ಸಿನಿ ಸುದ್ದಿ
ತನ್ನಿಷ್ಟದ ಬಟ್ಟೆ ತೊಡೋಕೆ ಯಾರಪ್ಪಣೆಯೂ ಬೇಕಿಲ್ಲ : ಕರೀನಾ ಕಪೂರ್

ಸುದ್ದಿದಿನ ಡೆಸ್ಕ್ : ಕೆಲವು ದಿನಗಳ ಹಿಂದೆ ನಟಿ ಕರೀನಾ ಕಪೂರ್ ಶಾರ್ಟ್ ಬಟ್ಟೆ ಉಟ್ಟು ಪಾರ್ಟಿಗೆ ಹಾಜರಾಗಿದ್ದು ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆಗೆ ಒಳಗಾಗಿತ್ತು. ಮದುವೆಯಾಗಿರುವ ಕರೀನಾ ಇಂತಹ ಬಟ್ಟೆಗಳನ್ನು ತೊಡುವುದು ಎಷ್ಟು ಸರಿ ಎಂದು ಅಭಿಮಾನಿಗಳು ಪ್ರಶ್ನೆಮಾಡಿದ್ದರು. ಮತ್ತವರು ಇದೇತೆರನಾದ ಬಟ್ಟೆಗಳನ್ನು ತೊಡಬೇಕು ಅಂತಲೂ ಹೇಳಿದ್ದರು. ಈ ಎಲ್ಲ ಪ್ರಶ್ನೆಗಳಿಗೆ ಕರೀನಾ ಕಪೂರ್ ನಾನೆಂತಹ ಬಟ್ಟೆ ತೊಡಬೇಕು ಎಂಬುದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು.
“ಹೆಣ್ಣಿಗೆ ತನ್ನಿಷ್ಟದ ಬಟ್ಟೆ ತೊಡಬೇಕು ಎಂಬ ಆಸೆಯಿರುತ್ತೆ. ಮದುವೆಯಾಗಿ ತಾಯಿಯಾದ ಕೂಡಲೆ ಇಂತದೇ ಬಟ್ಟತೊಡಬೇಕೆಂಬ ನಿಯಮವಿಲ್ಲ. ನಮ್ಮೆಲ್ಲಾ ಆಸೆಗಳನ್ನು ಮುಚ್ಚಿಡಲು ಅಸಾಧ್ಯ. ನನ್ನ ತಾಯಿ ಈಗಲೂ ಜೀನ್ಸ್ ತೊಡುತ್ತಾರೆ. ಅದು ಅವರ ಇಷ್ಟ. ಹಾಗೇ ಅವರಿಗೆ ಆ ಬಟ್ಟೆ ಕಂಫರ್ಟ್ ಅಂದಾಗ ತೊಡುವುದರಲ್ಲಿ ತಪ್ಪೇನಿಲ್ಲ.” ಎಂದು ಸಮಜಾಯಿಷಿ ಕೊಟ್ಟಿದ್ದಾರೆ ಕರೀನಾ.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ಸಿನಿ ಸುದ್ದಿ
ಪೊಗರು ವಿವಾದ ಅಂತ್ಯ | ಸೀನ್ ಕಟ್ ; ಶುಭಹಾರೈಸಿದ ಬ್ರಾಹ್ಮಣ ಸಮುದಾಯ

ಸುದ್ದಿದಿನ, ಬೆಂಗಳೂರು : ಕೊನೆಗೂ ‘ಪೊಗರು’ ಸಿನಿಮಾದ ಕಾಂಟ್ರವರ್ಸಿ ಸುಖಾಂತ್ಯ ಕಂಡಿದ್ದು, ಸಿನಿಮಾ ನೋಡಿ ಬ್ರಾಹ್ಮಣ ಸಭಾದ ಸದಸ್ಯರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ನಂದ ಕಿಶೋರ್ ನಿರ್ದೇಶಸಿ, ಧ್ರುವ ಸರ್ಜಾ ನಟಿಸಿರುವ ‘ಪೊಗರು’ ಸಿನಿಮಾ ಕಳೆದ ಶುಕ್ರವಾರ ತೆರೆ ಕಂಡಿತ್ತು. ಬ್ರಾಹ್ಮಣರನ್ನು ಅವಹೇಳನ ಮಾಡುವ ಸಂಭಾಷಣೆ ಮತ್ತು ದೃಶ್ಯಗಳನ್ನ ಸಿನಿಮಾದಲ್ಲಿ ಕೆಟ್ಟದಾಗಿ ತೋರಿಸಲಾಗಿದೆ ಎಂದು ಕ ಬ್ರಾಹ್ಮಣ ಸಮುದಾಯು ‘ಪೊಗರು’ ಸಿನಿಮಾ ತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಮಂಗಳವಾರ ಬ್ರಾಹ್ಮಣ ಸಭಾದ ಸದಸ್ಯರು ಫಿಲ್ಮ್ ಚೇಂಬರ್ ಗೆ ಹೋಗಿ ‘ಪೊಗರು’ ಸಿನಿಮಾದಲ್ಲಿ ಬ್ರಾಹ್ಮಣರಿಗೆ ಅವಮಾನ ಮಾಡಿರುವ ದೃಶ್ಯಗಳನ್ನ ತೆಗೆಯುವಂತೆ ಆಗ್ರಹಿಸಿದ್ದರು. ಸಿನಿಮಾದ ನಿರ್ಮಾಪಕ ಬಿ.ಕೆ ಗಂಗಾಧರ್ ಹಾಗೂ ನಿರ್ದೇಶಕ ನಂದ ಕಿಶೋರ್ ಅವರು ಬ್ರಾಹ್ಮಣ ಸಮುದಾಯದ ಜೊತೆ ಚರ್ಚಿಸಿ ಅವಹೇಳನದಂತೆ ಕಾಣುವ ದೃಶ್ಯಗಳನ್ನು ಎಡಿಟ್ ಮಾಡುವಂತೆ ತಿಳಿಸಿದ್ದರು.
ಬುಧವಾರ ಬ್ರಾಹ್ಮಣ ಸಮುದಾಯದ ಸದಸ್ಯರು ಎಡಿಟ್ ಮಾಡಿದ ‘ಪೊಗರು’ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬ್ರಾಹ್ಮಣ ಸಮುದಾಯದ ಸದಸ್ಯರು ಹೇಳಿದ ದೃಶ್ಯಗಳಿಗೆ ‘ಪೊಗರು’ ಚಿತ್ರತಂಡ ಕತ್ತರಿ ಹಾಕಿದ್ದು, ಬ್ರಾಹ್ಮಣ ಸಮುದಾಯದ ಸದಸ್ಯರು ‘ಪೊಗರು’ ತಂಡಕ್ಕೆ ಶುಭ ಹಾರೈಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಸಿನಿ ಸುದ್ದಿ
ವಿಡಿಯೋ | ನೇತ್ರಾಣಿ ದ್ವೀಪದಲ್ಲಿ ಅಪ್ಪು ‘ಬ್ಯಾಕ್ಫ್ಲಿಪ್’; ಅಭಿಮಾನಿಗಳು ಫಿದಾ..! ನೀವೂ ಒಮ್ಮೆ ನೋಡಿ ಬಿಡಿ

ಸುದ್ದಿದಿನ ಡೆಸ್ಕ್ : ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ತಮ್ಮ ಫಿಟ್ನೆಸ್ ಗಾಗಿ ಮಾಡದ ವರ್ಕೌಟ್ ಇಲ್ಲ. ಜಿಮ್, ಯೋಗ, ಸೈಕ್ಲಿಂಗ್, ಡಾನ್ಸ್ ಹೀಗೆ ಹಲವು ದೈಹಿಕ ಚಟುವಟಿಕೆಗಳನ್ನು ಉತ್ಸಾಹದಿಂದ ಮಾಡುತ್ತಾರೆ.
ಪುನೀತ್ ಬ್ಯಾಕ್ ಫ್ಲಿಪ್ ಮಾಡುವುದರಲ್ಲೂ ಸಿದ್ದಹಸ್ತರು. ಮುರುಡೇಶ್ವರದ ಹತ್ತಿರ ವಿರುವ ನೇತ್ರಾಣಿ ದ್ವೀಪದಲ್ಲಿ ಬ್ಯಾಕ್ ಫ್ಲಿಪ್ ಮಾಡಿದ್ದು, ಅದ ವಿಡಿಯೋವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋ ಲಿಂಕ್
https://www.facebook.com/watch/?v=1547766108948138
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಸಿನಿ ಸುದ್ದಿ
ವಂಚನೆ ಪ್ರಕರಣ : ಬಿಗ್ ಬಾಸ್ ನಟಿಯ ವಿರುದ್ಧ ಎಫ್ ಐ ಆರ್ ದಾಖಲು

ಸುದ್ದಿದಿನ ಡೆಸ್ಕ್ : ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗವು ಹರಿಯಾನ್ವಿ ಗಾಯಕಿ,ನೃತ್ಯಗಾರ್ತಿ ಸಪ್ನಾ ಚೌಧರಿ ಮತ್ತು ಇತರರ ವಿರುದ್ಧ ಹಣದ ದುರುಪಯೋಗ, ವಂಚನೆ ಮತ್ತು ಕ್ರಿಮಿನಲ್ ಪಿತೂರಿ ಆರೋಪದ ಮೇಲೆ ಎಫ್ಐಆರ್ ದಾಖಲಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ನಟಿ ಸಪ್ನಾ ಚೌಧರಿ 2018ರಲ್ಲಿ ಸ್ಟೇಜ್ ಶೋಗಾಗಿ ಪಿ ಆರ್ ಕಂಪೆನಿಯ ಮುಖ್ಯಸ್ಥ ಪಂಕಜ್ ಚಾವ್ಲಾ ಅವರಿಂದ 1 ಕೋಟಿ ರೂ ಮುಂಗಡ ಹಣವನ್ನು ಪಡೆದಿದ್ದರು. ಆ ಮುಂಗಡ ಹಣದಲ್ಲಿ ನಟಿ ಚೌಧರಿ ಫ್ಲ್ಯಾಟ್ ಖರೀದಿಸಿದ್ದಾರೆ
ಒಪ್ಪಂದದ ಪ್ರಕಾರ ವೇದಿಕೆಯಲ್ಲಿ ಪ್ರದರ್ಶನ ನೀಡಲಿಲ್ಲ ಎನ್ನುವ ಆರೋಪ ಕೇಳಿಬಂದಿದ್ದು, ಆರ್ಥಿಕ ಅಪರಾಧಗಳ ವಿಭಾಗದ ಪೊಲೀಸರು ಸಪ್ನಾ ಚೌಧರಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೇ 2018 ರಲ್ಲಿ, ಎಂ.ಎಸ್. ಚೌಧರಿ ಮತ್ತು ಅವರ ತಾಯಿ ಆರೋಗ್ಯ ಸಮಸ್ಯೆ ಇದ್ದ ಸಮಯ ಚಾವ್ಲಾ ಅವರಿಂದ 50 ಲಕ್ಷ ರೂ.ಪ, ಅದರ ನಂತರ ತಲಾ 25 ಲಕ್ಷ ರೂ.ಗಳ ಎರಡು ಚೆಕ್ಗಳನ್ನು ಅವರಿಗೆ ನೀಡಲಾಗಿದೆ ಎಂದು ಎಫ್ಐಆರ್ ನಲ್ಲಿ ದಾಖಲಿಸಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಲೈಫ್ ಸ್ಟೈಲ್7 days ago
ಮೂತ್ರದಲ್ಲಿನ ಸಕ್ಕರೆ ಅಂಶ ನಿಯಂತ್ರಣದಲ್ಲಿಡುತ್ತೆ ಈ ಸೀಮೆ ಬದನೆಕಾಯಿ..!
-
ಕ್ರೀಡೆ7 days ago
ಭಾರತ ಟಿ20ಐ ಪಂದ್ಯಾವಳಿಗೆ ತಂಡ ಪ್ರಕಟಿಸಿದ ಬಿಸಿಸಿಐ
-
ಲೈಫ್ ಸ್ಟೈಲ್6 days ago
ವೀರ್ಯಾಣು ಬಲವೃದ್ಧಿಗೆ ಇಲ್ಲಿವೆ ಉಪಾಯಗಳು..!
-
ಲೈಫ್ ಸ್ಟೈಲ್7 days ago
ರೆಸಿಪಿ | ಮನೇಲೇ ಮಾಡಿ ಜಿಲೇಬಿ
-
ಭಾವ ಭೈರಾಗಿ7 days ago
ಕವಿತೆ | ಅವಳು
-
ಅಂತರಂಗ6 days ago
ಅನಾಥರನ್ನಾಗಿಸದ ಅಂತಿಮ ಸಂಗಾತಿ
-
ದಿನದ ಸುದ್ದಿ6 days ago
ಸಿದ್ದರಾಮಯ್ಯ ರಾಮನ ವಿರೋಧಿ ಅಂತಾರೆ, ನನ್ನ ಹೆಸರಿನಲ್ಲೇ ರಾಮನಿದ್ದಾನೆ : ಸಿದ್ದರಾಮಯ್ಯ
-
ರಾಜಕೀಯ6 days ago
ಜನರನ್ನು ಕಷ್ಟಕ್ಕೆ ದೂಡಿ ಮೋದಿ ಸರ್ಕಾರ ಲಾಭಗಳಿಸುತ್ತಿದೆ : ಸೋನಿಯಾ ಗಾಂಧಿ ಕಿಡಿ