Connect with us

ದಿನದ ಸುದ್ದಿ

ಇಸ್ರೊ ನನ್ನ ಉಸಿರೆಂದು ನಂಬಿದ್ದ ವಿಜ್ಞಾನಿಗೆ ಪೊಲೀಸರು ಕೊಟ್ಟ ಟಾರ್ಚರ್ ಹೇಗಿತ್ತು ಗೊತ್ತಾ?

Published

on

ಭಾರತವು ಸ್ವದೇಶಿ ನಿರ್ಮಿತ ರಾಕೆಟ್ ಎಂಜಿನ್ ಅಭಿವೃದ್ಧಿಪಡಿಸುತ್ತಿತ್ತು. ಹೊಟ್ಟೆ ಕಿಚ್ಚು ತಾಳಲಾರದೆ ಅಮೆರಿಕ ನಡೆಸಿದ ಗೂಢಚರ್ಯೆ ಕಥಾ ಪ್ರಸಂಗದಲ್ಲಿ ಸಿಕ್ಕಿಬಿದ್ದವರು ಇಸ್ರೊದ ಖ್ಯಾತ ವಿಜ್ಞಾನಿ ನಂಬಿ ನಾರಾಯಣನ್.
ಬಹಳ ತಡವಾಗಿಯಾದರೂ ನಂಬಿ ಅವರಿಗೆ ನ್ಯಾಯ ಸಿಕ್ಕಿದೆ. 50 ಲಕ್ಷ ರೂ. ಪರಿಹಾರ ನೀಡಬೇಕಂದೂ ಸುಪ್ರೀಂ ಕೋರ್ಟ್ ಹೇಳಿದೆ. ನಂಬಿ ಅವರನ್ನು ಈ ಪ್ರಕರಣದಲ್ಲಿ ತಳಕುಹಾಕಿದ್ದಾದರೂ ಹೇಗೆ? ನಂಬಿ ಅವರೇ ಬರೆದಿರುವ ರೆಡಿ ಟು ಫೈರ್ ಪುಸ್ತಕದಲ್ಲಿ ತಮಗಾದ ಅನ್ಯಾಯ ಹಾಗೂ ಪೊಲೀಸರು ಕೊಟ್ಟ ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ಖುದ್ದು ವಿವರಿಸಿದ್ದಾರೆ. ಈ ಕುರಿತು ಸ್ಕ್ರಾಲ್ ಪ್ರಕಟಿಸಿರವ ವರದಿಯ ಕನ್ನಡ ಅವತರಣಿಕೆ ಇಲ್ಲಿದೆ.

ಸತ್ಯ ಮತ್ತು ಧರ್ಮ ಎಂದು ಹೇಳಿಕೊಂಡು ಬಂದ ಇಬ್ಬರು ನನ್ನ ಹಿಂದೆ ನಿಂತುಕೊಂಡರು. ಅವರಿಬ್ಬರು ನನ್ನ ಕುತ್ತಿಗೆ ಹಿಡಿದು ಅದುಮಿ ಕೆಳಗೆ ಕೂರಿಸಲಿದ್ದಾರೆ ಎಂಬುದನ್ನು ತಿಳಿಯಲು ನನಗೆ ಹೆಚ್ಚು ಕಾಲ ಹಿಡಿಯಲಿಲ್ಲ.
ಅವರಲ್ಲಿ ಹಿರಿಯ ಅಧಿಕಾರಿಯಂತೆ ಕಾಣುತ್ತಿದ್ದ ಒಬ್ಬ ನನ್ನನ್ನು ಹೀಗೆ ಕೇಳಿದ. “ನೀನೊಬ್ಬ ಹಿರಿಯ ವಿಜ್ಞಾನಿ. ಒಬ್ಬ ಬುದ್ದಿವಂತ ವ್ಯವಸ್ಥಾಪಕ. ದೇಶದ ಆಸ್ತಿ. ನೀನ್ಯಾಕೆ ಹೀಗೆ ಮಾಡಿದೆ?

ನಂಬಿ: ನಾನು ಏನು ಮಾಡಿದೆ?

ಅಧಿಕಾರಿ: ಗೂಢಚರ್ಯೆ.

ನಂಬಿ: ಯಾವ ಗೂಢಚರ್ಯೆ?

ಅಧಿಕಾರಿ: ಗಂಟಲು ಸರಿ ಮಾಡಿಕೊಂಡು ಹೇಳಿದ ಮಿಸ್ಟರ್ ನಂಬಿ, ಸಾರಿ ಡಾಕ್ಟರ್ ನಂಬಿ.

ನಂಬಿಎ: ನಾನು ಡಾಕ್ಟರ್ ಅಲ್ಲ ಮಿಸ್ಟರ್ ಸರಿ ಹೊಂದುತ್ತದೆ.

ಅಧಿಕಾರಿ: ಸರಿ ನನಗ್ಯಾಕೊ ಡಾಕ್ಟರ್ ಅನ್ನುವುದೇ ಸೂಕ್ತ ಎನಿಸುತ್ತದೆ. ಮತ್ತೊಮ್ಮೆ ಗಂಟಲು ಸರಿಮಾಡಿಕೊಂಡು ಕೇಳಿದ. ಹೇಳು ಯಾಕೆ ಹೀಗೆ ಮಆಡಿದೆ.

ನಂಬಿ: ದಯವಿಟ್ಟು ಅರ್ಥ ಮಾಡಿಕೊಳ್ಳಿ ನಾನು ಯಾವುದೇ ಅಪರಾಧ ಮಾಡಿಲ್ಲ. ನಿಮಗೆ ನಿಜವಾಗಿ ಏನು ಬೇಕು ಹೇಳಿ?

ಅಧಿಕಾರಿ: ನಿಜ ಬೊಗಳು.. ನೀನು ಒಪ್ಪಿಕೊಂಡ್ಯೋ ಸರಿ. ಇಲ್ದಿದ್ರೆ ನಿನ್ನನ್ನು ಒಪ್ಪಿಸೋದು ಹೇಗೆಂದು ನನಗೆ ಗೊತ್ತು.

ನಂಬಿ: ಅದು ಬೆದರಿಕೆಯ ಮೊದಲ ಹೆಜ್ಜೆಯಾಗಿತ್ತು (ಸ್ವಗತ)

ನಂಬಿ: ನನ್ನ ಅಪರಾಧವಾದರೂ ಏನು?

“ನಿಂಗೆ ಗೊತ್ತಿಲ್ಲವಾ? ಎದ್ದುನಿಂತು ಹೇಳಿದ. ನೀನು ದೇಶದ ರಕ್ಷಣೆಗೆ ಸಂಬಂಧಿಸಿದ ದಾಖಲೆಗಳನ್ನು ಪಾಕಿಸ್ತಾನಕ್ಕೆ ಮಾರಿದ್ದೀಯ. ಈಗ ಏನೂ ಗೊತ್ತಿಲ್ಲದವನಂತೆ ನಾಟಕ ಮಾಡ್ತಿದ್ದೀಯಾ? ಬೊಗಳು ಇದೆಲ್ಲ ಹೇಗೆ ಮಾಡಿದೆ ಅಂತ. ಇದಕ್ಕಾಗಿ ಅವರು ಕೊಟ್ಟ ಇನಾಮು ಎಷ್ಟು ಹೇಳು?
ಅದೇ ಸಮಯಕ್ಕೆ ಮತ್ತೆ ಮೂವರು ಅಧಿಕಾರಿಗಳು ರೂಂನೊಳಗೆ ಬಂದರು. ಅದರಲ್ಲಿ ಒಬ್ಬ ಬೂದಿ ಬಣ್ಣದ ಸಫಾರಿ ಸೂಟ್ ಹಾಕಿದ್ದ. ಅವರು ಇಂಟೆಲಿಜನ್ಸ್ ಬ್ಯೂರೋದ ಮುಖ್ಯಸ್ಥರು ಸಣ್ಣಗೆ ಕುಳ್ಳಗಿದ್ದ ಒಬ್ಬ ಅಧಿಕಾರಿಯು ನನಗೆ ಪರಿಚಯ ಮಾಡಿಸಿದ.

ಸಣ್ಣಗಿದ್ದ ಅಧಿಕಾರಿಯು ಇದ್ದಕ್ಕಿದ್ದಂತೆ ನನ್ನ ಮುಖದ ಮೇಲೆ ತಿವಿದು. ಹೇಳು ಸೂಳೆ ಮಗನೆ? ನಿನಗೆ ಗೊತ್ತಿಲ್ವಾ ನೀನು ಮಾಡಿದ ಅಪರಾಧ ಏನಂತ? ಇಲ್ಲ ನಂಗೆ ಗೊತ್ತಿಲ್ಲ ಎಂದೆ. ಕೆಲವು ಪೇಪರ್‍ಗಳನ್ನು ನನ್ನ ಮುಖಕ್ಕೆ ಎಸೆದು ಬೋಳಿಮಗನೆ ನೋಡು ನೀನು ಮಾಡಿರುವ ಅನಾಚಾರ ಯಾರ್ಗೂ ಗೊತ್ತಾಗಲ್ಲ ಅಂದುಕೊಂಡಿದ್ದೀಯಾ? ಭಾರತದ ರಾಕೆಟ್ ತಂತ್ರಜ್ಞಾನವನ್ನು ಪಾಕಿಸ್ತಾನಕ್ಕೆ ಮಾರಿದ್ದೀಯಾ? ನಿಂಗೆ ಗೊತ್ತಾ ಇದು ಎಷ್ಟು ದೊಡ್ಡ ಅಪರಾಧ ಹದಿನಾಲ್ಕು ವರ್ಷ ಕಂಬಿ ಎಣಿಸಬೇಕಾಗುತ್ತೆ ಹುಷಾರ್ ಅಂದ.

ಐಬಿಯ ದೊಡ್ಡ ವ್ಯಕ್ತಿ ಎಂದು ಪರಿಚಯಿಸಿದ್ದ ವ್ಯಕ್ತಿ ಕಡೆಗೆ ಬೊಟ್ಟುಮಾಡಿ. ನೋಡು ಅವರು ಈಗಿಂದೀಗಲೇ ದಿಲ್ಲಿಗೆ ಹೊರಡಬೇಕು. ಅವರ ವಿಮಾನಕ್ಕೆ ತಡವಾಗುತ್ತಿದೆ. ಬೇಗ ಒಪ್ಪಿಕೊ. ನಡೆದದ್ದು ಏನೆಂತ ಹೇಳಿಬಿಡು ಎಂದು ಪಿಸುಗುಟ್ಟಿದ.

ಕೆಲವೇ ಹೊತ್ತಿನ ನಂತರ ಗೊತ್ತಾಯಿತು. ಐಬಿಯ ದೊಡ್ಡ ವ್ಯಕ್ತಿ ಎಂದು ಹೇಳಿದ್ದ ವ್ಯಕ್ತಿ ವಾಸ್ತವದಲ್ಲಿ ಇಂಟೆಲಿಜೆನ್ಸ್ ಬ್ಯೂರೊದ ಜಂಟಿ ನಿರ್ದೇಶಕ ಎಂ ಕೆ. ಧರ್.

ನಾನೊಬ್ಬ ನಿರಪರಾಧಿ. ಯಾವ ತಪ್ಪ ಮಾಡಿಲ್ಲ. ನೀವು ನನ್ನನ್ನು ತಪ್ಪು ತಿಳಿದುಕೊಂಡಿದ್ದೀರ ಎಂದು ನಾನು ಮೆಲ್ಲ ಧ್ವನಿಯಲ್ಲೇ ಹೇಳಿದೆ.

ಇಲ್ಲ ಎಂದು ಜೋರಾಗಿ ಅರುಚಿದ ಅಧಿಕಾರಿ, ಬೋಳಿಮಗನೆ ಹೇಳು ಮಾರಿಯಂ ರಶೀದಾಳನ್ನು ಎಲ್ಲಿ ಭೇಟಿಯಾಗಿದ್ದೆ?

ನಂಬಿ: ನಾನು ಯಾವಾಗಲೂ ಭೇಟಿಯಾಗಿಲ್ಲ

ಅಧಿಕಾರಿ: ಬಡವ ರಾಸ್ಕಲ್ ಎಷ್ಟು ಧೈರ್ಯವಿದ್ದರೆ ನನ್ನ ಹತ್ತಿರನೇ ಸುಳ್ಳು ಹೇಳುತ್ತಿದ್ದೀಯಾ? ನೀವಿಬ್ಬರು ಭೇಟಿಯಾಗಿದ್ದಾಗೆ ಮೇರಿಯಂ ಖುದ್ದು ಒಪ್ಪಿಕೊಂಡಿದ್ದಾಳೆ. ನಿಜ ಬೊಗಳು.

ನಂಬಿ: ನೀವು ಹೇಳುತ್ತಿರುವ ಮಾಲ್ಡೀವಿಯಾ ಪ್ರಜೆಯನ್ನು ನಾನು ಎಂದಿಗೂ ಭೇಟಿಯಾಗಿಲ್ಲ. ದಯವಿಟ್ಟು ನನ್ನನ್ನು ನಂಬಿ. ನನಗೆ ಗೊತ್ತೇ ಇಲ್ಲದ ವ್ಯಕ್ತಿಯನ್ನು ನಾನು ಹೇಗೆ ಭೇಟಿಯಾಗಲಿ?

ಅಧಿಕಾರಿ: ನೀನು ನಿಜ ಬೊಗಳಲಿಲ್ಲ ಅಂಧ್ರೆ ಫೌಜಿಯಾಳನ್ನು ಇಲ್ಲಿಗೆ ಕರೆಸುತ್ತೇನೆ. ನೀವಿಬ್ಬರು ಜತೆಯಲ್ಲಿರುವ ಫೋಟೊಗಳು ನಾಳೆ ಪೇಪರ್‍ನಲ್ಲಿ ಬರುತ್ತವೆ ಸರಿನಾ?

ಮಾರಿಯಂಳನ್ನು ನಾನು ಯಾವಾಗ ಭೇಟಿ ಮಾಡಿದ್ದೆ? ಪೊಲೀಸರು ಯಾಗಿ ಸುಳ್ಳು ಕತೆ ಹೆಣೆಯುತ್ತಿದ್ದಾರೆ ಎಂದು ನನ್ನ ಮನಸ್ಸು ಮಂಥನವಾಗುತ್ತಾಹೋಯಿತು. ಅಷ್ಟರಲ್ಲಿ ಐಬಿಯ ದೊಡ್ಡ ಅಧಿಕಾರಿ ಹಾಗೂ ಆತನ ಸಹಾಯಕ ಅಲ್ಲಿಂದ ಹೊರಟರು. ಮುಖ್ಯ ವಿಚಾರಣಾಧಿಕಾರಿ ಮುಂದುವರಿಸಿದ.

ಅಧಿಕಾರಿ: ನಾವು ಹೇಳುತ್ತಿರುವ ಇಬ್ಬರು ಮಹಿಳೆಯರಷ್ಟೆ ಅಲ್ಲ. ನಿನ್ನ ಸಹೋದ್ಯೋಗಿ ಸಸಿಕುಮಾರನ್ ಕೂಡ ನಿಜ ಒಪ್ಪಿಕೊಂಡಿದ್ದಾನೆ. ನೀನು ನಮ್ಮ ಬಳಿ ಏನೂ ಮುಚ್ಚಿಡಲು ಸಾಧ್ಯವಿಲ್ಲ.

ವಿಷಯ ಕೇಳಿ ನಾನು ಚೇರ್‍ನಿಂದ ಕುಸಿದುಬಿದ್ದೆ. ಸಸಿಕುಮಾರ್ ಎಲ್ಲ ಒಪ್ಪಿಕೊಂಡಿಬಿಟ್ಟನಾ?

ಅಧಿಕಾರಿ: ನೀನ್ಯಾಕೆ ಇಷ್ಟು ಗಾಬರಿಯಾಗಿದ್ದೀಯಾ? ಮದ್ರಾಸ್, ತಿರುವನಂತಪುರಂನಲ್ಲಿ ನಡೆದ ಎರಡು ಭೇಟಿಯಲ್ಲಿ ಪಾಕಿಸ್ತಾನದ ಅಧಿಕಾರಿಗಳಿಗೆ ನೀನು ಕ್ರಯೋಜನಿಕ್ ಎಂಜಿನ್‍ನ ಸ್ಕೆಚ್‍ಗಳನ್ನು ಮಾರಾಟ ಮಾಡಿದ್ದೀಯ ಎಂದು ಸಸಿಕುಮಾರ್ ಒಪ್ಪಿಕೊಂಡಿದ್ದಾನೆ. ಇದಕ್ಕೆ ಸಸಿಕುಮಾರ್ ಮಧ್ಯವರ್ತಿಯಾಗಿದ್ದ ಎಂದೂ ಬಾಯ್ಬಿಟ್ಟಿದ್ದಾನೆ. ಹೇಳು ಪಾಕಿಸ್ತಾನದಿಂದ ಎಷ್ಟು ಹಣ ತೆಗೆದುಕೊಂಡೆ?

ನಂಬಿ: ಸಸಿ ನಿಮ್ಮ ಬಳಿ ಏನು ಹೇಳಿದ್ದಾನೋ ಗೊತ್ತಿಲ್ಲ. ನಾನು ಯಾವ ತಪ್ಪೂ ಮಾಡಿಲ್ಲ ಯಾರನ್ನೂ ಭೇಟಿಯಾಗಿಲ್ಲ.

ಈ ಮಧ್ಯೆ ಒಬ್ಬ ಹುಡುಗ ಅನ್ನ ಸಾಂಬರ್ ತಂದ. ವಿಚಾರಣೆ ನಡೆಸಿದ ವ್ಯಕ್ತಿ ಅಲ್ಲಿಂದ ಹೋದ ಮತ್ತಿಬ್ಬರು ಹೊಸ ವ್ಯಕ್ತಿಗಳು ಬಂದರು.

ಮತ್ತೆ ಅದೇ ಪ್ರಶ್ನೆ ಕೇಳಿದರು. ಹೇಳು ಯಾಕೆ ಹೀಗೆ ಮಾಡಿದೆ? ವಿಚಾರಣೆ ನಡೆಸುವವರು ಹೊಸಬರೇ ಆದರೂ, ಅವರು ಕೇಳಿದ್ದ ಪ್ರಶ್ನೆಗಳೆಲ್ಲಾ ಹಳೆಯವು.

ಅಧಿಕಾರಿ: ವಿಕಾಸ್ ಎಂಜಿನ್ ಹಾಗೂ ಕ್ರಯೋಜನಿಕ್ ಎಂಜಿನ್ ಡ್ರಾಯಿಂಗ್‍ಗಳನ್ನು ಪಆಕಿಸ್ತಾನಕ್ಕೆ ಏಕೆ ಮಾರಾಟ ಮಾಡಿದೆ?

ನಂಬಿ: ನಿಮಗೆ ರಾಕೆಟ್ ವಿಜ್ಞಾನದ ಬಗ್ಗೆ ಅರಿವಿದೆಯಾ? ಯಾವುದೇ ಡ್ರಾಯಿಂಗ್‍ಗಳು ಇಸ್ರೊದ ಹೊರಗೆ ಹೋಗಲು ಸಾಧ್ಯವೇ ಇಲ್ಲ. ಬರೀ ಡ್ರಾಯಿಂಗ್ ಇಟ್ಟುಕೊಂಡು ಯಾವುದೇ ಎಂಜಿನ್‍ಗಳನ್ನು ತಯಾರಿಸಲು ಸಾಧ್ಯವೇ ಇಲ್ಲ. ಅದನ್ನು ತಯಾರಿಸಿದ ವಿಜ್ಞಾನಿಗಳು ಇದ್ದರೆ ಮಾತ್ರ ಅದು ಸಾಧ್ಯವಾಗುತ್ತೆ.

ಅಧಿಕಾರಿ: ಹಾಗಾದ್ರೆ ನೀನು ಡ್ರಾಯಿಂಗ್‍ಗಳನ್ನು ಪಾಕಿಸ್ತಾನಕ್ಕೆ ಕೊಟ್ಟಿದ್ದೀಯಾ?

ನಂಬಿ: ಡ್ರಾಯಿಂಗ್‍ಗಳು, ದಾಖಲೆಗಳಿಗೆ ಯಾರೂ ಕಾಸು ಕೊಡಲ್ಲ. ನೀವು ಹೇಳುತ್ತಿರುವ ವಿಕಾಸ್ ಎಂಜಿನ್ ತಯಾರಿಸಲು ಫ್ರಾನ್ಸ್‍ನ ವೆರ್ನಾನ್ ಎಂಬಲ್ಲಿರುವ ಬಾಹ್ಯಾಕಾಶ ಕೇಂದ್ರದಲ್ಲಿ ಫ್ರಾನ್ಸ್ ವಿಜ್ಞಾನಿಗಳೊಂದಿಗೆ ನಾವು 150 ಮಂದಿ ತಂಡ ಒಂದು ಅಧಿಕೃತ ಗುತ್ತಿಗೆ ಮೇರೆಗೆ ಕೆಲಸ ಮಾಡಿದ್ದೇವೆ. ನಿತ್ಯವೂ ಪ್ರಯೋಗಗಳು, ಬದಲಾವಣೆಗಳು ನಡೆಯುತ್ತಲೇ ಇದ್ದವು. ಅಷ್ಟೆಲ್ಲ ಇದ್ದರೂ ಆ ಎಂಜಿನ್ ತಯಾರಿಸಲು ನಮಗೆ ಹದಿನಾರು ವರ್ಷ ಹಿಡಿಯಿತು.

ಈಗ ವಿಚಾರಣೆ ನಡೆಸಿದ ಅಧಿಕಾರಿಗಳು ನನ್ನ ಹೇಳಿಕೆಯನ್ನು ಸ್ವಲ್ಪ ಇಂಪ್ರೂ ಮಾಡಿಕೊಂಡು ತಮ್ಮದೇ ಧಾಟಿಯಲ್ಲಿ ಪ್ರಶ್ನೆ ಕೇಳಲು ಮುಂದಾದರು. ಪಾಕಿಸ್ತಾನದವರು ವಿಕಾಸ್ ಎಂಜಿನ್‍ಅನ್ನು ನಕಲು ಮಾಡಬೇಕಾದರೆ ನೀನು ನೀಡಿರುವ ಡ್ರಾಯಿಂಗ್‍ಗಳು ಅವರಿಗೆ ಉಪಯೋಗಕ್ಕೆ ಬರುತ್ತವೆ ಅಲ್ಲವೇ?

ನಂಬಿ: ನನ್ನನ್ನು ನಂಬಿ ಎಂದು ಎಷ್ಟೇ ಬೇಡಿಕೊಂಡರೂ ಅವರು ಕೇಳಲಿಲ್ಲ. ತರ್ಕವಿಲ್ಲದ ಪ್ರಶ್ನೆಗಳು. ತಂತ್ರಜ್ಞಾನ ವೈಜ್ಞಾನಿಕ ಅರಿವಿಲ್ಲದವರ ಬಳಿ ನಾನು ಎಷ್ಟೇ ಬಾಯಿ ಬಡಿದುಕೊಂಡರೂ ಅರ್ಥ ಮಾಡಿಕೊಳ್ಳಲಿಲ್ಲ. ನೀನು ಹೇಳುತ್ತಿರುವುದು ಡ್ರಾಯಿಂಗ್‍ಗಳೂ ನಿಷ್ಪ್ರಯೋಜಕ. ಹಾಗಾದ್ರೆ ನೀವ್ಯಾಕೆ ಇಟ್ಟುಕೊಡಿದ್ದೀರಾ?

ನಂಬಿ: ರಾಕೆಟ್ ಎಂಜಿನ್ ತಯಾರಿಕೆಯಲ್ಲಿ ಡ್ರಾಯಿಂಗ್‍ಗಳು ಒಂದು ಚಿಕ್ಕ ಪಾತ್ರವಷ್ಟೆ. ಅವಕ್ಕೆ ಯಾರೂ ಕಾಸು ಕೊಡುವುದಿಲ್ಲ. ಪಠ್ಯ ಪುಸ್ತಕದಲ್ಲಿರುವ ರಾಕೆಟ್ ಡ್ರಾಯಿಂಗ್ ನೋಡಿ ರಾಕೆಟ್ ಮಾಡಲು ಸಾಧ್ಯವೇ? ಅದಕ್ಕೆ ಯಾರಾದರೂ ಕಾಸು ಕೊಡುತ್ತಾರಾ?

ಆಗ ಹೊಸ ಅಧಿಕಾರಿಗಳ ತಂಡವೊಂದು ಬಂತು. ಅದರಲ್ಲೊಬ್ಬ ಜೋರು ಧ್ವನಿಯಲ್ಲಿ ಎದ್ದೇಳು ಸೂಳೇಮಗನೆ. ನೀನು ಕೂರಲು ಯೋಗ್ಯ ವ್ಯಕ್ತಿಯಲ್ಲ. ನಿಂತುಕೊಂಡೇ ಮಾತಾಡು ಅಂದ. ನಾನು ನೀರಿಗಾಗಿ ಬೆಳಗ್ಗೆ ಇಂದ ಪರಿಪರಿಯಾಗಿ ಬೇಡಿಕೊಂಡೆ ಆದರೆ ಯಾರೂ ಕೊಡಲಿಲ್ಲ. ನಿನ್ನನ್ನು ಪಠಾಣ್‍ಕೋಟ್ ಅಥವ ಕಾಶ್ಮೀರದ ಬ್ಲಾಕ್ ಸೆಲ್‍ನಲ್ಲಿ ಹಾಕಿ ಕೊಂದು ಹಿಮದ ರಾಶಿಯಲ್ಲಲಿ ಹಾಕುವುದಾಗಿ ಅವರು ಬೆದರಿಸಿದರು. ನನ್ನ ದೇಹ ಹಿಮದ ರಾಶಿಯಲ್ಲಿ ಬಿದ್ದಿರುವಂತೆ ಚಿತ್ರವು ಮನಸ್ಸಿನಲ್ಲಿ ಮೂಡಿತು.

ಆ ರಾತ್ರಿ ನನ್ನನ್ನು ಮಲಗಲು ಬಿಡಲಿಲ್ಲ 30 ಗಂಟೆಗಳ ಕಾಲ ಅದೇ ಪ್ರಶ್ನೆ. ಅನ್ನ, ನೀರು ಏನೂ ಎಲ್ಲದೆ ನಿತ್ರಾಣನಾಗಿದ್ದೆ. ಸಿಮೆಂಟ್ ನೆಲವಾಗಿದ್ದರಿಂದ ದೇಹವು ತಣ್ಣಗಾಗಿಹೋಯಿತು.
ಹೀಗೇ ಇದ್ದರೆ ಅಧಿಕಾರಿಗಳು ನನ್ನನ್ನು ಮುಗಿಸಿಬಿಡುತ್ತಾರೆ ನಾನು ಈಗ ಹೋರಾಟ ನಡೆಸಲೇಬೇಕೆಂದು ತೀರ್ಮಾನಿಸಿ ಜೋರಾಗಿ ಉಸಿರೆಳೆದುಕೊಂಡು ಎದ್ದು ನಿಂತೆ.

ನಂಬಿ: ನೀವು ಒಂದು ದೊಡ್ಡ ಅಪರಾಧ ಮಾಡುತ್ತಿದ್ದೀರ. ಇದಕ್ಕಾಗಿ ನೀವು ಬಹಳ ದೊಡ್ಡ ಶಿಕ್ಷೆ ಅನುಭವಿಸುತ್ತೀರ. ನಾನು ನಿಮ್ಮನ್ನು ಬಿಡಲ್ಲ ನೆನಪಿಟ್ಟುಕೊಳ್ಳಿ ನಿಮಗೂ ಕುಟುಂಬ ಇದೆ. ಇದನ್ನ ಕೇಳಿಸಿಕೊಂಡ ಅಧಿಕಾರಿ ನೀನು ಇಲ್ಲಿಂದ ಜೀವ ಸಮೇತ ಹೋದರೆ ತಾನೆ ಎಂದು ನಕ್ಕ.

ನಿಮ್ಮನ್ನೆಲ್ಲ ನೆನಪಿಟ್ಟುಕೊಂಡಿದ್ದೇನೆ. ಒಬ್ಬೊಬ್ಬರನ್ನಾಗಿ ಕೊಂದುಬಿಡುತ್ತೇನೆ ಎಂದೆ.

ಅಧಿಕಾರಿಯೊಬ್ಬ ತಣ್ಣನೆ ಧ್ವನಿಯಲ್ಲಿ ಹೇಳಿದ. ಸರ್ ನಾವು ನಮ್ಮ ಡ್ಯೂಟಿ ಮಾಡ್ತಿದ್ದೀವಿ. ತಪ್ಪಿದ್ದರೆ ನಿಮ್ಮ ಚಪ್ಪಲಿಯಲ್ಲಿ ಹೊಡೆಯಿರಿ.
22 ವರ್ಷಗಳಾಗಿವೆ ನನ್ನ ಚಪ್ಪಲಿಯನ್ನು ಹಾಗೇ ಇಟ್ಟಿದ್ದೇನೆ.

ಮತ್ತೆ ಅಧಿಕಾರಿ ನನ್ನನ್ನ ಪ್ರಶ್ನಿಸಿದ. ಹೇಳು ಮಹಮದ್ ಅಸ್ಲಮ್ ಯಾರು?

ನಂಬಿ: ಯಾವ ಅಸ್ಲಂ ನನಗೆ ಗೊತ್ತಿಲ್ಲ.

ಅಧಿಕಾರಿ: ಸರಿ ನಾನು ನೆನಪಿಸುತ್ತೇನೆ. ಮೊಹಮದ್ ಅಸ್ಲಾಂ ಪಾಕಿಸ್ತಾನದ ಅಣು ವಿಜ್ಞಾನಿ. 1985ರಲ್ಲಿ ಆತ ನಿನ್ನನ್ನು ಭೇಟಿಯಾಗಿ ರಾಕೆಟ್ ತಂತ್ರಜ್ಞಾನದ ಬಗ್ಗೆ ಮಾತನಾಡಿದ್ದ.

ನಾನು ತಲೆ ಚಚ್ಚಿಕೊಂಡೆ.
ನಂಬಿ: ನನಗೆ ಯಾವ ಅಸ್ಲಂ ಕೂಡ ಗೊತ್ತಿಲ್ಲ. ಆದರೆ, ರಾಕೆಟ್ ಟೆಕ್ನಾಲಜಿ ತಿಳಿಯಲು ಪಾಕಿಸ್ತಾನ ಏಕೆ ಅಣು ವಿಜ್ಞಾನಿ ಕಳಿಸುತ್ತೆ? ಅಬ್ದುಲ್ ಕಲಾಂ ಅವರ ಹತ್ತಿರಾನೋ ಅಥವಾ ಯು ಆರ್ ರಾವ್ ಅವರನ್ನೋ ಸಂಪರ್ಕಿಸಬೇಕಲ್ವಾ? ನಿಮ್ಮ ಕತೆ ನಿಮಗೇ ಒಪ್ಪಿಗೆಯಾಗುತ್ತಾ?
ಆ ಇಬ್ಬರೂ ವ್ಯಕ್ತಿಗಳೂ ತಾವು ಹೇಳಿದ್ದ ಹೇಳಿಕೆ ಎಷ್ಟು ತಮಾಷೆಯಾಗಿತ್ತು ಎಂದುಕೊಂಡರು. ಒಬ್ಬರ ಮುಖ ಒಬ್ರು ನೋಡಿಕೊಂಡು ನಮಗೆ ಅದು ಗೊತ್ತು. ನೀನು ಈ ಪ್ರಶ್ನೆಗೆ ಹೇಗೆ ಪ್ರತಿಕ್ರಿಯೆ ನೀಡುತ್ತೀಯಾ ಎಂಬುದು ನಮಗೆ ಗೊತ್ತಾಗಬೇಕು ಎಂದ.

ಇವರು ಮುಂಚೆಯೇ ಹೆಣೆದಿರುವ ಕತೆಯಲ್ಲಿ ನನ್ನನ್ನು ಸೇರಿಸಿದ್ದಾರೆ. ಇವರೇ ಸೃಷ್ಟಿಸಿದ ಪಾತ್ರಗಳಿಗೆ ನಾನು ಹೆಸರಿಡಬೇಕು ಎಂದು ಆಗ ನನಗೆ ಅರ್ಥವಾಯಿತು. ನನಗೆ ಗೊತ್ತಿಲ್ಲದ ವ್ಯಕ್ತಗಳ ಹೆಸರನ್ನು ಕೇಳುವ ತಂತ್ರ ಮುಂದುವರಿಯುತ್ತಲೇ ಹೋಯಿತು.

ಅಧಿಕಾರಿ: ಮಿಸ್ಟರ್ ನಂಬಿ. ನಮ್ಮನ್ನು ಮೂರ್ಖರೆಂದು ತಿಳಿದಿದ್ದೀಯಾ? ನಮಗೆ 25 ವರ್ಷದ ಅನುಭವ ಇದೆ. ನಿನ್ನಿಂದ ನಿಜ ಕಕ್ಕಿಸುವುದು ಹೇಗೆಂದುನನಗೆ ಗೊತ್ತು. ನಿನ್ನ ನಟ್ಟು ಬೋಲ್ಟು ಬಿಚ್ಚುತ್ತೀವಿ. ರೊಟ್ಟಿಗಾಗಿ ಅಂಗಲಾಚುವಂತೆ ಮಾಡುತ್ತೀವೆ. ಸೂಳೆ ಮಕ್ಕಳಾ ದೇಶದ ಆಸ್ತಿನ ಮಾರ್ಕೊತೀರಾ? ಎಂದು ಕೇಳಿದ.

ಮತ್ತೊಬ್ಬ ಅಧಿಕಾರಿ ಇದ್ದಕ್ಕಿದ್ದಂತೆ ಬಂದ. ಏನೂ ಕೇಳದೆ ದಿಢೀರನೆ ಮುಖದ ಮೇಲೆ ಹೊಡೆದ. ನಮ್ಮಪ್ಪ ಕೂಡ ನನಗೆ ಒಂದೇಟೂ ಹೊಡೆದಿರಲಿಲ್ಲ. ಈತ ಹೊಡೆದದ್ದು ನನಗೆ ದೈಹಿಕ ಹಿಂಸೆಗಿಂತ ಮಾನಸಿಕವಾಗಿ ಘಾಸಿಗೊಳಿಸಿತು.
ನಾನು ಯಾರಿಗೂ ಹೆದರುವುದಿಲ್ಲ. ನಿಜ ಒಪ್ಪಿಕೊಂಡರೆ ಸರಿ ಎಂದು ಅರುಚುತ್ತಿದ್ದ.
ಇನ್ನೊಬ್ಬ ಅಧಿಕಾರಿ ನನ್ನ ಕಿವಿ ಹತ್ತಿರ ಬಂದು ಹೌದು ಎಂದು ಒಪ್ಪಿಕೊ ಎಂದ. ನಾನು ಧೈರ್ಯವಾಗಿ ಇಲ್ಲ ಎಂದು ಹೇಳಿದೆ.
ಕನ್ನಡಕ ಹಾಕಿದ್ದ ಆ ವ್ಯಕ್ತಿ ಒಮ್ಮೆ ನನ್ನನ್ನು ಗುರಾಯಿಸಿ ತನ್ನ ಸಹಾಯಕನೊಂದಿಗೆ ಹೊರಗೆ ನಡೆದ.
ಚುಟ್ಟಾ ಸೇದುತ್ತಿದ್ದ ವ್ಯಕ್ತಿ ನನ್ನ ಹತ್ತಿರ ಬಂದು ನೀನ್ಯಾಕೆ ನಿಜ ಒಪ್ಪಿಕೊಳ್ಳಬಾರದು? ನನಗೆ ನಿಜಕ್ಕೂ ನೀವು ಹೇಳುತ್ತಿರವ ವ್ಯಕ್ತಿ ಯಾರೆಂದು ನನಗೆ ಗೊತ್ತಿಲ್ಲ ಎಂದೆ.

ಅಧಿಕಾರಿ ಹೇಳಿದ ನೋಡು. ನಾವು ಹೇಳಿದ ಹೆಸರಿನವರು ಗೊತ್ತಿಲ್ಲ ಎಂದರೆ ಬಿಟ್ಟುಬಿಡು. ನಿನಗೆ ಗೊತ್ತಿರುವ ಯಾರಾದರೂ ಮುಸ್ಲಿಮರ ಹೆಸರು ಹೇಳು ಎಂದ.

ನನಗೆ ಗೊತ್ತಿದ್ದದ್ದು ನನ್ನ ಬಾಲ್ಯದ ಗೆಳೆಯ ಒಬ್ಬ ಮುಸ್ಲಿಂ. ಆತ ಈಚೆಗೆ ಸಿಕ್ಕಿ ಇಸ್ರೊದಲ್ಲಿ ತನ್ನ ಮಗನಿಗೆ ಕೆಲಸ ಕೊಡಿಸು ಎಂದಿದ್ದ. ಎಕ್ಸಾಂ ಬರೆದು ಪಾಸಾದ್ರೆ ನೋಡುವಾ ಎಂದಿದ್ದೆ. ಆತ ಎಕ್ಸಾನಲ್ಲಿ ಫೇಲ್ ಆಗಿದ್ದ.

ಮತ್ತೆ ನೀರಿಗಾಗಿ ಬೇಡಿಕೊಂಡೆ. ಆಗ ಅಧಿಕಾರಿಯೊಬ್ಬ ಹೇಳಿದ. ನೀನು ನಾವು ಹೇಳಿದ ಹೇಳಿಕೆಯನ್ನೇ ಒಪ್ಪಿಕೊಳ್ಳಬೇಕು. ಇಲ್ಲದಿದ್ದರೆ ನೀರು ಸಿಗಲ್ಲ ಎಂದ. ನನಗೆ ನೀಡುತ್ತಿದ್ದ ಟ್ರೀಟ್‍ಮೆಂಟ್ ಥರ್ಡ್ ಡಿಗ್ರಿಯವು ಎಂದು ಗೊತ್ತಾಯಿತು. ನಾನು ಧೈರ್ಯವಾಗಿ ಮತ್ತೊಮ್ಮೆಎದ್ದು ನಿಂತು ಹೇಳಿದೆ.

ನನಗೆ ನೀರು ಬೇಡ. ನಾನು ಹೆಚ್ಚು ಹೊತ್ತು ಕೂರುವುದೂ ಇಲ್ಲ. ನಾನೊಬ್ಬ ನಿರಪರಾಧಿ ಎಂದು ನೀವು ಒಪ್ಪುವ ವರೆಗೆ ನಾನು ಅನ್ನಾಹಾರ ಇಲ್ಲದೆ ಇಲ್ಲೇ ನಿಲ್ಲುತ್ತೇನೆ ಎಂದೆ.

ಪೊಲೀಸರು ಕತೆಯನ್ನು ಮುಂಚೆಯೇ ಹೆಣೆದಿದ್ದರು. ನಾನೊಬ್ಬ ಹರಕೆಯ ಕುರಿಯಾಗಿದ್ದೆ. ಅವರು ಬಿಟ್ಟಿದ್ದ ಸ್ಥಳಗಳಲ್ಲಿ ನನು ಹೆಸರು ಸೇರಿಸಬೇಕಿತ್ತು ಅಷ್ಟೆ. 22 ವರ್ಷ ನರಕದಲ್ಲಿ ಕಳೆದೆ.

ಕೃಪೆ: ಸ್ಕ್ರಾಲ್ ಡಾಟ್ ಇನ್

ದಿನದ ಸುದ್ದಿ

ಡಾ. ಶಾಮನೂರು ಶಿವಶಂಕರಪ್ಪ ನಿಧನ ; ವೀರಶೈವ ವಿಧಿವಿಧಾನದಂತೆ ಕಲ್ಲೇಶ್ವರ ಮಿಲ್‍ನಲ್ಲಿ ಅಂತ್ಯ ಸಂಸ್ಕಾರ

Published

on

ಸುದ್ದಿದಿನ,ದಾವಣಗೆರೆ:ಮಾಜಿ ಸಚಿವರು ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ; ಶಾಮನೂರು ಶಿವಶಂಕರಪ್ಪನವರು ನಿಧನರಾಗಿದ್ದು ಅವರ ಅಂತ್ಯ ಸಂಸ್ಕಾರವು ಸರ್ಕಾರಿ ಸಕಲ ಗೌರವಗಳೊಂದಿಗೆ ಹಾಗೂ ವೀರಶೈವ ಸಂಪ್ರದಾಯದಂತೆ ಕಲ್ಲೇಶ್ವರ ರೈಸ್ ಮಿಲ್ ಆವರಣದಲ್ಲಿ ಅಪಾರ ಜನಸ್ತೋಮದೊಂದಿಗೆ ಸೋಮವಾರ ಸಂಜೆ ಜರುಗಿತು.

ಡಾ; ಶಾಮನೂರು ಶಿವಶಂಕರಪ್ಪನವರಿಗೆ 95 ವರ್ಷವಾಗಿದ್ದು ವಯೋಸಹಜ ಅನಾರೋಗ್ಯದಿಂದ ಡಿಸೆಂಬರ್ 14 ರಂದು ನಿಧನ ಹೊಂದಿದ್ದರು. 6 ಭಾರಿ ಶಾಸಕರಾಗಿ, ಒಮ್ಮೆ ಸಂಸದರಾಗಿ ಸುಧೀರ್ಘ ರಾಜಕೀಯ ಸೇವೆಯಲ್ಲಿದ್ದ ಇವರು ರಾಜ್ಯ ಸೇರಿದಂತೆ ದಾವಣಗೆರೆಗೆ ಹೊಸ ರೂಪಕೊಟ್ಟಿದ್ದರು.
ಸೋಮವಾರ ಬೆಳಗ್ಗೆ 7.30 ಗಂಟೆಯಿಂದ ಪಾರ್ಥಿವ ಶರೀರಕ್ಕೆ ಸ್ವಗೃಹದಲ್ಲಿ ಕುಟುಂಬಸ್ಥರ ವಿವಿಧ ಪೂಜೆ ಪುನಸ್ಕಾರಗಳೊಂದಿಗೆ ವಿಧಿ ವಿಧಾನಗಳು ನಡೆದು, ಮಧ್ಯಾಹ್ನದಿಂದ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಪಾರ್ಥಿವ ಶರೀರವನ್ನು ಇಡಲಾಗಿತ್ತು. ಸಾವಿರಾರು ಜನರು ಆಗಮಿಸಿ ಸರತಿ ಸಾಲಿನಲ್ಲಿ ಅಂತಿಮ ದರ್ಶನ ಪಡೆದರು.

ಮಧ್ಯಾಹ್ನ 3.30 ರಿಂದ ಹೈಸ್ಕೂಲ್ ಮೈದಾನದಿಂದ ಹೊರಟು ಹಳೇ ದಾವಣಗೆರೆ ಮಂಡಿಪೇಟೆ, ಕಾಯಿಪೇಟೆ, ಅರಳಿವೃತ್ತದ ಮೂಲಕ ಕಲ್ಲೇಶ್ವರ ಮಿಲ್‍ಗೆ ಪಾರ್ಥಿವ ಶರೀರ ತಲುಪಿತು. ಸಂಜೆ 4.30 ರಿಂದ ಅಂತಿಮ ವಿಧಿ ವಿಧಾನಗಳು ನಡೆದವು.

ಅಂತಿಮ ಸಂಸ್ಕಾರದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು, ರಾಜ್ಯಸಭೆ ವಿರೋಧ ಪಕ್ಷದ ನಾಯಕರು ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು, ಉಪ ಮುಖ್ಯಮಂತ್ರಿಯವರಾದ ಡಿ.ಕೆ.ಶಿವಕುಮಾರ್ ಅವರು, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಅರಣ್ಯ ಸಚಿವರಾದ ಈಶ್ವರ ಖಂಡ್ರೆ, ಬೃಹತ್ ಕೈಗಾರಿಕೆ ಸಚಿವರಾದ ಎಂ.ಬಿ.ಪಾಟೀಲ್ ಅವರು, ಇಂಧನ ಸಚಿವರಾದ ಕೆ.ಜೆ.ಜಾರ್ಜ್‍ರವರು, ಸಮಾಜ ಕಲ್ಯಾಣ ಸಚಿವರಾದ ಡಾ; ಹೆಚ್.ಸಿ.ಮಹದೇವಪ್ಪ, ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್, ಆಹಾರ ಸಚಿವರಾದ ಕೆ.ಎಚ್.ಮುನಿಯಪ್ಪ, ಅಲ್ಪಸಂಖ್ಯಾತರ ಕಲ್ಯಾಣ, ವಸತಿ ಸಚಿವರಾದ ಬಿ.ಜೆಡ್.ಜಮೀರ್ ಅಹ್ಮದ್ ಖಾನ್, ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್.ಕೆ ಪಾಟೀಲ, ಜವಳಿ, ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ.ಎಸ್.ಪಾಟೀಲ, ಯೋಜನೆ ಮತ್ತು ಸಾಂಖ್ಯಿಕ ಸಚಿವರಾದ ಡಿ.ಸುಧಾಕರ್ ಸೇರಿದಂತೆ ಶಾಸಕರು ಸೇರಿದಂತೆ ವಿವಿಧ ಮಠಾಧೀಶರು ಭಾಗವಹಿಸಿ ಪುಷ್ಪ ನಮನ ಸಲ್ಲಿಸಿ ಅಂತಿಮ ದರ್ಶನ ಪಡೆದರು.

ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ರಾಷ್ಟ್ರಧ್ವಜವನ್ನು ಪಾರ್ಥಿವ ಶರೀರಕ್ಕೆ ಹೊದಿಸಿ ಪೊಲೀಸ್ ಬ್ಯಾಂಡ್ ಮೂಲಕ ರಾಷ್ಟ್ರಗೀತೆ ನುಡಿಸಿ ಗೌರವ ಸಲ್ಲಿಸಲಾಯಿತು. ನಂತರ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿ ಅಂತಿಮವಾಗಿ ಶೋಕ ವ್ಯಕ್ತಪಡಿಸಲಾಯಿತು. ರಾಷ್ಟ್ರಧ್ವಜವನ್ನು ಅವರ ಪುತ್ರರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಸ್ತಾಂತರಿಸಿದರು. ನಂತರ ಸಾಂಪ್ರದಾಯಿಕ ಪೂಜೆ, ವಿಧಿ, ವಿಧಾನಗಳೊಂದಿಗೆ ಪಾರ್ಥಿವ ಶರೀರವನ್ನು ಐಕ್ಯ ಮಂಟಪದಲ್ಲಿ ಇಡಲಾಯಿತು.

ಡಾ; ಶಾಮನೂರು ಶಿವಶಂಕರಪ್ಪನವರ ಪುತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ಸೊಸೆ ಹಾಗೂ ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್, ಇನ್ನಿಬ್ಬರು ಪುತ್ರರಾದ ಎಸ್.ಎಸ್.ಬಕ್ಕೇಶ್, ಎಸ್.ಎಸ್.ಗಣೇಶ್ ಸೇರಿದಂತೆ ಶಾಮನೂರು ಶಿವಶಂಕರಪ್ಪನವರ ಕುಟುಂಬಸ್ಥರು ಅಂತಿಮ ವಿಧಿ ವಿಧಾನದಲ್ಲಿ ಭಾಗವಹಿಸಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಎಸ್.ಆರ್.ಬೊಮ್ಮಾಯಿ, ಗೃಹ ಸಚಿವರಾದ ಜಿ.ಪರಮೇಶ್ವರ್, ಕಂದಾಯ ಸಚಿವರಾದ ಕೃಷ್ಣಬೈರೇಗೌಡ, ಕೃಷಿ ಸಚಿವರಾದ ಚಲುವರಾಯಸ್ವಾಮಿ, ಬಿ.ಜೆ.ಪಿ.ಪಕ್ಷದ ರಾಜ್ಯಾದ್ಯಕ್ಷರಾದ ಬಿ.ವೈ.ವಿಜಯೇಂದ್ರ ಸೇರಿದಂತೆ ಅನೇಕ ಶಾಸಕರು, ವಿಧಾನ ಪರಿಷತ್ ಸದಸ್ಯರು ಅಂತಿಮ ದರ್ಶನ ಪಡೆದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

2027ರ ಜನಗಣತಿ ನಡೆಸಲು ಬಜೆಟ್ ಅಂಗೀಕಾರ

Published

on

ಸುದ್ದಿದಿನ,ದೆಹಲಿ:2027ರ ಜನಗಣತಿಯನ್ನು ನಡೆಸಲು ಸಂಪುಟವು 11 ಸಾವಿರದ 718 ಕೋಟಿ ರೂಪಾಯಿಗಳ ಬಜೆಟ್‌ಅನ್ನು ಅಂಗೀಕರಿಸಿದೆ. ಈ ಕುರಿತು ಮಾಹಿತಿ ನೀಡಿದ ಸಚಿವರು, 2027ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು ಎಂದು ಹೇಳಿದರು.

ಇದು ಮೊದಲ ಡಿಜಿಟಲ್ ಜನಗಣತಿಯಾಗಲಿದೆ. 2027 ರ ಜನಗಣತಿಯು ಒಟ್ಟಾರೆ 16ನೇ ಮತ್ತು ಸ್ವಾತಂತ್ರ‍್ಯದ ನಂತರದ 8 ನೇ ಜನಗಣತಿಯಾಗಲಿದೆ. ಭಾರತದ ಜನಗಣತಿಯನ್ನು ವಿಶ್ವದ ಅತಿದೊಡ್ಡ ಆಡಳಿತಾತ್ಮಕ ಮತ್ತು ಸಂಖ್ಯಾಶಾಸ್ತ್ರೀಯ ಕ್ರಮವೆಂದು ಪರಿಗಣಿಸಲಾಗಿದೆ ಎಂದು ಅವರು ತಿಳಿಸಿದರು.

ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು 2026ರ ಹಂಗಾಮಿಗೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಗೆ ಅನುಮೋದನೆ ನೀಡಿದೆ. ಬೆಳೆಗಾರರಿಗೆ ಲಾಭದಾಯಕ ಬೆಲೆಗಳನ್ನು ಒದಗಿಸುವ ಸಲುವಾಗಿ, ಸರ್ಕಾರವು 2018-19 ರ ಕೇಂದ್ರ ಬಜೆಟ್‌ನಲ್ಲಿ ಎಲ್ಲಾ ಕಡ್ಡಾಯ ಬೆಳೆಗಳ ಎಂಎಸ್‌ಪಿ ಅನ್ನು ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಮಟ್ಟದಲ್ಲಿ ನಿಗದಿಪಡಿಸಲಾಗುವುದು ಎಂದು ಘೋಷಿಸಿತ್ತು. ಮಿಲ್ಲಿಂಗ್ ಕೊಬ್ಬರಿಗೆ ಎಂಎಸ್‌ಪಿಯನ್ನು ಕ್ವಿಂಟಲ್‌ಗೆ 445 ರೂಪಾಯಿಗಳಿಂದ 12 ಸಾವಿರದ 27 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಮತ್ತು ಅದೇ ಅವಧಿಗೆ ಉಂಡೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ 2026ರ ಹಂಗಾಮಿಗೆ ಕ್ವಿಂಟಲ್‌ಗೆ 400 ರೂಪಾಯಿಗಳಿಂದ 12 ಸಾವಿರದ 500 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.

ಹೆಚ್ಚಿನ ಕನಿಷ್ಠ ಬೆಂಬಲ ಬೆಲೆಯು ತೆಂಗಿನ ಬೆಳೆಗಾರರಿಗೆ ಉತ್ತಮ ಲಾಭದಾಯಕ ಆದಾಯವನ್ನು ಖಚಿತಪಡಿಸುವುದಲ್ಲದೆ, ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ತೆಂಗಿನ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕೊಬ್ಬರಿ ಉತ್ಪಾದನೆಯನ್ನು ವಿಸ್ತರಿಸಲು ರೈತರನ್ನು ಪ್ರೋತ್ಸಾಹಿಸುತ್ತದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕೋಲ್‌ಸೇತು ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ; ಸಂಪನ್ಮೂಲಗಳ ನ್ಯಾಯಯುತ ಬಳಕೆಗೆ ಒತ್ತು

Published

on

ಸುದ್ದಿದಿನ,ದೆಹಲಿ:ಕೇಂದ್ರ ಸರ್ಕಾರವು ’ಕೋಲ್‌ಸೇತು’ ನೀತಿಯನ್ನು ಅನುಮೋದಿಸಿದೆ. ಇದು ವಿವಿಧ ಕೈಗಾರಿಕಾ ಬಳಕೆಗಳು ಮತ್ತು ರಫ್ತಿಗೆ ಕಲ್ಲಿದ್ದಲು ಸಂಪರ್ಕಗಳ ಹರಾಜಿಗೆ ಹೊಸ ವ್ಯವಸ್ಥೆ ಸೃಷ್ಟಿಸುತ್ತದೆ, ಹಾಗೂ ಸಂಪನ್ಮೂಲಗಳ ನ್ಯಾಯಯುತ ಪ್ರವೇಶ ಮತ್ತು ಅತ್ಯುತ್ತಮ ಬಳಕೆಯನ್ನು ಖಚಿತಪಡಿಸುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು ನಿನ್ನೆ ತಡೆರಹಿತ, ದಕ್ಷ ಮತ್ತು ಪಾರದರ್ಶಕ ಬಳಕೆಗಾಗಿ ಕಲ್ಲಿದ್ದಲು ಸಂಪರ್ಕದ ಹರಾಜು ನೀತಿಗೆ ಅನುಮೋದನೆ ನೀಡಿತು.

ನವದೆಹಲಿಯಲ್ಲಿ ನಿನ್ನೆ ಸಂಜೆ ಸಂಪುಟದ ನಿರ್ಧಾರಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, 2016ರ ಎನ್‌ಆರ್‌ಎಸ್ ನಿಯಂತ್ರಿತವಲ್ಲದ ವಲಯದ ಸಂಪರ್ಕ ಹರಾಜು ನೀತಿಯಲ್ಲಿ ’ಕೋಲ್‌ಸೇತು’ ಎಂಬ ಪ್ರತ್ಯೇಕ ವ್ಯವಸ್ಥೆಯನ್ನು ಸೇರಿಸುವ ಮೂಲಕ ಯಾವುದೇ ಕೈಗಾರಿಕಾ ಬಳಕೆ ಮತ್ತು ರಫ್ತಿಗೆ ದೀರ್ಘಾವಧಿಯವರೆಗೆ ಹರಾಜು ಆಧಾರದ ಮೇಲೆ ಕಲ್ಲಿದ್ದಲು ಸಂಪರ್ಕಗಳ ಹಂಚಿಕೆಗೆ ಈ ನೀತಿಯು ಅವಕಾಶ ನೀಡುತ್ತದೆ ಎಂದು ಹೇಳಿದರು.

ಕಲ್ಲಿದ್ದಲು ಅಗತ್ಯವಿರುವ ಯಾವುದೇ ದೇಶೀಯ ಖರೀದಿದಾರರು ಅಂತಿಮ ಬಳಕೆಯನ್ನು ಲೆಕ್ಕಿಸದೆ ಸಂಪರ್ಕ ಹರಾಜಿನಲ್ಲಿ ಭಾಗವಹಿಸಬಹುದು ಎಂದು ಅವರು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ2 days ago

ಡಾ. ಶಾಮನೂರು ಶಿವಶಂಕರಪ್ಪ ನಿಧನ ; ವೀರಶೈವ ವಿಧಿವಿಧಾನದಂತೆ ಕಲ್ಲೇಶ್ವರ ಮಿಲ್‍ನಲ್ಲಿ ಅಂತ್ಯ ಸಂಸ್ಕಾರ

ಸುದ್ದಿದಿನ,ದಾವಣಗೆರೆ:ಮಾಜಿ ಸಚಿವರು ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ; ಶಾಮನೂರು ಶಿವಶಂಕರಪ್ಪನವರು ನಿಧನರಾಗಿದ್ದು ಅವರ ಅಂತ್ಯ ಸಂಸ್ಕಾರವು ಸರ್ಕಾರಿ ಸಕಲ ಗೌರವಗಳೊಂದಿಗೆ ಹಾಗೂ ವೀರಶೈವ...

ದಿನದ ಸುದ್ದಿ4 days ago

2027ರ ಜನಗಣತಿ ನಡೆಸಲು ಬಜೆಟ್ ಅಂಗೀಕಾರ

ಸುದ್ದಿದಿನ,ದೆಹಲಿ:2027ರ ಜನಗಣತಿಯನ್ನು ನಡೆಸಲು ಸಂಪುಟವು 11 ಸಾವಿರದ 718 ಕೋಟಿ ರೂಪಾಯಿಗಳ ಬಜೆಟ್‌ಅನ್ನು ಅಂಗೀಕರಿಸಿದೆ. ಈ ಕುರಿತು ಮಾಹಿತಿ ನೀಡಿದ ಸಚಿವರು, 2027ರ ಜನಗಣತಿಯನ್ನು ಎರಡು ಹಂತಗಳಲ್ಲಿ...

ದಿನದ ಸುದ್ದಿ4 days ago

ಕೋಲ್‌ಸೇತು ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ; ಸಂಪನ್ಮೂಲಗಳ ನ್ಯಾಯಯುತ ಬಳಕೆಗೆ ಒತ್ತು

ಸುದ್ದಿದಿನ,ದೆಹಲಿ:ಕೇಂದ್ರ ಸರ್ಕಾರವು ’ಕೋಲ್‌ಸೇತು’ ನೀತಿಯನ್ನು ಅನುಮೋದಿಸಿದೆ. ಇದು ವಿವಿಧ ಕೈಗಾರಿಕಾ ಬಳಕೆಗಳು ಮತ್ತು ರಫ್ತಿಗೆ ಕಲ್ಲಿದ್ದಲು ಸಂಪರ್ಕಗಳ ಹರಾಜಿಗೆ ಹೊಸ ವ್ಯವಸ್ಥೆ ಸೃಷ್ಟಿಸುತ್ತದೆ, ಹಾಗೂ ಸಂಪನ್ಮೂಲಗಳ ನ್ಯಾಯಯುತ...

ದಿನದ ಸುದ್ದಿ5 days ago

ಮಹಿಳೆಯರ ಪುನರ್ ವಸತಿ ಯೋಜನೆ | ಅರ್ಜಿ ಆಹ್ವಾನ ; ಅವಧಿ ವಿಸ್ತರಣೆ

ಸುದ್ದಿದಿನ,ದಾವಣಗೆರೆ: ಪ್ರಸಕ್ತ ಸಾಲಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಉದ್ಯೋಗಿನಿ, ಚೇತನಾ, ಧನಶ್ರೀ, ಲಿಂಗತ್ವ ಅಲ್ಪ ಸಂಖ್ಯಾತರ ಪುನರ್ವಸತಿ ಯೋಜನೆ ಹಾಗೂ ಮಾಜಿ ದೇವದಾಸಿ ಮಹಿಳೆಯರ...

ದಿನದ ಸುದ್ದಿ5 days ago

ಅಂಚೆ ಇಲಾಖೆಯಿಂದ ಸೆಲ್ಪ್ ಬುಕ್ಕಿಂಗ್ ಸೌಲಭ್ಯ

ಸುದ್ದಿದಿನ,ದಾವಣಗೆರೆ:ಭಾರತೀಯ ಅಂಚೆ ಇಲಾಖೆಯಿಂದ ಸೆಲ್ಪ್ ಬುಕ್ಕಿಂಗ್ ಹೊಸ ಸೌಲಭ್ಯವನ್ನು ಆಯೋಜಿಸಲಾಗಿದೆ. ಈ ಸೌಲಭ್ಯದಿಂದ ನಾಗರಿಕರು ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಬಳಸಿ ಸ್ಪೀಡ್ ಪೊಸ್ಟ್ , ಪಾರ್ಸಲ್...

ದಿನದ ಸುದ್ದಿ7 days ago

ಪತ್ರಿಕೋದ್ಯಮ ಪದವೀಧರರಿಗೆ ಸಿಹಿ ಸುದ್ದಿ | ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ತರಬೇತಿ ; ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ದಾವಣಗೆರೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಹಿರಿಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಪತ್ರಿಕೋದ್ಯಮ ಪದವೀಧರರಿಗೆ ಮಾಧ್ಯಮ ಕ್ಷೇತ್ರದಲ್ಲಿ ಮತ್ತು ಮಾಧ್ಯಮ ಚಟುವಟಿಕೆಗಳ...

ದಿನದ ಸುದ್ದಿ1 week ago

ಬೆಂಬಲ ಬೆಲೆ | ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಪ್ರಾರಂಭ: ಡಿಸಿ ಗಂಗಾಧರಸ್ವಾಮಿ

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆದ ಮೆಕ್ಕೆಜೋಳವನ್ನು ಬುಧುವಾರದಿಂದ ರೈತರಿಂದ ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ರವರು ತಿಳಿಸಿದರು. ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ...

ದಿನದ ಸುದ್ದಿ1 week ago

ಯಮ ಸ್ವರೂಪಿ ಗ್ಯಾಸ್ ಗೀಸರ್ ಬಳಸೋ ಮುನ್ನ ಎಚ್ಚರ ; ಇವಿಷ್ಟನ್ನು ಪಾಲಿಸಿ ಅಪಾಯ ತಡೆಗಟ್ಟಿ

~ಅನಿರೀಕ್ಷಿತ್ ನಾರಾಯಣ ಕೆಲ ಮುನ್ನೆಚ್ಚರಿಕೆಯ ಅಂಶಗಳನ್ನು ಪಾಲಿಸುವುದರಿಂದ ಗ್ಯಾಸ್ ಗೀಸರ್ ನಿಂದ ಆಗುವ ಅಪಾಯವನ್ನು ತಡೆಗಟ್ಟಬಹುದು. 1. ಮೊದಲಿಗೆ ಇದು ಎಲ್ಲರಿಗೂ ಗೊತ್ತಿರುವ ವಿಷಯ. ಗ್ಯಾಸ್ ಗೀಸರ್...

ದಿನದ ಸುದ್ದಿ2 weeks ago

ಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ

ಸುದ್ದಿದಿನ,ದಾವಣಗೆರೆ: ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾವನೆ ಎನ್ಎಚ್ ಎಂ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಮಧ್ಯಸ್ತಿಕೆ ವಹಿಸಿ ಸರಿಪಡಿಸಲು ಶಿಪಾರಸ್ಸು ಮಾಡಬೇಕು....

ದಿನದ ಸುದ್ದಿ2 weeks ago

ದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ

ಸುದ್ದಿದಿನ,ದಾವಣಗೆರೆ:ನಗರದ ಜಯದೇವ ವೃತ್ತದಲ್ಲಿರುವ ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿಯಿಂದ ಗುರುವಾರ (ಡಿಸೆಂಬರ್.4) ಕನ್ನಡ ಚಳವಳಿಯ ಕಚೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಟಿ...

Trending