ಲೈಫ್ ಸ್ಟೈಲ್
ಸುಕ್ಕು ನಿವಾರಕ ವಿಟಮಿನ್ ಫೇಷಿಯಲ್
ಮಧ್ಯ ವಯಸ್ಸು ಸಮೀಪಿಸುವಂತೆಲ್ಲಾ ಮಹಿಳೆಯರಲ್ಲಿ ಅನೇಕ ಬದಲಾವಣೆ ತಲೆದೋರುತ್ತವೆ. ಮುಖ್ಯವಾಗಿ ಚರ್ಮದ ಮೇಲೆ ವಯಸ್ಸಿನ ಪ್ರಭಾವ ಅಧಿಕವಾಗಿರುತ್ತದೆ. ಮುಖದ ಮೇಲೆ, ಕಣ್ಣುಗಳ ಕೆಳಭಾಗದಲಲಿ ಸುಕ್ಕುಗಳು ಪ್ರಾರಂಭವಾಗಿ ಮಾನಸಿಕ ಹಿಂಸೆಯನ್ನು, ದೈಹಿಕ ವಿರೂಪವನ್ನು ಹುಟ್ಟಿ ಹಾಕುತ್ತದೆ.
ಒಣಚರ್ಮ ಇರುವವರಿಗೆ ಈ ಕೆಲವು ಸಮಸ್ಯೆಗಳು ಅಧಿಕವೇ! ಒಂದು ಸಾರಿ ಸುಕ್ಕು ಬಂತೆಂದರೆ ಅದನ್ನು ನಿವಾರಿಸುವುದು ಕಷ್ಟವೆಂತಲೇ ಹೇಳಬೇಕು. ಕೆಲವು ವಿಧಗಳ ಕ್ರೀಂಗಳ ಸರ್ಜರಿ ಮೂಲಕ ಇದಕ್ಕೆ ಶಾಶ್ವತ ಉಪಶಮನ ದೊರೆಯುತ್ತದೆ ಎನ್ನುತ್ತಾರೆ ನಿಪುಣ ಬ್ಯೂಟಿಷಿಯನ್ಸ್. ಆದರೆ 30 ವರ್ಷ ವಯಸ್ಸಿನಿಂದಲೇ ಕ್ರಮತಪ್ಪದಂತೆ ವಿಟಮಿನ್ ಫೇಷಿಯಲ್ ಮಾಡಿಸಿಕೊಂಡರೆ ಚರ್ಮದ ಸುಕ್ಕುಗಳನ್ನು ಬಹಳಷ್ಟು ಮಟ್ಟಿಗೆ ನಿವಾರಿಸುವುದು ಸಾಧ್ಯ.
ಸಾಮಾನ್ಯವಾಗಿ ನಾವು ವಿಟಮಿನ್ಗಳನ್ನು ಆರೋಗ್ಯಕ್ಕಾಗಿ ತೆಗೆದುಕೊಳ್ಳುತ್ತೇವೆ. ಚರ್ಮ ಸೌಂದರ್ಯಕ್ಕಾಗಿ ಇವುಗಳನ್ನು ಉಪಯೋಗಿಸಿದಾಗ ಉತ್ತಮ ಫಲಿತಾಂಶ ಕಂಡುಬರುತ್ತದೆ.
ಆಹಾರದಲ್ಲಿ ವಿಟಮಿನ್ಗಳು, ಖನಿಜಗಳು (ಐರನ್, ಜಿಂಕ್ ಇತ್ಯಾದಿ) ಇರುವಂತಹುದನ್ನು ಸೇವಿಸುವುದು, ನೀರನ್ನು ಹೆಚ್ಚಾಗಿ ಕುಡಿಯುವುದು, ಪೇಷಿಯಲ್ಸ್ಲ್ಲಿ ವಿಟಮಿನ್ಗಳನ್ನು ಮಸಾಜ್ ಮಾಡುವುದು ಕೆಲವು ಪದ್ಧತಿಗಳು. ವಿಟಮಿನ್ಗಳಲ್ಲಿ, ವಿಟಮಿನ್ ಎ,ಸಿ,ಇ ಈ ಮೂರನ್ನು ಉಪಯೋಗಿಸಿದರೆ ಒಣಚಮರ್,ಕ್ಕೆ ರಕ್ಷಣೆ ದೊರೆಯುವುದಲ್ಲದೆ, ಸುಕ್ಕು ಸಹ ನಿವಾರಣೆಯಾಗುತ್ತದೆ.
ವಿಟಮಿನ್ ಎ
ಚರ್ಮ ಸೌಂದರ್ಯಕ್ಕೆ ಅದರಲ್ಲೂ ಮುಖ್ಯವಾಘಿ ಒಣಚರ್ಮಕ್ಕೆ ಇದು ಅದ್ಭುತವಾಗಿ ಕೆಲಸ ಮಾಡುತ್ತದೆ ವಿಟಮಿನ್ ಎ. ಕಾಡ್ಲಿವರ್ ಆಯಿಲ್ ,ಕ್ಯಾರೆಟ್, ಹಸಿರುಸೊಪ್ಪು, ಪುದೀನಾ ಸೊಪ್ಪು, ಹಾಲು ಮುಂತಾದವುಗಳಲ್ಲಿ ವಿಟಮಿನ್ ಎ ಹೇರಳವಾಗಿ ಲಭಿಸುತ್ತದೆ.ಇದು ಹೆಚ್ಚಾಗಲಿ, ಕಡಿಮೆಯಾಗಲಿ ಚರ್ಮವು ಒಣಗುವುದಷ್ಟೇ ಅಲ್ಲ, ಮೊಡವೆಗಳು ಹೆಚ್ಚಾಗಿ ಕಾಣಿಸಿಕೊಳ್ಳಬಹುದು. ಮೊಟ್ಟಮೊದಲಗಿ ನಮ್ಮ ದೇಹದಲಿ ವಿಟಮಿನ್ ಎ ಕೊರತೆ ಇದೆಯಾ? ಎಂಬುದನ್ನು ದೃಢೀಕರಿಸಿಕೊಳ್ಳ ಬೇಕು. ಒಂದು ವೇಳೆ ಹೆಚ್ಚಾಗಿದ್ದರೆ ಡಾಕ್ಟರನ್ನು ಸಂಪರ್ಕಿಸಬೇಕು. ಕೊರತೆ ಇದ್ರೆ ನಮ್ಮ ಆಹಾರ ಪದಾರ್ಥಗಳಲ್ಲಿ ವಿಟಮಿನ್ ಎ ಇರುವ ಆಹಾರವನ್ನು ಸೇವಿಸಬೇಕು. ಹಾಗೇ ಫೇಷಿಯಲ್ ಮಸಾಜ್ನಲ್ಲೂ ಬೆರೆಸುವುದು ಸೂಕ್ತ.
ವಿಟಮಿನ್ ಸಿ
ಜಿಡ್ಡು ಚರ್ಮವಿರುವವರಿಗೆ ವಿಟಮಿನ್ ಸಿ ಉಪಯೋಗಕ್ಕೆ ಬರುತ್ತದೆ. ಮೊಡವೆಗಳು, ಗಡ್ಡೆಗಳು ಇರುವವರಿಗೆ ಜಿಡ್ಡು ಇರದ ಕ್ರೀಂಗಳನ್ನು ಅದರ ಜೊತೆಗೆ ಸಿ ವಿಟಮಿನ್ ಬೆರೆಸಿ ಬಳಸಬೇಕು.
ನಲ್ಲಿಕಾಯಿ, ಆರೆಂಜ್, ನಿಂಬೆ, ಪೇರಲಹಣ್ಣೂ, ಚಕ್ಕೋತ, ಮೋಸಂಬಿ, ನೇರಳೆ ಹಣ್ಣುಗಳಲ್ಲಿ ವಿಟಮಿನ್ ಸಿ ಯಥೇಚ್ಛವಾಗಿ ಇರುತ್ತದೆ. ನಮ್ಮ ನಿತ್ತ ಆಹಾರದಲ್ಲಿ ಇವುಗಳಲ್ಲಿ ಒಂದೆರಡನ್ನಧರೂ ಸೇವಿಸಿದರೆ ವಿಟಮಿನ್ ಸಿ ಕೊರತೆಯನ್ನು ನೀಗ ಬಹುದು. ಮುಖ ಹಾಗೂ ದೇಹದ ಚರ್ಮವು ಕಾಂತಿಯುತವಾಗಿ ಹೊಳೆಯುತ್ತದೆ.ಅಷ್ಟೇ ಅಲ್ಲ ವಿಟಮಿನ್ ಸ ನಿಂದ ಮುಖ ಮತ್ತು ದೇಹದ ಮಸಾಜ್ ಮಾಡಿದರೆ ಫಲಿತಾಂಶ ಇನ್ನೂ ಅದ್ಭುತವಾಗಿರುತ್ತದೆ.
ವಿಟಮಿನ್ ಇ
ದೇಹದಲ್ಲಿನ ಸುಕ್ಕುಗಳ ನಿವಾರಣೆಗೆ ಇ ವಿಟಮಿನ್ ಉತ್ತಮಸಹಕಾರ ನೀಡುತ್ತದೆ. ಇದರಲ್ಲಿ ನಿಯಾಸಿನ್ ಇರುವುದರಿಂದ ಇದು ಚರ್ಮವನ್ನು ಸುರಕ್ಷಿತ ಹಾಗೂ ಸುಂದರವಾಗಿರಿಸುತ್ತದೆ. ಹಣ್ಣುಗಳು (ಎಲ್ಲಾ ವಿಧವಾದ) ಸೊಪ್ಪುಗಳು, ತರಕಾರಿಗಳಲ್ಲಿ ವಿಟಮಿನ್ ಇ ಲಭ್ಯವಿದೆ. ಗೋಧಿ, ಅಕ್ಕಿ, ರಾಗಿ ಕಡ್ಲೆಕಾಯಿ, ಹಾಲು, ಮೊಸರು, ಮೊಟ್ಟೆ, ಹುರಳಿ, ಕಡ್ಲೆ, ಗೋಧಿ, ಮೊಳಕೆಗಳಲ್ಲಿ ಇದು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ.
ವಿಟಮಿನ್ ಫೇಷಿಯಲ್
ಮುಖ ಹಾಗೂ ದೇಹದ ಚರ್ಮದ ಗುಣ, ಸ್ಥಿತಿಗತಿಗಳ ಆಧಾರದ ಮೇಲೆ ಫೇಷಿಯಲ್ ಮಸಾಜ್ನಲ್ಲಿ ವಿಟಮಿನ್ ಎ, ಸಿ, ಇ ಗಳನ್ನು ಉಪಯೋಗಿಸಬೇಕು. ಯಾವ ರೀತಿಯ ಚರ್ಮ ತತ್ವವಿರುವರಾದರೂ ದಿನಕ್ಕೆ ನಾಲ್ಕು ಲೀಟರ್ ನೀರನ್ನು ತಪ್ಪದೇ ಸೇವಿಸಬೇಕು. ಸುಂದರ ಚರ್ಮ ಕಾಂತಿಯನ್ನು ಪಡೆಯುವುದರಲ್ಲಿ ಇದು ಬಹಳ ಮುಖ್ಯವಾದದ್ದು. ಇದರಿಂದ ಒಣಚರ್ಮ ಒಂದರೆ ಹೋಗುತ್ತದೆ. ಮೊಡವೆಗಳೂ ನಿವಾರಣೆಯಾಗುತ್ತದೆ. ಸುಕ್ಕುಗಳ ನಿವಾರಣೆಯೂ ಸಾಧ್ಯ.

ದಿನದ ಸುದ್ದಿ
ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಅಗತ್ಯ : ಪ್ರಾಚಾರ್ಯ ಎಂ.ನಾಸಿರುದ್ದೀನ್

ಸುದ್ದಿದಿನ,ಚಿತ್ರದುರ್ಗ: ಜಗತ್ತಿನಲ್ಲಿ ಭೂಮಿಯ ಮೇಲೆ ಸಕಲ ಜೀವರಾಶಿಗಳು ಬದುಕಲು ಅವಕಾಶವಿದ್ದು ಪರಿಸರ ಸಂರಕ್ಷಣೆ ಮಾಡುವುದರ ಮೂಲಕ ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.
ನಗರದ ಡಯಟ್ ಆವರಣದಲ್ಲಿರುವ 50 ಕ್ಕೂ ಹೆಚ್ಚು ಮರಗಳಲ್ಲಿ ಪಕ್ಷಿಗಳಿಗೆ ಆಹಾರ, ನೀರು ಪೂರೈಕೆ ವ್ಯವಸ್ಥೆ ಮಾಡಿ ಮಾತನಾಡಿದ ಅವರು ಪ್ರಸ್ತುತ ಸಂದರ್ಭದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು ಪಕ್ಷಿಗಳಿಗೆ ನೀರು ಮತ್ತು ಆಹಾರವನ್ನು ಪೂರೈಕೆ ಮಾಡುವ ಮೂಲಕ ಪಕ್ಷಿಗಳ ಬಗ್ಗೆ ಕಾಳಜಿಯೊಂದಿಗೆ ಸಂರಕ್ಷಿಸುವ ಭಾವನೆ ಬೆಳೆಸಿಕೊಳ್ಳಬೇಕು ಎಂದರು. ನಮ್ಮ ಮನೆಗಳ ಮೇಲ್ಚಾವಣಿಯಲ್ಲಿ ನೀರು, ಆಹಾರ ವ್ಯವಸ್ಥೆ ಮಾಡುವುದರಿಂದ ಪಕ್ಷಿಗಳನ್ನು ಸಂರಕ್ಷಿಸಲು ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಆರ್.ನಾಗರಾಜು ಕಚೇರಿ ಸಿಬ್ಬಂದಿ ವರ್ಗದವರು ಇದ್ದರು.
ಫೋಟೋ: ನಗರದ ಡಯಟ್ ಆವರಣದಲ್ಲಿರುವ 50 ಕ್ಕೂ ಹೆಚ್ಚು ಮರಗಳಲ್ಲಿ ಪ್ರಾಚಾರ್ಯ ಎಂ.ನಾಸಿರುದ್ದೀನ್ ಪಕ್ಷಿಗಳಿಗೆ ಆಹಾರ, ನೀರು ಪೂರೈಕೆ ವ್ಯವಸ್ಥೆ ಮಾಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕವಿತೆ | ಮತ್ತಿನ ಕುಣಿಕೆ

- ಗುರು ಸುಳ್ಯ
ನಿದೆರೆಗೆ ದೂಡದ ಮದಿರೆಯ
ಅನುಭವ
ಸದಾ ಸಂಕಟಗಳ ಹೆರುವ
ಮತ್ತಿನ ಕುಣಿಕೆ
ನನ್ನ ಮಡಿಲ ಮೇಲೆ ನನ್ನದೇ
ಒಡಲು ಮಲಗಿರಲು
ಮಲಗಲು ಹಂಬಲಿಸುವ
ಮಗುವಿನ ಮನದೊಳಗೆ
ಚಾದರವಿಲ್ಲದೆ ಅಳುವ ರಸ್ತೆಯ
ಬದಿಗಳು ಚಲಿಸುತ್ತಿದೆ
ಅಪ್ಪನ ಕೈ ಹಿಡಿದು
ಅಮ್ಮನ ಕೆನ್ನೆಯ ಮೇಲೆ
ನಡೆದ ನೆನಪುಗಳು
ಆದ ಅಪಘಾತಗಳ ಆಳ
ಅಳೆಯುತ್ತಿವೆ…
ಶತ ಪ್ರಯತ್ನ ಪಟ್ಟರೂ
ತಪ್ಪದ ದಾರಿಗೆ
ಡಾಂಬರು ಹಾಕಿಸಿದವರ
ರಾಜಕೀಯವನ್ನು ಎದುರಿಸುತ್ತಲೇ
ಹಡೆಯಬೇಕಿದೆ ಮುಂದಿನ ದಾರಿಯ
ತಿರುವುಗಳಲ್ಲಿ ಕೈ ಹಿಡಿದು
ಮೆಲ್ಲನೆ ಕರೆದೊಯ್ಯುವ
ಕವಿತೆಗಳನ್ನು
ಎಲ್ಲೆಂದರಲ್ಲಿ ಬಿಟ್ಟು ಬಿಡಲು
ಸಾಧ್ಯವಾಗುತ್ತಿಲ್ಲ
ಉಸಿರ ನಾದದಲ್ಲಿ
ತೇಯ್ದ ಗಂಧ,
ಆಟ ನಿಲ್ಲಲು ಬಿಡದೆ
ಗಮಗಮಿಸುತ್ತಿದೆ..
ಪ್ರವಾಹದಲ್ಲಿ ಕೊಚ್ಚಿಹೋಗುವ
ಮುನ್ಸೂಚನೆಯಿಲ್ಲದೇ
ಮೊದಲ ಮಳೆಯಲ್ಲಿ ನೆನೆದು
ಚಪ್ಪಲಿಗೆ ಅಂಟಿದ ಮಣ್ಣಿನ ಘಮದಂತೆ.
(ಕವಿತೆ – ಗುರು ಸುಳ್ಯ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮೊಬೈಲ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ

ಸುದ್ದಿದಿನಡೆಸ್ಕ್:ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ ಸಹಯೋಗದಲ್ಲಿ ನಡೆಸುತ್ತಿರುವ ರಡ್ಸೆಟ್ ಸಂಸ್ಥೆ ವತಿಯಿಂದ ಮೊಬೈಲ್ ರಿಪೇರಿ ಮತ್ತು ಸೇವೆ ಕುರಿತ 30 ದಿನಗಳ ಉಚಿತ ತರಬೇತಿ ಆಯೋಜಿಸಲಾಗಿದೆ, ಅರ್ಜಿ ಸಲ್ಲಿಸಲು ಮಾರ್ಚ್ 28 ಕೊನೆಯ ದಿನವಾಗಿದೆ.
ತರಬೇತಿ ಏಪ್ರಿಲ್ 17 ರಿಂದ ಪ್ರಾರಂಭವಾಗಲಿದ್ದು, ಆಸಕ್ತ ಯುವಕ-ಯುವತಿಯರು ಅರ್ಜಿ ಸಲ್ಲಿಸಬಹುದಾಗಿದೆ. 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಬಿಪಿಎಲ್ ಕಾರ್ಡ್ ಅಥವಾ ಜಾಬ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಕಡ್ಡಾಯವಾಗಿ ಹೊಂದಿರುವ ಗ್ರಾಮೀಣ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.
ತರಬೇತಿ ವಸತಿಯುತವಾಗಿದ್ದು, ಉಚಿತ ಊಟ, ವಸತಿ ನೀಡಲಾಗುವುದು. ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ರುಡ್ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೊಬೈಲ್ ಸಂಖ್ಯೆ: 9740982585 ಗೆ ಸಂಪರ್ಕಿಸಬಹುದು ಎಂದು ರುಡ್ಸೆಟ್ ಸಂಸ್ಥೆಯ ನಿರ್ದೇಶಕರಾದ ರವಿಕುಮಾರ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days ago
ಕ್ಯೂ-ಸ್ಪೈಡರ್ಸ್ ವತಿಯಿಂದ ಉಚಿತ ಉದ್ಯೋಗದರಿತ ಕೌಶಲ್ಯ ತರಬೇತಿ ಆಯ್ಕೆ ಪ್ರಕ್ರಿಯೆ
-
ದಿನದ ಸುದ್ದಿ7 days ago
ಪ್ರತ್ಯೇಕ ದಾವಣಗೆರೆ-ಚಿತ್ರದುರ್ಗ ಮೆಗಾ ಡೈರಿ ಆರಂಭಿಸಿ : ಶಾಸಕ ಕೆ.ಎಸ್.ಬಸವಂತಪ್ಪ ಒತ್ತಾಯ
-
ದಿನದ ಸುದ್ದಿ6 days ago
ಅಮಾನವೀಯ ಕೃತ್ಯ | ಹೆಣ್ಣು ಮಗು ಮಾರಾಟ ಮಾಡಿದ ಪೋಷಕರು
-
ಅಂಕಣ6 days ago
ಸಿದ್ಧಾಂತ ಮತ್ತು ಪತ್ರಿಕೋದ್ಯಮ
-
ದಿನದ ಸುದ್ದಿ6 days ago
ದಾವಣಗೆರೆ | ನಾಳೆಯಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ ಆರಂಭ, 81 ಕೇಂದ್ರಗಳಲ್ಲಿ 22579 ವಿದ್ಯಾರ್ಥಿಗಳು
-
ದಿನದ ಸುದ್ದಿ6 days ago
ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಅಗತ್ಯ : ಪ್ರಾಚಾರ್ಯ ಎಂ.ನಾಸಿರುದ್ದೀನ್
-
ಅಂಕಣ3 days ago
ಕವಿತೆ | ಅಲರ್ಟ್..!
-
ದಿನದ ಸುದ್ದಿ1 day ago
ಜಯಲಕ್ಷ್ಮಿ ಕಾರಂತ್ ಅವರಿಗೆ ‘ಯಕ್ಷ ಧ್ರುವ’ ರಾಜ್ಯ ಪ್ರಶಸ್ತಿ ಪ್ರದಾನ