ದಿನದ ಸುದ್ದಿ
ಆತ್ಮಕತೆ | ಮಗು : ಆತಂಕದ ಕ್ಷಣಗಳು
- ರುದ್ರಪ್ಪ ಹನಗವಾಡಿ
ಮದುವೆಯಾಗಿ 1-2 ವರ್ಷ ಮಕ್ಕಳ ಕನಸು ಬೇಡ ಎಂದು ಯೋಚಿಸಿದ್ದರೂ ಅದೇನು ಸಫಲವಾಗದೆ ನನ್ನ ಮಗ ಶಿಶಿರ ಆಗಮಿಸಿದ್ದ.
ಭದ್ರಾವತಿಯಲ್ಲಿ ಇಂದಿರಾ ಅವರ ಮನೆಗೆ ಹೋಗಿ ಅಲ್ಲಿಂದ ಲೇಡಿ ಡಾಕ್ಟರ್ ಬಳಿ ಹೋಗಿ ತಪಾಸಣೆ ಮಾಡಿಸಿದೆವು. ನಮ್ಮಿಬ್ಬರ ರಕ್ತದ ಗುಂಪು ಆರ್ಹೆಚ್ ಪಾಸಿಟಿವ್ ನೆಗೆಟಿವ್ಗಳಾಗಿದ್ದು ನೀವು ರ್ಭಿಣಿ ಆಗಲು ಸಾಧ್ಯವಿಲ್ಲ. ಇದೆಲ್ಲ ಹೇಗಾಯಿತೆಂಬ ಅಭಿಪ್ರಾಯ ತಿಳಿಸಿ, ನಮಗೆ ದಿಗಿಲು ಬೀಳುವಂತೆ ವಿವರಿಸಿದ್ದಳು. ನಮಗಾರಿಗೂ ಬೇರೆ ಡಾಕ್ಟರ್ ಪರಿಚಯವಿಲ್ಲದೆ ಇರುವಾಗ ಡಾ. ಹೆಚ್. ಶಿವರಾಂ ಅವರು ಮೆಗ್ಗಾನ್ ಹಾಸ್ಪಿಟಲ್ನಲ್ಲಿ ಜನರಲ್ ಫಿಜಿಸಿಯನ್ ಆಗಿ ಇರುವುದು ತಿಳಿಯಿತು.
ಶಿವರಾಂ ಡಾಕ್ಟರ್ ನಮಗೆ ಮೈಸೂರಿನಲ್ಲಿರುವಾಗ ಎಸ್ವೈಎಸ್ ರ್ಯಕ್ರಮಗಳ ಹುಡುಗರ ಆರೋಗ್ಯ ಸಮಸ್ಯೆ ಬಂದಾಗ ಉಪಚರಿಸುತ್ತಿದ್ದರು. ಡಾ. ಶಿವರಾಂ ಅವರು ಹಾಸನ ಜಿಲ್ಲೆಯ ಸಕಲೇಶಪುರದ ಹಾನಬಾಳ್ ಗ್ರಾಮದವರು. ಶಿವರಾಂ ಅವರಿಗೆ ರ್ಣಚಂದ್ರ ತೇಜಸ್ವಿ, ಕಡಿದಾಳ್ ಶಾಮಣ್ಣ, ಸುಂದರೇಶ್, ರವರ್ಮಕುಮಾರ್ ಇವರೆಲ್ಲ ಪರಿಚಯವಿದ್ದವರು. ಮತ್ತು ನನಗೆ ಮೈಸೂರಿನಲ್ಲಿ ಓದುವಾಗಲೇ ಪರಿಚಯವಾಗಿದ್ದರು. ನಾನು ಮೈಸೂರು ಮಹಾರಾಜಾ ಕಾಲೇಜಿನಿಂದ ಬಿಆರ್ಪಿಗೆ ಬಂದದ್ದು, ನಂತರ ಮದುವೆಯಾದದ್ದು ಈಗ ನನ್ನ ಹೆಂಡತಿ ಗರ್ಭಿಣಿ ಆಗಿರುವ ಸುದ್ದಿ ತಿಳಿದು ಸಂತೋಷಗೊಂಡರು. ನಂತರ ಗಾಯತ್ರಿ ಭದ್ರಾವತಿಯ ಲೇಡಿ ಡಾಕ್ಟರ್ ಹೇಳಿದ ವಿಚಾರ ತಿಳಿಸಿದೆ.
ಅವರು ತಪಾಸಣೆ ನಡೆಸಿ ಇದೆಲ್ಲ ಏನೂ ಇಲ್ಲ ಇಡೀ ಏಶಿಯಾ ಖಂಡದಲ್ಲಿ ಶೇ 15ರಷ್ಟು ಜನರು ಆರ್ಹೆಚ್ ಪಾಸಿಟಿವ್ ನೆಗಟಿವ್ ಸಮಸ್ಯೆ ಇರುವವರು, ಅದಕ್ಕಾಗಿ ನೀವು ಚಿಂತಿಸಬೇಕಾಗಿಲ್ಲ ಎಂದು ಹೇಳಿ ಆಗ ಗೈನಾಕಾಲಜಿಸ್ಟ್ ಆಗಿದ್ದ ಡಾ. ಮುರುಗೇಂದ್ರಪ್ಪ ಅವರಿಗೆ ರೆಫರ್ ಮಾಡಿ ತಪಾಸಣೆ ನಡೆಸಿದ ನಂತರ ಕೆಲವು ಸಲಹೆ ನೀಡಿದರು. ಕೆಲವು ದಿನ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ ಮೇರೆಗೆ ನಾವಿಬ್ಬರೂ ಮೆಗ್ಗಾನ್ ಆಸ್ಪತ್ರೆಯಲ್ಲಿ ಇರಬೇಕಾಗಿ ಬಂತು. ಈ ಸಮಯದಲ್ಲಿ ಗಾಯತ್ರಿಗೆ ಹಾಲು ಮೆತ್ತನೆ ಅನ್ನ ಬಿಟ್ಟರೆ ಬೇರೇನೂ ಪಥ್ಯ ಹೇಳಿರಲಿಲ್ಲ. ನಾವು ಅದಕ್ಕಾಗಿ ಒಂದು ಸ್ಟವ್ ತಂದು ಅನ್ನ ಮತ್ತು ಹಾಲನ್ನು ನಮಗೆ ನೀಡಿದ ರೂಂನಲ್ಲಿಯೇ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೆವು. ನನಗೆ ಇಂದಿರಾ ಮತ್ತವರ ಸ್ನೇಹಿತರಾದ ಸಾಕಮ್ಮ ಹಾಗೂ ಎಂ.ಬಿ. ನಟರಾಜ್ ಅವರ ಪತ್ನಿ ಲಕ್ಷ್ಮಿ ಇವರುಗಳ ಮನೆಯಿಂದ ಚೆನ್ನಾಗಿರುವ ಊಟ ಬರುತ್ತಿತ್ತು. ಜೊತೆಗೆ ಶಿವರಾಂ ಅವರ ನಿವಾಸ ಕೂಡ ಆಸ್ಪತ್ರೆ ಹತ್ತಿರವಿತ್ತು. ನನಗೆ ಅವರ ಮನೆಗೆ ಹೋಗಿ ಊಟ ಮಾಡಿಕೊಂಡು ಬರಲು ಶಿವರಾಂ ಡಾಕ್ಟರ್ ಹೇಳುತ್ತಿದ್ದರು.
ಶಿವರಾಂ ಅವರ ಶ್ರೀಮತಿ ಆಶಾ, ಅತ್ತೆ ಶಾರದಮ್ಮ ಮತ್ತವರ ತಾಯಿ ತಂದೆ ಕೂಡ ಮನೆಯಲ್ಲೇ ಇದ್ದರು. ಅವರಿಗೆ ಇಬ್ಬರು ಮುದ್ದಾದ ಹೆಣ್ಣು ಮಕ್ಕಳು ಇದ್ದರು. ಶಿವರಾಂ ಅವರ ಮಾವ ಸ್ವಾತಂತ್ರ್ಯ ಹೋರಾಟಗಾರರು. ರೈತ ಸಂಘದಲ್ಲಿ ಸಕ್ರಿಯ ನಾಯಕರಾಗಿದ್ದರು. ಈ ಎಲ್ಲರ ಪರಿಚಯದಿಂದಾಗಿ ನನಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಗಾಯತ್ರಿಯ ಆರೋಗ್ಯ ತಪಾಸಣೆ ಸಮಯದಲ್ಲಿ ಇದ್ದ ಆತಂಕ ದೂರವಾಗಿತ್ತು. ಪ್ರಭು ಜೊತೆಗೆ, ದಿವಾಕರ ಹೆಗ್ಗಡೆ ಆಗ ತಾನೆ ತನ್ನ ಪುಸ್ತಕದ ಅಂಗಡಿ ತೆರೆದುಕೊಂಡಿದ್ದರು. ಜೊತೆಗೆ ಲಂಕೇಶ್ ಪತ್ರಿಕೆಯ ವರದಿಗಾರನೂ ಆಗಿ ಶಿವಮೊಗ್ಗದಲ್ಲಿದ್ದರು. ನಾನು ಬಿಆರ್ಪಿಯಿಂದ ಊರಿಗೆ ಬರುವಾಗಲೆಲ್ಲ ನನ್ನ ಲಗ್ಗೇಜನ್ನು ಹೆಗ್ಗಡೆ ಬುಕ್ ಸ್ಟಾಲ್ನಲ್ಲಿಟ್ಟು ಪ್ರಭು ಜೊತೆ ಮಾತಾಡಿಕೊಂಡು ರಾತ್ರಿ ಬಿಆರ್ಪಿಗೆ ಹೋಗುತ್ತಿದ್ದೆ. ಹಾಗಾಗಿ ಶಿವಮೊಗ್ಗದಲ್ಲಿದ್ದ ಪ್ರಭು, ಮಂಜಪ್ಪ, ದಿವಾಕರ, ಹೆಗ್ಗಡೆ, ಡಾ. ಶಿವರಾಂ, ಎಂ.ಬಿ. ನಟರಾಜ್ ಇವರೆಲ್ಲರ ಒಡನಾಟದಿಂದ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಗಾಯತ್ರಿ ವಿಶ್ರಾಂತಿಯಲ್ಲಿದ್ದಾಗ, ನನಗಿದ್ದ ಗೆಳೆಯರ ಸಹಾಯದಿಂದ ನಾವು ನಾವೇ ನಿಭಾಯಿಸಿಕೊಂಡೆವು. ಇಂತಹ ಸರ್ಭಗಳಲ್ಲಿ ಹೆಣ್ಣು ಮಕ್ಕಳಿಗೆ ಏಕಾಂಗಿತನ ಮತ್ತು ತೌರ ಮನೆ ಕಾಡುತ್ತದೆ. ಆದರೆ ಎರಡೂ ಕಡೆಯಿಂದ ನಮಗೆ ಸಾನ್ನಿಧ್ಯದ ಅನುಕೂಲ ಪಡೆಯುವ ಅವಕಾಶವಾಗಲಿಲ್ಲ. ಇದ್ದ ಸ್ನೇಹ ಬಳಗವೇ ಈ ಎಲ್ಲ ಕೊರತೆಯನ್ನು ನಮಗೆ ಪೂರೈಸಿತ್ತು.
ಆ ನಂತರ ಪ್ರತಿ ತಿಂಗಳೂ ತಪಾಸಣೆ ಮತ್ತು ಶುಶ್ರೂಷೆಯ ನಂತರ 3-4 ದಿನ ಮುಂಚಿತವಾಗಿ ಹೆರಿಗೆಗೆ ಬರಬೇಕೆಂದು ಸೂಚಿಸಿದ್ದರು. ಅದರಂತೆ ಹೋಗಿ ಆಸ್ಪತ್ರೆ ಸೇರಿದ್ದೆವು. ನಾವು ಆಸ್ಪತ್ರೆಯಲ್ಲಿ ಇದ್ದಾಗ ಡಾ. ಶಿವರಾಂ ಅವರು ನಮ್ಮಿಬ್ಬರನ್ನು ಸಂಜೆ ಊಟಕ್ಕೆ ಮನೆಗೆ ಆಹ್ವಾನಿಸಿದ್ದರು. ಅವರದು ತುಂಬಿದ ಮನೆಯಾಗಿತ್ತು. ಬಸುರಿ ಹೆಂಗಸೆAದು ಡಾ. ಶಿವರಾಂ ಅವರ ಹೆಂಡತಿ ಆಶಾ ಮತ್ತು ಅವರ ತಾಯಿ ಶಾರದಮ್ಮನವರು ವಿಶೇಷ ಅಡುಗೆ ಮಾಡಿ ಅಕ್ಕರೆಯಿಂದ ಆದರಿಸುತ್ತಿದ್ದರು. ಅಂದು ಸಂಜೆ ಅವಳಿನ್ನೂ ರ್ತಿ ಊಟ ಮುಗಿಸುವ ಮುಂಚೆಯೇ ಹೆರಿಗೆ ನೋವು ಕಾಣಸಿಕೊಂಡಿತು. ತಕ್ಷಣ ಆಸ್ಪತ್ರೆಗೆ ಡಾ. ಶಿವರಾಂ ಅವರು ದಾಖಲು ಮಾಡಿಸಿದರು. ಇಡೀ ರಾತ್ರಿ ಹೆರಿಗೆ ರ್ಡ್ ಒಳಗೆ ಇದ್ದ ಗಾಯತ್ರಿಗೆ ಮಾರನೆ ದಿನ ಮಧ್ಯಾಹ್ನವಾದರೂ ಹೆರಿಗೆ ಆಗಿರಲಿಲ್ಲ. ನಾನು ಹೊರಗಡೆ ಇದ್ದ ಬೆಂಚ್ ಮೇಲೆ ಕೂತು ಕಾಯುತ್ತಿದ್ದೆ. ಪ್ರಭು ಫ್ರೆಂಡ್ ಶಶಿ ಮೂಲಕ ಭದ್ರಾವತಿಗೆ ಹೋಗಿ ಇಂದಿರಾ ಅವರನ್ನು ಕರೆದುಕೊಂಡು ಬರಲು ಕಳಿಸಿದ್ದೆ. ಅವರು ಆಫೀಸಿಗೆ ರಜೆ ಹಾಕಿ ಬರುವ ಸಮಯಕ್ಕಾಗಲೇ ಗಾಯತ್ರಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ದಿನಾಂಕ 11-03-81ಸಂಜೆ 4ಗಂಟೆ ಸುಮಾರಿಗೆ ಗಂಡು ಮಗು ಜನನವಾಗಿತ್ತು. ಡಾ. ಶಿವರಾಂ ಮನೆಯ ಇಬ್ಬರು ಮಕ್ಕಳು ಸೇರಿದಂತೆ ಎಲ್ಲರೂ ಬಂದು ನೋಡಿ ಸಂತಸಪಟ್ಟರು. ಮಗುವಿನ ಬೆಳವಣಿಗೆ ಹೆಚ್ಚಾಗಿದ್ದ ಕಾರಣ ಈoಡಿಛಿeಠಿs ಮುಖಾಂತರ ಮಗುವನ್ನು ಹೊರತೆಗೆಯಬೇಕಾಯಿತು ಎಂದು ಡಾಕ್ಟರ್ ಹೇಳಿದರು. ಭದ್ರಾವತಿಯಿಂದ ಬಂದ ಇಂದಿರಾ ಕೂಡಲೆ ರ್ಣ ಜವಾಬ್ದಾರಿ ತೆಗೆದುಕೊಂಡು, ಅಲ್ಲಿಂದ ಅವರ ಮನೆಗೆ ಕರೆದುಕೊಂಡು ಹೋಗಿ ಒಂದು ತಿಂಗಳ ಕಾಲ ಬಾಣಂತನ ಮಾಡಿ ಬಿ.ಆರ್.ಪಿಗೆ ನಾವು ಬರುವವರೆಗೆ ಮಗು ಬಾಣಂತಿಯನ್ನು ನೋಡಿಕೊಂಡದ್ದು ಮರೆಯಲಾಗದ ಘಟನೆಯಾಗಿ ಉಳಿದಿದೆ.
ಭದ್ರಾವತಿಗೆ ಮಗು ಬಾಣಂತಿ ಕೃಷ್ಣಪ್ಪನವರ ಮನೆಗೆ ಹೋಗಿ ಉಳಿದಿದ್ದೆವು. ಮಗುವಿನ ಬಾಣಂತನ ಆರೈಕೆಯನ್ನು ಮಾಡಲು ಶಿವಮೊಗ್ಗ ಮುನೀರ್ ಅವರ ತಾಯಿ ಬಚ್ಚಿಮ್ಮ ಅವರು ರ್ಕಾರಿ ಆಸ್ಟತ್ರೆಯಲ್ಲಿ ರ್ಸ ಆಗಿದ್ದವರು. ಅವರು ಬೆಳಿಗ್ಗೆ ಮತ್ತು ಸಂಜೆ ಬಂದು ಸಹಾಯ ಮಾಡುತ್ತಿದ್ದರು. ಇಂದಿರಾ ಬೆಳಿಗ್ಗೆ ಬಾಣಂತಿಗೆ ಮತ್ತು ಮತ್ತೆಲ್ಲರಿಗೂ ಅಡುಗೆ ಮಾಡಿಟ್ಟು ಆಫೀಸಿಗೆ ಹೋಗುತ್ತಿದ್ದರು. ಗಾಯತ್ರಿ ಮೌಖಿಕವಾಗಿ ಅವಳೇನು ಹೇಳದಿದ್ದರೂ ಭಾವನಾತ್ಮಕವಾಗಿ ಅವಳಿಗೆ ಬಹಳ ಕಷ್ಟದ ದಿನಗಳಾಗಿದ್ದವು. ಅವನ್ನೆಲ್ಲ ಮಗುವಿನ ಮುಖ ನೋಡಿಕೊಂಡು ಬಚ್ಚಿಮ್ಮನ ಶುಶ್ರೂಷೆಯಲ್ಲಿ ಕಾಲ ಹಾಕುತ್ತಿದ್ದಳು. ನಾನು ಕೂಡ ಮಗುವಿಗೆ ಎಣ್ಣೆ ಹಚ್ಚಿ ಬಿಸಿನೀರ ಸ್ನಾನ ಮಾಡಿಸುವುದನ್ನು ಬಚ್ಚಿಮ್ಮನಿಂದ ವಿಶೇಷವಾಗಿ ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೆ. ಒಂದು ತಿಂಗಳ ನಂತರ ಬಿಆರ್ಪಿಯ ಮನೆಗೆ ಬಂದಿದ್ದೆವು. ಈ ನಡುವೆ ಮಾಧ್ಯಮಿಕ ತರಗತಿಯಲ್ಲಿ ಓದುತ್ತಿದ್ದ ನನ್ನ ತಂಗಿಯನ್ನು ಕರೆತಂದು ಬಿಆರ್ಪಿಯಲ್ಲಿ ಶಾಲೆಗೆ ಸೇರಿಸಿದ್ದೆ. ನಾವು ಬಿಆರ್ಪಿಗೆ ಬಂದ ಮೇಲೆ ಊರಿನಿಂದ ಅವ್ವ ಕೂಡ ಬಂದು ಸ್ವಲ್ಪ ದಿನ ಬಾಣಂತನ ಮಾಡುವ ಶಾಸ್ತ್ರ ಮಾಡಿದ್ದಳು.
ಆ ನಂತರ ಮೂರು ತಿಂಗಳಲ್ಲಿ ಮಗುವಿಗೆ ನಾಮಕರಣ ಮಾಡುವ ಸಣ್ಣ ಸಮಾರಂಭವನ್ನು ರ್ಪಡಿಸಿದ್ದೆವು. ಆಗ ಇಂದಿರಾ – ಕೃಷ್ಣಪ್ಪನವರು ಸೇರಿದಂತೆ ಬಿಆರ್ಪಿಯಲ್ಲಿನ ಕೇಶವರ್ತಿ, ಪ್ರಭು, ಗ್ರಂಥಪಾಲಕರಾಗಿದ್ದ ರಾಮಕೃಷ್ಣಗೌಡ ಇನ್ನೂ ಅನೇಕರು ಭಾಗವಹಿಸಿ ಶಿಶಿರ ಎಂದು ಹೆಸರಿಟ್ಟು ಸಂಭ್ರಮ ಪಟ್ಟೆವು. ಮಗುವಿಗೆ 3 ತಿಂಗಳು ಮುಗಿದ ನಂತರ ನಮ್ಮ ಮನೆ ಹತ್ತಿರದಲ್ಲೇ ಇದ್ದ ಅರವಿಂದ ಆಶ್ರಮದವರು ನಡೆಸುತ್ತಿದ್ದ ಪ್ರಾಥಮಿಕ ಶಾಲೆಗೆ ಗಾಯತ್ರಿ ಟೀಚರ್ ಆಗಿ ಸೇರಿಕೊಂಡಳು. ಶಿಶಿರನನ್ನು ಬೆಳಿಗ್ಗೆ ಸ್ನಾನ ಮಾಡಿಸಿ ತಿಂಡಿ ತಿನಿಸಿದ್ದು ಬಿಟ್ಟರೆ ಅವನನ್ನು ನಮ್ಮ ಇಡೀ ಬೀದಿಯಲ್ಲಿರುವವರು ಎತ್ತಿಕೊಂಡು ಹೋಗಿ ಊಟ ನಿದ್ದೆ ಮಾಡಿಸಿಕೊಂಡು ಸಂಜೆಗೆ ಮನೆಗೆ ತಂದು ಬಿಡುತ್ತಿದ್ದರು. ಅವನ ಆಗಮನದಿಂದ ನಮಗಿದ್ದ ಪ್ರತ್ಯೇಕತೆ ಕಳೆದು ಎಲ್ಲರೂ ನಮ್ಮನ್ನು `ಬುಡ್ಲ್ಲಿ’ ಅಪ್ಪ ಅಮ್ಮ ಎಂದು ಮಕ್ಕಳು, ದೊಡ್ಡವರು ಹೊರಗಡೆ ಹೋದಾಗ ಗುರುತಿಸಿ ಮಾತಾಡುವಂತಾಗಿತ್ತು. ನಮಗಿಂತಲೂ `ಬುಡ್ಲಿ’ಗೆ ಹೆಚ್ಚು ಪರಿಚಯದ ಹುಡುಗರ ದಂಡು ಸೃಷ್ಟಿಯಾಗಿತ್ತು. ಇನ್ನು ಇವಳು ಟೀಚರ್ ಕೆಲಸದಿಂದ ನನ್ನ ರ್ಥಿಕ ಸಂಕಷ್ಟಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾದವು. ನಾನು ಮಾಡಿಕೊಂಡಿದ್ದ 15 ಸಾವಿರ ಸಾಲಕ್ಕೂ ನನಗೆ ವಿಶ್ವವಿದ್ಯಾಲಯದಿಂದ ಬರಬೇಕಾಗಿದ್ದ ಅರರ್ಸ್ ಬಂದು ನನ್ನ ಎಲ್ಲ ಸಾಲವನ್ನು ತೀರಿಸಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿತ್ತು.
ನಾನು ಕೆಪಿಎಸ್ಸಿ ಪರೀಕ್ಷೆ ತೆಗೆದುಕೊಂಡದ್ದು ಮೊದಲೇ ಹೇಳಿದ್ದೇನೆ. ಅದರ ಪರೀಕ್ಷೆ ಬರೆಯಲು ಮೈಸೂರನ್ನು ಕೇಂದ್ರವಾಗಿ ಆಯ್ಕೆ ಮಾಡಿಕೊಂಡಿದ್ದ ಕಾರಣ 1981ರಲ್ಲೇ ಮೈಸೂರಿಗೆ ಹೋಗಿ ಸುಮಾರು 15 ದಿನಗಳ ರಜೆ ಹಾಕಿ ಪರೀಕ್ಷೆ ಬರೆದೆ. ಆ ಸಮಯದಲ್ಲಿ ರೊಟ್ಟಿ, ಚಟ್ನಿ ಪುಡಿ, ಪುಳಿಯೋಗರೆ ವಾರಕ್ಕೂ ಹೆಚ್ಚು ಆಗುವಷ್ಟನ್ನು ಮಾಡಿಕೊಂಡು ಗಂಗೋತ್ರಿಯಲ್ಲಿರುವ ವಿಶ್ವವಿದ್ಯಾಲಯದ ಅತಿಥಿ ಗೃಹದಲ್ಲಿ ನಾವು ಮೂವರೂ ಉಳಿಯುತ್ತಿದ್ದೆವು. ನಾನು ಪರೀಕ್ಷೆಗೆ ಹೋದಾಗ ಗಾಯತ್ರಿ ಶಿಶಿರ ಇಬ್ಬರೇ ಅಲ್ಲಿರುವ ಗಿಡಮರಗಳನ್ನು ನೋಡುತ್ತಾ ಇರುತ್ತಿದ್ದರು.
ಈ ಸಮಯದಲ್ಲಿ ದೇವಯ್ಯ ಹರವೆ ಮೈಸೂರಿನಲ್ಲಿ ಮಾನಸ ಗಂಗೋತ್ರಿಯಲ್ಲಿ ಕನ್ನಡ ಅಧ್ಯಾಪಕನಾಗಿದ್ದು, ಡಿ.ಎಸ್.ಎಸ್. ಸ್ಥಾಪಕ ಸದಸ್ಯರುಗಳ ಜೊತೆ ಗಟ್ಟಿ ದನಿಯಾಗಿದ್ದರು. ನಾನು ಇರುವ ಸುದ್ದಿ ತಿಳಿದು ನಮ್ಮ ಗೆಸ್ಟ್ಹೌಸ್ಗೆ ಬಂದು ಪುಳಿಯೋಗರೆ ತಿಂದು `ಗಾಯತ್ರಮ್ಮ, ಎಲ್ಲಾ ಪುಳಿಯೋಗರೆ ನನಗೆ ಕೊಡಿ ರುದ್ರಣ್ಣನಿಗೆ ನಾನು ಬಿಸಿ ಮಾಂಸದೂಟ ಮಾಡಿಸುವೆ’ ಎಂದು ಹೇಳಿ ನಮ್ಮೆಲ್ಲರನ್ನು ತನ್ನ ಮನೆಗೂ ಕರೆದುಕೊಂಡು ಹೋಗಿದ್ದ. ದೇವಯ್ಯ ಹರವೆ ಮತ್ತು ಪುಷ್ಪ ನಮಗೆ ಆಗ ಪರಿಚಯವಾಗಿ ನಂತರದ ದಿನಗಳಲ್ಲಿ ಅವರ ಮನೆಗೆ ಪುಳಿಯೋಗರೆಯೊಡನೆ ಆಗಾಗ ಹೋಗಿ ಬರುತ್ತಿದ್ದೆವು.
ಬುಡ್ಲಿಯನ್ನು ನೋಡುವ ನೆಪದಲ್ಲಿ ವಿಶಾಖಪಟ್ಟಣದಲ್ಲಿದ್ದ ಗಾಯತ್ರಿಯ ದೊಡ್ಡ ಅಕ್ಕ ಶಕುಂತಲಾರ್ತಿ ಮತ್ತು ಅವರ ಹಿರಿಯ ಮಗಳಾದ ಮೀನಾ ಬಿಆರ್ಪಿಗೆ ಬಂದು ಒಂದು ದಿನ ಉಳಿದು ನಂತರ ನರಸಿಂಹರಾಜಪುರಕ್ಕೆ ಹೋಗಿದ್ದರು. ಆಗ ಅವರಿಂದ ಗಾಯತ್ರಿ ತಂದೆ ತಾಯಿ ಇಬ್ಬರಿಗೂ ನಾವಿಬ್ಬರು ಮತ್ತು `ಬುಡ್ಲಿ’ ಆರಾಮವಾಗಿ ಇರುವುದಾಗಿಯೂ ಮತ್ತು ಅವರಿವರು ತೇಲಿ ಬಿಡುತ್ತಿದ್ದ ಸುಳ್ಳಿನ ಸುದ್ದಿಗಳಲ್ಲಿ ಸತ್ಯಾಂಶವಿಲ್ಲವೆAದು ತಿಳಿಸಿ, ಅವರಿಗೆ ನಮ್ಮ ಮದುವೆಯ ಘಟನೆಯ ನಂತರ ಸ್ವಲ್ಪಮಟ್ಟಿನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿತ್ತು.
ಕೃಷ್ಣಪ್ಪನವರು ಎಸ್ವೈಎಸ್ ಸಂಘಟನೆಯಲ್ಲಿ 1970ರ ದಶಕದ ಪ್ರಾರಂಭದಿAದ ಇದ್ದರೂ, ಕ್ರಮೇಣ ದಲಿತರ ಸಮಸ್ಯೆಗಳಿಗೆ ಪ್ರತ್ಯೇಕ ಸಂಘಟನೆಯ ಅವಶ್ಯಕತೆ ಕಂಡುಕೊAಡು ಭದ್ರಾವತಿಯಲ್ಲಿ ರಾಜ್ಯ ಮಟ್ಟದ ಜಾತಿ ವಿನಾಶ ಸಮ್ಮೇಳನ ಆಯೋಜಿಸಿದ್ದರು. ಭದ್ರಾವತಿಯಲ್ಲಿ ಆಗಿನ ಕೃಷ್ಣಪ್ಪನವರ ತಂಡದಲ್ಲಿ, ಎನ್. ಗಿರಿಯಪ್ಪ, ಟಿ. ರಾಜಣ್ಣ, ಹಾಲಯ್ಯ, ನರಸಿಂಹಯ್ಯ, ಚನ್ನಕೇಶವ, ಗಂಗಣ್ಣ, ಶಿವಲಿಂಗ, ಚಂದ್ರನ್, ಅತ್ತಿಗುಂದ ಕರಿಯಪ್ಪ, ಮಹಾಲಿಂಗರ್ತಿ ಜಿ., ಎಂಪಿಎಂನ ಕೃಷ್ಣರ್ತಿ ಇವರೆಲ್ಲ ಆಪ್ತ ವಲಯದಲ್ಲಿದ್ದು ಏನೇ ಹೋರಾಟದ ಕರೆ ಕೊಟ್ಟಾಗ ಬಂದು ಸೇರುತ್ತಿದ್ದರು.
ಇತರ ಮಿತ್ರ ಪಡೆ ಭದ್ರಾವತಿಯಲ್ಲಿ ದೊಡ್ಡದಿತ್ತು. ವಕೀಲ ನಾಗೇಂದ್ರರಾವ್, ಪ್ರೊ. ಚಂದ್ರಶೇಖರಯ್ಯ, ಬಿ. ರಾಜಣ್ಣ, ಶಿವಮೊಗ್ಗದ ಮುನೀರ್, ಸಾಸ್ವೆಹಳ್ಳಿ ಹಾಲಪ್ಪ, ಎಂ.ಎಲ್. ನಾಗಭೂಷಣ, ವೈ.ಎನ್. ಆಚಾರ್, ಶಿವಪ್ರಸಾದ್ (ವಿಐಎಸ್ಎಲ್), ಚಂದ್ರಪ್ರಸಾದ್ ತ್ಯಾಗಿ, ನಿಸಾರ್ ಅಹಮದ್, ರಾಚಪ್ಪ ಹೆಚ್, ವಾಗೀಶ್, ರಾಘವೇಂದ್ರ ರಾವ್ (ದಲಿತರ ಪರ ವಕೀಲರಾಗಿ ಮೊಕದ್ದಮೆಗಳನ್ನು ನಡೆಸುತ್ತಿದ್ದರು) ಇದ್ದರು. ಮಾದೇವ, ಸಿದ್ದಲಿಂಗಯ್ಯ, ವೆಂಕಟಸ್ವಾಮಿ, ಮುನಿವೆಂಕಟಪ್ಪ, ನಾರಾಯಣಸ್ವಾಮಿ, ದಿವಾಕರ ಹೆಗ್ಗಡೆ, ಎಂ.ಬಿ. ನಟರಾಜ್, ಸತ್ಯನಾರಾಯಣರಾವ್ ಅಣತಿ, ಚನ್ನಣ್ಣ ವಾಲೀಕಾರ, ದೇವಯ್ಯ ಹರವೆ ಇನ್ನು ಅನೇಕರು ರಾಜ್ಯದಾದ್ಯಂತ ಚೆದುರಿದ್ದ ಕೃಷ್ಣಪ್ಪನವರ ಹೋರಾಟದ ಸಂಗಾತಿಗಳಾಗಿದ್ದರು.
ಇವರೆಲ್ಲರ ಸಮಾಗಮವೆಂಬಂತೆ ಬಿಆರ್ಪಿಯಲ್ಲಿರುವ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಎರಡು ದಿನಗಳ ದಲಿತ ಸರ್ಷ ಸಮಿತಿಯ ತರಬೇತಿ ಶಿಬಿರವನ್ನು ಆಯೋಜಿಸಿದ್ದರು. ಆಗ ಬಂದ ಸಂಘಟಕರಿಗೆ ಊಟ ವಸತಿ ಮತ್ತು ಬಸ್ ರ್ಜ್ ಹೊಂದಿಸುವಲ್ಲಿ ಕೃಷ್ಣಪ್ಪನವರು ಪಡುತ್ತಿದ್ದ ಪಾಡನ್ನು ಬೇರೆ ಯಾವ ದಲಿತ ಸಂಘಟಕರು ಅನುಭವಿಸಿಲ್ಲ. ನಾನು ಮತ್ತು ನಮ್ಮಲ್ಲಿನ ಪ್ರಗತಿಪರ ಅಧ್ಯಾಪಕರು, ಸಹೋದ್ಯೋಗಿಗಳು ಸೇರಿ ಸ್ವಲ್ಪ ಹಣ ಸಂಗ್ರಹಿಸಿಕೊಟ್ಟಿದ್ದೆವು. ಅಲ್ಲಲ್ಲೆ ಪ್ರಗತಿಪರವಾಗಿ ಬರೆದುಕೊಂಡು ಹೋರಾಟಗಳನ್ನು ಮಾಡುತ್ತಿದ್ದ ದಲಿತರು ಅಂಬೇಡ್ಕರ್ ಸಿದ್ಧಾಂತದ ಗಟ್ಟಿ ನೆಲೆಯಲ್ಲಿ ಆತ್ಮೀಯ ಸಂಬಂಧಿಕರಂತೆ ಕೃಷ್ಣಪ್ಪನವರ ಸುತ್ತ ಒಟ್ಟುಗೂಡಿ ಇಂತಹ ಸಮಾವೇಶಗಳಲ್ಲಿ ಭಾಗವಹಿಸಿ ರ್ಚಿಸುತ್ತಿದ್ದರು.
ಬುಡ್ಲಿ ಬಂದ ನಂತರ, ಟೀಚರ್ ಕೆಲಸ ಸೇರಿದ ಗಾಯತ್ರಿ ಮನೆಯ ಹಿಂದೆ ಮುಂದೆ ಇದ್ದ ಜಾಗದಲ್ಲಿ ತರಕಾರಿ ಜೊತೆಗೆ ಇದ್ದ ಮಾವಿನ ಮರ ಮತ್ತು ದೊಡ್ಡ ನುಗ್ಗೆಮರ, ಸೀತಾಫಲದ ಮರಗಳನ್ನು ಸಂರಕ್ಷಿಸಿಕೊಂಡು ಸಾಕಷ್ಟು ಫಲ ಪಡೆಯುತ್ತಿದ್ದೆವು. ಬಂದ ಸಂಬಳದಲ್ಲಿ ಹತ್ತಿರದಲ್ಲಿದ್ದ ಲಕ್ಕವಳ್ಳಿಯಲ್ಲಿ ನಡೆಯುವ ಸಂತೆಗೆ ಹೋಗಿ ಅಗತ್ಯ ವಸ್ತುಗಳನ್ನು ವಾರಕ್ಕೊಮ್ಮೆ ಕೊಂಡು ಬರುತ್ತಿದ್ದೆವು. ಬಂದ ಎಲ್ಲ ಸಂಬಳದಲ್ಲಿ ದುಂದಾಗಿ ರ್ಚು ಮಾಡುತ್ತಾ ಉಳಿತಾಯ ಮತ್ತು ಅಚ್ಚುಕಟ್ಟುತನವಿಲ್ಲದೆ ಸ್ವಚ್ಛಂದವಾಗಿದ್ದ ನನಗೆ ಮದುವೆ ನಂತರ ಮಗು ಶಿಶಿರ ಬಂದು ಸಂಸಾರ ಜೀವನದ ಹೊಸ ಜೀವನಾನುಭವವನ್ನು ನೀಡಿತೆಂದೇ ಹೇಳಬೇಕು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ
ಸುದ್ದಿದಿನ,ದಾವಣಗೆರೆ: ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾವನೆ ಎನ್ಎಚ್ ಎಂ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಮಧ್ಯಸ್ತಿಕೆ ವಹಿಸಿ ಸರಿಪಡಿಸಲು ಶಿಪಾರಸ್ಸು ಮಾಡಬೇಕು. ಈ ಬಗ್ಗೆ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಪ್ರಸ್ತಾಪ ಮಾಡಬೇಕೆಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸುಮಾರು 30 ಸಾವಿರ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಸಿಬ್ಬಂದಿಗಳಿಗೆ ನೇಮಕಾತಿ ಮತ್ತು ವರ್ಗಾವಣೆ ಒಳಗೊಂಡು ಮಾನವ ಸಂಪನ್ಮೂಲ (HR Policy) ನೀತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕಳೆದ ಅ.28ರಂದು ಆದೇಶ ಹೊರಡಿಸಿ, ಅಭಿಯಾನ ನಿರ್ದೇಶಕರು, ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಮುಖ್ಯ ಆರ್ಥಿಕ ಅಧಿಕಾರಿಗಳಿಗೆ ವರದಿ ನೀಡಲು ಸೂಚನೆ ನೀಡಿದ್ದಾರೆ.
ಈ ವಿಷಯದ ಬಗ್ಗೆ ಈಗಾಗಲೇ ಅಭಿಯಾನ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಗುತ್ತಿಗೆ ನೌಕರರ ವೃಂದವಾರು ಸಂಘಟನೆಗಳ ಅಭಿಪ್ರಾಯ ನೀಡಲಾಗಿದೆ. ಎಲ್ಲಾ ಸಂಘಟನೆಗಳು ಈ ಒಂದು ಹೊಸ ಸಿಬ್ಬಂದಿಗಳಿಗೆ ಮಾರಕ ಇರುವಂತಹ ಮಾನವ ಸಂಪನ್ಮೂಲ ನೀತಿಯನ್ನು ಜಾರಿಗೊಳಿಸಲು ವಿರೋಧ ವ್ಯಕ್ತಪಡಿಸಿವೆ.
ಸರ್ಕಾರ ಈಗ ನೀಡುತ್ತಿರುವ ಕಡಿಮೆ ವೇತನದಲ್ಲಿ ಈ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಿಬ್ಬಂದಿಗಳಿಗೆ ಖಾಯಂ ಸಿಬ್ಬಂದಿಗಳಂತೆ ಕಡ್ಡಾಯ ವರ್ಗಾವಣೆ ಮಾಡಿದರೆ ಈ ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ? ಮೂರು ಮೂರು ತಿಂಗಳಿಗೊಮ್ಮೆ ವೇತನ ಆಗುತ್ತಿದ್ದು ಬೇರೆ ಜಿಲ್ಲೆಗೆ ಕಡ್ಡಾಯ ವರ್ಗಾವಣೆ ಮಾಡಿದ್ದರೆ ಮನೆ ಬಾಡಿಗೆ ಕಟ್ಟಲಾಗದೇ ಬೀದಿಗೆ ಬರಬೇಕಿದೆ ಎಂದು ಶಾಸಕರಿಗೆ ಮನವರಿಕೆ ಮಾಡಿದರು.
ಒಂದು ವೇಳೆ ಇಂತಹ ಕ್ರಮ ಕೈಗೊಂಡರೆ ಖಾಯಂ ಸಿಬ್ಬಂದಿಗಳಿಗೆ ನೀಡಿದಂತೆ ಎಲ್ಲಾ ಸೌಕರ್ಯ ಹಾಗೂ ಖಾಯಂ ಸೇರಿದಂತೆ ವೇತನ ಹೆಚ್ಚಳ ಮಾಡಿ, ಟಿಎ, ಡಿಎ, ಎಚ್ ಆರ್ ಎ ನೀಡಿ ಇಂತಹ ಆದೇಶ ಮಾಡಬೇಕು. ಸಿಬ್ಬಂದಿಗಳಿಗೆ ಬೆನ್ನು ತಟ್ಟಿ ಕೆಲಸ ಮಾಡಿಸಿಕೊಳ್ಳಬೇಕು.ಅದು ಬಿಟ್ಟು ಹೊಟ್ಟೆ ಮೇಲೆ ಹೊಡೆಯುವಂತಹ ಯಾವುದೇ ಆದೇಶ ಹೊರಡಿಸುವುದು ಎಷ್ಟು ಸರಿ ಎಂದು ಸಿಬ್ಬಂದಿಗಳು ಪ್ರಶ್ನೆ ಮಾಡಿದ್ದಾರೆ.
ಪ್ರಧಾನ ಕಾರ್ಯದರ್ಶಿಗಳ ಈ ಒಂದು ಪತ್ರ 30 ಸಾವಿರ ನೌಕರರಿಗೆ ಆತಂಕ ಸೃಷ್ಟಿ ಮಾಡಿದೆ. ಇದು ಈ ವರ್ಷದಲ್ಲಿ ಮೊದಲ ಸಾರಿ ಅಲ್ಲದೆ ಇದೇ ವರ್ಷ ಸಾಕಷ್ಟು ಮಾನಸಿಕ ಒತ್ತಡ ಹೆಚ್ಚಳವಾಗಿರುವ ಅನೇಕ ಆದೇಶ ಮಾಡಿದ್ದಾರೆ.
ಪ್ರತಿ ವರ್ಷ ಏಪ್ರಿಲ್ ಒಂದನೇ ತಾರೀಖು ಎಲ್ಲಾ ನೌಕರರಿಗೆ ಒಂದು ದಿವಸ ವಿರಾಮ ನೀಡಿ ಮುಂದುವರೆಸುತ್ತಿದ್ದು 2005 ರಿಂದ ಸುಮಾರು 20 ವರ್ಷಗಳವರೆಗೆ ಈ ಪದ್ಧತಿ ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಏಕಾಏಕಿ ಕೇವಲ 15 ದಿವಸ ವಿಸ್ತರಣೆ ನೀಡಿ, ತದನಂತರ ಒಂದು ತಿಂಗಳು ವಿಸ್ತರಣೆ ನೀಡಿ ಆಮೇಲೆ ಮೂರು ತಿಂಗಳ ವಿಸ್ತರಣೆ ನೀಡಿ ತದನಂತರ ಸಿಬ್ಬಂದಿಗಳಿಗೆ ಕರ್ತವ್ಯದಿಂದ ವಿಮುಕ್ತಿಗೊಳಿಸುವ ಆದೇಶ ನೀಡಿದ್ದು ನಮ್ಮ ಸಂಘಟನೆಯಿಂದ ಕೋರ್ಟ್ ನಲ್ಲಿ ದಾವೆ ಹೂಡಿದ್ದು ಇದೆ, ಕಳೆದ 8 ತಿಂಗಳಲ್ಲಿ ವೇತನ ಪಡೆಯಲು ಸರಿಯಾಗಿ ಅನುದಾನ ಬಿಡುಗಡೆ ಆಗದೇ ಸಿಬ್ಬಂದಿಗಳು ಪರದಾಡುವಂತಾಗಿದೆ. ಈ ಬಗ್ಗೆ ಸದನದಲ್ಲಿ ಗಮನ ಸೆಳೆದು ನಮಗೆ ನ್ಯಾಯ ಕೊಡಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಾ.ಮಂಜುನಾಥ್, ಸುನೀಲ್, ಸುರೇಶ್, ಮಹಾಲಿಂಗಪ್ಪ, ಬಸವರಾಜ್, ದೊಡ್ಡಮನಿ, ಡಾ.ರೇಣುಕಾ, ಇನ್ನಿತರರಿದ್ದರು.”
- ಪ್ರಧಾನ ಕಾರ್ಯದರ್ಶಿಗಳ ಆದೇಶ ರದ್ದುಗೊಳಿಸಲು ಎನ್ ಎಚ್ ಎಂ ಸಿಬ್ಬಂದಿಗಳು ಆಗ್ರಹ
- ಈ ಬಗ್ಗೆ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಲು ಶಾಸಕ ಕೆ.ಎಸ್.ಬಸವಂತಪ್ಪಗೆ ಸಿಬ್ಬಂದಿಗಳ ಮನವಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ
ಸುದ್ದಿದಿನ,ದಾವಣಗೆರೆ:ನಗರದ ಜಯದೇವ ವೃತ್ತದಲ್ಲಿರುವ ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿಯಿಂದ ಗುರುವಾರ (ಡಿಸೆಂಬರ್.4) ಕನ್ನಡ ಚಳವಳಿಯ ಕಚೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಟಿ ಶಿವಕುಮಾರ್ ಅವರು ಇಮ್ಮಡಿ ಪುಲ್ಲಕೇಶಿ ಸಾಮ್ರಾಟ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ನಂತರ ಜಿಲ್ಲಾಧ್ಯಕ್ಷರಾದ ಶಿವರತನ್ ಮಾತನಾಡಿ ,ನಾಡಿನ ಇತಿಹಾಸ ಪುಟಗಳಲ್ಲಿ ಕಣ್ಮರೆಯಾಗಿರುವ ಕನ್ನಡದ ಶ್ರೇಷ್ಠ ಸಾಮ್ರಾಟರಲ್ಲಿ ಇಮ್ಮಡಿ ಪುಲಿಕೇಶಿ ಅಗ್ರ ಸ್ಥಾನ ಪಡೆದಿದ್ದಾರೆ. ಇಂತಹ ಮಹಾನ್ ಸಾಮ್ರಾಟರನ್ನ ನೆನಪಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿಯನ್ನು ನಾವೆಲ್ಲರೂ ಹೊರಬೇಕಾಗಿದೆ ಎಂದರು.
ಭಾರತೀಯ ನೌಕಾಪಡೆಯ ಪಿತಾಮಹ ಎಂದೇ ಕರೆಯಲಾಗುವ ಇಮ್ಮಡಿ ಪುಲಿಕೇಶಿ ಸಾಮ್ರಾಟರ ಜನ್ಮದಿನದ ಪ್ರಯುಕ್ತ ಭಾರತೀಯ ನೌಕಾಪಡೆ ದಿನಾಚರಣೆಯೆoದು ಆಚರಿಸುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ.
ಬೇರೆಲ್ಲ ಜಯಂತಿಗಳನ್ನು ಆಚರಿಸುವ ಸರ್ಕಾರಗಳು ಇಮ್ಮಡಿ ಪುಲಿಕೇಶಿ ಜಯಂತಿಯನ್ನು ಕಡ್ಡಾಯವಾಗಿ ಎಲ್ಲೆಡೆ ಆಚರಿಸಲು ಆಡಳಿತಾತ್ಮಕವಾಗಿ ಜಾರಿಗೊಳಿಸಲು ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
ಮಹಿಳಾ ಅಧ್ಯಕ್ಷೆ ಶುಭಮಂಗಳ ಅವರು ಸಿಹಿ ವಿತರಿಸಿದರು. ಕನ್ನಡ ಚಳವಳಿಯ ಹಿರಿಯ ಹೋರಾಟಗಾರರು , ಕನ್ನಡ ಚಳವಳಿಯ ಮಾಜಿ ಅಧ್ಯಕ್ಷರಾದ ಬಂಕಾಪುರ ಚನ್ನಬಸಪ್ಪ, ದಾ.ಹ. ಶಿವಕುಮಾರ್. ಈಶ್ವರ್. ಪ್ರಕಾಶ್. ವಾರ್ತಾ ಇಲಾಖೆ ನಿವೃತ್ತ ಬಿ.ಎಸ್. ಬಸವರಾಜ್ ಹಾಗೂ ಹಲವಾರು ಕನ್ನಡಪರ ಹೋರಾಟಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಕ್ರಮಿಸುತ್ತಿರುವ ಅರ್ಹ ಸಂಘ, ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳನ್ನೊಳಗೊಂಡಂತೆ ಕ್ರೀಡೆ, ಕಲೆ, ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಮಹಿಳೆಯರು ಹಾಗೂ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಆತ್ಮಸ್ಥೆರ್ಯದಿಂದ ಹೋರಾಡಿ ಜೀವನೋಪಾಯದಿಂದ ಪಾರು ಮಾಡಿದಂತಹ ಮಹಿಳೆಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಹ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿಯನ್ನು ಉಪನಿರ್ದೇಶಕರು ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದಾವಣಗೆರೆ ಪಡೆದು ಅಗತ್ಯ ದಾಖಲೆಗಳೊಂದಿಗೆ ಡಿಸೆಂಬರ್ 24 ರೊಳಗಾಗಿ ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸರ್ಕಾರಿ ಬಾಲಕರ ಬಾಲಮಂದಿರ ಕಟ್ಟಡ, 14ನೇ ಮುಖ್ಯ ರಸ್ತೆ, ಕುವೆಂಪುನಗರ, ಎಂ.ಸಿ.ಸಿ, ‘ಬಿ’ ಬ್ಲಾಕ್, ದಾವಣಗೆರೆ ದೂ.ಸಂ:08192-264056 ಸಲ್ಲಿಸಬೇಕೆಂದು ಇಲಾಖೆಯ ಉಪನಿರ್ದೇಶಕರಾದ ರಾಜಾನಾಯ್ಕ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days agoದಾವಣಗೆರೆ | ಜಿಲ್ಲಾ ಪಂಚಾಯಿತಿ ಸಿ.ಇ.ಒ ಗಿತ್ತೆ ಮಾಧವ್ ವಿಠ್ಠಲ್ ರಾವ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ5 days agoದುಡಿಯುವ ವರ್ಗಕ್ಕೆ ಸ್ಥಳದಲ್ಲೇ ಉಚಿತ ಚಿಕಿತ್ಸೆ : ಶಾಸಕ ಕೆ.ಎಸ್.ಬಸವಂತಪ್ಪ ‘ಸಂಚಾರಿ ಆರೋಗ್ಯ ಘಟಕ’ಕ್ಕೆ ಚಾಲನೆ
-
ದಿನದ ಸುದ್ದಿ5 days agoಜಿಎಂ ವಿಶ್ವವಿದ್ಯಾಲಯ ರಂಗೋತ್ಸವ -2025 | ವಿದ್ಯಾರ್ಥಿಗಳ ಪ್ರತಿಭೆ ಅನಾವರಣ : ಸ್ಪರ್ಧೆಯಲ್ಲಿ ರಂಗ ಪ್ರೇಮ, ನಟನಾ ಚತುರತೆ ಬೆರಗು
-
ದಿನದ ಸುದ್ದಿ5 days agoಉಳಿಕೆ ಸರ್ಕಾರಿ ನಿವೇಶನ ಇಲಾಖೆಗಳ ವಿವಿಧ ಉದ್ದೇಶಿತ ಕಟ್ಟಡಗಳಿಗೆ ಹಂಚಿಕೆ: ಡಿಸಿ ಜಿ.ಎಂ.ಗಂಗಾಧರಸ್ವಾಮಿ
-
ದಿನದ ಸುದ್ದಿ5 days agoಸಹಾಯಧನಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ1 day agoಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ
-
ದಿನದ ಸುದ್ದಿ3 days agoದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ1 day agoದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ


