ದಿನದ ಸುದ್ದಿ
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾಷಣದ ಬರಹ ರೂಪ : ಮಿಸ್ ಮಾಡ್ದೆ ಓದಿ
ಯುದ್ದೋನ್ಮಾದ ಸ್ಥಿತಿಯಲ್ಲಿ ನಾವುಗಳು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಭಾಷಣವನ್ನೂ ಪೂರ್ತಿಯಾಗಿ ಕೇಳಿಕೊಳ್ಳಬೇಕಿದೆ. ನಮ್ಮ ಯೋಧ ಅಭಿನಂದನ್ ಬಿಡುಗಡೆಯ ಬಗ್ಗೆ ಮಾತ್ರ ಹೇಳಿರುವ ಮಾಧ್ಯಮಗಳು, ವಿಂಗ್ ಕಮಾಂಡರ್ ಯಾಕಾಗಿ ಬಂಧನಕ್ಕೊಳಗಾದ ? ಯೋಧನ ಬಂಧನಕ್ಕೆ ಭಾರತದ ಮಾಧ್ಯಮಗಳು ಹೇಗೆ ಕಾರಣವಾದವು ಎಂಬುದನ್ನೂ ಇಮ್ರಾನ್ ಖಾನ್ ಹೇಳಿದ್ದಾರೆ. ಯುದ್ದ ಬಯಸುವವರು ನಿಮ್ಮ ಶತ್ರುವಿನ ಮಾತುಗಳಿಗೂ ಒಮ್ಮೆ ಕಿವಿಯಾಗಬೇಕಿದೆ. ಮಾಧ್ಯಮಗಳು ಎಲ್ಲವನ್ನೂ ಹೇಳುವುದಿಲ್ಲ ಎಂಬ ಕಾರಣಕ್ಕಾಗಿ ನಮ್ಮ ಹೆಮ್ಮೆಯ ಯೋಧ ಅಭಿನಂದನ್ ಬಿಡುಗಡೆಯ ಹೊತ್ತಿನಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾಷಣದ ಬರಹ ರೂಪ ಇಲ್ಲಿದೆ.
ಇಮ್ರಾನ್ ಖಾನ್ ಭಾಷಣ
ನಾನು ಪ್ರತಿಪಕ್ಷದ ನಾಯಕರಿಗೆ ಅಭಿವಂದನೆ ಸೂಚಿಸುತ್ತಾ, ಇವತ್ತು ಪಾಕಿಸ್ತಾನ ಎದುರಿಸುತ್ತಿರುವ ಗಂಭೀರ ಸಮಸ್ಯೆಯ ಸಂಧರ್ಭದಲ್ಲಿ ನಾವೆಲ್ಲರೂ ಒಟ್ಟಾಗಿರೋದಕ್ಕೆ ಸಂತಸ ವ್ಯಕ್ತಪಡಿಸುತ್ತಿದ್ದೇನೆ.
ಮಾನ್ಯ ಸ್ಪೀಕರ್ ರವರೇ,
ಹಿಂದೂಸ್ತಾನ ಒಂದು ಹೆಜ್ಜೆ ನಮ್ಮ ಕಡೆ ಇಟ್ಟರೆ ನಾವು ಎರಡು ಹೆಜ್ಜೆ ಅವರ ಕಡೆ ಮುಂದಡಿ ಇಡುತ್ತೇವೆ ಎಂದು ನಾನು ಅಂದು ಘೋಷಿಸಿದ್ದೆ. ಅಂದು ಅಂದರೆ 26 ಜುಲೈಯಂದು ನಾನಿನ್ನೂ ಕೂಡಾ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿಕೊಂಡಿರಲಿಲ್ಲ. ಇರಲಿ, ಇದರ ಹೊರತಾಗಿ ಬಡತನ ನಿರ್ಮೂಲನೆ ಮಾಡುವುದು ನನ್ನ ಗುರಿಯಾಗಿತ್ತು. ಈ ದೇಶದಲ್ಲಿ ಒಂದಷ್ಟು ಜನ ಶ್ರೀಮಂತರಾಗಿದ್ದಾರೆ. ಒಂದಷ್ಟು ಜನ ಹಸಿವೆಯಿಂದ ಬಳಲುವ ಬಡತನದಲ್ಲಿದ್ದಾರೆ. ಈ ಅಸಮಾನತೆಯನ್ನು ನಾವು ಸರಿದೂಗಿಸಬೇಕಿದೆ. ಚೀನಾ ಅದನ್ನು ಯಶಸ್ವಿಯಾಗಿ ಮಾಡಿ ತೋರಿಸಿದೆ. ಕಳೆದ ಮೂವತ್ತು ವರ್ಷಗಳಲ್ಲಿ ಚೀನಾ ಯಾವ ರೀತಿ ಮೂಲಸೌಕರ್ಯದಲ್ಲಿ ಅಭಿವೃದ್ದಿ ಹೊಂದಿದೆಯೋ ಅದೇ ರೀತಿ ಕೋಟ್ಯಾಂತರ ಜನರನ್ನು ಹಸಿವಿನಿಂದ ಮುಕ್ತಗೊಳಿಸಿದೆ.
ಚೀನಾದ ಮತ್ತೊಂದು ಸಾಧನೆಯೆಂದರೆ ತನ್ನ ನೆರೆಹೊರೆಯ ದೇಶಗಳ ಮಧ್ಯೆ ಇದ್ದ ಸಮಸ್ಯೆಗಳನ್ನು ಬಹಳ ಪ್ರಭುದ್ದವಾಗಿ ನಿರ್ವಹಿಸಿರುವುದು. ಕಳೆದ 15 ವರ್ಷಗಳಲ್ಲಿ ಅಮೇರಿಕಾವು ಅಫ್ಘಾನಿಸ್ತಾನಕ್ಕೆ ಭಯೋತ್ಪಾಧನೆಯ ಮೇಲೆಯೇ ಒಂದು ಟ್ರಿಲಿಯನ್ ಡಾಲರ್ ಖರ್ಚು ಮಾಡುತ್ತಿದೆ. ಆದರೆ ಚೀನಾ ಮಾತ್ರ ಆ ಸಂಧರ್ಭದಲ್ಲಿ ಅಭೂತಪೂರ್ವ ಅಭಿವೃದ್ದಿ ಕಡೆಗೆ ಮಾತ್ರ ಗಮನ ನೀಡಿತು. ರೈಲು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಮೇಲ್ದರ್ಜೆಗೆ ಏರಿಸಿಕೊಂಡಿತು. ಆದ್ದರಿಂದ ಯಾರು ಏನೇ ಮಾಡುತ್ತಿರಲಿ, ನಾವು ದೇಶವಾಗಿ ಅಭಿವೃದ್ದಿಯಲ್ಲಿ ಮುಂದುವರೆಯುವುದು ಈಗಿನ ಪ್ರಾಮುಖ್ಯತೆಯಾಗಿದೆ.
ನಾನು ಭಾರತದ ಜೊತೆ ಈ ಹಿಂದಿನಿಂದಲೂ ಸಂಪರ್ಕದಲ್ಲಿದ್ದೆ. ನಾವು ವಿದೇಶಾಂಗ ಸಚಿವರ ಮಾತುಕತೆ ನಡೆಸಬೇಕಿದೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವನ್ನೂ ಬರೆದಿದ್ದೆ. ಭಾರತದ ಪ್ರಧಾನಿ ಮೋದಿಯವರು ನಮ್ಮ ಪತ್ರಕ್ಕೆ ಉತ್ತಮ ಸ್ಪಂದನೆಯನ್ನೇ ಕೊಡಲಿಲ್ಲ. ಯಾಕೆ ನಮ್ಮ ಪತ್ರಕ್ಕೆ ಸ್ಪಂದನೆ ನೀಡಿಲ್ಲ ಎಂದು ನಮಗೆ ನಂತರ ಮನವರಿಕೆಯಾಯ್ತು. ಯಾಕೆಂದರೆ ಹಿಂದೂಸ್ತಾನದಲ್ಲಿ ಚುನಾವಣೆ ಬರುತ್ತಿದೆ. ಬಹುಶಃ ಚುನಾವಣೆಯ ಸಂದರ್ಭದಲ್ಲಿ ಮಾತುಕತೆ ಬೇಡ, ಚುನಾವಣೆಯ ನಂತರ ಮಾಡೋಣಾ ಎಂಬ ಕಾರಣಕ್ಕಾಗಿ ಮೋದಿಯವರು ಸ್ಪಂದನೆ ನೀಡದಿರಬಹುದು ಎಂದು ಅಂದುಕೊಂಡಿದ್ದೆ. ಆದರೆ ಅದೂ ಸುಳ್ಳಾಯ್ತು.
ಮಾನ್ಯ ಸ್ಪೀಕರ್ ರವರೆ,
ಭಾರತದ ಚುನಾವಣೆಗೂ ಮೊದಲು ನಮ್ಮ ಜೊತೆ ಭಾರತ ಮಾತನಾಡಬಹುದು ಎಂದು ನಾವು ಅಂದುಕೊಂಡಿದ್ದೆವು. ಯಾಕೆಂದರೆ ನಾವು ಮಾತುಕತೆಯ ಮೇಲೆ ನಂಬಿಕೆ ಇರಿಸಿದವರಾಗಿದ್ದೆವು. ಆದರೂ ನಮಗೆ ಅನುಮಾನ ಇತ್ತು. ಚುನಾವಣೆಗೂ ಮೊದಲು ಭಾರತದಲ್ಲಿ ಏನಾದರೊಂದು ದೊಡ್ಡ ಘಟನೆಯಾಗುತ್ತದೆ. ಆ ಘಟನೆಯನ್ನು ಚುನಾವಣೆಗಾಗಿ ಬಳಸಲಾಗುತ್ತದೆ ಎಂಬ ಅನುಮಾನ ನನಗೆ ಬಂದಿತ್ತು. ನಾನು ಹೀಗೆ ಅನುಮಾನಿಸುತ್ತಿರುವಾಗಲೇ ಪುಲ್ವಾಮಾ ಘಟನೆ ನಡೆಯಿತು. ಪುಲ್ವಾಮ ಘಟನೆ ನಡೆದು ಅರ್ಧ ಗಂಟೆಯೂ ಆಗಿರಲಿಲ್ಲ. ಆಗಲೇ ಭಾರತವು ಪಾಕಿಸ್ತಾನದತ್ತಾ ಬೆರಳು ತೋರಿಸಿತು. ಈ ಘಟನೆ ನಡೆದ ಸಮಯ ಸಂದರ್ಭ ಯಾವುದು ಎಂಬುದನ್ನೂ ನಾವು ನೋಡಬೇಕಾಗುತ್ತದೆ. ನಮಗೆ ಅತ್ಯಂತ ಪ್ರಮುಖವಾದ ಸೌದಿ ಅರೇಭಿಯಾ ಬೇಟಿ ಇತ್ತು. ಸೌದಿ ಅರೇಬಿಯಾ ಜೊತೆ ಹಲವು ಒಪ್ಪದಗಳಿಗೆ ನಾವು ಸಹಿ ಹಾಕಬೇಕಿತ್ತು.
ನಮಗೆ ಸಿಕ್ಕಂತಹ ಅಭೂತಪೂರ್ವ ಅವಕಾಶವನ್ನು ನಾವು ಈ ರೀತಿಯ ಕೃತ್ಯ ಮಾಡಿ ನಮಗೆ ನಾವೇ ಹಾಳುಗೆಡವಿ ಮಾಡುವುದಾದರೂ ಏನಿದೆ ? ನಮಗೆ ಇದರಿಂದ ಏನು ಸಿಗುತ್ತದೆ ಎಂದು ನನಗಂತೂ ಅರ್ಥವಾಗುತ್ತಿಲ್ಲ. ಅಥವಾ ಪಾಕಿಸ್ತಾನ ಈ ಘಟನೆಯಿಂದ ಲಾಭ ಮಾಡಿಕೊಳ್ಳುವುದಾದರೂ ಏನನ್ನು ? ಆ ಕಾರಣದಿಂದಲೇ ನಾನು ಭಾರತವನ್ನು ಉದ್ದೇಶಿಸಿ ಮಾತನಾಡಿದೆ. ನೀವು ನಮಗೆ ಯಾವುದೇ ರೀತಿಯ ಮಾಹಿತಿಗಳನ್ನು ನೀಡಿದ ಸಂದರ್ಭದಲ್ಲಿ ನಾವು ಆರೋಪಿಗಳ ಪತ್ತೆಗೆ ಕೆಲಸ ಶುರು ಮಾಡುತ್ತೇವೆ ಎಂದು ಘೋಷಿಸಿದ್ದೆ. ಆದರೆ ಭಾರತ ತನ್ನ ಆರೋಪಕ್ಕೆ ಪೂರಕವಾದ ಮಾಹಿತಿ ರವಾನಿಸಲಿಲ್ಲ.
ಈ ಸದನದಲ್ಲಿ ಇರುವ ಎಲ್ಲಾ ಪಕ್ಷಗಳೂ ಕೂಡಾ ಪಾಕಿಸ್ತಾನದೊಳಗಡೆ ಸಶಸ್ತ್ರ ಹೋರಾಟಕ್ಕೆ ಅವಕಾಶ ನೀಡುವುದಿಲ್ಲ ಎಂದು ನ್ಯಾಶನಲ್ ಅ್ಯಕ್ಷನ್ ಪ್ಲ್ಯಾನ್ ಗೆ ಸಹಿ ಹಾಕಿದ್ದೇವೆ. ನಾವು ಸಹಿ ಹಾಕಿದಂತೆ ಯಾವುದೇ ಸಶಸ್ತ್ರ ಹೋರಾಟವನ್ನು ನಾವು ಬೆಂಬಲಿಸುವುದಿಲ್ಲ. ಆದ್ದರಿಂದಲೇ ನೀವು ಮಾಹಿತಿ ಕೊಟ್ಟರೆ ನಾವು ಆರೋಪಿಗಳ ಪತ್ತೆಗೆ ಕೆಲಸ ಮಾಡುತ್ತೇವೆ ಎಂದು ಭಾರತಕ್ಕೆ ಕೇಳಿಕೊಂಡಿದ್ದೆವು. ಆದರೆ ಅದ್ಯಾವುದನ್ನೂ ಭಾರತ ಮಾಡದೇ ಯುದ್ದೋನ್ಮಾದ ಸ್ಥಿತಿಯನ್ನು ನಿರ್ಮಿಸಿತು.
ನಾನು ಈ ಸಂದರ್ಭದಲ್ಲಿ ಪಾಕಿಸ್ತಾನದ ಮಾಧ್ಯಮಗಳನ್ನು ಅಭಿನಂದಿಸುತ್ತೇನೆ. ಈ ವಿಷಮ ಪರಿಸ್ಥಿತಿಯಲ್ಲಿ ಪಾಕ್ ಮಾಧ್ಯಮಗಳು ಬಹಳ ಸಂಯಮದಿಂದ, ಜವಾಬ್ದಾರಿಯಿಂದ ವರ್ತಿಸಿದವು. ಕಳೆದ 15 ವರ್ಷಗಳಿಂದ ಪಾಕ್ ಮಾಧ್ಯಮಗಳು ಹಲವು ಬಾಂಬ್ ಸಂಘರ್ಷಗಳನ್ನು ಕಂಡಿದೆ. ಬಾಂಬಿನಿಂದ ಎಷ್ಟು ಪ್ರಾಣಹಾನಿಯಾಗುತ್ತದೆ ? ಆಸ್ಪತ್ರೆಯಲ್ಲಿ ಎಷ್ಟು ಜೀವಕ್ಕಾಗಿ ನರಳಬೇಕಾಗುತ್ತದೆ ? ಆಸ್ತಿಪಾಸ್ತಿ ಪ್ರಾಣಹಾನಿಯನ್ನು ಪಾಕ್ ಮಾಧ್ಯಮಗಳು ಕಣ್ಣಾರೆ ಕಂಡಿದ್ದವು. ಆದ್ದರಿಂದ ಪಾಕ್ ಮಾಧ್ಯಮಗಳು ಯುದ್ದವನ್ನು ಬಯಸದೇ ಬಹಳ ಪ್ರಭುದ್ದವಾದ ವರ್ತನೆಯನ್ನು ತೋರಿಸಿದವು.
ಆದರೆ ನಾನು ಬಹಳ ಬೇಜಾರಿನಿಂದ ಒಂದು ಮಾತನ್ನು ಹೇಳಬೇಕಾಗುತ್ತದೆ. ಹಿಂದೂಸ್ತಾನ್ ಮಾಧ್ಯಮಗಳು ಯಾವ ರೀತಿ ಯುದ್ದೋನ್ಮಾದ ಸ್ಥಿತಿಯನ್ನು ನಿರ್ಮಾಣ ಮಾಡಿದವು ಎಂದರೆ, ಪಾಕಿಸ್ಥಾನದಲ್ಲಿ ಈಗ ಏನಾದರೂ ಆಗಿಯೇ ಬಿಡುತ್ತದೆ ಎಂದು ನಮಗೇ ಅನುಮಾನ ಬರಲಾರಂಭಿಸಿತು. ನೀವೇನಾದರೂ ಮುಂದುವರೆದರೆ ನಾವು ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಸರ್ವಸನ್ನದ್ದವಾಗಿದೆ ಎಂಬ ವಿಶ್ವಾಸ ನನಗಿತ್ತು.
ಎರಡು ದಿನದ ಹಿಂದೆ ಭಾರತವು ಪಾಕಿಸ್ತಾನದ ಮೇಲೆ ದಾಳಿ ಮಾಡಿತು. ಅಂತರರಾಷ್ಟ್ರೀಯ ಕಾನೂನನ್ನು ಭಾರತ ಉಲ್ಲಂಘಿಸಿತು. ಯು ಎನ್ ಚಾರ್ಟರ್ ನ ಉಲ್ಲಂಘನೆ ಮಾಡಿತು. ಪುಲ್ವಾಮಾದ ಬಗ್ಗೆ ಯಾವುದೇ ಮಾಹಿತಿ ನೀಡದೇ ಪಾಕಿಸ್ತಾನಕ್ಕೆ ದಾಳಿ ಮಾಡುವ ಹಿಂದೆ ಭಾರತದ ಚುನಾವಣೆಯಿದೆ ಎಂಬುದು ನಮಗೆ ಮನವರಿಕೆಯಾಗಿದೆ. ಪಾಕಿಸ್ಥಾನವು ಪುಲ್ವಾಮ ಘಟನೆ ಸಂಬಂಧ ಏನೆಲ್ಲಾ ಸಹಕಾರವನ್ನು ಭಾರತಕ್ಕೆ ನೀಡಬೇಕೋ ಅದನ್ನು ನೀಡಲು ಸಿದ್ದವಿತ್ತು. ಮತ್ತೊಂದು ಕಡೆ ಪಾಕಿಸ್ತಾನ ಅಫ್ಘಾನಿಸ್ತಾನದ ಸಮಸ್ಯೆಯಿದೆ. ಪಾಕಿಸ್ತಾನ ಮಾತುಕತೆಯ ಮೂಲಕ ಅದನ್ನೂ ಪರಿಹರಿಸಲು ಅವಕಾಶ ಸಿಕ್ಕಿದಾಗ ಮಾಡಿದ್ದೇವೆ. ಈ ರೀತಿಯ ಪ್ರಯತ್ನದಿಂದಾಗಿಯೇ ಮಾತುಕತೆ ಯಶಸ್ವಿಯಾಗಿದೆ. ಈಗ ನಮಗೆ ಭಾರತ ಒಂದು ರೀತಿಯ ಬೆದರಿಕೆ ಒಡ್ಡುತ್ತಿದೆ.
ಹೌದು. ಪಾಕಿಸ್ತಾನದ ಮೇಲೆ ದಾಳಿಯಾಗಿದೆ. ನಮಗೆ 3.30 ರ ವೇಳೆಗೆ ಪಾಕಿಸ್ತಾನದ ಮೇಲೆ ದಾಳಿಯಾಗಿದೆ ಎಂದು ತಿಳಿಯಿತು. ಸೇನಾ ಮುಖ್ಯಸ್ಥ, ವಾಯುಸೇನಾ ಮುಖ್ಯಸ್ಥರ ಜೊತೆ ತಕ್ಷಣ ಮಾತನಾಡಿದೆ. ನಾವು ಭಾರತಕ್ಕೆ ಪ್ರತ್ಯುತ್ತರ ಕೊಡುವುದೋ? ಬೇಡ್ವೋ ? ಎಂಬ ಬಗ್ಗೆ ಚರ್ಚೆ ಮಾಡಿದೆವು. ಏನಾದರೂ ಸಾವು ನೋವುಗಳು ಸಭಂಭವಿಸಿದೆಯೇ ? ಆಸ್ತಿಪಾಸ್ತಿ ನಷ್ಠವಾಗಿದೆಯೇ ಎಂದು ಸೇನಾಧಿಕಾರಿಗಳನ್ನು ಕೇಳಿದೆ. ಯಾವುದೇ ಸಾವುನೋವುಗಳು ಆಗಿಲ್ಲ ಎಂದು ಸೇನಾಧಿಕಾರಿಗಳು ನನಗೆ ಮಾಹಿತಿ ನೀಡಿದರು.
ಆದ್ದರಿಂದ ನಾವು ಭಾರತದ ದಾಳಿಗೆ ಪ್ರತಿಕ್ರಿಯೆ ನೀಡದೇ ಸುಮ್ಮನಿರುವ ಇರುವ ಮಹತ್ವದ ನಿರ್ಧಾರಕ್ಕೆ ಬಂದೆವು. ಪಾಕಿಸ್ತಾನಕ್ಕೆ ದಾಳಿಯಾದ್ರೂ ಸುಮ್ಮನಿದ್ದೀರಿ ಯಾಕೆ ಎಂದು ನನ್ನ ರಾಷ್ಟ್ರದ ಜನರ ಪ್ರಶ್ನೆಯಾಗಿತ್ತು. ಆದರೆ “ದಾಳಿಯಿಂದ ಯಾವುದೇ ಸಾವು ನೋವುಗಳು ಆಗದೇ ಇರುವಾಗ ಪ್ರತಿದಾಳಿ ಮಾಡಿ ಸಾವುನೋವುಗಳನ್ನು ಸೃಷ್ಟಿಸುವುದು ತಪ್ಪಾಗುತ್ತದೆ”. ಆದ್ದರಿಂದ ಒಂದು ಜವಾಬ್ದಾರಿಯುತ ಪ್ರಭುತ್ವವಾಗಿ ಯಾವುದೇ ಪ್ರತ್ಯುತ್ತರವನ್ನು ಕೊಡದೇ ಇರೋದಕ್ಕೆ ನಾವು ನಿರ್ಧರಿಸಿದೆವು.
ಆದರೆ ಭಾರತ ಯುದ್ದೋನ್ಮಾದ ಸ್ಥಿತಿಯಲ್ಲಿತ್ತು. ಮರುದಿನ ನಾವು ಭಾರತದ ಮೇಲೆ ದಾಳಿ ಮಾಡಿದೆವು. ನಮಗೂ ದಾಳಿ ಮಾಡುವ ಸಾಮರ್ಥ್ಯ ಇದೆ. ನೀವು ದಾಳಿ ಮಾಡಿದರೆ ಅದಕ್ಕೆ ಉತ್ತರ ನೀಡಲು ನಾವು ಸಿದ್ದರಿದ್ದೇವೆ ಎಂದು ತೋರಿಸಿಕೊಡುವುದಕ್ಕಾಗಿ ಈ ದಾಳಿ ಮಾಡಬೇಕಾಯಿತು. ಅದೊಂದೇ ಕಾರಣಕ್ಕಾಗಿ ನಾವು ದಾಳಿ ನಡೆಸಿದೆವು. ನಮ್ಮ ದಾಳಿ ಯಾವುದೇ ನಷ್ಠದ ಗುರಿಯನ್ನು ಹೊಂದಿರಲಿಲ್ಲ. ಯಾವುದೇ ಜೀವಹಾನಿಯ ಟಾರ್ಗೆಟ್ ದಾಳಿ ಅದಾಗಿರಲಿಲ್ಲ. ಭಾರತದ ಯುದ್ದ ವಿಮಾನವನ್ನು ಹಿಮ್ಮೆಟ್ಟಿಸುವ ಸಂದರ್ಭ ದಲ್ಲಿ ಭಾರತದ ವಿಮಾನ ಪತನವಾಯ್ತು. ಇದಾದ ಬಳಿಕ ನಿನ್ನೆಯೂ ಸಂಜೆ ನಾನು ನರೇಂದ್ರ ಮೋದಿಗೆ ಸಂಪರ್ಕ ಸಾಧಿಸಲು ದೂರವಾಣಿ ಕರೆ ಮಾಡಿದೆ.
ಯಾಕೆಂದರೆ ನಾವು ಯಾರೊಂದಿಗೂ ಶತೃತ್ವವನ್ನು ಬೆಳೆಸಲು ಇಷ್ಟಪಡುವುದಿಲ್ಲ ಎಂದು ಹೇಳಬೇಕಿತ್ತು. ಆದರೆ ಮೋದಿಯವರು ಸಂಪರ್ಕಕ್ಕೆ ಸಿಗಲಿಲ್ಲ. ಅವರ ಹೆದರಿಸುವ ತಂತ್ರಗಾರಿಕೆಗಳಿಗೆ ನಾವು ಬೆದರಿಲ್ಲ ಎನ್ನುವುದನ್ನೂ ಈ ವೇದಿಕೆಯ ಮೂಲಕ ಸ್ಪಷ್ಟಪಡಿಸುತ್ತೇನೆ. ನಮ್ಮಲ್ಲಿ ಸದೃಢವಾದ ಸೇನಾ ಸಶಸ್ತ್ರಬಲವಿದೆ. ಮಾತುಕತೆ ಮಾಡದೇ ಇರುವಂತಹ ಭಾರತದ ಮನಸ್ಥಿತಿ ನಮ್ಮದಲ್ಲ. ನಮ್ಮ ವಿದೇಶಾಂಗ ಸಚಿವರೂ ನಿನ್ನೆ ಜಗತ್ತಿನ ಹಲವು ದೇಶಗಳ ವಿದೇಶಾಂಗ ಸಚಿವರ ಜೊತೆ ಮಾತುಕತೆ ನಡೆಸಿದ್ದಾರೆ. ಈ ಎಲ್ಲಾ ಮಾತುಕತೆಗಳು ಶಾಂತಿಯ ಉದ್ದೇಶವನ್ನು ಮಾತ್ರ ಹೊಂದಿದೆ.
ಮಾನ್ಯ ಸ್ಪೀಕರ್ ರವರೇ,
ಈ ಎಲ್ಲಾ ಘಟನೆಗಳು, ಸಮಸ್ಯೆಗಳಿಗೆ ಮೂಲ ಕಾರಣ ಕಾಶ್ಮೀರ. ಭಾರತವನ್ನು ನಾನು ಕೇಳುತ್ತಿದ್ದೇನೆ. ಕಾಶ್ಮೀರ ವಿಷಯದಲ್ಲಿ ನಿಮ್ಮನ್ನು ನಾಗರಿಕರು ಪ್ರಶ್ನೆಯೇ ಮಾಡಬಾರದೇ ? ಹಲವು ವರ್ಷಗಳಿಂದ ಕಾಶ್ಮೀರದ ಜನರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ನಿಮ್ಮ ವ್ಯವಸ್ಥೆಯ ಅಪರೇಷನ್ ಗಳಿಂದ, ತಂತ್ರಗಾರಿಕೆಗಳಿಂದ ಕಾಶ್ಮೀರದ ಜನ ಹೈರಾಣಾಗಿದ್ದಾರೆ.
ಹಿಂದೂಸ್ತಾನದ ಹೋರಾಟಗಾರರೊಬ್ಬರ ( ಬಹುಶಃ ಭಗತ್ ಸಿಂಗ್) ಮಾತನ್ನು ಇಲ್ಲಿ ನೆನಪಿಸಲು ಬಯಸುತ್ತೇನೆ. ನೀವು ನಮ್ಮನ್ನು ಜೈಲಿಗೆ ಹಾಕಬಹುದೇ ಹೊರತು ನಮ್ಮ ಸಿದ್ದಾಂತಗಳನ್ನು ಜೈಲಿಗೆ ಹಾಕಲಾಗಲ್ಲ. ಕಾಶ್ಮೀರದಲ್ಲೊಂದು ಪ್ರತ್ಯೇಕತಾ ಚಳುವಳಿಯಿದೆ. ನೀವು ಎಷ್ಟೇ ಹತ್ತಿಕ್ಕಿದರೂ ಅದು ಬೆಳೆಯುತ್ತಿದೆ. 20 ವರ್ಷದ ಹಿಂದೆ ನಾನು ಹಿಂದೂಸ್ತಾನದ ಕಾಂಕ್ಲೇವ್ ನಲ್ಲಿ ಭಾಗಿಯಾಗಿದ್ದೆ. ಆ ಸಮಾವೇಶದಲ್ಲಿ ಕಾಶ್ಮೀರದ ನಾಯಕರು ಯಾರೂ ಕೂಡಾ ಭಾರತದ ಜೊತೆ ಗುರುತಿಸಿಕೊಳ್ಳಲು ಇಷ್ಟಪಡುತ್ತಿರಲಿಲ್ಲ. ಈಗಲೂ ಕೂಡಾ ಕಾಶ್ಮೀರದ ಯಾವೊಬ್ಬ ನಾಯಕನೂ ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿಲ್ಲ. ಕಾಶ್ಮೀರದ ಮೇಲೆ ಭಾರತದ ದಾಳಿಯಿಂದಾಗಿ ಅಲ್ಲಿ ಆಜಾದಿ ಹೊರತುಪಡಿಸಿ ಬೇರೆ ಧ್ವನಿ ಕೇಳುತ್ತಿಲ್ಲ. ಅವರಿಗೆ ಆಜಾದಿ ಬೇಕಾಗಿದೆ.
ನಾನು ಹಿಂದೂಸ್ತಾನಿಯರಲ್ಲಿ ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ. ಯಾವ ಸಾಕ್ಷ್ಯವೂ ಇಲ್ಲದೆ ನೀವು ಪಾಕಿಸ್ತಾನದತ್ತಾ ಬೆರಳು ತೋರಿಸಿದಿರಿ. ಆದರೆ ನೀವು ಉತ್ತರ ಕಂಡುಕೊಳ್ಳಿ. ನಿಮ್ಮದೇ ದೇಶದ ಯುವಕನೊಬ್ಬ ಭಯೋತ್ಪಾದಕನಾಗಿ ಮಾನವ ಬಾಂಬ್ ಆಗಿ ಪರಿವರ್ತನೆಗೊಳ್ಳಲು ಕಾರಣವಾದ ಅಂಶಗಳು ಯಾವುದು ? ಅದಕ್ಕೆ ಕಾರಣರು ಯಾರು ? ನಿಮ್ಮದೇ ಯುವಕ ಬಾಂಬ್ ಕಟ್ಟಿಕೊಂಡು ಸೇನೆಯನ್ನೇ ಟಾರ್ಗೆಟ್ ಯಾಕೆ ಮಾಡಿದ ? ಯಾವ ಮನಸ್ಥಿತಿಗೆ ಆತ ತಲುಪಿರಬಹುದು ? ಹಿಂದೂಸ್ತಾನದ ಜನ ಇದನ್ನು ಯೋಚಿಸಿ ಉತ್ತರ ಕಂಡುಕೊಳ್ಳಬೇಕಿದೆ.
ಭಾರತದ ಏಕಮುಖ ನೀತಿಯಿಂದಾಗಿ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಐನ್ ಸ್ಟೈನ್ ಥಿಯರಿಯಾಗಿರುವ ಡಿಫಿನೇಷನ್ ಆಫ್ ಇನ್ಸೇನಿಟಿಯಂತೆ ಮಾಡಿದ್ದನ್ನೇ ಪುನರಾವರ್ತನೆ ಮಾಡಿ ಹೊಸ ಫಲಿತಾಂಶ ಬಯಸೋದು ಎಂಬಂತಾಗಿದೆ. ನಾನು ಅರ್ಥಮಾಡಿಕೊಂಡಂತೆ ಕಾಶ್ಮೀರದ ಭವಿಷ್ಯದ ಬಗ್ಗೆ ಭಾರತದಲ್ಲಿ ಈಗ ಆರೋಗ್ಯಕರ ಚರ್ಚೆಯ ಅವಶ್ಯಕತೆಯಿದೆ. ಕ್ರಿಯೆಗೆ ಪ್ರತಿಕ್ರಿಯೆಯಾಗಿ ಕಾಶ್ಮೀರದ ಪರಿಸ್ಥಿತಿ ಹೀಗೇ ಮುಂದುವರೆದರೆ ಪರಿಸ್ಥಿತಿ ಮತ್ತಷ್ಟೂ ಬಿಗಡಾಯಿಸುತ್ತೆ. ಅದರ ಹೊಣೆಯನ್ನೂ ಪಾಕಿಸ್ತಾನದ ಮೇಲೆ ಹೊರಿಸುತ್ತಾರೆ. ಯಾವುದೇ ಸಾಕ್ಷ್ಯ ಇಲ್ಲದೇ ಪಾಕಿಸ್ತಾನದ ಮೇಲೆ ಕ್ರಮಕ್ಕೆ ಒತ್ತಡ ಹೇರಲಾಗುತ್ತದೆ. ಇಂತಹ ಕೃತ್ಯಗಳನ್ನು ಇಸ್ಲಾಮಿಕ್ ತೀವ್ರವಾದದ ಹೆಸರಿಗೆ ಕಟ್ಟಲಾಗುತ್ತದೆ. ಈ ರೀತಿಯ ಭಯೋತ್ಪಾದಕ ದಾಳಿಗಳಿಗೆ ಧರ್ಮದ ಹೆಸರನ್ನು ಸೇರಿಸಲಾಗುತ್ತಿದೆ.
ನಾನು ಜಗತ್ತಿಗೆ ಹೇಳಲು ಬಯಸುತ್ತೇನೆ. ಈ ಜಗತ್ತಿಗೆ ಆತ್ಮಾಹುತಿ ದಾಳಿಯನ್ನು ಮೊದಲು ಪರಿಚಯಿಸಿದ್ದು ತಮಿಳು ಟೈಗರ್ಸ್. ಅವರು ಹಿಂದೂಗಳು. ಅವರ ಆತ್ಮಾಹುತಿ ದಾಳಿಗೆ ಹಿಂದೂ ಧರ್ಮ ಕಾರಣವಲ್ಲ. ವ್ಯವಸ್ಥೆಯಿಂದ ಹತಾಶೆಗೊಂಡಿರುವುದೇ ಆತ್ಮಾಹುತಿಯಂತಹ ಕೆಲಸಗಳಿಗೆ ಕೈ ಹಾಕಲು ಪ್ರೇರೇಪಿಸುತ್ತದೆ. ಆತನ ಒಳಗಿರುವ ತುಮುಲ, ಆಕ್ರೋಶ, ಹತಾಶೆಗಳು ಆತನನ್ನು ಮಾನವ ಬಾಂಬ್ ಆಗಿ ಪರಿವರ್ತನೆ ಮಾಡುತ್ತದೆ.
ನಾನು ಇಂಡಿಯಾವನ್ನು ಕ್ರಿಕೆಟ್ ನ ಕಾರಣದಿಂದಾಗಿ ಹತ್ತಿರದಿಂದ ಬಲ್ಲೆ. ನನಗೆ ಹಿಂದೂಸ್ತಾನದಲ್ಲಿ ಬಹಳಷ್ಟು ಸ್ನೇಹಿತರಿದ್ದಾರೆ. ಕಾಶ್ಮೀರದಲ್ಲಿ ವ್ಯವಸ್ಥೆ ಏನು ಮಾಡುತ್ತಿದೆ ಎಂದು ಅರ್ಥ ಮಾಡಿಕೊಳ್ಳುವಷ್ಟು ಭಾರತದ ಜನ ಬುದ್ದಿವಂತರಿದ್ದಾರೆ. ಈಗ ಇರುವ ಸರಕಾರ ಯಾಕೆ ಯುದ್ದವನ್ನು ಬಯಸುತ್ತಿದೆ ಎಂಬುದನ್ನೂ ಹಿಂದೂಸ್ತಾನದ ಜನ ಅರ್ಥ ಮಾಡಿಕೊಳ್ಳುತ್ತಾರೆ ಮತ್ತು ಬಹಳಷ್ಟು ಹಿಂದೂಸ್ತಾನಿಗಳೇ ಯುದ್ದದ ವಿರುದ್ದ ಇದ್ದಾರೆ. ದುರಂತವೆಂದರೆ ಟಿವಿಗಳಲ್ಲಿ ಯುದ್ದೋನ್ಮಾದ ಸ್ಥಿತಿಯನ್ನು ನಿರ್ಮಿಸಲಾಗಿದೆ. ಪಾಕಿಸ್ತಾನದ ಮಾಧ್ಯಮಗಳು ನೋಡಿದಷ್ಟು ಯುದ್ದ, ಸಾವುನೋವುಗಳನ್ನು ಭಾರತೀಯ ಮಾಧ್ಯಮಗಳು ನೋಡಿದ್ದರೆ ಬಹುಷಃ ಅವರೂ ಕೂಡಾ ಯುದ್ದವನ್ನು ಬಯಸುತ್ತಿರಲಿಲ್ಲ. ಯುದ್ದದಲ್ಲಿ ಯಾರಿಗೂ ಗೆಲುವಿಲ್ಲ ಎಂಬುದನ್ನು ಭಾರತದ ಮಾಧ್ಯಮಗಳು ತಿಳಿಯಬೇಕು. ಎರಡೂ ಸಶಸ್ತ್ರ ಬಲಾಬಲ ಹೊಂದಿದ ರಾಷ್ಟ್ರಗಳ ಮಧ್ಯೆ ಯುದ್ದವನ್ನು ಯೋಚಿಸಲೇಬಾರದು.
ಭಾರತ ಮತ್ತು ನಮ್ಮ ಮಧ್ಯೆ ತಪ್ಪು ಲೆಕ್ಕಾಚಾರ ನಡೆಯಬಾರದು. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಮಧ್ಯೆಯೂ ಈ ರೀತಿ ತಪ್ಪು ಲೆಕ್ಕಾಚಾರ ಇತ್ತು. ಜಗತ್ತಿನ ಪವರ್ ಫುಲ್ ರಾಷ್ಟ್ರಕ್ಕೂ ಕೂಡಾ ಅಫ್ಘಾನಿಸ್ಥಾನದ ಸಮಸ್ಯೆ ಪರಿಹರಿಸಲು ಸಾಧ್ಯವಾಗಲಿಲ್ಲ. ಈಗ ಅವರೂ ಮಾತುಕತೆ ಬಂದಿರೋದರಿಂದ ಸರಿಯಾಗುತ್ತಿದೆ. ಯುದ್ದ ಎನ್ನುವುದು ಸಮಸ್ಯೆಗೆ ಪರಿಹಾರವಲ್ಲ. ಭಾರತ ಯುದ್ದದ ಪರಿಸ್ಥಿತಿ ನಿರ್ಮಾಣ ಮಾಡಿದ್ರೆ ನಾವು ಪ್ರತ್ಯುತ್ತರ ಕೊಡಬೇಕಾಗುತ್ತದೆ. ಇದು ಮುಂದುವರೆದು ಎಲ್ಲಿಯವರೆಗೆ ಹೋಗಬಹುದು ?
ಪಾಕಿಸ್ತಾನವು ಅಣ್ವಸ್ತ್ರದ ಮೂಲಕ ಬ್ಲ್ಯಾಕ್ ಮೇಲ್ ಮಾಡುತ್ತಿದೆ ಎಂದು ಭಾರತದ ರಾಜಕಾರಣಿಗಳು ಹೇಳುತ್ತಾರೆ. ನ್ಯೂಕ್ಲಿಯರ್ ಬ್ಲಾಕ್ ಮೇಲ್ ಅನ್ನುವುದರ ಅರ್ಥ ಏನು ? ನಮ್ಮಲ್ಲಿ ನ್ಯೂಕ್ಲಿಯರ್ ವೆಪನ್ ಇದೆ ಅನ್ನೊ ಕಾರಣಕ್ಕಾಗಿ ನಾವು ಭಾರತಕ್ಕೆ ಸವಾಲೊಡುತ್ತಿದ್ದೇವೆ ಎಂದರ್ಥವೇ ?
ಮಾನ್ಯ ಸ್ಪೀಕರ್ ರವರೇ,
ನಾನು ಸಂಸತ್ತಿನಲ್ಲೇ ಸ್ಪಷ್ಟಪಡಿಸುತ್ತಿದ್ದೇನೆ. ಪಾಕಿಸ್ತಾನ ಶಾಂತಿ ಬಯಸುವ ರಾಷ್ಟ್ರವಾಗಿದೆ. ಶಾಂತಿ ಇದ್ದರೆ ಅಭಿವೃದ್ದಿಯಾಗುತ್ತೆ. ಅಭಿವೃದ್ದಿಯಾದರೆ ಉದ್ಯೋಗ ಸೃಷ್ಟಿಯಾಗುತ್ತೆ. ಆ ಮೂಲಕ ದೇಶ ಆರ್ಥಿಕವಾಗಿಯೂ ಬಲಿಷ್ಠವಾಗುತ್ತದೆ. ಯುದ್ದ ಎನ್ನುವುದು ಪಾಕಿಸ್ತಾನಕ್ಕಾಗಲೀ, ಭಾರತಕ್ಕಾಗಿ ಲಾಭ ತಂದುಕೊಡುವುದಿಲ್ಲ. ಈ ಕಾರಣಕ್ಕಾಗಿ ನಾನು ನಿನ್ನೆಯೂ ನರೇಂದ್ರ ಮೋದಿ ಹತ್ರ ಮಾತನಾಡಲು ಪ್ರಯತ್ನಿಸಿದೆ. ಶಾಂತಿಗಾಗಿ ಇದನ್ನೆಲ್ಲಾ ಮಾಡಲು ಪ್ರಯತ್ನಿಸಿದೆನೇ ಹೊರತು ಅದು ನಮ್ಮ ದೌರ್ಬಲ್ಯವಲ್ಲ. ಪಾಕಿಸ್ತಾನದ ಈ ನಡೆ ತಪ್ಪು ಸಂದೇಶ ರವಾನಿಸಬಾರದು.
ನಾವು ಇತಿಹಾಸದ ಪುಟಗಳನ್ನು ತಿರುವಿ ಹಾಕಬೇಕಿದೆ. ಸ್ವಾತಂತ್ರ ಪೂರ್ವದಲ್ಲಿ ಬಹದೂರ್ ಷಾ ಝಫರ್ ಮತ್ತು ಟಿಪ್ಪುವನ್ನು ಈ ದೇಶ ಕಂಡಿದೆ. ಬಹದೂರ್ ಷಾ ಝಫರ್ ಗೆ ಗುಲಾಮಗಿರಿ ಮತ್ತು ಸಾವಿನ ಆಯ್ಕೆಯನ್ನು ಇಟ್ಟಾಗ ಅವರು ಗುಲಾಮಗಿರಿಯನ್ನು ಆಯ್ಕೆ ಮಾಡಿಕೊಂಡರು. ಮತ್ತೊಂದೆಡೆ ಟಿಪ್ಪು ಸುಲ್ತಾನ್ ಕೂಡಾ ಇದ್ದರು. ಸಾವು ಮತ್ತು ಗುಲಾಮಗಿರಿಯ ಆಯ್ಕೆ ಟಿಪ್ಪುವಿಗೆ ಎದುರಾದಾಗ ಟಿಪ್ಪು ಸಾವನ್ನು ಒಪ್ಪಿಕೊಂಡ. ಈ ನೆಲದ ಹೀರೋ ಟಿಪ್ಪು ಸುಲ್ತಾನ್ ಆಗಿರುತ್ತಾರೆ.
ನಾವೂ ಕೂಡಾ ಪುಟ್ಟ ರಾಷ್ಟ್ರವಾದರೂ ಸ್ವತಂತ್ರದ ಪರವೇ ಇರುತ್ತೇವೆ. ಗುಲಾಮಗಿರಿಯನ್ನು ಒಪ್ಪಲ್ಲ. ಆದ್ದರಿಂದ ಭಾರತ ಮತ್ತು ಮೋದಿಗೆ ಹೇಳಲು ಬಯಸುವುದೇನೆಂದರೆ, ಇದು ಹೀಗೆ ಮುಂದುವರೆಯುವುದು ಬೇಡ. ನನಗೂ ನಮ್ಮ ಸೇನೆಯ ಶಕ್ತಿ ಸಾಮರ್ಥ್ಯಗಳು ಗೊತ್ತು. ನಿನ್ನೆ ರಾತ್ರಿ ಭಾರತದ ಸೈನಿಕರು ಮಿಸೈಲ್ ದಾಳಿ ಮಾಡಲು ಮುಂದಾದಾಗ ಅದನ್ನು ನಮ್ಮ ಸೈನಿಕರು ಹೇಗೆ ವಿಫಲಗೊಳಿಸಿದ್ರು ಎಂಬುದನ್ನೂ ನೋಡಿದ್ದೇನೆ. ಆದ್ದರಿಂದಲೇ ಸಂಸತ್ತಿನ ಮೂಲಕ ಭಾರತಕ್ಕೆ ಮನವಿ ಮಾಡುತ್ತಿದ್ದೇವೆ – ಇದನ್ನು ಹೀಗೆ ಇನ್ನು ಮುಂದುವರೆಸಬೇಡಿ.
ನಿಮ್ಮಕ್ರಿಯೆಗೆ ಪ್ರತಿಕ್ರಿಯೆ ಕೊಡುವುದು ಪಾಕಿಸ್ತಾನಕ್ಕೆ ಅನಿವಾರ್ಯವಾಗುತ್ತದೆ. ಎರಡು ಸಮಬಲದ ಸಶಸ್ತ್ರವನ್ನು ಹೊಂದಿರುವ ರಾಷ್ಟ್ರಗಳು ಯುದ್ದದ ಬಗ್ಗೆ ಯೋಚಿಸಬಾರದು. ಈ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಸಮುದಾಯಗಳು ಕೂಡಾ ಕಾರ್ಯತತ್ಪರವಾಗಬೇಕು.
ನಾನು ಹೇಳೋದನ್ನು ಮರೆತುಬಿಟ್ಟೆ. ಭಾರತ ಸೈನಿಕ ನಮ್ಮ ವಶದಲ್ಲಿ ಇದ್ದಾನೆ. ನಾವು ಶಾಂತಿಯ ದ್ಯೋತಕವಾಗಿ ನಮ್ಮ ವಶದಲ್ಲಿರುವ ಭಾರತದ ಸೈನಿಕನನ್ನು ನಾಳೆ ಬಿಡುಗಡೆಗೊಳಿಸುತ್ತೇವೆ.
As a true statesman, Prime Minister of Pakistan Imran Khan announced that #Pakistan will release Indian Air Force Pilot Wing Commander Abhinandan Varthaman tomorrow as a peace gesture. pic.twitter.com/4nIbd6szk6
— Govt of Pakistan (@pid_gov) February 28, 2019
ಬರಹ ರೂಪ : ನವೀನ್ ಸೂರಿಂಜೆ
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ದಾವಣಗೆರೆಯಲ್ಲಿ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪನೆಗೆ ವಕೀಲ ಎಲ್.ಎಚ್.ಅರುಣಕುಮಾರ್ ಮನವಿ
ಸುದ್ದಿದಿನಡೆಸ್ಕ್:ದಾವಣಗೆರೆಮಹಾನಗರದಲ್ಲಿ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ ಮಾಡುವ ಮುನ್ನ ಪೂರ್ವಭಾವಿಯಾಗಿ ಒಂದಿಷ್ಟು ಮಾಹಿತಿಯ ಅಗತ್ಯವಿದೆ. ದಾವಣಗೆರೆ ಅತ್ಯಂತ ನಿಖರವಾಗಿ ಕರ್ನಾಟಕದ ಮಧ್ಯಭಾಗದಲ್ಲಿದೆ. ಅದ್ದರಿಂದ ಈ ನಗರವನ್ನೇ ಕರ್ನಾಟಕ ರಾಜಧಾನಿಯನ್ನಾಗಿ ಮಾಡಬೇಕೆಂಬ ಮಹಾದಾಸೆಯನ್ನು ಕರ್ನಾಟಕ ಏಕೀಕರಣಕ್ಕೂ ಮುಂಚೆಯೇ ಹೊಂದಲಾಗಿತ್ತು ಎಂದು ಜಿಲ್ಲಾ ವಕೀಲರ ಸಂಘ ನಿಕಟಪೂರ್ವ ಅಧ್ಯಕ್ಷರಾದ ಎಲ್.ಎಚ್.ಅರುಣಕುಮಾರ್ ಅವರು ಹೇಳಿದ್ದಾರೆ.
ರಾಷ್ಟ್ರನಾಯಕರಾದ ಎಸ್.ನಿಜಲಿಂಗಪ್ಪ, ಖ್ಯಾತ ಪತ್ರಕರ್ತ, ಲೇಖಕ, ಕನ್ನಡಾಭಿಮಾನಿ ಪಾಟೀಲ್ ಪುಟ್ಟಪ್ಪನವರೂ ಸೇರಿದಂತೆ ಅನೇಕ ಮಹನೀಯರು ದಾವಣಗೆರೆಯನ್ನು ರಾಜಧಾನಿಯಾಗಿ ಮಾಡಬೇಕೆಂಬ ಆಸೆಯನ್ನು ಹೊಂದಿದ್ದರು. ಆದರೆ, ಕಾರಣಾಂತರಗಳಿಂದ ದಾವಣಗೆರೆ ನಗರಕ್ಕೆ ರಾಜಧಾನಿಯಾಗುವ ಅವಕಾಶ ಲಭ್ಯವಾಗದೇ ಹೋದದ್ದು ದುರಾದೃಷ್ಠರಕ ಸಂಗತಿ ಎಂದೇ ಹೇಳಬಹುದು ಎಂದಿದ್ದಾರೆ.
ದಾವಣಗೆರೆ ನಗರ ಭೋಗೋಳಿಕವಾಗಿ ತುಂಬ ಆಯಕಟ್ಟಿನ ಸ್ಥಳದಲ್ಲಿದ್ದು, ಬೆಂಗಳೂರು, ಮುಂಬಯಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ಹಗಲು ರಾತ್ರಿ ವಿವಿಧ ಬಗೆಯ ರೈಲುಗಳ ಸೌಲಭ್ಯವಿದೆ. ವಿಫುಲ ಸಂಖ್ಯೆಯ ವಿವಿಧ ಭಾಗಗಳನ್ನು ತ್ವರಿತವಾಗಿ ಸಂಪರ್ಕಿಸುವ ಅತ್ಯುತ್ತಮ ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳ ಸಂಚಾರ ವ್ಯವಸ್ಥೆ ಇದೆ. ಇದಲ್ಲದೇ ಮಾದರಿ ಎನಿಸುವ ಹೈಟೆಕ್ ಬಸ್ ನಿಲ್ದಾಣವಿದೆ.
ಇದಲ್ಲದೇ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಸಿಮೆಂಟ್ ರಸ್ತೆಗಳು ಸೇರಿದಂತೆ ಅಧುನಿಕ ನಾಗರೀಕ ಸೌಲಭ್ಯಗಳು ನಗರಕ್ಕೆ ದೊರಕಿವೆ. ಹಚ್ಚ ಹಸಿರಿನ ವಾತಾವರಣ, ನಿರಂತರ ನೀರು ಪೂರೈಕೆಯ ಜಲಸಿರಿ ಯೋಜನೆ, ಅಧಿಕ ಸಂಖ್ಯೆಯ ಉದ್ಯಾನವನಗಳು ನಗರದ ಶೋಭೆಯನ್ನು ಹೆಚ್ಚಿಸಿವೆ. ಬಗೆಬಗೆಯ ಊಟ ಉಪಹಾರ ಮಂದಿರಗಳು, ಸುಸಜ್ಜಿತ ವಸತಿ ಗೃಹಗಳು ಎಲ್ಲೆಡೆ ಇವೆ.
ಶೈಕ್ಷಣಿಕೆ ರಂಗದಲ್ಲಿ ದಾವಣಗೆರೆ ನಗರ ಅಪಾರ ಪ್ರಗತಿ ಸಾಧಿಸಿದ್ದು, ಅಕ್ಸ್ಫರ್ಡ್ ಎನ್ನುವ ಖ್ಯಾತಿಯೂ ನಗರಕ್ಕುಂಟು. ಇಲ್ಲಿ ಎರಡು ವಿಶ್ವವಿದ್ಯಾನಿಲಯಗಳು, ಮುಖ್ಯವಾಗಿ ಎರಡು ಕಾನೂನು ಕಾಲೇಜುಗಳು ಸೇರಿದಂತೆ ಎಲ್ಲಾ ಬಗೆಯ ಶಿಕ್ಷಣ ನೀಡುವ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಿವೆ.
ಇನ್ನು ಬಹುಮುಖ್ಯವಾಗಿ, ಅವಿಭಜಿತ ಚಿತ್ರದುರ್ಗ ಜಿಲ್ಲೆಯಲ್ಲಿ ಅಂದು ದಾವಣಗೆರೆ ಕಂದಾಯ ಉಪ ವಿಭಾಗವಾಗಿದ್ದ ದಿನಗಳಲ್ಲಿ, ಈ ನಗರದಿಂದ ವಕೀಲರಾದ ಹೆಚ್.ಸಿದ್ದವೀರಪ್ಪನವರು ಹಾಗೂ ಚಿತ್ರದುರ್ಗದಲ್ಲಿ ಅಂದು ವಕೀಲರಾಗಿದ್ದ ಎಸ್.ನಿಜಲಿಂಗಪ್ಪನವರು, ಭಾರತದ ಸಂವಿಧಾನ ರಚನಾ ಸಭೆಯಲ್ಲಿ ಸದಸ್ಯರಾಗಿ, ದೇಶದ ಸಂವಿಧಾನ ರಚನೆಯಲ್ಲ ಮಹತ್ವದ ಕೊಡುಗೆ ನೀಡಿದ್ದಾರೆ.
ದಾವಣಗೆರೆ ನಗರದಲ್ಲಿ ಪೊಲೀಸ್ ಮಹಾ ನಿರೀಕ್ಷಕರ (ಐಜಿಪಿ) ಕಚೇರಿ, ಅಭಿಯೋಜನಾ ಇಲಾಖೆಯ ಉಪ ನಿರ್ದೇಶಕರ ಕಚೇರಿ ಇರುವುದಲ್ಲದೇ, ನಗರಕ್ಕೆ ಲಗತ್ತಾಗಿ ಪ್ರಾದೇಶಿ ನ್ಯಾಯ ವಿಜ್ಞಾನ ಪ್ರಯೋಗ ಶಾಲೆಯೂ ಇದೆ. ಈ ನಗರದಿಂದ ಈ ಜಿಲ್ಲೆಯ ವಿವಿಧ ತಾಲೂಕುಗಳಿಂದ ಹಾಗೂ ನೆರೆಯ ಜಿಲ್ಲೆಯ ಇತರೆ ಪ್ರದೇಶಗಳಿಂದ ಸಾಕಷ್ಟು ಸಂಖ್ಯೆಯ ಕೇಸುಗಳು ಬೆಂಗಳೂರಿನ ಹೈಕೋರ್ಟಿನಲ್ಲಿವೆ. ಕಕ್ಷಿದಾರರಿಗೆ ಮತ್ತು ಸಾರ್ವಜನಿಕರಿಗೆ ಮತ್ತೆ ಮತ್ತೆ ಬೆಂಗಳೂರಿಗೆ ಹೋಗಿ ಬರುವುದು ತ್ರಾಸದಾಯಕವೂ ಸಮಯ ಹಾಗೂ ಹಣದ ಪ್ರಶ್ನೆಯೂ ಉದ್ಭವಿಸುತ್ತದೆ. ಈ ಎಲ್ಲಾ ಕಾರಣಗಳಿಂದ ದಾವಣಗೆರೆ ನಗರದಲ್ಲಿ ರಾಜ್ಯ ಹೈಕೋರ್ಟಿನ ಸಂಚಾರಿ ಪೀಠವನ್ನು ಸ್ಥಾಪಿಸುವುದು ಅಗತ್ಯ ಮಾತ್ರವಲ್ಲದೇ ಅನಿವಾರ್ಯವೂ ಹೌದು ಎನ್ನಲೇ ಬೇಕಾಗಿದೆ ಎಂದಿದ್ದಾರೆ.
ನಮ್ಮ ನಗರಕ್ಕೆ ಸಂಚಾರಿ ಹೈಕೋರ್ಟ್ ಪೀಠದ ಬೇಡಿಕೆ ಅತ್ಯಂತ ನ್ಯಾಯೋಚಿತವಾಗಿದೆ. ಇದೊಂದು ಸಾರ್ವಜನಿಕ ಹಿತಾಸಕ್ತಿಯ ಸಂಗತಿ ಎಂದು ಎಲ್ಲರೂ ಮನಗಾಣಬೇಕಿದೆ. ವಾಣಿಜ್ಯ ವ್ಯಾಪಾರಿ ಸಂಘಗಳು, ಕೇಂದ್ರ, ರಾಜ್ಯ, ಬ್ಯಾಂಕಿಂಗ್ ಹಾಗೂ ಖಾಸಗಿ ನೌಕರರ ಸಂಘಟನೆಗಳು, ದಲಿತ, ರೈತ, ಕಾರ್ಮಿಕ ಸಂಘಟನೆಗಳಲ್ಲದೇ ಎಲ್ಲಾ ಪ್ರಗತಿ ಪರ ಮತ್ತು ಕನ್ನಡ ಪರ ಸಂಘಟನೆಗಳು ಈ ವಿಷಯದಲ್ಲಿ ಧ್ವನಿಗೂಡಿಸಬೇಕಾಗಿದೆ. ಒಂದು ರೀತಿಯಲ್ಲಿ ಹೇಳುವುದಾದರೆ, ಸಮಾನ ಮನಸ್ಕ ವೇದಿಕೆಯ ಮೂಲಕ ನಗರದಲ್ಲಿ ಸಂಚಾರಿ ಪೀಠ ಸ್ಥಾಪನೆಗೆ ಇದು ಸೂಕ್ತ ಸಮಯವಾಗಿದ್ದು, ಈಗ ದೊರಕಿರುವ ಅವಕಾಶದ ಲಾಭ ಪಡೆಯಬೇಕಾಗಿದೆ.
ಸಂಚಾರಿ ಪೀಠ ಸ್ಥಾಪನೆಯಿಂದ ಇಲ್ಲಿಯ ಪ್ರತಿಭಾವಂತ ಹಾಗೂ ಉದಯೋನ್ಮುಖ ವಕೀಲರುಗಳಿಗೆ ಮತ್ತು ಈ ಭಾಗದ ಕಾನೂನು ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ವಕೀಲರ ಅನುಭವಕ್ಕೆ ಹೊಸ ಆಯಾಮ ದೊರೆಯಲಿದೆ. ಸಂಚಾರಿ ಹೈಕೋರ್ಟ್ ಪೀಠದಲ್ಲಿ ಕಾರ್ಯನಿರ್ವಹಿಸಬಲ್ಲ ಹಿರಿಯ ಹಾಗೂ ಅನುಭವಿ ವಕೀಲರು ನಗರದಲ್ಲಿ ಮತ್ತು ಈ ಜಿಲ್ಲೆಯ ನ್ಯಾಯಾಲಯಗಳಲ್ಲಿ ಇದ್ದಾರೆ ಎಂಬುದು ಗಮನಾರ್ಹ.
ಈ ಸಂಚಾರಿ ಪೀಠದ ವ್ಯಾಪ್ತಿಗೆ ದಾವಣಗೆರೆ, ಚಿತ್ರದುರ್ಗ, ವಿಜಯನಗರ ಶಿವಮೊಗ್ಗ ಹಾಗೂ ಹಾವೇರಿ ಜಿಲ್ಲೆಗಳನ್ನು ತರಬಹುದಾಗಿದೆ. ಈ ಎಲ್ಲಾ ಜಿಲ್ಲೆಗಳ ವಕೀಲರ ಸಂಘಗಳು, ವಕೀಲ ಮಿತ್ರರು ಈ ಮನವಿ, ಪ್ರಸ್ತಾವನೆಗೆ ಸಕ್ರಿಯವಾಗಿ ಸ್ಪಂದಿಸಲಿದ್ದಾರೆ ಎನ್ನುವ ಗಾಢ ವಿಶ್ವಾಸವಿದೆ.
ಜಿಲ್ಲಾ ನ್ಯಾಯಾಲಯದಲ್ಲಿರುವ ನ್ಯಾಯಾಲಯಗಳು ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಹೊಸ ಕಟ್ಟಡಕ್ಕೆ ಮುಂಬರುವ ದಿನಗಳಲ್ಲಿ ಸ್ಥಳಾಂತರವಾಗುವುದರಿಂದ ಹಾಲಿ ದೇವರಾಜ ಅರಸು ಬಡಾವಣೆಯಲ್ಲಿರುವ ಕಟ್ಟಡವನ್ನು ಸಂಚಾರಿ ಪೀಠಕ್ಕಾಗಿ ಬಳಸಿಕೊಳ್ಳಬಹುದಾಗಿದೆ.
ರಾಜ್ಯದಲ್ಲಿ ಇನ್ನೊಂದು ಹೈಕೋರ್ಟ್ ಸಂಚಾರಿ ಪೀಠವನ್ನು ಸ್ಥಾಪಿಸುವ ವಿಚಾರ ಸರ್ಕಾರದ ಮಟ್ಟದಲ್ಲಿ ಮುನ್ನಲೆಗೆ ಬಂದಿರುವುದರಿಂದ ಈಗ ನಗರದಲ್ಲಿ ಒಂದು ಸಂಘಟಿತ ಹಾಗೂ ವ್ಯವಸ್ಥಿತ ಹೋರಾಟದ ತುರ್ತು ಅಗತ್ಯವಿದೆ.
ಬನ್ನಿ, ನಾವು, ನೀವೆಲ್ಲರೂ ಈ ನ್ಯಾಯೋಚಿತ ಬೇಡಿಕೆಗೆ ಹಾಗೂ ಮನವಿಗೆ ಧ್ವನಿಯಾಗೋಣ, ಒಂದು ಸಮಾನ ಮನಸ್ಕ ವೇದಿಕೆಯನ್ನು ರಚಿಸಿಕೊಂಡು, ಸಲಹೆ, ಸೂಚನೆಗಳ ಬಗ್ಗೆ ವಿವರವಾಗಿ ಚರ್ಚಿಸಿ ಈ ನಿಟ್ಟಿನಲ್ಲಿ ತಕ್ಷಣವೇ ಕಾರ್ಯ ಪ್ರವೃತ್ತರಾಗೋಣ.
1993ರಲ್ಲಿ ಚಿರಂಜೀವಿ ಸಿಂಗ್ ಸಮಿತಿ ಕೂಡ ಹರಿಹರ- ದಾವಣಗೆರೆ ಜೋಡಿ ನಗರಗಳನ್ನು ರಾಜ್ಯದ ದ್ವಿತೀಯ ರಾಜಧಾನಿಯಾಗಿ ಅಭಿವೃದ್ಧಿಪಡಿಸು-ವಂತೆ ಶಿಫಾರಸು ಮಾಡಿತ್ತು. ಆಡಳಿತ ವಿಕೇಂದ್ರೀಕರಣ ಹಾಗೂ ಸಮತೋಲ-ನಾಭಿವೃದ್ಧಿಯ ಅಗತ್ಯವನ್ನು ಸಮಿತಿ ಒತ್ತಿ ಹೇಳಿತ್ತು’ ಎಂದು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕುಂಬಳಕಾಯಿ ಬೀಜದಲ್ಲಿ ‘ ಜೀವ ಸಂಜೀವಿನಿ’ : ಮಿಸ್ ಮಾಡ್ದೆ ಓದಿ ; ಆರೋಗ್ಯದ ಗುಟ್ಟು ತಿಳಿಯಿರಿ
ಕುಂಬಳಕಾಯಿ ಬೀಜಗಳು ಖಾದ್ಯ ಬೀಜಗಳಾಗಿವೆ, ಅವುಗಳು ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯಕ್ಕಾಗಿ ಶತಮಾನಗಳಿಂದ ತಿಳಿದುಬಂದಿದೆ. ಕುಂಬಳಕಾಯಿ ಸಸ್ಯದ ಈ ಚಪ್ಪಟೆ ಮತ್ತು ಬಿಳಿ ಬೀಜಗಳನ್ನು ಸರಿಯಾಗಿ “ಶಕ್ತಿ ಕೇಂದ್ರ” ಎಂದು ಕರೆಯಲಾಗುತ್ತದೆ ಪೋಷಣೆ”. ಕುಂಬಳಕಾಯಿ ಬೀಜದಿಂದ ಹೊರಗಿನ ಬಿಳಿ ಹೊದಿಕೆಯನ್ನು ತೆಗೆದಾಗ, ತಿಳಿ ಹಸಿರು ಬೀಜಗಳನ್ನು ಪಡೆಯಲಾಗುತ್ತದೆ, ಅವು ಕಣ್ಣಿನ ಆಕಾರದಲ್ಲಿರುತ್ತವೆ, ಆದರೆ ಚಪ್ಪಟೆ ಆಕಾರದಲ್ಲಿರುತ್ತವೆ. ಸಾಂಪ್ರದಾಯಿಕವಾಗಿ, ಕುಂಬಳಕಾಯಿ ಬೀಜಗಳನ್ನು ಮೂತ್ರಪಿಂಡದಂತಹ ವಿವಿಧ ಆರೋಗ್ಯ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಮೂತ್ರನಾಳದ ತೊಂದರೆಗಳು, ಅಧಿಕ ರಕ್ತದೊತ್ತಡ ಮತ್ತು ಸಕ್ಕರೆ, ಮತ್ತು ಪರಾವಲಂಬಿಗಳು.
ಕುಂಬಳಕಾಯಿ ಬೀಜಗಳನ್ನು ಅವುಗಳ ಕಚ್ಚಾ, ಮೊಳಕೆಯೊಡೆದ ರೂಪದಲ್ಲಿ ಯಾವುದೇ ಕಿರಾಣಿ ಅಂಗಡಿಯಲ್ಲಿ ಕಾಣಬಹುದು, ಇದು ಕುಂಬಳಕಾಯಿ ಬೀಜಗಳನ್ನು ಸೇವಿಸಲು ಉತ್ತಮ ಮಾರ್ಗವಾಗಿದೆ. ಕುಂಬಳಕಾಯಿ ಬೀಜಗಳ ಪೌಷ್ಟಿಕಾಂಶದ ಮೌಲ್ಯವು ಅಧಿಕವಾಗಿದೆ ಮತ್ತು ಇದು ಜೀವಸತ್ವಗಳು, ಖನಿಜಗಳು ಮತ್ತು ಪ್ರೋಟೀನ್ಗಳು ಮತ್ತು ಅಪರ್ಯಾಪ್ತ ಕೊಬ್ಬಿನಾಮ್ಲಗಳ ಸಮೃದ್ಧ ಮೂಲವಾಗಿದೆ. ಕುಂಬಳಕಾಯಿ ಬೀಜಗಳ ಪ್ರಯೋಜನಗಳು ವಿವಿಧ ಆರೋಗ್ಯ ಪರಿಸ್ಥಿತಿಗಳ ಅಪಾಯವನ್ನು ಕಡಿಮೆ ಮಾಡುತ್ತದೆ, ಉದಾಹರಣೆಗೆ ಕ್ಯಾನ್ಸರ್.
ಕುಂಬಳಕಾಯಿ ಬೀಜಗಳ ಪೌಷ್ಟಿಕಾಂಶದ ಮೌಲ್ಯ
ಕುಂಬಳಕಾಯಿ ಬೀಜಗಳು ಪೊಟ್ಯಾಸಿಯಮ್, ಸತು ಮತ್ತು ಮ್ಯಾಂಗನೀಸ್ ಮತ್ತು ವಿಟಮಿನ್ ಕೆ ನಂತಹ ಖನಿಜಗಳು ಸೇರಿದಂತೆ ಹಲವಾರು ಪೋಷಕಾಂಶಗಳ ಪ್ರಬಲ ಮೂಲವಾಗಿದೆ. ನಿರೋಧಕ ವ್ಯವಸ್ಥೆಯ ಪ್ರತಿಜನಕಗಳ ವಿರುದ್ಧ ಹೋರಾಡಲು. ಕುಂಬಳಕಾಯಿ ಬೀಜಗಳು ರಂಜಕ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕಬ್ಬಿಣ ಮತ್ತು ತಾಮ್ರದಂತಹ ಇತರ ಅಗತ್ಯ ಖನಿಜಗಳ ಅತ್ಯುತ್ತಮ ಮೂಲವಾಗಿದೆ.
ಪ್ರತಿ ಸೇವೆಗೆ ಇರುವ ಕುಂಬಳಕಾಯಿ ಬೀಜಗಳ ಬಗ್ಗೆ ಪೌಷ್ಟಿಕಾಂಶದ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.
ಕ್ಯಾಲೋರಿಗಳು: ಕುಂಬಳಕಾಯಿ ಬೀಜಗಳು ಒಣಗಿದ ಕುಂಬಳಕಾಯಿ ಬೀಜಗಳ ನಾಲ್ಕನೇ ಕಪ್ನಲ್ಲಿ 180 kCal ಅನ್ನು ಹೊಂದಿರುತ್ತವೆ.
ಪ್ರೋಟೀನ್ಗಳು: ಕುಂಬಳಕಾಯಿ ಬೀಜಗಳು ಪ್ರತಿ ಸೇವೆಗೆ ಸುಮಾರು 10 ಗ್ರಾಂ ಪ್ರೋಟೀನ್ ಅನ್ನು ಹೊಂದಿರುತ್ತವೆ.
ಫ್ಯಾಟ್: ಕುಂಬಳಕಾಯಿ ಬೀಜಗಳು ಪ್ರತಿ ಸೇವೆಗೆ ಸುಮಾರು 16 ಗ್ರಾಂ ಕೊಬ್ಬನ್ನು ಒದಗಿಸುತ್ತದೆ.
ಕಾರ್ಬೋಹೈಡ್ರೇಟ್ಗಳು: ಕುಂಬಳಕಾಯಿ ಬೀಜಗಳು ಪ್ರತಿ ಸೇವೆಗೆ ಸುಮಾರು 3 ಗ್ರಾಂ ಕಾರ್ಬೋಹೈಡ್ರೇಟ್ಗಳನ್ನು ಹೊಂದಿರುತ್ತವೆ.
ಫೈಬರ್: ಕುಂಬಳಕಾಯಿ ಬೀಜಗಳಲ್ಲಿ ಸುಮಾರು 2 ಗ್ರಾಂ ಫೈಬರ್ ಇರುತ್ತದೆ.
ಕುಂಬಳಕಾಯಿ ಬೀಜಗಳು ಯಾವುದೇ ಸಕ್ಕರೆ ಅಥವಾ ಅನಾರೋಗ್ಯಕರ ಕೊಬ್ಬನ್ನು ಹೊಂದಿರುವುದಿಲ್ಲ, ಇದು ತೂಕ ನಷ್ಟದ ಆಡಳಿತದಲ್ಲಿರುವವರಿಗೆ ಬೆಳಗಿನ ಉಪಾಹಾರ ಧಾನ್ಯಗಳು ಮತ್ತು ಸಲಾಡ್ಗಳಿಗೆ ಉತ್ತಮ ಸೇರ್ಪಡೆಯಾಗಿದೆ. ಆದಾಗ್ಯೂ, ಕುಂಬಳಕಾಯಿ ಬೀಜಗಳು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುವ ಕಾರಣ ಮಿತವಾಗಿ ಸೇವಿಸಬೇಕು. ಹೆಚ್ಚುವರಿಯಾಗಿ, ಅವುಗಳು ಹೆಚ್ಚಿನ ಫೈಬರ್ ಅಂಶವನ್ನು ಹೊಂದಿದ್ದು, ಅವುಗಳನ್ನು ಸೇವಿಸಿದ ನಂತರ ಜನರು ಹೊಟ್ಟೆ ತುಂಬಿದ ಭಾವನೆಯನ್ನು ಉಂಟುಮಾಡುತ್ತದೆ ಮತ್ತು ಅತಿಯಾಗಿ ತಿನ್ನುವ ಬಯಕೆಯನ್ನು ನಿಗ್ರಹಿಸುವ ಮೂಲಕ ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ.
12 ಕುಂಬಳಕಾಯಿ ಬೀಜಗಳ ಆರೋಗ್ಯ ಪ್ರಯೋಜನಗಳು
ಕುಂಬಳಕಾಯಿ ಬೀಜಗಳನ್ನು ನೇರವಾಗಿ ಆಹಾರಕ್ಕೆ ಹೆಚ್ಚುವರಿಯಾಗಿ ಬಳಸಬಹುದು ಅಥವಾ ಸೇವಿಸುವ ಮೊದಲು ಹುರಿಯಬಹುದು. ಅವುಗಳನ್ನು ಸ್ವಂತವಾಗಿ ಲಘುವಾಗಿ ತಿನ್ನಬಹುದು ಅಥವಾ ಅನೇಕ ಪಾಕವಿಧಾನಗಳು ಮತ್ತು ಊಟಗಳಿಗೆ ಸೇರಿಸಬಹುದು. ಅನೇಕ ಕುಂಬಳಕಾಯಿ ಬೀಜಗಳಲ್ಲಿ ಹುರಿದ ಪ್ರಯೋಜನಗಳಿವೆ, ಇದನ್ನು ಸ್ಮೂಥಿಗಳಲ್ಲಿ ಬಳಸುವುದರ ಮೂಲಕ, ಊಟದ ಮೇಲೆ ಅಲಂಕರಿಸುವ ಮೂಲಕ ಅಥವಾ ಲಘುವಾಗಿ ಟೋಸ್ಟ್ ಮಾಡುವ ಮೂಲಕ ಆನಂದಿಸಬಹುದು. ಆದಾಗ್ಯೂ, ಕುಂಬಳಕಾಯಿ ಬೀಜಗಳನ್ನು ಹೆಚ್ಚು ತಿನ್ನಬಾರದು, ವಿಶೇಷವಾಗಿ ಆರೋಗ್ಯಕರ ತೂಕವನ್ನು ನಿರ್ವಹಿಸಲು ಅವುಗಳನ್ನು ಸೇವಿಸುವಾಗ.
ಕುಂಬಳಕಾಯಿ ಬೀಜಗಳನ್ನು ಪ್ರತಿದಿನ ಸೇವಿಸುವುದರಿಂದ ಅನೇಕ ಸಂಭಾವ್ಯ ಪ್ರಯೋಜನಗಳಿವೆ. ಬಿಳಿ ಕುಂಬಳಕಾಯಿ ಬೀಜಗಳ ಟಾಪ್ 12 ಪ್ರಯೋಜನಗಳು ಇಲ್ಲಿವೆ.
ಮಧುಮೇಹದ ಅಪಾಯವನ್ನು ಕಡಿಮೆ ಮಾಡುವುದು
ಕುಂಬಳಕಾಯಿ ಬೀಜಗಳಲ್ಲಿ ಮೆಗ್ನೀಸಿಯಮ್ ಅಧಿಕವಾಗಿದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುವ ಆಹಾರದ ಅತ್ಯಗತ್ಯ ಅಂಶವಾಗಿದೆ. ಕುಂಬಳಕಾಯಿ ಬೀಜಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಮೂಲಕ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡುವ ಮೂಲಕ ಮಧುಮೇಹ ರೋಗಿಗಳಿಗೆ ಒಳ್ಳೆಯದು. ಮಧುಮೇಹ ಮೆಲ್ಲಿಟಸ್ ಅನ್ನು ನಿರ್ವಹಿಸುವ ಮೂಲಕ ಕುಂಬಳಕಾಯಿ ಬೀಜಗಳು ಮಧುಮೇಹ ರೋಗಿಗಳಿಗೆ ಪ್ರಯೋಜನವನ್ನು ನೀಡುತ್ತದೆ, ಇದರಿಂದಾಗಿ ಸ್ಥಿತಿಯನ್ನು ಸರಿಯಾಗಿ ನಿಯಂತ್ರಿಸುತ್ತದೆ.
ಉರಿಯೂತದ ಗುಣಲಕ್ಷಣಗಳು
ಕುಂಬಳಕಾಯಿ ಬೀಜಗಳು ಹಲವಾರು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ, ಇದು ನಮ್ಮ ಕೋಶಗಳನ್ನು ಹಾನಿಯಿಂದ ರಕ್ಷಿಸಲು ಮತ್ತು ರೋಗಗಳಿಗೆ ಕಾರಣವಾಗುವ ಉರಿಯೂತದಿಂದ ರಕ್ಷಿಸುತ್ತದೆ. ನಾರಿನ ಸಮೃದ್ಧ ಮೂಲವಾಗಿರುವುದರಿಂದ, ಕುಂಬಳಕಾಯಿ ಬೀಜಗಳು ತಮ್ಮ ಉರಿಯೂತದ ಗುಣಲಕ್ಷಣಗಳನ್ನು ವರ್ಧಿಸುತ್ತವೆ. ಈ ಗುಣವು ಯಕೃತ್ತು, ಮೂತ್ರಕೋಶ, ಕರುಳು ಮತ್ತು ಕೀಲುಗಳ ರೋಗಗಳನ್ನು ತಡೆಗಟ್ಟುವಲ್ಲಿ ಪ್ರಯೋಜನಕಾರಿಯಾಗಿದೆ.
ಹೃದಯದ ಕಾರ್ಯವನ್ನು ಬೆಂಬಲಿಸುತ್ತದೆ
ಕುಂಬಳಕಾಯಿ ಬೀಜಗಳು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದಾಗಿ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಕುಂಬಳಕಾಯಿ ಬೀಜದಲ್ಲಿರುವ ಆಂಟಿಆಕ್ಸಿಡೆಂಟ್ಗಳು ಹೃದಯವನ್ನು ವಿವಿಧ ಕಾಯಿಲೆಗಳಿಂದ ರಕ್ಷಿಸುತ್ತದೆ. ಹೆಚ್ಚುವರಿಯಾಗಿ, ಕುಂಬಳಕಾಯಿ ಬೀಜಗಳಲ್ಲಿ ಇರುವ ಮೆಗ್ನೀಸಿಯಮ್ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಇದು ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಮೆಗ್ನೀಸಿಯಮ್ ಕೊಲೆಸ್ಟ್ರಾಲ್ ಮಟ್ಟಗಳು ಮತ್ತು ಟ್ರೈಗ್ಲಿಸರೈಡ್ಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದರಿಂದಾಗಿ ಹೃದಯ ಕಾಯಿಲೆಗಳ ಅಪಾಯವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ.
ಉತ್ತಮ ನಿದ್ರೆ
ಕುಂಬಳಕಾಯಿ ಬೀಜಗಳು ಟ್ರಿಪ್ಟೊಫಾನ್, ಉತ್ತಮ ನಿದ್ರೆಯನ್ನು ಉತ್ತೇಜಿಸುವ ಅಮೈನೋ ಆಮ್ಲದಂತಹ ವಿವಿಧ ಪೋಷಕಾಂಶಗಳ ಶಕ್ತಿ ಕೇಂದ್ರವಾಗಿದೆ ಮತ್ತು ತಾಮ್ರ, ಸತು ಮತ್ತು ಸೆಲೆನಿಯಮ್ ಅನ್ನು ಸಹ ಒಳಗೊಂಡಿರುತ್ತದೆ, ಇದು ನಿದ್ರೆಯ ಗುಣಮಟ್ಟ ಮತ್ತು ಅವಧಿಗೆ ಕೊಡುಗೆ ನೀಡುತ್ತದೆ. ಹೆಚ್ಚುವರಿಯಾಗಿ, ಮೆಗ್ನೀಸಿಯಮ್ ಆತಂಕ ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ನಿದ್ರಾಹೀನತೆಯನ್ನು ತಡೆಯಲು ಸಹಾಯ ಮಾಡುತ್ತದೆ.
ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳು
ಕುಂಬಳಕಾಯಿ ಬೀಜಗಳಲ್ಲಿರುವ ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿವೆ, ವಿಶೇಷವಾಗಿ ಸ್ತನ ಮತ್ತು ಪ್ರಾಸ್ಟೇಟ್ ಗ್ರಂಥಿಗಳ ಕ್ಯಾನ್ಸರ್.
ತೂಕ ನಿರ್ವಹಣೆಯಲ್ಲಿ ಸಹಾಯಕ
ಕುಂಬಳಕಾಯಿ ಬೀಜಗಳು ಫೈಬರ್ ಮತ್ತು ಪ್ರೋಟೀನ್ಗಳಲ್ಲಿ ಸಮೃದ್ಧವಾಗಿವೆ, ಇದು ಸಣ್ಣ ಪ್ರಮಾಣದ ಬೀಜಗಳನ್ನು ಸೇವಿಸುವ ಮೂಲಕವೂ ವ್ಯಕ್ತಿಯನ್ನು ಪೂರ್ಣವಾಗಿ ಅನುಭವಿಸುವಂತೆ ಮಾಡುತ್ತದೆ. ಅವರು ದೀರ್ಘಕಾಲದವರೆಗೆ ಹಸಿವನ್ನು ನೀಗಿಸಲು ಸಹಾಯ ಮಾಡುತ್ತಾರೆ, ಇದು ದಿನವಿಡೀ ಸೇವಿಸುವ ಆಹಾರದ ಪ್ರಮಾಣವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಸೇವಿಸುವ ಕ್ಯಾಲೊರಿಗಳ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ತೂಕ ನಷ್ಟದ ಪ್ರಯಾಣದಲ್ಲಿ ಇದು ಸಹಾಯ ಮಾಡುತ್ತದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಕುಂಬಳಕಾಯಿ ಬೀಜಗಳಲ್ಲಿ ವಿಟಮಿನ್ ಇ ಮತ್ತು ಸತುವು ಇರುತ್ತದೆ, ಇದು ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸಲು ಪೋಷಕಾಂಶಗಳ ಉತ್ತಮ ಮೂಲವಾಗಿದೆ. ವಿಟಮಿನ್ ಇ ಪ್ರತಿರಕ್ಷಣಾ ಪ್ರತಿಕ್ರಿಯೆಗಳನ್ನು ಹೆಚ್ಚಿಸಲು ಮತ್ತು ವಿವಿಧ ಸಾಂಕ್ರಾಮಿಕ ರೋಗಗಳಿಂದ ರಕ್ಷಿಸಲು ಹೆಸರುವಾಸಿಯಾಗಿದೆ ಮತ್ತು ದೇಹದ ಜೀವಕೋಶಗಳಲ್ಲಿ ಸ್ವತಂತ್ರ ರಾಡಿಕಲ್ ಹಾನಿಯನ್ನು ತಡೆಯುತ್ತದೆ. ಸತುವು ನಮ್ಮ ದೇಹವನ್ನು ಉರಿಯೂತ, ಅಲರ್ಜಿಗಳು ಮತ್ತು ರೋಗಕಾರಕಗಳಂತಹ ವಿವಿಧ ಸಮಸ್ಯೆಗಳಿಂದ ರಕ್ಷಿಸುತ್ತದೆ. ಆದ್ದರಿಂದ, ಸಂಚಿತವಾಗಿ, ಈ ಪೋಷಕಾಂಶಗಳು ಸೋಂಕುಗಳನ್ನು ತಡೆಗಟ್ಟಲು ಮತ್ತು ಒಟ್ಟಾರೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಕುಂಬಳಕಾಯಿ ಬೀಜಗಳ ಪ್ರಯೋಜನಗಳು ಆಂಟಿಬ್ಯಾಕ್ಟೀರಿಯಲ್, ಆಂಟಿಫಂಗಲ್ ಮತ್ತು ಆಂಟಿವೈರಲ್ ಗುಣಲಕ್ಷಣಗಳನ್ನು ಸಹ ಒಳಗೊಂಡಿರುತ್ತವೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಮೂಳೆಯ ಆರೋಗ್ಯವನ್ನು ಬೆಂಬಲಿಸುತ್ತದೆ
ಕುಂಬಳಕಾಯಿ ಬೀಜಗಳಲ್ಲಿ ಇರುವ ಮೆಗ್ನೀಸಿಯಮ್ ಬಲವಾದ ಮೂಳೆಗಳಿಗೆ ಒಳ್ಳೆಯದು ಮತ್ತು ಬೆಳವಣಿಗೆಗೆ ಪ್ರಮುಖವಾಗಿದೆ. ಕುಂಬಳಕಾಯಿ ಬೀಜಗಳು ಸಾಕಷ್ಟು ಪ್ರಮಾಣದ ಖನಿಜಗಳನ್ನು ಒದಗಿಸುತ್ತವೆ, ಇದು ಮೂಳೆಗಳ ಸಾಂದ್ರತೆ ಮತ್ತು ಬಲವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹೀಗಾಗಿ, ಇದು ಸುಲಭವಾಗಿ ಮೂಳೆ ಮುರಿತಗಳು ಮತ್ತು ಆಸ್ಟಿಯೊಪೊರೋಸಿಸ್ನಂತಹ ಪರಿಸ್ಥಿತಿಗಳನ್ನು ತಡೆಯಲು ಸಹಾಯ ಮಾಡುತ್ತದೆ. ಮೆಗ್ನೀಸಿಯಮ್ ಕೊರತೆಯು ಕ್ಯಾಲ್ಸಿಯಂ ಕೊರತೆಗೆ ಸಂಬಂಧಿಸಿದೆ, ಇದು ದುರ್ಬಲ ಮೂಳೆಗಳಿಗೆ ಕಾರಣವಾಗುತ್ತದೆ.
ಪುರುಷ ಸಂತಾನೋತ್ಪತ್ತಿ ಆರೋಗ್ಯವನ್ನು ಬೆಂಬಲಿಸುತ್ತದೆ
ಕುಂಬಳಕಾಯಿ ಬೀಜಗಳಲ್ಲಿ ಉತ್ಕರ್ಷಣ ನಿರೋಧಕಗಳ ದೊಡ್ಡ ಸಂಗ್ರಹವಿದೆ, ಇದು ಪ್ರಾಸ್ಟೇಟ್ ಕ್ಯಾನ್ಸರ್ ಅನ್ನು ತಡೆಯಲು ಸಹಾಯ ಮಾಡುತ್ತದೆ. ಪುರುಷರಿಗೆ ಕುಂಬಳಕಾಯಿ ಬೀಜಗಳ ಪ್ರಯೋಜನಗಳು ಮೂತ್ರದ ಸೋಂಕುಗಳು, ರೋಗಗಳು ಮತ್ತು ಅಸ್ವಸ್ಥತೆಗಳನ್ನು ತಡೆಗಟ್ಟುವುದು ಮತ್ತು ಚಿಕಿತ್ಸೆ ನೀಡುವುದು, ಮತ್ತೊಂದೆಡೆ, ವೀರ್ಯದ ಗುಣಮಟ್ಟವನ್ನು ಸುಧಾರಿಸುವುದು. ಇದು ದೇಹದಲ್ಲಿ ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸುವ ಮೂಲಕ ಪುರುಷರಲ್ಲಿ ಫಲವತ್ತತೆಯನ್ನು ಸುಧಾರಿಸುತ್ತದೆ ಮತ್ತು ವೀರ್ಯದ ಗುಣಮಟ್ಟ ಮತ್ತು ಪ್ರಮಾಣವನ್ನು ಸುಧಾರಿಸುತ್ತದೆ.
ಸ್ತ್ರೀ ಸಂತಾನೋತ್ಪತ್ತಿ ಆರೋಗ್ಯವನ್ನು ಬೆಂಬಲಿಸುತ್ತದೆ
ಕುಂಬಳಕಾಯಿ ಬೀಜಗಳು ಉತ್ತಮ ಪ್ರಮಾಣದ ಸತುವನ್ನು ಹೊಂದಿರುತ್ತವೆ, ಇದು ಗರ್ಭಧಾರಣೆಗೆ ಒಳ್ಳೆಯದು. ಸತುವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಮಗುವಿನ ಆರೋಗ್ಯಕರ ಬೆಳವಣಿಗೆಗೆ ಸಹಾಯ ಮಾಡುತ್ತದೆ, ಇದು ಮಹಿಳೆಯರಿಗೆ ಕುಂಬಳಕಾಯಿ ಬೀಜಗಳ ಪ್ರಯೋಜನಗಳನ್ನು ಹೊಂದಿದೆ. ಆದ್ದರಿಂದ, ಗರ್ಭಿಣಿಯರು ಕುಂಬಳಕಾಯಿ ಬೀಜಗಳಂತಹ ಸತುವು ಭರಿತ ಆಹಾರವನ್ನು ಸೇವಿಸುವುದರಿಂದ ಪ್ರಯೋಜನ ಪಡೆಯುತ್ತಾರೆ. ಕುಂಬಳಕಾಯಿ ಬೀಜಗಳು ಋತುಬಂಧಕ್ಕೊಳಗಾದ ಮಹಿಳೆಯರಲ್ಲಿ ಆಸ್ಟಿಯೊಪೊರೋಸಿಸ್ ಅನ್ನು ತಡೆಯಲು ಸಹಾಯ ಮಾಡುತ್ತದೆ.
ಕೂದಲು ಮತ್ತು ಚರ್ಮಕ್ಕೆ ಒಳ್ಳೆಯದು
ಕುಂಬಳಕಾಯಿ ಬೀಜಗಳನ್ನು ಸೇವಿಸುವುದರಿಂದ ಕೂದಲನ್ನು ನಯವಾಗಿ ಮತ್ತು ಬಲವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ. ಇದು ಚರ್ಮವನ್ನು ಮೃದುವಾಗಿಸಲು ಮತ್ತು ಸುಕ್ಕು ಮುಕ್ತವಾಗಲು ಸಹಾಯ ಮಾಡುತ್ತದೆ. ಅದರ ಉರಿಯೂತದ ಗುಣಲಕ್ಷಣಗಳಿಂದಾಗಿ, ಇದು ಮೊಡವೆ ಮತ್ತು ಮೊಡವೆಗಳನ್ನು ತಡೆಯಲು ಸಹಾಯ ಮಾಡುತ್ತದೆ ಚರ್ಮದ ಸೋಂಕುಗಳು.
ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡುತ್ತದೆ
ಕುಂಬಳಕಾಯಿ ಬೀಜಗಳಲ್ಲಿ ಇರುವ ಮೆಗ್ನೀಸಿಯಮ್ ಒತ್ತಡ ಮತ್ತು ಆತಂಕವನ್ನು ತಡೆಯಲು ಮತ್ತು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಮನಸ್ಸನ್ನು ಶಾಂತಗೊಳಿಸುವ ಮೂಲಕ ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕುಂಬಳಕಾಯಿ ಬೀಜಗಳು ಒಂದು ಸೂಪರ್ಫುಡ್ ಆಗಿದ್ದು ಅದು ಹಲವಾರು ಪ್ರಯೋಜನಗಳನ್ನು ಮತ್ತು ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿದೆ. ಇದನ್ನು ಸ್ಮೂಥಿಗಳು, ಸಲಾಡ್ಗಳು, ಸೂಪ್ಗಳು, ಧಾನ್ಯಗಳು, ಕೇಕ್ಗಳು, ಎನರ್ಜಿ ಬಾರ್ಗಳು ಇತ್ಯಾದಿಗಳಲ್ಲಿ ಬಳಸಬಹುದು. ಆದಾಗ್ಯೂ, ಇದನ್ನು ಮಿತವಾಗಿ ಸೇವಿಸಬೇಕು ಇಲ್ಲದಿದ್ದರೆ ಇದು ಉಬ್ಬುವುದು, ಹೊಟ್ಟೆನೋವು, ವಾಯು, ಮತ್ತು ಮಲಬದ್ಧತೆಗೆ ಕಾರಣವಾಗಬಹುದು. ಇದು ಬಹಳಷ್ಟು ಕ್ಯಾಲೊರಿಗಳನ್ನು ಹೊಂದಿರುವುದರಿಂದ, ಇದನ್ನು ಹೆಚ್ಚು ಸೇವಿಸುವುದರಿಂದ ತೂಕ ಹೆಚ್ಚಾಗಬಹುದು. ಕುಂಬಳಕಾಯಿ ಬೀಜಗಳನ್ನು ಸೇವಿಸಲು ಉತ್ತಮ ಮಾರ್ಗವೆಂದರೆ ಅವುಗಳನ್ನು ಹುರಿದು ಊಟಕ್ಕೆ ಸೇರಿಸುವುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ ವಿಶ್ವವಿದ್ಯಾಲಯ | ಜೂನ್ 2 ರಿಂದ 4 ರವರೆಗೆ ‘ಭಾಷಾಂತರ ಕೌಶಲ್ಯ ತರಬೇತಿ ಶಿಬಿರ’
ಸುದ್ದಿದಿನ,ದಾವಣಗೆರೆ:ಕನ್ನಡ, ತೆಲುಗು, ಉರ್ದು ಸೇರಿದಂತೆ ಭಾರತೀಯ ಭಾಷೆಗಳ ಭಾಷಾಂತರ ಕೌಶಲ್ಯ ತರಬೇತಿ ಶಿಬಿರವನ್ನು ದಾವಣಗೆರೆಯ ವಿಶ್ವವಿದ್ಯಾನಿಲಯದ ಇಂಗ್ಲಿಷ್ ಅಧ್ಯಯನ ವಿಭಾಗ ಹಾಗೂ ಭಾರತೀಯ ಭಾಷಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಜೂನ್ 2 ರಿಂದ 4 ರವರೆಗೆ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದೆ ಎಂದು ಪ್ರೊ. ಪಕ್ಕೀರೇಶ ಹಳ್ಳಳ್ಳಿ ತಿಳಿಸಿದ್ದಾರೆ.
ಪ್ರಕಟಣೆಯಲ್ಲಿ ತಿಳಿಸಿರುವ ಅವರು “ಭಾರತೀಯ ಭಾಷಾ ಕೇಂದ್ರ ಸಂಸ್ಥೆಯ ‘ರಾಷ್ಟ್ರೀಯ ಅನುವಾದ ಮಿಷನ್’ ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯದ ಇಂಗ್ಲಿಷ್ ಅಧ್ಯಯನ ವಿಭಾಗದ ಸಂಯುಕ್ತಾಶ್ರಯದಲ್ಲಿ 2026, ಜೂನ್ 2 ರಿಂದ 4 ರವರೆಗೆ ಮೂರು ದಿನಗಳ ಅನುವಾದ ಅಥವಾ ಭಾಷಾಂತರ ಶಿಖರವನ್ನು ಆಯೋಜಿಸಲಾಗಿದ್ದು ಶಿಬಿರದಲ್ಲಿ ಕನ್ನಡ, ತೆಲುಗು, ಉರ್ದು ಭಾಷೆಗಳ ಭಾಷಾಂತರ ಬಗ್ಗೆ ಶಿಬಿರವನ್ನು ಆಯೋಜಿಸಲಾಗಿದ್ದು. ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಸಭಾಂಗಣದಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.
“ದಾವಣಗೆರೆ ಎವಿಕೆ ಕಾಲೇಜಿನ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರಾದ ಡಾ. ಅನುರಾಧ ಪಿ ಎಂ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ದಾವಣಗೆರೆ ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿಗಳಾದ ಡಾ. ವೆಂಕಟೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಮೈಸೂರಿನ ರಾಷ್ಟ್ರೀಯ ಅನುವಾದ ಮಿಷನ್ ನ ಹಿರಿಯ ಕರೆಸ್ಪಾಂಡೆಂಟ್ ಪ್ರೊ. ಉಷಾರಾಣಿ ಆರ್ ಶಿಬಿರದ ಬಗ್ಗೆ ಮಾತನಾಡಲಿದ್ದಾರೆ”
“ಮುಖ್ಯ ಅತಿಥಿಗಳಾಗಿ ದಾವಣಗೆರೆ ವಿವಿ ರಿಜಿಸ್ಟ್ರಾರ್ ಎಸ್ ಬಿ ಘಂಟಿ, ಮೌಲ್ಯಮಾಪನ ರಿಜಿಸ್ಟ್ರಾರ್ ಪ್ರೊ. ಸಿ ಕೆ ರಮೇಶ್, ಹಣಕಾಸು ಅಧಿಕಾರಿ ಪ್ರೊ. ಆರ್ ಶಶಿಧರ, ಕಲಾ ವಿಭಾಗದ ಡೀನ್ ಪ್ರೊ. ಲೋಕೇಶ್ ಎಂ ಯು, ಇಂಗ್ಲಿಷ್ ಅಧ್ಯಯನ ವಿಭಾಗದ ಪ್ರೊ. ಪಕ್ಕೀರೇಶ ಹಳ್ಳಳ್ಳಿ , ಪ್ರೊ.ರವಿಕುಮಾರ್ ಕುಂಬಾರ್, ಪ್ರೊ. ಮದಕರಿನಾಯಕ ಎಚ್ ಆರ್, ಪ್ರೊ. ಯಜ್ಞಶ್ರೀ ಎಸ್ ಹಾಗೂ ಇಂಗ್ಲಿಷ್ ಅಧ್ಯಯನ ವಿಭಾಗ ಹಾಗೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ” ಎಂದು ಇಂಗ್ಲಿಷ್ ಅಧ್ಯಯನ ವಿಭಾಗದ ಪ್ರೊ. ಪಕ್ಕೀರೇಶ ಹಳ್ಳಳ್ಳಿ ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoಫಸಲ್ ಭೀಮಾ ಯೋಜನೆಯಲ್ಲಿ ಅಕ್ರಮ | ಗ್ರಾಮ ಆಡಳಿತಾಧಿಕಾರಿ ಕೆ.ಸುರೇಶ ಸೇರಿ 8 ಅಧಿಕಾರಿಗಳ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ7 days agoವಂಚನೆ | ಗಜೇಂದ್ರಗಡ ಶ್ರೀ ಅನ್ನದಾನೇಶ್ವರ ಐ.ಟಿ.ಐ ಕಾಲೇಜು ಪ್ರಾಂಶುಪಾಲ ಅಮರಪ್ಪ ಗಾಣಿಗೇರ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ6 days agoಯು.ಬಿ.ಡಿ.ಟಿ. ಇಂಜಿನಿಯರಿಂಗ್ ಕಾಲೇಜಿನ ಭವ್ಯ ‘ವಜ್ರ ಮಹೋತ್ಸವ’ ಆಚರಣೆ; ಉಪರಾಷ್ಟ್ರಪತಿ ಹಾಗೂ ಮುಖ್ಯಮಂತ್ರಿಗಳ ಆಗಮನ
-
ದಿನದ ಸುದ್ದಿ4 days ago‘ಮತದಾರ ದೇವರು’ ಎಂದ ಸಿದ್ದರಾಮಯ್ಯ
-
ದಿನದ ಸುದ್ದಿ20 hours agoದಾವಣಗೆರೆ ವಿಶ್ವವಿದ್ಯಾಲಯ | ಜೂನ್ 2 ರಿಂದ 4 ರವರೆಗೆ ‘ಭಾಷಾಂತರ ಕೌಶಲ್ಯ ತರಬೇತಿ ಶಿಬಿರ’
-
ದಿನದ ಸುದ್ದಿ12 hours agoಕುಂಬಳಕಾಯಿ ಬೀಜದಲ್ಲಿ ‘ ಜೀವ ಸಂಜೀವಿನಿ’ : ಮಿಸ್ ಮಾಡ್ದೆ ಓದಿ ; ಆರೋಗ್ಯದ ಗುಟ್ಟು ತಿಳಿಯಿರಿ
-
ದಿನದ ಸುದ್ದಿ3 hours agoದಾವಣಗೆರೆಯಲ್ಲಿ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪನೆಗೆ ವಕೀಲ ಎಲ್.ಎಚ್.ಅರುಣಕುಮಾರ್ ಮನವಿ

