ಲೈಫ್ ಸ್ಟೈಲ್
ಗ್ಲಾಮರ್ ಡಾಲ್ಗಳ ಜಬರ್ದಸ್ತ್ ಪಾರ್ಟಿ ಔಟ್ಫಿಟ್..!

- ಚಿತ್ರಶ್ರೀ ಹರ್ಷ
ವಿಶ್ವದೆಲ್ಲೆಡೆ ವರ್ಷಾಂತ್ಯಕ್ಕೆ ದಿನಗಣನೆ ಶುರುವಾಗಿದ್ದು ಹೊಸ ವರ್ಷದ ಆಗಮನದ ಸಂಭ್ರಮಾಚರಣೆಯಲ್ಲಿ ಮುಳಿಗೆದ್ದಿದೆ ಫ್ಯಾಷನ್ ಲೋಕ. ಬೆಡಗು ಬಿನ್ನಾಣಕ್ಕೆ ಕುಂದು ಬಾರದಂತೆ ಜಗಮಗಿಸುವ ನೂತನ ವರ್ಷಾಚರಣೆಯ ಪಾರ್ಟಿ ಫೀವರ್ ನ ಟೆಂಪರೇಚರ್ ಹೆಚ್ಚಿಸುತ್ತಿವೆ ಸೀಕ್ವೀನ್ ಪಾರ್ಟಿ ಡ್ರೆಸ್ ಗಳು.
ಸಖತ್ ಹಾಟ್ ಏನಿಸುವ ವೆಸ್ಟರ್ನ್ ಕಾನ್ಸೆಪ್ಟ್ನಲ್ಲಿ ಟ್ರೆಂಡ್ ಆಗಿದೆ ಸೀಕ್ವೀನ್ ಫ್ಯಾಷನ್. ಹಾಲಿವುಡ್ ನಿಂದ ಹಾರಿ ಬಂದು, ಬಾಲಿವುಡ್ ನಿಂದ ಟಾಲಿವುಡ್ ನಟೀಮಣಿಯರಿಗೂ ಫೇವರಿಟ್ ಎನಿಸಿದೆ. ಟೀನೇಜ್ ಬೆಡಗಿಯರ ಹಾಟ್ ಪಾರ್ಟಿ ಲುಕ್ ನ ಸ್ಟೈಲ್ ಸ್ಟೇಟ್ ಮೆಂಟ್ ಆಗಿದೆ ಸೀಕ್ವೀನ್ ಫ್ಯಾಷನ್ ಉಡುಪುಗಳು.
ಈ ವರ್ಷದ ಚಳಿಗಾಲದ ಟ್ರೆಂಡ್ ಆಗಿ ಸೀಕ್ವೀನ್ ಉಡುಪು ಗಳು ಫ್ಯಾಷನ್ ಕ್ಷೇತ್ರದಲ್ಲಿ ಸದ್ದು ಮಾಡುತ್ತಿವೆ. ಈ ಬಾರಿಯ ಡಿಸೆಂಬರ್ ಪಾರ್ಟಿ ಗಳಲ್ಲಿ ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳು ಸೀಕ್ವೀನ್, ಗ್ಲಿಟರ್ ಉಡುಪುಗಳನ್ನೇ ತೊಟ್ಟು ಮಿಂಚಿರುವುದು ವಿಶೇಷ.
ಸೀಕ್ವೀನ್ ಗ್ಲಿಟರ್ ಉಡುಪುಗಳು ಭಿನ್ನವಾಗಿ ಗಮನ ಸೆಳೆಯುವುದಲ್ಲದೇ, ನಾಲ್ಕು ಜನರ ಮಧ್ಯೆ ನಿಮ್ಮನ್ನು ಆಕರ್ಷಣೆಯ ಕೇಂದ್ರ ಬಿಂದುವಾಗಿಸುತ್ತದೆ. ಆದ್ದರಿಂದ ಸೆಲೆಬ್ರಿಟಿಗಳು ಈ ಆಕರ್ಷಕ ಜಗಮಗಿಸುವ ಸೀಕ್ವೀನ್ ಉಡುಪುಗಳ ಮೊರೆ ಹೋಗುತ್ತಾರೆ ಎನ್ನುವುದು ಫ್ಯಾಷನ್ ಉದ್ಯಮದ ಮಾತು.
ಹಾಲಿವುಡ್–ಬಾಲಿವುಡ್ ಎರಡಲ್ಲೂ ಜನಪ್ರಿಯತೆ ಗಳಿಸಿರುವ ನಟಿ ಪ್ರಿಯಾಂಕ ಚೋಪ್ರಾ ,ದೀಪಿಕಾ ಪಡುಕೋಣೆ ಅವರಿಂದ ಹಿಡಿದು ತಮಿಳಿನ ನಯನತಾರಾ ವರೆಗೂ, ಸೀಕ್ವೀನ್ ಡ್ರೆಸ್ ಗಳ ಫ್ಯಾಷನ್ ಟ್ರೆಂಡ್ ಅಚ್ಚೊತ್ತಿದೆ.
ಕೇವಲ ಕೋಟ್ ಮತ್ತು ಜಾಕೆಟ್ ಗಳಿಗೆ ಸೀಮಿತವಾದ ಸೀಕ್ವೀನ್ ಫ್ಯಾಷನ್ ಈಗ ಉದ್ದನೆಯ ಗೌನ್, ಫ್ರಾಕ್ , ಪ್ಯಾಂಟ್ , ಸ್ಕರ್ಟ್,ಗಳ ರೂಪದಲ್ಲಿ ಸೆಲೆಬ್ರಿಟಿಗಳ ವಾರ್ಡ್ ರೋಬ್ನಲ್ಲಿ ಸ್ಥಾನಪಡೆದಿವೆ. ಹಾಗಾಗಿಯೇ ಸ್ಟೈಲ್ ಎಕ್ಸ್ಪರ್ಟ್ಸ್ಗಳು ತಮ್ಮ ವಿನ್ಯಾಸದ ಉಡುಪುಗಳಲ್ಲಿ ಕಡ್ಡಾಯವಾಗಿ ಗ್ಲಿಟರ್ ಸೀಕ್ವೀನ್ ವಸ್ತ್ರಗಳಿಗೆ ಆದ್ಯತೆ ನೀಡುತ್ತಿದ್ದಾರೆ.
“ಗ್ಲಿಟರ್ ಸೀಕ್ವೀನ್ ಫ್ಯಾಷನ್ ” ಈ ವರ್ಷದ ಹಾಟ್ ಪಾರ್ಟಿ ಟ್ರೆಂಡ್ ಆಗಿದೆ. 70ರ ದಶಕದಲ್ಲಿ ಉತ್ತುಂಗದ ಸ್ಥಿತಿಯಲ್ಲಿದ್ದ ಈ ಟ್ರೆಂಡ್ ಈಗ ಮರುಕಳಿಸಿದೆ. ಕೇವಲ ಯುವಪೀಳಿಗೆ ಅಷ್ಟೇ ಅಲ್ಲದೆ ಎಲ್ಲರೂ ಬಯಸುವ ಚುಮು ಚುಮು ಚುಮುಕಿಯ ಫಾಕ್ಸ್ ಫ್ಯಾಷನ್, ಎಲ್ಲಾ ವಯೋಮಾನದವರ ನ್ಯೂ ಇಯರ್ ಪಾರ್ಟಿ ಫ್ಯಾಬ್ರಿಕ್ ಆಗಿಬಿಟ್ಟಿದೆ ಎನ್ನುತ್ತಿದ್ದಾರೆ ಫ್ಯಾಷನ್ ಮಾಂತ್ರಿಕರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
Photo Gallery | ಚನ್ನಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಜಾನಪದ ಉತ್ಸವ-2025
ದಿನದ ಸುದ್ದಿ
ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಅಗತ್ಯ : ಪ್ರಾಚಾರ್ಯ ಎಂ.ನಾಸಿರುದ್ದೀನ್

ಸುದ್ದಿದಿನ,ಚಿತ್ರದುರ್ಗ: ಜಗತ್ತಿನಲ್ಲಿ ಭೂಮಿಯ ಮೇಲೆ ಸಕಲ ಜೀವರಾಶಿಗಳು ಬದುಕಲು ಅವಕಾಶವಿದ್ದು ಪರಿಸರ ಸಂರಕ್ಷಣೆ ಮಾಡುವುದರ ಮೂಲಕ ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.
ನಗರದ ಡಯಟ್ ಆವರಣದಲ್ಲಿರುವ 50 ಕ್ಕೂ ಹೆಚ್ಚು ಮರಗಳಲ್ಲಿ ಪಕ್ಷಿಗಳಿಗೆ ಆಹಾರ, ನೀರು ಪೂರೈಕೆ ವ್ಯವಸ್ಥೆ ಮಾಡಿ ಮಾತನಾಡಿದ ಅವರು ಪ್ರಸ್ತುತ ಸಂದರ್ಭದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು ಪಕ್ಷಿಗಳಿಗೆ ನೀರು ಮತ್ತು ಆಹಾರವನ್ನು ಪೂರೈಕೆ ಮಾಡುವ ಮೂಲಕ ಪಕ್ಷಿಗಳ ಬಗ್ಗೆ ಕಾಳಜಿಯೊಂದಿಗೆ ಸಂರಕ್ಷಿಸುವ ಭಾವನೆ ಬೆಳೆಸಿಕೊಳ್ಳಬೇಕು ಎಂದರು. ನಮ್ಮ ಮನೆಗಳ ಮೇಲ್ಚಾವಣಿಯಲ್ಲಿ ನೀರು, ಆಹಾರ ವ್ಯವಸ್ಥೆ ಮಾಡುವುದರಿಂದ ಪಕ್ಷಿಗಳನ್ನು ಸಂರಕ್ಷಿಸಲು ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಆರ್.ನಾಗರಾಜು ಕಚೇರಿ ಸಿಬ್ಬಂದಿ ವರ್ಗದವರು ಇದ್ದರು.
ಫೋಟೋ: ನಗರದ ಡಯಟ್ ಆವರಣದಲ್ಲಿರುವ 50 ಕ್ಕೂ ಹೆಚ್ಚು ಮರಗಳಲ್ಲಿ ಪ್ರಾಚಾರ್ಯ ಎಂ.ನಾಸಿರುದ್ದೀನ್ ಪಕ್ಷಿಗಳಿಗೆ ಆಹಾರ, ನೀರು ಪೂರೈಕೆ ವ್ಯವಸ್ಥೆ ಮಾಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕವಿತೆ | ಮತ್ತಿನ ಕುಣಿಕೆ

- ಗುರು ಸುಳ್ಯ
ನಿದೆರೆಗೆ ದೂಡದ ಮದಿರೆಯ
ಅನುಭವ
ಸದಾ ಸಂಕಟಗಳ ಹೆರುವ
ಮತ್ತಿನ ಕುಣಿಕೆ
ನನ್ನ ಮಡಿಲ ಮೇಲೆ ನನ್ನದೇ
ಒಡಲು ಮಲಗಿರಲು
ಮಲಗಲು ಹಂಬಲಿಸುವ
ಮಗುವಿನ ಮನದೊಳಗೆ
ಚಾದರವಿಲ್ಲದೆ ಅಳುವ ರಸ್ತೆಯ
ಬದಿಗಳು ಚಲಿಸುತ್ತಿದೆ
ಅಪ್ಪನ ಕೈ ಹಿಡಿದು
ಅಮ್ಮನ ಕೆನ್ನೆಯ ಮೇಲೆ
ನಡೆದ ನೆನಪುಗಳು
ಆದ ಅಪಘಾತಗಳ ಆಳ
ಅಳೆಯುತ್ತಿವೆ…
ಶತ ಪ್ರಯತ್ನ ಪಟ್ಟರೂ
ತಪ್ಪದ ದಾರಿಗೆ
ಡಾಂಬರು ಹಾಕಿಸಿದವರ
ರಾಜಕೀಯವನ್ನು ಎದುರಿಸುತ್ತಲೇ
ಹಡೆಯಬೇಕಿದೆ ಮುಂದಿನ ದಾರಿಯ
ತಿರುವುಗಳಲ್ಲಿ ಕೈ ಹಿಡಿದು
ಮೆಲ್ಲನೆ ಕರೆದೊಯ್ಯುವ
ಕವಿತೆಗಳನ್ನು
ಎಲ್ಲೆಂದರಲ್ಲಿ ಬಿಟ್ಟು ಬಿಡಲು
ಸಾಧ್ಯವಾಗುತ್ತಿಲ್ಲ
ಉಸಿರ ನಾದದಲ್ಲಿ
ತೇಯ್ದ ಗಂಧ,
ಆಟ ನಿಲ್ಲಲು ಬಿಡದೆ
ಗಮಗಮಿಸುತ್ತಿದೆ..
ಪ್ರವಾಹದಲ್ಲಿ ಕೊಚ್ಚಿಹೋಗುವ
ಮುನ್ಸೂಚನೆಯಿಲ್ಲದೇ
ಮೊದಲ ಮಳೆಯಲ್ಲಿ ನೆನೆದು
ಚಪ್ಪಲಿಗೆ ಅಂಟಿದ ಮಣ್ಣಿನ ಘಮದಂತೆ.
(ಕವಿತೆ – ಗುರು ಸುಳ್ಯ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days ago
ಚೀಟಿ ವ್ಯವಹಾರದಲ್ಲಿ ಮೋಸ ; ಅತಿಆಸೆಗೆ ಬಲಿಯಾದ ಗಣಿನಾಡಿನ ಜನ
-
ದಿನದ ಸುದ್ದಿ5 days ago
ದೇಶಾದ್ಯಂತ ಇಂದು ಮಹಾವೀರ ಜಯಂತಿ ಆಚರಣೆ ; ಗಣ್ಯರ ಶುಭಾಶಯ
-
ದಿನದ ಸುದ್ದಿ5 days ago
ಚನ್ನಗಿರಿ | ‘ಕುವೆಂಪು ಓದು : ಕಮ್ಮಟ’ ; ಚರ್ಚೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು
-
ದಿನದ ಸುದ್ದಿ4 days ago
ದಾವಣಗೆರೆ | ಮಕ್ಕಳ ಬೇಸಿಗೆ ರಜೆಗೆ ಶುಭ ಕೋರಿದ ತಿಂಗಳ ಅಂಗಳ
-
ದಿನದ ಸುದ್ದಿ5 days ago
ರುದ್ರಪ್ಪ ಹನಗವಾಡಿ ಅವರಿಗೆ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ
-
ದಿನದ ಸುದ್ದಿ4 days ago
ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ | ಕೇಂದ್ರ ಕೊಡದಿದ್ದರೂ ರಾಜ್ಯ ಸರ್ಕಾರ ನೀಡಲಿದೆ : ಗೃಹ ಸಚಿವ ಡಾ.ಜಿ.ಪರಮೇಶ್ವರ್
-
ದಿನದ ಸುದ್ದಿ4 days ago
ಏ.14ರಂದು ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ಶಂಕುಸ್ಥಾಪನೆ
-
ದಿನದ ಸುದ್ದಿ4 days ago
ದಾವಣಗೆರೆ | ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಜಾನಪದ ಉತ್ಸವ’