Connect with us

ದಿನದ ಸುದ್ದಿ

ಬಿ ವೈ ವಿಜಯೇಂದ್ರ ಮಾಲಕತ್ವದ ನ್ಯೂಸ್ ಫಸ್ಟ್ ಲೋಕಾರ್ಪಣೆಗೆ ಮುಹೂರ್ತ.. ! ಬಿಜೆಪಿ ಒಡೆತನದ ಮತ್ತೊಂದು ಚಾನೆಲ್.. !

Published

on

  • ಅರುಣ್ ಕುಮಾರ್, ಹಿರಿಯ ಪತ್ರಕರ್ತರು

ನ್ಯೂಸ್ ಫಸ್ಟ್ ಚಾನೆಲ್ ಲೋಕಾರ್ಪಣೆಗೆ ಮೂಹೂರ್ತ ನಿಗಧಿಯಾಗಿದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರ ಪುತ್ರ, ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಮಾಲಕತ್ವದ ನ್ಯೂಸ್ ಫಸ್ಟ್ ಚಾನೆಲ್ ಸೆಪ್ಟೆಂಬರ್ 20 ರಿಂದ ಪ್ರಾರಂಭವಾಗಲಿದೆ.

ಕಳೆದ ಎರಡು ವರ್ಷಗಳಿಂದ ಭ್ರೂಣವಸ್ಥೆಯಲ್ಲೇ ಇದ್ದ ಮೊಟ್ಟೆಗೆ ಅಂತಿಮವಾಗಿ ಬಿ ವೈ ವಿಜಯೇಂದ್ರ ಕಾವು ಕೊಟ್ಟು ಲೋಕ ದರ್ಶನ ಮಾಡಿಸಿದ್ದಾರೆ. ಆ ಮೂಲಕ ಬಿಜೆಪಿಗರ ಸಾಲು ಗಟ್ಟಲೆ ವಾಹಿನಿಗಳ ಪಟ್ಟಿಗೆ ಮತ್ತೊಂದು ವಾಹಿನಿ ಸೇರ್ಪಡೆಯಾದಂತಾಗಿದೆ.

ಟಿವಿ9 ನಿಂದ ಹೊರ ಹಾಕಲ್ಪಟ್ಟಿದ್ದ ರವಿಕುಮಾರ್ ಮತ್ತು ಮಾರುತಿ ಎಂಬ ಹಕ್ಕಬುಕ್ಕರು ಸೇರಿಕೊಂಡು ಫಸ್ಟ್ ನ್ಯೂಸ್ ಪ್ರಾರಂಭಿಸಿದ್ದರು. ಆರೇ ತಿಂಗಳಲ್ಲಿ ಎಲ್ಲಾ ರೆಡಿಯಾಗಿ ಆನ್ ಏರ್ ಬರುತ್ತೇವೆ ಎಂದು ಮೊದಲ ಮಾಲೀಕರಿಗೆ ಇಬ್ಬರೂ ಭರವಸೆ ನೀಡಿದ್ದರು. ಅದು ಸಾಧ್ಯವಾಗದೇ ಇದ್ದಾಗ ಮತ್ತೊಂದು ಮಾಲೀಕರನ್ನು ಹುಡುಕಲಾಯ್ತು. ಹೊಸಾ ಮಾಲೀಕರೂ ಕೂಡಾ ಒಂದು ವರ್ಷ ವ್ಯರ್ಥ ಹೂಡಿಕೆ ಮಾಡಿದರು‌.

ನೋಟು ಅಮಾಣ್ಯೀಕರಣ, ಆರ್ಥಿಕ ಕುಸಿತ, ಕೊರೋನಾ ಹೊಡೆತವನ್ನು ಚಾನೆಲ್ ಇಲ್ಲದೆಯೇ ಅನುಭವಿಸಿದ ಏಕೈಕ ಚಾನೆಲ್ ಫಸ್ಟ್ ನ್ಯೂಸ್‌. ಕೊನೆಗೆ ಫಸ್ಟ್ ನ್ಯೂಸ್ ಚಾನೆಲ್ ಪ್ರಾರಂಭವಾಗುವುದೇ ಇಲ್ಲ ಎಂದಾದಾಗ ಹಣ ಹೂಡಿಕೆ ಮಾಡಿದ ಉಧ್ಯಮಿಗಳು ಹೂಡಿಕೆ ಹಣವನ್ನು ವಾಪಸ್ ಕೇಳಿದಾಗ ಕಂಪನಿಯ ಹೆಸರನ್ನೇ ಬದಲು ಮಾಡಲಾಯ್ತು.

ಫಸ್ಟ್ ನ್ಯೂಸ್ ಬದಲಿಗೆ ನ್ಯೂಸ್ ಫಸ್ಟ್ ಎಂದು ನಾಮಕರಣ ಮಾಡಿ ಕಳೆದ ಕೆಲ ತಿಂಗಳಿನಿಂದ ಯೂ ಟ್ಯೂಬ್ ನಲ್ಲಿ ಚಾಲ್ತಿಯಲ್ಲಿದೆ. ಇದೀಗ ನ್ಯೂಸ್ 1 ಯಾನೇ ನ್ಯೂಸ್ ಫಸ್ಟ್ ಗೆ ಬಿ ವೈ ವಿಜಯೇಂದ್ರ 45 ಕೋಟಿ ಹೂಡಿಕೆ ಮಾಡಿದ್ದಾರೆ.

ಬಿಜೆಪಿ ಮಾಜಿ ಸಂಸದರಾಗಿರುವ ಲಿಂಗಾಯತ ಸಮುದಾಯದ ದಿಗ್ವಿಜಯ ಚಾನೆಲ್ ಈಗಾಗಲೇ ಹಾಗೋ ಹೀಗೋ ನಡೆಯುತ್ತಿದೆ. ಬಿಜೆಪಿ ಶಾಸಕ ಮುನಿರತ್ನ ಮಾಲಕತ್ವದ ಪಬ್ಲಿಕ್ ಟಿವಿಯೂ ಇದೆ. ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ರವರ ಸುವರ್ಣ ಟಿವಿಯೂ ಇದೆ. ಮೋದಿ ಖಾಸಾ ಮಿತ್ರ ಅಂಬಾನಿಯ ನ್ಯೂಸ್ 18 ಇದೆ. ಹಾಗಿರುವ ಅತ್ತ ಬಿಜೆಪಿಗರಿಗೂ ಬೇಡದ, ಇತ್ತ ಕಾಂಗ್ರೆಸ್, ಜೆಡಿಎಸ್ ಮತ್ತು ಜನಸಾಮಾನ್ಯರ ವಿರೋಧ ಕಟ್ಟಿಕೊಂಡು ಸರ್ಕಾರದ ಯೂಸ್ ಲೆಸ್ ತುತ್ತೂರಿಯ ಅಗತ್ಯ ಏನಿದೆ ?

ಏನಾದರಾಗಲೀ, ಆಲ್ ದಿ ಬೆಸ್ಟ್ ಎಂದು ಹೇಳೋಣಾ ಅಂದ್ರೆ ಸೆಪ್ಟೆಂಬರ್ 20 ಕ್ಕೆ ಉದ್ಘಾಟಣೆ ಆಗೇ ಆಗುತ್ತೆ ಎಂದೇನೂ ಇಲ್ಲ. ಎರಡ್ಮೂರು ವರ್ಷಗಳಿಂದ ಇಂತಹ ಅದೆಷ್ಟೋ ದಿನಾಂಕಗಳನ್ನು ಕಂಡ ಫಸ್ಟ್ ನ್ಯೂಸ್ ಮತ್ತು ನ್ಯೂಸ್ ಫಸ್ಟ್ ಹಲವು ಸಿಬ್ಬಂದಿಗಳಿಗೆ ಸಂಬಳವನ್ನೇ ನೀಡಿಲ್ಲ. ಇದೀಗ ಬಿ ವೈ ವಿಜಯೇಂದ್ರ ಮೂಸೆಯಿಂದ ಹೊರ ಬರುತ್ತಿರುವ ನ್ಯೂಸ್ ಫಸ್ಟ್ ಸೆಪ್ಟೆಂಬರ್ 20 ರಂದಾದ್ರೂ ಹೊರಬರಲಿ ಎಂದು ಹಾರೈಕೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದುರ್ಗಾಂಬಿಕಾದೇವಿ ಜಾತ್ರೆ ; ಭಕ್ತಾದಿಗಳಿಗೆ ಶೌಚಾಲಯ ವ್ಯವಸ್ಥೆ

Published

on

ಸುದ್ದಿದಿನ,ದಾವಣಗೆರೆ:ಫೆಬ್ರವರಿ 23 ರಿಂದ 27 ರವರೆಗೆ ನಡೆಯುವ ದುರ್ಗಾಂಬಿಕಾದೇವಿ ಜಾತ್ರೆ ಪ್ರಯಕ್ತ ದೇವಾಲಯಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಶೌಚಾಲಯಗಳ ವ್ಯವಸ್ಥೆ ಕಲ್ಪಿಸಲಾಗಿದೆ.

ದೊಡ್ಡಪೇಟೆಯ ನಾಮದೇವ ಸಿಂಪಿ ಕಲ್ಯಾಣ ಮಂಟಪ, ವಿರಕ್ತಮಠ ಮತ್ತು ನಗರ ಕುಟುಂಬ ಕಲ್ಯಾಣ ಕೇಂದ್ರ-1, ಎಸ್.ಕೆ.ಪಿ ರಸ್ತೆಯ ಎಸ್.ವಿ.ಎಸ್.ಶಾಲೆ ಮತ್ತು ಕನ್ನಿಕಾಪರಮೇಶ್ವರಿ ದೇವಸ್ಥಾನ ಸಂಘ, ಮಾರ್ಕಂಡೇಶ್ವರ ಕಲ್ಯಾಣ ಮಂಟಪ, ಈ ಸ್ಥಳಗಳಲ್ಲಿರುವ ಶೌಚಾಲಯಗಳನ್ನು ಉಪಯೋಗಿಸುವ ಮೂಲಕ ದೇವಾಲಯದ ಸುತ್ತಮುತ್ತಲಿನ ಆವರಣವನ್ನು ಸ್ವಚ್ಚವಾಗಿಡಲು ಸಹಕರಿಸಬೇಕೆಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ : ಆಕ್ಷೇಪಣೆಗಳಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ : ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ -2025ಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನಗಳಿಗೆ ಆಕ್ಷೇಪಣೆ, ತಕರಾರು ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿದೆ.

ತಿರಸ್ಕೃತಗೊಂಡ ಅರ್ಜಿಗಳ ಅಭ್ಯರ್ಥಿಗಳ ಆಕ್ಷೇಪಣೆಗಳಿದ್ದಲ್ಲಿ, ಮಾರ್ಚ್ 13 ರೊಳಗೆ ನಿಗದಿಪಡಿಸಿದ ದಿನಾಂಕದೊಳಗಾಗಿ ಪೂರಕ ದಾಖಲಾತಿಗಳನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಗಂಗಾರ‍್ವಾಮಿ.ಜಿ.ಎಂ.ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಉದ್ಯೋಗಿಗಳಿಗೆ ಗೂಗಲ್ ಶಾಕ್..! AI ಕಲಿಯದಿದ್ದರೆ ಉದ್ಯೋಗ ತೊರೆಯಿರಿ

Published

on

ಸುದ್ದಿದಿನ,ಬೆಂಗಳೂರು: ಜಗತ್ತಿನ ಟೆಕ್ ದೈತ್ಯ ಕಂಪನಿ ಗೂಗಲ್ ತನ್ನ ಉದ್ಯೋಗಿಗಳಿಗೆ ಶಾಕ್ ನೀಡಿದೆ. AI ಕಲಿಯದಿದ್ದರೆ ಉದ್ಯೋಗ ತೊರೆಯುವಂತೆ ಸೂಚಿಸಿದ್ದು, ‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP) ಘೋಷಿಸಿದೆ.

ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP)

AI ಕಲಿಯುವುದು ಅನಿವಾರ್ಯ: ಗೂಗಲ್ ಈಗ ಸಂಪೂರ್ಣವಾಗಿ ‘AI ಫಸ್ಟ್’ ಕಂಪನಿಯಾಗಿ ರೂಪಾಂತರಗೊಳ್ಳುತ್ತಿದೆ. ತಂತ್ರಜ್ಞಾನದ ವೇಗಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದ ಅಥವಾ AI ಕಲಿಯಲು ಆಸಕ್ತಿ ಇಲ್ಲದ ಉದ್ಯೋಗಿಗಳಿಗೆ ಗೌರವಯುತವಾಗಿ ಉದ್ಯೋಗ ತೊರೆಯಲು ‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP) ಯನ್ನು ಜಾರಿಗೊಳಿಸಿದೆ.

ಯಾರಿಗೆ ಅನ್ವಯಿಸುತ್ತದೆ?: ಇದು ಮುಖ್ಯವಾಗಿ ಗೂಗಲ್‌ನ ಗ್ಲೋಬಲ್ ಬಿಸಿನೆಸ್ ಆರ್ಗನೈಸೇಷನ್ (GBO) ವಿಭಾಗದ ಉದ್ಯೋಗಿಗಳಿಗೆ (ಸೇಲ್ಸ್, ಕಾರ್ಪೊರೇಟ್ ಡೆವಲಪ್ಮೆಂಟ್ ಮತ್ತು ಸೊಲ್ಯೂಷನ್ಸ್ ಟೀಮ್) ಗೆ ಅನ್ವಯಿಸುತ್ತದೆ. ಆದರೆ, ಗ್ರಾಹಕರೊಂದಿಗೆ ನೇರ ಸಂಪರ್ಕ ಹೊಂದಿರುವ ತಂಡಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.

ಇದು ಲೇ-ಆಫ್ ಅಲ್ಲ: ಇದು ಕಡ್ಡಾಯವಾಗಿ ಕೆಲಸದಿಂದ ತೆಗೆದುಹಾಕುವ ಪ್ರಕ್ರಿಯೆಯಲ್ಲ. ಬದಲಾಗಿ, ಸ್ವತಃ ಹೊರಹೋಗಲು ಬಯಸುವ ಉದ್ಯೋಗಿಗಳಿಗೆ ಉತ್ತಮ ಪರಿಹಾರ ಧನ (Severance Package) ಮತ್ತು ಇತರ ಸೌಲಭ್ಯಗಳನ್ನು ನೀಡಿ ಕಳುಹಿಸಿಕೊಡುವ ಯೋಜನೆಯಾಗಿದೆ.

ಕಾರಣವೇನು?: ತಂತ್ರಜ್ಞಾನ ಅತ್ಯಂತ ವೇಗವಾಗಿ ಬದಲಾಗುತ್ತಿದ್ದು, ಕಂಪನಿಗೆ AI ಮಿಷನ್‌ಗೆ ಸಂಪೂರ್ಣವಾಗಿ ಹೊಂದಿಕೊಳ್ಳುವ ಮತ್ತು ಕ್ರಿಯಾತ್ಮಕವಾಗಿ ಕೆಲಸ ಮಾಡುವ ಕಾರ್ಯಪಡೆಯ ಅಗತ್ಯವಿದೆ ಎಂದು ಗೂಗಲ್‌ನ ಚೀಫ್ ಬಿಸಿನೆಸ್ ಆಫೀಸರ್ ಫಿಲಿಪ್ ಶೆಡ್ಲರ್ ತಿಳಿಸಿದ್ದಾರೆ.

ಭವಿಷ್ಯದ ಮುನ್ಸೂಚನೆ: ಅಮೆಜಾನ್, ಮೆಟಾ ಮತ್ತು ಮೈಕ್ರೋಸಾಫ್ಟ್‌ನಂತಹ ಇತರ ಟೆಕ್ ದೈತ್ಯ ಕಂಪನಿಗಳು ಕೂಡ ಇದೇ ಹಾದಿಯಲ್ಲಿ ಸಾಗುವ ಸಾಧ್ಯತೆ ಇದೆ. 2026ರಲ್ಲಿ ಈ ನಾಲ್ಕು ಕಂಪನಿಗಳು AI ತಂತ್ರಜ್ಞಾನಕ್ಕಾಗಿ ಸುಮಾರು 58.92 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುವ ಅಂದಾಜಿದೆ.

ಒಟ್ಟಾರೆಯಾಗಿ, ಭವಿಷ್ಯದ ಉದ್ಯೋಗ ಮಾರುಕಟ್ಟೆಯಲ್ಲಿ AI ಕೌಶಲ್ಯ ಅತ್ಯಂತ ಅನಿವಾರ್ಯ ಎಂಬ ಎಚ್ಚರಿಕೆಯ ಸಂದೇಶವನ್ನು ಗೂಗಲ್ ಈ ಮೂಲಕ ನೀಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending