Connect with us

ಭಾವ ಭೈರಾಗಿ

ಕವಿತೆ | ಪುಟಿನ್ ಗೊಂದು ಪತ್ರ

Published

on

  • ರಮೇಶ್ ಎನ್ ಜೆ, ಮೈಸೂರು

ನಾವು ಬರಲಾಗುವುದಿಲ್ಲ ನಿನ್ನ ಹತ್ತಿರ
ಏಕೆಂದರೆ ನಮ್ಮಿಬ್ಬರ ನಡುವೆ ಯಾರದೋ ಇಲ್ಲಿ ಕುತಂತ್ರ
ಬಿಡಿಸಲಾಗುತ್ತಿಲ್ಲ ನನಗೆ ತಿಳಿದಂತೆ ಅದರ ಸೂತ್ರ
ಬಿಡಿಸಬೇಕೆಂದರೆ ಮೊದಲು ನಾವು ಆಗಬೇಕು
ಯುದ್ಧದಿಂದ ಮುಕ್ತ ಸ್ವಾತಂತ್ರ.

ಯುದ್ಧದಿಂದ ಎಲ್ಲೆಲ್ಲೂ ನರಕ ನಾಕಾ
ಇನ್ನೂ ಏಕೆ ಗೊತ್ತಿಲ್ಲವೇ ನಿನಗೆ ಮುಗಿದ ಮೇಲೆ ಅಲ್ಲಿ ಎಲ್ಲವೂ ಸ್ಮಾರಕ ಅಂತಹ ಹೆಸರು ನಿಮಗೆ ಬೇಕಾ ಯಾಕೆಂದರೆ ಯಾವ ಗಿಡ ಪಕ್ಷಿಗಳಲ್ಲೂ
ಅಷ್ಟೇ ಅಲ್ಲ ಕ್ರಿಮಿಕೀಟಗಳನ್ನು ಸೃಷ್ಟಿ ಕೊಳ್ಳಲಾಗುವುದಿಲ್ಲ ಅದರದರ ನಾಕ ಯುದ್ಧ ನೀನು ಅದು ನರಕ ಬಾಕ.

ಮೊದಲು ಯುದ್ಧವನ್ನು ನಿಲ್ಲಿಸುವ ಮಾನವ ಪ್ರಭು ಏಕೆಂದರೆ ಯುದ್ಧದಲ್ಲಿ ಗೆದ್ದವನಿಗೆ ಮೊದಲು ಖಾಲಿ ಚೊಂಬು ಆಮೇಲೆ ಸೋತವನಿಗೆ ವೀರಮರಣ ವೆಂಬ ತುಂಬು ಒಂದಂತೂ ಸತ್ಯ ಇಬ್ಬರ ಜಗಳ ಮೂರನೆಯವರಿಗೆ ಲಾಭ ಎಂಬುದನ್ನು ಮೊದಲು ನೀನು ನಂಬು.

ನಾವು ಮಾಡುತ್ತಾ ಇರುವುದು ಯುದ್ಧ ಅಲ್ಲವೇ ಅಲ್ಲ ನಿಜ ನಮ್ಮಲ್ಲಿ ಇರುವುದೊಂದೇ ವ್ಯಾಮೋಹವೆಂಬ ಕಣಜ ನಾವು ಬಿತ್ತುತ್ತಾ ಇದ್ದೇವೆ ಅದರದೇ ಆದ ಬೀಜ
ಇನ್ನೂ ಸೂರ್ಯ ಚಂದ್ರನ ಬಿಂಬ ಅಲ್ಲಿ ಇನ್ನೂ ಇರುವುದಿಲ್ಲ ತೇಜ ಏಕೆಂದರೆ ಸೂರ್ಯ ಚಂದ್ರನ ಕಿರಣಗಳನ್ನು ಹೊರಸೂಸುವ ವಿಷದ ವಿಕಿರಣವೇ ಇನ್ನೂ ಅಲ್ಲಿ ಸಹಜ.

ನೀನು ಹದ್ದುಮೀರಿ ಬಂದೆ ಸರಹದ್ದನ್ನು ಸುಮ್ಮನಿರದೆ ಸೃಷ್ಟಿಸುತ್ತದೆ ಇಲ್ಲಿ ಬಂದು ರಕ್ತ ಕಸಾಯಿಖಾನೆ ನೀನು ಸೃಷ್ಟಿಸಿಕೊಳ್ಳಲು ಇಚ್ಛೆ ಪಡುತ್ತಾ ಇದ್ದೀಯೇನೋ ಒಂದು ಇತಿಹಾಸವನ್ನೇ ಅದು ಹೇಗೆ ಸಾಧ್ಯ ದೂರದಿಂದ ನನಗೆ ಅನಿಸುತ್ತಿದೆ ನೀನೇ ಅಳಿಸುತ್ತಾ ಇದ್ದೀಯಾ ನಿನ್ನ ವಂಶಾವಳಿಯನ್ನೇ.

ಇನ್ನೂ ನಿನ್ನ ಯುದ್ಧದ ಕಣಿವೆಯೊಂದು ಹಾಡಿದೆ ಹಾಡು ನಿನ್ನ ಯುದ್ಧದ ಭೋರ್ಗರೆತಕ್ಕೆ ಸೌರಮಂಡಲದ ಸೀಳಾಗಿದೆ ನೋಡು ನಾವು ನೀವು ಬದುಕುಳಿದರೂ
ಉಸಿರಾಡುವುದು ಇನ್ನೂ ಪಾಡು ಅದನ್ನು ನೀನು ಅರಿತರೂ ಯಾಕೆ ಇಂತಹ ಸೇಡು.

ಯುದ್ಧವನ್ನು ನಿಲ್ಲಿಸಲು ಮೊದಲು ಮಾತುಕತೆ ನಿಲ್ಲಿಸಿ ಮೌನ ಒಂದನ್ನೇ ಮಾತ್ರಾ ಸೃಷ್ಟಿಸಿ ನಿಮ್ಮ ಈ ಯುದ್ಧದ ಭೋರ್ಗರೆತಕ್ಕೆ ಮಗುವೊಂದು ಹುಟ್ಟಿ ತಾಯಿಯ ತೊಡೆಯ ಮೇಲೆ ನರಳಾಡುತ್ತಿರುವ ಮಗುವಿನ ರಕ್ತವು ಇನ್ನೂ ಹಸಿ ಇನ್ನೂ ನಿನಗೆ ಬೇಕೇ ಹಾಹಾಕಾರ ವೆಂಬ ಮಾನವನ ರಕ್ತದ ಶಾಖ ವೆಂಬ ಬಿಸಿ.

ಈಗಲಾದರೂ ಚಿಂತಿಸಿ ಯುದ್ಧವನ್ನು ಬಿಟ್ಟು ಮಂಥಿಸಿ ಮೊದಲು ನಿಮ್ಮ ನಿಮ್ಮ ದೇಶವನ್ನು ವೃದ್ಧಿಸಿ ಎಲ್ಲರೂ ಯುದ್ಧವಿಲ್ಲದ ಪ್ರಪಂಚವನ್ನೇ ಸೃಷ್ಟಿಸಿ.

ಯುದ್ಧ ಒಬ್ಬರಿಗೆ ಪ್ರತಿಷ್ಠೆಯ ಪ್ರತೀಕ ಇನ್ನೊಬ್ಬರಿಗೆ ತಮ್ಮ ಉಳಿಯುವಿಕೆಯ ಆತಂಕ ಆದರೂ ಇವೆರಡೂ ಮನುಕುಲವೇ ಕಳಂಕ ಆದುದರಿಂದಲೇ ನಮ್ಮ ನಿಮ್ಮ ಮನೆಯಲ್ಲಿ ಏಕೋ ಏನೋ ಈಗ ಎಲ್ಲೆಲ್ಲೂ ಸೂತಕ.

ಕೊನೆಯದಾಗಿ ಯುದ್ಧವನ್ನು ನಿಲ್ಲಿಸಲು ನನ್ನದೊಂದು ಹೃದಯ ಪೂರ್ವಕ ಮನವಿ ರಾಗ ದ್ವೇಷವನ್ನು ನಿಮ್ಮ ನಿಮ್ಮ ದೇಶ ದೇಹದಿಂದ ಗಟ್ಟಿಯಾಗಿ ದಯವಿಟ್ಟು ಕೊಡವಿ ಏಕೆಂದರೆ ನಮ್ಮ ನಿಮ್ಮ ಈ ಹುಚ್ಚಾಟಕ್ಕೆ ಹಸುಗೂಸು ಭೂಮಿತಾಯಿ ಆಗುತ್ತಲೇ ಇದ್ದಾಳೆ ಇನ್ನೂ ಬಡವಿ.

ಮೊದಲು ಮಾಡಿಕೊಳ್ಳಿ ಕದನವಿರಾಮ ಸ್ವಲ್ಪವಾದರೂ ನಿಶ್ಚಿಂತೆಯಿಂದ ಹೊಟ್ಟೆ ತುಂಬಿಸಿಕೊಳ್ಳುತ್ತವೆ ಹುಳು ಹುಪ್ಪಟಿ ಪಕ್ಷಿಧಾಮ ಆಗಲೂ ಉಣ್ಣಲಾಗದೆ ಸತ್ತರೆ ಹೋಮ ಇದ್ದರೆ ಪಕ್ಷಿಧಾಮ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಅನ್ನಕ್ಕೆ ಯಾವ ಧರ್ಮ..? ಮತ್ತು ಇತರೆ ಕವಿತೆಗಳು

Published

on

~ವಿಜಯ್ ನವಿಲೇಹಾಳು

ನನ್ನ ಮನವ, ಹಸಿದ ತೋಳಗಳಂತೆ ಕಿತ್ತು ತಿಂದು ಅದೆಷ್ಟೋ ದಿನಗಳಿಂದ ಎದೆನಡುಗಿಸುತ್ತ ರಣಕೇಕೆ ಹಾಕುತ್ತಿರುವ ನೋವಿನ ಪದಗಳನು ಜೋಡಿಸುತ್ತಿರುವೆ ಅಷ್ಟೇ

ಮಾರಮ್ಮನ ಜಾತ್ರೆಯ ಪ್ರಸಾದ,
ಮೊಹರಮ್ ನ ಚೋಂಗಿ ಕೂಡಿ ಉಂಡು
ಅಡುಗೆ ರುಚಿಯೂ; ಮಾಯಾ ದೀವಿಗೆಯನು
ತಿಕ್ಕಿದಾಗ ಬರುವ ಜೀನಿಯಂತೆ ಅದ್ಭುತ ವಾಗಿತ್ತು

ಪಂಕ್ತಿಯಲ್ಲಿ ಹಿಂದುವೋ, ಮುಸಲ್ಮಾನನೋ, ಕ್ರಿಶ್ಚಿಯನ್ನನೋ, ಯಾರಾದರೇನು? ಅನ್ನಕ್ಕೆ ಯಾವ ಧರ್ಮ ?

ಈಗ ಅಲ್ಲೆಲ್ಲೊ ಯಾರೋ ಕೆಲವರು ಜಾತಿ ಧರ್ಮದ ವಿಷವನು ಹನಿ ಹನಿ ಉಣಬಡಿಸಿ ಊರಿಗೂರಿಗೆ ದ್ವೇಷದ ನಶೆಯೇರಿಸಿದ್ದಾರೆ

ಈಗೀಗ ಅವರ ಹಸಿವು ನೀಗುತ್ತಿರುವುದು ಕ್ರೌರ್ಯದ ಕತ್ತಿಯಿಂದ ಜಿನಿಗುತ್ತಿರುವ ರಕ್ತದಿಂದ

ನಾನೆಂದು ಕವಿತೆ ಬರೆದವನಲ್ಲ ಎದೆಯೊಳಗಿನ ನೋವಿನ ಪದಗಳನು ಜೋಡಿಸುತ್ತಿರುವೆ ಅಷ್ಟೇ.

ಇತರೆ ಕವಿತೆಗಳು

೧..
ಅವಳ ಮಾತುಗಳು ಅಲ್ಪ ಪ್ರಾಣಗಳಂತೆ
ಕಿವಿಗಳಿಗೆ ನಾಟುತ್ತವೆ
ಅವಳ ಮೌನ ಮಹಾ ಪ್ರಾಣಗಳಂತೆ
ಸೀದ ಹೃದಯಕ್ಕೆ ಅಪ್ಪಳಿಸುತ್ತವೆ
ಅವಳ ಮಾತು ಮತ್ತು ಮೌನದ ಕೊನೆಯಲಿ
ನಾನು ಅನುನಾಸಿಕದಂತೆ.
೨..
ಮಡಿವಂತಿಕೆಯೇ ಶ್ರೇಷ್ಟ ಮೈಲಿಗೆಯು ಅನಿಷ್ಟ ಅಂದುಕೊಂಡಿದ್ದರೆ ಊರಾಚೆಗಿನ ಕಲ್ಲು ಬಂಡೆ ವಿಗ್ರಹವಾಗುತ್ತಿರಲಿಲ್ಲ.
೩..
ಅವಳು ಅಣು ಅಣುವಾಗಿ ಹೃದಯದ
ಆಳವನು ಸೇರಿಕೊಂಡು ಬೇರು ಬಿಟ್ಟಳು
ಅವಳ ಒಲವಿನ ಆಕ್ರಮಣಕೆ
ನಾ ಮರುಮಾತುಗಳಾಡದೆ ಹೆಪ್ಪುಗಟ್ಟಿದೆ. (ಕವಿ:ವಿಜಯ್ ನವಿಲೇಹಾಳು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಹನಿಗವಿತೆಗಳು | ಬೆಳಕಿನ ಬೆನ್ನ ಹಿಂದೆ

Published

on

  • ಅನಿತ ಮಂಜುನಾಥ

ಪ್ರೀತಿ,
ಅಜ್ಞಾತ ಅನೂಹ್ಯ.
ಭಾವಯಾನದ
ಬಾನ ಕೆಳಗೆ.

…….

ಸುರಿಯುವ ಮಳೆಯಲ್ಲಿ
ಕೊಡೆ ಮರೆತೆ,
ಆಗ ನೀ ನೆನಪಾದೆ.

…….

ನನ್ನ
ವಿರಹಗಳಿಗೆ,
ಕಾವ್ಯವೇ ಮದ್ದು ನನಗೆ,
ಮನದೊಳಗೊಂದು
ಸುಖ ಸದ್ದು !

…….

ಮಾತು ವಚನಗಳು,
ಮನ ಕಲಹಗಳಾಗದಿರಲಿ,
ಆಗಲಿ ಬಾಳಿನ ಆಶಾಕಿರಣ.

(ಅನಿತ ಮಂಜುನಾಥ ಅವರ ‘ ಬೆಳಕಿನ ಬೆನ್ನ ಹಿಂದೆ – ಹನಿಗವಿತೆಗಳ ಕವನ ಸಂಕಲನದಿಂದ ಈ ಮೇಲಿನ ಹನಿಗಳನ್ನು ಆಯ್ದುಕೊಳ್ಳಲಾಗಿದೆ‌.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಕವಿತೆ | ಯಾವ ಕಾಲದ ಶಾಸ್ತ್ರವೇನು ಹೇಳಿದರೇನು..?

Published

on

  • ಕುವೆಂಪು

ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ?
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು ?
ಎಂದೋ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು ?
ನಿನ್ನೆದೆಯ ದನಿಯೆ ಋಷಿ ! ಮನು ನಿನಗೆ ನೀನು !

ನೀರಡಿಸಿ ಬಂದ ಸೋದರಗೆ ನೀರನು ಕೊಡಲು
ಮನುಧರ್ಮಶಾಸ್ತ್ರವೆನಗೊರೆಯಬೇಕೇನು ?
ನೊಂದವರ ಕಂಬನಿಯನೊರಸಿ ಸಂತೈಸುವೊಡೆ
ಶಾಸ್ತ್ರ ಪ್ರಮಾಣವದಕಿರಲೆ ಬೇಕೇನು ?

ಪಂಚಮರ ಶಿಶುವೊಂದು ಕೆರೆಯಲ್ಲಿ ಮುಳುಗುತಿರೆ
ದಡದಲ್ಲಿ ಮಿಯುತ್ತ ನಿಂತಿರುವ ನಾನು
ಮುಟ್ಟಿದರೆ ಬ್ರಹ್ಮತ್ವ ಕೆಟ್ಟುಹೋಗುವುದೆಂದು
ಸುಮ್ಮನಿದ್ದರೆ ಶಾಸ್ತ್ರಸಮ್ಮತವದೇನು?

ಅಂತು ಮನು ತಾನು ಹೆಲಿರಲಾರನಯ್ಯಯ್ಯೊ!
ಹೇಳಿದ್ದರವನನೂ ಶಾಸ್ತ್ರದೊಳೆ ಸುತ್ತಿ,
ಸ್ವರ್ಗ ಹೋಗಲಿ, ಮತ್ತೆ ನರಕ ಬಂದರು ಬರಲಿ,
ಎದೆಯ ಧೈರ್ಯವ ಮಾಡಿ ಬಿಸುಡಾಚೆಗೆತ್ತಿ!

ಸ್ವರ್ಗ ಹೋಗುವುದಿಲ್ಲ, ನರಕ ಬರುವುದು ಇಲ್ಲ;
ಸ್ವರ್ಗ ನರಕಗಳೇನು ಶಾಸ್ತ್ರಸ್ಥವಲ್ಲ .
ಎದೆಯ ದನಿ ಧರ್ಮನಿಧಿ ! ಕರ್ತವ್ಯವದುವೆ ವಿಧಿ !
ನಂಬದನು; ಅದನುಳಿದು ಋಷಿಯು ಬೇರಿಲ್ಲ!

ಹಿಂದಿನಾ ಋಷಿಗಳೂ ಮಾನವರೆ ನಮ್ಮಂತೆ,
ಅವರ ಶಾಸ್ತ್ರವು ಅವರ ಕಾಲಕ್ಕೆ ಮಾತ್ರ;
ಕಾಲಕ್ಕೆ ತಕ್ಕಂತೆ, ದೇಶಕ್ಕೆ ತಕ್ಕಂತೆ,
ನಮ್ಮ ಹೃದಯವೆ ನಮೆಗೆ ಶ್ರೀಧರ್ಮಸೂತ್ರ !(ರಾಷ್ಟ್ರಕವಿ ಕುವೆಂಪು ಅವರ ‘ಕೋಗಿಲೆ ಮತ್ತು ಸೋವಿಯಟ್ ರಷ್ಯ’ ಕವನಸಂಕಲನದಿಂದ )

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending