Connect with us

ದಿನದ ಸುದ್ದಿ

ವೃತ್ತಿಯಲ್ಲಿ ವಕೀಲ, ಪ್ರವೃತ್ತಿಯಲ್ಲಿ ಸಮಾಜ ಸೇವಕ : ಇದು ಕೊರೊನಾ ಗೆದ್ದು ಬಂದವನ ಸೇವೆ

Published

on

  • ವರದಿ: ಗಿರಿಧರ್ ಕೊಂಪುಳೀರಾ

ಸುದ್ದಿದಿನ, ಕೊಡಗು : ಅಂದು ಸಣ್ಣದೊಂದು ಶೀತ ಜ್ವರ,ತನ್ನ ಮಗನಿಗೂ ಅದೇ ರೀತಿಯಾಗಿತ್ತು, ದೇವದೆಲ್ಲಡೆ ಅದೇನೋ ವಿಷಮ ಗಾಳಿಯಿಂದ ಖಾಯಿಲೆ ಹರಡುತಿದೆ,ಪರೀಕ್ಷಿಕೊಳ್ಳಿ ಎಂದು ಸರ್ಕಾರಗಳು ಪ್ರಚಾರ ಮಾಡುತ್ತಿದ್ದವು,ಯಾವುದಕ್ಕೂ ಪರೀಕ್ಷೆಗೆ ಹೋದರೆ ಸಾಲುಸಾಲು ಜನ ಮೂಗಿನಿಂದ,ಬಾಯಿಂದ ಸ್ಯಾಂಪಲ್ ಪಡೆಯುವುದು,ಇಷ್ಟು ಮಾಡುವುದಕ್ಕೆ ಒಂದು ದಿನವೇ ಸವೆದುಹೋಯಿತು, ಊಟವಿಲ್ಲ ನೀರಿಲ್ಲ,ತಾನೇಗೋ ಇರುತ್ತೇನೆ ಪುಟ್ಟ ಮಗನ ಕಥೆಯೇನು..?

ಹೌದು ಸಮಾಜ ಸೇವಕ ,ವೃತ್ತಿಯಲ್ಲಿ ವಕೀಲ,ಕೊಡಗಿನ ಹಿತ ಕಾಪಾಡಲು ಸದಾ ಮುಂದೆಯಿರುವ ಇವರ ಹೆಸರು
ಪವನ್ ಪೆಮ್ಮಯ್ಯ,ಯುವಕರಿಗೆ ಸ್ಪೂರ್ತಿಯ ಸೆಲೆಯಾಗಿರುವ ಇವರು ಅದೆಲ್ಲಿಂದ ಕೊರೊನಾ ಒಕ್ಕರಿಸಿತೋ ಗೊತ್ತಿಲ್ಲ ದಿನನಿತ್ಯ ಸಾವಿರಾರು ಜನರು ಬರುವ ಜಿಲ್ಲಾ ನ್ಯಾಯಾಲಯ,ಜನರ ಮಧ್ಯೆಯೇ ಸೇವೆಗಳಲ್ಲಿ ಇರುವುದರಿಂದಲೋ ಕೊರೊನಾ ಪಾಸಿಟಿವ್ ಅಂತಾ ಧೃ಼ಡಪಟ್ಟು, ಆಸ್ಪತ್ರೆಯಲ್ಲಿ ಸಿಕ್ಕಿದ ಪುಡ್ಡು,ಬೆಡ್ಡು ಚಿಕಿತ್ಸೆಗೆ ಮಾತ್ರೆ ನುಂಗಿ ಕೊರೊನಾ ತನ್ನಿಂದ ಓಡಿಹೋಗುವಷ್ಟರ ಮಟ್ಟಿಗೆ ನಾಜೂಕಾಗಿ ಚಿಕಿತ್ಸೆ ತೆಗೆದುಕೊಂಡರು.

ಆಸ್ಪತ್ರೆಯಿಂದ ಯುದ್ದ ಗೆದ್ದ ಸಂಭ್ರಮವೇನೋ ಇತ್ತು ಆದರೆ ತಾನು ಕ್ವಾರಂಟೈನ್ ನಲ್ಲಿದ್ದ ಸಂದರ್ಭ ಆದ ಅನುಭವದಿಂದ ನಲುಗಿ ಇದೀಗ ಮತ್ತೆ ಜನರ ಮಧ್ಯೆ ಬಂದಿದ್ದಾರೆ.ಹೌದು ಕೊರೊನಾ ಪಾಸಿಟಿವ್ ಆಗಿ ನರಳುವ ರೋಗಿಗಳ ಕಷ್ಟ ಒಂದಡೆಯಾದರೆ,ಇನ್ನೊಂದೆಡೆ ಕೊರೊನಾ ಪೀಡಿತ ವ್ಯಕ್ತಿಯ ಮನೆಯವರ ಪಾಡು.

ಇದನ್ನೂ ಓದಿ |ಲಾಕ್ ಡೌನ್ ನಡುವೆ ಸಪ್ತಪದಿ ತುಳಿದ ನಟ ಚಂದನ್-ಕವಿತ

ಇದೀಗ ಲಾಕ್ ಡೌನ್,ಮಡಿಕೇರಿಯಲ್ಲಿ ಮಳೆ ಸಹ ಶುರುವಾಗಿದೆ.ಶುದ್ದ ಕುಡಿಯುವ ನೀರು ಆಸ್ಪತ್ರೆಯಲ್ಲಿದ್ದರೂ ಕುಡಿಯುವ ಹಾಗಿಲ್ಲ,ಮಕ್ಕಳು,ವೃದ್ದರೆನ್ನದೆ ಆಸ್ಪತ್ರೆಯತ್ತ ಮುಖ ಮಾಡುವ ಮಂದಿ ಹೊಟೇಲುಗಳಿಲ್ಲದೆ, ಆಹಾರಕ್ಕೂ ಪರದಾಡುವಂತಹವರಿಗೆ ಪವನ್ ಅನಧಾತರಾಗಿದ್ದಾರೆ.

ದಿನನಿತ್ಯ ಮಡಿಕೇರಿ ಜಿಲ್ಲಾಸಪ್ಪತ್ರೆ ಎದುರು ಒಂದೆರೆಡು ಯವಕರನ್ನು ಸೇರಿಸಿಕೊಂಡು ದಿನನಿತ್ಯ 300 ಮಂದಿಗೆ ತಾವೇ ಮನೆಯಲ್ಲಿ ತಯಾರಿಸಿ ಹೊಟ್ಟೆ ತುಂಬುವಷ್ಟು ನೀರು,ದೋಹ ತಣಿವಷ್ಟು ನೀರಿನ ವ್ಯವಸ್ಥೆಯನ್ನು ಆಸ್ಪತ್ರೆಯ ಬಳಿಯಲ್ಲೇ ಕೊರೊನಾದ ಸಕಲ ನಿಮ ಪಾಲಿಸಿಕೊಂಡು,ಅವರ ಬಳಿಗೆ ಬರುವವರಿಗೂ ಮಾರ್ಗದರ್ಶನ ನೀಡುತ್ತಿದ್ದಾರೆ.

ಆರಂಭದಲ್ಲಿ ಸ್ವಂತ ಖರ್ಚಿನಿಂದ ಸಣ್ಣ ಪ್ರಮಾಣದಲ್ಲಿ ಆರಂ‌ಭಿಸಿದ ಈ ಕಾರ್ಯಕ್ಕೆ,ಸ್ನೇಹಿತರು ಹಿತೈಶಿಗಳ ಪ್ರೋತ್ಸಾಹವಿದೆ. ಏನೇ ಆಗಲಿ ಸಮಾಜದಲ್ಲಿ ಕೊರೊನಾ ಜೊತೆಗೂ ಇತರರೊಂದಿಗೆ ಬೆರೆಯಬಹುದು,ಅವರ ಕಷ್ಟ ಸುಖದಲ್ಲಿ ಸುರಕ್ಷಿತವಾಗಿ ಭಾಗಿಯಾಗುತ್ತಿರುವುದಕ್ಕೆ ಇದಕ್ಕಿಂದ ಉದಾಹರಣೆ ಬೇಕಿಲ್ಲ.

ಕೃಪೆ : Mangalore information

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

2027ರ ಜನಗಣತಿ ನಡೆಸಲು ಬಜೆಟ್ ಅಂಗೀಕಾರ

Published

on

ಸುದ್ದಿದಿನ,ದೆಹಲಿ:2027ರ ಜನಗಣತಿಯನ್ನು ನಡೆಸಲು ಸಂಪುಟವು 11 ಸಾವಿರದ 718 ಕೋಟಿ ರೂಪಾಯಿಗಳ ಬಜೆಟ್‌ಅನ್ನು ಅಂಗೀಕರಿಸಿದೆ. ಈ ಕುರಿತು ಮಾಹಿತಿ ನೀಡಿದ ಸಚಿವರು, 2027ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು ಎಂದು ಹೇಳಿದರು.

ಇದು ಮೊದಲ ಡಿಜಿಟಲ್ ಜನಗಣತಿಯಾಗಲಿದೆ. 2027 ರ ಜನಗಣತಿಯು ಒಟ್ಟಾರೆ 16ನೇ ಮತ್ತು ಸ್ವಾತಂತ್ರ‍್ಯದ ನಂತರದ 8 ನೇ ಜನಗಣತಿಯಾಗಲಿದೆ. ಭಾರತದ ಜನಗಣತಿಯನ್ನು ವಿಶ್ವದ ಅತಿದೊಡ್ಡ ಆಡಳಿತಾತ್ಮಕ ಮತ್ತು ಸಂಖ್ಯಾಶಾಸ್ತ್ರೀಯ ಕ್ರಮವೆಂದು ಪರಿಗಣಿಸಲಾಗಿದೆ ಎಂದು ಅವರು ತಿಳಿಸಿದರು.

ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು 2026ರ ಹಂಗಾಮಿಗೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಗೆ ಅನುಮೋದನೆ ನೀಡಿದೆ. ಬೆಳೆಗಾರರಿಗೆ ಲಾಭದಾಯಕ ಬೆಲೆಗಳನ್ನು ಒದಗಿಸುವ ಸಲುವಾಗಿ, ಸರ್ಕಾರವು 2018-19 ರ ಕೇಂದ್ರ ಬಜೆಟ್‌ನಲ್ಲಿ ಎಲ್ಲಾ ಕಡ್ಡಾಯ ಬೆಳೆಗಳ ಎಂಎಸ್‌ಪಿ ಅನ್ನು ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಮಟ್ಟದಲ್ಲಿ ನಿಗದಿಪಡಿಸಲಾಗುವುದು ಎಂದು ಘೋಷಿಸಿತ್ತು. ಮಿಲ್ಲಿಂಗ್ ಕೊಬ್ಬರಿಗೆ ಎಂಎಸ್‌ಪಿಯನ್ನು ಕ್ವಿಂಟಲ್‌ಗೆ 445 ರೂಪಾಯಿಗಳಿಂದ 12 ಸಾವಿರದ 27 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಮತ್ತು ಅದೇ ಅವಧಿಗೆ ಉಂಡೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ 2026ರ ಹಂಗಾಮಿಗೆ ಕ್ವಿಂಟಲ್‌ಗೆ 400 ರೂಪಾಯಿಗಳಿಂದ 12 ಸಾವಿರದ 500 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.

ಹೆಚ್ಚಿನ ಕನಿಷ್ಠ ಬೆಂಬಲ ಬೆಲೆಯು ತೆಂಗಿನ ಬೆಳೆಗಾರರಿಗೆ ಉತ್ತಮ ಲಾಭದಾಯಕ ಆದಾಯವನ್ನು ಖಚಿತಪಡಿಸುವುದಲ್ಲದೆ, ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ತೆಂಗಿನ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕೊಬ್ಬರಿ ಉತ್ಪಾದನೆಯನ್ನು ವಿಸ್ತರಿಸಲು ರೈತರನ್ನು ಪ್ರೋತ್ಸಾಹಿಸುತ್ತದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕೋಲ್‌ಸೇತು ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ; ಸಂಪನ್ಮೂಲಗಳ ನ್ಯಾಯಯುತ ಬಳಕೆಗೆ ಒತ್ತು

Published

on

ಸುದ್ದಿದಿನ,ದೆಹಲಿ:ಕೇಂದ್ರ ಸರ್ಕಾರವು ’ಕೋಲ್‌ಸೇತು’ ನೀತಿಯನ್ನು ಅನುಮೋದಿಸಿದೆ. ಇದು ವಿವಿಧ ಕೈಗಾರಿಕಾ ಬಳಕೆಗಳು ಮತ್ತು ರಫ್ತಿಗೆ ಕಲ್ಲಿದ್ದಲು ಸಂಪರ್ಕಗಳ ಹರಾಜಿಗೆ ಹೊಸ ವ್ಯವಸ್ಥೆ ಸೃಷ್ಟಿಸುತ್ತದೆ, ಹಾಗೂ ಸಂಪನ್ಮೂಲಗಳ ನ್ಯಾಯಯುತ ಪ್ರವೇಶ ಮತ್ತು ಅತ್ಯುತ್ತಮ ಬಳಕೆಯನ್ನು ಖಚಿತಪಡಿಸುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು ನಿನ್ನೆ ತಡೆರಹಿತ, ದಕ್ಷ ಮತ್ತು ಪಾರದರ್ಶಕ ಬಳಕೆಗಾಗಿ ಕಲ್ಲಿದ್ದಲು ಸಂಪರ್ಕದ ಹರಾಜು ನೀತಿಗೆ ಅನುಮೋದನೆ ನೀಡಿತು.

ನವದೆಹಲಿಯಲ್ಲಿ ನಿನ್ನೆ ಸಂಜೆ ಸಂಪುಟದ ನಿರ್ಧಾರಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, 2016ರ ಎನ್‌ಆರ್‌ಎಸ್ ನಿಯಂತ್ರಿತವಲ್ಲದ ವಲಯದ ಸಂಪರ್ಕ ಹರಾಜು ನೀತಿಯಲ್ಲಿ ’ಕೋಲ್‌ಸೇತು’ ಎಂಬ ಪ್ರತ್ಯೇಕ ವ್ಯವಸ್ಥೆಯನ್ನು ಸೇರಿಸುವ ಮೂಲಕ ಯಾವುದೇ ಕೈಗಾರಿಕಾ ಬಳಕೆ ಮತ್ತು ರಫ್ತಿಗೆ ದೀರ್ಘಾವಧಿಯವರೆಗೆ ಹರಾಜು ಆಧಾರದ ಮೇಲೆ ಕಲ್ಲಿದ್ದಲು ಸಂಪರ್ಕಗಳ ಹಂಚಿಕೆಗೆ ಈ ನೀತಿಯು ಅವಕಾಶ ನೀಡುತ್ತದೆ ಎಂದು ಹೇಳಿದರು.

ಕಲ್ಲಿದ್ದಲು ಅಗತ್ಯವಿರುವ ಯಾವುದೇ ದೇಶೀಯ ಖರೀದಿದಾರರು ಅಂತಿಮ ಬಳಕೆಯನ್ನು ಲೆಕ್ಕಿಸದೆ ಸಂಪರ್ಕ ಹರಾಜಿನಲ್ಲಿ ಭಾಗವಹಿಸಬಹುದು ಎಂದು ಅವರು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮಹಿಳೆಯರ ಪುನರ್ ವಸತಿ ಯೋಜನೆ | ಅರ್ಜಿ ಆಹ್ವಾನ ; ಅವಧಿ ವಿಸ್ತರಣೆ

Published

on

ಸುದ್ದಿದಿನ,ದಾವಣಗೆರೆ: ಪ್ರಸಕ್ತ ಸಾಲಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಉದ್ಯೋಗಿನಿ, ಚೇತನಾ, ಧನಶ್ರೀ, ಲಿಂಗತ್ವ ಅಲ್ಪ ಸಂಖ್ಯಾತರ ಪುನರ್ವಸತಿ ಯೋಜನೆ ಹಾಗೂ ಮಾಜಿ ದೇವದಾಸಿ ಮಹಿಳೆಯರ ಪುನರ್ ವಸತಿ ಯೋಜನೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸುವ ಅವಧಿಯನ್ನು 15 ಜನವರಿ 2026 ರವರೆಗೆ ವಿಸ್ತರಿಸಲಾಗಿದೆ ಎಂದು ಇಲಾಖೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending