ದಿನದ ಸುದ್ದಿ
ತಂಬಾಕು ನಿಯಂತ್ರಣ ಕಾನೂನನ್ನು ಬಲಪಡಿಸಲು ಶೇಕಡಾ 88% ಭಾರತೀಯರ ಒಲವು
ಕೋಟ್ಪಾ ತಿದ್ದುಪಡಿ ಮಸೂದೆ 2020ರ ಪ್ರಸ್ತಾವಿತ ಸುಧಾರಣೆಗಳಿಗೆ ರಾಷ್ಟ್ರ ಯ ಸಮೀಕ್ಷೆಯಲ್ಲಿ ಭಾರೀ ಸಾರ್ವಜನಿಕ ಬೆಂಬಲ ವ್ಯಕ್ತವಾಗಿದೆ.
ಸುದ್ದಿದಿನ,ಬೆಂಗಳೂರು: ದೇಶದ 10 ರಾಜ್ಯಗಳ ವಯಸ್ಕರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಶೇ. 80ಕ್ಕೂ
ಹೆಚ್ಚು ಭಾರತೀಯರು ಸಿಗರೇಟ್, ಬೀಡಿ ಮತ್ತು ಹೊಗೆರಹಿತ ತಂಬಾಕು ಬಳಕೆ ಬಹಳ ಗಂಭೀರ ಸಮಸ್ಯೆ ಎಂದು
ನಂಬಿದ್ದಾರೆ ಹಾಗೂ ಈ ಸಮಸ್ಯೆಯನ್ನು ನಿವಾರಿಸಲು ಪ್ರ ಪ್ರಸ್ತುತ ಚಾಲ್ತಿಯಲ್ಲಿರುವ ತಂಬಾಕು ನಿಯಂತ್ರಣ ಕಾನೂನನ್ನು
ಬಲಪಡಿಸಲು ಶೇ. 88% ಮಂದಿ ಪ್ರಬಲವಾಗಿ ಬೆಂಬಲಿಸುತ್ತಾರೆ.
ಧೂಮಪಾನದ ಹೊಗೆಗೆ ಒಡ್ಡಿಕೊಳ್ಳುವುದು
ಆರೋಗ್ಯಕ್ಕೆ ಅತೀ ಹಾನಿಕಾರಕ ಎಂದು ಶೇ. 72 ಜನರು ನಂಬಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ,
ವಿಮಾನ” ನಿಲ್ದಾಣ, ಹೋಟೆಲ್ ಮತ್ತು ರೆಸ್ಟೋರೆಂಟ್ಗಳಲ್ಲಿ ವಿಶೇಷ ಧೂಮಪಾನ ಪ್ರದೇಶಗಳ ತೆರವು ಹಾಗೂ
ಮಾರಾಟ ಕೇಂದ್ರ ಗಳಲ್ಲಿ ಸಿಗರೇಟ್ ಮತ್ತು ದೀಡಿಗಳ ಬಿಡಿ ಮಾರಾಟ ಮತ್ತು ತಂಬಾಕು ಉತ್ಪನ್ನಗಳ ಜಾಹೀರಾತಿನ
ಮೇಲೆ ನಿಷೇಧಕ್ಕೆ ಸಿಕ್ಕ ಬೆಂಬಲ ಅಭೂತಪೂರ್ವ.
ಕನ್ಸ್ಯುಮರ್ ವಾಯ್ಸ್ 10 ರಾಜ್ಯಗಳಲ್ಲಿ ದೂರವಾಣಿ ಮುಖಾಂತರ ನಡೆಸಿದ 18 ವರ್ಷ ಮೇಲ್ಪಟ್ಟ 1,476
ವಯಸ್ಕರನ್ನೊಳಗೊಂಡ ವಿವರವಾದ ಸಮೀಕ್ಷೆಯ ಅಂಶಗಳಿವು. ಹತ್ತು ಭಾಷೆಗಳಲ್ಲಿ (ಕನ್ನಡ, ಹಿಂದಿ, ಗುಜರಾತಿ,
ಪಂಜಾಬಿ, ಒರಿಯಾ, ಮರಾಠಿ, ತಮಿಳು, ಬೆಂಗಾಲಿ, ತೆಲುಗು ಮತ್ತು ಮಲಯಾಳಂ) ನಡೆಸಲಾದ ಈ ಆಳವಾದ
ಸಂದರ್ಶನಗಳಿಗೆ ಕಂಪ್ಯೂಟರ್ ಅಸಿಸ್ಲೆಡ್ ಟೆಲಿಫೋನ್ ಇಂಟರ್ವ್ಯೂಯಿಂಗ್ (ಸಿಎಟಿಐ) ಮತ್ತು ರಾಂಡಮ್ ಡಿಜಿಟ್
ಡಯಲ್ (ಆರ್ ಡಿಡಿ) ಕ್ರಮಶಾಸ್ತ್ರವನ್ನು ಬಳಸಲಾಯಿತು.
ಸಮೀಕ್ಷೆಯ ಪ್ರಮುಖಾಂಶಗಳು
1. ತಂಬಾಕುಬಳಕೆಯನ್ನುಬಹುತೇಕ ಭಾರತೀಯರು ಗಂಭೀರ ಸಮಸ್ಯೆಯಾಗಿ ನೋಡುತ್ತಾರೆ
ಸಮೀಕ್ಷೆಯಲ್ಲಿ ಪಾಲ್ಗೊಂಡ ಬಹುತೇಕರು ತಂಬಾಕು ಬಳಕೆಯ ವಿವಿಧ ಬಗೆಗಳನ್ನು ಬಹಳ ಗಂಭೀರ ಸಮಸ್ಯೆಗಳಿಂದ ಪರಿಗಣಿಸುತ್ತಾರೆ. ಶೇಕಡ 82ರಷ್ಟು ಮಂದಿ
ಹೊಗೆರಹಿತ ತಂಬಾಕು ಬಳಕೆ ತೀವ್ರ ಗಂಭೀರ ಸಮಸ್ಯೆ ಎಂದು ನಂಬುತ್ತಾರೆ; “ಶೇಕಡಾ 80ರಷ್ಟು ಮಂದಿ ಸಿಗರೇಟ್ ಸೇವಸೆ ಬಗ್ಗೆ ಇದೇ ಅಭಿಪ್ರಾಯ ವ್ಯಕ್ತಪಡಿಸಿದರೆ, ಶೇಕಡ
77ರಷ್ಟು ಮಂದಿ ಬೀಡಿ ಬಳಕೆ ಬಹಳ ಗಂಭೀರ ಸಮಸ್ಯೆ ಎಂದು ಹೇಳುತ್ತಾರೆ.
2. ಧೂಮಪಾನದ ಹೊಗೆಗೆ ಒಡ್ಡಿಕೊಳ್ಳುವುದು ಆರೋಗ್ಯಕ್ಕೆ ಬಹಳ ಅಪಾಯಕಾರಿ
ಧೂಮಪಾನದ ಹೊಗೆಗೆ ತಮ್ಮನ್ನು ಒಡ್ಡಿಕೊಳ್ಳುವುದು ಕಳವಳಕಾರಿ ಎಂದು ಶೇಕಡ 72 ರಷ್ಟು ಮಂದಿ, ಅಂದರೆ ಪ್ರತಿ ಹತ್ತು ಭಾರತೀಯರಲ್ಲಿ ಏಳು ಮಂದಿ ಎಂದು ಹೇಳುತ್ತಾರೆ.
3. ತಂಬಾಕು ನಿಯಂತ್ರಣ ಕಾನೂನನ್ನು ಬಲಪಡಿಸಲು ಭಾರತೀಯರ ತೀವ್ರ ಒಲವು
ಪ್ರಸಕ್ತ ತಂಬಾಕು ನಿಯಂತ್ರಣ ಕಾನೂನನ್ನು ಬಲಪಡಿಸಲು ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಶೇಕಡ 88ರಷ್ಟು ಮಂದಿ ಇದಕ್ಕೆ ಬೆಂಬಲ ನೀಡುವ ಮೂಲಕ ಹತ್ತು
ಭಾರತೀಯರಲ್ಲಿ 9 ಮಂದಿ ಕಾನೂನನ್ನು ಬಲಪಡಿಸುವ ಪರವಾಗಿದ್ದಾರೆ. ವಯಸ್ಸು ಮತ್ತು ಲಿಂಗ ಸೇರಿದಂತೆ ಎಲ್ಲ ಸಾಮಾಜಿಕ ‘ಮತ್ತು ಭೌಗೋಳಿಕ ಸ್ತರಗಳನ್ನೂ ಮೀರಿ’ ಇದಕ್ಕೆ ಬೆಂಬಲ ವ್ಯಕ್ತವಾಗಿದೆ. ತಂಬಾಕು ಬಳಕೆದಾರರು ಸಹ ಇದಕ್ಕೆ ಬೆಂಬಲ ಸೂಚಿಸಿದ್ದಾರೆ.
‘”ಪ್ರಸಕ್ತ ಜಾರಿಯಲ್ಲಿರುವ ತಂಬಾಕು ನಿಯಂತಣ ಕಾನೂನನ್ನು ಬಲಪಡಿಸಲು ಜನರಿಂದ ವ್ಹಕ್ತವಾಗಿರುವ ಬೆಂಬಲ ಆಶಾದಾಯಕವಾಗಿದೆ. ಭಾರತ ಸರ್ಕಾರವು ಈಗಾಗಲೇ ತಂಬಾಕು ನಿಯಂತಣ ಕಾನೂನು
ಕೋಟಾ-2003ಕ್ಕೆ ತಿದ್ದುಪಡಿ ತರುವ ಪ್ರಕ್ರಿಯೆಯನ್ನು ಆರಂಭಿಸಿದ್ದು ಇದು ಸಾರ್ವಜನಿಕ ಆರೋಗ್ಯವನ್ನು
ಸುಧಾರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ, ಮಾರಾಟ
ಕೇಂದ್ರಗಳಲ್ಲಿ ತಂಬಾಕು ಉತ್ಪನ್ನಗಳ ಜಾಹೀರಾತು ಪ್ರದರ್ಶನ ಹಾಗೂ ಸಿಗರೇಟ್ ಮತ್ತು ಬಿಡಿಗಳ ಬಿಡಿ ಮಾರಾಟ ಪ್ರಸಕ್ತ ಜಾರಿಯಲ್ಲಿರುವ ತಂಬಾಕು ನಿಯಂತ್ರಣ ಕಾನೂನನ್ನು ಬಲಪಡಿಸಲು ಜನರಿಂದ ವ್ಯಕ್ತವಾಗಿರುವ
ಅಭೂತಪೂರ್ವ ಬೆಂಬಲ ಆಶಾದಾಯಕವಾಗಿದೆ.
ಭಾರತ ಸರ್ಕಾರವು ಈಗಾಗಲೇ ತಂಬಾಕು ನಿಯಂತ್ರಣ ಕಾನೂನು ಕೋಟಾ-2003ಕ್ಕೆ ತಿದುಪಡಿ ತರುವ ಪ್ರಕ್ರಿಯೆಯನ್ನು ಆರಂಭಿಸಿದ್ದು ಇದು ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಮಹತ್ತದ ಹೆಜ್ಜೆಯಾಗಿದೆ. ಸಾರ್ವಜನಿಕ ಸಳಗಳಲ್ಲಿ ಧೂಮಪಾನ ನಿಷೇಧ, ಮಾರಾಟ ಕೇಂದ್ರಗಳಲ್ಲಿ ತಂಬಾಕು ಉತ್ಪನ್ನಗಳ ಜಾಹೀರಾತು ಪ್ರದರ್ಶನ ಹಾಗೂ ಸಿಗರೇಟ್ ಮತ್ತು ಬಿಡಿಗಳ ಬಿಡಿ ಮಾರಾಟ ನಿಷೇಧಕ್ಕೆ ಸಂಬಂಧಿಸಿದ ನಿಬಂಧನೆಗಳನ್ನು ಬಲಪಡಿಸುವುದರ ಜೊತೆಗೆ ಹೆಚ್ಚಿನ ದಂಡವನ್ನೂ ವಿಧಿಸಲು ಸರ್ಕಾರ ‘ಯೋಜಿಸಿದೆ.’ ಎಂದು ಶ್ರೀ ಆಶಿಮ್ ಸನ್ಯಾಲ್, ಮುಖ್ಯ ನಿರ್ವಹಣಾಧಿಕಾರಿ, ಕನ್ಸ್ಯುಮರ್ ವಾಯ್ಟ್ ತಿಳಿಸಿದ್ದಾರೆ.
“ಕನ್ಸ್ಯುಮರ್ ವಾಯ್ಸ್ ನಡೆಸಿರುವ ಸಮೀಕ್ಷೆಯಲ್ಲಿ ಶೇಕಡ 80ಕ್ಕೂ ಹೆಚ್ಚು ಮಂದಿ ತಂಬಾಕು ನಿಯಂತ್ರಣ
ಕಾನೂನುಗಳನ್ನು ಬಲಪಡಿಸುವಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಭಾರಿ ಜನಬೆಂಬಲವನ್ನು ಗಣನೆಗೆ
ತೆಗೆದುಕೊಂಡರೆ, ಧೂಮಪಾನವನ್ನು ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿಸುವುದಿಲ್ಲದೆ ರೆಸ್ಟೋರೆಂಟ್ ಪಬ್
ಹೋಟೆಲ್ ಮತ್ತು ವಿಮಾನ ನಿಲ್ದಾಣಗಳಲ್ಲಿ ಧೂಮಪಾನ ಪ್ರದೇಶವನ್ನು ಸರ್ಕಾರ ಕೂಡಲೇ ನಿಷೇಧಿಸುವ
ಸಮಯ ಬಂದಿದೆ ಎಂದೇ ಅರ್ಥ.
ಅಲ್ಲದೆ, ತಂಬಾಕು ನಿಯಂತ್ರಣ ಕಾಸೂಸುಗಳ ಉಲ್ಲಂಘನೆಗೆ ಹೆಚ್ಚಿನ ದಂಡ ವಿಧಿಸುವುದು ಹಾಗೂ ಸಿಗರೇಟ್ ಮತ್ತು ಬೀಡಿಗಳ ಬಿಡಿ ಮಾರಾಟದ ಮೇಲಿನ ನಿಷೇಧದ
ಕಟ್ಟುನಿಟ್ಟಿನ ಜಾರಿ ಈ ಕ್ಷಣದ ತುರ್ತಾಗಿದೆ” ಎಂದು ಡಾ. ತ್ರಿವೇಣಿ ಸಾರ್ವಜನಿಕ ಆರೋಗ್ಯ ತಜ್ಞೆ ಮತ್ತು
ಪ್ರಾಜೆಕ್ಟ್ ಲೀಡರ್ ಸ್ಮೋಕ್ ಪ್ರೀ ಬೆಂಗಳೂರು ಹೇಳಿದ್ದಾರೆ.
ಜಾಗತಿಕವಾಗಿ ರೋಗ ಮತ್ತು ಅಕಾಲಿಕ ಮರಣಗಳಿಗೆ ತಂಬಾಕು ಬಳಕೆ ಪ್ರಮುಖ ಮತ್ತು ತಡೆಯಬಹುದಾದ
ಕಾರಣವಾಗಿದ್ದು, ಭಾರತದಲ್ಲಿ ತಂಬಾಕು ಸಂಬಂಧಿತ ಕಾಯಿಲೆಗಳಿಂದ ಪ್ರತಿವರ್ಷ 10 ಲಕ್ಷಕ್ಕೂ ಹೆಚ್ಚು ಜನ ಮರಣ
ಹೊಂದುತ್ತಿದ್ದಾರೆ. ಭಾರತದಲ್ಲಿ ಸಾಮಾಜಿಕ, ಆರ್ಥಿಕ, ಲಿಂಗ ಮುಂತಾದ ಎಲ್ಲ ಸ್ತರಗಳನ್ನೂ ಮೀರಿ 26 ಕೋಟಿಗೂ
ಹೆಚ್ಚು ತಂಬಾಕು ಬಳಕೆದಾರರಿದ್ದಾರೆ. 2017-18ರಲ್ಲಿ ಎಲ್ಲ ತಂಬಾಕು ಉತ್ಪನ್ನಗಳ ವಾರ್ಷಿಕ ಆರ್ಥಿಕ ವೆಚ್ಚ ರೂ.
177,341 ಕೋಟಿ ಎಂದು ಅಂದಾಜಿಸಲಾಗಿತ್ತು ಮತ್ತು ಇದು ಭಾರತದ ಜಿಡಿಪಿಯ ಶೇಕಡ ಒಂದರಷ್ಟಿತ್ತು.
ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ನೀಡಿರುವ ಮಾಹಿತಿಯ ಪ್ರಕಾರ, ತಂಬಾಕಿನ ಎಲ್ಲ ರೀತಿಯ ಬಳಕೆಗೂ, ಅದು ಧೂಮಪಾನವಾಗಲಿ ಅಥವ ಜಗಿಯುವುದಾಗಲಿ, ಕೋವಿಡ್ ಸಂಬಂಧಿ ಸಾವು-ನೋವುಗಳಿಗೂ ಗಮನಾರ್ಹ ನಂಟಿದೆ.
ವಾಲೆಂಟರಿ ಆರ್ಗನೈಸೇಷನ್ ಇನ್ ಇಂಟ್ರೆಸ್ಟ್ ಆಫ್ ಕನ್ಸ್ಹುಮರ್ ಎಜುಕೇಶನ್ (voluntary organisation in interest of consumer education )-(voice) ನವದೆಹಲಿ ಮೂಲದ ಸರ್ಕಾರೇತರ ಸಂಸ್ಥೆಯಾಗಿದ್ದು,
ಭಾರತದಾದ್ಯಂತ ತಂಬಾಕು ನಿಯಂತ್ರಣ ಸೇರಿದಂತೆ ವಿವಿಧ ಸಾಮಾಜಿಕ ಮತ್ತು ಆರೋಗ್ಯ ವಿಷಯಗಳ ಕುರಿತು
ಕಾರ್ಯನಿರ್ವಹಿಸುತ್ತಿದೆ.
ಇದೊಂದು ರಾಷ್ಟ್ರೀಯ ಮಟ್ಟದ ಗ್ರಾಹಕ ಸಂಘಟನೆಯಾಗಿದ್ದು, 1983ರಿಂದ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ನೀತಿ ರಚನೆ ಮತ್ತು ನಿಯಂತ್ರಕ ಸಂಸ್ಥೆಗಳಲ್ಲಿ ಗ್ರಾಹಕರ ಹಿತಾಸಕ್ತಿಗಳನ್ನು ಪ್ರತಿನಿಧಿಸುತ್ತೇವೆ ಎಂದಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಶಿವಮೊಗ್ಗಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ
ಸುದ್ದಿದಿನ, ಶಿವಮೊಗ್ಗ : ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡಲಿದ್ದಾರೆ.
ಯುವಜನರು, ಮಹಿಳೆಯರು, ರೈತರು ಸೇರಿ ಸುಮಾರು ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಬಾಂಡ್ ಕುರಿತ ದತ್ತಾಂಶ ಬಿಡುಗಡೆ
ಸುದ್ದಿದಿನ,ನವದೆಹಲಿ : ಚುನಾವಣಾ ಬಾಂಡ್ ಕುರಿತಂತೆ ಸುಪ್ರೀಂಕೋರ್ಟ್ನ ರಿಜಿಸ್ಟ್ರಿ ಇಂದ ಲಭ್ಯವಾದ ಅಂಕಿಕೃತ ದತ್ತಾಂಶ ಮಾದರಿಯನ್ನು ಚುನಾವಣಾ ಆಯೋಗ ಭಾನುವಾರ ತನ್ನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದೆ. www.eci.gov.in/candidate-politicalparty ವೆಬ್ಸೈಟ್ನಲ್ಲಿ ಈ ದತ್ತಾಂಶ ಲಭ್ಯವಿರುತ್ತದೆ.
ಸುಪ್ರೀಂಕೋರ್ಟ್ ನಿರ್ದೇಶಿಸಿದಂತೆ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ ಕುರಿತ ದತ್ತಾಂಶಗಳನ್ನು ಮೊಹರು ಹಾಕಿದ ಲಕೋಟೆಯಲ್ಲಿ ಸಲ್ಲಿಸಿದ್ದವು ಎಂದು ಚುನಾವಣಾ ಆಯೋಗದ ಹೇಳಿಕೆ ತಿಳಿಸಿದೆ. ರಾಜಕೀಯ ಪಕ್ಷಗಳಿಂದ ಸ್ವೀಕರಿಸಿದ ಮೊಹರು ಹಾಕಿದ ಲಕೋಟೆಗಳನ್ನು ತೆರೆಯದೇ ಸುಪ್ರೀಂಕೋರ್ಟ್ಗೆ ಸಲ್ಲಿಸಲಾಗಿತ್ತು.
ಇದೇ 15ರಂದು ಸುಪ್ರೀಂಕೋರ್ಟ್ ನೀಡಿದ ಆದೇಶದ ಮೇರೆಗೆ ಸುಪ್ರೀಂಕೋರ್ಟ್ನ ರಿಜಿಸ್ಟ್ರಿ, ಭೌತಿಕ ಪ್ರತಿ ಹಾಗೂ ಅದರ ಡಿಜಿಟಲ್ ದಾಖಲೆಯಿರುವ ಪೆನ್ಡ್ರೈವ್ ಒಳಗೊಂಡ ಮೊಹರು ಹಾಕಿದ ಲಕೋಟೆಯನ್ನು ಹಿಂತಿರುಗಿಸಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ರಶ್ಮಿ ಚಂದ್ರಗಿರಿ ಅವರಿಗೆ ಪಿಎಚ್.ಡಿ ಪದವಿ
ಸುದ್ದಿದಿನ,ಹಾವೇರಿ : ನಗರದ ರಶ್ಮಿ ಚಂದ್ರಗಿರಿ ಅವರು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮಂಡಿಸಿದ “ದಲಿತ ಬಂಡಾಯ ಕಾದಂಬರಿಗಳಲ್ಲಿ ಸಾಂಸ್ಕೃತಿಕ ನೆಲೆಗಳು” ಎಂಬ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ಪ್ರಧಾನ ಮಾಡಿದೆ.
ಇವರಿಗೆ ಡಾ.ಬಿಎಸ್.ಭಜಂತ್ರಿ , ಸಹಾಯಕ ಪ್ರಧ್ಯಾಪಕರು ಕರ್ನಾಟಕ ಕಲಾ ಮಹಾವಿದ್ಯಾಲಯ ಧಾರವಾಡ ಇವರು ಮಾರ್ಗದರ್ಶನ ಮಾಡಿದ್ದರು.
ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ರಶ್ಮಿ ಚಂದ್ರಗಿರಿಯವರ ಹಲವು ಲೇಖನಗಳು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಪ್ರಸ್ತುತ ಇವರು ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿತ್ತಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243