Connect with us

ದಿನದ ಸುದ್ದಿ

ಸಾಮಾಜಿಕ ಜಾಲತಾಣದಲ್ಲಿ ಬೆತ್ತಲಾದ ಖಾವಿದಾರಿ ‘ಕಾಳಿ ಸ್ವಾಮಿ’

Published

on

ರಿಷಿ ಕುಮಾರ ಸ್ವಾಮಿ (ಕಾಳಿ ಸ್ವಾಮಿ)

ಹೌದು ಅರಸೀಕೆರೆಯಲ್ಲಿ ಡ್ಯಾನ್ಸ್ ಮಾಸ್ಟರ್ ಆಗಿದ್ದ ಒಬ್ಬ ವ್ಯಕ್ತಿ ಈಗ ಸ್ವಾಮೀಜಿ ಅಂದಿನಿಂದ ಇಂದಿನವರೆಗೆ ಅವನ ಜೀವನ ಪಯಣ ಅಬ್ಬಬ್ಬಾ .. ಅಂದಿಗು ಮತ್ತು ಇಂದಿಗೂ ನಡುವೆ ಇದ್ಯಲ್ಲ ಅದು ಅದ್ಭುತ ಪ್ರತಿಯೊಂದರಲ್ಲೂ ತನ್ನ ಬೇಳೆ ಬೇಯಿಸಿಕೊಳ್ಳಲು ಹೋಗಿ ಕೈ ಸುಟ್ಟುಕೊಳ್ಳುವ ಖತರ್ನಾಕ್ ಕಳ್ಳ ಸ್ವಾಮೀಜಿ. ಕಾಳಿ ಕಾಳಿ ಅಂದುಕೊಂಡು ಜನರನ್ನ ಬೋಳಿ ಮಾಡುವ ಐನಾತಿ.

ಜಾತಿಯಲ್ಲಿ ಸುಳ್ಳು ಹೇಳಿದ್ದ ಮಹಾನುಭಾವ ತನ್ನ ತಂದೆ ತಾಯಿಯ ಐಡೆಂಟಿಟಿಯನ್ನೇ ಬದಲಿಸಿದ್ದವ , ನಿಂತ್ಯಾನಂದನ ಕರ್ಮಕಾಂಡ ಬಯಲು ಮಾಡುತ್ತಿನಂತ ಹೇಳಿ ಅವನ ಬಳಿ 10 ಕೋಟಿ ರೂಪಾಯಿ ಒಂದು ಫಾರ್ಚೂನರ್ ಕಾರ್ ನ ಬೇಡಿಕೆ ಇಟ್ಟಿದ್ದ , ಇದರಲ್ಲಿ ಸಿಕ್ಕಿ ಹಾಕಿಕೊಂಡ ಮಹಾನುಭಾವ ಮಾಧ್ಯಮವೊಂದರಲ್ಲಿ ತನ್ನ ಪೇಟವನ್ನ ತೆಗೆದಿಟ್ಟು ಕ್ಷಮಾಪಣೆ ಪತ್ರ ಬೇರೆ ಬರೆದು ಕೊಟ್ಟಿದ್ದನ್ನ ಜನ ಇನ್ನೂ ಮರೆತಿಲ್ಲ ಈಗ ಗೊತ್ತಾಗಿರಬೇಕು ಅವನು ಯಾರು ಅಂತ ಅವನೇ ರೀ ಶ್ರಿ ರಿಷಿಕುಮಾರ.(ಸ್ವಾಮೀಜಿ ಅನ್ನಲು ಮನಸೊಪ್ಪದು)

ಈತ ಸಾಮಾಜಿಕವಾಗಿ ಜನರಿಗೆ ಏನು ಉಪಯೋಗ ಮಾಡಿದ್ದಾನೋ ಅದು ಭಗವಂತನಿಗೆ ಗೊತ್ತು ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹೆಂಡ ಕುಡಿದ ಕೋತಿ ತರ ಆಡುತ್ತಿದ್ದಾನೆ , ಅಡಲಿ ಬೇಡ ಅನ್ನಲ್ಲ ಅದು ಅವನ ಅಭಿವ್ಯಕ್ತಿ ಸ್ವಾತಂತ್ರ್ಯ ಅಂದುಕೊಂಡರೂ ಖಾವಿ ತೊಟ್ಟು ತನ್ನನ್ನ ತಾನು ಸ್ವಾಮೀಜಿ ಅಂತ ಕರೆಸಿಕೊಳ್ಳುವವರು ಮಾಡುವಂತ ಕೆಲಸವಂತೂ ಅಲ್ಲವೇ ಅಲ್ಲ.

ಒಂದು ಬಾಯಿಗೆ ಬಟ್ಟೆ ಕಟ್ಟಿಕೊಳ್ಳಬೇಕು ಇಲ್ಲವೇ ತೊಟ್ಟಿರುವ ಖಾವಿ ಬಟ್ಟೆ ಬಿಚ್ಚಬೇಕು ಯಾಕಂದ್ರೆ ನಮ್ಮ ದೇಶದಲ್ಲಿ ಇಂದಿಗೂ ಜನ ನಂಬಿಕೆ ಇಟ್ಟಿರುವುದು ಖಾವಿ ಮೇಲೆ , ಖಾವಿ ತೊಟ್ಟವರು ಸಮಾಜಕ್ಕೆ ಶಾಂತಿ ಮಂತ್ರ ಹೇಳಿಕೊಡಬೇಕು, ಸಮಾಜದಲ್ಲಿ ಸಾಮರಸ್ಯ ಬೆಳೆಯುವಂತಹ ಕೆಲಸಗಳನ್ನ ಮಾಡಬೇಕು ಆದರೆ ಈತ ಬಾಯಿ ತೆರೆದರೆ ಕೋಮು ಸೃಷ್ಟಿಸುವಂತಹ ಅನ್ಯಧರ್ಮದ ಬಗ್ಗೆ ಕೇವಲವಾಗಿ ಮಾತನಾಡೋದು, ಹೆಣ್ಣು ಮಕ್ಕಳ ಬಗ್ಗೆ ಅಸಹ್ಯ ಹುಟ್ಟಿಸುವಂತಹ ಮಾತುಗಳು ಅಲ್ಲದೆ ಅದನ್ನ ಪ್ರಶ್ನೆ ಮಾಡೋರಿಗೆ ಬೋಳಿ ಮಗನೆ, ಶಾಟ ಎಂಬಿತ್ಯಾದಿ ಸೆನ್ಸಾರ್ ಪದ ಬಳಕೆ ಮಾಡುತ್ತಾ ಖಾವಿ ಬಟ್ಟೆಗೆ ಇರುವ ಗೌರವವನ್ನು ಹಾಳು ಮಾಡುತ್ತಿದ್ದಾನೆ.

ಇಂತವರಿಗೆ ಖಾವಿ ಒಂದು ರಕ್ಷಾ ಕವಚ ಅಷ್ಟೇ , ಧರ್ಮವನ್ನ ರಕ್ಷಿಸುತ್ತಿನಿ ಅಂತ ಹೇಳುವ ಇವರುಗಳು ಇಂತಹ ಕೃತ್ಯಗಳಿಂದ ಧರ್ಮವನ್ನ ಹಾಳು ಮಾಡುತ್ತಿದ್ದಾರೆ ವಿನಃ ಇವರುಗಳಿಂದ ಧರ್ಮಕ್ಕೆ ಒಂದಿಷ್ಟು ಉಪಯೋಗ ಇಲ್ಲ , ಧರ್ಮದ ಹೆಸರಿನಲ್ಲಿ ಇವರನ್ನ ಇವರು ರಕ್ಷಿಸಿಕೊಳ್ಳುತ್ತಿದ್ದಾರೆ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ.

ಇಂತಹವರು ಸಮಾಜಕ್ಕೆ ಕಂಟಕ ಮತ್ತು ಇದೆ ರೀತಿ ಮುಂದುವರಿದಲ್ಲಿ ಖಾವಿ ತೊಟ್ಟ ನಿಜವಾದ ಸ್ವಾಮೀಜಿಗಳಿಗೆ ಕೂಡ ಮರ್ಯಾದೆ ಗೌರವ ಸಿಗದ ರೀತಿ ಆಗುವುದರಲ್ಲಿ ಸಂಶಯವೇ ಇಲ್ಲ ಈ ಹಿಂದೆ ಒಮ್ಮೆ ಒಂದಷ್ಟು ಜನ ಮಹಿಳೆಯರು ಸೇರಿ ಈತನನ್ನು ಥಳಿಸಿದ್ದು ಕೂಡ ಯಾರು ಮರೆತಿಲ್ಲ ಆದರೆ ಪಾಪ ಆತ ಮರೆತಿರಬೇಕು.

ಇಂತಹವರಿಂದ ಧರ್ಮಕ್ಕೆ ಸಮಾಜಕ್ಕೆ ನಾಲ್ಕು ಪೈಸದ ಪ್ರಯೋಜನ ಇಲ್ಲ ಜನ ಇಂತವರನ್ನು ನಂಬಿ ಮೋಸ ಹೋಗುವುದು ಬೇಡ ಮತ್ತು ಖಾವಿಗೆ ಅದರದ್ದೇ ಆದ ಮಹತ್ವ ಇದೆ ಅದು ಇಂತಹವರಿಂದ ಹಾಳಾಗುವುದು ಬೇಡ ಎಂಬ ಸಣ್ಣ ಕಳಕಳಿ ಅಷ್ಟೇ … ಆತನ ಸಾಮಾಜಿಕ ಜಾಲತಾಣದ ಪೋಸ್ಟ್ಗಳು ಕಾಮೆಂಟ್ಗಳು ನೋಡಿದರೆ ಈತ ಸ್ವಾಮೀಜಿ ನ ಅಂತ ಎಲ್ಲರೂ ಒಂದು ಸಲ ತಮ್ಮನ್ನ ತಾವು ಪ್ರಶ್ನಿಸಿಕೊಳ್ಳದೆ ಇರಲಾರರು !!

ನಿಜವಾದ ಹಿಂದೂಗಳು , ಧರ್ಮ ಮತ್ತು ಖಾವಿ ಮೇಲೆ ನಂಬಿಕೆ ಗೌರವ ಇರುವವರು ಖಂಡಿತವಾಗಿಯೂ ಆತನ ಉದ್ದಟತನವನ್ನ ಖಂಡಿಸಿದೆ ಇರಲಾರರು. ಒಟ್ಟಾರೆ ಖಾವಿಯಿಂದ ಸಮಾಜದಲ್ಲಿ ತನ್ನನ್ನು ತಾನು ಮುಚ್ಚಿಟ್ಟುಕೊಂಡಿದ್ದ ಶ್ರಿ ರಿಷಿಕುಮಾರ ಸಾಮಾಜಿಕ ಜಾಲತಾಣದಲ್ಲಿ ಬೆತ್ತಲಾದ !!!

ಬಿಂದು ಗೌಡ ಕೆಪಿಸಿಸಿ
ಸಾಮಾಜಿಕ ಜಾಲತಾಣ ರಾಜ್ಯ ಕಾರ್ಯದರ್ಶಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ ನಡೆದ ಕೊಲೆಗಳೆಷ್ಟು ? ಅತ್ಯಾಚಾರಗಳೆಷ್ಟು ಗೊತ್ತಾ?

Published

on

ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಹಾದಿ ಬೀದಿಯಲ್ಲಿ ಹತ್ಯೆಗಳು ಆಗುತ್ತಿವೆ. ಬೆಂಗಳೂರು ನಗರದಲ್ಲಿ ಮಾದಕ ವಸ್ತುಗಳ ದಂಧೆ ಅವ್ಯಾಹತವಾಗಿದೆ.

ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ 430 ಹತ್ಯೆಗಳು ಮತ್ತು 198ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ರಾಜ್ಯಗೃಹ ಇಲಾಖೆ ಕಾರ್ಯನಿರ್ವಹಿಸುತ್ತಿದೆಯೋ ಅಥವಾ ನಿದ್ದೆ ಮಾಡುತ್ತಿದೆಯೋ ? ಎಂದು ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಪ್ರಶ್ನಿಸಿದೆ.ಇದೇ ವೇಳೆ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ಅಪರಾಧ ಪ್ರಮಾಣ ಹೆಚ್ಚಳವಾಗಿರುವುದರಿಂದ ಕೂಡಲೇ ಈ ಬಗ್ಗೆ ಕ್ರಮವಹಿಸಬೇಕೆಂದು ಆಗ್ರಹಿಸಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಬಿಜೆಪಿ ನಿಯೋಗ ದೂರು ನೀಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬಿಜೆಪಿ ಆರೋಪದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ : ಗೃಹ ಸಚಿವ ಡಾ. ಜಿ.ಪರಮೇಶ್ವರ್

Published

on

ಸುದ್ದಿದಿನ, ತುಮಕೂರು : ರಾಜ್ಯದಲ್ಲಿ ಜನರು ಶಾಂತಿ ಮತ್ತು ನೆಮ್ಮದಿಯಿಂದ ಬದುಕಲು ಯಾವುದೇ ಕ್ರಮ ತೆಗೆದುಕೊಳ್ಳಲು ಸಿದ್ಧ. ಬಿಜೆಪಿ ಆರೋಪದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಶಾಂತಿಯನ್ನು ಕದಡಲು ಎಷ್ಟು ಪ್ರಯತ್ನ ನಡೆಸಿದರೂ ಅದನ್ನು ನಿಯಂತ್ರಿಸುವ ಶಕ್ತಿ ನಮ್ಮ ಸರ್ಕಾರಕ್ಕಿದೆ ಎಂದು ತಿರುಗೇಟು ನೀಡಿದರು. ರಾಜ್ಯದಲ್ಲಿ ಅಪರಾಧ ಪ್ರಕರಣ ಹೆಚ್ಚಳವಾಗುತ್ತಿರುವ ಬಗ್ಗೆ ಪೊಲೀಸ್ ಅಧಿಕಾರಿಗಳೊಂದಿಗೆ ಕೂಲಂಕುಷವಾಗಿ ಚರ್ಚಿಸಿ, ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಜಿ. ಪರಮೇಶ್ವರ್ ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಿಧಾನ ಪರಿಷತ್ ಚುನಾವಣೆ ; 91 ನಾಮಪತ್ರಗಳು ಪುರಸ್ಕೃತ

Published

on

ಸುದ್ದಿದಿನ ಡೆಸ್ಕ್ : ಕರ್ನಾಟಕ ವಿಧಾನ ಪರಿಷತ್‌ನ ಚುನಾವಣೆಗೆ ಸಂಬಂಧಪಟ್ಟಂತೆ ಒಟ್ಟು 91ನಾಮಪತ್ರಗಳು ಪುರಸ್ಕೃತಗೊಂಡಿವೆ. ಈಶಾನ್ಯ ಪದವಿಧರ ಕ್ಷೇತ್ರಕ್ಕೆ ಒಟ್ಟು 26 ನಾಮಪತ್ರಗಳು ಪುರಸ್ಕೃತಗೊಂಡಿದೆ.

ಅದೇ ರೀತಿ ಕರ್ನಾಟಕದ ಆಗ್ನೇಯಾ ಶಿಕ್ಷಕರ ಕ್ಷೇತ್ರಕ್ಕೆ 15, ಬೆಂಗಳೂರು ಪದವೀಧರರ ಕ್ಷೇತ್ರಕ್ಕೆ 16, ಕರ್ನಾಟಕ ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ 9, ಕನಾಟಕ ನೈಋತ್ಯ ಪದವೀಧರ ಕ್ಷೇತ್ರಕ್ಕೆ12 ಹಾಗೂ ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಒಟ್ಟು 13 ನಾಮಪತ್ರಗಳು ಪುರಸ್ಕೃತಗೊಂಡಿವೆ ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending