Connect with us

ದಿನದ ಸುದ್ದಿ

ಅಮೆರಿಕಾಕ್ಕೆ ‘ಹುವಾವೇ’ ಬಗ್ಗೆ ಯಾಕಿಷ್ಟು ಭಯ..?

Published

on

ಚೀನಾವು ತನ್ನ ದೇಶಿಯ ಮಾರುಕಟ್ಟೆಯನ್ನು ರಕ್ಷಿಸಲು ಮತ್ತು ಹುವಾವೇ ಯಂತಹ ತನ್ನ ‘ಚಾಂಪಿಯನ್ ಕಂಪನಿ’ ಗಳ ಬೆಳವಣಿಗೆಯನ್ನು ಪ್ರೋತ್ಸಾಹಿಸಲು, ಯುಎಸ್ ನ ಮತ್ತು ಅದರ ಮಿತ್ರರ ಆಕ್ರಮಣಗಳನ್ನು ಪ್ರತಿರೋಧಿಸಲು, ಶಕ್ತವಾಗುವ ತಾಂತ್ರಿಕ ಸಾರ್ವಭೌಮತ್ವವನ್ನು ಅಭಿವೃದ್ಧಿ ಪಡಿಸಿಕೊಂಡಿದೆ.

ಯುಎಸ್ ನ ಯಾವುದೇ ತಾಂತ್ರಿಕ ಸಮರವನ್ನು ಎದುರಿಸಲು, ಸಾಮ್ರಾಜ್ಯಶಾಹಿ ಅಜೆಂಡಾ ಹಾಗೂ ಯುಎಸ್ ನ ತಂತ್ರಜ್ಞಾನ ಅಧಿಪತ್ಯವನ್ನು ಹಿಮ್ಮೆಟ್ಟಿಸಲು ಚೀನಾವು ಸಜ್ಜಾಗುತ್ತಿದೆ. ಇದೇ ಯು.ಎಸ್. ಸರಕಾರ ಹುವಾವೇ ಬಗ್ಗೆ ಇಷ್ಟು ಆತಂಕಕ್ಕೆ ಕಾರಣ. ಅಮೆರಿಕದ ಜಾಗತಿಕ ಅಧಿಪತ್ಯದೊಂದಿಗೆ ಬಂಡವಾಳಶಾಹಿ ಮತ್ತು ಸಾಮ್ರಾಜ್ಯಶಾಹಿಯ ಅಧಿಪತ್ಯವೂ ತಳುಕು ಹಾಕಿಕೊಂಡಿದೆ

ತಂತ್ರಜ್ಞಾನ ಕ್ಷೇತ್ರದಲ್ಲಿ ಚೀನಾದ “ಹುವಾವೇ” ಎಂಬ ಟೆಲಿಕಾಂ ಕಂಪನಿಯು 5ಜಿ ನೆಟ್ವರ್ಕ್ ಕ್ಷೇತ್ರದಲ್ಲಿ ಪ್ರಮುಖ ಕಂಫನಿಯಾಗಿ ಹೊಮ್ಮಿದೆ. ಹುವಾವೇಯ 5ಜಿ ನೆಟ್ವರ್ಕ್ ಉಪಕರಣಗಳ ಜಾಗತಿಕ ಮಾರುಕಟ್ಟೆಗೆ ವಿಸ್ತರಣೆಯನ್ನು ನಿಬರ್ಂಧಿಸಲು ಅಮೆರಿಕಾವು ಅನೇಕ ಉಗ್ರ ಕ್ರಮಗಳನ್ನು ಇತ್ತೀಚೆಗೆ ಕೈಗೊಂಡಿದೆ. 5ಜಿ ನೆಟ್ವರ್ಕ್ ಉಪಕರಣಗಳ ತಯಾರಿಗೆ ಅಗತ್ಯವಾದ ಪ್ರಮುಖವಾದ ಬಿಡಿಭಾಗಗಳು ಮತ್ತು ಸಾಪ್ಟ್ವೇರ್ ಗಳನ್ನು ನಿರಾಕರಿಸುವ ಪ್ರಯತ್ನಗಳನ್ನು ಮಾಡುವ ಮೂಲಕ ಹುವಾವೇಯ ಮುಖ್ಯ ವ್ಯವಹಾರವನ್ನು ಪರಿಣಾಮಕಾರಿಯಾಗಿ ದುರ್ಬಲಗೊಳಿಸಲು ಅಮೆರಿಕಾ ಕಾರ್ಯ ಪ್ರವೃತ್ತವಾಗಿದೆ. ಹಿಂದೆನೂ ಹುವಾವೇ ವಿರುದ್ಧ ಹಲವು ಕ್ರಮಗಳನ್ನು ಕೈಗೊಂಡಿತ್ತು. ಅವು ಪ್ರಮುಖವಾಗಿ ವಿವಿಧ ದೇಶಗಳಲ್ಲಿ ಹುವಾವೇ ಪ್ರವೇಶವನ್ನು ನಿಬರ್ಂಧಿಸುವ ಗುರಿಯನ್ನು ಹೊಂದಿದ್ದವು. ಹುವಾವೇ ಕಂಪನಿಯ ವಿರುದ್ದ ಅಮೆರಿಕದ ಕ್ರಮಗಳಿಂದ ಚೀನಾದ ಮೇಲೆ ಅದು ತಾಂತ್ರಿಕ ಸಮರವನ್ನೇ ಸಾರಿದಂತಾಗಿದೆ.

ಹುವಾವೇ ವಿಶ್ವದಲ್ಲೇ ಅತಿ ದೊಡ್ಡ (ನಂಬರ್ 1) ಟೆಲಿಕಾಂ ಉಪಕರಣಗಳ ತಯಾರಕ ಮತ್ತು ಮೊಬೈಲ್ ಎರಡನೆಯ ಅತಿ ದೊಡ್ಡ ಮೊಬೈಲ್ ಪೋನ್ ಗಳ ತಯಾರಕ ಸಂಸ್ಥೆಯಾಗಿದೆ. ಇದು 5ಜಿ ತಂತ್ರಜ್ಞಾನದಲ್ಲಿ ಜಾಗತಿಕ ನಾಯಕ ಮತ್ತು ಟೆಕ್ ವಲಯದಲ್ಲಿ ಅಮೆರಿಕಾದ ಅಧಿಪತ್ಯಕ್ಕೆ ಗಮನಾರ್ಹ ಸವಾಲನ್ನು ಒಡ್ಡುವ ಸಂಸ್ಥೆಯಾಗಿ ಬೆಳೆದಿದೆ. ಆದ್ದರಿಂದಲೇ, ಇದನ್ನು ಅಮೆರಿಕಾಕ್ಕೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಏಕೆಂದರೆ, 5 ಜಿ ನೆಟ್ವರ್ಕ್ ಜಗತ್ತಿನ ಜನಜೀವನದ ಪ್ರತಿಯೊಂದು ವಿಚಾರ ಮತ್ತು ಅಂಶಗಳ ಮೇಲೂ ತನ್ನ ಅಪಾರ ಪ್ರಭಾವ ಬೀರಲಿದೆ. ಆದ್ದರಿಂದ ಈ ಕ್ಷೇತ್ರದಲ್ಲಿ ತನ್ನ ಪಾರಮ್ಯವನ್ನು ಸ್ಫಾಪಿಸುವುದು ಅದರ ಸಾಮ್ರಾಜ್ಯಶಾಹಿ ಕಾರ್ಯಸೂಚಿಯ ಅಗತ್ಯದ ಭಾಗವಾಗಿದೆ. ಅದಕ್ಕೆ ಹುವಾವೇ ಸಂಸ್ಥೆಯು ಈ ಕ್ಷೇತ್ರದಲ್ಲಿ ಅಡ್ಡವಾಗಿ ನಿಲ್ಲುತ್ತದೆ. ಹೀಗಾಗಿ ಚೀನಾದ ಈ ಹುವಾವೇ ಟೆಕ್ ದೈತ್ಯ ಸಂಸ್ಥೆಯ ಅಭಿವೃದ್ಧಿಯನ್ನು ಅಮೆರಿಕಾ ಎಂದಿಗೂ ಸಹಿಸುವುದಿಲ್ಲ. ಇದನ್ನು ನೆಲ ಸಮ ಮಾಡಲೇ ಬೇಕೆಂದು ಎಲ್ಲಾ ತರದ ಒಳಸಂಚುಗಳ ಸಮರವನ್ನು ನಡೆಸಲು ಆರಂಭಿಸಿದೆ.

ಪ್ರಮುಖ ವಾಗಿ ಹುವಾವೇ ವಿರುದ್ದ ಎರಡು ರೀತಿಯಲ್ಲಿ ತನ್ನ ಆಕ್ರಮಣವನ್ನು ನಡೆಸಲು ಸಜ್ಜಾಗಿದೆ. ಇತ್ತೀಚೆಗೆ, ಅಮೆರಿಕಾದ ವಾಣಿಜ್ಯ ಇಲಾಖೆಯು ಎರಡು ಬಗೆಯ ಉಗ್ರವಾದ ನಿಬರ್ಂಧ ಕ್ರಮಗಳನ್ನು ಹುವಾವೇ ವಿರುದ್ದ ಘೋಷಿಸಿದೆ.

ಅದರಲ್ಲಿ, ಮೊದಲನೆಯದು, ಹುವಾವೇ ತಯಾರು ಮಾಡುವ ಮೊಬೈಲ್ ಗಳು ಮತ್ತು 5ಜಿ ನೆಟ್ ವರ್ಕ್ ಉಪಕರಣಗಳಿಗೆ, ಯುಎಸ್ ನ ಟೆಕ್ ಸಂಸ್ಥೆ ಗಳು ಸರಬರಾಜು ಮಾಡುವ ಎಲ್ಲಾ ಬಗೆಯ ಬಿಡಿ ಭಾಗಗಳನ್ನು (ಮೂಲ ‘ಚಿಪ್ ಸೆಟ್’ ಗಳು ಮತ್ತಿತರ ಹಾರ್ಡ್ವೇರ್, ಸಾಫ್ಟ್ ವೇರ್) ತಡೆಗಟ್ಟುವುದು. ಎರಡನೆಯದು, ಕೆಲವು ದಿನಗಳ ಹಿಂದೆಯಷ್ಟೇ, ಆಂಡ್ರಾಯ್ಡ್ ಸಾಫ್ಟ್ವೇರ್ ಮತ್ತು ಇದಕ್ಕೆ ಸಂಬಂಧಿಸಿದ ಮತ್ತಿತರ ಗೂಗಲ್ ಸೇವೆಗಳನ್ನು ಹುವಾವೇ ಮೊಬೈಲುಗಳಲ್ಲಿ ಬಳಸಲು ನಿಬರ್ಂಧಗಳನ್ನು ಹೇರುವ ಘೋಷಣೆಯನ್ನು ಗೂಗಲ್ ಮೂಲಕ ಮಾಡಿರುವುದು. ಇದರಿಂದಾಗಿ, ಆಂಡ್ರಾಯ್ಡ್ ಮತ್ತು ಇತರ ಗೂಗಲ್ ಸೇವೆಗಳಿಗೆ ಪರ್ಯಾಯ ಪರಿಸರ ವ್ಯವಸ್ಥೆಯನ್ನು ಹುವಾವೇ ಮಾಡಿಕೊಳ್ಳಬೇಕಾಗಿದೆ. ಈ ಎರಡೂ ಕ್ರಮಗಳು ಹುವಾವೇ ಮೊಬೈಲ್ ಗಳು ಮತ್ತು 5ಜಿ ನೆಟ್ ವರ್ಕ್ ಉಪಕರಣಗಳ ಉತ್ಪಾದನೆ, ಪೂರೈಕೆ ಮತ್ತು ಮಾರುಕಟ್ಟೆ ವಿಸ್ತರಣೆಗೆ ತೀವ್ರ ಸವಾಲೊಡ್ಡಲಿವೆ.

ಕಳೆದ ಡಿಸೆಂಬರ್ ನಲ್ಲಿ ಹುವಾವೇ ಸಿ.ಎಫ್.ಒ. ಮೆಂಗ್ ವನ್ಝೌ ರನ್ನು ಯುಎಸ್ ಅಧಿಕಾರಿಗಳ ಆಜ್ಞೆಯ ಮೇರೆಗೆ ಕೆನಡಾದಲ್ಲಿ ಬಂಧಿಸಲಾಗಿತ್ತು. ಇರಾನ್ ಮೇಲೆ ಇತ್ತೀಚೆಗೆ ಯು.ಎಸ್. ತೆಗೆದು ಕೊಂಡ ನಿಬರ್ಂಧಗಳನ್ನು ಪಾಲಿಸದಿರುವ ಹಿನ್ನೆಲೆಯಲ್ಲಿ ಚೀನಾದ ಮೇಲೆ ಒತ್ತಡ ಹೇರಲು ಅಮೆರಿಕಾ ಕೈಗೊಂಡಿರುವ ಕ್ರಮ ಇದಾಗಿರಬಹುದೆಂದು ಅನೇಕ ವಿಶ್ಲೇಷಕರ ಅಭಿಪ್ರಾಯವಾಗಿತ್ತು.

ಆದಾಗ್ಯೂ, ಹುವಾವೇ ಮತ್ತು ಚೀನಾದ ಇನ್ನಿತರೆ ಟೆಲಿಕಾಂ ಕಂಪನಿಗಳ ವಿರುದ್ದ ಯುಎಸ್ ನ ನಿಬರ್ಂಧಗಳು, ಡೊನಾಲ್ಡ್ ಟ್ರಂಪ್ ನ ಇರಾನ್ ಮೇಲಿನ ನ್ಯೂಕ್ಲಿಯರ್ ಒಪ್ಪಂದ ದಿಂದ ಹೊರ ಬರುವ ನಿರ್ಧಾರದ ಬಹಳ ಮೊದಲೇ ಆರಂಭವಾಗಿವೆ. ಅನೇಕ ವರ್ಷಗಳಿಂದ, ಟೆಲಿಕಾಂ ಕ್ಷೇತ್ರದಲ್ಲಿ, ವಿಶೇಷವಾಗಿ 5ಜಿ ನೆಟ್ವರ್ಕ್ ತಂತ್ರಜ್ಞಾನದಲ್ಲಿ, ಹುವಾವೇ ಯುಎಸ್ ಕಂಪನಿಗಳಿಗಿಂತ ಮುಂದೆ ಇದ್ದವು. ಈ ಹಿಂದೆ, ಅಮೆರಿಕದ ಒತ್ತಡಕ್ಕೆ ಮಣಿದು, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ದೇಶಗಳು ಹುವಾವೇ ಯನ್ನು 5ಜಿ ನೆಟ್ವರ್ಕ್ ಉಪಕರಣಗಳ ಪ್ರವೇಶವನ್ನು ನಿಬರ್ಂಧಿಸಲಾಗಿದ್ದನ್ನು ಇಲ್ಲಿ ನೆನಪು ಮಾಡಿಕೊಳ್ಳಬೇಕು. ಆದಾಗ್ಯೂ, ಇದೀಗ ಚೀನಾದ ಈ ದೈತ್ಯ ಹುವಾವೇ ಯ ತಂತ್ರಜ್ಞಾನ ಜಗತ್ತಿನಲ್ಲಿ ಹರಡುತ್ತಿರುವುದು ಅಮೆರಿಕಾದ ಆಂತಕಕ್ಕೆ ಮೂಲ ಕಾರಣವಾಗಿದೆ.

ಹುವಾವೇ ತಂತ್ರಜ್ಞಾನವು “ಭದ್ರತಾ ದೃಷ್ಟಿಯಿಂದ ಅಪಾಯಕಾರಿ” ಎಂದು ಯುಎಸ್ ವಾದಿಸುತ್ತದೆ.. ಆದರೆ ಸಿಸ್ಕೊ ನಂತಹ ಯು.ಎಸ್. ಕಂಪನಿಗಳು ತಯಾರಿಸಿದ ನೆಟ್ವರ್ಕ್ ಉಪಕರಣಗಳ ಹಿಂಬಾಗಿಲಿನಿಂದ, ನಿರಂತರವಾಗಿ ಅಮೆರಿಕ ಗುಪ್ತ ಮಾಹಿತಿಗಳನ್ನು ಪಡೆಯುತ್ತಿತ್ತು ಎಂದು ಎಡ್ವರ್ಡ್ ಸ್ನೋಡೆನ್ನ್ ಬಯಲು ಮಾಡಿದ್ದು ಇಲ್ಲಿ ನೆನಪಿಸಿಕೊಂಡರೆ, ಅಮೆರಿಕ ಈ ಬಗ್ಗೆ ದೂರುವುದು ಜೋಕ್ ಎನ್ನಬಹುದು.

ಹುವಾವೇ ಪ್ರಾಬಲ್ಯವನ್ನು ತಡೆಹಿಡಿಯುವ ಯುಎಸ್ ಯೋಜಿಸಿರುವ ನಿಬರ್ಂಧಗಳಿಂದ, ಅದರ ಚಿಪ್ ತಯಾರಿಕಾ ಮತ್ತು ಇತರ ಕಂಪನಿಗಳಿಗೆ ವಾರ್ಷಿಕವಾಗಿ ರಫ್ತು ಆದಾಯದಲ್ಲಿ 11 ಬಿಲಿಯನ್ ಡಾಲರ್ ನಷ್ಟು ನಷ್ಟ ಉಂಟಾಗುತ್ತದೆ ಎಂದು ಅಂದಾಜಿಸಲಾಗಿದೆ.

ಇದು ಪ್ರಪಂಚದಾದ್ಯಂತ 5 ಜಿ ನೆಟ್ ವರ್ಕ್ ನ ತಂತ್ರಜ್ಞಾ£ದ ಒಟ್ಟಾರೆ ಅಭಿವೃದ್ಧಿಯ ಮೇಲೆ ಅಗಾಧವಾದ ದುಷ್ಪರಿಣಾಮ ಬೀರುತ್ತದೆ. ಆದಾಗ್ಯೂ, ತನ್ನ ಮಿತ್ರ ರಾಷ್ಟಗಳ ಮಾರುಕಟ್ಟೆಗಳಲ್ಲಿ, ಪ್ರಮುಖವಾಗಿ ಯುರೋಪಿಯನ್ ಒಕ್ಕೂಟದ ರಾಷ್ಟ್ರಗಳಲ್ಲಿ, ಹುವಾವೇಯ ಉತ್ಕøಷ್ಟ 5ಜಿ ತಂತ್ರಜ್ಞಾನದ ಬೇರೂರುವ ಸಾದ್ಯತೆಯ ಬಗ್ಗೆ ಯುಎಸ್ ಹೆಚ್ಚು ಚಿಂತಿತ ಗೊಂಡಿದೆ. ಪಶ್ಚಿಮ ರಾಷ್ಟ್ರಗಳು ತಮ್ಮತಮ್ಮ ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು, ಬಡ ರಾಷ್ಟಗಳಿಗೆ ಮಾತ್ರ ಬೋಧಿಸುವ ತಮ್ಮ ಮುಕ್ತ ವ್ಯಾಪಾರ ನಿಯಮಗಳನ್ನು ಉಲ್ಲಂಘನೆ ಮಾಡಲು ಹಿಂಜರಿಯುವುದಿಲ್ಲ ಎಂಬುದನ್ನು ಮತ್ತೆ ಇಲ್ಲಿ ಯುಎಸ್ ಸಾಬೀತು ಪಡಿಸುತ್ತಿದೆ.

ಆದರೆ, ಇತ್ತೀಚಿನ ಗೂಗಲ್ ಕ್ರಮಗಳಿಗೂ “ರಾಷ್ಟ್ರೀಯ ಭದ್ರತಾ” ಅಂಶಗಳಿಗೂ ಯಾವುದೇ ಸಂಬಂಧವಿರುವುದಿಲ್ಲ. ಆದರೆ, ಹುವಾವೇ ಸಂಸ್ಥೆಯಲ್ಲಿ ತಯಾರಿಸಿದ ಮೊಬೈಲ್ ಪೋನ್ಗಳನ್ನು ಇನ್ನಿತರೆ ದೇಶಗಳಲ್ಲಿ ದುರ್ಬಲಗೊಳಿಸುವ ಸಲುವಾಗಿಯೇ, ಗೂಗಲ್ ಕ್ರಮಗಳ ಮೂಲಕ ಯುಎಸ್ ಪ್ರಯತ್ನ ಮಾಡುತ್ತಿದೆ.

ಗೂಗಲ್ ಕ್ರಮಗಳು ಎಂದರೆ, ಹುವಾವೇ ಪೋನ್ ಗಳನ್ನು ಖರೀದಿಸುವ ವರು ಮತ್ತು ಪ್ರಸ್ತುತ ಮಾಲೀಕರು ಸಹಾ, ಗೂಗಲ್ ನ ಉತ್ಪನ್ನಗಳು ಮತ್ತು ಭದ್ರತಾ ನವೀಕರಣಗಳಿಗೆ ಪ್ರವೇಶವನ್ನು ನಿರಾಕರಿಸಲು ಅಮೆರಿಕಾ ಒತ್ತಾಯ ಹೇರುತ್ತಿದೆ. ಇದರಿಂದಾಗಿ ಆಂಡ್ರಾಯ್ಡ್ ಓಎಸ್, ಜಿ-ಮೇಲ್ ಮತ್ತು ಗೂಗಲ್ ಸ್ಟೋರ್ ನಂತಹ ಉತ್ಪನ್ನ ಗಳ ಮೂಲಕ, ಪ್ರಪಂಚದಾದ್ಯಂತ ಇರುವ ಗೂಗಲ್ ನ ಲಕ್ಷಾಂತರ ಬಳಕೆದಾರ ಹೊಂದಿರುವ ವ್ಯಾಪ್ತಿ ಮತ್ತು ಈ ಹಂತದ ಬೆಳವಣಿಗೆಯಲ್ಲಿ ಹುವಾವೇ ಮೊಬೈಲ್ ಪೋನ್ ವ್ಯವಹಾರಕ್ಕೆ ಭಾರಿ ಹಿನ್ನಡೆಯಾಗುವಂತೆ ಮಾಡುವುದು ಅದರ ಉದ್ದೇಶ.

ಹುವಾವೇ ಸವಾಲುಗಳನ್ನು ಎದುರಿಸಲು ಸಿದ್ದವಾಗಿದೆ. ಕಂಪನಿಯ ಸಂಸ್ಥಾಪಕ ರೆನ್ ಝೆಂಗ್ಛೀ ಯವರು ನಿಬರ್ಂಧಗಳು ಕಂಪನಿಯ ಮುಖ್ಯ ವ್ಯವಹಾರದ ಮೇಲೆ ಪರಿಣಾಮ ಬೀರುವುದಿಲ್ಲ ಎಂಬ ವಿಶ್ವಾಸ ಹೊಂದಿದ್ದಾರೆ. ನಮ್ಮ ಉತ್ಪನ್ನಗಳನ್ನು ಮತ್ತು ಸೇವೆಗಳನ್ನು ಮುಂದುವರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಚಿಪ್ ಸೆಟ್ ಗಳನ್ಜು ಈಗಾಗಲೇ ಸಾಕಷ್ಟು ಸಂಗ್ರಹಿಸಲಾಗಿದೆ. ಹಾಗೆಯೇ, ಗೂಗಲ್ ಪರಿಸರ ವ್ಯವಸ್ಥೆಗೆ ಪರ್ಯಾಯ ಉತ್ಪನ್ನ ಗಳನ್ನು ಅಭಿವೃದ್ಧಿಪಡಿಸುವ ಯೋಜನೆಯಲ್ಲಿ ಹೊಸ ಹೂಡಿಕೆಗಳನ್ನು ಮಾಡಲಾಗುತ್ತಿದೆ. ಆದಾಗ್ಯೂ, ಈಗಿರುವ ಬಳಕೆದಾರರ ಮೂಲವನ್ನು ಉಳಿಸಿಕೊಳ್ಳಲು ಹುವಾವೇ ಕಾರ್ಯತಂತ್ರಗಳನ್ನು ನಿಯೋಜಿಸಲು ಪ್ರಯತ್ನಗಳನ್ನು ಕೈಗೊಂಡಿದೆ. ಇದು ಹುವಾವೇ

ವಾಣಿಜ್ಯದ ಮೇಲೆ ಯು.ಎಸ್ ಮತ್ತು ಚೀನಾ ಒಪ್ಪಂದದ ಭಾಗವಾಗಿ, ಹುವಾವೇ ವಿರುದ್ದದ ನಿಬರ್ಂಧ ಕ್ರಮಗಳನ್ನು ಅಮೆರಿಕಾ ಹಿಂಪಡೆಯಬಹುದು ಅಥವಾ ಮುಂದೂಡಬಹುದು ಎಂಬ ಸಾಧ್ಯತೆಗಳು ಇವೆಯಾದಾರೂ ಖಂಡಿತವಾಗಿಯೂ ಇವೆರಡೂ ರಾಷ್ಟಗಳ ನಡುವಿನ ವಾಣಿಜ್ಯ ಸಮರವಂತೂ ನಿಲ್ಲುವುದಿಲ್ಲ ಎನ್ನಲಾಗಿದೆ.

ಪ್ರಸ್ತುತ ಮುಖಾಮುಖಿ ಯಲ್ಲಿ ಇಬ್ಬರು ಹಲವಾರು ಪಾಠಗಳನ್ನು ಕಲಿಯ ಬೇಕಾಗಿದೆಯಾದರೂ,. ಮೊದಲಿಗೆ, ಅಮೆರಿಕಾದ ಆರ್ಥಿಕತೆಯ ಮೇಲೆ ಹಾನಿ ಉಂಟಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಏಕೆಂದರೆ, ಚೀನಾವು ಹುವಾವೇ ಟೆಲಿಕಾಂ ತಂತ್ರಜ್ಞಾನದಲ್ಲಿ ಅಮೆರಿಕಾಕ್ಕೆ ಬೆದರಿಕೆಯನ್ನು ಒಡ್ಡಿದೆ ಎಂಬುದು ಸ್ಪಷ್ಟಗೊಂಡಿದೆ. 5ಜಿ ತಂತ್ರಜ್ಞಾನದ ಜೊತೆಗೆ ಆರ್ಟಿಫಿಶಿಲ್ ಇಂಟಲಿಜೆನ್ಸ್ ನಂತಹ ಕ್ಷೇತ್ರಗಳಲ್ಲೂ ಚೀನಾವು ಅಮೆರಿಕಾಕ್ಕಿಂತ ಹೆಚ್ಚಿನ ಮುನ್ನಡೆ ಸಾಧಿಸುವ ಸಾಧ್ಯತೆಯಿದೆ. ಇದು ಅಮೆರಿಕಾದ ಆತಂಕವನ್ನು ಹೆಚ್ಚಿಸಿದೆ. ಚೀನಾ ಈ ತಂರ್ರಜ್ಞಾನದ ಮುನ್ನಡೆ ಹಾಗೂ ಬೆಲ್ಟ್ ಮತ್ತು ರೋಡ್ ಪೋರಂ ಬಳಸಿ ವ್ಯಾಪಾರ ಪಾಲುದಾರಿಕೆಯನ್ನು ಹೆಚ್ಚಿಸುತ್ತಿರುವುದು ಅಮೆರಿಕಾಕ್ಕೆ ಮತ್ತೊಂದು ಆತಂಕ..

ಚೀನಾವು ತನ್ನ ದೇಶಿಯ ಮಾರುಕಟ್ಟೆಯನ್ನು ರಕ್ಷಿಸಲು ಮತ್ತು ಹುವಾವೇ ಯಂತಹ ತನ್ನ ‘ಚಾಂಪಿಯನ್ ಕಂಪನಿ’ ಗಳ ಬೆಳವಣಿಗೆಯನ್ನು ಪ್ರೋತ್ಸಾಹಿಸಲು, ಯುಎಸ್ ನ ಮತ್ತು ಅದರ ಮಿತ್ರರ ಆಕ್ರಮಣಗಳನ್ನು ಪ್ರತಿರೋಧಿಸಲು, ಶಕ್ತವಾಗುವ ತಾಂತ್ರಿಕ ಸಾರ್ವಭೌಮತ್ವವನ್ನು ಅಭಿವೃದ್ಧಿ ಪಡಿಸಿಕೊಂಡಿದೆ. ಯುಎಸ್ ನ ಯಾವುದೇ ತಾಂತ್ರಿಕ ಸಮರವನ್ನು ಎದುರಿಸಲು, ಸಾಮ್ರಾಜ್ಯಶಾಹಿ ಅಜೆಂಡಾ ಹಾಗೂ ಯುಎಸ್ ನ ತಂತ್ರಜ್ಞಾನ ಅಧಿಪತ್ಯವನ್ನು ಹಿಮ್ಮೆಟ್ಟಿಸಲು ಚೀನಾವು ಸಜ್ಜಾಗುತ್ತಿದೆ.

ಇದೇ ಯು.ಎಸ್. ಸರಕಾರ ಹುವಾವೇ ಬಗ್ಗೆ ಇಷ್ಟು ಆತಂಕಕ್ಕೆ ಕಾರಣ. ಅಮೆರಿಕದ ಜಾಗತಿಕ ಅಧಿಪತ್ಯದೊಂದಿಗೆ ಬಂಡವಾಳಶಾಹಿ ಮತ್ತು ಸಾಮ್ರಾಜ್ಯಶಾಹಿಯ ಅಧಿಪತ್ಯವೂ ತಳುಕು ಹಾಕಿಕೊಂಡಿದೆ. ಗೂಗಲ್, ಆಪಲ್, ಫೇಸ್ ಬುಕ್ ನಂತಹ ಕಂಪನಿಗಳ ಮೂಲಕ ಇಂಟರ್ನೆಟ್ ಮತ್ತು ಆ ಮೂಲಕ ಇಡೀ ಜಗತ್ತಿನ ಮಾಹಿತಿ ಮತ್ತು ಆರ್ಥಿಕದ ಜಾಲವನ್ನು ನಿಯಂತ್ರಣದಲ್ಲಿಟ್ಟಿರುವ ಅದರ ಯೋಜನೆಗೂ ಚೀನಾದಿಂದ ಸವಾಲು ಬರಬಹುದು ಎಂಬ ಆತಂಕದಿಂದಾಗಿಯೇ ಗೂಗಲ್ ಸಹ ಯು.ಎಸ್. ಸರಕಾರದ ಈ ನಿರ್ಧಾರದೊಂದಿಗೆ ಇಷ್ಟು ಆಸಕ್ತಿಯಿಂದ ತೊಡಗಿಸಿಕೊಂಡಿದೆ.

ಚೀನಾದ ತಂತ್ರಜ್ಞಾನದ ಸಾರ್ವಭೌಮತೆಯ ಸ್ವಾವಲಂಬನೆಯ ಪರಿಕಲ್ಪನೆ ಭಾರತಕ್ಕೂ ಮಾದರಿಯಾಗಬೇಕು.

(ಈ ವಾರದ ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ನಾಗರಾಜ ನಂಜುಂಡಯ್ಯ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ವಿಜ್ಞಾನ ವಿಭಾಗಕ್ಕೆ ಅಗ್ರಸ್ಥಾನ

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲೆಯ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯು ಒಟ್ಟಾರೆ ಶೇಕಡ 81.99 ರಷ್ಟು ಸಾಧನೆ ಮಾಡಿದ್ದು, ರಾಜ್ಯದಲ್ಲಿ 25 ನೇ ಸ್ಥಾನ ಪಡೆದಿದೆ. ಈ ಬಾರಿಯೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಅತಿ ಹೆಚ್ಚು ಶೇಕಡ 90.91 ರಷ್ಟು ಫಲಿತಾಂಶ ಪಡೆದು ಮೇಲುಗೈ ಸಾಧಿಸಿದ್ದಾರೆ.

ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು 20,810 ವಿದ್ಯಾರ್ಥಿಗಳ ಪೈಕಿ 16,046 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಶೇಕಡ 77.11 ರಷ್ಟು ಹಾಗೂ ಹೊಸದಾಗಿ ಪರೀಕ್ಷೆ ಬರೆದ (Freshers) 18,949 ವಿದ್ಯಾರ್ಥಿಗಳಲ್ಲಿ 15,540 ಮಂದಿ ಉತ್ತೀರ್ಣರಾಗಿದ್ದಾರೆ ಶೇಕಡ 82.01 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ವಿಭಾಗವಾರು ಫಲಿತಾಂಶದ ವಿಶ್ಲೇಷಣೆ

ವಿಜ್ಞಾನ ವಿಭಾಗ (Science): ಜಿಲ್ಲೆಯಲ್ಲಿ ಅತಿ ಹೆಚ್ಚು ಸಾಧನೆ ಈ ವಿಭಾಗದಲ್ಲಿ ದಾಖಲಾಗಿದೆ. ಒಟ್ಟು 12,536 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 10,936 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ (ಶೇ. 87.24). ಹೊಸ ವಿದ್ಯಾರ್ಥಿಗಳ ಪೈಕಿ 11,770 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 10,736 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಶೇ. 90.91 ರಷ್ಟು ಅದ್ಭುತ ಫಲಿತಾಂಶ ಬಂದಿದೆ.

ವಾಣಿಜ್ಯ ವಿಭಾಗ (Commerce)

ಈ ವಿಭಾಗದಲ್ಲಿ ಹಾಜರಾದ 4,295 ವಿದ್ಯಾರ್ಥಿಗಳಲ್ಲಿ 3,075 ಮಂದಿ ಉತ್ತೀರ್ಣರಾಗಿದ್ದಾರೆ (ಶೇ. 71.59). ಹೊಸ ವಿದ್ಯಾರ್ಥಿಗಳ ಪೈಕಿ 3858 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 2960 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಶೇ. 76.72 ರಷ್ಟು ಫಲಿತಾಂಶ ಬಂದಿದೆ.

ಕಲಾ ವಿಭಾಗ (Arts): ಕಲಾ ವಿಭಾಗದಲ್ಲಿ ಒಟ್ಟು 3,979 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 2,035 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ (ಶೇ. 51.14). ಹೊಸ ವಿದ್ಯಾರ್ಥಿಗಳ ಪೈಕಿ 3321 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 1880 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಶೇ. 56.61 ರಷ್ಟು ಫಲಿತಾಂಶ ಬಂದಿದೆ.

ಜಿಲ್ಲೆಯ ಒಟ್ಟಾರೆ ಫಲಿತಾಂಶದಲ್ಲಿ ವಿಜ್ಞಾನ ವಿಭಾಗವು ಪ್ರಥಮ ಸ್ಥಾನದಲ್ಲಿದ್ದರೆ, ವಾಣಿಜ್ಯ ಮತ್ತು ಕಲಾ ವಿಭಾಗಗಳು ನಂತರದ ಸ್ಥಾನ ಪಡೆದಿವೆ ಎಂದು ಉಪ ನಿರ್ದೇಶಕ ಪಳಿನಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆ: ಶೇ. 68.55ರಷ್ಟು ಮತದಾನ

Published

on

ಸುದ್ದಿದಿನ,ದಾವಣಗೆರೆ:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಇಂದು ನಡೆದ ಉಪ ಚುನಾವಣೆಯು ಅತ್ಯಂತ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಒಟ್ಟಾರೆ ಶೇ. 68.55ರಷ್ಟು ಮತದಾನ ದಾಖಲಾಗಿದೆ.

ಬೆಳಿಗ್ಗೆಯಿಂದಲೇ ಮತಗಟ್ಟೆಗಳ ಮುಂದೆ ಮತದಾರರು ಉತ್ಸಾಹದಿಂದ ಸರದಿಯಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು. ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮಗಳು ಹಾಗೂ ಪೊಲೀಸ್ ಬಂದೋಬಸ್ತ್ನಿಂದಾಗಿ ಯಾವುದೇ ಅಹಿತಕರ ಘಟನೆಗಳಿಲ್ಲದೆ ಮತದಾನ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಿತು.

ಯುವಕರು ಹಾಗೂ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತದಾನ ಮಾಡಿದ್ದು ಕಂಡುಬಂದಿತು. ಚುನಾವಣಾ ಸಿಬ್ಬಂದಿ ಹಾಗೂ ಭದ್ರತಾ ಪಡೆಯ ಸಹಕಾರದೊಂದಿಗೆ ಮತದಾನ ಪ್ರಕ್ರಿಯೆಯು ಸುಗಮವಾಗಿ ಜರುಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸಮಾನತೆಯ ಸಂಭ್ರಮ | ಹದಡಿಯಲ್ಲಿ ತೃತೀಯ ಲಿಂಗತ್ವ ಮದಾರರಿಂದ ಮತಚಲಾವಣೆ

Published

on

ಸುದ್ದಿದಿನಡೆಸ್ಕ್:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಹದಡಿ ಗ್ರಾಮದ ಮತಗಟ್ಟೆಯಲ್ಲಿ ತೃತೀಯ ಲಿಂಗತ್ವ ಮತದಾರರು ಮತಗಟ್ಟೆಗೆ ಆಗಮಿಸಿ ಸಂತೋಷದಿಂದ ಮತ ಚಲಾಯಿಸಿದರು.

ಸಮಾಜದ ಪ್ರತಿಯೊಬ್ಬರಿಗೂ ಸಮಾನ ಹಕ್ಕು ಎಂಬ ಸಂದೇಶವನ್ನು ಸಾರಿದ ಕ್ಷಣ! ತಮ್ಮ ಅಮೂಲ್ಯ ಮತದಾನದ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಿದ ತೃತೀಯ ಲಿಂಗತ್ವ ಮತದಾರರಿಗೆ ಅಭಿನಂದನೆಗಳು ಎಂದು ಜಿಲ್ಲಾ ಪಂಚಾಯತ್ ಸಿಇಓ ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ14 hours ago

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ವಿಜ್ಞಾನ ವಿಭಾಗಕ್ಕೆ ಅಗ್ರಸ್ಥಾನ

ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲೆಯ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯು ಒಟ್ಟಾರೆ ಶೇಕಡ 81.99 ರಷ್ಟು ಸಾಧನೆ ಮಾಡಿದ್ದು, ರಾಜ್ಯದಲ್ಲಿ 25 ನೇ ಸ್ಥಾನ ಪಡೆದಿದೆ....

ದಿನದ ಸುದ್ದಿ14 hours ago

ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆ: ಶೇ. 68.55ರಷ್ಟು ಮತದಾನ

ಸುದ್ದಿದಿನ,ದಾವಣಗೆರೆ:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಇಂದು ನಡೆದ ಉಪ ಚುನಾವಣೆಯು ಅತ್ಯಂತ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಒಟ್ಟಾರೆ ಶೇ. 68.55ರಷ್ಟು ಮತದಾನ ದಾಖಲಾಗಿದೆ. ಬೆಳಿಗ್ಗೆಯಿಂದಲೇ ಮತಗಟ್ಟೆಗಳ ಮುಂದೆ ಮತದಾರರು...

ದಿನದ ಸುದ್ದಿ2 days ago

ಸಮಾನತೆಯ ಸಂಭ್ರಮ | ಹದಡಿಯಲ್ಲಿ ತೃತೀಯ ಲಿಂಗತ್ವ ಮದಾರರಿಂದ ಮತಚಲಾವಣೆ

ಸುದ್ದಿದಿನಡೆಸ್ಕ್:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಹದಡಿ ಗ್ರಾಮದ ಮತಗಟ್ಟೆಯಲ್ಲಿ ತೃತೀಯ ಲಿಂಗತ್ವ ಮತದಾರರು ಮತಗಟ್ಟೆಗೆ ಆಗಮಿಸಿ ಸಂತೋಷದಿಂದ ಮತ ಚಲಾಯಿಸಿದರು. ಸಮಾಜದ ಪ್ರತಿಯೊಬ್ಬರಿಗೂ ಸಮಾನ ಹಕ್ಕು ಎಂಬ...

ದಿನದ ಸುದ್ದಿ3 days ago

ಪರಿಶಿಷ್ಟ ಪಂಗಡದ ಮಕ್ಕಳಿಗೆ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶ: ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:2026-27ನೇ ಸಾಲಿನಲ್ಲಿ ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರತಿಭಾವಂತ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳನ್ನು 6ನೇ ತರಗತಿಗೆ ದಾಖಲಿಸುವ ಯೋಜನೆಯಡಿ ಪ್ರವೇಶಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿ̧ದೆ, ಅರ್ಜಿಗಳನ್ನು ಏಪ್ರಿಲ್‌...

ದಿನದ ಸುದ್ದಿ3 days ago

ಅಗ್ನಿವೀರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ: ಭಾರತೀಯ ಸೇನೆಯಲ್ಲಿನ ಅಗ್ನಿವೀರ್ ಸೇರಿದಂತೆ ವಿವಿಧ ಹುದ್ದೆಗಳನ್ನು ಸೇರಲು ಆಸಕ್ತರು ಏಪ್ರಿಲ್‌ 10 ರೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ, ಆಸಕ್ತರು ಸೇನೆಯ ಅಧಿಕೃತ ವೆಬ್‌ಸೈಟ್ www.joinindianarmy.nic.in ಗೆ...

ದಿನದ ಸುದ್ದಿ3 days ago

ಸುಸೂತ್ರ ಮತದಾನಕ್ಕೆ ಜಿಲ್ಲಾಡಳಿತದ ಸಕಲ ಸಿದ್ಧತೆ

ಸುದ್ದಿದಿನ,ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಏಪ್ರಿಲ್ 9 ರಂದು ನಡೆಯಲಿರುವ ಮತದಾನಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಮತ್ತು ಚುನಾವಣಾ ಆಯೋಗವು ಎಲ್ಲಾ ರೀತಿಯ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ ಎಂದು...

ಅಂತರಂಗ4 days ago

ಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ

~ಗೋವರ್ಧನ ನವಿಲೇಹಾಳು  ಮಧ್ಯ ಕರ್ನಾಟಕದ ಹೃದಯಭಾಗವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈಗ ಉಪಚುನಾವಣೆಯ ಕಾವು‌ ಏರುತ್ತಲೇ ಇದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ...

ದಿನದ ಸುದ್ದಿ7 days ago

ಕಾಂಗ್ರೆಸ್ ನಿಂದ ಮಾತ್ರ ಜನಪರ ಯೋಜನೆ ನೀಡಲು ಸಾಧ್ಯ: ಡಾ. ಪ್ರಭಾ ಮಲ್ಲಿಕಾರ್ಜುನ

ಸುದ್ದಿದಿನ,ದಾವಣಗೆರೆ:ರಾಜ್ಯ ಸರ್ಕಾರ ಜನಪರ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರುತ್ತಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 100 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಕಾಂಗ್ರೆಸ್...

ಅಂಕಣ7 days ago

ಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ

~ಗೋವರ್ಧನ ನವಿಲೇಹಾಳು ಏಪ್ರಿಲ್ 3, 2026 ರಿಂದ ಇರಾನ್-ಇಸ್ರೇಲ್-ಅಮೆರಿಕಾ ಸಂಘರ್ಷವು ಐದನೇ ವಾರಕ್ಕೆ ಕಾಲಿಟ್ಟಿದೆ. ತೆಹ್ರಾನ್ ಮತ್ತು ಇಸ್ಫಹಾನ್‌ನಲ್ಲಿ ಧೂಮ್ರಜಾಲದ ಕಪ್ಪು ಮೋಡಗಳು, ಬೆಂಕಿಯ ಉರಿ ಭುಗಿಲೆದ್ದಿದೆ....

ದಿನದ ಸುದ್ದಿ1 week ago

ಕಾಂಗ್ರೆಸ್ ಸರಕಾರದ ದುರಾಡಳಿತ ; ಆರೋಪ ಪಟ್ಟಿ ಬಿಡುಗಡೆ

ಸುದ್ದಿದಿನ,ದಾವಣಗೆರೆ:ಮುಖ್ಯಮಂತ್ರಿಗಳೇ, ಒಳ್ಳೆಯ ಕಾರಣಕ್ಕೆ ನಿಮ್ಮ ಸರಕಾರ ಯಾವಾಗ ಸುದ್ದಿಯಾಗಿದೆ ಹೇಳಿ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು...

Trending