ದಿನದ ಸುದ್ದಿ
ಆತ್ಮಕತೆ | ಮಗು : ಆತಂಕದ ಕ್ಷಣಗಳು

- ರುದ್ರಪ್ಪ ಹನಗವಾಡಿ
ಮದುವೆಯಾಗಿ 1-2 ವರ್ಷ ಮಕ್ಕಳ ಕನಸು ಬೇಡ ಎಂದು ಯೋಚಿಸಿದ್ದರೂ ಅದೇನು ಸಫಲವಾಗದೆ ನನ್ನ ಮಗ ಶಿಶಿರ ಆಗಮಿಸಿದ್ದ.
ಭದ್ರಾವತಿಯಲ್ಲಿ ಇಂದಿರಾ ಅವರ ಮನೆಗೆ ಹೋಗಿ ಅಲ್ಲಿಂದ ಲೇಡಿ ಡಾಕ್ಟರ್ ಬಳಿ ಹೋಗಿ ತಪಾಸಣೆ ಮಾಡಿಸಿದೆವು. ನಮ್ಮಿಬ್ಬರ ರಕ್ತದ ಗುಂಪು ಆರ್ಹೆಚ್ ಪಾಸಿಟಿವ್ ನೆಗೆಟಿವ್ಗಳಾಗಿದ್ದು ನೀವು ರ್ಭಿಣಿ ಆಗಲು ಸಾಧ್ಯವಿಲ್ಲ. ಇದೆಲ್ಲ ಹೇಗಾಯಿತೆಂಬ ಅಭಿಪ್ರಾಯ ತಿಳಿಸಿ, ನಮಗೆ ದಿಗಿಲು ಬೀಳುವಂತೆ ವಿವರಿಸಿದ್ದಳು. ನಮಗಾರಿಗೂ ಬೇರೆ ಡಾಕ್ಟರ್ ಪರಿಚಯವಿಲ್ಲದೆ ಇರುವಾಗ ಡಾ. ಹೆಚ್. ಶಿವರಾಂ ಅವರು ಮೆಗ್ಗಾನ್ ಹಾಸ್ಪಿಟಲ್ನಲ್ಲಿ ಜನರಲ್ ಫಿಜಿಸಿಯನ್ ಆಗಿ ಇರುವುದು ತಿಳಿಯಿತು.
ಶಿವರಾಂ ಡಾಕ್ಟರ್ ನಮಗೆ ಮೈಸೂರಿನಲ್ಲಿರುವಾಗ ಎಸ್ವೈಎಸ್ ರ್ಯಕ್ರಮಗಳ ಹುಡುಗರ ಆರೋಗ್ಯ ಸಮಸ್ಯೆ ಬಂದಾಗ ಉಪಚರಿಸುತ್ತಿದ್ದರು. ಡಾ. ಶಿವರಾಂ ಅವರು ಹಾಸನ ಜಿಲ್ಲೆಯ ಸಕಲೇಶಪುರದ ಹಾನಬಾಳ್ ಗ್ರಾಮದವರು. ಶಿವರಾಂ ಅವರಿಗೆ ರ್ಣಚಂದ್ರ ತೇಜಸ್ವಿ, ಕಡಿದಾಳ್ ಶಾಮಣ್ಣ, ಸುಂದರೇಶ್, ರವರ್ಮಕುಮಾರ್ ಇವರೆಲ್ಲ ಪರಿಚಯವಿದ್ದವರು. ಮತ್ತು ನನಗೆ ಮೈಸೂರಿನಲ್ಲಿ ಓದುವಾಗಲೇ ಪರಿಚಯವಾಗಿದ್ದರು. ನಾನು ಮೈಸೂರು ಮಹಾರಾಜಾ ಕಾಲೇಜಿನಿಂದ ಬಿಆರ್ಪಿಗೆ ಬಂದದ್ದು, ನಂತರ ಮದುವೆಯಾದದ್ದು ಈಗ ನನ್ನ ಹೆಂಡತಿ ಗರ್ಭಿಣಿ ಆಗಿರುವ ಸುದ್ದಿ ತಿಳಿದು ಸಂತೋಷಗೊಂಡರು. ನಂತರ ಗಾಯತ್ರಿ ಭದ್ರಾವತಿಯ ಲೇಡಿ ಡಾಕ್ಟರ್ ಹೇಳಿದ ವಿಚಾರ ತಿಳಿಸಿದೆ.
ಅವರು ತಪಾಸಣೆ ನಡೆಸಿ ಇದೆಲ್ಲ ಏನೂ ಇಲ್ಲ ಇಡೀ ಏಶಿಯಾ ಖಂಡದಲ್ಲಿ ಶೇ 15ರಷ್ಟು ಜನರು ಆರ್ಹೆಚ್ ಪಾಸಿಟಿವ್ ನೆಗಟಿವ್ ಸಮಸ್ಯೆ ಇರುವವರು, ಅದಕ್ಕಾಗಿ ನೀವು ಚಿಂತಿಸಬೇಕಾಗಿಲ್ಲ ಎಂದು ಹೇಳಿ ಆಗ ಗೈನಾಕಾಲಜಿಸ್ಟ್ ಆಗಿದ್ದ ಡಾ. ಮುರುಗೇಂದ್ರಪ್ಪ ಅವರಿಗೆ ರೆಫರ್ ಮಾಡಿ ತಪಾಸಣೆ ನಡೆಸಿದ ನಂತರ ಕೆಲವು ಸಲಹೆ ನೀಡಿದರು. ಕೆಲವು ದಿನ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ ಮೇರೆಗೆ ನಾವಿಬ್ಬರೂ ಮೆಗ್ಗಾನ್ ಆಸ್ಪತ್ರೆಯಲ್ಲಿ ಇರಬೇಕಾಗಿ ಬಂತು. ಈ ಸಮಯದಲ್ಲಿ ಗಾಯತ್ರಿಗೆ ಹಾಲು ಮೆತ್ತನೆ ಅನ್ನ ಬಿಟ್ಟರೆ ಬೇರೇನೂ ಪಥ್ಯ ಹೇಳಿರಲಿಲ್ಲ. ನಾವು ಅದಕ್ಕಾಗಿ ಒಂದು ಸ್ಟವ್ ತಂದು ಅನ್ನ ಮತ್ತು ಹಾಲನ್ನು ನಮಗೆ ನೀಡಿದ ರೂಂನಲ್ಲಿಯೇ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೆವು. ನನಗೆ ಇಂದಿರಾ ಮತ್ತವರ ಸ್ನೇಹಿತರಾದ ಸಾಕಮ್ಮ ಹಾಗೂ ಎಂ.ಬಿ. ನಟರಾಜ್ ಅವರ ಪತ್ನಿ ಲಕ್ಷ್ಮಿ ಇವರುಗಳ ಮನೆಯಿಂದ ಚೆನ್ನಾಗಿರುವ ಊಟ ಬರುತ್ತಿತ್ತು. ಜೊತೆಗೆ ಶಿವರಾಂ ಅವರ ನಿವಾಸ ಕೂಡ ಆಸ್ಪತ್ರೆ ಹತ್ತಿರವಿತ್ತು. ನನಗೆ ಅವರ ಮನೆಗೆ ಹೋಗಿ ಊಟ ಮಾಡಿಕೊಂಡು ಬರಲು ಶಿವರಾಂ ಡಾಕ್ಟರ್ ಹೇಳುತ್ತಿದ್ದರು.
ಶಿವರಾಂ ಅವರ ಶ್ರೀಮತಿ ಆಶಾ, ಅತ್ತೆ ಶಾರದಮ್ಮ ಮತ್ತವರ ತಾಯಿ ತಂದೆ ಕೂಡ ಮನೆಯಲ್ಲೇ ಇದ್ದರು. ಅವರಿಗೆ ಇಬ್ಬರು ಮುದ್ದಾದ ಹೆಣ್ಣು ಮಕ್ಕಳು ಇದ್ದರು. ಶಿವರಾಂ ಅವರ ಮಾವ ಸ್ವಾತಂತ್ರ್ಯ ಹೋರಾಟಗಾರರು. ರೈತ ಸಂಘದಲ್ಲಿ ಸಕ್ರಿಯ ನಾಯಕರಾಗಿದ್ದರು. ಈ ಎಲ್ಲರ ಪರಿಚಯದಿಂದಾಗಿ ನನಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಗಾಯತ್ರಿಯ ಆರೋಗ್ಯ ತಪಾಸಣೆ ಸಮಯದಲ್ಲಿ ಇದ್ದ ಆತಂಕ ದೂರವಾಗಿತ್ತು. ಪ್ರಭು ಜೊತೆಗೆ, ದಿವಾಕರ ಹೆಗ್ಗಡೆ ಆಗ ತಾನೆ ತನ್ನ ಪುಸ್ತಕದ ಅಂಗಡಿ ತೆರೆದುಕೊಂಡಿದ್ದರು. ಜೊತೆಗೆ ಲಂಕೇಶ್ ಪತ್ರಿಕೆಯ ವರದಿಗಾರನೂ ಆಗಿ ಶಿವಮೊಗ್ಗದಲ್ಲಿದ್ದರು. ನಾನು ಬಿಆರ್ಪಿಯಿಂದ ಊರಿಗೆ ಬರುವಾಗಲೆಲ್ಲ ನನ್ನ ಲಗ್ಗೇಜನ್ನು ಹೆಗ್ಗಡೆ ಬುಕ್ ಸ್ಟಾಲ್ನಲ್ಲಿಟ್ಟು ಪ್ರಭು ಜೊತೆ ಮಾತಾಡಿಕೊಂಡು ರಾತ್ರಿ ಬಿಆರ್ಪಿಗೆ ಹೋಗುತ್ತಿದ್ದೆ. ಹಾಗಾಗಿ ಶಿವಮೊಗ್ಗದಲ್ಲಿದ್ದ ಪ್ರಭು, ಮಂಜಪ್ಪ, ದಿವಾಕರ, ಹೆಗ್ಗಡೆ, ಡಾ. ಶಿವರಾಂ, ಎಂ.ಬಿ. ನಟರಾಜ್ ಇವರೆಲ್ಲರ ಒಡನಾಟದಿಂದ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಗಾಯತ್ರಿ ವಿಶ್ರಾಂತಿಯಲ್ಲಿದ್ದಾಗ, ನನಗಿದ್ದ ಗೆಳೆಯರ ಸಹಾಯದಿಂದ ನಾವು ನಾವೇ ನಿಭಾಯಿಸಿಕೊಂಡೆವು. ಇಂತಹ ಸರ್ಭಗಳಲ್ಲಿ ಹೆಣ್ಣು ಮಕ್ಕಳಿಗೆ ಏಕಾಂಗಿತನ ಮತ್ತು ತೌರ ಮನೆ ಕಾಡುತ್ತದೆ. ಆದರೆ ಎರಡೂ ಕಡೆಯಿಂದ ನಮಗೆ ಸಾನ್ನಿಧ್ಯದ ಅನುಕೂಲ ಪಡೆಯುವ ಅವಕಾಶವಾಗಲಿಲ್ಲ. ಇದ್ದ ಸ್ನೇಹ ಬಳಗವೇ ಈ ಎಲ್ಲ ಕೊರತೆಯನ್ನು ನಮಗೆ ಪೂರೈಸಿತ್ತು.
ಆ ನಂತರ ಪ್ರತಿ ತಿಂಗಳೂ ತಪಾಸಣೆ ಮತ್ತು ಶುಶ್ರೂಷೆಯ ನಂತರ 3-4 ದಿನ ಮುಂಚಿತವಾಗಿ ಹೆರಿಗೆಗೆ ಬರಬೇಕೆಂದು ಸೂಚಿಸಿದ್ದರು. ಅದರಂತೆ ಹೋಗಿ ಆಸ್ಪತ್ರೆ ಸೇರಿದ್ದೆವು. ನಾವು ಆಸ್ಪತ್ರೆಯಲ್ಲಿ ಇದ್ದಾಗ ಡಾ. ಶಿವರಾಂ ಅವರು ನಮ್ಮಿಬ್ಬರನ್ನು ಸಂಜೆ ಊಟಕ್ಕೆ ಮನೆಗೆ ಆಹ್ವಾನಿಸಿದ್ದರು. ಅವರದು ತುಂಬಿದ ಮನೆಯಾಗಿತ್ತು. ಬಸುರಿ ಹೆಂಗಸೆAದು ಡಾ. ಶಿವರಾಂ ಅವರ ಹೆಂಡತಿ ಆಶಾ ಮತ್ತು ಅವರ ತಾಯಿ ಶಾರದಮ್ಮನವರು ವಿಶೇಷ ಅಡುಗೆ ಮಾಡಿ ಅಕ್ಕರೆಯಿಂದ ಆದರಿಸುತ್ತಿದ್ದರು. ಅಂದು ಸಂಜೆ ಅವಳಿನ್ನೂ ರ್ತಿ ಊಟ ಮುಗಿಸುವ ಮುಂಚೆಯೇ ಹೆರಿಗೆ ನೋವು ಕಾಣಸಿಕೊಂಡಿತು. ತಕ್ಷಣ ಆಸ್ಪತ್ರೆಗೆ ಡಾ. ಶಿವರಾಂ ಅವರು ದಾಖಲು ಮಾಡಿಸಿದರು. ಇಡೀ ರಾತ್ರಿ ಹೆರಿಗೆ ರ್ಡ್ ಒಳಗೆ ಇದ್ದ ಗಾಯತ್ರಿಗೆ ಮಾರನೆ ದಿನ ಮಧ್ಯಾಹ್ನವಾದರೂ ಹೆರಿಗೆ ಆಗಿರಲಿಲ್ಲ. ನಾನು ಹೊರಗಡೆ ಇದ್ದ ಬೆಂಚ್ ಮೇಲೆ ಕೂತು ಕಾಯುತ್ತಿದ್ದೆ. ಪ್ರಭು ಫ್ರೆಂಡ್ ಶಶಿ ಮೂಲಕ ಭದ್ರಾವತಿಗೆ ಹೋಗಿ ಇಂದಿರಾ ಅವರನ್ನು ಕರೆದುಕೊಂಡು ಬರಲು ಕಳಿಸಿದ್ದೆ. ಅವರು ಆಫೀಸಿಗೆ ರಜೆ ಹಾಕಿ ಬರುವ ಸಮಯಕ್ಕಾಗಲೇ ಗಾಯತ್ರಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ದಿನಾಂಕ 11-03-81ಸಂಜೆ 4ಗಂಟೆ ಸುಮಾರಿಗೆ ಗಂಡು ಮಗು ಜನನವಾಗಿತ್ತು. ಡಾ. ಶಿವರಾಂ ಮನೆಯ ಇಬ್ಬರು ಮಕ್ಕಳು ಸೇರಿದಂತೆ ಎಲ್ಲರೂ ಬಂದು ನೋಡಿ ಸಂತಸಪಟ್ಟರು. ಮಗುವಿನ ಬೆಳವಣಿಗೆ ಹೆಚ್ಚಾಗಿದ್ದ ಕಾರಣ ಈoಡಿಛಿeಠಿs ಮುಖಾಂತರ ಮಗುವನ್ನು ಹೊರತೆಗೆಯಬೇಕಾಯಿತು ಎಂದು ಡಾಕ್ಟರ್ ಹೇಳಿದರು. ಭದ್ರಾವತಿಯಿಂದ ಬಂದ ಇಂದಿರಾ ಕೂಡಲೆ ರ್ಣ ಜವಾಬ್ದಾರಿ ತೆಗೆದುಕೊಂಡು, ಅಲ್ಲಿಂದ ಅವರ ಮನೆಗೆ ಕರೆದುಕೊಂಡು ಹೋಗಿ ಒಂದು ತಿಂಗಳ ಕಾಲ ಬಾಣಂತನ ಮಾಡಿ ಬಿ.ಆರ್.ಪಿಗೆ ನಾವು ಬರುವವರೆಗೆ ಮಗು ಬಾಣಂತಿಯನ್ನು ನೋಡಿಕೊಂಡದ್ದು ಮರೆಯಲಾಗದ ಘಟನೆಯಾಗಿ ಉಳಿದಿದೆ.
ಭದ್ರಾವತಿಗೆ ಮಗು ಬಾಣಂತಿ ಕೃಷ್ಣಪ್ಪನವರ ಮನೆಗೆ ಹೋಗಿ ಉಳಿದಿದ್ದೆವು. ಮಗುವಿನ ಬಾಣಂತನ ಆರೈಕೆಯನ್ನು ಮಾಡಲು ಶಿವಮೊಗ್ಗ ಮುನೀರ್ ಅವರ ತಾಯಿ ಬಚ್ಚಿಮ್ಮ ಅವರು ರ್ಕಾರಿ ಆಸ್ಟತ್ರೆಯಲ್ಲಿ ರ್ಸ ಆಗಿದ್ದವರು. ಅವರು ಬೆಳಿಗ್ಗೆ ಮತ್ತು ಸಂಜೆ ಬಂದು ಸಹಾಯ ಮಾಡುತ್ತಿದ್ದರು. ಇಂದಿರಾ ಬೆಳಿಗ್ಗೆ ಬಾಣಂತಿಗೆ ಮತ್ತು ಮತ್ತೆಲ್ಲರಿಗೂ ಅಡುಗೆ ಮಾಡಿಟ್ಟು ಆಫೀಸಿಗೆ ಹೋಗುತ್ತಿದ್ದರು. ಗಾಯತ್ರಿ ಮೌಖಿಕವಾಗಿ ಅವಳೇನು ಹೇಳದಿದ್ದರೂ ಭಾವನಾತ್ಮಕವಾಗಿ ಅವಳಿಗೆ ಬಹಳ ಕಷ್ಟದ ದಿನಗಳಾಗಿದ್ದವು. ಅವನ್ನೆಲ್ಲ ಮಗುವಿನ ಮುಖ ನೋಡಿಕೊಂಡು ಬಚ್ಚಿಮ್ಮನ ಶುಶ್ರೂಷೆಯಲ್ಲಿ ಕಾಲ ಹಾಕುತ್ತಿದ್ದಳು. ನಾನು ಕೂಡ ಮಗುವಿಗೆ ಎಣ್ಣೆ ಹಚ್ಚಿ ಬಿಸಿನೀರ ಸ್ನಾನ ಮಾಡಿಸುವುದನ್ನು ಬಚ್ಚಿಮ್ಮನಿಂದ ವಿಶೇಷವಾಗಿ ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೆ. ಒಂದು ತಿಂಗಳ ನಂತರ ಬಿಆರ್ಪಿಯ ಮನೆಗೆ ಬಂದಿದ್ದೆವು. ಈ ನಡುವೆ ಮಾಧ್ಯಮಿಕ ತರಗತಿಯಲ್ಲಿ ಓದುತ್ತಿದ್ದ ನನ್ನ ತಂಗಿಯನ್ನು ಕರೆತಂದು ಬಿಆರ್ಪಿಯಲ್ಲಿ ಶಾಲೆಗೆ ಸೇರಿಸಿದ್ದೆ. ನಾವು ಬಿಆರ್ಪಿಗೆ ಬಂದ ಮೇಲೆ ಊರಿನಿಂದ ಅವ್ವ ಕೂಡ ಬಂದು ಸ್ವಲ್ಪ ದಿನ ಬಾಣಂತನ ಮಾಡುವ ಶಾಸ್ತ್ರ ಮಾಡಿದ್ದಳು.
ಆ ನಂತರ ಮೂರು ತಿಂಗಳಲ್ಲಿ ಮಗುವಿಗೆ ನಾಮಕರಣ ಮಾಡುವ ಸಣ್ಣ ಸಮಾರಂಭವನ್ನು ರ್ಪಡಿಸಿದ್ದೆವು. ಆಗ ಇಂದಿರಾ – ಕೃಷ್ಣಪ್ಪನವರು ಸೇರಿದಂತೆ ಬಿಆರ್ಪಿಯಲ್ಲಿನ ಕೇಶವರ್ತಿ, ಪ್ರಭು, ಗ್ರಂಥಪಾಲಕರಾಗಿದ್ದ ರಾಮಕೃಷ್ಣಗೌಡ ಇನ್ನೂ ಅನೇಕರು ಭಾಗವಹಿಸಿ ಶಿಶಿರ ಎಂದು ಹೆಸರಿಟ್ಟು ಸಂಭ್ರಮ ಪಟ್ಟೆವು. ಮಗುವಿಗೆ 3 ತಿಂಗಳು ಮುಗಿದ ನಂತರ ನಮ್ಮ ಮನೆ ಹತ್ತಿರದಲ್ಲೇ ಇದ್ದ ಅರವಿಂದ ಆಶ್ರಮದವರು ನಡೆಸುತ್ತಿದ್ದ ಪ್ರಾಥಮಿಕ ಶಾಲೆಗೆ ಗಾಯತ್ರಿ ಟೀಚರ್ ಆಗಿ ಸೇರಿಕೊಂಡಳು. ಶಿಶಿರನನ್ನು ಬೆಳಿಗ್ಗೆ ಸ್ನಾನ ಮಾಡಿಸಿ ತಿಂಡಿ ತಿನಿಸಿದ್ದು ಬಿಟ್ಟರೆ ಅವನನ್ನು ನಮ್ಮ ಇಡೀ ಬೀದಿಯಲ್ಲಿರುವವರು ಎತ್ತಿಕೊಂಡು ಹೋಗಿ ಊಟ ನಿದ್ದೆ ಮಾಡಿಸಿಕೊಂಡು ಸಂಜೆಗೆ ಮನೆಗೆ ತಂದು ಬಿಡುತ್ತಿದ್ದರು. ಅವನ ಆಗಮನದಿಂದ ನಮಗಿದ್ದ ಪ್ರತ್ಯೇಕತೆ ಕಳೆದು ಎಲ್ಲರೂ ನಮ್ಮನ್ನು `ಬುಡ್ಲ್ಲಿ’ ಅಪ್ಪ ಅಮ್ಮ ಎಂದು ಮಕ್ಕಳು, ದೊಡ್ಡವರು ಹೊರಗಡೆ ಹೋದಾಗ ಗುರುತಿಸಿ ಮಾತಾಡುವಂತಾಗಿತ್ತು. ನಮಗಿಂತಲೂ `ಬುಡ್ಲಿ’ಗೆ ಹೆಚ್ಚು ಪರಿಚಯದ ಹುಡುಗರ ದಂಡು ಸೃಷ್ಟಿಯಾಗಿತ್ತು. ಇನ್ನು ಇವಳು ಟೀಚರ್ ಕೆಲಸದಿಂದ ನನ್ನ ರ್ಥಿಕ ಸಂಕಷ್ಟಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾದವು. ನಾನು ಮಾಡಿಕೊಂಡಿದ್ದ 15 ಸಾವಿರ ಸಾಲಕ್ಕೂ ನನಗೆ ವಿಶ್ವವಿದ್ಯಾಲಯದಿಂದ ಬರಬೇಕಾಗಿದ್ದ ಅರರ್ಸ್ ಬಂದು ನನ್ನ ಎಲ್ಲ ಸಾಲವನ್ನು ತೀರಿಸಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿತ್ತು.
ನಾನು ಕೆಪಿಎಸ್ಸಿ ಪರೀಕ್ಷೆ ತೆಗೆದುಕೊಂಡದ್ದು ಮೊದಲೇ ಹೇಳಿದ್ದೇನೆ. ಅದರ ಪರೀಕ್ಷೆ ಬರೆಯಲು ಮೈಸೂರನ್ನು ಕೇಂದ್ರವಾಗಿ ಆಯ್ಕೆ ಮಾಡಿಕೊಂಡಿದ್ದ ಕಾರಣ 1981ರಲ್ಲೇ ಮೈಸೂರಿಗೆ ಹೋಗಿ ಸುಮಾರು 15 ದಿನಗಳ ರಜೆ ಹಾಕಿ ಪರೀಕ್ಷೆ ಬರೆದೆ. ಆ ಸಮಯದಲ್ಲಿ ರೊಟ್ಟಿ, ಚಟ್ನಿ ಪುಡಿ, ಪುಳಿಯೋಗರೆ ವಾರಕ್ಕೂ ಹೆಚ್ಚು ಆಗುವಷ್ಟನ್ನು ಮಾಡಿಕೊಂಡು ಗಂಗೋತ್ರಿಯಲ್ಲಿರುವ ವಿಶ್ವವಿದ್ಯಾಲಯದ ಅತಿಥಿ ಗೃಹದಲ್ಲಿ ನಾವು ಮೂವರೂ ಉಳಿಯುತ್ತಿದ್ದೆವು. ನಾನು ಪರೀಕ್ಷೆಗೆ ಹೋದಾಗ ಗಾಯತ್ರಿ ಶಿಶಿರ ಇಬ್ಬರೇ ಅಲ್ಲಿರುವ ಗಿಡಮರಗಳನ್ನು ನೋಡುತ್ತಾ ಇರುತ್ತಿದ್ದರು.
ಈ ಸಮಯದಲ್ಲಿ ದೇವಯ್ಯ ಹರವೆ ಮೈಸೂರಿನಲ್ಲಿ ಮಾನಸ ಗಂಗೋತ್ರಿಯಲ್ಲಿ ಕನ್ನಡ ಅಧ್ಯಾಪಕನಾಗಿದ್ದು, ಡಿ.ಎಸ್.ಎಸ್. ಸ್ಥಾಪಕ ಸದಸ್ಯರುಗಳ ಜೊತೆ ಗಟ್ಟಿ ದನಿಯಾಗಿದ್ದರು. ನಾನು ಇರುವ ಸುದ್ದಿ ತಿಳಿದು ನಮ್ಮ ಗೆಸ್ಟ್ಹೌಸ್ಗೆ ಬಂದು ಪುಳಿಯೋಗರೆ ತಿಂದು `ಗಾಯತ್ರಮ್ಮ, ಎಲ್ಲಾ ಪುಳಿಯೋಗರೆ ನನಗೆ ಕೊಡಿ ರುದ್ರಣ್ಣನಿಗೆ ನಾನು ಬಿಸಿ ಮಾಂಸದೂಟ ಮಾಡಿಸುವೆ’ ಎಂದು ಹೇಳಿ ನಮ್ಮೆಲ್ಲರನ್ನು ತನ್ನ ಮನೆಗೂ ಕರೆದುಕೊಂಡು ಹೋಗಿದ್ದ. ದೇವಯ್ಯ ಹರವೆ ಮತ್ತು ಪುಷ್ಪ ನಮಗೆ ಆಗ ಪರಿಚಯವಾಗಿ ನಂತರದ ದಿನಗಳಲ್ಲಿ ಅವರ ಮನೆಗೆ ಪುಳಿಯೋಗರೆಯೊಡನೆ ಆಗಾಗ ಹೋಗಿ ಬರುತ್ತಿದ್ದೆವು.
ಬುಡ್ಲಿಯನ್ನು ನೋಡುವ ನೆಪದಲ್ಲಿ ವಿಶಾಖಪಟ್ಟಣದಲ್ಲಿದ್ದ ಗಾಯತ್ರಿಯ ದೊಡ್ಡ ಅಕ್ಕ ಶಕುಂತಲಾರ್ತಿ ಮತ್ತು ಅವರ ಹಿರಿಯ ಮಗಳಾದ ಮೀನಾ ಬಿಆರ್ಪಿಗೆ ಬಂದು ಒಂದು ದಿನ ಉಳಿದು ನಂತರ ನರಸಿಂಹರಾಜಪುರಕ್ಕೆ ಹೋಗಿದ್ದರು. ಆಗ ಅವರಿಂದ ಗಾಯತ್ರಿ ತಂದೆ ತಾಯಿ ಇಬ್ಬರಿಗೂ ನಾವಿಬ್ಬರು ಮತ್ತು `ಬುಡ್ಲಿ’ ಆರಾಮವಾಗಿ ಇರುವುದಾಗಿಯೂ ಮತ್ತು ಅವರಿವರು ತೇಲಿ ಬಿಡುತ್ತಿದ್ದ ಸುಳ್ಳಿನ ಸುದ್ದಿಗಳಲ್ಲಿ ಸತ್ಯಾಂಶವಿಲ್ಲವೆAದು ತಿಳಿಸಿ, ಅವರಿಗೆ ನಮ್ಮ ಮದುವೆಯ ಘಟನೆಯ ನಂತರ ಸ್ವಲ್ಪಮಟ್ಟಿನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿತ್ತು.
ಕೃಷ್ಣಪ್ಪನವರು ಎಸ್ವೈಎಸ್ ಸಂಘಟನೆಯಲ್ಲಿ 1970ರ ದಶಕದ ಪ್ರಾರಂಭದಿAದ ಇದ್ದರೂ, ಕ್ರಮೇಣ ದಲಿತರ ಸಮಸ್ಯೆಗಳಿಗೆ ಪ್ರತ್ಯೇಕ ಸಂಘಟನೆಯ ಅವಶ್ಯಕತೆ ಕಂಡುಕೊAಡು ಭದ್ರಾವತಿಯಲ್ಲಿ ರಾಜ್ಯ ಮಟ್ಟದ ಜಾತಿ ವಿನಾಶ ಸಮ್ಮೇಳನ ಆಯೋಜಿಸಿದ್ದರು. ಭದ್ರಾವತಿಯಲ್ಲಿ ಆಗಿನ ಕೃಷ್ಣಪ್ಪನವರ ತಂಡದಲ್ಲಿ, ಎನ್. ಗಿರಿಯಪ್ಪ, ಟಿ. ರಾಜಣ್ಣ, ಹಾಲಯ್ಯ, ನರಸಿಂಹಯ್ಯ, ಚನ್ನಕೇಶವ, ಗಂಗಣ್ಣ, ಶಿವಲಿಂಗ, ಚಂದ್ರನ್, ಅತ್ತಿಗುಂದ ಕರಿಯಪ್ಪ, ಮಹಾಲಿಂಗರ್ತಿ ಜಿ., ಎಂಪಿಎಂನ ಕೃಷ್ಣರ್ತಿ ಇವರೆಲ್ಲ ಆಪ್ತ ವಲಯದಲ್ಲಿದ್ದು ಏನೇ ಹೋರಾಟದ ಕರೆ ಕೊಟ್ಟಾಗ ಬಂದು ಸೇರುತ್ತಿದ್ದರು.
ಇತರ ಮಿತ್ರ ಪಡೆ ಭದ್ರಾವತಿಯಲ್ಲಿ ದೊಡ್ಡದಿತ್ತು. ವಕೀಲ ನಾಗೇಂದ್ರರಾವ್, ಪ್ರೊ. ಚಂದ್ರಶೇಖರಯ್ಯ, ಬಿ. ರಾಜಣ್ಣ, ಶಿವಮೊಗ್ಗದ ಮುನೀರ್, ಸಾಸ್ವೆಹಳ್ಳಿ ಹಾಲಪ್ಪ, ಎಂ.ಎಲ್. ನಾಗಭೂಷಣ, ವೈ.ಎನ್. ಆಚಾರ್, ಶಿವಪ್ರಸಾದ್ (ವಿಐಎಸ್ಎಲ್), ಚಂದ್ರಪ್ರಸಾದ್ ತ್ಯಾಗಿ, ನಿಸಾರ್ ಅಹಮದ್, ರಾಚಪ್ಪ ಹೆಚ್, ವಾಗೀಶ್, ರಾಘವೇಂದ್ರ ರಾವ್ (ದಲಿತರ ಪರ ವಕೀಲರಾಗಿ ಮೊಕದ್ದಮೆಗಳನ್ನು ನಡೆಸುತ್ತಿದ್ದರು) ಇದ್ದರು. ಮಾದೇವ, ಸಿದ್ದಲಿಂಗಯ್ಯ, ವೆಂಕಟಸ್ವಾಮಿ, ಮುನಿವೆಂಕಟಪ್ಪ, ನಾರಾಯಣಸ್ವಾಮಿ, ದಿವಾಕರ ಹೆಗ್ಗಡೆ, ಎಂ.ಬಿ. ನಟರಾಜ್, ಸತ್ಯನಾರಾಯಣರಾವ್ ಅಣತಿ, ಚನ್ನಣ್ಣ ವಾಲೀಕಾರ, ದೇವಯ್ಯ ಹರವೆ ಇನ್ನು ಅನೇಕರು ರಾಜ್ಯದಾದ್ಯಂತ ಚೆದುರಿದ್ದ ಕೃಷ್ಣಪ್ಪನವರ ಹೋರಾಟದ ಸಂಗಾತಿಗಳಾಗಿದ್ದರು.
ಇವರೆಲ್ಲರ ಸಮಾಗಮವೆಂಬಂತೆ ಬಿಆರ್ಪಿಯಲ್ಲಿರುವ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಎರಡು ದಿನಗಳ ದಲಿತ ಸರ್ಷ ಸಮಿತಿಯ ತರಬೇತಿ ಶಿಬಿರವನ್ನು ಆಯೋಜಿಸಿದ್ದರು. ಆಗ ಬಂದ ಸಂಘಟಕರಿಗೆ ಊಟ ವಸತಿ ಮತ್ತು ಬಸ್ ರ್ಜ್ ಹೊಂದಿಸುವಲ್ಲಿ ಕೃಷ್ಣಪ್ಪನವರು ಪಡುತ್ತಿದ್ದ ಪಾಡನ್ನು ಬೇರೆ ಯಾವ ದಲಿತ ಸಂಘಟಕರು ಅನುಭವಿಸಿಲ್ಲ. ನಾನು ಮತ್ತು ನಮ್ಮಲ್ಲಿನ ಪ್ರಗತಿಪರ ಅಧ್ಯಾಪಕರು, ಸಹೋದ್ಯೋಗಿಗಳು ಸೇರಿ ಸ್ವಲ್ಪ ಹಣ ಸಂಗ್ರಹಿಸಿಕೊಟ್ಟಿದ್ದೆವು. ಅಲ್ಲಲ್ಲೆ ಪ್ರಗತಿಪರವಾಗಿ ಬರೆದುಕೊಂಡು ಹೋರಾಟಗಳನ್ನು ಮಾಡುತ್ತಿದ್ದ ದಲಿತರು ಅಂಬೇಡ್ಕರ್ ಸಿದ್ಧಾಂತದ ಗಟ್ಟಿ ನೆಲೆಯಲ್ಲಿ ಆತ್ಮೀಯ ಸಂಬಂಧಿಕರಂತೆ ಕೃಷ್ಣಪ್ಪನವರ ಸುತ್ತ ಒಟ್ಟುಗೂಡಿ ಇಂತಹ ಸಮಾವೇಶಗಳಲ್ಲಿ ಭಾಗವಹಿಸಿ ರ್ಚಿಸುತ್ತಿದ್ದರು.
ಬುಡ್ಲಿ ಬಂದ ನಂತರ, ಟೀಚರ್ ಕೆಲಸ ಸೇರಿದ ಗಾಯತ್ರಿ ಮನೆಯ ಹಿಂದೆ ಮುಂದೆ ಇದ್ದ ಜಾಗದಲ್ಲಿ ತರಕಾರಿ ಜೊತೆಗೆ ಇದ್ದ ಮಾವಿನ ಮರ ಮತ್ತು ದೊಡ್ಡ ನುಗ್ಗೆಮರ, ಸೀತಾಫಲದ ಮರಗಳನ್ನು ಸಂರಕ್ಷಿಸಿಕೊಂಡು ಸಾಕಷ್ಟು ಫಲ ಪಡೆಯುತ್ತಿದ್ದೆವು. ಬಂದ ಸಂಬಳದಲ್ಲಿ ಹತ್ತಿರದಲ್ಲಿದ್ದ ಲಕ್ಕವಳ್ಳಿಯಲ್ಲಿ ನಡೆಯುವ ಸಂತೆಗೆ ಹೋಗಿ ಅಗತ್ಯ ವಸ್ತುಗಳನ್ನು ವಾರಕ್ಕೊಮ್ಮೆ ಕೊಂಡು ಬರುತ್ತಿದ್ದೆವು. ಬಂದ ಎಲ್ಲ ಸಂಬಳದಲ್ಲಿ ದುಂದಾಗಿ ರ್ಚು ಮಾಡುತ್ತಾ ಉಳಿತಾಯ ಮತ್ತು ಅಚ್ಚುಕಟ್ಟುತನವಿಲ್ಲದೆ ಸ್ವಚ್ಛಂದವಾಗಿದ್ದ ನನಗೆ ಮದುವೆ ನಂತರ ಮಗು ಶಿಶಿರ ಬಂದು ಸಂಸಾರ ಜೀವನದ ಹೊಸ ಜೀವನಾನುಭವವನ್ನು ನೀಡಿತೆಂದೇ ಹೇಳಬೇಕು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಬಿಜೆಪಿ ನಾಯಕರಿಗೆ ಜನಾಕ್ರೋಶ ಯಾತ್ರೆ ಮಾಡುವ ನೈತಿಕತೆ ಇಲ್ಲ : ಸಿಎಂ ಸಿದ್ದರಾಮಯ್ಯ

ಸುದ್ದಿದಿನಡೆಸ್ಕ್:ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಸೇರಿದಂತೆ ಅವಶ್ಯಕ ವಸ್ತುಗಳ ಬೆಲೆ ಏರಲು ಕಾರಣ ಕೇಂದ್ರ ಸರ್ಕಾರ. ಕೇಂದ್ರದ ಬಿಜೆಪಿಯ ತಪ್ಪು ನೀತಿಗಳಿಂದಾಗಿ ಇಡೀ ದೇಶದಲ್ಲಿ ಬೆಲೆ ಏರಿಕೆಯಾಗಿದೆ. ಬಿಜೆಪಿ ನಾಯಕರಿಗೆ ಜನಾಕ್ರೋಶ ಯಾತ್ರೆ ಮಾಡುವ ಯಾವ ನೈತಿಕತೆಯು ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಇಂದು ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಸರ್ಕಾರ ಹೆಚ್ಚಿಸಿರುವ ಹಾಲಿನ ದರದಿಂದ ರೈತರಿಗೆ ಲಾಭ ಹೋಗುತ್ತದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕಚ್ಚಾ ತೈಲದ ಬೆಲೆಯ ಮೇಲೆ ನಿಗದಿಯಾಗುತ್ತದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಒಂದು ಬ್ಯಾರಲ್ ಕಚ್ಚಾತೈಲಕ್ಕೆ 120 ಡಾಲರ್ ಇತ್ತು, ಈಗ 65 ಡಾಲರ್ ಗೆ ಇಳಿದಿದೆ. ಅಂದು ಗ್ಯಾಸ್ ಸಿಲಿಂಡರ್ ಬೆಲೆ 400 ರೂ. ಇತ್ತು, ಇಂದು 800 ರೂ. ಮೀರಿದೆ. ಪೆಟ್ರೋಲ್ – ಡೀಸೆಲ್ ಬೆಲೆಯನ್ನು ಕೇಂದ್ರ ಸರ್ಕಾರ ಹೆಚ್ಚಿಸಿರುವ ಬಗ್ಗೆ ಜನರು ಪ್ರಶ್ನೆ ಕೇಳಬೇಕಿದೆ.
ಸರ್ಕಾರ ಆರ್ಥಿಕ ದಿವಾಳಿಯಾಗಿದೆ ಎಂಬ ಬಿಜೆಪಿಯವರ ಆರೋಪ ಅವರಿಗೇ ನಾಚಿಕೆಗೇಡಿನದು. ಬಿಜೆಪಿಯವರ ಕಾಲದಲ್ಲಿ ಅನುದಾನವಿಲ್ಲದಿದ್ದರೂ ಕಾಮಗಾರಿಗಳಿಗೆ ಮಂಜೂರಾತಿ ನೀಡಿ, ಟೆಂಡರ್ ಪ್ರಕ್ರಿಯೆ ಕೈಗೊಂಡಿದ್ದರು. ಈಗ ನಮಗೆ ಪಾಠ ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಅವರ ಸರ್ಕಾರದ ಅವಧಿಯಲ್ಲಿಯೇ ರಾಜ್ಯದ ಆರ್ಥಿಕತೆ ಕುಸಿದಿತ್ತು. ನಮ್ಮ ಅವಧಿಯಲ್ಲಿ ಹಿಂದಿನ ವರ್ಷಕ್ಕಿಂತ ಈ ಸಾಲಿನ ಬಜೆಟ್ ನ ಪ್ರಮಾಣ ಸುಮಾರು 38 ಸಾವಿರ ಕೋಟಿಯಷ್ಟು ಹೆಚ್ಚಾಗಿದೆ. ಇದು ಸರ್ಕಾರವೊಂದರ ಆರ್ಥಿಕ ದಿವಾಳಿತನವೇ? ಎಂದು ಪ್ರಶ್ನಿಸಿದ್ದಾರೆ.
ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರುವ ಮುಂಚೆ ದೇಶದ ಮೇಲೆ 53,11,000 ಕೋಟಿ ಸಾಲವಿತ್ತು. ಆದರೆ ಈಗ 200 ಲಕ್ಷ ಕೋಟಿಗೂ ಹೆಚ್ಚಾಗಿದೆ. ದೇಶದ ಸಾಲ ನಾಲ್ಕು ಪಟ್ಟು ಹೆಚ್ಚಲು ನರೇಂದ್ರ ಮೋದಿಯವರೇ ಕಾರಣ ಅಲ್ವಾ?
ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕರಾಗಿಯೂ ಅಸಮರ್ಥರಾಗಿದ್ದರು. ಕಾಂಗ್ರೆಸ್ ಪಕ್ಷಕ್ಕೆ ವಲಸೆ ಬಂದಾಗ ಬಿಜೆಪಿಯವರ ವಿರುದ್ಧವೇ ಹಲವು ಹೇಳಿಕೆಗಳನ್ನು ನೀಡಿದ್ದರು. ಜಾತಿಗಣತಿ ಜಾರಿಗೆ ತರಬೇಕೆಂಬುದು ಕಾಂಗ್ರೆಸ್ ನ ಭರವಸೆಯಾಗಿದೆ. ಒಂದು ಕುಟುಂಬದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿಯ ಬಗ್ಗೆ ಮಾಹಿತಿ ತಿಳಿಯುವುದು ಸರ್ಕಾರವಾಗಿ ಅವಶ್ಯಕ. ಸ್ವಾತಂತ್ರ್ಯ ನಂತರ ಜಾತಿಗಣತಿ ನಡೆದಿಲ್ಲ, ಹಲವು ಸಂದರ್ಭಗಳಲ್ಲಿ ನ್ಯಾಯಾಲಯಗಳಲ್ಲಿ ಈ ಬಗ್ಗೆ ಮಾಹಿತಿ ಕೇಳಲಾಗಿತ್ತು. ಆದ್ದರಿಂದ ಜಾತಿಗಣತಿ ಮಾಡಬೇಕಾದ ಅನಿವಾರ್ಯತೆಯಿತ್ತು.
ಜಾತಿಗಣತಿಯನ್ನು ಸಮರ್ಪಕವಾಗಿ ನಡೆಸಲಾಗಿಲ್ಲ ಎಂಬ ಬಿಜೆಪಿ ಆರೋಪ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರದಿಂದ ಕೂಡಿದೆ. ಸಮೀಕ್ಷೆಯನ್ನು ಶೇ. 95 ರಷ್ಟು ನಿಖರವಾಗಿ ನಡೆಸಲಾಗಿದೆ. ಶೇ. 98 ರಷ್ಟು ನಿಖರವಾಗಿ ಗ್ರಾಮಾಂತರ ಹಾಗೂ ಶೇ.96 ರಷ್ಟು ನಿಖರವಾಗಿ ನಗರ ಪ್ರದೇಶಗಳಲ್ಲಿ ನಡೆಸಲಾಗಿದೆ. 1,01,60,000 ಜನರು ಈ ಸಮೀಕ್ಷೆಯಲ್ಲಿ ಭಾಗಿಯಾಗಿದ್ದು, ಸುಮಾರು 1,36,000 ಜನ ಶಿಕ್ಷಕರಿದ್ದರು. ಶಿಕ್ಷಕರಲ್ಲಿ ಹೆಚ್ಚಿನವರು ಸಾಮಾನ್ಯ ವರ್ಗದವರೇ ಆಗಿದ್ದು, ಸಮೀಕ್ಷೆಯನ್ನು ವೈಜ್ಞಾನಿಕವಾಗಿ ನಡೆಸಲಾಗಿದೆ. ಜಾತಿಗಣತಿಯ ವರದಿಯನ್ನು ಸಚಿವ ಸಂಪುಟದಲ್ಲಿ ಚರ್ಚಿಸಿದ ನಂತರವಷ್ಟೇ ವಿಧಾನಸಭೆಯಲ್ಲಿ ಮಂಡಿಸಲು ಸಾಧ್ಯ.
ಒಳಮೀಸಲಾತಿ ಜಾರಿಗೆ ತರಲು ಜಸ್ಟೀಸ್ ನಾಗಮೋಹನ್ ದಾಸ್ ಅವರ ಆಯೋಗ ರಚಿಸಿ, ಎರಡು ತಿಂಗಳಲ್ಲಿ ವರದಿ ನೀಡಲು ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಆದಿ ದ್ರಾವಿಡ, ಆದಿ ಆಂದ್ರ, ಆದಿ ಕರ್ನಾಟಕ, ಎಸ್.ಸಿ ಗಳು ಸೇರಿದಂತೆ 102 ಜಾತಿಗಳಿವೆ. ಇವರಲ್ಲಿ ಯಾರು ಯಾವ ಜಾತಿಗೆ ಸೇರಿದ್ದಾರೆಂಬ ಬಗ್ಗೆ ಸ್ಪಷ್ಟತೆ ಸಿಗಬೇಕೆಂಬ ಕಾರಣಕ್ಕೆ ಸಮೀಕ್ಷೆ ನಡೆಸಲಾಗುತ್ತಿದೆ.
ನಮ್ಮ ಸರ್ಕಾರ ನವದೆಹಲಿಯಲ್ಲಿ ಕರ್ನಾಟಕ ಭವನವನ್ನು ನಿರ್ಮಿಸಿದೆ. ಅದೇ ರೀತಿ ಮಹಾರಾಷ್ಟ್ರ ಸರ್ಕಾರದವರು ಬೆಳಗಾವಿಯಲ್ಲಿ ಭವನವನ್ನು ನಿರ್ಮಾಣ ಮಾಡುತ್ತಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಇದಕ್ಕೆ ಅವಕಾಶವಿದೆ. ಆದರೂ ಮಹಾರಾಷ್ಟ್ರದವರು ನಮ್ಮ ಭೂಮಿಯನ್ನು ಆಕ್ರಮಿಸಿಕೊಳ್ಳಲು ಸಾಧ್ಯವಿಲ್ಲ. ಬೆಳಗಾವಿಯನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮುಂದಿನ 5 ದಿನ ಗುಡುಗು ಸಹಿತ ಮಳೆ ; ಹವಾಮಾನ ಇಲಾಖೆ ಮುನ್ಸೂಚನೆ

ಸುದ್ದಿದಿನಡೆಸ್ಕ್:ಮುಂದಿನ ಐದು ದಿನಗಳಲ್ಲಿ ಕರ್ನಾಟಕದ ಹಲವೆಡೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್ ಪಾಟೀಲ್ ತಿಳಿಸಿದ್ದಾರೆ. ಇಂದು ಧಾರವಾಡ, ತುಮಕೂರಿನಲ್ಲಿ ಸಾಧಾರಣ ಮಳೆಯಾಗಿದೆ. ಬೆಂಗಳೂರಿನಲ್ಲಿ ಇಂದಿನಿಂದ ಇದೇ 16ರವರೆಗೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜು : ನೀಲಾನಹಳ್ಳಿಯಲ್ಲಿ ಎನ್.ಎಸ್.ಎಸ್ ಶಿಬಿರ

ಸುದ್ದಿದಿನ,ದಾವಣಗೆರೆ:ನಗರದ ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜು ಮತ್ತು ನೀಲಾನಹಳ್ಳಿ ಗ್ರಾಮಸ್ಥರ ಸಂಯುಕ್ತಾಶ್ರಯದಲ್ಲಿ ಎರಡನೇ ದಿನದ ಎನ್.ಎಸ್.ಎಸ್.ಶಿಬಿರದ ಕಾರ್ಯಕ್ರಮ ಗುರುವಾರ (ಏ.10)ರಂದು ಜರುಗಿತು.
2024-25ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರದಲ್ಲಿ ಪ್ರೊ. ಮಂಜುನಾಥ ಜಿ. ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿಗಳು, ಬಾಬಾಸಾಹೇಬ್ ಅಂಬೇಡ್ಕರ್ ಶತಮಾನೋತ್ಸವ ಪದವಿ ಕಾಲೇಜ್ ಹರಿಹರ, ಇವರು
“ಸಂವಹನ ಕೌಶಲ್ಯ ಹಾಗೂ ಎನ್. ಎಸ್. ಎಸ್. ಮತ್ತು ಯುವಜನತೆ” ಕುರಿತು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಧುಶ್ರೀನಿವಾಸ ಟಿ., ಕೆ.ಸಿ.ಎಸ್. ಸಹಕಾರ ಸಂಘಗಳ ಉಪ ನಿಬಂಧಕರು, ದಾವಣಗೆರೆ ಜಿಲ್ಲೆ, ಸಹಕಾರ ಸಂಘಗಳ ಮಹತ್ವ ಬಗ್ಗೆ ತಿಳಿಸಿದರು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳಿ ಎಂದು ವಿದ್ಯಾರ್ಥಿಗಳ ತಿಳಿಸಿದರು.
ಪ್ರೊ. ಮಾರುತಿ ಶಾಲೆಮನೆ, ಕಿರುಚಿತ್ರ ನಿರ್ದೇಶಕರು ಮತ್ತು ಕನ್ನಡ ಉಪನ್ಯಾಸಕರ ವಿಷಯ : ‘ಮಾನವೀಯತೆಯ ಮಹಾವೀರ’ ಕುರಿತು ಮಾತನಾಡಿದರು.
ನಂತರ ಉಪನ್ಯಾಸದ ಕಾರ್ಯಕ್ರಮವನ್ನು ಪ್ರೊ. ಸೌಮ್ಯ ಬಿ., ಎನ್.ಎಸ್.ಎಸ್ ಅಧಿಕಾರಿಗಳು, ಉಪನ್ಯಾಸಕರು, ಎಸ್.ಬಿ.ಸಿ. ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ದಾವಣಗೆರೆ. ಇವರು
ವಿಷಯ : ‘ಮಹಿಳೆ ಮತ್ತು ಸ್ವಾವಲಂಬನೆ’ ಕುರಿತು ಮಾತನಾಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ರೇಖಾ ಹೆಚ್.ಜಿ., ವಿಭಾಗದ ಮುಖ್ಯಸ್ಥರು ವಾಣಿಜ್ಯ ಮತ್ತು ನಿರ್ವಹಣ ಶಾಸ್ತ್ರ ವಿಭಾಗ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಡಿ.ಆರ್.ವಿಶ್ವನಾಥ ಉಪನ್ಯಾಸಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜ್, ಹೊನ್ನಾಳಿ.
ನೀಲಾನಹಳ್ಳಿ ಗ್ರಾಮದ ಮುಖಂಡರಾದ ಸುಭಾಷ್ ಜೆ, ವಿರುಪಾಕ್ಷಪ್ಪ. ಕೆ. ಎನ್. ಡಿ.ರಾಜಪ್ಪ ಉಪಸ್ಥಿತರಿದ್ದರು.
ಈ ಕಾರ್ಯಕ್ರಮ ವನ್ನು ಶಿಬಿರಾರ್ಥಿಗಳಾದ ಶ್ರೇಯಾ ಪ್ರಾರ್ಥಿಸಿದರು, ನಿರೂಪಣೆಯನ್ನು ನೇಹ, ಸ್ವಾಗತವನ್ನು ಸುಚಿತ್ರ ಹಾಗೂ ವಂದನಾರ್ಪಣೆಯನ್ನು ಆಕಾಶ್ ಮಾಡಿದರು.
ಎನ್.ಎಸ್ ಎಸ್. ಕಾರ್ಯಕ್ರಮದ ಅಧಿಕಾರಿಗಳಾದ ಪ್ರೊಫೆಸರ್ ಅಣ್ಣೇಶ್. ಪಿ ಮತ್ತು ಶ್ರೀಮತಿ ಅನುಷಾ. ಎಸ್. ಹೆಚ್. ಕಾರ್ಯಕ್ರಮವನ್ನು ನಿರ್ವಹಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂಕಣ7 days ago
ಕವಿತೆ | ಚಳಿಗಾಲದ ಎರಡು ಜೀವರಸಗಳು
-
ದಿನದ ಸುದ್ದಿ7 days ago
ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತದೊಂದಿಗೆ ‘ಉಮ್ಮೀದ್ -2024’ ಕಾಯ್ದೆಯಾಗಿ ಜಾರಿ
-
ದಿನದ ಸುದ್ದಿ6 days ago
ಕನಗೊಂಡನಹಳ್ಳಿಗೆ 24/7 ನೀರು ಪೂರೈಕೆ | ಮಿತವಾಗಿ ಬಳಸಿ, ಭವಿಷ್ಯಕ್ಕೆ ಉಳಿಸಿ : ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್
-
ದಿನದ ಸುದ್ದಿ7 days ago
ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ : ಅನುದಾನ ಬಿಡುಗಡೆಗೆ ಆರ್. ಅಶೋಕ್ ಒತ್ತಾಯ
-
ದಿನದ ಸುದ್ದಿ5 days ago
ಚನ್ನಗಿರಿ | ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ ರಕ್ತದಾನ ಶಿಬಿರ’
-
ದಿನದ ಸುದ್ದಿ6 days ago
ಇಟ್ಟುಕೊಂಡವನ ಜೊತೆ ಸೇರಿ, ಕಟ್ಟಿಕೊಂಡನಿಗೆ ಚಟ್ಟಕಟ್ಟಿದ ನೀಲಮಣಿ ಅಂಡ್ ಗ್ಯಾಂಗ್
-
ದಿನದ ಸುದ್ದಿ5 days ago
ಪಿ ಯು ಫಲಿತಾಂಶ | ವಿದ್ಯಾರ್ಥಿಗಳಿಗೆ ಹಾರೈಸಿದ ಪಾಲಿಕೆ ಮಾಜಿ ಸದಸ್ಯೆ ಸವಿತಾ ಗಣೇಶ್ ಹುಲ್ಲುಮನೆ
-
ಕ್ರೀಡೆ6 days ago
ಏ.10 ರಿಂದ ಬೇಸಿಗೆ ಕಬಡ್ಡಿ ತರಬೇತಿ ಶಿಬಿರ