ಲೈಫ್ ಸ್ಟೈಲ್
ದೇಹ ಮತ್ತು ಆತ್ಮವನ್ನು ಪವಿತ್ರ ಗೊಳಿಸುವ ಒಂದು ತಿಂಗಳ ವ್ರತಾಚರಣೆಯೇ ರಂಜಾನ್
- ಕೆ.ಶ್ರೀಧರ್ (ಕೆ.ಸಿರಿ)
ರಂಜಾನ್ ಮುಸ್ಲಿಂ ಸಮುದಾಯದ ಒಂದು ಪವಿತ್ರವಾದ ಧಾರ್ಮಿಕ ಹಬ್ಬವಾಗಿದೆ. ರಮದಾನ್ ಅಂತಲೂ ಈದ್-ಉಲ್-ಫಿತರ್(ಧಾನ್ಯ ದಾನದ ಹಬ್ಬ) ಎಂತಲೂ ಕರೆಯುತ್ತಾರೆ. ಮಾನವ ಕಲ್ಯಾಣಕ್ಕಾಗಿ ಪ್ರವಾದಿ ಮುಹಮ್ಮದ್ ರವರ ಮೇಲೆ ಇದೇ ತಿಂಗಳಲ್ಲಿ ಪವಿತ್ರ ಕುರಾನ್ ಉದ್ಭವಗೊಂಡಿತು ಇದರ ಪೂಜ್ಯಭಾವಾರ್ಥವಾಗಿ ಪ್ರತೀ ವರ್ಷವೂ ಈ ಒಂದು ತಿಂಗಳ ವ್ರತಾಚರಣೆಯನ್ನು ಕಡ್ಡಾಯಗೊಳಿಸಲಾಗಿದೆ.
ಈ ಒಂದು ತಿಂಗಳು ಪ್ರಭಾತ ಕಾಲದಿಂದ ಸೂರ್ಯಾಸ್ತಮದವರೆಗೂ ಧರ್ಮಸಮ್ಮತವಾದ ಯಾವುದೇ ರೀತಿಯ ಊಟ ಉಪಚಾರಗಳನ್ನು ಒಂದು ತೊಟ್ಟು ನೀರನ್ನೂ ಕುಡಿಯದೆ ಕಾಮಾಸಕ್ತಿಯ ಚಟುವಟಿಕೆಗಳನ್ನು ತ್ಯಜಿಸುವುದನ್ನೇ ಇಸ್ಲಾಂನಲ್ಲಿ ‘ರೋಜ಼ಾ”ಉಪವಾಸ’ ಅಥವಾ ‘ವ್ರತಾಚರಣೆ’ ಸ್ವೇಚ್ಛೆ, ಸ್ವಾರ್ಥ ಮತ್ತು ಅತ್ಯಾಗ್ರಹಗಳಂಥ ಎಲ್ಲ ವಿಧ ಮಾನವೀಯ ದೌರ್ಬಲ್ಯಗಳಿಂದ ಮನುಷ್ಯನನ್ನು ಮುಕ್ತಗೊಳಿಸಿ ದೇಹ ಮತ್ತು ಆತ್ಮವನ್ನು ಪವಿತ್ರ ಗೊಳಿ ಸುವುದೇ ಒಂದು ತಿಂಗಳ ಪೂರ್ಣ ವ್ರತಾಚರಣೆಯ ಉದ್ದೇಶವಾಗಿದೆ.
ರಂಜಾನ್ ತಿಂಗಳ ಹಗಲಿನಲ್ಲಿ ತೊಟ್ಟು ನೀರೂ ಕುಡಿಯದೆ, ಕಠಿಣ ವ್ರತದ ಮೂಲಕ ಹಸಿವಿನ ಕಠಿಣತೆಯನ್ನು ಅರಿತು, ವಿಶ್ವ ಮಾನವರೆಲ್ಲರೂ ಸಮಾನರು. ಅಲ್ಲಿ ಬಡವ – ಶ್ರೀಮಂತರೆನ್ನುವ ಭೇಧವಿಲ್ಲದೆ ಎಲ್ಲರೂ ವ್ರತಾಚರಣೆಯಲ್ಲಿ ತೊಡಗಿ ದೇವಲೀನರಾಗಿ ಅಲ್ಲಾಹನನ್ನು ಪ್ರಾರ್ತಿಸುತ್ತಾ ಎಲ್ಲ ರೀತಿಯ ತಪ್ಪುಗಳಿಂದ ದೂರವಿದ್ದ ಒಂದು ತಿಂಗಳು ಕಳೆದು ಈದ್-ಉಲ್-ಫಿತರ್ ಬರುತ್ತದೆ ಇದು ದಾನದ ಹಬ್ಬ.
ಒಂದು ತಿಂಗಳ ಹಸಿವೆಯ ಪಾಠದಿಂದ ಬಡತನ ಹಸಿವು ಏನೆಂಬುದು ಅರಿತು ಬಡವನಿಗೆ -ಹಸಿದವನಿಗೆ ದಾನದ ಮೂಲಕ ಸಹಾಯಿಯಾಗುವುದು ಕರ್ತವ್ಯ. ಝಕಾತ್-ಝಕಾತ್(ದಾನ) ಮೂಲಕ ಒಬ್ಬ ಮುಸ್ಲಿಮ ಆತನ ಈದ್ ದಿನದ ಹಗಲಿನ ಮತ್ತು ಆ ರಾತ್ರಿಯ ಖರ್ಚಿಗೆ ಬೇಕಾದ ಸ್ವತ್ತು ಕಳೆದು ಬೇರೇನಾದರೂ ಉಳಿದಲ್ಲಿ, ಕಡ್ಡಾಯವಾಗಿ ದಾನ ನೀಡ ತಕ್ಕದ್ದು.
ಆ ದಿನ ಏನೂ ಇಲ್ಲವಾದರೂ ಮನೆಯಲ್ಲಿರುವ ಪಾತ್ರೆಯನ್ನಾದರೂ ಮಾರಿ ದಾನ ನೀಡಬೇಕೆಂಬುದು ಈ ಹಬ್ಬದ ಉದ್ದೇಶ. ರಂಜಾನ್ ಈ ಹಬ್ಬದ ಬಗ್ಗೆ ನನಗೆ ಪ್ರಮುಖ ಆಕರ್ಷಣೆಯಾಗಿದ್ದು ನನ್ನ ಕರ್ತವ್ಯದ ಅವಧಿಯಲ್ಲಿ ದಿನದಿಂದ ದಿನಕ್ಕೆ ಈ ಕೊರೋನಾ ಮಹಾಮಾರಿ ವ್ಯಾಪಕವಾಗಿ ಹರಡುತ್ತಿದ್ದು ಇದನ್ನು ತಡೆಗಟ್ಟುವ ಸಲುವಾಗಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದ್ದು ಇಲ್ಲಿಗೆ ಹಾಸಿಗೆಯನ್ನು ಮುನ್ನ ಎಂಬ ಒಬ್ಬ ವ್ಯಕ್ತಿ ಹಾಸಿಗೆಗಳನ್ನು ತಮ್ಮ ಅಂಗಡಿಯಿಂದ ನೀಡುತ್ತಿದ್ದರು ಆ ಒಂದು ದಿನ ಮಧ್ಯಾಹ್ನ 30 ಹಾಸಿಗೆಯುಳ್ಳ ಆಟೋ ರಿಕ್ಷಾವನ್ನು ತೆಗೆದುಕೊಂಡು ಬಂದು ಹಾಸಿಗೆಯನ್ನು ಹಾಕುತ್ತಿದ್ದಾಗ ನಾನು ಸಾಮಾನ್ಯವಾಗಿ ಈ ರೀತಿಯಾಗಿ ಕೇಳಿದೆ.
“ಇನ್ನೂ ಎಷ್ಟು ಬೆಡ್ ಬರಬೇಕು ಸ್ವಲ್ಪ ಬೇಗ ಬೇಗ ವ್ಯವಸ್ಥೆ ಮಾಡಿ” “ಆಯ್ತು ಸರ್ ಈಗ 40 ಬೆಡ್ ಗೆ ಬಂದಿವೆ ಇನ್ನೂ 40 ಬೆಡ್ ಆನ್ದೀ ವೇ ಜಭೀ ಆಟೋದಲ್ಲಿ ಹಾಕೊಂಡು ಬರ್ತಿದ್ದಾನೆ.” “ಹೂಂ ಆಯ್ತು ಇವತ್ತೆ ಎಲ್ಲಾ ವ್ಯವಸ್ಥೆ ಮಾಡಿ.”ಆ ವ್ಯಕ್ತಿ ಮುಗುಳ್ನಗುತ್ತಾ ಒಂದು ಸಾಧಾರಣ ಲುಂಗಿ ಟೀಂ ಶರ್ಟ್ ಧರಿಸಿದ್ದ ಆ ವ್ಯಕ್ತಿ ಮುಗುಳ್ನಗುತ್ತಾ ಈ ರೀತಿ ಹೇಳಿದರು.
“ಆಯ್ತು ಬಿಡಿ ಸರ್ ನಮ್ಗೆ ಎಷ್ಟು ಸಾಧ್ಯ ಆಗ್ತದೋ ಅಷ್ಟು ಜಲ್ದೀ ನಿಮ್ಮ ಕೆಲಸ ಮುಗಿಸಿಕೊಡ್ತೀವಿ” ಎಂದು ತಲೆಯ ಮೇಲೆ ಮಣಭಾರದ ಬೆಡ್ ಹೊತ್ತು ಮುಗುಳ್ನಗೆ ಬೀರುತ್ತಾ ಮೆಟ್ಟಿಲೇರಿ ಒಂದನೆಯ ಮಹಡಿಗೆ ಹೊರಟರು ಅಷ್ಟರಲ್ಲಿಯೇ ಜಭೀರವರು ಆಟೋ ಇಂದ ಇಳಿದರು ಮುನ್ನ ಮತ್ತು ಜಬೀರವರು ಹಿಂದಿಯಲ್ಲಿ ಏನೋ ಕೆಲಸದ ಬಗ್ಗೆ ಮಾತನಾಡುತ್ತಿದ್ದರು ನನಗೆ ಅರ್ಥವಾಗಲಿಲ್ಲ ಅಷ್ಟೊತ್ತಿಗಾಗಲೇ ಊಟದ ಸಮಯವಾಗಿತ್ತು ಊಟಕ್ಕೆ ಹೋಗೋಣವೆಂದು ನಿರ್ಧರಿಸಿ ಹೊರಟೆ.
” ಮುನ್ನ ಅವರೇ ನಿಮ್ದು ಊಟ ಆಯ್ತಾ ಆಗಿಲ್ಲ ಅಂದ್ರೆ ಇಲ್ಲೇ ಊಟ ಮಾಡಿ”. ಸ್ವಲ್ಪ ಹೊತ್ತು ಸುಮ್ಮನಿದ್ದು ಆಟೋದ ಮೇಲಿದ್ದ ಜಭೀರವರು ಪ್ರತ್ಯುತ್ತರಿಸಿದರು.
” ಪರವಾಗಿಲ್ಲ ಸರ್ ನಮ್ದುಕೇ ರೋಜ್ ಗೆ ಇದೀವಿ ನೀವು ಮಾಡಿ” “ಅಯ್ಯೋ ಸಾರಿ ಕೇಳಬಾರದಿತ್ತೇನು” “ಹೇ ಹಾಗೆನಿಲ್ಲ ಸರ್ ಪರವಾಗಿಲ್ಲ ತಪ್ಪೇನಿಲ್ಲ ಬಿಡಿ” ಆ ಕ್ಷಣಕ್ಕೆ ನನಗೆ ಬೇಜಾರಾದಂತೆನಿಸಿತು ಹಾಗೆಯೇ ರಂಜಾನ್ ಹಬ್ಬದ ಬಗ್ಗೆ ತಿಳಿದುಕೊಳ್ಳೋಣವೆಂದಿನಿಸಿ ಮಾತಿಗಿಳಿದೆ.
“ಬಯ್ಯ ಈ ರಂಜಾನ್ ಹಬ್ಬದ ವಿಶೇಷತೆ ಏನು”?
“ಸರ್ ಒಂದು ವರ್ಷದಲ್ಲಿ 11 ತಿಂಗಳು ನಮಗೆ ಇನ್ನೂ 1 ತಿಂಗಳು ನಮ್ಮ ದೇವರಾದ ಅಲ್ಲಾಹು ಗೆ.” “ಅಂದ್ರೆ ಯಾವ ರೀತಿ.?”
“ನಮ್ಗೆ ಈ ಒಂದು ತಿಂಗಳು ಸೂರ್ಯೋದಯ ಆದ್ಮೇಲೆ ಸೂರ್ಯ ಮುಳುಗುವರೆಗೂ ಒಂದನಿ ನೀರು ಕುಡಿದೆ,ಕೆಟ್ಟ ಮಾತನಾಡದೆ, ಕೆಟ್ಟದು ಯೋಚನೆ ಮಾಡದೆ, ಯಾವುದೇ ರೀತಿ ಊಟ ಮಾಡದೇ ಉಪವಾಸ ಇರಬೇಕು ಮಸೀದಿಲೀ ಹೇಳಿದ ಮೇಲೆ ಉಪವಾಸ ಬಿಟ್ಟಿ ನಮಾಝ್ ಮಾಡಬೇಕು.”
“ಇಷ್ಟೇನಾ ಇನ್ನೂ ಏನಾದರೂ ಇದೆಯಾ”?
“ಇನ್ನೂ ಇದೆ ಸರ್ ಈ ಹಬ್ಬ ಅಂದ್ರೆ ಯಾವುದೇ ಜಾತಿ ಧರ್ಮ ನೋಡದೆ ನಮ್ಮ ಕೈಲಾದ ಧಾನ ಧರ್ಮ ಮಾಡಬೇಕು”
“ಯಾಕೆ ಈ ಒಂದು ತಿಂಗಳು ಉಪವಾಸ ಮಾಡಬೇಕು”?
ಇದನ್ನೂ ಓದಿ | ಶಿವಮೊಗ್ಗ ಜಿಲ್ಲೆ – ನಮ್ಮ ಹೆಮ್ಮೆ : ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ( ವಿ.ಐ.ಎಸ್.ಎಲ್)
“ಸರ್ ಮನುಷ್ಯ ಒಂದ್ವರ್ಷದಲ್ಲಿ 1 ತಿಂಗಳು ಉಪವಾಸ ಇದ್ದು ಹಸಿವಿನ ಬಗ್ಗೆ ಬಡತನದ ಬಗ್ಗೆ ನಮಗೆ ಅರಿವಾಗಬೇಕು ಅಂತ ನಿಮ್ಮಲ್ಲಿ ಮಾಲೆ ಹಾಕಿದವರು ಹೇಗೆ ಸ್ವಾಮಿ ಅಂತ ಮಾತಾಡಿಸ್ತಾರೋ ನಾವು ಕೂಡ ಕಟ್ಟು ನಿಟ್ಟಾಗಿ ಇರಬೇಕು”
“ಧಾನ ಅಂದ್ರೆ ಏನ್ ಮಾಡ್ತೀರಾ?” “ನಮ್ಮ ಮನೆಯಲ್ಲಿ ಇವಾಗ 50 ಸಾವಿರ ಚಿನ್ನ ಇದೆ ಅಂತಿಟ್ಕೋಳಿ ಅದರಲ್ಲಿ 2.5% ಯಾರಿಗಾದ್ರೂ ಸಹಾಯ ಮಾಡಬೇಕು ನಮ್ಗೆ ಯಾವುದೇ ಜಾತಿ ಧರ್ಮ ಅಂತಿಲ್ಲ ಸರ್ ಇತ್ತೀಚೆಗೆ ಧರ್ಮಕ್ಕೆ ರಾಜಕಾರಣ ಸೇರಿ ಹಾಳಾಗಿದೆ ಸರ್ ಅವರವರ ಧರ್ಮ ಅವರವರ ಇಷ್ಟ ಸುಮ್ಮನೆ ಜಗಳ ಮಾಡೋದ್ರಲ್ಲೇನಿದೆ ಹೇಳಿ”
“ಸರಿ ದಿನ ಪೂರ್ತಿ ಉಪವಾಸ ಇದ್ದು ಒಂದನಿ ನೀರು ಕುಡಿದೆ ಇಷ್ಟು ಕಠಿಣ ಕೆಲಸ ಮಾಡ್ತೀರಲ್ಲ ನಿಮಗೆ ಆಯಾಸ ಆಗೋದಿಲ್ವ?” “ಸರ್ ಈ ಹಬ್ಬದಲ್ಲಿ ನಾವು ಕೆಲಸ ಮಾಡೋ ಹಾಗಿಲ್ಲ ಆದರೆ ಈ ಕೋರೋನ ಇಂದಾಗಿ ಎಷ್ಟೆಲ್ಲ ಕಷ್ಟ ಇದೆ ಅಲ್ವಾ ಇಂತ ಟೈಂ ಲಿ ಕೆಲಸ ಮಾಡ್ಬೇಕು ನಮಗೆ ಯಾವುದೇ ರೀತಿಯ ಸುಸ್ತಾಗೋಲ್ಲ ಹಂಗ ನೋಡಿದ್ರೆ ಈ ರಂಜಾನ್ ದಿನಗಳಿಗಿಂತ ಬೇರೆ ಟೈಂ ಲೇ ನಮಗೆ ಆಯಾಸ ಆಗುತ್ತದೆ ಈ ರಂಜಾನ್ ಟೈಂ ಲಿ ನಮಗೆ ಎಂತದ್ದೇ ಊಟ ಇದ್ರು ಊಟ ಮಾಡಬೇಕು ಅನಿಸೊಲ್ಲ ನೀರು ಕುಡಿಯಬೇಕು ಅನಿಸೋಲ್ಲ ನಿಮ್ಮಲ್ಲೂ ಕೂಡ ಒಂದತ್ತು(ಉಪವಾಸ) ಮಾಡ್ತೀರಲ್ಲಾ ನಮ್ದು ಕೂಡ ಹಾಗೆ”
ಎಂದು ಮಾತನಾಡುತ್ತಾ ಮಾತನಾಡುತ್ತಾ ಎಲ್ಲಾ ಹಾಸಿಗೆಗಳನ್ನು ಕಾಟದ ಮೇಲಿರಿಸಿ ಒಂದು ಘಳಿಗೆ ಸುಮ್ಮನೆ ಕೂತು ರಂಜಾನ್ ಹಬ್ಬದ ಬಗ್ಗೆ ತಿಳಿಸಿದರು. ಈ ಭೂಮಿ ಮೇಲಿರುವ ಎಲ್ಲಾ ಧರ್ಮಗಳು ಕೂಡ ಹೇಳುವುದು ಧಾನ ಧರ್ಮ ಮಾಡಿ ಅಂತಲೇ ಎಲ್ಲಾ ಧರ್ಮಗಳಿಗಿಂತಲೂ ಈ ಮಾನವ ಧರ್ಮ ಮುಖ್ಯ “ಒಬ್ಬರ ನೋವಿಗೆ ಇನ್ನೊಬ್ಬರ ಹೃದಯ ಮಿಡಿಯುವುದೇ ನಿಜವಾದ ಮನುಷ್ಯ ಧರ್ಮ” ವ್ಯಕ್ತಿ ಯಾವುದೇ ಧರ್ಮವಾಗಿರಲಿ ನೋವಿಗೆ ಮಿಡಿಯುವ, ಭಾವನೆಗಳಿಗೆ ಸ್ಪಂದಿಸುವ ಧರ್ಮವೇ ನಿಜವಾದ ಮನುಕುಲದ ಧರ್ಮ ಎಂಬುದು ನನ್ನ ಒಲವ ಅಭಿಮತ.
(ಕೆ.ಶ್ರೀಧರ್ (ಕೆ.ಸಿರಿ)
ಯುವ ಸಾಹಿತಿ
9741270125)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
ಸುದ್ದಿದಿನ ಡೆಸ್ಕ್:ಬೆಂಗಳೂರಿನಲ್ಲಿ ಪ್ರೀತಿಯೊಂದು ರಕ್ತಸಿಕ್ತ ಅಂತ್ಯ ಕಂಡಿದೆ. ಮದುವೆಗೆ ನಿರಾಕರಿಸಿದ ಪ್ರೇಯಸಿಯನ್ನು ಪ್ರಿಯಕರನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಪೈಪ್ಲೈನ್ ರಸ್ತೆಯಲ್ಲಿ ನಡೆದಿದೆ.
23 ವರ್ಷದ ಅಂಜಲಿ ಕೊಲೆಯಾದ ಯುವತಿಯಾಗಿದ್ದು, ರಾಜೀವ್ ಬಂಧಿತ ಆರೋಪಿ. ಕಳೆದ ಮೂರು-ನಾಲ್ಕು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ಹಿಂದೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಪರಿಚಯವಾಗಿ ಸ್ನೇಹ ಬೆಳೆದು, ಬಳಿಕ ಅದು ಪ್ರೀತಿಗೆ ತಿರುಗಿತ್ತು.
ಆದರೆ ರಾಜೀವ್ಗೆ ಕ್ರಿಮಿನಲ್ ಹಿನ್ನೆಲೆ ಇದ್ದ ಕಾರಣ ಅಂಜಲಿ ಕುಟುಂಬಸ್ಥರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಹಲವು ಬಾರಿ ಕುಟುಂಬಸ್ಥರನ್ನು ಒಪ್ಪಿಸಲು ರಾಜೀವ್ ಪ್ರಯತ್ನಿಸಿದ್ದರೂ ಫಲಿಸಿರಲಿಲ್ಲ. ಇತ್ತೀಚೆಗೆ ಪೋಷಕರ ಒತ್ತಾಯಕ್ಕೆ ಮಣಿದ ಅಂಜಲಿ ರಾಜೀವ್ನಿಂದ ದೂರವಾಗಲು ಆರಂಭಿಸಿದ್ದಳು. ಇಂದು ಸಂಜೆ ಅಂಜಲಿಯನ್ನು ಊಟದ ನೆಪದಲ್ಲಿ ಕರೆಸಿಕೊಂಡಿದ್ದ ರಾಜೀವ್, ಮತ್ತೊಮ್ಮೆ ಮದುವೆ ವಿಚಾರ ಪ್ರಸ್ತಾಪಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಕೋಪಗೊಂಡ ರಾಜೀವ್ ಚಾಕುವಿನಿಂದ ಅಂಜಲಿಯ ಕುತ್ತಿಗೆಗೆ ಇರಿದಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಂಜಲಿಯನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃ*ತಪಟ್ಟಿದ್ದಾಳೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪರಿಶೀಲನೆ ನಡೆಸಿ, ಕೆಲವೇ ನಿಮಿಷಗಳಲ್ಲಿ ಆರೋಪಿ ರಾಜೀವ್ನನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಿಮ್ಮ ಕಥೆಗೆ ಹೊಸ ವೇದಿಕೆ ; ಕಥೆಗಾರರಿಗೆ ಪ್ರಿಯಾ ಸುದೀಪ್ ಆಹ್ವಾನ
ಸುದ್ದಿದಿನ ಡೆಸ್ಕ್:ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಸಂಸ್ಥೆಯಡಿ ಪ್ರಿಯಾ ಸುದೀಪ್ ನಿರ್ಮಿಸಿದ ಮೊದಲ ಚಿತ್ರ ‘ಮ್ಯಾಂಗೋ ಪಚ್ಚ’. ಸಂಚಿತ್ ಸಂಜೀವ್ ಅಭಿನಯದ ಈ ಚಿತ್ರ ಹೆಚ್ಚು ಸದ್ದು ಮಾಡಲಿಲ್ಲ.
ಈ ಸೋಲನ್ನು ಹಿಂದಕ್ಕೆ ಹಾಕಿ, ಪ್ರಿಯಾ ಸುದೀಪ್ ಇನ್ನಷ್ಟು ಹೊಸ ಕಥೆಗಳನ್ನು ತೆರೆಗೆ ತರುವುದಕ್ಕೆ, ಹೊಸ ಚಿತ್ರಗಳನ್ನು ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ. ಕಥೆಗಾರರಿಗೆ ಆಹ್ವಾನ ನೀಡಿದ್ದಾರೆ. ‘ನಾವು ಹುಡುಕುತ್ತಿರುವುದು ಕೇವಲ ಕಥೆಗಳಲ್ಲ. ಮನಸ್ಸುಗಳನ್ನು ಮುಟ್ಟುವ ಭಾವನೆಗಳು, ಚಿಂತನೆಗೆ ಹಚ್ಚುವ ವಿಚಾರಗಳು ಮತ್ತು ಪರದೆಯ ಮೇಲೆ ಹೊಸ ಇತಿಹಾಸ ಬರೆಯುವ ಕಲ್ಪನೆಗಳು.
ನಿಮ್ಮ ಬಳಿ ಮೌಲಿಕ ಕಥೆ-ಚಿತ್ರಕಥೆ ಇದ್ದರೆ ಅಥವಾ ವಿಶಿಷ್ಟ ಕಥಾ ಪರಿಕಲ್ಪನೆ ಇದ್ದರೆ, ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನ ಮತ್ತು ಸೃಜನಾತ್ಮಕತೆಯನ್ನು ಹೊಂದಿರುವ ಲೇಖಕರು, ಕಥೆಗಾರರು ಮತ್ತು ಸೃಜನಶೀಲ ಮನಸ್ಸುಗಳನ್ನು ನಾವು ಸ್ವಾಗತಿಸುತ್ತೇವೆ. ಎಲ್ಲಾ ಪ್ರಕಾರಗಳು ಮತ್ತು ಎಲ್ಲಾ ಮಾದರಿಗಳಲ್ಲಿನ ಕಥಾ ಸಲ್ಲಿಕೆಗಳನ್ನು ನಾವು ಸ್ವಾಗತಿಸುತ್ತೇವೆ. ನಿಮ್ಮ ಕಥೆಯೇ ಮುಂದಿನ ದೊಡ್ಡ ಪ್ರಯಾಣದ ಆರಂಭವಾಗಬಹುದು’ ಎಂದು ಪ್ರಿಯಾ ಸುದೀಪ್, ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಜೊತೆಗೆ ಒಂದು ಮೊಬೈಲ್ ಸಂಖ್ಯೆಯನ್ನು ಸಹ ಹಂಚಿಕೊಂಡಿದ್ದಾರೆ. ಆದರೆ, ಕರೆ ಮಾಡುವಂತಿಲ್ಲ. ಚಾಟ್ ಮಾತ್ರ ಮಾಡಬಹುದು. ಕಥೆಗಳಿದ್ದರೆ 6663307434 ಸಂಖ್ಯೆಯನ್ನು ಸಂಪರ್ಕಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂಕಣ7 days agoದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
-
ದಿನದ ಸುದ್ದಿ4 days agoಚನ್ನಗಿರಿ | ಲವ್ ಮ್ಯಾರೇಜ್ ; ಪೊಲೀಸ್ ಠಾಣೆ ಆವರಣದಲ್ಲೇ ಯುವಕನಿಗೆ ಚಾಕು ಇರಿತ
-
ದಿನದ ಸುದ್ದಿ2 days agoದಾವಣಗೆರೆ | ತಾಪಂ ಅನುದಾನ ದುರುಪಯೋಗ: ಮೂವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ಚುರುಕು
-
ದಿನದ ಸುದ್ದಿ4 days ago
ಮತದಾರರ ಪಟ್ಟಿ ಪರಿಷ್ಕರಣೆ | ಪ್ರತಿಯೊಬ್ಬರ ಮನೆಬಾಗಿಲಿಗೆ ತಲುಪಲಿವೆ ಫಾರಂಗಳು ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ
-
ದಿನದ ಸುದ್ದಿ7 hours agoಮಾಠಾಧೀಶರ ಮೇಲೆ ಹಲ್ಲೆ ; ನಿರ್ಲಕ್ಷಿಸಿದರೆ ದುಷ್ಕೃತ್ಯ ಹೆಚ್ಚಳ ಸಂಭವ; ಕಠಿಣ ಕ್ರಮಕ್ಕೆ ಎಚ್.ಆಂಜನೇಯ ಆಗ್ರಹ


