ಭಾವ ಭೈರಾಗಿ
ಆ ಒಂಟಿತನವನ್ನ ‘ದಿವ್ಯ ಏಕಾಂತ’ ಅಂದುಕೊಂಡುಬಿಡಿ

ಆ ಪರಿಸ್ಥಿತಿಯನ್ನ ಒಂದಲ್ಲಾ ಒಂದು ಕಾಲಘಟದಲ್ಲಿ ಎಲ್ಲರೂ ಅನುಭವಿಸಿರ್ತಾರೆ. ಏನುಬೇಕಾದ್ರೂ ಅನುಭವಿಸಬಹುದು ಆದರೆ ಈ ಒಂಟಿತನ ಇದೆಯಲ್ಲ ಅದರಷ್ಟು ಭಯಾನಕ ಹಾಗೂ ಅಪಾಯಕಾರಿ ಮತ್ತೊಂದಿಲ್ಲ. ಯಾಕಂದ್ರೆ ಈ ಒಂಟಿತನ ಬಹಳಷ್ಟು ಜನರ ಜೀವನವನ್ನ ಉದ್ದಾರ ಮಾಡಿದ್ರೆ ಅಷ್ಟೇ ಪ್ರಮಾಣದಲ್ಲಿ ಹಾಳಾಗುವ ದಾರಿಯನ್ನೂ ತೋರಿಸಿದೆ.
ಆರಂಭದಲ್ಲಿ ಒಂಟಿತನ ಅಂದರೇನು ಅಂತಾನೇ ಗೊತ್ತಿರಲ್ಲ. ಜೊತೆಲಿ ಯಾರಾದ್ರೂ ಇದ್ದು ಯಾವುದೋ ಒಂದು ಘಟ್ಟದಲ್ಲಿ ಅವರು ನಮ್ಮನ್ನ ಬಿಟ್ಟು ಹೋದಾಗಲೇ ಮೊದಲಬಾರಿಗೆ ಒಂಟಿತನದ ಅನುಭವವಾಗೋದು. ಅದು ನಮ್ಮೊಂದಿಗೆ ಬೆಳೆದ ಗೆಳೆಯನೊ, ಬೆಚ್ಚಗಿನ ಪ್ರೀತಿ ನೀಡಿದ್ದ ಗೆಳತಿಯೋ, ನಿನ್ನೆವರೆಗೂ ಜೊತೆಗೆ ಆಡಿ ಇಂದು ಮದುವೆಯಾಗಿ ಹೋದ ಅಕ್ಕನೋ, ಅಥವಾ ಮರೆತೂ ಮರೆಯಲಾರೆ ಎಂಬ ನಿಮ್ಮ ಜೀವನದ ಯಾವುದಾದರೂ ಒಂದು ಪಾತ್ರವೋ ನೀವು ನಿರೀಕ್ಷಿಸದ ಯಾವುದೋ ಒಂದು ದಿನ ನಿಮ್ಮಿಂದ ಇದ್ದಕ್ಕಿದ್ದಂತೆ ದೂರವಾಗಿಬಿಡ್ತಾರೆ. ನಿನ್ನೆವರೆಗೂ ಆ ಮಗುವಿನ ಭವಿಷ್ಯದ ಕುರಿತು ಸಾವಿರಾರು ಕನಸುಕಟ್ಟಿದ ತಾಯಿ ಇದ್ದಕ್ಕಿದ್ದಂತೆ ಮಗುವಿನ ಉಸಿರು ನಿಂತು ಮಡಿಲು ಬರಿದಾದಾಗ ಸಹಿಸುವುದಾದರೂ ಹೇಗೆ ಅಲ್ವಾ,,,
ಇವೆಲ್ಲ ಒಂದು ಥರಾ ಆದರೆ ಬಹುತೇಕ ಯುವ ಮನಸ್ಸುಗಳು ಅನುಭವಿಸೋದು ಅದೊಂದೇ ರೀತಿಯ ಒಂಟಿತನ . ಅದೇ ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಯಾವುದೋ ಊರಿಂದ ಬಂದ ಅವನನ್ನೋ ಅವಳನ್ನೋ ಜೀವ ಹೋಗುವಷ್ಟು ಇಷ್ಟಪಟ್ಟುಬಿಡ್ತೀವಿ, ಅವಳ ಅಥವಾ ಅವನ ಹಿನ್ನೆಲೆ ಏನು ಅವರ ಮನೋಧರ್ಮ ಹೇಗಿದೆ, ಆಲೋಚನೆಗಳಾದ್ರೂ ನಮಗೆ ಹೊಂದಿಕೊಳ್ಳುತ್ತಾ ಇದ್ಯಾವುದನ್ನೂ ಅಷ್ಟು ಸೀರಿಯಸ್ಸಾಗಿ ಯೋಚನೇನೆ ಮಾಡಿರಲ್ಲ, ಅದೆಲ್ಲದನ್ನೂ ಮೀರಿದ ಅದ್ಯಾವುದೋ ಒಂದು ಕಾರಣಕ್ಕೆ ಅವರನ್ನ ಹಚ್ಚಿಕೊಂಡಿರ್ತೀವಿ, ಎಷ್ಟರಮಟ್ಟಿಗೆ ಅಂದ್ರೆ ಜಗತ್ತಿನಲ್ಲಿ ಯಾರೂ ಇಲ್ಲದಿದ್ರೂ ಪರವಾಗಿಲ್ಲ ಅವರೊಬ್ಬರಿದ್ರೆ ನಾನು ಖುಷಿಯಾಗಿರಬಲ್ಲೆ ಅನ್ನುವಷ್ಟರಮಟ್ಟಿಗೆ. ಇದೆಲ್ಲದಕ್ಕೂ ರಾಯಭಾರಿಯಾಗೋದು ಅದೇ ಮೊಬೈಲ್ ಫೋನ್, ಅದು ಬಡಿದುಕೊಳ್ತು ಅಂದ್ರೆ ಅದು ಅವನೊಬ್ಬನದೇ ಕಾಲ್ ಆಗಿದ್ರೆ ಸಾಕು ಅನ್ನುವಷ್ಟರ ಮಟ್ಟಿಗೆ ಅವಳು ಅವನನ್ನ ಇಷ್ಟ ಪಟ್ಟಿರ್ತಾಳೆ. ಅವನೂ ಅಷ್ಟೆ ಮೊಬೈಲ್ ರಿಂಗಿಂಗ್ ಮೋಡ್ ನಲ್ಲಿದೆ ಅಂತ ಗೊತ್ತಿದ್ದರೂ ಅವಳ ಫೋನಿಗಾಗಿ ಕಾದು ಕಾದು ಐದುನಿಮಿಷಕ್ಕೊಮ್ಮೆ ತನ್ನ ಮೊಬೈಲ್ ನ ಜೇಬಿಂದ ತೆಗೆದು ಚೆಕ್ ಮಾಡ್ತಾನೆ. ಹೀಗಿದ್ದ ಅವರಿಬ್ಬರೂ ಪ್ರೇಮಿಗಳಾಗಿರಲೇಬೇಕು ಅಂತ ನಿಯಮವೇನಿಲ್ಲ, ಹೆಸರೇ ಇಡಲಾಗದ ಅದ್ಯಾವುದೋ ಬಂಧ ಅವರಿಬ್ಬರನ್ನ ಕಟ್ಟಿಹಾಕಿರುತ್ತೆ. ಹೀಗಿದ್ದವರು ಅದ್ಯಾವುದೋ ಒಂದು ಸಂಧರ್ಭದಲ್ಲಿ ಒಬ್ಬರು ಮಾಡಿದ ದುಡುಕಿಗೋ, ಸಣ್ಣ ತಪ್ಪಿಗೋ ಅಥವಾ ಕಾರಣವೇ ಅಲ್ಲದ ಯಾವುದೋ ಕಾರಣಕ್ಕೊ ತಮ್ಮ ತಮ್ಮ ಈಗೋಗಳಿಗಾಗಿ ದೂರ ಆಗ್ಬಿಡ್ತಾರೆ. ಆಗ ಶುರುವಾಗುತ್ತೆ ನೋಡಿ ಈ ಒಂಟಿತನ, ಬದುಕಿನಲ್ಲಿ ನನಗೂ ಇಂಥಾ ಒಂದು ಕ್ಷಣ ಬರಬಹುದು ಅಂತ ದೇವರಾಣೆ ಯಾರೂ ಊಹಿಸಿರಲ್ಲ. ಇದುವರೆಗೂ ಸಾವಿರಬಾರಿ ಕೇಳಿದರೂ ಏನೂ ಅನ್ನಿಸದ ಅದ್ಯಾವುದೋ ಫೀಲಿಂಗ್ ಸಾಂಗ್ ನ್ನ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತೆ ಅದೇ ಒಮಟಿತನ.
ಈ ಒಂಟಿತನವನ್ನ ಸರಿಯಾಗಿ ನಿಭಾಯಿಸಬಲ್ಲವರು ಏನು ಬೇಕಾದ್ರೂ ಸಾಧಿಸಬಹುದು. ನನಗೆ ಜೀವನವೇ ಬೇಡ ನನ್ನಪಾಡಿಗೆ ನನ್ನ ಬಿಟ್ಟುಬಿಡಿ ಅಮತ ಅಂದವನು ಯಾವ ಕೆಲಸವನ್ನೂ ಮಾಡದೇ ಜೀವನ ಹಾಳುಮಾಡಿಕೊಳ್ಳಬಹುದು ಅಥವಾ ಇದೇ ಒಂಟಿತನವನ್ನ ಏಕಾಂತ ಅಂತ ಅಂದುಕೊಮಡು ಕೈಗೆ ಸಿಕ್ಕ ಪುಸ್ತಕವನ್ನೆಲ್ಲಾ ಓದಿ ದೊಡ್ಡ ಜ್ಞಾನಿಯಾಗಬಹುದು. ಈ ಸಮಯದಲ್ಲಿ ಮನಸಲ್ಲಿ ಹುಟ್ಟೋ ಹಟ ಇದೆಯಲ್ಲ ಆ ಹಠ ಬೆಂಕಿಯಿದ್ದಂತೆ ಆ ಬೆಂಕಿಯನ್ನ ಸರಿಯಾಗಿ ಬಳಸಿಕೊಂಡು ಒಲೆ ಹಚ್ಚಿ ಅಡುಗೆ ಮಾಡಿ ಸಾವಿರಾರು ಜನರಿಗೆ ಊಟ ಹಾಕಬಹುದು ಅಥವಾ ಮತ್ತೊಂದು ರೀತಿಯಲ್ಲಿ ಬಳಸಿ ಯಾರದಾದರೂ ಮನೆಗೆ ಬೆಂಕಿಹಚ್ಚಿ ಮಸಣ ಮಾಡಿಬಿಡಬಹುದು. ಈ ಆಯ್ಕೆ ನಮ್ಮಕೈಯ್ಯಲ್ಲೇ ಇರುತ್ತೆ.
ಆ ಒಂಟಿತನದಲ್ಲಿ ಹುಚ್ಚುಹಿಡಿದವರಂತೆ ಯಾವುದಾದರೂ ಸಾಹಸಗಳನ್ನು ಮಾಡಬಹುದು. ನಮ್ಮಿಂದ ಕಲಿಯಲು ಅಸಾಧ್ಯ ಅನ್ನುವಂಥದ್ದೇನೋ ಒಂದನ್ನು ಕಲಿತು ಮುಗಿಸಿಬಿಡಬಹುದು ಯಾಕಂದ್ರೆ ಆಗ ನಮಗೆ ನಾವು ಬ್ಯುಸಿಯಾಗಿರಬೇಕು ಅಷ್ಟೇ. ಹೌದು ಇದೇ ಅದಕ್ಕಿರುವ ಏಕೈಕ ಮಾರ್ಗ. ಅಂತಹಾ ಒಂದು ಒಂಟಿತನ ನಿಮ್ಮಬಾಳಲ್ಲಿ ಬಂದಾಗ ನಿಮ್ಮನ್ನ ನೀವು ಎಷ್ಟು ಸಾಧ್ಯವೋ ಅಷ್ಟು ಬ್ಯುಸಿಯಾಗಿಟ್ಟುಕೊಳ್ಳುವುದು ಉತ್ತಮ.
ಕೈಗೆ ಸಿಕ್ಕ ಕೆಲಸ ಮಾಡಿ, ಯಾರೊಮದಿಗೆ ಮಾತಾಡಿದ್ರೆ ಮನಸಿಗೆ ನೆಮ್ಮದಿ ಅನ್ನಿಸುತ್ತೋ ಅವರೊಂದಿಗೆ ಮಾತಾಡಿ. ಮನಸಿಗೆ ಮುದ ಅನ್ನೋ ಪುಸ್ತಕ ಓದಿ, ಹೊಸದಾಗಿ ಏನಾದರೂ ಕಲಿಯಿರಿ. ಹೀಗೆ ಬ್ಯುಸಿಯಾಗಿರೋಕೆ ಪ್ರಯತ್ನಿಸಿದರೆ ನಿಮಗೆ ಗೊತ್ತಿಲ್ಲದೇ ಈ ಹಾಳು ಒಂಟಿತನ ದಿವ್ಯ ಏಕಾಂತವಾಗಿ ಪರಿಣಮಿಸಿರುತ್ತೆ. ಆ ದಿವ್ಯ ಏಕಾಂತ ನಮ್ಮಿಂದ ಯಾವುದಾದರೂ ಒಂದು ಸಾಧನೆ ಮಾಡಿಸಿಬಿಟ್ಟಿರುತ್ತೆ. ಇವನಿಮದ ಇದು ಹೇಗೆ ಸಾಧ್ಯ ಅನ್ನುವಷ್ಟರ ಮಟ್ಟಿಗೆ ನಾವು ಯಾವುದೋ ಒಂದು ಸಾಧನೆ ಮಾಡಿರ್ತೇವೆ, ಆಮೇಲೆ ಯಾರಾದರೂ ನಮ್ಮ ಏಕಾಂತಕ್ಕೆ ಭಂಗ ತಂದರೆ ಅವರಬಗ್ಗೆಯೇ ಕೋಪ ಬರುತ್ತೆ.
ದಿನೇ ದಿನೇ ನಾವು ನಮ್ಮನ್ನ ನೋಡಿಕೊಳ್ಳುವ ರೀತಿಯನ್ನ ಬದಲಿಸಿಕೊಳ್ತಾ ಅದ್ಯಾವತ್ತೋ ಒಂದು ದಿನ ನಮ್ಮಬಗ್ಗೆ ನಾವು ಹೆಮ್ಮೆ ಪಡ್ತಿರ್ತೀವಿ. ಒಬ್ಬರೇ ಇರೋ ಆ ಕ್ಷಣವನ್ನ ನಮ್ಮದೇ ರೀತಿಯಲ್ಲಿ ಎಂಜಾಯ್ ಮಾಡ್ತಿರ್ತೀವಿ. ಆ ನಂತರದಲ್ಲಿ ಎಷ್ಟೇ ಒತ್ತಡದ ಕೆಲಸವಿದ್ದರೂ ಸ್ವಲ್ಪಹೊತ್ತು ಈ ಏಕಾಂತ ಅನ್ನೋ ಥೆರಪಿ ತಗೊಂಡ್ರೆ ಎಲ್ಲಾ ಸುಲಭ ಅನ್ನಿಸಿಬಿಡುತ್ತೆ. ಯಾಕಂದ್ರೆ ನಾವು ನಮ್ಮ ಜೊತೆಗೂ ಸ್ವಲ್ಪಕಾಲ ಕಳೆಯಬೇಕಿರುತ್ತೆ. ಊರೆಲ್ಲರ ಜೊತೆಗು ಮಾತಾಡೋ ನಾವು ನಮ್ಮ ಆತ್ಮದ ಜೊತೆ ಮಾತಾಡಬೇಕಲ್ವಾ, ನಮ್ಮ ಬಗ್ಗೆಯೂ ನಾವು ಸ್ವಲ್ಪ ಚಿಂತಿಸಬೇಕಲ್ವಾ, ಯಾಕೆ ಹುಟ್ಟಿದ್ದೆ, ಏನು ಮಾಡಿದೆ, ಮುಂದೇನು ಮಾಡಬೇಕಿದೆ ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗಬಹುದಾದ ಏಕೈಕ ಸಮಯ ಆ ಏಕಾಂತ. ಅದನ್ನೊಮ್ಮೆ ಯೋಚಿಸಿನೊಡಿ ಅಲ್ವಾ,,,,,
ಸುದ್ದಿಗಾಗಿ ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ | 9986715401

ಭಾವ ಭೈರಾಗಿ
ಕವಿತೆ | ಕಾಮಧೇನು

- ಎಚ್.ಎಸ್. ಬಿಳಿಗಿರಿ
ನಿನ್ನ ಕಣ್ಣಲಿ ಮಿಂಚು, ನನ್ನ ಎದೆಯಲಿ ಸಿಡಿಲು!
ನಿನ್ನ ತುಟಿಯೊಳು ರೋಜ, ನನ್ನ ಎದೆಯಲಿ ಮುಳ್ಳು! ನಿನ್ನೆದೆಯೊಳಮೃತಪೂರಿತ ಕುಂಭ-ಅದ ಕಳ್ಳು
ನನಗೆ; ಕಣ್ಣಿಗೆ ತಂಪು, ಎದೆಗೂ ಉರಿ ಭುಗಿಭುಗಿಲು! ನಿನಗಿದೆಯೆ ತುಂಬಿದೆದೆ, ನನ್ನ ಎದೆಯೋ ತೆರವು!
ನಿನ್ನ ತನುವಿನ ಏರುತಗ್ಗುಗಳ ದಾರಿಯಲಿ
ಸುತ್ತಿ ಕುಲುಕಾಡಿ ಅತ್ತಿತ್ತ ತೇಂಕಾಡುತಲಿ
ಬಿದ್ದು ನೂರಾರು ಚೂರಗಳಾಯ್ತು ಮನ-ರಥವು!
ಬರಿ ಬೂದಿಗುರಿನೆನಪು ಕೆರಳಿ ಕಾಡಿದೆಯೇನು?
ಗೊದ್ದಗಳ ಗೂಡುಗಳ ಹೀರುತ್ತಿರುವುದೂ ಕರಡಿ?
ಎల్ల ಸೋಸುತ ಕಾಮವೊಂದ ನಿಲಿಸುವ ಜರಡಿ?
ಮಗುಚಿ ಕೆಳಗಡೆ ಬೀಳುತ್ತಿದೆಯೋ ಏರೋಪ್ಲೇನು?
ಎದೆಯ ತಲೆಗೂದಲೋಳು ಪಿಚಪಿಚನೆ ಹರಿವ ಹೇನು? ಗಡಿಗೆಗೆಚ್ಚಲ ಸೋರವ ಬಿಟ್ಟಿತೋ ಕಾಮ-ಧೇನು
(‘ಕಾಮಧೇನು’ ಕವಿತೆ ಕನ್ನಡದ ಸಾನೆಟ್ ಅಥವಾ ಸುನೀತ)
‘ಸಾನೆಟ್’ ಒಂದು ಟಿಪ್ಪಣಿ
ಕವಿತೆಯ ಈ ನಿರ್ದಿಷ್ಟ ಸ್ವರೂಪವು 13 ನೇ ಶತಮಾನದಲ್ಲಿ ಇಟಲಿಯಲ್ಲಿ ಹುಟ್ಟಿಕೊಂಡಿತು. ತನ್ನ 15 ಸಾನೆಟ್, ಮತ್ತು ನಂತರದ ಮುಖ್ಯ ಥೀಮ್ ಮತ್ತು ಇತರ ಹದಿನಾಲ್ಕನೇ ಕಲ್ಪನೆ. ಈ ಕಾರಣಕ್ಕಾಗಿ, ನಾವು ಕೊನೆಯಲ್ಲಿ ಕೆಲಸ ಪ್ರಾರಂಭಿಸಿದ್ದಾರೆ.
ಹದಿನೈದನೇ ಸುನೀತ ಪ್ರಮುಖ ಮೊದಲ ಎರಡು ಪ್ಯಾರಾಗಳನ್ನು, ಮತ್ತು ಸಂಪ್ರದಾಯದ ಪ್ರಕಾರ, ಮೊದಲ ಸುನೀತ ಅಗತ್ಯವಾಗಿ ಮೊದಲ ಸಾಲಿನ ಆರಂಭಿಸಲು ಮತ್ತು ಕೊನೆಯ ಎರಡನೇ ಕೊನೆಗೊಳ್ಳಬೇಕು. ಕಡಿಮೆ ಕುತೂಹಲಕಾರಿ ಕೆಲಸವಿತ್ತು-ಪದ್ಯ ಇತರ ಭಾಗಗಳು. ಹಿಂದಿನ ಇತರ ಹದಿಮೂರು ಸಾನೆಟ್ ಕೊನೆಯ ಸಾಲು ಅಗತ್ಯವಾಗಿ ಮುಂದಿನ ಮೊದಲ ಸಾಲು ಇರಬೇಕು.
ವಿಶ್ವದ ಸಾಹಿತ್ಯ ಇತಿಹಾಸದಲ್ಲೇ ರಷ್ಯಾದ ಕವಿಗಳ ಹೆಸರುಗಳು Vyacheslava Ivanova ಎಂದು ಮತ್ತು ವಾಲೆರಿ ಬ್ರ್ಯುಸೋವ್ ನೆನಪಿಡುವ. ಅವರು ಸಂಪೂರ್ಣವಾಗಿ ಏನು ಒಂದು ಸುನೀತ, ಆದ್ದರಿಂದ ಸಾನೆಟ್ ಕಿರೀಟ ಆಸಕ್ತಿಯನ್ನು ತೋರಿಸಲು ಗೊತ್ತು. ರಶಿಯಾದಲ್ಲಿ ಬರವಣಿಗೆಯ ಈ ಫಾರ್ಮ್ 18 ನೇ ಶತಮಾನದಲ್ಲಿ ಹುಟ್ಟಿಕೊಂಡಿತು. ಜೀನಿಯಸ್ ವ್ಯಾಲೇರಿಯ್ ಬ್ರ್ಯುಸೋವ್ ಈ ಪ್ರಕಾರದ ಬೋಧಕರಾಗಿದ್ದಾರೆ, ಮತ್ತು ಸ್ಥಾಪಿತ ಅಡಿಪಾಯ ಪಾಲಿಸಬೇಕೆಂದು. ಸಾನೆಟ್ ಮಾಲೆಯ ಇವರ ಕೊನೆಯ ಪದ್ಯ ( “ಡೂಮ್ ಸರಣಿ”) ಸಾಲುಗಳನ್ನು ಆರಂಭವಾಗುತ್ತದೆ:
“ಹದಿನಾಲ್ಕು ಅಗತ್ಯ ಹೇಳಿ
ಜೀವಂತವಾಗಿ ನೆಚ್ಚಿನ ನೆನಪುಗಳ ಹೆಸರುಗಳು! ”
ನೀವು ಸಂಯೋಜನೆಯ ಪ್ರಕಾರಕ್ಕೆ ಸ್ವಲ್ಪ ವಿಶ್ಲೇಷಣೆ ಖರ್ಚು ಮಾಡಬೇಕಾಗುತ್ತದೆ ಹೆಚ್ಚು ಅರ್ಥವಾಗುವ ಆಗಿತ್ತು. ಸಂಪ್ರದಾಯದಂತೆ ಮೊದಲ ಸುನೀತ ಅಂತಿಮ ನುಡಿಯು ಪ್ರಾರಂಭವಾಗುತ್ತದೆ ಮತ್ತು ಕೊನೆಗೊಳ್ಳುತ್ತದೆ – ಎರಡನೇ; ಮೂರನೇ ಸುನೀತ ಹಿಂದಿನದರ ಕೊನೆಯ ಸಾಲು, ಈ ಸಂದರ್ಭದಲ್ಲಿ ಪ್ರಾರಂಭವಾಗುತ್ತದೆ – “! ಜೀವಂತವಾಗಿ ನೆಚ್ಚಿನ ನೆನಪುಗಳ ಹೆಸರುಗಳು” ಇದು ವ್ಯಾಲೇರಿಯ್ ಬ್ರ್ಯುಸೋವ್ ಈ ಪ್ರಕಾರದಲ್ಲಿ ಪರಿಪೂರ್ಣತೆ ತಲುಪಿದ ವಾದ ಮಾಡಬಹುದು. ಇಲ್ಲಿಯವರೆಗೆ, 150 ಸಾಹಿತ್ಯ ಎಣಿಕೆ ದಂಡೆಗಳು ರಷ್ಯಾದ ಕವಿಗಳು ಸುನೀತಗಳನ್ನು ಮತ್ತು ಕಾವ್ಯದ ಪ್ರಪಂಚದಲ್ಲಿ ಸುಮಾರು 600 ಇವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ
ಕವಿತೆ | ಅವಳು

- ವಾಯ್.ಜೆ.ಮಹಿಬೂಬ
ಅವಳು ಬರೀ ಅವಳಲ್ಲ..!
ದಿನ ಬೆಳಗುವ ಬೆಳಕು-!
ಅವ ಬಯಸುವ ಬದುಕು
ಅವನಿಯೊಳಗಣ ಜನನಿ
ಭಾವದೊಳಗಿನ ಬಾಗಿನ
ಭಾನಿನಗಲದ ಭಕ್ತಿ..!
ಅವನ ಬಯಕೆಯ ಶಕ್ತಿ ..!
ಅವಳು ಬರೀ ಅವಳಲ್ಲ..!
ಬಾಳಿಗಂಟಿದ ಸಮತೆ
ಹಿತವನುಣಿಸುವ ಭಕ್ತೆ
ಮಿತವ ಬಯಸುವ ಶಾಂತೆ
ಅವನು ಆರಾದಿಸುವ ದಾತೆ
ಒಲವ ಉಳಿಸುವ ಕ್ಷಮತೆ
ಬಾಳ ದಂಡೆಯ ದೃಡತೆ..!
ಅವಳು ಬರೀ ಅವಳಲ್ಲ..!
ಕೋಪಗೊಳ್ಳುವ ಕೆಂಡ
ಎಲ್ಲಾ ತಿಳಿಯುವ ಹಂಡ
ಹಠವೂ ಮಾಡುವ ದಿಂಬ
ಕಾಡಿ ಕರೆಯುವ ಬೀಗು
ಮಾವಿನೊಳಗಿನ ಮಾಗು
ಚಂದನದ ಚೆಲುವು..!
ಅವಳು ಬರೀ ಅವಳಲ್ಲ
ಬರಹದೊಳಗಿನ ಭಾವ
ದೇವರೊಳಗಿನ ತ್ಯಾಗ
ನಿತ್ಯ ಬದುಕಿಸುವ ಆಸೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ
ಕರುಣಾಳು ಅವನು, ಅವನು ನನ್ನವನು..!

- ಸಿಂಚನ ಜಿ. ಏನ್, ಮೈಸೂರು
ಯಾರಿಟ್ಟ ಪ್ರೀತಿಯೋ, ಏನು ಇದರ ರೀತಿಯೋ ಎಂಬ ಮಾತಿನಂತೆ ಪ್ರೀತಿಯ ರೀತಿ -ನೀತಿಗಳ ತಿಳಿಯಲು ಇಡೀ ಬದುಕು ಸಾಲುವುದಿಲ್ಲ. ಆದರೂ ನನ್ನ ಮನದಲ್ಲಿ ಮಿಂಚಿದ ಪ್ರೇಮದ ಮಿಂಚೆ ಒಂದು ರೀತಿಯ ರೋಮಾಂಚನಕಾರಿ ಮೊದ ಮೊದಲಿಗೆ ” ಕ್ರಶ್ ” ಎಂದು ನಾಮಕರಣಗೊಂಡಿದ್ದು ತದ ನಂತರ ಆ ಕ್ರಶ್ ನಾ ಅಲ್ಲಿಗೆ ಬಿಡಲಾರದೆ ಮುಂದಿನ ಪೀಠಿಕೆ ಹಾಕಿ ನನ್ನ ಮನಸ್ಸು ಮುಂದೆ ಓಡುತಿತ್ತು.
ಹೂ ಮನಸ್ಸಿನಲ್ಲಿ ಪ್ರೇಮದ ಅರಮನೆಯ ಕಟ್ಟುವ ಛಲ ನನ್ನದು ಹೀಗಿರುವಾಗ ಸುಮ್ಮನೆ ಇರಲು ಮನಸ್ಸು ಬಿಡಬೇಕಲ್ಲ ಮನಸ್ಸು ನನ್ನನ್ನು ಮೋಸಗಾತಿಯಾಗಿ ಕಾಡುವುದಿಲ್ಲವೇ? ಅಷ್ಟಕ್ಕೂ ಅವನು ನನ್ನವನು ಪ್ರೀತಿ ಮಾಡಿದರು , ಪ್ರೀತಿ ಕೊಟ್ಟರು, ಪ್ರೀತಿ ಬಯಸಿದರು ಅದಕೆಲ್ಲ ಪ್ರತಿಧ್ವನಿ ಬರುತ್ತೆ ಯಾಕೆಂದರೆ ಅವನು ನನ್ನವನು.
ಕಣ್ಣು ತೆರೆದು ಅವನನ್ನು ಕಣ್ಣು ತುಂಬಿಸಿಕೊಳ್ಳುವ ಮುನ್ನವೇ ಮನದೊಳಗೆ ಮನೆ ಮಾಡಿದ ಅವನು ನನ್ನವನು, ಪ್ರೇಮ ಲೋಕವೇ ಹಾಗೆ ಕಲ್ಪನೆಯಲ್ಲಿಯೇ ಅರ್ಧ ಜೀವನ ಕಳೆದು ಬಿಡುತ್ತೆ . ಕಲ್ಪನೆಯ ಲೋಕಕ್ಕಿಂತ ನೈಜ್ಯವಾಗಿಯೇ ನನ್ನನು ಕಾಡಿಸಿ , ಪೀಡಿಸಿ ಪ್ರೀತಿ ಕೊಟ್ಟವನು ಅವನು ನನ್ನವನು, ನನ್ನೆಲ್ಲಾ ಪುಟ್ಟ ಆಸೆ ಈಡೇರಿಸುವ ಅವನು ನನಗೆ ಉತ್ತಮ ಗೆಳೆಯನಾದ.
ನನ್ನ ತುಂಟಾಟ ಸಹಿಸುವಾಗ ತಂದೆಯಾಗಿ ಸಲಹಿದ, ಅವನೆಲ್ಲ ಕಷ್ಟಗಳನ್ನು ಕೇಳುವ ನನ್ನೊಳಗೆ ಒಬ್ಬ ಅಮ್ಮ ಇರುತ್ತಿದ್ದಳು, ಅವನೆಲ್ಲ ದುಃಖಗಳಿಗೆ ಸ್ಪಂದಿಸುವಾಗ ಅವನಿಗೆ ಇಷ್ಟ ಆಗುವ ಗೆಳತಿ ನನ್ನೊಳಗೆ ಇರುತ್ತಿದ್ದಳು ಪ್ರೇಮ ಲೋಕದ ಪಾರಿವಾಳಗಳು ನಾವು , ನಿರ್ಭಯವಾಗಿದೆ ನಮ್ಮ ಲೋಕವು ಅವನು ನನ್ನವನು , ಅವನ ಹಠಕ್ಕೆ ಅವನ ಕೋಪಕ್ಕೆ ನಾನೇ ದೊಡ್ಡ ಅಭಿಮಾನಿ.
ಅವನಂತೆ ನನಗೂ ಮುನಿಸು ಕೂಡಲೇ ನನ್ನ ಮುದ್ದು ಮಗುವಾಗಿ ಬೇಡುತ್ತಿದ್ದನು . ಕಾಳಜಿ ತೋರ್ಪಡಿಸದೆ ಮುಚ್ಚಿಡುತ್ತಿದ್ದನ್ನು ಮನದಲ್ಲಿ, ಹುಡುಕಿಸುವ ಗುಂಗಿನಲ್ಲೆ ಕಾಡಿಸುತ್ತಿದ್ದನ್ನು ಅವನು ಏನೆ ಆಗಲಿ ಅವನು ನನ್ನವನು , ನನಗಾಗಿ ಬಂದವನು , ನನಗಾಗಿಯೆ ಬದುಕುವನು ಮೌನವಾಗಿಯೇ ಕಣ್ಣ ಸನ್ನೆಯಲ್ಲಿ ನನ್ನ ಮುದ್ದಾಡಿ ಮುತ್ತು ಇಡುವವನು.
ಪ್ರೇಮ ಲೋಕದ ಬಣ್ಣ ಬಣ್ಣದ ಬದುಕು ಹೇಳಿಕೊಟ್ಟವನು ನನ್ನ ಪ್ರತಿ ಪದಗಳ ಸ್ಫೂರ್ತಿದಾರನು ಅವನು ನನ್ನವನು ಗುಡ್ ಮಾರ್ನಿಂಗ್ ಸಂದೇಶದಿಂದ ಶುರುವಾಗಿ ಹುಷಾರು ಎಂಬ ಜೋಪಾನದ ತವಕದಲ್ಲಿ ನಿದ್ರೆಗೆ ಕಳುಹಿಸುತ್ತಿದ್ದನು ದಿನಕ್ಕೆರಡು ಬಾರಿ ಆದರೂ, ಕೆರಳಿಸಿ ಜಗಳ ಮಾಡುತ್ತಿದ್ದವನು ಒಂದೆರಡು ಮಾತುಗಳ ಕೆಟ್ಟದಾಗಿ ಆಡದೆ, ಮನ ನೋಯಿಸದೆ ಜೀವನವ ಸಂತೈಸುತ್ತ ನನ್ನೊಂದಿಗೆ ಹೆಜ್ಜೆ ಇಟ್ಟವನು ಅವನು ನನ್ನವನು.
ನನ್ನ ಪ್ರಪಂಚವೇ ಅವನು , ನಮ್ಮ ಲೋಕವೇ ಪುಣ್ಯದ ಪ್ರೇಮ ಲೋಕ , ವಿರಸ ಸರಸಗಳ ಸಮ್ಮಿಲನವೇ ನಮ್ಮ ನೂತನ ಶೈಲಿಯ ಪ್ರೀತಿ ಲವ್ ಯು ಎಂಬ ಪದದ ತಿದ್ದುಪಡಿ ನಮ್ಮಲಿಲ್ಲ ಈ ಪದವನ್ನು ಅರ್ಥೈಸುವ ಬಂಧನ ನಮ್ಮದು .
ಐ ವಾಂಟ್ ಯು ಎಂದು ಬೇಡುವುದಿಲ್ಲ ಬೇಕಾಗಿರುವ ಜೀವನ ಜೀವ ಇಬ್ಬರಿಗೂ ದೊರಕಿವೆ ನನ್ನ ಅದೆಷ್ಟೋ ಪತ್ರಗಳ ಮೀರಿ ಮೆರೆದ ಪದಗಳು ಇವು ಕಾರಣ ಅವನು ನನ್ನವನು.
ಬೈ ಸಿಂಪಲ್ ಸಿಂಚು ಹೂ ಮನಸಿಗರಿಗೆಲ್ಲ ಪ್ರೇಮಿಗಳ ದಿನದ ಶುಭಾಶಯಗಳು ನಿಮ್ಮ ಪ್ರೇಮ ಪಲ್ಲಕ್ಕಿಯಿಂದ ಬಿಡಿಸಿಕೊಂಡು ಪಕ್ಷಿಗಳು ಆದಷ್ಟು ಬೇಗ ಆಕಾಶದಲ್ಲಿ ಹಾರಾಡಿ ಎಂದು ಹಾರೈಸುವೆ… ಶುಭವಾಗಲಿ ಸ್ನೇಹಿತರೆ
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಲೈಫ್ ಸ್ಟೈಲ್6 days ago
ವೀರ್ಯಾಣು ಬಲವೃದ್ಧಿಗೆ ಇಲ್ಲಿವೆ ಉಪಾಯಗಳು..!
-
ಅಂತರಂಗ7 days ago
ಅನಾಥರನ್ನಾಗಿಸದ ಅಂತಿಮ ಸಂಗಾತಿ
-
ದಿನದ ಸುದ್ದಿ6 days ago
ಸಿದ್ದರಾಮಯ್ಯ ರಾಮನ ವಿರೋಧಿ ಅಂತಾರೆ, ನನ್ನ ಹೆಸರಿನಲ್ಲೇ ರಾಮನಿದ್ದಾನೆ : ಸಿದ್ದರಾಮಯ್ಯ
-
ರಾಜಕೀಯ6 days ago
ಜನರನ್ನು ಕಷ್ಟಕ್ಕೆ ದೂಡಿ ಮೋದಿ ಸರ್ಕಾರ ಲಾಭಗಳಿಸುತ್ತಿದೆ : ಸೋನಿಯಾ ಗಾಂಧಿ ಕಿಡಿ
-
ಲೈಫ್ ಸ್ಟೈಲ್6 days ago
ಜಾನುವಾರುಗಳ ಲೋಹ ಕಾಯಿಲೆ
-
ದಿನದ ಸುದ್ದಿ6 days ago
ಗೋಮಾಂಸವನ್ನು ವಿದೇಶಕ್ಕೆ ರಫ್ತು ಮಾಡಬಹುದು ; ವಿದೇಶದಿಂದ ಬರುವ ಗೋಮಾಂಸವನ್ನು ತಿನ್ನಬಹುದು, ಬಿಜೆಪಿಯ ಈ ಎಡಬಿಡಂಗಿ ನಿಲುವಿನ ಹಿಂದಿನ ಮರ್ಮ ಏನು..? ಮಾಜಿ ಸಿಎಂ ಸಿದ್ದರಾಮಯ್ಯ
-
ಲೈಫ್ ಸ್ಟೈಲ್5 days ago
ಏನಿದು ? ಗಡಿಮಾರಿ..!
-
ದಿನದ ಸುದ್ದಿ6 days ago
ಚನ್ನಗಿರಿ | ಲಂಚ ಸ್ವೀಕರಿಸಿದ್ದ ಗ್ರಾಮ ಲೆಕ್ಕಾಧಿಕಾರಿಗೆ 2 ವರ್ಷ ಜೈಲು