Connect with us

ಭಾವ ಭೈರಾಗಿ

#Second Hand ಹುಡುಗ್ರು ಅಂದ್ರೆ ಅಷ್ಟೊಂದು ಸದರ ಆಗೋಯ್ತಾ..!

Published

on

ಲೋ ನಾಯಿ, ಹಂದಿ, ಕಪ್ಪೆರಾಯ, ಕತ್ತೆ, ಕೋತಿ, ಹೋತಿಕ್ಯಾತ, ಹಲ್ಲಿ, ಲೋಫರ್, ಪಾಪರ್, ಸಿಗೋ ನನ್ ಕೈಗೆ. ಆಹಾ… ನನ್ ಬಂಗಾರ,,,, ಅದೆಷ್ಟು ಮುದ್ದಾಗ್ ಬಯ್ತಿಯೆ ನನ್ ಗಿಣಿ. ನನ್ನ ಬಯ್ಯೋದ್ರಲ್ಲಿ ಅದೇನ್ ಖುಷಿನೆ ನಿಂಗೆ. ನಂಗೊತ್ತು ಕಣೆ ನಿಂಗ್ ಇದ್ಕಿಂತ ಜಾಸ್ತಿ ಬಯ್ಯೊಕ್ ಬರಲ್ಲ ಅಂತ. ಇನ್ನೊಮ್ಮೆ ಸಿಕ್ಕಾಗ ಬಯ್ಗುಳದ ಬಗ್ಗೆ ಒಂದ್ ಕ್ಲಾಸ್ ಮಾಡ್ತಿನಿ ಕೇಳು ಸರೀನಾ…

ಕಾಲ್ ರಿಸೀವ್ ಮಾಡ್ಲಿಲ್ಲ ಅನ್ನೊ ಒಂದೇ ಕಾರಣಕ್ಕೆ ನೀನು ಶಿರಸಿ ಮಾರಿಕಾಂಬೆ ಅವತಾರ ತಗೊತಿಯಲ್ಲ ಇದು ಸರಿನಾ.. ಅಲ್ವೆ ಬಂಗಾರ ನಿನ್ ಬರ್ತಡೆಗೆ ಏನ್ ಗಿಫ್ಟ್ ಕೊಡೋದು ಅಂತ ರಾತ್ರಿಯಿಡೀ ಯೋಚಿಸಿ ಬೆಳೆಗ್ಗೆ ಎದ್ದು ಅನಾಥಾಶ್ರಮಕ್ಕೆ ಹೋಗಿ ನಿನ್ ಹೆಸರಲ್ಲಿ ಒಂದು ಮಗೂನ ದತ್ತು ತಗೊಂಡೆ. ಇಡೀ ಆಶ್ರಮವನ್ನೆ ತಗೊಳೊ ಮನಸು, but ಏನ್ ಮಾಡ್ಲಿ ನಿನ್ ಭಾವಿ ಗಂಡ ದುಡಿಯೋದು ಜೇಬಿನ ತುಂಬಾನೆ ಹೊರತು ಬ್ಯಾಗಿನ ತುಂಬಾ ಅಲ್ವಲ್ಲ. ಚಿಂತೆ ಮಾಡ್ಬೇಡ ಇನ್ ಹತ್ತು ವರ್ಷ ಕಾಯಿ ಅಮ್ಮನ ಹೆಸರಲ್ಲಿ ಒಂದು ಆಶ್ರಮ ಕಟ್ತೇನೆ ಅದರ ಎಲ್ಲ ಮಕ್ಕಳಿಗೂ ನೀನೆ ಅಮ್ಮ. ಅದ್ಬಿಡು ಈ ದತ್ತು ತಗೊಳೋಕ್ ಹೋದಾಗ ಅಲ್ಲಿ ನಿನ್ ಥರಾನೆ ನಗೊ ಒಬ್ಬ ಮುದ್ದು ಹುಡುಗಿ ಸಿಕ್ಳು ಅವಳ ಇಡೀ ವರ್ಷದ ಸ್ಕೂಲ್ ಫೀಸು, ಊಟದ ಖರ್ಚು, ಬಟ್ಟೆಬರೆ ಎಲ್ಲದಕ್ಕೂ ಸೇರಿ ಹಣ ಕೊಟ್ಟು , ಅವಳಿಗೆ ನಾನು ನಿನ್ ಅಪ್ಪ ಕಣೊ ಅಮ್ಮನ ಬರ್ತಡೇಗೆ ವಿಶ್ ಮಾಡು ಅಂತ ವಿಶ್ ಮಾಡಿಸಿ ಅದನ್ನ ವಿಶ್ ಮಾಡಿಸಿ ನಿನಗೆ ತೋರ್ಸೋಕೆ ವಿಡಿಯೋ ಮಾಡಿಕೊಳ್ತಿದ್ದೆ. ಆಗ ನಿನ್ನ ಮೂರು ಮಿಸ್ಡ್ ಕಾಲ್ಸ್ ಬಂದಿದೆ. ತಿರುಗಿ ಕಾಲ್ ಮಾಡಿದ್ರೆ ಅಮ್ಮಾವ್ರಿಗೆ ಕೋಪ. ಈಗ ಹೇಳು ನಾನ್ ಮಾಡಿದ್ದು ತಪ್ಪಾ..?

ನಂಗೊತ್ತುಕಣೆ ನಿನಗೆ ನನ್ನ ಬಿಟ್ಟಿರೋಕಾಗಲ್ಲ ಅದಕ್ಕೆ ನಾನು ಅರ್ಧಗಂಟೆ ಮಾತಡದೆ ಇದ್ರು ಒದ್ದಾಡ್ತಿಯ, ಮೂರು ಮಿಸ್ಡ್ ಕಾಲ್ ಇದೆ, ನೋಡಿದ್ರೆ ಆರುಬಾರಿ ಕಾಲ್ ಮಾಡಿದಿನಿ ಅಂತ ಸುಳ್ಳು ಹೇಳ್ತಿಯ. ಅದ್ಯಾಕೆ ನಿನಗೆ ನಾನ್ ಹಾಕಿಸೋ ಯಾವ ಕಾಲರ್ ಟ್ಯೂನ್ ಕೂಡ ಇಷ್ಟ ಆಗಲ್ಲ, ಯಾವ್ದನ್ನೆ ಹಾಕಿದ್ರು ಬಯ್ತಿಯ. ಹೀಗೆ ಆಡ್ತಿರು ಅದೇ ಹಳೇ ಟ್ರೀಣ್ ಟ್ರಿಣ್ ಕೇಳೋತರ ಮಾಡ್ತಿನಿ. ಏನೊ ನನ್ ಹುಡುಗಿಗೆ ಮ್ಯೂಸಿಕ್ ಇಷ್ಟ ಅಂತ ಹಾಗ್ ಹಾಕ್ಸಿದೆ ತಪ್ಪಾ,,?

ಏನಾದ್ರು ಒಂದ್ ಕ್ಯಾತೆ ತೆಗೆದು ನನ್ನ ಬಯ್ಲಿಲ್ಲ ಅಂದ್ರೆ ನಿನಗೆ ಊಟ ಸೇರಲ್ಲ ಅಂತ ಗೊತ್ತು, ಹೀಗೆ ಬಯ್ತಿರು ಪ್ರಾಣಿದಯಾ ಸಂಘಕ್ಕೆ ಕಂಪ್ಲೆಂಟ್ ಕೊಡ್ತಿನಿ. ವೆಜಿಟೇರಿಯನ್ ಆಗಿನೇ ಈ ಮಟ್ಟಕ್ಕೆ ನನ್ ತಲೆ ತಿನ್ನೊ ನೀನು ನಾನ್ ವೆಜಿಟೇರಿಯನ್ ಆಗಿದ್ರೆ ನನ್ನ ಹಂಗಂಗೆ ನುಂಗಿ ಬಿಡ್ತಿದ್ಯೇನೊ. ನೀನ್ ಯಾವ ಸೀಮೆ ವೆಜಿಟೇರಿಯನ್ ನಾನೂ ವೆಜಿಟೇರಿಯನ್ ಆಗಿರೋದಕ್ಕೆ ನಿನ್ ತಲೆ ತಿನ್ನದೆ ಸುಮ್ನಿರ್ತೀನಿ ನೋಡಿ ಕಲಿ ಹೀಗಿರ್ಬೇಕು ಸಸ್ಯಾಹಾರಿಗಳು. ನನ್ ಬೊಂಬೆ ಎಷ್ಟೇ ಕೋಪ ಮಾಡ್ಕೊಂಡ್ರು ನಾನ್ sorry ಕೇಳೋಕೆ ಮಧ್ಯರಾತ್ರಿನೆ ಕಾಲ್ ಮಾಡ್ತಿನಿ ಯಾಕೆ ಗೊತ್ತಾ ಅವಾಗಾದ್ರೆ ನೀನ್ ಮನೆಲಿರ್ತಿಯ ಬಯ್ಯಲ್ಲ ಅನ್ನೋ ಧೈರ್ಯ. ನೀನ್ ಮಾತಾಡದೆ ಇದ್ರೂ ನನ್ ಮಾತು ಕೇಳೋಕೆ ಕಾಲ್ ರಿಸೀವ್ ಮಾಡೇ ಮಾಡ್ತಿಯ ಅನ್ನೊ ನಂಬಿಕೆ ಕಣೊ.

ಮಾತಿಗೊಂದ್ಸಲ ನನ್ನ ಸೆಕೆಂಡ್ ಹ್ಯಾಂಡ್ ಹುಡುಗ ಅಂತ ಚುಡಾಯ್ಸೋದೆ ಆಯ್ತು. ನಿಂಗೊತ್ತ ಲವ್ ಫೇಲ್ವರ್ ಹುಡುಗ್ರು ಯಾವತ್ತು ಪ್ರೀತ್ಸಿದ್ ಹುಡುಗಿ ಮನಸಿಗೆ ನೋವು ಮಾಡಲ್ಲ ಕಣೊ. ಅಷ್ಟಕ್ಕೂ ಅವಳೆ ನನ್ ಹಿಂದೆ ಬಿದ್ದಿದ್ದು ನಾನಲ್ಲ. ಕೊನೆಗೆ ಎರಡು ವರ್ಷ ರಿಜೆಕ್ಟ್ ಮಾಡ್ತಾನೆ ಬಂದೆ. ಅದೊಂದಿನ ಅವಳ ಪ್ರೀತಿಗೆ ಮನಸು ಕರಗದೆ ಇರೋಕಾಗಲಿಲ್ಲ. ಒಪ್ಕೊಂಡೆ ಆದ್ರೆ ಅವತ್ತೆ ವಿಷಯ ಅವರಪ್ಪನಿಗೆ ಗೊತ್ತಾಗಿ ಅವಳನ್ನ ಮೂಡಬುದ್ರೆಯ ಆಳ್ವಾಸ್ ಗೆ ಸೇರಿಸಿದ್ರು. ಇನ್ಮೇಲೆ ಅವಳನ್ನ ಮೀಟ್ ಮಾಡೋ ಪ್ರಯತ್ನ ಮಾಡಿದ್ರೆ ಅವಳಮ್ಮನನ್ನು ಕೊಂದು ಆತ್ಮಹತ್ಯೆ ಮಾಡಿಕೊಳ್ತೇನೆ ಅಂದ್ರು. ನನ್ ಪ್ರೀತಿಗಾಗಿ ನಾನ್ ಪ್ರೀತಿಸಿದ ಹುಡುಗಿ ಅಪ್ಪ ಅಮ್ಮ ಸಾಯ್ಬೇಕಾ… ಬೇಡ ಅನಿಸ್ತು ಕಣೊ ಅದಕ್ಕೆ ಅಲ್ಲಿಂದ ದೂರ ಬಂದೆ. ಅದಾದ ಒಂದೇ ವರ್ಷದಲ್ಲಿ‌ ಗೊತ್ತಾಯ್ತು ಆಕ್ಸಿಡೆಂಟ್ ಒಂದರಲ್ಲಿ ಆ ದೇವರು ಅವಳನ್ನ ಕರ್ಕೊಂಡ್ ಬಿಟ್ಟ ಅಂತ. ಮೂರು ವರ್ಷದ ನಂತರ ನೀನ್ ಸಿಕ್ಕೆ. ಫಸ್ಟ್ ಟೈಮ್ ನನಗೆ ಹೊಟ್ಟೆಲಿ ಚಿಟ್ಟೆ ಬಿಟ್ಟ ಹಾಗಾಯ್ತು. ಅಮ್ಮನ ವಾರಸುದಾರಿಣಿ ನೀನೆ ಅನಿಸ್ತು. ನೀನ್ ಸಿಕ್ಕ ಮೇಲೆ ನನಗೆ ಜಗತ್ತು ಪ್ರತಿದಿನ ಹೊಸದಾಗಿ ಕಾಣ್ಸತ್ತೆ ಕಣೊ. ನಾನು ನಿನಗಿಂತ ನಿನ್ ಅಪ್ಪ ಅಮ್ಮನ್ನ ಜಾಸ್ತಿ ಪ್ರೀತಿ ಮಾಡ್ತಿನಿ. ಅವರಿಗೆ ನೋವಾದ್ರೆ ನಿನಗೂ ನೋವಾಗುತ್ತೆ ಅನ್ನೊ ಸತ್ಯ ಗೊತ್ತು. ಈಗ ಹೇಳು ಈ ಸೆಕೆಂಡ್ ಹ್ಯಾಂಡ್ ಹುಡುಗ ಬೆಸ್ಟ್ ಅಲ್ವಾ..

ನನ್ ಮೇಲೆ ಕೋಪ ಬಂದ್ರೆ ನಾನ್ ಕೊಡಿಸಿರೋ ಟೆಡ್ಡಿಬೇರ್ ಗೆ ನಾಲಕ್ ಏಟು ಹೆಚ್ಚಾಗೆ ಕೊಡ್ತಿಯ ಅಂತ ಗೊತ್ತು. ಹೊಡಿ ನನಗೇನು ಬೇಜಾರಿಲ್ಲ. ಅವನ ಮೇಲೆ ನನಗೂ ಹೊಟ್ಟೆಕಿಚ್ಚಿದೆ. ನನ್ ಹೊಟ್ಟೆ ಉರ್ಸೋಕೆ ಅಂತ ಅದೆಷ್ಟುದಿನ ನೀನ್ ಅವನನ್ನ ಹಿಡಿದು ಮುದ್ದಾಡಿಲ್ಲ, ಈಗ ಹೊಡಿ ಅವನಿಗೆ ಬುದ್ದಿ ಬರಲಿ.

ನಂಗೊತ್ತು ನೀನು ಇಷ್ಟರಲ್ಲಿ ಕೋಪ ತಣ್ಣಗಾಗಿ ನೂರಾ ಒಂದು ಬಾರಿ ನಿನ್ ಮೊಬೈಲ್ ನೋಡಿರ್ತಿಯ ಅಂತ. ಕಾಲ್ ಮಾಡೋಕೆ ಮೇಡಮ್ಮವರಿಗೆ ಸ್ವಾಭಿಮಾನ ಅಡ್ಡ ಬರುತ್ತೆ. ರಾತ್ರಿ ನಾನ್ ಕಾಲ್ ಮಾಡೇ ಮಾಡ್ತೇನೆ ಅಂತ ನಿಂಗೊತ್ತು. ಅದಕ್ಕೆ ಬೇಜಾನ್ ಬಿಲ್ಡಪ್ ಕೊಡ್ತಿದಿಯ. ಇರಲಿ ಬಿಡು ನಾನೆ ಸೋಲ್ತೇನೆ. ನಿನ್ ಮುಂದೆ ಸೋಲೋದ್ರಲ್ಲಿ ನನಗೊಂಥರಾ ಧನ್ಯತಾ ಭಾವ ಕಣೆ. ಅಂದಹಾಗೆ ಈ ಗ್ಯಾಪಲ್ಲಿ ಹೊಸದಾಗಿ ಎರಡು ಪದ್ಯ ಬರ್ದಿದಿನಿ. ನನ್ ಕವಿತೆ ಅಂದ್ರೆ ನಿನಗೆಷ್ಟು ಇಷ್ಟ ಅಂತ ಗೊತ್ತು ಸರಿರಾತ್ರಿ ಕಾಲ್ ಮಾಡಿದಾಗ ಒಂದನ್ನ ಫೋನಲ್ಲಿ ಓದಿ ಹೇಳ್ತೇನೆ. ಮತ್ತೊಂದನ್ನ ಫೋನಿಡುವ ಕೊನೆಯಲ್ಲಿ ಫೋನಿಗೆ ಕೊಡ್ತೇನೆ ಇಸ್ಕೊ.

ಒಂದ್ ವಿಷಯ ತಿಳ್ಕೊ ನೀನ್ ಹಿಂಗೆಲ್ಲ ಮುದ್ ಮದ್ದಾಗಿ ಪೆದ್ ಪದ್ದಾಗಿ ಆಡೋದಕ್ಕೆ ನೀನಂದ್ರೆ ನನಗೆ ಸಾಯೊವಷ್ಟ್ ಇಷ್ಟ ಕಣೆ.

Bye ಪುಟ್ಟಕ್ಕ

-ಇಂತಿ ಎಂದೆಂದಿಗೂ ನಿನ್ನವನು

ಅಂಕಣ

ಕವಿತೆ | ಅವಳೀಗ ಕಾಯುವುದಿಲ್ಲ

Published

on

  • ಶಮೀಮ ಕುತ್ತಾರ್, ಮಂಗಳೂರು

ಬೆಳಕು ಬರಲೆಂದು
ಕಿಟಕಿಯನ್ನೊಂಚೂರು
ಸರಿಸಹೊರಟಿದ್ದಳು…
ಒಳಗಿನಿಂದಲೇ ಸರಪಳಿಗಳು
ಕೈಗಳ ಬಿಗಿದಾಗ
ಬೆಳಕಿಗಿಂತ ಬಿಡುಗಡೆಯೇ
ಸಾಕೆನಿಸಿತ್ತು.

ಬಯಕೆಗಳು ಶಾಪವಾದಾಗ
ಇರವನ್ನೂ ಮರೆಯಬೇಕವಳು
ಓದಿ ಮುಗಿಸಲಾಗದ
ಇತಿಹಾಸದ ಮೌನಗಳಲ್ಲಿ
ಅಹಲ್ಯೆ ಕಲ್ಲಾದಂತೆ.

ಬಲದ ಬಲೆಯಾಗಿ
ಬಗಲಲ್ಲಿ‌ ಬೀಳುವಾಗ
ಮೋಹ ಮರೆತ ದ್ರೌಪದಿ
ಐವರ ಮಡದಿಯಾದಂತೆ.

ನೆನಪುಗಳ ವಿಲೇವಾರಿಯಲ್ಲಿ
ನೋವಿನ ಲೆಕ್ಕ ಕೇಳುವ
ಬದುಕ ವಹಿವಾಟುಗಳಲ್ಲಿ
ಅವಳಿಗಷ್ಟೇ ದಕ್ಕುವ ಉತ್ತರಗಳು.

ಹೆಣ್ಣು ಕ್ರಾಂತಿಯಾಗಲು
ಕಾರಣಗಳನ್ನು ಕಾಲವೇ ಸೃಷ್ಟಿಸಿತು..
ಯಾವ ದಿಕ್ಕಿನಿಂದ ಬೀಸಿದರೂ
ವಿಳಾಸದ ಹಂಗಿಲ್ಲದ ಗಾಳಿಯಂತೆ.

ಮುಹಬ್ಬತಿನಲ್ಲಿ ಮುಳುಗಿಸುವ
ಅವಳೊಲುಮೆಯ ಟಪಾಲನ್ನು‌
ಜತನದಿಂದ ಕಾಯಬೇಕಿತ್ತು
ಲೋಕ,
ಅರುಂಧತಿ ನಕ್ಷತ್ರದಂತೆ..
ಆದರೆ ಲೋಕದ ಕಣ್ಣಿಗೆ
ಅವಳು ಹೆಣ್ಣು…

ಹಾಗಾಗಿ ಈಗೀಗ ಅವಳು
ಇದ್ಯಾವುದನ್ನೂ ಕಾಯುವುದಿಲ್ಲ..

ಎದೆಗೆ ಬಿದ್ದ ಸಾವಿತ್ರಿಯ ಅಕ್ಷರಗಳು
ಕಾಲಾಂತದಲ್ಲಿ‌ ಅವಳ
ಯೋಚನೆಗೆ ಉಸಿರಾದರೆ,
ಕಾಲ ಕಳೆದು ಕೂಡಿಸಿದ
ಅವಳ ಮಾತು-ಮೌನಗಳು‌
ಕಾಲಾತೀತವಾಗಿ ಬೆಳೆದು
ಕಿಟಕಿಯಲ್ಲಿ ಹುಡುಕಿದ ಬೆಳಕಿಗೆ
ಹೆಬ್ಬಾಗಿಲು ತೆರೆದುಕೊಂಡಿತು…(ಕವಯಿತ್ರಿ- ಶಮೀಮ ಕುತ್ತಾರ್
ಮಂಗಳೂರು)

ಕವಯಿತ್ರಿ- ಶಮೀಮ ಕುತ್ತಾರ್
ಮಂಗಳೂರು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಕವಿತೆ | ಇಷ್ಟಂತೂ ಹೇಳಬಲ್ಲೆ..!

Published

on

  • ರಂಗಮ್ಮ ಹೊದೇಕಲ್, ತುಮಕೂರು

ನಾವು
ಗುಡಿಸಲಿನಲ್ಲಿ ಹುಟ್ಟಿ
ಅವ್ವನೆದೆಯ ಹಾಲು ಕುಡಿದು
ಗೋಣಿತಾಟಿನ ಮೇಲೆ ಮಲಗಿ
ನಕ್ಷತ್ರ ಎಣಿಸಿದವರು!

ಚೀಕಲು ರಾಗಿಯ ಅಂಬಲಿ ಕುಡಿದು
ತಂಗಳು ಹಿಟ್ಟಿಗೆ ಉಪ್ಪು ಸವರಿ
ಹಸಿವ ನೀಗಿಸಿಕೊಂಡವರು
ದಾಹಕ್ಕೆ ಕಣ್ಣೀರನ್ನೇ ಕುಡಿದವರು!

ದಾಸಯ್ಯನಂತಹ ಅಪ್ಪ
ಭೂಮ್ತಾಯಿಯಂತಹ ಅವ್ವ
ಎದೆಗಿಳಿಸಿದ್ದು
ಅಕ್ಷರ ಮತ್ತು ಅಂತಃಕರಣ!

ಯಾರು ಯಾರೋ ಕೊಟ್ಟ
ಹರಿದ ಚೀಲ,ಮುರುಕು ಸ್ಲೇಟು
ತುಂಡು ಬಳಪ,ಬಳಸಿ ಎಸೆದ ಬಟ್ಟೆ
ನಮ್ಮ ಪ್ರಿಯವಾದ ಆಸ್ತಿಗಳು!

ಬುಡ್ಡಿದೀಪದ ಬೆಳಕಿನಲ್ಲಿ
ಅಕ್ಷರಗಳ ಜೊತೆ ಆಡಿದ ನಾವು
ಯಾರದೋ ಸಂಭ್ರಮದಲ್ಲಿ
ಉಳಿದ ಅನ್ನಕ್ಕೆ ಕಾದಿದ್ದು
ಇನ್ನೂ ಹಸಿಯಾಗಿದೆ!

ಯಾರದೋ ಜಮೀನಿಗೆ
ಬೆವರು ಬಸಿದ
ಅಪ್ಪ ಅವ್ವ
ಅರ್ಧ ಉಂಡು ಕಣ್ಣೀರಾದದ್ದೂ
ನೆನಪಿದೆ!

ಅಂದೂ ನಾವು
ಶಾಪವಾಗಲಿಲ್ಲ
ಕೇಡನ್ನೂ ಹಾಡಲಿಲ್ಲ!

ಉಪ್ಪಿಟ್ಟಿನಿಂದ ಅನ್ನಕ್ಕೆ ಬದಲಾದ
ಈ ಯುಗದಲ್ಲಿಯೂ
ನೀವು ನಿಮಗೆ ಪರಂಪರೆಯಿಂದ ಬಂದಿರುವ ಆಸ್ತಿ,ಅಂತಸ್ತು
ಸೇವಕರು…ಇತ್ಯಾದಿತ್ಯಾದಿಗಳನ್ನು
ಪ್ರದರ್ಶಿಸುತ್ತಲೇ ಇದ್ದೀರಿ!

ಸಹ್ಯವಾಗದ ಅಸ್ತ್ರಗಳನ್ನೇ
ನೀವು ಮಸೆಯುವಾಗ
ನಿಮ್ಮ ಅಜ್ಞಾನಕ್ಕೂ ನಮ್ಮ ಅನುಕಂಪವಿದೆ!

ನಾವು ಈ ನೆಲದ ಮಕ್ಕಳು
ಬೆಂಕಿಯೂ‌.ಬೆಳಕೂ ಆಗಬಲ್ಲ ಕಿಡಿಗಳು
ಭದ್ರ ಬೇರೂರಿ ಆಕಾಶಕ್ಕೆ ಚಿಮ್ಮಿ
ನಿಮ್ಮ ಕಣ್ಣಲ್ಲೂ ಮತಾಪು ಹೊತ್ತಿಸಬಲ್ಲವರು!! (ರಂಗಮ್ಮ ಹೊದೇಕಲ್, ತುಮಕೂರು)

ಕವಯಿತ್ರಿ : ರಂಗಮ್ಮ ಹೊದೇಕಲ್, ತುಮಕೂರು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಕವಿತೆ | ಚಳಿಗಾಲದ ಎರಡು ಜೀವರಸಗಳು

Published

on

  • ಜಿ. ದೇವೂ ಮಾಕೊಂಡ

ಮ್ಮಿಬ್ಬರ ಸಂಗಮಕ್ಕೆ ಈ ಚಳಿಗಾಲ
ಎಷ್ಟೊಂದು ನಿಶಬ್ದವಾಗಿ ಕರೆಯುತ್ತಿದೆ
ಒಂದು ಕಡೆ ಕಾಫಿಯ ಸ್ವಾಗತ
ಮತ್ತೊಂದು ಕಡೆ ಮುತ್ತಿನ ಸೆಳೆತ.

ಯಾವುದು ಆರಿಸಿಕೊಳ್ಳಲಿ
ಈ ನಿಶಬ್ಧ ಚಳಿಯಲಿ?
ಕಾಫಿಯ ಇಚ್ಚೆಯನ್ನೊ?
ಮುತ್ತಿನ ಬಿಸಿಯನ್ನೊ?
ಇಷ್ಟೊಂದು ಚಡಪಡಿಕೆಯಿರಬಾರದು
ಇಚ್ಚೆಯ ಸಂಚಯನಗಳಲ್ಲಿ!

ನಮ್ಮ ಆರಂಭದ ಭೇಟಿಗೆ,
ಒಂದರ ನೆನಪಿಗೆ ಇನ್ನೊಂದು
ಸುಂಕವಾಗಲಿ
‘ಬೈ ವನ್ ಗೆಟ್ ವನ್ ಫ್ರಿ’
ಚಳಿಗಾಲದ ಜಾಹಿರಾತು ಆಫರ್.

ಕೊನೆಗೊಂದು ದಿನ ಕುರುಹುಗಳಂತೆ ನೆನಪಿಸಿಕೊಳ್ಳೊಣ
ಇದು ಆರಂಭವೊ ಅಥವ
ಅಂತ್ಯವಾಗುವುದೊ?
ಯಾರಿಗ್ಗೊತ್ತು?

ಈ ಕಾಫಿ
ಈ ಮುತ್ತು
ಯುದ್ದೋನ್ಮಾದದ ಸಂಕೇತಗಳಾ?
ಅಥವ
ಕೊನೆಯ ಯುದ್ದದ
ಕರಾರುಗಳಾ?

ನೆನಪಿಗೆ ಒಂದೊಂದು ಸೆಲ್ಫಿ ಇರಲಿ
ಜೊತೆಗೊಂದಿಷ್ಟು ಭಿನ್ನ ನಗುವಿರಲಿ.. (ಕವಿ: ಜಿ.ದೇವೂ ಮಾಕೊಂಡ)

ಕವಿ: ಜಿ.ದೇವೂ ಮಾಕೊಂಡ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ9 hours ago

ದಾವಣಗೆರೆ | ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ

ಸುದ್ದಿದಿನ,ದಾವಣಗೆರೆ:ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಏಪ್ರಿಲ್ 24 ಮತ್ತು 25 ರಂದು ಆಯೋಜಿಸಲಾಗಿದೆ. ಆಸಕ್ತ ರೈತರು ಆಧಾರ್...

ದಿನದ ಸುದ್ದಿ19 hours ago

ಆಸ್ತಿ ಕಲಹವೇ ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆಗೆ ಕಾರಣವಾಯ್ತಾ..?

ಸುದ್ದಿದಿನಡೆಸ್ಕ್:ಭಾನುವಾರ ಹತ್ಯೆಯಾದ ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆ ಹಿಂದೆ ಆಸ್ತಿ ಕಲಹವಿರಬಹುದು ಎಂಬ ಆರೋಪಗಳು ಕೇಳಿ ಬರುತ್ತಿವೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕೋಟ್ಯಂತರ ಮೌಲ್ಯದ...

ಅಂಕಣ1 day ago

ಕವಿತೆ | ಅವಳೀಗ ಕಾಯುವುದಿಲ್ಲ

ಶಮೀಮ ಕುತ್ತಾರ್, ಮಂಗಳೂರು ಬೆಳಕು ಬರಲೆಂದು ಕಿಟಕಿಯನ್ನೊಂಚೂರು ಸರಿಸಹೊರಟಿದ್ದಳು… ಒಳಗಿನಿಂದಲೇ ಸರಪಳಿಗಳು ಕೈಗಳ ಬಿಗಿದಾಗ ಬೆಳಕಿಗಿಂತ ಬಿಡುಗಡೆಯೇ ಸಾಕೆನಿಸಿತ್ತು. ಬಯಕೆಗಳು ಶಾಪವಾದಾಗ ಇರವನ್ನೂ ಮರೆಯಬೇಕವಳು ಓದಿ ಮುಗಿಸಲಾಗದ...

ದಿನದ ಸುದ್ದಿ2 days ago

ಬಳ್ಳಾರಿ ಪೊಲೀಸ್ ಅಧಿಕಾರಿಗಳ ಪಡಿತರ ಅಕ್ಕಿ ಕಳ್ಳಾಟ : ಠಾಣೆ ಮುಂದೆ ಇದ್ದ ಲಾರಿ ಮಾಯ ; ಈ ಸ್ಟೋರಿ ಓದಿ..!

ಗಿರೀಶ್ ಕುಮಾರ್ ಗೌಡ,ಬಳ್ಳಾರಿ ಸುದ್ದಿದಿನಡೆಸ್ಕ್:ಗಣಿನಾಡು ಬಳ್ಳಾರಿ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಅಕ್ರಮ ಪಡಿತರ ಅಕ್ಕಿ ರಾತ್ರಿ ವೇಳೆ ಜಿಲ್ಲೆಯಿಂದ ಬೇರೆ ಬೇರೆ ರಾಜ್ಯಗಳಿಗೆ ಲಾರಿಗಳಲ್ಲಿ ಕಳ್ಳತನದ ಮೂಲಕ...

ದಿನದ ಸುದ್ದಿ3 days ago

ಭಾರತದ ಮೊದಲ ಉಪಗ್ರಹ ಆರ್ಯಭಟ ಉಡಾವಣೆಯಾಗಿ 50 ವರ್ಷ; ನೆಹರು ತಾರಾಲಯದಲ್ಲಿ ವಿಶೇಷ ಕಾರ್ಯಕ್ರಮ

ಸುದ್ದಿದಿನಡೆಸ್ಕ್:ಭಾರತದ ಮೊದಲ ಉಪಗ್ರಹ ಆರ್ಯಭಟ ಉಡಾವಣೆ ಮಾಡಿ ಇಂದಿಗೆ 50 ವರ್ಷಗಳು ಸಂದಿವೆ. 1975ರಲ್ಲಿ ಈ ದಿನದಂದು ಉಡಾವಣೆ ಮಾಡಲಾದ ಈ ಉಪಗ್ರಹಕ್ಕೆ ಪ್ರಾಚೀನ ಭಾರತೀಯ ಗಣಿತಜ್ಞ...

ದಿನದ ಸುದ್ದಿ3 days ago

ಜೆಇಇ ಮೇನ್ಸ್ ಫಲಿತಾಂಶ ಪ್ರಕಟ : 24 ವಿದ್ಯಾರ್ಥಿಗಳಿಗೆ ನೂರಕ್ಕೆ ನೂರು ಅಂಕ

ಸುದ್ದಿದಿನಡೆಸ್ಕ್:ರಾಷ್ಟ್ರೀಯ ಪರೀಕ್ಷಾ ಸಂಸ್ಥೆ – ಎನ್‌ಟಿಎ ಇಂದು ಪ್ರಸಕ್ತ ವರ್ಷದ ಜಂಟಿ ಪ್ರವೇಶ ಪರೀಕ್ಷೆ – ಜೆಇಇ ಮುಖ್ಯ ಫಲಿತಾಂಶ -2 ಅನ್ನು ಪ್ರಕಟಿಸಿದೆ. ಈ ಭಾರಿ...

ದಿನದ ಸುದ್ದಿ3 days ago

ಇ-ಸ್ವತ್ತು ಸಮಸ್ಯೆ ಪರಿಹಾರಕ್ಕಾಗಿ‌‌ ಕಾರ್ಯನಿರ್ವಹಣಾ ಸಮಿತಿ ರಚನೆ

ಸುದ್ದಿದಿನಡೆಸ್ಕ್:ಗ್ರಾಮೀಣಾಭಿವೃದ್ಧಿ ಇಲಾಖೆಯ ನಿರ್ದೇಶಕರ ಅಧ್ಯಕ್ಷತೆಯಲ್ಲಿ, 12 ಜನ ಅಧಿಕಾರಿಗಳನ್ನು ಒಳಗೊಂಡ, ಇ-ಸ್ವತ್ತು ಕಾರ್ಯನಿರ್ವಹಣಾ ಸಮಿತಿ ರಚಿಸಲಾಗಿದೆ ಎಂದು, ಪಂಚಾಯತ್‌ರಾಜ್ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ. ಇದನ್ನೂ...

ದಿನದ ಸುದ್ದಿ3 days ago

‘ವಿದ್ಯಾಸಿರಿ’ ಯೋಜನೆಯಡಿ ವಿದ್ಯಾರ್ಥಿ ವೇತನ ಪರಿಷ್ಕರಣೆಗೆ ಒತ್ತು : ಸಿಎಂ ಸಿದ್ದರಾಮಯ್ಯ

ಸುದ್ದಿದಿನಡೆಸ್ಕ್:ಬೆಂಗಳೂರಿನ ಕೆಂಗೇರಿಯಲ್ಲಿ ನೂತನವಾಗಿ ನಿರ್ಮಿಸಿರುವ ಕಲಿದೇವ ಸಮುದಾಯ ಭವನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಲೋಕಾರ್ಪಣೆಗೊಳಿಸಿದರು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಲ್ಲ ಸಮುದಾಯಗಳ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು...

ದಿನದ ಸುದ್ದಿ4 days ago

ಚನ್ನಗಿರಿ | ಮುಸ್ಲಿಂ ಮಹಿಳೆ ಮೇಲೆ ಹಲ್ಲೆ ; ಕಾನೂನು ಮೂಲಕ ಪರಿಹಾರ ಕಂಡುಕೊಳ್ಳಿ : ಡಿವೈಎಸ್ಪಿ ಸ್ಯಾಮ್ ವರ್ಗೀಸ್ ಎಚ್ಚರಿಕೆ

ಸುದ್ದಿದಿನ,ಚನ್ನಗಿರಿ:ಇತ್ತೀಚಿಗೆ ತಾವರೆಕೆರೆಯಲ್ಲಿ ನಡೆದ ಘಟನೆ ಕಾನೂನು ಬಾಹಿರವಾಗಿದ್ದು, ಮುಖಂಡರುಗಳು ತಮ್ಮ ಗ್ರಾಮ ಹಾಗೂ ಪಟ್ಟಣಗಳ ವ್ಯಾಪ್ತಿಯಲ್ಲಿ ಯಾವುದೇ ಘಟನೆ ನಡೆದಿದ್ದರೆ ಕಾನೂನಿನ ಮೂಲಕ ಪರಿಹಾರವನ್ನು ಕಂಡುಕೊಳ್ಳಬೇಕೇ ವಿನಃ...

ದಿನದ ಸುದ್ದಿ4 days ago

ದಾವಣಗೆರೆ | ಮೌಲಾನಾ ಅಜಾದ್ ಮಾದರಿ ಶಾಲೆಗೆ 6ನೇ ತರಗತಿಗೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ದಾವಣಗೆರೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಶಾಲೆಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಈ ಶಾಲೆಗಳಲ್ಲಿ ಅಲ್ಪಸಂಖ್ಯಾತ ವರ್ಗದ...

Trending