ದಿನದ ಸುದ್ದಿ
ದೇಶ ಸುತ್ತೋರಿಗೆ ರೈಲ್ವೆ ಇಲಾಖೆಯ ಭರ್ಜರಿ ಆಫರ್..!
ಸುದ್ದಿದಿನ ಡೆಸ್ಕ್ : ದೇಶ ಸುತ್ತು ಕೋಶ ಓದು ಎಂಬುದು ಜನಪದರ ನುಡಿಯಂತೆ ಕೋಶ ಓದಿಯಾದರೂ ಸರಿ, ದೇಶ ಸುತ್ತಿಯಾದರೂ ಜ್ಞಾನ ಗಳಿಸಬೇಕು. ಓದೋರಿಗಿಂತ ದೇಶ ಸುತ್ತೋರೇ ಹೆಚ್ಚು ಜನ. ಪ್ರವಾಸ ಕೈಗೊಳ್ಳುವ ಪ್ರವಾಸಿಗರಿಗಾಗಿಯೇ ರೈಲ್ವೆ ಇಲಾಖೆಯು ಕೈಗೆಟುಕುವ ದರದಲ್ಲಿ ಆಕರ್ಷಕ ಪ್ರವಾಸದ ಪ್ಯಾಕೇಜ್ ನೀಡಿದೆ.
ರೈಲು ದೇಶದ ಪ್ರಮುಖ ಪ್ರವಾಸಿ, ಧಾರ್ಮಿಕ ಸ್ಥಳಗಳನ್ನು ಒಳಗೊಂಡಿದೆ. ಪ್ರವಾಸಿಗರ ಬಜೆಟ್ ಗೆ ತಕ್ಕಂತೆ ತಮಗಿಷ್ಟದ ಸ್ಥಳಗಳುಳ್ಳ ಪ್ಯಾಕೇಜ್ ಆಯ್ಕೆ ಮಾಡಿಕೊಂಡು ಪ್ರಕಾರ ವಾಸ ಕೈಗೊಳ್ಳಬಹುದು. ಐಆರ್ಟಿಸಿಟಿಸಿ ಟೂರಿಸಂ ವೆಬ್ಸೈಟ್ ಗೆ ಹೋಗಿ ಪ್ಯಾಕೇಜ್ ಆಯ್ಕೆ ಮಾಡಿಕೊಳ್ಳಬಹುದು. ಈ ಪ್ಯಾಕೇಜ್ ನ ಟಿಕೆಟ್ ಗಳನ್ನು ಆನ್ಲೈನ್ ಇಲ್ಲವೇ ರೈಲ್ವೆ ಇಲಾಖೆಯ ಕಚೇರಿಯಲ್ಲಿ ಟಿಕೆಟ್ ಬುಕ್ ಮಾಡಬಹುದು.
ಈ ಪ್ರವಾಸ ಕೈಗೊಳ್ಳುವ ರೈಲಿನಲ್ಲಿ ಬೋರ್ಡಿಂಗ್ ವ್ಯವಸ್ಥೆಯೂ ಲಭ್ಯವಿದೆ. ವಿವಿಧ ನಗರಗಳಲ್ಲಿ ರಾತ್ರಿ ಉಳಿದುಕೊಳ್ಳುವ ಪ್ರವಾಸಿಗರಿಗೆ ಅಕಾಮಡೆಷನ್ ಲಭ್ಯವಿದೆ. ಪ್ರವಾಸಿಗರ ಸುರಕ್ಷತೆಗಾಗಿ ಸ್ಥಳದಲ್ಲಿ ಭದ್ರತಾ ಪಡೆ ನಿಯೋಜಿಸಲಾಗಿರುತ್ತದೆ. ರೈಲಿನಲ್ಲಿ ಬಹುತೇಕ ಸ್ವೀಪರ್ ಕೋಚ್ ಇದೆ. ಪ್ರವಾಸಿಗರು ಬೇಡಿಕೆಯಿಟ್ಟರೆ ಎಸಿ ಕೋಚ್ ವ್ಯವಸ್ಥಯನ್ನು ಮಾಡಲಾಗುತ್ತದೆ.
ಭಾರತ್ ದರ್ಶನ್ ರೈಲಿನ ಪ್ಯಾಕೇಜ್ ಇಲ್ಲಿದೆ
01. ಶ್ರಾವಣ ಸ್ಪೆಷಲ್ ಜ್ಯೋತಿರ್ಲಿಂಗ ಯಾತ್ರೆ ಪ್ಲಸ್ ನೇಪಾಲ್ (WZBD235)
ಇದು 20 ಹಗಲು/ 19 ರಾತ್ರಿಯ ಟ್ರಿಪ್ ಆಗಿದ್ದು, ಇದು ಧಾರ್ಮಿಕ ಸ್ಥಳಗಳ ಪ್ರವಾಸವಾಗಿದೆ. ಆಸ್ತಿಕರಿಗೆ ಇಷ್ಟವಾಗುವಂಥ ಟ್ರಿಪ್ ಆಗಲಿದೆ. *ಎಲ್ಲೆಲ್ಲಿ:* ಪುಣೆ, ನಾಸಿಕ್, ದ್ವಾರಕ, ಸೋಮನಾಥ, ಉಜ್ಜಯಿನಿ, ಅಲಹಾಬಾದ್, ವಾರಾಣಸಿ, ಪಶುಪತಿನಾಥ ( ನೇಪಾಳ), ಪೋಕರ್, ಔರಂಗಾಬಾದ್, ಪರ್ಭಾನಿ, ಪರ್ಲಿ, ಕರ್ನೂಲ್ ಟೌನ್ ಪ್ಯಾಕೇಜ್ ನ ಸ್ಥಳಗಳಾಗಿವೆ.
ನೀವು ಆಯ್ದುಕೊಳ್ಳುವ ಸ್ಥಳಗಳಲ್ಲಿ ಬೋರ್ಡಿಂಗ್ ಮತ್ತು ಡಿಬೋರ್ಡಿಂಗ್ ವ್ಯವಸ್ಥೆ ಇದೆ. ಸ್ವೀಪರ್ ಮತ್ತು tier-3 AC ಕ್ಲಾಸ್ ಕೋಚ್ ವ್ಯವಸ್ಥೆ ಇದೆ. ಬೆಳಗ್ಗೆ ಟಿಫಿನ್, ಮಧ್ಯಾಹ್ನ, ರಾತ್ರಿ ಊಟ ಒದಗಿಸಲಾಗುತ್ತದೆ. ಸ್ಟ್ಯಾಂಡರ್ಡ್ ಪ್ಯಾಕೇಜ್ ಗೆ ₹ 18,900 ಹಾಗೂ ಕಂಫರ್ಟ್ (tier-3 AC) ಪ್ಯಾಕೇಜ್ ಗೆ ₹ 23,100 ದರ ನಿಗದಿ ಮಾಡಲಾಗಿದೆ. ಉಳಿದ ಸೌಲಭ್ಯಗಳು ಎರಡಕ್ಕೂ ಅನ್ವಯವಾಗಲಿವೆ.
O2. ಭಾರತ್ ದರ್ಶನ್ (WZBD234R)
ಇದು 10ಹಗಲು/ 9ರಾತ್ರಿಯ ರಾಜ್ ಕೋಟ್ ನಿಂದ ರತ್ಲಂ ವರೆಗಿನ ಪ್ರವಾಸವಾಗಿದೆ. ಪುರಿ, ಆನಂದ, ವಡೋದರ, ಗೋಧ್ರಾ, ರತ್ಲಂ ಪ್ರವಾಸಿ ಸ್ಥಳಗಳನ್ನೊಳಗೊಂಡಿದೆ. ಇದು ಕಡಿಮೆ ದರದ ಪ್ರವಾಸವಾಗಿದ್ದು, ಯಾತ್ರಾರ್ಥಿಗಳಿಗೆ ಹೇಳಿ ಮಾಡಿಸಿದ ಪ್ರವಾಸವಾಗಿದೆ. ಈ ರೈಲು ಸ್ವೀಪರ್ ಕೋಚ್ ಮಾತ್ರ ಸೌಲಭ್ಯ ಹೊಂದಿದೆ. ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಉಪಹಾರ ಮತ್ತು ಊಟದ ವ್ಯವಸ್ಥೆ ಇದೆ. ಒಬ್ಬರಿಗೆ ₹ 9,450 ದರ ನಿಗದಿ ಮಾಡಲಾಗಿದೆ.
03. ದಕ್ಷಿಣ್ ಭಾರತ್ ಯಾತ್ರಾ (NZBD225)
ದಕ್ಷಿಣ ಭಾರತದ ಪ್ರಸಿದ್ಧ ಪ್ರವಾಸ ಸ್ಥಳಗಳ ಟ್ರಿಪ್ ಮಾಡೋರಿಗೆ ಇದು ಬೆಸ್ಟ್ ಪ್ಯಾಕೇಜ್. ಚಂಡೀಗಡ, ಅಂಬಾಲ, ಕುರುಕ್ಷೇತ್ರ, ಕರ್ನಲ್, ಪಾಣಿಪತ್, ದೆಹಲಿ ಕಾಂಟಿನೆಂಟಲ್, ರೆವರಿ, ಅಲ್ವರ್, ಜೈಪುರದೊಂದಿಗೆ ರಾಮೇಶ್ವರ, ಮಧುರೈ, ಕೋವಲಂ, ತಿರುಪತಿ ಸ್ಥಳಗಳನ್ನು ದರ್ಶನ ಮಾಡಬಹುದಾಗಿದೆ. ಬೋರ್ಡಿಂಗ್ ಮತ್ತು ಡಿಬೋರ್ಡಿಂಗ್ ವ್ಯವಸ್ಥೆ ಇದೆ. ಹರ್ಯಾಣ, ಪಂಜಾಬ್, ದೆಹಲಿ, ರಾಜಸ್ಥಾನ ರಾಜ್ಯಗಳ ಜನರಿಗೆ ದಕ್ಷಿಣ ಭಾರತದ ಪ್ರವಾಸದ ಪ್ಯಾಕೇಜ್ ಇಷ್ಟವಾಗಬಹುದು. 12ಹಗಲು, 11 ರಾತ್ರಿಯ ಪ್ರವಾಸದ ಪ್ಯಾಕೇಜ್ ಆಗಿದೆ. ಒಬ್ಬರಿಗೆ ₹ 11,340 ದರ ನಿಗದಿ ಮಾಡಲಾಗಿದೆ.
04. ಆಸ್ತ ಸ್ಪೆಷನ್ (SZBD332)
ಇದು 7 ಹಗಲು, 6 ರಾತ್ರಿಗಳುಳ್ಳ ಯಾತ್ರೆಯ ಪ್ಯಾಕೇಜ್ ಆಗಿದ್ದು, ಕೃಷ್ಣನ ಜನ್ಮಸ್ಥಳ ಹಾಗೂ ಉತ್ತರ ಪ್ರದೇಶ, ಬಿಹಾರ ರಾಜ್ಯದಲ್ಲಿರುವ ಧಾರ್ಮಿಕ ಸ್ಥಳಗಳನ್ನು ದರ್ಶನ ಮಾಡುವ ಆಸಕ್ತಿಯುಳ್ಳವರಿಗೆ ಬೆಸ್ಟ್ ಪ್ಯಾಕೇಜ್ ಆಗಿದೆ. ದೆಹಲಿ, ಅಮೃತಸರ, ಹರಿದ್ವಾರ, ಮತುರಾ, ಅಲಹಾಬಾದ್, ವಾರಾಣಸಿ, ಗಯಾ ಸ್ಥಳಗಳನ್ನು ದರ್ಶನ ಮಾಡಬಹುದು. ಒಬ್ಬರಿಗೆ ₹ 12,325 ದರ ನಿಗದಿ ಮಾಡಲಾಗಿದೆ. ಮದುರೈನಿಂದ ಪ್ರವಾಸ ಆರಂಭವಾಗಲಿದೆ.
05. ಶಿರಡಿ ಸ್ಪೆಷಲ್ (SZBD321)
ಈ ಪ್ಯಾಕೇಜ್ ನ ಹೆಸರೇ ಸೂಚಿಸುವಂತೆ ಇದು ಶಿರಡಿ ಸಾಯಿಬಾಬಾ ದರ್ಶನ ಮಾಡುವ ಆಸಕ್ತರಿಗಾಗಿಯೇ ರೆಡಿ ಮಾಡಿದ ಪ್ಯಾಕೇಜ್ ಆಗಿದೆ. 7ಹಗಲು, 6ರಾತ್ರಿಗಳುಳ್ಳ ಪ್ಯಾಕೇಜ್. ಮದುರೈನಿಂದ ಆರಂಭವಾಗುವ ಪ್ರವಾಸವು, ದಿಂಡಿಗಲ್, ಕರೂರ್, ಎರೋಡ್, ಸೇಲಂ, ಜೋಲರ್ಪೆಟ್ಟಯ್, ಕಾಟಪಡಿ, ಚೆನ್ನೈ ಸ್ಥಳಗಳನ್ನೊಳಗೊಂಡಿದೆ. ಒಬ್ಬರಿಗೆ ₹ 6,615 ಇದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ದೇವದಾಸಿ ಪುನರ್ವಸತಿ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ದೇವದಾಸಿ ಪುನರ್ವಸತಿ ಯೋಜನೆಯಡಿ ತಾತ್ಕಾಲಿಕವಾಗಿ ಖಾಲಿ ಇರುವ ಹುದ್ದೆಗೆ ನೇರ ತಾತ್ಕಾಲಿಕ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಇಲಾಖೆ, 14ನೇ ಮುಖ್ಯ ರಸ್ತೆ, ಕುವೆಂಪು ನಗರ, ಎಮ್.ಸಿ.ಸಿ ‘ಬಿ’ ಬ್ಲಾಕ್, ದಾವಣಗೆರೆ ಇಲ್ಲಿ ಅರ್ಜಿಗಳನ್ನು ಪಡೆದು ಫೆಬ್ರವರಿ 12 ರೊಳಗಾಗಿ ಕಚೇರಿ ಸಲ್ಲಿಸಬೇಕು.
ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ಯೋಜನಾಧಿಕಾರಿಗಳ ಹುದ್ದೆ ಸಂಖ್ಯೆ-1, ನಿವೃತ್ತ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ಎಂಎಸ್ಡಬ್ಲ್ಯೂ, ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಮನಃಶಾಸ್ತ್ರದಲ್ಲಿ ಎಂ.ಎಸ್ಸಿ, ಜೊತೆಗೆ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
ಚನ್ನಗಿರಿ ತಾಲ್ಲೂಕು ಯೋಜನಾ ಅನುಷ್ಟಾನಾಧಿಕಾರಿಗಳು ಹುದ್ದೆ ಸಂಖ್ಯೆ-1, ಬಿಎಸ್ಡಬ್ಲ್ಯೂ, ಬಿಎ ಇನ್ ಸೋಶಿಯಲಾಜಿ, ಎಂಎಸ್ಸಿ ಇನ್ ಸೈಕೋಲಾಜಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು. ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ದಾಖಲಾಧಿಕಾರಿಗಳ ಹುದ್ದೆ ಸಂಖ್ಯೆ-1, ಬಿಕಾಂ ಪದವಿ ಅಥವಾ ತತ್ಸಮಾನ ಪದವಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ಜ್ಞಾನವನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08192-222117 ಸಂಪರ್ಕಿಸಬಹುದೆಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭರತ ಹುಣ್ಣಿಮೆ ಪ್ರಯುಕ್ತ 25 ಹೆಚ್ಚುವರಿ ವಿಶೇಷ ವಾಹನ
ಸುದ್ದಿದಿನ,ದಾವಣಗೆರೆ : ಜನವರಿ 31 ರಿಂದ ಫೆಬ್ರವರಿ 2 ರವರೆಗೆ ಹರಪನಹಳ್ಳಿ ತಾಲ್ಲೂಕು ಉಚ್ಚಂಗಿದುರ್ಗದಲ್ಲಿ ಜರುಗಲಿರುವ ಭಾರತ ಹುಣ್ಣಿಮೆಗಾಗಿ ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ವಿಭಾಗದ ಘಟಕಗಳಿಂದ ರಾಜ್ಯದಾದ್ಯಂತ ಬರುವ ಭಕ್ತಾಧಿಗಳ ಅನುಕೂಲಕ್ಕಾಗಿ 25 ಹೆಚ್ಚುವರಿ ವಿಶೇಷ ವಾಹನ ಕಾರ್ಯಾಚರಣೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ದಿನದ ಸುದ್ದಿ
ಕಾಗದ ರಹಿತ ನೋಂದಣಿ ವ್ಯವಸ್ಥೆಯ ತರಬೇತಿ
ಸುದ್ದಿದಿನ,ದಾವಣಗೆರೆ:ಕಾಗದ ರಹಿತ ನೋಂದಣಿ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು, ಜಿಲ್ಲಾ ನೋಂದಣಿ ಕಚೇರಿ ವ್ಯಾಪ್ತಿಗೆ ಬರುವ ದಸ್ತಾವೇಜು ಬರಹಗಾರರು, ವಕೀಲರು, ಕರ್ನಾಟಕ ಒನ್, ದಾವಣಗೆರೆ ಒನ್, ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರ ಸಿಬ್ಬಂದಿ ವರ್ಗದವರಿಗೆ ತರಬೇತಿ ಆಯೋಜಿಸಲಾಗಿದೆ.
ತರಬೇತಿಯು ಜ.30 ರಂದು ಹೊನ್ನಾಳಿ ಉಪ ನೋಂದಣಿ ಕಚೇರಿ ಆವರಣ, ಜ.31 ರಂದು ಚನ್ನಗಿರಿ ಉಪ ನೋಂದಣಿ ಕಚೇರಿ ಆವರಣ, ಫೆ.2 ರಂದು ಹರಿಹರ ಉಪ ನೋದಣಿ ಕಚೇರಿ ಆವರಣ, ಫೆ.3 ರಂದು ದಾವಣಗೆರೆ ಉಪ ನೋಂದಣಿ ಕಚೇರಿ, ಫೆ.4 ರಂದು ಜಗಳೂರು ಉಪ ನೋಂದಣಿ ಕಚೇರಿ ಆವರಣಗಳಲ್ಲಿ ಮಧ್ಯಾಹ್ನ 1 ರಿಂದ 2 ಗಂಟೆಯವರೆಗೆ ನಡೆಯಲಿದೆ ಎಂದು ಜಿಲ್ಲಾ ನೋಂದಣಾಧಿಕಾರಿ ತಿಳಿಸಿದ್ದಾರೆ.


