ್ತು ಬಿಹಾರ ಮತ್ತು ಉತ್ತರದ ಆಯ್ದ ಜಿಲ್ಲಾ ಚುನಾವಣಾ ಅಧಿಕಾರಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತರುಗಳಾದ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243