ದಿನದ ಸುದ್ದಿ
ಕವಿತೆ | ಚರಗ ಚಲ್ಲುತ್ತಿದ್ದಾರೆ..!
- ಸುರೇಶ ಎನ್ ಶಿಕಾರಿಪುರ
ಅವಳು ಸಾಕ್ಷಿ ಹೇಳಬಾರದಲ್ಲ? ಅದಕ್ಕೆ,
ಅವಳ ನಾಲಗೆ ಕತ್ತರಿಸಿ ಎಸೆದರು.
ಅವಳು ತಮ್ಮ ಹೆಸರು ಬರೆಯಬಾರದಲ್ಲ?
ಅದಕ್ಕೇ,
ಅವಳ ಕೋಮಲ ಕೈಗಳನ್ನು ಲಟಲಟನೆ ಮುರಿದರು.
ಅವಳು ಕೋರ್ಟು ಕಚೇರಿಗಳಿಗೆ ಓಡಾಡಬಾರದಲ್ಲ? ಅದಕ್ಕೆ,
ಅವಳ ಕಾಲುಗಳನ್ನು ಒಣ ಕಟ್ಟಿಗೆಯಂತೆ ಲಡ್ಡನೆ ಮುರಿದರು.
ಅವಳ ಕೊರಳು ಸ್ವರ ಹೊರಡಿಸಬಾರದಲ್ಲ?
ಅದಕ್ಕೇ,
ಅವಳ ಗೋಣನ್ನು ತಿರುಪಿ ಮುರಿದರು.
ಅವಳು ಮಿಸುಕಲೂ ಬಾರದಲ್ಲ? ಅದಕ್ಕೇ,
ಬೆನ್ನ ಮೂಳೆ ಮುರಿದು ಬೆನ್ನ ಹುರಿ ಹರಿದರು..
ದೇಶವು ಹೊತ್ತಿ ಉರಿಯಬಾರದಲ್ಲ?
ಆಳುವವನ ಗದ್ದುಗೆಯು ಅಲ್ಲಾಡಬಾರದಲ್ಲ?
ಶ್ರೇಷ್ಟ ಹಿಂದೂ ಧರ್ಮದ ಮಾನ ಉಳಿಯಬೇಕಲ್ಲ?
ಅದಕ್ಕೇ ಅಧಿಕಾರಿಗಳು ಸೂರ್ಯ ಹುಟ್ಟುವ ಮುನ್ನ ಅವಳನ್ನು ಸುಟ್ಟು ಬೂದಿ ಮಾಡಿದರು.
ಹಿಂದೂ ಧರ್ಮದ ಶವ ಸಂಸ್ಕಾರವನ್ನು
ಶಾಸ್ತ್ರೋಕ್ತ ಮಾಡಿ ಮುಗಿಸಿದರು
ಮೂಳೆ, ಮಾಂಸ, ವೀರ್ಯಮಾದರಿ, ಸಾಕ್ಷಿ ಎಲ್ಲವೂ..
ಪಂಚಭೂತಗಳಲ್ಲಿ ಲೀನ.
ವಿಶ್ವಗುರುವಿನ ಜೋಳಿಗೆಯ ತುಂಬಾ
ಹೆಣ್ಣಿನ ತುಟಿ ಕೊರಳು ಮೊಲೆ ಯೋನಿಯಿಂದ ಹರಿದ ರಕ್ತದ ಮಜಗಟ್ಟಿದ ಉಂಡೆಗಳು ತುಂಬಿವೆ.
ದಾನಮ್ಮ, ಆಸಿಫಾ, ಮನೀಷಾ, ಅವಳಿವಳೆಲ್ಲರ
ಬಿಸಿರಕ್ತ ಬಸಿದು ಪುಂಡರು ಚರಗ ಚೆಲ್ಲುತ್ತಿದ್ದಾರೆ
ತಮ್ಮ ರಾಕ್ಷಸ ಸಂತಾನ ಹುಲುಸಾಗಿ ಬೆಳೆಯಲೆಂದು.
ಚೌಕಿದಾರ ಕಾಯುತ್ತಿದ್ದಾನೆ,
ಯಾರನ್ನ? ಏನನ್ನ?
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಶಿವಮೊಗ್ಗಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ
ಸುದ್ದಿದಿನ, ಶಿವಮೊಗ್ಗ : ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡಲಿದ್ದಾರೆ.
ಯುವಜನರು, ಮಹಿಳೆಯರು, ರೈತರು ಸೇರಿ ಸುಮಾರು ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಬಾಂಡ್ ಕುರಿತ ದತ್ತಾಂಶ ಬಿಡುಗಡೆ
ಸುದ್ದಿದಿನ,ನವದೆಹಲಿ : ಚುನಾವಣಾ ಬಾಂಡ್ ಕುರಿತಂತೆ ಸುಪ್ರೀಂಕೋರ್ಟ್ನ ರಿಜಿಸ್ಟ್ರಿ ಇಂದ ಲಭ್ಯವಾದ ಅಂಕಿಕೃತ ದತ್ತಾಂಶ ಮಾದರಿಯನ್ನು ಚುನಾವಣಾ ಆಯೋಗ ಭಾನುವಾರ ತನ್ನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದೆ. www.eci.gov.in/candidate-politicalparty ವೆಬ್ಸೈಟ್ನಲ್ಲಿ ಈ ದತ್ತಾಂಶ ಲಭ್ಯವಿರುತ್ತದೆ.
ಸುಪ್ರೀಂಕೋರ್ಟ್ ನಿರ್ದೇಶಿಸಿದಂತೆ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ ಕುರಿತ ದತ್ತಾಂಶಗಳನ್ನು ಮೊಹರು ಹಾಕಿದ ಲಕೋಟೆಯಲ್ಲಿ ಸಲ್ಲಿಸಿದ್ದವು ಎಂದು ಚುನಾವಣಾ ಆಯೋಗದ ಹೇಳಿಕೆ ತಿಳಿಸಿದೆ. ರಾಜಕೀಯ ಪಕ್ಷಗಳಿಂದ ಸ್ವೀಕರಿಸಿದ ಮೊಹರು ಹಾಕಿದ ಲಕೋಟೆಗಳನ್ನು ತೆರೆಯದೇ ಸುಪ್ರೀಂಕೋರ್ಟ್ಗೆ ಸಲ್ಲಿಸಲಾಗಿತ್ತು.
ಇದೇ 15ರಂದು ಸುಪ್ರೀಂಕೋರ್ಟ್ ನೀಡಿದ ಆದೇಶದ ಮೇರೆಗೆ ಸುಪ್ರೀಂಕೋರ್ಟ್ನ ರಿಜಿಸ್ಟ್ರಿ, ಭೌತಿಕ ಪ್ರತಿ ಹಾಗೂ ಅದರ ಡಿಜಿಟಲ್ ದಾಖಲೆಯಿರುವ ಪೆನ್ಡ್ರೈವ್ ಒಳಗೊಂಡ ಮೊಹರು ಹಾಕಿದ ಲಕೋಟೆಯನ್ನು ಹಿಂತಿರುಗಿಸಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ರಶ್ಮಿ ಚಂದ್ರಗಿರಿ ಅವರಿಗೆ ಪಿಎಚ್.ಡಿ ಪದವಿ
ಸುದ್ದಿದಿನ,ಹಾವೇರಿ : ನಗರದ ರಶ್ಮಿ ಚಂದ್ರಗಿರಿ ಅವರು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮಂಡಿಸಿದ “ದಲಿತ ಬಂಡಾಯ ಕಾದಂಬರಿಗಳಲ್ಲಿ ಸಾಂಸ್ಕೃತಿಕ ನೆಲೆಗಳು” ಎಂಬ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ಪ್ರಧಾನ ಮಾಡಿದೆ.
ಇವರಿಗೆ ಡಾ.ಬಿಎಸ್.ಭಜಂತ್ರಿ , ಸಹಾಯಕ ಪ್ರಧ್ಯಾಪಕರು ಕರ್ನಾಟಕ ಕಲಾ ಮಹಾವಿದ್ಯಾಲಯ ಧಾರವಾಡ ಇವರು ಮಾರ್ಗದರ್ಶನ ಮಾಡಿದ್ದರು.
ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ರಶ್ಮಿ ಚಂದ್ರಗಿರಿಯವರ ಹಲವು ಲೇಖನಗಳು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಪ್ರಸ್ತುತ ಇವರು ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿತ್ತಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243