ದಿನದ ಸುದ್ದಿ
ಭಾಗ-1 | ದೆಹಲಿ ಹೋರಾಟದ ಕೆಲವು ಅಸಲೀ ಸಂಗತಿಗಳು; ಕಿಸಾನ್ ಮೋರ್ಚಾ ಏನು ಹೇಳುತ್ತಿದೆ..?
ದೆಹಲಿಯ ಸುತ್ತ ನಡೆಯುತ್ತಿರುವ ರೈತ ಹೋರಾಟದ ಎಲ್ಲಾ ವಿವರಗಳೂ, ಅದನ್ನು ಅಭಿಮಾನದಿಂದ ಬೆಂಬಲಿಸುವ ನಮ್ಮೆಲ್ಲರಿಗೆ ಗೊತ್ತಿರುವುದು ಸಾಧ್ಯವಿಲ್ಲ. ನಿಜ ಏನೆಂದರೆ, ಅಲ್ಲೇ ಹತ್ತಿರದಲ್ಲಿರುವವರಿಗೂ ಎಲ್ಲವೂ ಗೊತ್ತಾಗಿರುತ್ತದೆಂದು ಹೇಳುವುದು ಸಾಧ್ಯವಿಲ್ಲ. ಹೀಗಿರುವಾಗ ಮೊನ್ನೆ 26ರಂದು ನಡೆದ ಘಟನೆಯ ಕುರಿತೂ ಹಲವರಿಗೆ ಅನುಮಾನಗಳು, ಪ್ರಶ್ನೆಗಳು ಬರುವುದು ಸಹಜ.
ಹಾಗಾಗಿ ಕೆಲವು ಪ್ರಶ್ನೋತ್ತರಗಳ ಮುಖಾಂತರ ಸಂಪೂರ್ಣ ಮಾಹಿತಿಯನ್ನು ತಿಳಿಸಲು ಇಲ್ಲಿ ಪ್ರಯತ್ನಿಸಲಾಗಿದೆ. ಕಳೆದ ಒಂದು ತಿಂಗಳಿಂದ ದೆಹಲಿಯಲ್ಲಿರುವ ನಮ್ಮ ಮೂವರು ಮಾಧ್ಯಮ ಕಾರ್ಯಕರ್ತರು ನೀಡಿದ ಮಾಹಿತಿ, ಜನವರಿ 26ರಂದು ರೈತರ ಒಂದು ಗುಂಪು ಸಿಂಘು ಗಡಿಯಿಂದ ಪೂರ್ವನಿಗದಿತ ಸಮಯಕ್ಕಿಂತ ಮುಂಚೆಯೇ ಹೊರಟಾಗಿನಿಂದ ಕೆಂಪು ಕೋಟೆಯ ಬಳಿ ಧ್ವಜ ಹಾರಿಸುವತನಕವೂ ಅದನ್ನು ಫಾಲೋ ಮಾಡಿದ ಮೂವರು ಪತ್ರಕರ್ತರು ನೀಡಿದ ಮಾಹಿತಿ ಮತ್ತು ಈ ಹೋರಾಟದ ಮುಂಚೂಣಿಯಲ್ಲಿರುವ ದರ್ಶನ್ ಪಾಲ್, ಯೋಗೇಂದ್ರ ಯಾದವ್, ಜಗಮೋಹನ್ ಮುಂತಾದವರು ಹಾಗೂ ಅವರ ಸಂಗಾತಿಗಳಿಂದ ಪಡೆದ ಮಾಹಿತಿಯು ಇದಕ್ಕೆ ಆಧಾರವಾಗಿದೆ.
ಪ್ರಶ್ನೆ: ದೆಹಲಿಯಲ್ಲಿ ಬಂದು ಕುಳಿತ ಈ ರೈತ ಹೋರಾಟಕ್ಕೆ ಕರೆ ನೀಡಿದವರಾರು? ಇದರ ನೇತೃತ್ವ ಯಾರದ್ದು?
ಉತ್ತರ: 2018ರಿಂದಲೇ ಸಕ್ರಿಯವಾಗಿ ಕೆಲಸ ಮಾಡುತ್ತಿರುವ ಎಐಕೆಎಸ್ಸಿಸಿ-ಅಖಿಲ ಭಾರತ ರೈತ ಹೋರಾಟಗಳ ಸಮನ್ವಯ ಸಮಿತಿ (ಆರಂಭವಾದಾಗಲೇ 170 ರೈತ ಸಂಘಟನೆಗಳು ಇದರ ಭಾಗವಾಗಿದ್ದವು, ಈಗ 300ಕ್ಕೂ ಹೆಚ್ಚಿವೆ) ನವೆಂಬರ್ 25 & 26ಕ್ಕೆ ದೆಹಲಿ ಚಲೋ ಎಂದು ಕರೆ ನೀಡಿತ್ತು. ಈ ಸಮನ್ವಯ ಸಮಿತಿಯ ಪ್ರಕ್ರಿಯೆಯನ್ನು ಆರಂಭಿಸಿದ್ದು ಯೋಗೇಂದ್ರ ಯಾದವ್ ಅವರಾದರೂ, ಇದರಲ್ಲಿ ಕರ್ನಾಟಕ ರಾಜ್ಯ ರೈತಸಂಘದ ಎರಡೂ ಗುಂಪುಗಳು, ಹಲವು ಬಿಕೆಯುಗಳು (ಭಾರತೀಯ ಕಿಸಾನ್ ಯೂನಿಯನ್), ಎಡಪಕ್ಷಗಳ ರೈತಸಂಘಗಳು ಸೇರಿದಂತೆ ಹಲವಾರು ಸಂಘಟನೆಗಳು ಇವೆ.
ಎಐಕೆಎಸ್ಸಿಸಿ ಕರೆ ನೀಡುವ ಹೊತ್ತಿಗೆ ಪಂಜಾಬಿನಲ್ಲಿ ಜೂನ್ ತಿಂಗಳಿಂದ ಶುರುವಾಗಿ ತೀವ್ರಗೊಳ್ಳುತ್ತಿದ್ದ ರೈತ ಹೋರಾಟವು ಆ ರಾಜ್ಯದ ಮಟ್ಟಿಗೆ ತಾರ್ಕಿಕ ಅಂತ್ಯ ಕಂಡಿತ್ತು. ಏಕೆಂದರೆ ಅಲ್ಲಿನ ರಾಜ್ಯ ಸಕರ್ಾರವು ವಿಧಾನಸಭೆಯಲ್ಲಿ ಒಕ್ಕೂಟ ಸಕರ್ಾರದ ಕಾಯ್ದೆಗಳಿಗೆ ವಿರುದ್ಧವಾಗಿ ಸರ್ವಾನುಮತದಿಂದ ಬೇರೆ ಕಾಯ್ದೆಗಳನ್ನು ಅಂಗೀಕರಿಸಿಯಾಗಿತ್ತು. ಹಾಗಾಗಿ ಇನ್ನು ಒಕ್ಕೂಟ ಸಕರ್ಾರದ ಮೇಲೆ ಒತ್ತಡ ತಂದರೆ ಮಾತ್ರ ಪರಿಹಾರ ಎಂಬುದು ಅವರಿಗೆ ಖಚಿತವಾಗಿತ್ತು.
ಜೂನ್ ತಿಂಗಳಿಂದ ನಡೆದ ಹೋರಾಟದಲ್ಲಿ ಪಂಜಾಬಿನ ಬಹುತೇಕ (32) ರೈತ ಸಂಘಟನೆಗಳು ಸಮನ್ವಯಕ್ಕೆ ಬಂದಾಗಿತ್ತು. ಅವರೆಲ್ಲರೂ ಇದೇ ನವೆಂಬರ್ 25, 26ಕ್ಕೇ ದೆಹಲಿಗೆ ದೊಡ್ಡ ಸಂಖ್ಯೆಯಲ್ಲಿ ಹೋಗಬೇಕು ಮತ್ತು ದೆಹಲಿಯಲ್ಲೇ ಉಳಿಯಲು ಬೇಕಾದ ವ್ಯವಸ್ಥೆ ಮಾಡಿಕೊಂಡೇ ಹೋಗಬೇಕೆಂದು ತೀಮರ್ಾನ ಮಾಡಿದರು. ಪಂಜಾಬಿನ ಸಮನ್ವಯ ಹಾಗೂ ಅಖಿಲ ಭಾರತ ರೈತ ಹೋರಾಟಗಳ ಸಮನ್ವಯದ ಮಧ್ಯೆ (ಏನೇ ಕೊರತೆಗಳಿದ್ದರೂ) ಮಾತುಕತೆ, ಸಮನ್ವಯ ಸಮಿತಿಯೂ ಏರ್ಪಾಟಾಗಿತ್ತು.
ಆದರೆ ಏಐಕೆಎಸ್ಸಿಸಿಯ ಭಾಗವಾಗಿರದ ಹಲವು ಸಂಘಟನೆಗಳೂ ಪಂಜಾಬಿನಿಂದ ಬಂದಿದ್ದರಿಂದ, ಅಂತಿಮವಾಗಿ ಎಲ್ಲರನ್ನೂ ಪ್ರತಿನಿಧಿಸುವ ಸಂಯುಕ್ತ್ ಕಿಸಾನ್ ಮೋಚರ್ಾ ರೂಪಿತವಾಯಿತು. ಉತ್ತರ ಪ್ರದೇಶದ ಇನ್ನೊಂದು ದೊಡ್ಡ ಸಂಘಟನೆಯಾದ ಬಿಕೆಯು (ಟಿಕಾಯತ್) ಇದರಲ್ಲಿ ಇರಲಿಲ್ಲ. ಹಾಗೆಯೇ ಈಗ ಜನವರಿ 26ರಂದು ದೆಹಲಿಯ ಕೇಂದ್ರಭಾಗ ಮತ್ತು ಕೆಂಪುಕೋಟೆಯ ಬಳಿ ಹೋದ ಸಂಘಟನೆಯೂ ಸಂಯುಕ್ತ್ ಕಿಸಾನ್ ಮೋರ್ಚಾದ ಭಾಗ ಆಗಿರಲಿಲ್ಲ.
ಪ್ರಶ್ನೆ: ಹಾಗಾದರೆ ಈ ರೈತರು ದೆಹಲಿಗೆ ಬಂದಾಗ ಪೊಲೀಸರು ಸೂಚಿಸಿದ ಮೈದಾನಕ್ಕೆ ಹೋಗುವ ವಿಚಾರದಲ್ಲಿ ಗೊಂದಲವೇರ್ಪಟ್ಟಿದ್ದೇಕೆ?
ಉತ್ತರ: ಈ ಹೋರಾಟದ ನಾಯಕರು ಅತ್ಯಂತ ವಿನಮ್ರವಾಗಿ ಹೇಳುವುದೇನೆಂದರೆ ನಾಯಕತ್ವ ತಪ್ಪು ನಿರ್ಧಾರ ತೆಗೆದುಕೊಂಡಿತ್ತು, ಜನರು ದಾರಿ ತೋರಿಸಿದರು. ಹೌದು, ಪಂಜಾಬಿನಿಂದ ಹೊರಟ ರೈತರು ದಾರಿಯಲ್ಲಿ ಹಾಕಿದ್ದ ಬ್ಯಾರಿಕೇಡ್ಗಳನ್ನು ಪಕ್ಕಕ್ಕೆ ಸರಿಸಿ ಅಥವಾ ಕಂದಕಗಳನ್ನು ದಾಟಿ ಬಂದ ಚಿತ್ರ ನೀವು ನೋಡಿರುತ್ತೀರಿ. ಅದು ನಾಯಕತ್ವದ ತೀರ್ಮಾನವಾಗಿರಲಿಲ್ಲ. ಎಲ್ಲಿ ತಡೆಯುತ್ತಾರೋ ಅಲ್ಲೇ ಅನಿರ್ದಿಷ್ಟಾವಧಿ ಕೂರುವುದು ಮಾತ್ರ ಅವರ ತೀಮರ್ಾನವಾಗಿತ್ತು. ಆದರೆ ಪಂಜಾಬಿನ ರೈತರು ದೆಹಲಿಯ ಕಡೆಗೆ ಹೋಗಲೇಬೇಕೆಂದು ತೀರ್ಮಾನಿಸಿ ಅವನ್ನು ದಾಟಿದರು.
ಹಾಗೆಯೇ ಮೇಲೆ ಹೇಳಲಾದ ಸಮನ್ವಯ ಸಮಿತಿಯ ಸರ್ವಾ ನುಮತದ ತೀರ್ಮಾನವೇನೆಂದರೆ ದೆಹಲಿ ಪೊಲೀಸರು ಸೂಚಿಸಿದ ಮೈದಾನಕ್ಕೆ ಹೋಗುವುದು ಎಂದಾಗಿತ್ತು. ಟ್ರ್ಯಾಕ್ಟರ್ ಸಾಲಿನಲ್ಲಿ ಹಿಂದೆ ಉಳಿದಿದ್ದ ಪಂಜಾಬಿನ ರೈತ ನಾಯಕರ ಗಮನಕ್ಕೆ ಬಂದಂತೆ ದೆಹಲಿಯ ಗಡಿ ತಲುಪಿದ ರೈತರು ಮೈದಾನಕ್ಕೆ ಹೋಗಲು ನಿರಾಕರಿಸಿದರು. ಅವರು ದೆಹಲಿಯಲ್ಲಿದ್ದ ಯೋಗೇಂದ್ರ ಯಾದವ್ ಮತ್ತಿತರರನ್ನು ಗಡಿಗೆ ಹೋಗಿ ರೈತರ ಮನವೊಲಿಸಲು ಸೂಚಿಸಿದರು.
ಆದರೆ ಗಡಿಗೆ ಹೋದ ಅವರಿಗೆ ಗೊತ್ತಾದದ್ದೇನೆಂದರೆ ರೈತರನ್ನು ಮನವೊಲಿಸುವುದು ಸಾಧ್ಯವೇ ಇಲ್ಲ ಎಂದು. ಅಂತಿಮವಾಗಿ ರೈತರು ಹೇಳಿದ್ದೇ ಸರಿ ಎಂಬುದು ಈ ನಾಯಕರುಗಳ ಅಭಿಪ್ರಾಯ. ವಿವಿಧ ಗಡಿಗಳಲ್ಲಿ ಲಕ್ಷಗಟ್ಟಲೆ ರೈತರು ಕೂತರು. ಐತಿಹಾಸಿಕ ಹೋರಾಟವು ಆರಂಭವಾಯಿತು.
ಪ್ರಶ್ನೆ: ಬಹುತೇಕ ಪಂಜಾಬ್ ಮತ್ತು ಹರಿಯಾಣಗಳ ರೈತರೇ ಇಲ್ಲಿ ಹೆಚ್ಚಿದ್ದಾರೆ, ಆದರೆ ಇಡೀ ದೇಶದಲ್ಲಿ ಅಲ್ಲಲ್ಲಿ ಪೂರಕವಾದ ಪ್ರತಿಭಟನೆಗಳು ನಡೆಯುತ್ತಿವೆ ಎಂಬುದೇನೋ ಸರಿ. ಆದರೆ ಇಡೀ ದೇಶದ ಪರವಾಗಿ ಇದು ನಡೆಯುತ್ತಿದೆ ಎನ್ನುವುದಾದರೆ ಸರ್ಕಾರದ ಜೊತೆ ಮಾತುಕತೆಯಲ್ಲಿ ದೇಶದ ಉಳಿದ ಭಾಗಗಳ ಪ್ರತಿನಿಧಿಗಳು ಏಕಿಲ್ಲ?
ಉತ್ತರ: ಇದ್ದಾರೆ. ಈಗ ಬೆಂಗಳೂರಿನಲ್ಲಿ ವಾಸಿಸುವ, ಆಂಧ್ರದ ಆಶಾ ಕಿಸಾನ್ ಆಂದೋಲನದ ಕವಿತಾ ಕುರಗಂಟಿ ಹೆಚ್ಚಿನ ಮಾತುಕತೆಗಳ ಭಾಗವಾಗಿದ್ದಾರೆ. ಅಖಿಲ ಭಾರತ ಕಿಸಾನ್ ಸಭಾದ ಹನ್ನನ್ ಮೊಲ್ಲಾ (ಇವರು ಪಶ್ಚಿಮ ಬಂಗಾಳದವರು), ಹರಿಯಾಣಾ ಮೂಲದವರಾದ, ಆದರೆ ಅಖಿಲ ಭಾರತ ರೈತ ಹೋರಾಟಗಳ ಸಮನ್ವಯ ಸಮಿತಿಯನ್ನು ಪ್ರತಿನಿಧಿಸುವ ಯೋಗೇಂದ್ರ ಯಾದವ್ ಈ ಹೋರಾಟದ 7 ಜನರ ಉನ್ನತ ಸಮಿತಿಯ ಭಾಗವಾಗಿದ್ದಾರೆ.
ಭಾಗ-2: ಮುಂದುವರಿದಿದೆ
ಲಿಂಕ್ ಮೇಲೆ ಕ್ಲಿಕ್ ಮಾಡಿ ಓದಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಇಂದಿನಿಂದ ಏ.3 ರವರೆಗೆ ಸೂಳೆಕೆರೆಗೆ ನೀರು ಬಿಡುಗಡೆ
ಸುದ್ದಿದಿನ,ದಾವಣಗೆರೆ: ಭದ್ರಾ ಜಲಾಶಯ ಯೋಜನೆ ವ್ಯಾಪ್ತಿಗೆ ಬರುವ ದೇವರಬೆಳಕೆರೆ ಪಿಕ್ಅಪ್ ಅಣೆಕಟ್ಟಿನ ಸ್ಕವರಿಂಗ್ ಸ್ಪೂಯೀಸ್ ಗೇಟ್ ಮುಖಾಂತರ ಜಲಾಶಯದ ಡೆಡ್ ಸ್ಟೋರೇಜ್ ನೀರನ್ನು ಸೂಳೆಕೆರೆ ಹಳ್ಳಕ್ಕೆ ಮಾರ್ಚ್ 28 ರಿಂದ ಏಪ್ರಿಲ್ 3 ರವರೆಗೆ ಪ್ರತಿದಿನ 20 ಕ್ಯೂಸೆಕ್ಸ್ಗಳಲ್ಲಿ ಜನ-ಜಾನುವಾರು ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಲು ಹಾಗೂ ಅಕ್ಕಪಕ್ಕದ ಗ್ರಾಮಗಳ ಕುಡಿಯುವ ನೀರಿನ ಉದ್ದೇಶಕ್ಕೆ ಬಿಡಲಾಗುತ್ತಿದೆ.
ಈ ವೇಳೆ ಹಳ್ಳಕ್ಕೆ ದನ ಕರಗಳನ್ನು ಇಳಿಸುವುದಾಗಲಿ, ಪಂಪ್ಸೆಟ್ಗಳಿಂದ ನೀರೆತ್ತುವುದುನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಕನೀನಿನಿ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ
ಸುದ್ದಿದಿನ ಡೆಸ್ಕ್ : ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.
ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಇದೇ 30 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಇದೇ ವೇಳೆ ಬಿಹಾರದಲ್ಲಿ ನಾಮಪತ್ರ ಸಲ್ಲಿಕೆಗೆ ನಾಳೆ ಕಡೆ ದಿನವಾಗಿದ್ದು, ಈ ತಿಂಗಳ 30 ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಏಪ್ರಿಲ್ 2ರಂದು ನಾಮತ್ರ ಹಿಂಪಡೆಯುವಿಕೆಗೆ ಕೊನೆಯ ದಿನವಾಗಿರುತ್ತದೆ.
ಏಪ್ರಿಲ್ 19 ರಂದು 17 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಅದರಂತೆ ತಮಿಳುನಾಡಿನಲ್ಲಿ 39, ರಾಜಸ್ಥಾನದಲ್ಲಿ 12, ಉತ್ತರ ಪ್ರದೇಶದಲ್ಲಿ 8, ಮಧ್ಯಪ್ರದೇಶದಲ್ಲಿ 6, ಉತ್ತರಾಖಂಡ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ತಲಾ 5 , ಬಿಹಾರದಲ್ಲಿ 4, ಪಶ್ಚಿಮ ಬಂಗಾಳದಲ್ಲಿ 3, ಅರುಣಾಚಲ ಪ್ರದೇಶ, ಮಣಿಪುರ, ಮೆಘಾಲಯದಲ್ಲಿ ತಲಾ 2 ಮತ್ತು ಛತ್ತೀಸ್ಗಢ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಅಂಡಮಾನ್-ನಿಕೋಬಾರ್ ದ್ವೀಪಗಳು, ಜಮ್ಮು-ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ತಲಾ ಒಂದು ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.
ಎರಡನೇ ಹಂತದಲ್ಲಿ 89 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ನಾಳೆ ಅಧಿಸೂಚನೆ ಹೊರಡಿಸಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
ಸುದ್ದಿದಿನ ಡೆಸ್ಕ್ : 18ನೇ ಲೋಕಸಭೆಗೆ ಸದಸ್ಯರನ್ನು ಆಯ್ಕೆ ಮಾಡಲು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಭಾರತ ಚುನಾವಣಾ ಆಯೋಗ, ಸಕಲ ಸಿದ್ಧತೆಯೊಂದಿಗೆ ಸಜ್ಜಾಗಿದೆ.
ದೇಶದಲ್ಲಿ ಚುನಾವಣೆಗಳನ್ನು ಪಾರದರ್ಶಕವಾಗಿ ಹಾಗೂ ಅತ್ಯಂತ ವಿಶ್ವಾಸಾರ್ಹ ರೀತಿಯಲ್ಲಿ ನಡೆಸುವ ಸಂಕಲ್ಪದೊಂದಿಗೆ ಚುನಾವಣಾ ಆಯೋಗ, ಸಮಸ್ತ ಚುನಾವಣಾ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ತಂತ್ರಜ್ಞಾನದ ನೆರವನ್ನು ಬಳಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮತದಾರರು, ಚುನಾವಣಾ ಸಿಬ್ಬಂದಿ ಹಾಗೂ ಆಯೋಗಕ್ಕೆ ನೆರವಾಗುವ ಹಲವು ಆಪ್ಗಳನ್ನು ಚುನಾವಣಾ ಆಯೋಗ ಅಭಿವೃದ್ಧಿಪಡಿಸಿದೆ.
ಈ ಪೈಕಿ ಇಂದು ಸಿ-ವಿಜಿಲ್ ಆಪ್ ಬಗ್ಗೆ ಮಾಹಿತಿ.
ದೇಶದಲ್ಲಿ ಚುನಾವಣೆಗಳ ವೇಳೆ ನಡೆಯುವ ಅಕ್ರಮಗಳು, ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣಗಳ ಮೇಲೆ ಕಣ್ಣಿಡುವುದು ಕೇವಲ ಚುನಾವಣಾ ಸಿಬ್ಬಂದಿಯ ಕೆಲಸವಲ್ಲ. ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು. ಹಾಗಾಗಿ ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ಆಯೋಗಕ್ಕೆ ದೂರು ತಲುಪಿಸಲು ಭಾರತ ಚುನಾವಣಾ ಆಯೋಗ ಸಿ-ವಿಜಿಲ್ ಆಪ್ ಅನ್ನು ಅಭಿವೃದ್ಧಿ ಪಡಿಸಿದೆ.
ದೂರುಗಳನ್ನು ಆನ್ಲೈನ್ ಮೂಲಕ ಆಯೋಗಕ್ಕೆ ರವಾನಿಸಲು ಈ ಆಪ್ ನೆರವಾಗುವುದು. ಯಾವುದೇ ಚುನಾವಣಾ ಅಕ್ರಮಗಳ ಬಗ್ಗೆ ಧ್ವನಿಮುದ್ರಣ, ವಿಡಿಯೋ ಚಿತ್ರದ ತುಣುಕುಗಳು ಮತ್ತು ಫೋಟೊ ಮೊದಲಾದ ದಾಖಲೆಗಳನ್ನು ಸಾರ್ವಜನಿಕರು ಇದರ ಮೂಲಕ ಕಳುಹಿಸಬಹುದು.
ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮಾಡುವ ಖರ್ಚು-ವೆಚ್ಚ, ಮತದಾರರ ಮನವೊಲಿಕೆಗೆ ಆಮಿಷಗಳ ಬಳಕೆ ಮೊದಲಾದ ಅಕ್ರಮಗಳ ಬಗ್ಗೆ ದೂರು ನೀಡಲು ಇದನ್ನು ಬಳಸಬಹುದು. ಒಂದುನೂರು ನಿಮಿಷಗಳಲ್ಲಿ ಚುನಾವಣಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ದೇಶದ ಯಾವ ಮೂಲೆಯಲ್ಲೇ ಆಗಲಿ ನಡೆಯುವ ಚುನಾವಣಾ ಅಕ್ರಮ ಅಥವಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ತಾವು ನೀಡಿದ ದೂರುಗಳನ್ನು ಆಯೋಗ ಪರಿಗಣಿಸಿದೆಯೇ ಎನ್ನುವ ವಿವರಗಳನ್ನು ಸಹ ಸಾರ್ವಜನಿಕರು ಸಿ-ವಿಜಿಲ್-ಆಪ್ ಮೂಲಕ ವೀಕ್ಷಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ಭಾನುವಾರದಂದು ಕಾರ್ಯನಿರ್ವಹಿಸುವಂತೆ ಬ್ಯಾಂಕ್ಗಳಿಗೆ ಆರ್ ಬಿ ಐ ಸೂಚನೆ
-
ದಿನದ ಸುದ್ದಿ6 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ7 days ago
ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳು ಸ್ಥಗಿತ ; ಬಿಜೆಪಿ ಅಧಿಕಾರ ದುರುಪಯೋಗ : ಖರ್ಗೆ ಕಿಡಿ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ5 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ5 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ಕವಿತೆ | ನೆನಪು