ದಿನದ ಸುದ್ದಿ
ಚರಮೂರ್ತಿ ಕಾರಣೀಕ ಶ್ರೀ ಗುರು ಕಾಶೀಮಹಾಲಿಂಗ ಸ್ವಾಮೀಜಿಯವರ ಕರ್ತೃಗದ್ದುಗೆಗೆ ತರಳಬಾಳು ಶ್ರೀ ಜಗದ್ಗುರುವರ್ಯರ ಭಕ್ತಿ ಸಮರ್ಪಣೆ
ತರಳಬಾಳು ಶ್ರೀಗುರು ಪರಂಪರೆಯ ತಪಸ್ವೀಶಕ್ತಿ ನಿರಂಜನಗುರುವರ್ಯರಾಗಿ ಭಕ್ತರ ಬಯಕೆಯನ್ನು ತಮ್ಮ ನುಡಿಕಾರಣೀಕದಿಂದಲೆ ಸಿದ್ಧಿಸುವ ಅಧಮ್ಯ ಶಕ್ತಿಯಚೇತನಮಯರಾದ ಶ್ರಿ ಕಾಶೀಮಹಾಲಿಂಗ ಸ್ವಾಮಿಜಿಯವರಿಗೆ ಪ್ರತಿ ವರ್ಷದ ಪರಂಪರೆಯಂತೆ ನಿನ್ನೆ ಪೂಜನೀಯ ಶ್ರೀ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಸಾಸ್ವಾಮೀಜಿಯವರ ಸಾನ್ನಿಧ್ಯದಿ ಶ್ರೀ ಗುರುವಿಗೆ ವಿಶೇಷ ಶ್ರದ್ಧಾ ಭಕ್ತಿಯಿಂದ ನಮನಗಳನ್ನು ಅರ್ಪಿಸಿ ಸಾವಿರರು ಶಿಷ್ಯ ಬಳಗಕ್ಕೆ ಅನ್ನಸಂತರ್ಪಣೆ ವಿನಿಯೋಗಿಸುವ ವಿಶೇಷ ಕಾರ್ಯಕ್ರಮ ಜರುಗಿತು.
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ವಿರಕ್ತ ಗುರುವರ್ಯರಾಗಿ ಯಾವ ಸೌಲಭ್ಯಗಳಿಲ್ಲದ ಕಷ್ಟಕಾಲದಲ್ಲಿ ಸಮಾಜವನ್ನು ಸಂಘಟಿಸಿದ ಅವರ ಕರ್ತವ್ಯ ಶಕ್ತಿಗೆ ಬೆರಗಾಗಲೇಬೇಕು.
‘ಸಿರಿಗೆರೆಗೆ ಬರ ಎಂದವರ ಬಾಯಲ್ಲಿ ಕೆರ’
ಎಂಬ ದೈವವಾಣಿಯನ್ನು ಮೊಟ್ಟ ಮೊದಲು ಅರ್ಥೈಸಿ ಈ ಭಾಗದ ರೈತಾಪಿ ಜನರ ಮನದಲ್ಲಿ ಶಕ್ತಿ ಸಂಪನ್ನವಾದ ಗುರುವೆಂದೇ ಸ್ಥಾನಪಡೆದಿದ್ದಾರೆ.
ಕೃಷಿ ಚಟುವಟಿಕೆಗಳಿಗೆ ಜೀವನಾಡಿಯಾದ ಮಳೆಯು ಕೈ ಕೊಟ್ಟ ಸಂದರ್ಭದಲ್ಲಿ ಶ್ರೀ ಕಾಶೀಮಹಾಲಿಂಗ ಸ್ವಾಮೀಜಿಯವರಿಗೆ ಭಕ್ತಿ ಶ್ರದ್ಧೆಯ ದಾಸೋಹ ಕೈಂಕರ್ಯ ಸಲ್ಲಿಸಿದರೆ ತತ್ ಕ್ಷಣವೇ ವರುಣ ಕಣ್ಣು ತೆರೆಯುತ್ತಾನೆ ಎನ್ನುವ ಧಾರ್ಮಿಕ ನಂಬಿಕೆ ಅಚಲವಾಗಿದ್ದು ಅದು ಸತ್ಯ ಎನ್ನುವಂತೆ ಭರ್ಜರಿ ಮಳೆಯಾಗಿರುವ ಉದಾಹರಣೆ ಹಲವಾರು ಬಾರಿ ಸಾಬೀತಾಗಿದೆ.
ತರಳಬಾಳು ಗುರುಪರಂಪರೆಯ ನಾಲ್ಕು ಜಗದ್ಗುರುವರ್ಯರ ಪಟ್ಟವಲ್ಲರಿಯ ಸಾಮಿಪ್ಯದಿ ಸಮಾಜ ಕಟ್ಟಿದ ಧೀಮಂತ ಚೇತನ, ಮಕ್ಕಳ ಪಾಲಿನ ಪ್ರೀತಿಯ ತಾತನಾಗಿ, ಇಂದಿನ ಪ್ರಸ್ತುತ ಶ್ರೀ ತರಳಬಾಳು ಜಗದ್ಗುರುವರ್ಯರ ಪೂರ್ವಾಶ್ರಮದ ನಾಮಕರಣ ಸಮಾರಂಭದಲ್ಲಿ ಆಕಸ್ಮಿಕ ದರ್ಶನಗೈದು ‘ಶಿವಮೂರ್ತಿ’ ಎಂದು ನಾಮಕರಣಗೈದು ತರಳಬಾಳು ಗುರು ಪರಂಪರೆಯು ವಿಶ್ವ ಮಟ್ಟದಿ ಪ್ರಜ್ವಲಿಸುವ ಭವಿಷ್ಯವನ್ನು ಎಲ್ಲರಿಗಿಂತಲೂ ಮೊದಲೇ ಅರಿತಿದ್ದ ಪ್ರಾಜ್ಞ ಕಾಲಜ್ಞಾನಿಗಳು. ಸರಳತೆ ,ಆದರ್ಶ, ಕಾಯಕವೇ ಶ್ರೀ ಗಳ ಬದುಕಾಗಿತ್ತೆಂದು ಇಂದು ಸಹ ಹಿರಿಯರು ಶ್ರೀ ಗಳ ಕುರಿತು ಗೌರವದ ಮಾಹಿತಿ ನೀಡುತ್ತಾರೆ.
ಅಂತಹ ಶಿವಯೋಗಿ ಶಕ್ತಿ ಸಂಪನ್ನರಾದ ಶ್ರೀ ಮನ್ನಿರಂಜನ ಪ್ರಣವ ಸ್ವರೂಪಿ ಶ್ರೀ ಕಾಶೀಮಹಾಲಿಂಗ ಸ್ವಾಮೀಜಿಯವರ ಅಂತರಾತ್ಮಕ್ಕೆ ಭಕ್ತಿ ಪೂರ್ವಕ ಪ್ರಣಾಮಗಳನ್ನು ಅರ್ಪಿಸುತ್ತಾ.ಶ್ರೀಗಳ ಆಶೀರ್ವಾದದ ಶ್ರೀ ರಕ್ಷೆ ಸಮಸ್ತ ಸಮಾಜದ ಮೇಲಿರಲೆಂಬುದೇ ನಮ್ಮಯ ಆಶಯ.
(-ಬಸವರಾಜ ಸಿರಿಗೆರೆ)
ಕ್ರೀಡೆ
Olympic Games Paris 2024 | ಇಂದು ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನೆ ; ಭವ್ಯ ಸಮಾರಂಭಕ್ಕೆ ಸೀನ್ ನದಿ ಸಜ್ಜು
ಸುದ್ದಿದಿನಡೆಸ್ಕ್:ಪ್ಯಾರಿಸ್ ಒಲಿಂಪಿಕ್ಸ್ನ ಉದ್ಘಾಟನಾ ಸಮಾರಂಭ ಇಂದು ನಡೆಯಲಿದೆ. ಸೀನ್ ನದಿಯ ಮೇಲೆ ಇಂದು ಭಾರತೀಯ ಕಾಲಮಾನ ರಾತ್ರಿ 11ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದೆ. ಪರೇಡ್ನಲ್ಲಿ ಭಾರತದ ಧ್ವಜಧಾರಿಗಳಾದ ಶರತ್ ಕಮಲ್ ಮತ್ತು ಪಿ.ವಿ.ಸಿಂಧು ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಉದ್ಘಾಟನಾ ಸಮಾರಂಭಕ್ಕೂ ಮುನ್ನ ಕೆಲ ಪಂದ್ಯಗಳಿಗೆ ಚಾಲನೆ ನೀಡಲಾಗಿದೆ. ಅದರಂತೆ ಜುಲೈ 24 ರಿಂದ ಫುಟ್ಬಾಲ್ ಮತ್ತು ರಗ್ಬಿ ಪಂದ್ಯಗಳು ಶುರುವಾಗಿದ್ದು, ನಿನ್ನೆ ಬಿಲ್ಲುಗಾರಿಕೆ ಸ್ಪರ್ಧೆ ಆರಂಭವಾಗಿದೆ. ಈ ಸ್ಪರ್ಧೆಯೊಂದಿಗೆ ಭಾರತ ಒಲಿಂಪಿಕ್ಸ್ ಅಭಿಯಾನ ಆರಂಭಿಸುತ್ತಿರುವುದು ವಿಶೇಷವಾಗಿದೆ.
ಬಿಲ್ಲುಗಾರಿಕೆಯ ಶ್ರೇಯಾಂಕದ ಸುತ್ತಿನಲ್ಲಿ ಅಂಕಿತ ಭಕತ್, ಭಜನ್ ಕೌರ್ ಮತ್ತು ದೀಪಿಕಾ ಕುಮಾರಿ ಅವರನ್ನೊಳಗೊಂಡ ಭಾರತೀಯ ಮಹಿಳಾ ತಂಡ, 1 ಸಾವಿರದ 983 ಅಂಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಗಳಿಸಿ, ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
JUDGE | ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ ನ್ಯಾಯಾಧೀಶರ ಸಂಖ್ಯೆ ಏರಿಕೆ
ಸುದ್ದಿದಿನಡೆಸ್ಕ್:ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ಗಳ ನ್ಯಾಯಾಧೀಶರ ಸಂಖ್ಯೆ 906 ರಿಂದ 1114 ಕ್ಕೆ ಏರಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳ ನ್ಯಾಯಾಧೀಶರನ್ನು ಭಾರತದ ಸಂವಿಧಾನದ ಅಡಿಯಲ್ಲಿ ನೇಮಕ ಮಾಡಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ರಾಜ್ಯಸಭೆಯಲ್ಲಿ ನಿನ್ನೆ ಲಿಖಿತ ಉತ್ತರ ನೀಡಿದ್ದಾರೆ.
ದೇಶದಲ್ಲಿ ಒಟ್ಟು 15 ಸಾವಿರದ 300 ಮೆಗಾ ವ್ಯಾಟ್, ಸಾಮರ್ಥ್ಯದ 21 ಪರಮಾಣು ರಿಯಾಕ್ಟರ್ಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ ಎಂದು ಕೇಂದ್ರ ಭೂವಿಜ್ಞಾನ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ಪ್ರಸ್ತುತ ಸ್ಥಾಪಿಸಲಾದ ಪರಮಾಣು ಶಕ್ತಿ ಸಾಮರ್ಥ್ಯವು 8 ಸಾವಿರ 180 ಮೆಗಾವ್ಯಾಟ್ ಆಗಿದ್ದು, 24 ಪರಮಾಣು ಶಕ್ತಿ ರಿಯಾಕ್ಟರ್ಗಳನ್ನು ಒಳಗೊಂಡಿದೆ.
ಪ್ರಸ್ತುತ ಸ್ಥಾಪಿಸಲಾದ ಪರಮಾಣು ವಿದ್ಯುತ್ ಸಾಮರ್ಥ್ಯವನ್ನು 2031-32ರ ವೇಳೆಗೆ 22 ಸಾವಿರದ 480 ಮೆಗಾವ್ಯಾಟ್ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ
ಪರಮಾಣು ವಿದ್ಯುತ್ ಸ್ಥಾವರಗಳಿಂದ ವಾರ್ಷಿಕ ವಿದ್ಯುತ್ ಉತ್ಪಾದನೆಯು 2013-14 ರಲ್ಲಿ 34 ಸಾವಿರದ 228 ಮಿಲಿಯನ್ ಯುನಿಟ್ಗಳಿಂದ 2023-24 ರಲ್ಲಿ 47 ಸಾವಿರದ 971 ಮಿಲಿಯನ್ ಯುನಿಟ್ಗಳಿಗೆ ಏರಿಕೆಯಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
KSOU | ಪ್ರವೇಶಾತಿಗೆ ಅರ್ಜಿ ಆಹ್ವಾನ
ಸುದ್ದಿದಿನಡೆಸ್ಕ್:2024-25 ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಗೆ ಯುಜಿಸಿ ಅನುಮೋದಿತ ಶಿಕ್ಷಣ ಕ್ರಮಗಳ ಪ್ರವೇಶಾತಿಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ವೈಬ್ ಸೈಟ್ www.ksoumysuru.ac.in ನಲ್ಲಿ ಅರ್ಜಿ ಸಲ್ಲಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ6 days ago
ಆತ್ಮಕತೆ | ಹೊಸದಾಗಿ ಬಂದ ಹಳೆಯ ಗುರುಗಳು
-
ದಿನದ ಸುದ್ದಿ3 days ago
K-SET| ಕೆಸೆಟ್ ಪರೀಕ್ಷೆ ; ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ
-
ದಿನದ ಸುದ್ದಿ6 days ago
ಶಿರೂರು ಗುಡ್ಡಕುಸಿತ ಪ್ರದೇಶಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
-
ದಿನದ ಸುದ್ದಿ5 days ago
ಅತಿಥಿ ಉಪನ್ಯಾಸಕ ಹುದ್ದೆ ; ಅರ್ಜಿ ಆಹ್ವಾನ
-
ದಿನದ ಸುದ್ದಿ6 days ago
ದಾವಣಗೆರೆ ಭಾರೀ ಮಳೆ | ಬೆಳೆ ನಷ್ಟವಾಗಿದ್ದೆಷ್ಟು..?
-
ದಿನದ ಸುದ್ದಿ6 days ago
ಕೃಷಿ ಪಂಡಿತ್, ಆತ್ಮಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ5 days ago
ನಾಳೆಯಿಂದ ಸಂಸತ್ತಿನ ಬಜೆಟ್ ಅಧಿವೇಶನ
-
ದಿನದ ಸುದ್ದಿ4 days ago
ಬಲ್ಲಿರೇನು ಕೊಬ್ಬರಿ ಎಣ್ಣೆ ಮಹಿಮೆ..!