Connect with us

ಲೈಫ್ ಸ್ಟೈಲ್

ಈಚಲುಹುಳದ (ಈಸುಳ್ಳಿ) ವರ್ಮಿ ಚಾಟ್ಸ್..!

Published

on

ನಮ್ಮ ಗ್ರಾಮೀಣ ತಳಸ್ತರ ಜನರು ಸಸ್ಯಾಹಾರದೊಂದಿಗೆ, ಬೇಟೆಯಾಡಿ ಅಟ್ಟುಣ್ಣುವ ಮೊಲ, ಮುಂಗುಸಿ, ಆಮೆ, ಅಳಿಲು, ಉಡ, ಕಮ್ಮಾರ ಕಾಗೆ, ಸರ್ಲೆ ಹಕ್ಕಿ, ಕೊಕ್ಕರೆ, ನೀರುಕೋಳಿ, ಕಾಡುಕೋಳಿ, ಬುಲ್ಡೆಮುಳುಗ ಪಕ್ಷಿ, ಮೀನು, ಸೀಗಡಿ, ಕೆಂಜುಗ, ಏಡಿಕಾಯಿ, ಮಳೆಗಾಲದಲ್ಲಿ ಹುತ್ತದಿಂದ ಉಕ್ಕಿ ಬರುವ ಈಚಲು ಹುಳು (ಈಸುಳ್ಳಿ), ಹುತ್ತದ ಗೆಜ್ಜಲರಾಣಿ ಹುಳು (ತುಪ್ಪದ ಈಚಲು), ಹೊಲಗದ್ದೆಗಳಲ್ಲಿರುವ ತ್ವಾಡ, ಬೆಳ್ಳಿಲಿ, ಬಾರುಬೆಕ್ಕು, ಮನೆಬೆಕ್ಕು, ಹೊಲಗದ್ದೆಗಳ ಅಕ್ಕಡಿಸಾಲು ಗಿಡಗಳಲ್ಲಿ ಗೂಡು ಕಟ್ಟಿ ಜೀವಿಸುವ ಪುರ್ಲಕ್ಕಿ, ಪಾರಿವಾಳ, ಬೆಳವ, ಗದ್ದೆ ಮಿಡತೆ ಮುಂತಾದ ಸಣ್ಣ ಪುಟ್ಟ ಜೀವಿಗಳನ್ನು ಬೇಟೆಯಾಡಿ ತಿನ್ನುತ್ತಾರೆ.

ಕೇರೆ ಹಾವಿನ ಬಾಡೆಸರನ್ನು ಬಿದಿರು ಗೊಟ್ಟದಲ್ಲಿ ತುಂಬಿ ಉಳುವ ದನಗಳಿಗೆ ಕುಡಿಸಿದ ಬಳಿಕ ಮಿಕ್ಕ ಮಾಂಸವನ್ನು ತಾವೂ ತಿಂದು ತಮ್ಮ ಬೇಟೆ ನಾಯಿಗಳಿಗೂ ತಿನ್ನಿಸುತ್ತಾರೆ. ಕೇರೆ ಹಾವಿನ ಬಾಡಾಮ್ರ ಕುಡಿದ ಹೋರಿಗಳು ಸುಂಕೇರಿ ಯಾವಾಗಲೂ ಸಿರಸಿರನೆ ಸಿರಗುಡತೊಡಗಿದರೆ, ಬೇಟೆ ನಾಯಿಗಳು ಮತ್ತು ಮಂದಬುದ್ಧಿಯವರು ಚುರುಕಾಗುತ್ತಾರೆ ಹಾಗೂ ಗಂಡಸರು ಸದಾ ಸಿಟ್ಟು ಕ್ವಾಪ ಕಾತಾಳ ಕ್ಯಾಣಗಳನ್ನು ಪ್ರದರ್ಶಿಸುವ ‘ಕಡಿದುಗಾರ ಗಂಡಸರು’ ಆಗುತ್ತಾರೆಂದು ನಂಬುತ್ತಾರೆ. ಕೇರೆ ಹಾವಿನ ಹುಳಿಸಾರನ್ನು ಮನುಷ್ಯರು ಸೇವಿಸುವುದನ್ನು ಆದಷ್ಟು ಅವಾಯ್ಡ್ ಮಾಡುತ್ತಾರೆ.

ಬೆಳವ, ಕೌಜಲ, ಪಾರಿವಾಳ, ಪುರ್ಲಕ್ಕಿ (ಪುರುಡಕ್ಕಿ) ಮುಂತಾದ ಸಣ್ಣ ಗಾತ್ರದ ಪಕ್ಷಿಗಳ ಮೊಟ್ಟೆಗಳನ್ನು ಸಗಣಿ ಉಂಡೆಯಲ್ಲಿಟ್ಟು ಬೆಂಕಿಯಲ್ಲಿ ಸುಟ್ಟು ತಿನ್ನುತ್ತಾರೆ. ಪೊದೆಗಿಡಗಳಿಂದ ಇದ್ದಕ್ಕಿದ್ದಂತೆ ಪುರ್ರನೆ ಹಾರುವ ಪುರುಡಕ್ಕಿಯನ್ನು ನೋಡಿದ ಕೂಡಲೇ, ‘ಪುರುಡಕ್ಕಿ ಪುರ್ರಂತು- ಮಾವನ ತರಡು ಜಲ್ಲಂತು’ ಎಂದು ಆ ಹಕ್ಕಿಯನ್ನು ಹಿಡಿಯಲು ಪ್ರಯತ್ನಿಸುತ್ತಾರೆ.

ಮುಂಗಾರು ಮಳೆಗಾಲದಲ್ಲಿ ಮಳೆ ಸುರಿದು ನಿಂತಾಗ, ಹುತ್ತದಿಂದ ಉಕ್ಕಿ ಹೊರಗೆ ಹಾರಿಹೋಗುವ ಈಚಲಹುಳುಗಳನ್ನು ರಾತ್ರಿ ವೇಳೆ ಸುಡಿಗೆ ಗರಿಗಳ ಜ್ವಾಲೆಗೆ ಆಕರ್ಷಿಸಿ ರೆಕ್ಕೆ ಸುಟ್ಟು ಹಿಡಿಯುತ್ತಾರೆ. . ಗೆದ್ದಲು ಜಾತಿಗೆ ಸೇರಿದ ಈಚಲ ಹುಳುಗಳನ್ನು ಇಂಗ್ಲೀಷಿನಲ್ಲಿ ‘ವಿಂಗ್ಡ್ ವೈಟ್ ಆ್ಯಂಟ್ಸ್’ ಎಂದು ಕರೆಯುತ್ತಾರೆ. ಗೆದ್ದಲು ಹುಳುಗಳೇ ಬೆಳೆದು ರೆಕ್ಕೆ ಮೂಡಿ ಈಚಲು ಹುಳಗಳಾಗಿ ರೂಪಾಂತರವಾಗುತ್ತವೆ. ಹುತ್ತದ ತಳದಲ್ಲಿ ಈಚಲಹುಳಗಳ ಸಾಮ್ರಾಜ್ಯದ ಅಧಿಪತಿಯಾಗಿ ರಾಣಿಹುಳು ಅಥವಾ ತುಪ್ಪದ ರಾಣಿಹುಳ ಇರುತ್ತದೆ. ಇದರ ಸಣ್ಣ ತಲೆಯನ್ನು ಉಗುರಿನಿಂದ ಚಿವುಟಿ ತೆಗೆದೆಸೆದು ಇಡೀ ಉಂಡೆ ಹುಳುವನ್ನು ಒಮ್ಮೆಲೆ ಗಂಟಲಿನೊಳಗೆ ಇರಿಸಿಕೊಂಡು ಮಾತ್ರೆಯಂತೆ ನುಂಗಿಬಿಡುತ್ತಾರೆ.

ಎಲ್ಲಾ ಕಾಲಗಳಲ್ಲೂ ಸಿಗುವ ಮೀನು ಸೀಗಡಿ ಏಡಿಕಾಯಿಗಳಂತೆ ಈಚಲು ಹುಳುಗಳು ಸದಾಕಾಲ ಸಿಗುವುದಿಲ್ಲ. ಇವು ಸಿಗುವುದು ಮುಂಗಾರಿನಲ್ಲಿ ಮಾತ್ರ. ಈಚಲು ಹುಳುಗಳು ಬೀದಿಗಳ ಕರೆಂಟ್ ಕಂಬದ ದೀಪದ ಬೆಳಕಿಗೆ ಆಕರ್ಷಿತವಾಗಿ ಗುಂಪುಗಳಲ್ಲಿ ಹಾರಿ ಬಂದು, ಅಪಾರ ಹುಳುಗಳು ದೀಪದ ಶಾಖಕ್ಕೆ ರೆಕ್ಕೆ ಕಳಚಿ ಬೀಳುತ್ತವೆ. ಹೀಗೆ ಬೀದಿ ದೀಪದ ಬೆಳಕಿಗೆ ಬರುವ ಹುಳುಗಳನ್ನು ಜನರು ತೆಂಗಿನಗರಿ ಅಥವಾ ಅಡಕೆ ಗರಿಗಳ ಸುಡಿಗೆ ಸೂಡುಗಳಿಂದ ತಮ್ಮತ್ತ ಸೆಳೆದು ಕಡ್ಡಿಪೊರಕೆಯಿಂದ ಗುಡಿಸಿ, ಮಡಕೆಗಳಿಗೆ ತುಂಬಿಕೊಂಡು, ಕಳಚಿದ ರೆಕ್ಕೆ ಕಸಕಡ್ಡಿ ಕೇರಿ ನೇರ್ಪು ಮಾಡಿಕೊಳ್ಳುತ್ತಾರೆ.

ಈಚಲಹುಳುಗಳನ್ನು ಬೇಟೆಯಾಡಲು ಅನೇಕ ತಂತ್ರಗಳನ್ನು ಅನುಸರಿಸಲಾಗುತ್ತದೆ. ಹುಳುಗಳಿರುವ ಹುತ್ತವನ್ನು ಹುಡುಕಿ ಕ್ವಾವೆಗಳನ್ನೆಲ್ಲಾ ಅಂಟು ಮಣ್ಣಿನಿಂದ ಮುಚ್ಚಿ ಮುದ್ರೆಮಾಡಿ ಹುತ್ತದ ತಳದಲ್ಲಿ ಒಂದೇ ಒಂದು ಕ್ಯಾವೆಯನ್ನು ಮಾತ್ರ ತೆರೆದಿರಿಸಿ, ತಂಗಡಿ ಗಿಡದ ಸೊಪ್ಪನ್ನು ಅಥವಾ ಲಕ್ಕಿಗಿಡದ ಸೊಪ್ಪನ್ನು ಹುತ್ತದ ಕ್ವಾವೆಗಳ ಮೇಲೆ ಮಂದವಾಗಿ ಹರಡಿ ಗಾಳಿ ಸುಳಿಯದಂತೆ ಹುತ್ತವನ್ನು ಮುಚ್ಚುತ್ತಾರೆ. ಹುತ್ತದ ಬುಡದಲ್ಲಿ ಮುಚ್ಚದೇ ತೆರೆದಿರಿಸಿರುವ ಕ್ಯಾವೆಯ ಹತ್ತಿರ 2X2 ಅಡಿಗಳಷ್ಟು ಗುಂಡಿಯನ್ನು ತೋಡಿ ಆ ಗುಂಡಿಯೊಳಕ್ಕೆ ಹುಳಗಳು ಹರಿದುಹೋಗುವಂತೆ ವ್ಯವಸ್ಥೆಮಾಡಿ ಗುಂಡಿಯ ಅರ್ಧ ಪ್ರಮಾಣ ನೀರುತುಂಬಿ ಮೇಲ್ಭಾಗಕ್ಕೆ ಅತ್ತಲಿತ್ತಲೂ ಅಡ್ಡಡ್ಡವಾಗಿ ಲಕ್ಕಿಸೊಪ್ಪು ಅಥವಾ ತಂಗಡಿ ಸೊಪ್ಪನ್ನು ಹರಡುತ್ತಾರೆ. ಹುಳುಗಳು ಆ ಸೊಪ್ಪಿನ ಕೆಳಕ್ಕೆ ಹರಿದುಬಂದು ಸೊಪ್ಪಿನ ಕಾವಿನಲ್ಲಿ ರೆಕ್ಕೆ ಕಳೆದುಕೊಂಡು, ಹಸಿ ಸೊಪ್ಪಿನ ಗಮಲಿಗೆ ಅಮಲೇರಿ ಗುಪ್ಪೆಯಾಗಿ ಗುಂಡಿಯೊಳಗೆ ಬಿದ್ದಿರುತ್ತವೆ.

ಚಾಪೆಗಳ ಮೇಲೆ ಅಥವಾ ಹಾಸುಬಂಡೆಗಳ ಮೇಲೆ ಈ ಈಚಲು ಹುಳಗಳನ್ನು ಹರಡಿ ಬಿಸಿಲಿನಲ್ಲಿ ಎರಡು ದಿನ ಚೆನ್ನಾಗಿ ಒಣಗಿಸಿ ಮತ್ತೊಮ್ಮೆ ಕೇರಿ ಶುಚಿಗೊಳಿಸುತ್ತಾರೆ. ಒಲೆ ಮೇಲೆ ಹುರಿದ ಒಣ ಈಚಲು ಹುಳಗಳೊಂದಿಗೆ ಚಿನಕುರುಳಿ-ಎಳ್ಳು-ಕುಸುಬೆ- ಹುರಿದ ಹೆಸರುಕಾಳು- ಹುರಿದ ಅಲಸಂದೆಕಾಳು,ಜೋಳದ ಅವಲು, ಒಣಕೊಬ್ಬರಿ ತುರಿ- ಬೆಳ್ಳುಳ್ಳಿ- ಹುರಿಗಡಲೆ- ಹುರಿದ ಕಳ್ಳೇಬೀಜಗಳಿಗೆ ಉಪ್ಪು ಹಾಗೂ ಸ್ವಲ್ಪ ಖಾರದ ಪುಡಿ ಅಥವಾ ಕಾಳುಮೆಣಸಿನ ಪುಡಿ ಉದುರಿಸಿ ಒಲೆ ಮೇಲೆ ಖಾರಮಂಡಕ್ಕಿಯಂತೆ ಅಗ್ಗರಿಸಿ ‘ಕುರುಕ್ಲು’ ಕೈತಿಂಡಿ ತಯಾರಿಸಲಾಗುತ್ತದೆ. ಹುಳುಗಳಲ್ಲಿಯೇ ಎಣ್ಣೆ ಅಥವಾ ತುಪ್ಪ ಇರುವುದರಿಂದ ಒಗ್ಗರಣೆ ಹಾಕಿ ಅಗ್ಗರಿಸಲು ಪ್ರತ್ಯೇಕ ಎಣ್ಣೆ ಬಳಸುವ ಅಗತ್ಯವಿಲ್ಲ.

ಈ ಖಾದ್ಯವನ್ನು ಮಕ್ಕಳು ಹಿತವಾಗಿ ಸವಿಯುತ್ತಾರೆ. ರೊಟ್ಟಿಯೊಂದಿಗೆ ನೆಂಚಿಕೆಯಾಗಿ ಅಥವಾ ಟೈಂಪಾಸ್ ವರ್ಮಿ ಚಾಟ್ಸ್ ಆಗಿ ಬಳಕೆಯಾಗುವ ಇದು ಬಸುರಿ ಬಾಣಂತಿಯರಿಗೆ ಪೌಷ್ಟಿಕ ಆಹಾರವಾಗಿ ಒದಗುತ್ತದೆ. ನಮ್ಮ ಗ್ರಾಮೀಣ ಜನರು ಒಣ ಸೀಗಡಿಯಿಂದ ತಯಾರಿಸಿದ ಚಟ್ಣಿಪುಡಿ, ಹಸಿ ತೊಗರಿ ಕಾಳಿನೊಂದಿಗೆ ಏಡಿಕಾಯಿ ಹಾಕಿ ತಯಾರಿಸಿದ ಹುಳಿಸಾರು, ಸಸ್ಲು ಮೀನು – ಮಳ್ಳೆಮೀನು – ಕರಿಮೀನಿನ ಹುಳಿಸಾರು, ಏಡಿಕಾಯಿ ಸೂಪು ಮುಂತಾದ ರುಚಿಕರ ತಿನಿಸುಗಳನ್ನು ತಯಾರಿಸಿ ಪಾಂಗಿತವಾಗಿ ಸವಿಯುತ್ತಾರೆ. ಇಂತಹ ತಿನಿಸುಗಳು ‘ಜೀವಕ್ಕೆ ತಂಪು – ಜುಟ್ಟಿಗೆ ಭದ್ರ. In my childhood days, my mother Vaddagere Kadaramma was an expert in preparing this wormy chats, you know!’

ವಿಶೇಷ ಸೂಚನೆ : ಮಾಂಸಾಹಾರ ಪ್ರಿಯ ಬೇಟೆಗಾರರು ತಿನ್ನುವ ಕೆಲವು ಜೀವಿಗಳಿವು. ಮೀನು – ಸೀಗಡಿ- ಏಡಿಕಾಯಿ ಮುಂತಾದ ಕೆಲವು ಆಹಾರಕ್ಕೆಂದೇ ಸೀಮಿತವಾಗಿರುವ ಜೀವಿಗಳನ್ನು ತಿನ್ನುವ ಬಗ್ಗೆ ನಮ್ಮ ಆಕ್ಷೇಪವಿರಲಾರದು. ಆಮೆ, ಉಡ, ನರಿ, ತೋಳ, ಬಾರುಬೆಕ್ಕು, ಮುಂಗುಸಿ, ಬಾವಲಿ, ನವಿಲು, ಜಿಂಕೆ, ಕಡವೆ, ಕಾಡೆಮ್ಮೆ ಇನ್ನೂ ಮುಂತಾದ ಅಮೂಲ್ಯ ಜೀವಿಗಳ ರಕ್ಷಣೆ ನಮ್ಮೆಲ್ಲರ ಹೊಣೆ. ಅಪಾರ ಪ್ರಮಾಣದ ಕಾಡು – ಕಾಡುಪ್ರಾಣಿಗಳು ನಾಶವಾಗಿಹೋಗಿವೆ. ಇಷ್ಟೊಂದು ನಾಶದ ಬಳಿಕ ಜಾರಿಯಾಗಿರುವ ವನ್ಯಜೀವಿ ಸಂರಕ್ಷಣಾ ಕಾಯ್ದೆಯಿಂದಾಗಿ ಕೆಲವು ಅಮೂಲ್ಯ ಜೀವಿಗಳು ಉಳಿದುಕೊಂಡಿವೆ. ಹೀಗಿದ್ದೂ ಶ್ರೀಮಂತರು ಮತ್ತುkm
ರಾಜಕಾರಣಿಗಳ ಶಾಮೀಲಾ ತಿಯಿಂದಾಗಿ ಅವರ ನಾಲಗೆ ರುಚಿ ಹಾಗೂ ಕಳ್ಳಸಾಗಾಣಿಕೆಗೆ ಈ ಜೀವಿಗಳ ಬೇಟೆ ಅವ್ಯಾಹತವಾಗಿ ನಡೆಯುತ್ತಿದೆ. ಇವುಗಳನ್ನು ರಕ್ಷಿಸಬೇಕಾದದ್ದು ನಮ್ಮೆಲ್ಲರ ಹೊಣೆ ಎಂಬುದನ್ನು ಮರೆಯದಿರೋಣ.

-ಡಾ.ವಡ್ಡಗೆರೆ ನಾಗರಾಜಯ್ಯ
8722724174

ಸುದ್ದಿದಿನ.ಕಾಂ|ವಾಟ್ಸಾಪ್|9986715401

ಅಂತರಂಗ

250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ

Published

on

250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು

ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ

ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.

ಖರ್ಗೋನ್‌ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.

ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.

ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

Continue Reading

ಅಂಕಣ

Indian birthwort: ಪರಮಾತ್ಮನ ಹೆಸರಲ್ಲೇ ಇರುವ ದಿವ್ಯೌಷದ ಈಶ್ವರ ಬಳ್ಳಿ ಬಗ್ಗೆ ಗೊತ್ತೇ?

Published

on

indian birthwort, Aristolochia tagala

‘ಈಶ್ವರ’ ಎಂದ ಕೂಡಲೇ ಪರಮಾತ್ಮನನ್ನೆ ನೆನಪಿಸಿಕೊಳ್ಳೋ ನಮಗೆ ಅದೇ ಹೆಸರಿನಲ್ಲಿ ದಿವ್ಯೌಷಧಿ ಇದೆ ಎಂಬುದು ಎಷ್ಟು ಜನರಿಗೆ ತಿಳಿದೀತು? ಹೌದು! ಪರಮಾತ್ಮನ ಹೆಸರಿನಲ್ಲೇ ಒಂದು ಗಿಡಮೂಲಿಕೆ ಇದೆ (Indian birthwort). ಇದರ ವಿಶೇಷತೆ ಏನು? ಅದರಿಂದಾಗುವ ಪ್ರಯೋಜನಗಳೇನು? ಆರೋಗ್ಯದ ಮೇಲೆ ಬೀರುವ ಪ್ರಬಾವಗಳೇನು? ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.

ಈ ಬಳ್ಳಿಯನ್ನು ಹೆಚ್ಚಾಗಿ ಭಾರತ, ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳಲ್ಲಿ ಕಾಣಬಹುದಾಗಿದೆ. ಇದರ ವೈಜ್ಞಾನಿಕ ಹೆಸರು ಅರಿಸ್ಟೋಲೋಚಿಯ ಇಂಡಿಕಾ. ಸಾಮಾನ್ಯವಾಗಿ ಮೂಲಿಕೆ ಮರಕ್ಕೆ ಸುತ್ತಿಕೊಂಡು ಬೆಳೆಯುವ ಕಪ್ಪು ಬಳ್ಳಿಯಾಗಿದ್ದು, ಇದರ ಎಲೆಗಳು ಉದ್ದವಾಗಿ, ತಳದಲ್ಲಿ ಅಗಲವಾಗಿ, ತುದಿಯಲ್ಲಿ ಮೊನಚಾಗಿ, ಮೃದುವಾಗಿರುತ್ತದೆ. ಇನ್ನೂ ಇದರ ಬೀಜಗಳು ಚಪ್ಪಟೆಯಾಗಿ, ಅಂಡಕಾರವಾಗಿದ್ದು ಪುಕ್ಕಗಳನ್ನು ಹೊಂದಿದೆ ಹಾಗು ಇದರ ಬೇರುಗಳಲ್ಲಿ ಸುಗಂಧ ತೈಲವಿರುತ್ತದೆ.

ಈಶ್ವರ ಬಳ್ಳಿ (Indian birthwort)ಯ ಪೌರಾಣಿಕ ಹಿನ್ನೆಲೆ:

ನಮ್ಮೆಲ್ಲರಿಗೂ ತಿಳಿದಂತೆ ಶಿವ ಸಮುದ್ರ ಮಂಥನ ಮಾಡುವಾಗ ಹಾಲಾಹಲ (ವಿಷ) ಉತ್ಪತ್ತಿಯಾಯಿತು. ಆ ವಿಷ ಯಾರಿಗೂ ತೊಂದರೆಯಾಗಬಾರದೆಂದು ತಾನೇ ಅದನ್ನು ಕುಡಿದ. ಇದನ್ನು ನೋಡಿದ ಪಾರ್ವತಿ ದೇವಿ ಆ ವಿಷ ತನ್ನ ಪತಿಯ ಹೊಟ್ಟೆ ಸೇರಬಾರದೆಂದು ಆತನ ಕುತ್ತಿಗೆಯನ್ನು ಒತ್ತಿ ಹಿಡಿದಳು. ವಿಷ ಒಳ ಹೋಗಲಿಲ್ಲ. ವಿಷದ ಪ್ರಭಾವದಿಂದ ಕುತ್ತಿಗೆ ನೀಲ ವರ್ಣವಾಯಿತು. ಶಿವ ನೀಲಕಂಠನಾದ. ಶಿವ ವಿಷ ಕುಡಿದರೂ ಶಿವನಿಗೆ ಏನೂ ಆಗಲಿಲ್ಲ. ವಿಷವನ್ನು ನಿರ್ವಿಷ ಮಾಡುವ ಗುಣ ಶಿವನಿಗಿದ್ದಂತೆ ಈ ಗಿಡಕ್ಕೂ ಇರುವ ಕಾರಣ ‘ಈಶ್ವರ’ ಎಂಬ ಹೆಸರು ಈ ವನಸ್ಪತಿಗೆ ಇಟ್ಟಿದ್ದಾರೆ.

ಇದನ್ನೂ ಓದಿ: ಓಂಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ

‘ಈಶ್ವರ’ ಬಳ್ಳಿ ಮತ್ತು ಅದರ ಫಲ ನೋಡಲು ಹೇಗಿರುತ್ತದೆ?

ಕೆಲ ‘ಈಶ್ವರ’ ಬಳ್ಳಿಯು ಮರದಂತೆ ಉದ್ದಕ್ಕೆ ಏರುತ್ತದೆ. ಮತ್ತಷ್ಟು ಬಳ್ಳಿಯು ಪೊದೆಯಾಗಿ ಆವರಿಸಿಕೊಳ್ಳುತ್ತದೆ. ಸ್ವಲ್ಪ ಉದ್ದ ಆಯತಾಕಾರದ ಎಲೆಗಳು. ಎಲೆಗಳು ಅಲ್ಲಾಡಿದರೆ ಪರಿಮಳ ಸೂಸುತ್ತದೆ. ಎಲೆಯನ್ನು ಕಿವಿಚಿದರೂ ಪರಿಮಳ ಬರುತ್ತದೆ. ಹೂಗಳು ಬಾಯಿ ತೆರೆದ ಹಕ್ಕಿಗಳಂತೆ ಕಂಡುಬರುತ್ತದೆ. ಫಲಗಳು ಉದ್ದ ಹಾಗೂ ಸ್ವಲ್ಪ ದುಂಡಾಗಿ ಇರುತ್ತದೆ. ಫಲ ಬೆಳೆದು ಒಡೆದಾಗ ತಲೆ ಕೆಳಗಾಗಿ ಬಿಡಿಸಿದ ಪ್ಯಾರಾಚೂಟ್‌ನಂತೆ ಕಾಣುತ್ತದೆ. ಅದರೊಳಗೆ ತೆಳುವಾದ ತ್ರಿಕೋಣಾಕಾರದ ಬೀಜಗಳು ಇರುತ್ತದೆ.

‘ಈಶ್ವರ’ ಬಳ್ಳಿ (Indian birthwort)ಯಿಂದ ಆಗುವ ಪ್ರಯೋಜನಗಳೇನು?

ಭಾರತದ ಎಲ್ಲಾ ಕಡೆ ಕಂಡು ಬರುವ ಈಶ್ವರ ಬಳ್ಳಿಯ ಬೇರು, ಎಲೆಗಳು ಔಷಧಿಗಾಗಿ ಉಪಯೋಗಿಸಲ್ಪಡುತ್ತದೆ. ಕ್ರಿಮಿ ಬಾಧೆ, ಕಫ ಬಾಧೆ, ಸ್ತ್ರೀಯರ ಕೆಲವು ತೊಂದರೆಗಳಲ್ಲಿ, ವಿಷ ಚಿಕಿತ್ಸೆಯಲ್ಲಿ ವಿಶೇಷವಾಗಿ ಇದನ್ನು ಉಪಯೋಗಿಸಲ್ಪಡುತ್ತದೆ.

ಜೇಡ, ಚೇಳು, ಇಲಿ ಕಚ್ಚಿದರೆ: ಇದರ 3ಗ್ರಾಂ ಬೇರನ್ನು ಅಕ್ಕಿ ತೊಳೆದ ನೀರಲ್ಲಿ ಕಲಸಿ ಕುಡಿಸಬೇಕು ಹಾಗೂ ಅದರ ಎಲೆಯನ್ನು ನೀರಲ್ಲಿ ಅರೆದು ಕಚ್ಚಿದಲ್ಲಿಗೆ ಲೇಪಿಸಬೇಕು.
ತಲೆ ನೋವಿಗೆ ರಾಮಬಾಣ: ಈಶ್ವರ ಬಳ್ಳಿಯ ಎಲೆಯಲ್ಲಿ 10 ಗ್ರಾಂ ರಸ ತೆಗೆದು, 3ಗ್ರಾಂ ಅರಿಶಿನ ಪುಡಿ ಸೇರಿಸಿ ಕುಡಿಯುವುದರಿಂದ ತಲೆನೋವು ಶೀಘ್ರವಾಗಿ ಕಡಿಮೆಯಾಗುತ್ತದೆ.
ಗಂಟುನೋವು, ಬಿಳಿ ಮಚ್ಚೆಗಳು: ಈ ಎಲೆಯನ್ನು ನೀರಲ್ಲಿ ಅರೆದು ಗಂಟುನೋವು ಅಥವಾ ಬಿಳಿ ಮಚ್ಚೆಗಳ ಮೇಲೆ ಹಚ್ಚುತ್ತ ಬಂದರೆ ಕ್ರಮೇಣ ವಾಸಿಯಾಗುತ್ತದೆ.
ಕೆಮ್ಮು ಕಫಕ್ಕೆ ಔಷಧಿ: ಇದರ ಎಲೆಯ ಜ್ಯೂಸ್ ತೆಗೆದು 15 ಎಂಎಲ್ ನಷ್ಟು ಕುಡಿಸುವುದರಿಂದ ಕಡಿಮೆಯಾಗುವುದು. ಕೆಲವೊಮ್ಮೆ ಈ ಎಲೆಯ ಜ್ಯೂಸ್ ಕುಡಿದ ಸ್ವಲ್ಪ ಹೊತ್ತಿನಲ್ಲಿ ಕಫ ವಾಂತಿಯಾಗಿ ಕರಗಿ ಹೋಗುತ್ತದೆ. ಕಫ ಜಾಸ್ತಿ ಇರುವಾಗ ಸಾಮಾನ್ಯವಾಗಿ ಅಮೃತಾಂಜನ, ವಿಕ್ಸ್ ಎದೆಗೆ ಹಚ್ಚುತ್ತಾರೆ. ಅದೇ ರೀತಿ ಎಲೆಯನ್ನು ಅರೆದು ಎದೆಗೆ ಹಚ್ಚಬಹುದು.
ಮುಟ್ಟಿನ ದೋಷ ನಿವಾರಣೆ: ಹೆಣ್ಣುಮಕ್ಕಳ ಋತುಚಕ್ರದ ವೇಳೆ ಕಾಣಿಸಿಕೊಳ್ಳುವ ಹೊಟ್ಟೆನೋವಿಗೆ 10ಗ್ರಾಂ ಈಶ್ವರ ಬೇರಿನ ಕಷಾಯ ಮಾಡಿ (30 ರಿಂದ 40 ಎಂ.ಎಲ್) ಕುಡಿಸಬೇಕು.
ಹೊಟ್ಟೆ ಕ್ರಿಮಿ ಬಾಧೆ: 5-10 ಮಿಲಿ ಎಲೆರಸವನ್ನು 3 ದಿನ ಕುಡಿಯುವುದರಿಂದ ಕಡಿಮೆಯಾಗುವುದು.
ಜ್ವರಕ್ಕೆ ದಿವ್ಯೌಷಧಿ: 5 ಗ್ರಾಂ ಈಶ್ವರ ಬೇರನ್ನು ಕಷಾಯ ಮಾಡಿ ಅದಕ್ಕೆ 1/2 ಚಮಚ ಕಾಳು ಮೆಣಸು ಪುಡಿ ಸೇರಿಸಿ ಕುಡಿಯುವುದರಿಂದ ಕಡಿಮೆಯಾಗುವುದು. ಶರೀರ ಬಿಸಿ ಆಗಿ ಚಳಿಯಿಂದ ಕೂಡಿದ ಜ್ವರವಿದ್ದರೆ ಈಶ್ವರ ಬೇರಿನ ಕಷಾಯದೊಂದಿಗೆ ಈಶ್ವರ ಬೇರಿನ ಎಲೆ ರಸಕ್ಕೆ ಹಿಪ್ಪಿಯನ್ನು ಪುಡಿಮಾಡಿ ಸೇರಿಸಿ ಕುಡಿಯುವುದರಿಂದ ಕಡಿಮೆಯಾಗುವುದು.
ಸರ್ಪ ಸುತ್ತಿಗೆ ರಾಮಬಾಣ: ಇತ್ತೀಚೆಗೆ ಸರ್ಪ ಸುತ್ತಿಗೆ ಅನೇಕ ಔಷಧಿಗಳಿದ್ದರು ಈಶ್ವರ ಬೇರು ಮತ್ತು ನೀಲಿ ಸೊಪ್ಪನ್ನು ಸೇರಿಸಿ ಅರೆದು ಹಚ್ಚುವುದರಿಂದ ಉರಿ ನೋವು ಕಡಿಮೆಯಾಗುವುದು.
ದೃಷ್ಟಿ ದೋಷ ನಿವಾರಣೆ: ಇದರ ಬೇರನ್ನು ನಯವಾಗಿ ಚೂರ್ಣಮಾಡಿ ಅದಕ್ಕೆ ಅಪ್ಪಟ ಗೋರೋಜನ ಮತ್ತು ಚಂದನ ಸೇರಿಸಿ ತಿಲಕವಿಟ್ಟರೆ ದೃಷ್ಟಿ ದೋಷ ಪರಿಹಾರವಾಗುತ್ತದೆ.
ಮಲಬದ್ಧತೆ ಮತ್ತು ಮೂಲವ್ಯಾಧಿ ನಿವಾರಣೆ: ಈಶ್ವರಿಬೇರು, ಹಾವು ಮೆಕ್ಕೆ ಬೇರು ದಂತಿ, ತಿಗಡೆ ಕೊಮ್ಮೆ ಬೇರು, ಅಳಲೆಕಾಯಿ ಸಿಪ್ಪೆ, ಹಿಪ್ಪಲಿ ಇವುಗಳೆಲ್ಲವನ್ನು ಸಮತೂಕದಲ್ಲಿ ನಯವಾಗಿ ಚೂರ್ಣಿಸಬೇಕು. ನಂತರ 2 ರಿಂದ 2.5 ಗ್ರಾಂ ಚೂರ್ಣವನ್ನು ಸೇವಿಸಿ ಬಿಸಿನೀರು ಕುಡಿದರೆ ಮಲಬದ್ಧತೆ ಮತ್ತು ಮೂಲವ್ಯಾದಿ ನಿವಾರಣೆಯಾಗುತ್ತದೆ.

ಹೀಗೆ ಈಶ್ವರ ಬೇರು (Indian birthwort) ಮತ್ತು ಅದರ ಎಲೆಯಲ್ಲಿ ಅಡಗಿರುವ ದಿವ್ಯೌಷಧಿ ಅಪಾರ. ಅದರಲ್ಲಿ ತೀಕ್ಷ ಗುಣಗಳುಳ್ಳ ಮದ್ದಾಗಿದ್ದು, ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿದೆ. ಯಾವುದೇ ಔಷಧಿಯಾದರು ಉಪಯೋಗಿಸು ಮುನ್ನ ಒಮ್ಮೆ ತಜ್ಞ ವೈದ್ಯರ ಸಲಹೆ ಪಡೆಯುವುದು ಸೂಕ್ತ.

Continue Reading

ದಿನದ ಸುದ್ದಿ

ಗೃಹಬಳಕೆ ಎಲ್‌ಪಿಜಿ ಸಿಲೆಂಡರ್ ಬೆಲೆಯಲ್ಲಿ ಬದಲಾವಣೆ ಇಲ್ಲ

Published

on

ಸುದ್ದಿದಿನಡೆಸ್ಕ್:ಗೃಹಬಳಕೆಯ ಎಲ್‌ಪಿಜಿ ಸಿಲೆಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸ್ಪಷ್ಟಪಡಿಸಿದೆ.

ಗೃಹ ಬಳಕೆ ಎಲ್‌ಪಿಜಿ ಸಿಲೆಂಡರ್ ಬೆಲೆಯನ್ನು 111 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ ಎಂಬ ಮಾಧ್ಯಮ ವರದಿಗಳನ್ನು ತಳ್ಳಿ ಹಾಕಿರುವ ಸಚಿವಾಲಯ, ವಾಣಿಜ್ಯ ಸಿಲೆಂಡರ್ ಬೆಲೆಯು ಅಂತಾರಾಷ್ಟ್ರೀಯ ಕಚ್ಚಾ ಅನಿಲ ಮತ್ತು ಸಂಬAಧಿತ ದರಗಳ ಮೇಲೆ ಅವಲಂಬಿತವಾಗಿದ್ದು, ಆಗಾಗ್ಗೆ ಮಾರುಕಟ್ಟೆಯ ದರಗಳು ಬದಲಾಗುತ್ತವೆ. ಆದರೆ, ಗೃಹ ಬಳಕೆಯ ಸಿಲೆಂಡರ್ ದರದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ತಿಳಿಸಿದೆ.

ದೆಹಲಿಯಲ್ಲಿ 14.2 ಕೆಜಿ ಗೃಹ ಬಳಕೆ ಅಡುಗೆ ಅನಿಲ ಸಿಲೆಂಡರ್ ಬೆಲೆ 950 ರೂಪಾಯಿಯಾಗಿದ್ದು, ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಇದು 553 ರೂಪಾಯಿ ಬೆಲೆಯಲ್ಲಿ ಲಭ್ಯವಿದೆ. ಇದು ಆಗಸ್ಟ್ 2023 ರಿಂದ ನವೆಂಬರ್ 2025ರವರೆಗೆ ಹೋಲಿಸಿದರೆ, ಶೇಕಡಾ 39 ರಷ್ಟು ದರ ಕಡಿತವನ್ನು ಸೂಚಿಸುತ್ತದೆ. ಜನರಿಗೆ ಸುಸ್ಥಿರ ಇಂಧನ ಪೂರೈಕೆಗೆ ಒತ್ತು ನೀಡಲಾಗಿದ್ದು, ದರ ಬದಲಾವಣೆ ಇಲ್ಲ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ4 days ago

ದಾವಣಗೆರೆ ಪಂಚಾಯತ್ ರಾಜ್ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಶಿವಮೂರ್ತಿ ವಿರುದ್ಧ ಲೋಕಾಗೆ ದೂರು

ಸುದ್ದಿದಿನ,ದಾವಣಗೆರೆ: 2022-23ನೇ ಸಾಲಿನ 5054 ವಿಶೇಷ ಗ್ರಾಮೀಣ ಅಭಿವೃದ್ಧಿ ಯೋಜನೆ ಅಡಿಯಲ್ಲಿ ದಾವಣಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ದಾವಣಗೆರೆ ತಾಲ್ಲೂಕು ಶಾಮನೂರು-ದೇವರಬೆಳಕೆರೆ ರಸ್ತೆಯಿಂದ ದುರ್ಗಾಂಬಿಕ ಕ್ಯಾಂಪ್, ನಾಗಮ್ಮ...

ದಿನದ ಸುದ್ದಿ6 days ago

ದಾವಣಗೆರೆ ದಕ್ಷಿಣ ಉಪ ಚುನಾವಣೆಗೆ ಸಿದ್ದತೆ: ಮತದಾರರ ಪಟ್ಟಿ ವೀಕ್ಷಕರಿಂದ ರಾಜಕೀಯ ಪಕ್ಷಗಳೊಂದಿಗೆ ಸಭೆ, ಹಕ್ಕು, ಆಕ್ಷೇಪಣೆಗಳನ್ನು ನಿಗಧಿತ ಅವಧಿಯಲ್ಲಿ ಸಲ್ಲಿಸಲು ಮುಖಂಡರಿಗೆ ಸಲಹೆ

ಸುದ್ದಿದಿನ,ದಾವಣಗೆರೆ:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕರ‍್ಯಕ್ಕೆ ಸಂಬಂಧಿಸಿದಂತೆ ಮತದಾರರ ಪಟ್ಟಿ ವೀಕ್ಷಕರು ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿ ಮತದಾರರ...

ದಿನದ ಸುದ್ದಿ1 week ago

ತತ್ವಪದಗಳು ಸಾರ್ವಕಾಲಿಕ ಬೆಳಕನಿಧಿ: ಕಾ.ತ.ಚಿಕ್ಕಣ್ಣ

ಸುದ್ದಿದಿನ,ಬೆಂಗಳೂರು:ತತ್ವಪದಗಳು ಎಲ್ಲ ಕಾಲಕ್ಕೂ ಸಲ್ಲುವಂತಹ ಬೆಳಕನ್ನು ನೀಡುವ ಸೃಜನಶೀಲ ಸಂರಚನೆಗಳಾಗಿವೆ ಎಂದು ಕರ್ನಾಟಕ ಸರ್ಕಾರದ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಶ್ರೀ ಕಾ.ತ.ಚಿಕ್ಕಣ್ಣ...

ದಿನದ ಸುದ್ದಿ1 week ago

ನಕಲಿ ಜಿ.ಎಸ್.ಟಿ ಬಿಲ್ಲುಗಳ ಮೂಲಕ ಅವ್ಯವಹಾರ | ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ಗಣಪತಿ ಕೆ. ಲಮಾಣಿ ವಿರುದ್ಧ ಲೋಕಾಗೆ ದೂರು

ಸುದ್ದಿದಿನ,ಕೊಪ್ಪಳ:ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಕೊಪ್ಪಳ ಇಲ್ಲಿ 2022-23 ರಿಂದ 2024-25ನೇ ಸಾಲಿನ ಅವಧಿಯಲ್ಲಿ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಅರೇ ಸರ್ಕಾರಿ ಖಾತೆಯ ಅನುದಾನದಲ್ಲಿ ನಕಲಿ ಜಿ.ಎಸ್.ಟಿ...

ದಿನದ ಸುದ್ದಿ2 weeks ago

ಫಾಸ್ಟ್ ಫುಡ್ ತಯಾರಿಕೆ ಉಚಿತ ತರಬೇತಿ

ಸುದ್ದಿದಿನ,ದಾವಣಗೆರೆ:ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್‌ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್‌ಸೆಟ್ ಸಂಸ್ಥೆಯಿಂದ ಫಾಸ್ಟ್ ಫುಡ್ ತಯಾರಿಕೆ ಕುರಿತ 12 ದಿನಗಳ ಉಚಿತ ತರಬೇತಿ...

ದಿನದ ಸುದ್ದಿ2 weeks ago

ಐ.ಎ.ಎಸ್ ಮತ್ತು ಕೆ.ಎ.ಎಸ್ ಪರೀಕ್ಷೆಗಳಿಗೆೆ ತರಬೇತಿ

ಸುದ್ದಿದಿನ,ದಾವಣಗೆರೆ:ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಕೇಂದ್ರ ಲೋಕಸೇವಾ ಆಯೋಗದವರು ನಡೆಸಲಿರುವ ಐಎಎಸ್ ಹಾಗೂ ಕರ್ನಾಟಕ ಲೋಕಸೇವಾ ಆಯೋಗದವರು ನಡೆಸುವ ಕೆಎಎಸ್...

ದಿನದ ಸುದ್ದಿ2 weeks ago

ಪ್ರೊ.ಪೂರ್ಣಾನಂದ, ಎ.ನಾರಾಯಣ, ಸತೀಶ್ ಆಚಾರ್ಯ ಸೇರಿದಂತೆ ಹಲವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ

ಸುದ್ದಿದಿನಡೆಸ್ಕ್:ಪ್ರತಿ ವರ್ಷ ಕರ್ನಾಟಕ ಮಾಧ್ಯಮ ಅಕಾಡೆಮಿ ಕೊಡಮಾಡುವ ಪ್ರಶಸ್ತಿಗಳಿಗೆ ಪ್ರಾಧ್ಯಾಪಕ ಪೂರ್ಣಾನಂದ, ವ್ಯಂಗ್ಯಚಿತ್ರಕಾರ ಸತೀಶ್‌ ಆಚಾರ್ಯ, ಪತ್ರಕರ್ತ ಸೋಮಶೇಖರ್ ಪಡುಕೆರೆ ಹಾಗೂ ಚಿಂತಕ, ಬರಹಗಾರ ಎ ನಾರಾಯಣ್...

ದಿನದ ಸುದ್ದಿ2 weeks ago

ಇದೇ 11 ರಂದು ಜಿಎಂ ವಿಶ್ವವಿದ್ಯಾಲಯದಲ್ಲಿ ಪ್ರಥಮ ಘಟಿಕೋತ್ಸವ : ಕುಲಪತಿ ಡಾ. ಎಸ್.ಆರ್. ಶಂಕಪಾಲ್

ಸುದ್ದಿದಿನ,ದಾವಣಗೆರೆ:ನಗರದ ಜಿಎಂ ವಿಶ್ವವಿದ್ಯಾಲಯವು ಪ್ರಥಮ ಘಟಿಕೋತ್ಸವವನ್ನು ಆಯೋಜಿಸುವ ಮೂಲಕ ಐತಿಹಾಸಿಕ ಮೈಲಿಗಲ್ಲನ್ನು ದಾಖಲಿಸಲಿದೆ. ಈ ಘಟಿಕೋತ್ಸವವು ವಿಶ್ವವಿದ್ಯಾಲಯದ ಮೊದಲ ಪದವಿ ಬ್ಯಾಚ್‌ನ ಯಶಸ್ವಿ ಶೈಕ್ಷಣಿಕ ಪಯಣವನ್ನು ಸಂಭ್ರಮದಿಂದ...

ದಿನದ ಸುದ್ದಿ2 weeks ago

ಮೌಲ್ಯ ಕಳೆದು ಕೊಳ್ತಿದ್ಯ ದಾವಣಗೆರೆ ವಿಶ್ವವಿದ್ಯಾಲಯ? ರಿಪೀಟರ್ಸ್ ಗೋಳು ಕೇಳೋರಿಲ್ಲ..

~ಹನುಮಂತ ನಾಯ್ಕ್ .ಡಿ ಎಲ್. ಎಲ್. ಬಿ, ಆರ್. ಎಲ್. ಕಾನೂನು ಕಾಲೇಜು ದಾವಣಗೆರೆ ದಾವಣಗೆರೆ ವಿಶ್ವವಿದ್ಯಾಲಯವು ಈ ಹಿಂದೆ ಮೌಲ್ಯಮಾಪನ ಮುಗಿದು 24 ಗಂಟೆಗಳ ಒಳಗೆ...

ದಿನದ ಸುದ್ದಿ2 weeks ago

ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್: ಮಹಿಳಾ ಮತ್ತು ಪುರುಷರಿಗೆ ಸಮಾನ ವೇತನ ನೀಡಿದ ಉದ್ಯೋಗ ಖಾತರಿ ಯೋಜನೆ ಹೆಸರು ಬದಲಾವಣೆಗೆ ಅಸಮಧಾನ

ದಾವಣಗೆರೆ: ಅಭಿವೃದ್ಧಿ ಕಾಮಗಾರಿ ದೆಹಲಿ ಮಟ್ಟದಲ್ಲಿ ತೀರ್ಮಾನ ಆಗಬೇಕಿಲ್ಲ. ಪಂಚಾಯತ್‍ನಲ್ಲಿ ಗ್ರಾಮಸಭೆ ಮೂಲಕ ಗ್ರಾಪಂ ಸದಸ್ಯರು ತೀರ್ಮಾನ ಕೈಗೊಂಡು ನಮ್ಮ ಹಳ್ಳಿಯಲ್ಲಿ ಇಷ್ಟು ಶೌಚಾಲಯ ಆಗಬೇಕು. ಇಷ್ಟು...

Trending