ರಾಜಕೀಯ
ಪೌರತ್ವ (ತಿದ್ದುಪಡಿ) ಮಸೂದೆ : ಹೊಸ ವಿಭಜನಕಾರೀ ಅಜೆಂಡಾ
ಪೌರತ್ವ (ತಿದ್ದುಪಡಿ) ಮಸೂದೆ ಅಥವ ಸಿ.ಎ.ಬಿ. ಮುಸ್ಲಿಮೇತರ ವಲಸಿಗರನ್ನು ನಾಗರಿಕರೆಂದು ಕಾನೂನುಬದ್ಧಗೊಳಿಸುವ ದುಷ್ಟತನದಿಂದ ತುಂಬಿರುವ ಶಾಸನವಾದರೆ ಎನ್.ಆರ್.ಸಿ., ಅಂದರೆ, ರಾಷ್ಟ್ರೀಯ ಪೌರರ ನೋಂದಣಿ ಎಂಬುದು ಮುಸ್ಲಿಂ ನುಸುಳುಕೋರರು ಎನ್ನಲಾಗುವವರ ಮೇಲೆ ಗುರಿಯಿಡುತ್ತದೆ.ಬಿಜೆಪಿ ಇಟ್ಟುಕೊಂಡಿರುವ ಗುರಿಯೆಂದರೆ, ಎರಡನೇ ದರ್ಜೆಯ ನಾಗರಿಕರು ಎಂಬೊಂದು ವಿಧವನ್ನು ಸೃಷಿಸುವುದು ಮತ್ತು ಅವರ ಹಕ್ಕುಗಳನ್ನು ತೀವ್ರವಾಗಿ ಮಿತಿಗೊಳಿಸುವುದು.
ಈ ಯೋಚನೆಯ ಹಿಂದೆ ಇರುವುದು ವಿ.ಡಿ.ಸಾವರ್ಕರ್ ಪ್ರತಿಪಾದಿಸಿದ ಎರಡು-ರಾಷ್ಟ್ರಗಳ ಸಿದ್ಧಾಂತ. ಸಿ.ಎ.ಬಿ. ಮತ್ತು ಎನ್.ಆರ್.ಸಿ.ಯ ಎರಡು ಕಡೆಗಳಿಂದ ಸುತ್ತುವರೆಯುವ ತಂತ್ರವನ್ನು ಬಿಜೆಪಿ-ಆರೆಸ್ಸೆಸ್ನ ಸಂಕುಚಿತ ರಾಜಕಾರಣಕ್ಕೆ ಹೊಂದುವಂತೆ ಕೋಮು ಆತಂಕಗಳನ್ನು ಹೆಚ್ಚಿಸಲು ಮತ್ತು ಒಂದು ಹೊಸ ವಿಭಜನಕಾರೀ ಅಜೆಂಡಾವನ್ನು ಸೃಷ್ಟಿಸಲು ಉಪಯೋಗಿಸಲಾಗುತ್ತದೆ.
ಬಿಜೆಪಿಯ ದುಷ್ಟತಂತ್ರಗಳನ್ನು ವಿಫಲಗೊಳಿಸಲು ಈ ಮಸೂದೆಗೆ ಸುಪ್ರಿಂ ಕೋರ್ಟಿನಲ್ಲಿ ಸವಾಲು ಹಾಕುವುದರೊಂದಿಗೇ, ಅವನ್ನು ಬಯಲಿಗೆಳೆಯಲು ವ್ಯಾಪಕವಾದ ಪ್ರಚಾರಾಂದೋಲನವನ್ನು ನಡೆಸಬೇಕು.
- ಪ್ರಕಾಶ ಕಾರಟ್
ಪೌರತ್ವ (ತಿದ್ದುಪಡಿ) ಮಸೂದೆ, 2019(ಸಿ.ಎ.ಬಿ.) ಸಂಸತ್ತಿನ ಒಳಗೂ, ಹೊರಗೂ ಬಲವಾದ ಪ್ರತಿಭಟನೆಗಳ ನಡುವೆ ಅಂಗೀಕಾರಗೊಂಡಿದೆ. ಸಿ.ಎ.ಬಿ. ಸಂವಿಧಾನದ ಮೂಲ ನೀತಿಗಳಿಗೆ ತದ್ವಿರುದ್ಧವಾಗಿರುವ ಒಂದು ಅಪಯಕಾರಿ ಶಾಸನ. ಈ ಮಸೂದೆಯಲ್ಲಿ ವಿಧಿಸಿರುವ ಅಂಶಗಳು ಸಂವಿಧಾನದಲ್ಲಿ ಪ್ರತಿಷ್ಠಾಪಿತಗೊಂಡಿರುವ ಪೌರತ್ವದ ಜಾತ್ಯತೀತ ಪರಿಕಲ್ಪನೆಯನ್ನು ಶಿಥಿಲಗೊಳಿಸುತ್ತವೆ.
ಸಂವಿಧಾನದ ಕಲಮು 14, ಭಾರತದ ಪ್ರದೇಶದ ಒಳಗೆ ಯಾವುದೇ ವ್ಯಕ್ತಿಗೆ ಕಾನೂನಿನ ಎದುರು ಸಮಾನತೆ ಅಥವ ಕಾನೂನಿನ ಸಮಾನ ರಕ್ಷಣೆಯನ್ನು ನಿರಾಕರಿಸಲಾಗದು ಎಂದು ವಿಧಿಸಿದೆ. ಸಂವಿಧಾನವು ಮತ, ಜಾತಿ, ಪಂಥ ಅಥವ ಲಿಂಗದ ಆಧಾರದಲ್ಲಿ ತಾರತಮ್ಯವನ್ನು ಕೂಡ ನಿಷೇದಿಸಿದೆ.
ಸಿ.ಎ.ಬಿ. ಕೆಲವು ವಿಭಾಗಗಳ ಜನರನ್ನು ಪೌರತ್ವ ನೀಡಿಕೆಗೆ ಪರಿಶೀಲಿಸುವಾಗ ಒಂದು ಮತೀಯ ಮಾನದಂಡವನ್ನು ಸೇರಿಸಿದೆ. ಈ ತಿದ್ದುಪಡಿಯ ಪ್ರಕಾರ ಡಿಸೆಂಬರ್ 31, 2014ರ ಮೊದಲು ಅಫಘಾನಿಸ್ತಾನ, ಬಾಂಗ್ಲಾದೇಶ್ ಅಥವ ಪಾಕಿಸ್ತಾನದಿಂದ ಬಂದಿರುವ ಹಿಂದೂಗಳು, ಸಿಖ್ಖರು, ಔದ್ಧರು, ಜೈನರು, ಪಾರ್ಸಿಗಳು ಅಥವ ಕ್ರಿಶ್ಚಿಯನ್ನರನ್ನು ಕಾನೂನುಬಾಹಿರ ವಲಸಿಗರು ಎಂದು ಕಾಣುವುದಿಲ್ಲ.
ಅವರು ಭಾರತದಲ್ಲಿ ಕನಿಷ್ಟ ಐದು ವರ್ಷಗಳನ್ನು ಕಳೆದಿದ್ದರೆ,ಸಹಜೀಕರಣ(ನೆಚುರಲೈಸೇಶನ್)ದಿಂದ ಪೌರತ್ವಕ್ಕೆ ಅರ್ಹರಾಗಬಹುದು. ಈ ಮೊದಲು ಸಹಜೀಕರಿಸಲು ಸಮಯಮಿತಿ ಹನ್ನೊಂದು ವರ್ಷಗಳಾಗಿದ್ದವು. ಅಂದರೆ ಈ ಮಿತಿಯನ್ನು ಸಡಿಲಿಸಲಾಗುತ್ತಿದೆ.
ಅದರೆ ಇದು ಈ ಮೂರು ದೇಶಗಳಿಂದ ಬಂದಿರುವ ಮುಸ್ಲಿಮರಿಗೆ ಅನ್ವಯಿಸುವುದಿಲ್ಲ. ಅವರನ್ನು ಕಾನೂನುಬಾಹಿರ ವಲಸಿಗರೆಂದು ಪರಿಗಣಿಸಲಾಗುತ್ತದೆ. ಮತೀಯ ಆಧಾರದಲ್ಲಿ ಈ ತಾರತಮ್ಯವೇ ಪೌರತ್ವದ ಕಾಯ್ದೆಗೆ ಈ ತಿದ್ದುಪಡಿಯನ್ನು ಅಸಂವಿಧಾನಿಕ ಮತ್ತು ಕಾನೂನುಬಾಹಿರಗೊಳಿಸುತ್ತದೆ.
ಬಿಜೆಪಿ ಈ ಮೊದಲೇ ಹಿಂದಿನ ಲೋಕಸಭೆಯಲ್ಲಿ ಈ ಮಸೂದೆಯನ್ನು ಪಾಸುಮಾಡಿಕೊಂಡಿತ್ತು. ಆದರೆ ರಾಜ್ಯಸಭೆಯಲ್ಲಿ ಬಹುಮತವಿಲ್ಲದ್ದರಿಂದ ಪಾಸಾಗಲಿಲ್ಲ. ಈ ಮಸೂದೆಯ ಉದ್ದೇಶ ಬಾಂಗ್ಲಾದೇಶದಿಂದ ಅಸ್ಸಾಂಗೆ ಬಂದಿರುವ ಹಿಂದೂ ವಲಸಿಗರಿಗೆ ಪೌರತ್ವವನ್ನು ಖಾತ್ರಿಪಡಿಸುತ್ತಲೇ, ಆ ದೇಶದಿಂದ ಬರುವ ಯಾವುದೇ ಮುಸ್ಲಿಂ ವಲಸಿಗರನ್ನು ಹೊರಗಿಡುವ ಕೋಮುವಾದಿ ಅಜೆಂಡಾ. ಅಸ್ಸಾಂನಲ್ಲಿ ಎನ್.ಆರ್.ಸಿ. ಪ್ರಕ್ರಿಯೆ ಮಾರ್ಚ್ 24, 1971ರ ನಂತರ ಪ್ರವೇಶಿಸಿರುವ ಎಲ್ಲರನ್ನೂ ಹೊರಗಿಡುವುದರಿಂದಾಗಿ ಈ ಕ್ರಮ ಅಗತ್ಯವಾಗಿತ್ತು.
ಅಸ್ಸಾಂನಲ್ಲಿ ರಾಷ್ಟ್ರೀಯ ಪೌರರ ನೋಂದಣಿ(ಎನ್.ಆರ್.ಸಿ.)ಯ ಅಂತಿಮ ಪಟ್ಟಿಯನ್ನು ಈ ವರ್ಷ ಆಗಸ್ಟ್ 31ರಂದು ಸಿ.ಎ.ಬಿ.ಯನ್ನು ಜಾರಿಗೊಳಿಸುವ ಮೊದಲು ಪ್ರಕಟಿಸಲಾಯಿತು. ಇದರ ಫಲಿತಾಂಶವಾಗಿ ಬಾಂಗ್ಲಾದೇಶದಿಂದ ಬಂದು ಹಿಂದೂಗಳನ್ನೂ ದೊಡ್ಡ ಸಂಖ್ಯೆಯಲ್ಲಿ ಹೊರಗಿಡಲಾಗಿದೆ. ಆದ್ದರಿಂದಲೇ ಅಸ್ಸಾಂನ ಬಿಜೆಪಿ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಎನ್.ಆರ್.ಸಿ. ಪಟ್ಟಿಯನ್ನು ವಿರೋಧಿಸಿವೆ.
ಹೀಗೆ ಮೋದಿ ಸರಕಾರಕ್ಕೆ ಇಡೀ ದೇಶಕ್ಕೆ ಎನ್.ಆರ್.ಸಿ. ಯನ್ನು ಸಿದ್ದಪಡಿಸುವ ಕೆಲಸಕ್ಕೆ ಕೈಹಾಕುವ ಮೊದಲು ಸಿ.ಎ.ಬಿ.ಯನ್ನು ಅಂಗೀಕರಿಸುವ ತುರ್ತು ಬಂದಿತು. ಗೃಹಮಂತ್ರಿ ಅಮಿತ್ ಷಾ ಕಪಟತನದಿಂದ ಅಸ್ಸಾಂನಲ್ಲಿ ಎನ್.ಆರ್.ಸಿ. ಯನ್ನು ಇಡೀ ದೇಶದ ಜತೆಗೆ ಮತ್ತೊಮ್ಮೆ ಮಾಡಲಾಗುವುದು ಎಂದು ಪ್ರಕಟಿಸಿದ್ದಾರೆ.
ಈ ಸಿ.ಎ.ಬಿ. ಗೆ ಅಸ್ಸಾಂ ಮತ್ತು ಈಶಾನ್ಯ ಭಾರತದ ಜನಗಳಿಂದ ಕೋಪಾವೇಶದ ಪ್ರತಿಕ್ರಿಯೆ ಎದುರಾಗಿದೆ. ಅಸ್ಸಾಂನ ಜನರು ಈ ಶಾಸನ ಅಸ್ಸಾಂ ಒಪ್ಪಂದದಲ್ಲಿ ನೀಡಿದ ವಚನಕ್ಕೆ ಮಾಡಿರುವ ವಿಶ್ವಾಸದ್ರೋಹ ಎಂದು ಕಾಣುತ್ತಿದ್ದಾರೆ. ಏಕೆಂದರೆ ಆ ಒಪ್ಪಂದದ ಪ್ರಕಾರ ಮಾರ್ಚ್ 1971ರ ನಂತರ ಅಸ್ಸಾಂ ಪ್ರವೇಶಿಸಿದವರಿಗೆ ಪೌರತ್ವವನ್ನು ಕೊಡಲಾಗುವುದಿಲ್ಲ.
ಸಿ.ಎ.ಬಿ. ಈ ಸಮಯಮಿತಿಯನ್ನು ಡಿಸೆಂಬರ್ 31, 2014 ರ ವರೆಗೆ ವಿಸ್ತರಿಸಿ ಕಾನೂನುಬಾಹಿರ ವಲಸಿಗರನ್ನು ಕಾನೂನುಬದ್ಧಗೊಳಿಸಿ, 1985ರಲ್ಲಿ ಅಸ್ಸಾಂ ಒಪ್ಪಂದದ ಮೂಲಕ ಏರ್ಪಟ್ಟಿರುವ ಜಾಗರೂಕತೆಯಿಂದ ಸಮತೋಲಗೊಳಿಸಿದ್ದ ಒಡಂಬಡಿಕೆಯನ್ನು ತಲೆಕೆಳಗಾಗಿಸಿದೆ.
ಈಶಾನ್ಯ ಭಾರತದ ಎಲ್ಲ ರಾಜ್ಯಗಳಲ್ಲಿ ಅಲ್ಲಿಯ ಮೂಲನಿವಾಸಿಗಳ ಅಸ್ಮಿತೆಗಳು ಹೊಸದಾಗಿ ಪೌರತ್ವ ಪಡೆಯುವ ಜನಗಳು ದೊಡ್ಡಪ್ರಮಾಣದಲ್ಲಿ ಬಂದು ಸೇರುವುದರಿಂದಾಗಿ ಮುಳುಗಿ ಹೋಗಬಹುದು ಎಂಬ ಭಯ ಮೂಡಿದೆ.
ಸಂವಿಧಾನದ ಆರನೇ ಶೆಡ್ಯೂಲಿನ ಅಡಿಯಲ್ಲಿ ಬರುವ ಬುಡಕಟ್ಟು ಪ್ರದೇಶಗಳಿಗೆ ಮತ್ತು ಇನ್ನರ್ ಲೈನ್(ಒಳಗಣ ರೇಖೆ) ಇರುವ ಪ್ರದೇಶಗಳಿಗೆ ಈ ಸಿ.ಎ.ಬಿ.ಯಿಂದ ವಿನಾಯ್ತಿ ಕೊಟ್ಟು ಅವರನ್ನು ಸಮಾಧಾನ ಪಡಿಸುವ ಮೋದಿ ಸರಕಾರದ ಪ್ರಯತ್ನ ವಿಫಲವಾಗಿದೆ. ಈ ಸುರಕ್ಷಿತ ಕ್ಷೇತ್ರಗಳು ಹೊರಗಿಂದ ಅಲ್ಲಿಯೇ ನೆಲೆಸಲು ಬರುವ ಜನಗಳಿಂದ ಸತತವಾಗಿ ಒತ್ತಡಗಳನ್ನು ಎದುರಿಸುತ್ತಲೇ ಇರುವುದರಿಂದಾಗಿ ಮೋದಿ ಸರಕಾರದ ಈ ಪ್ರಯತ್ನ ಫಲ ಕೊಟ್ಟಿಲ್ಲ.
ಸಿ.ಎ.ಬಿ. ಮತ್ತು ಎನ್.ಆರ್.ಸಿ. ಯನ್ನು ಒಟ್ಟಾಗಿ ಕಾಣಬೇಕು. ಸಿ.ಎ.ಬಿ. ಮುಸ್ಲಿಮೇತರ ವಲಸಿಗರನ್ನು ನಾಗರಿಕರೆಂದು ಕಾನೂನುಬದ್ಧಗೊಳಿಸಿದರೆ, ಎನ್.ಆರ್.ಸಿ. ಮುಸ್ಲಿಂ ನುಸುಳುಕೋರರು ಎನ್ನಲಾಗುವವರ ಮೇಲೆ ಗುರಿಯಿಡುತ್ತದೆ. ಬಿಜೆಪಿ ಇಟ್ಟುಕೊಂಡಿರುವ ಗುರಿಯೆಂದರೆ, ಎರಡನೇ ದರ್ಜೆಯ ನಾಗರಿಕರು ಎಂಬೊಂದು ವಿಧವನ್ನು ಸೃಷಿಸುವುದು ಮತ್ತು ಅವರ ಹಕ್ಕುಗಳನ್ನು ತೀವ್ರವಾಗಿ ಮಿತಿಗೊಳಿಸುವುದು. ಈ ಯೋಚನೆಯ ಹಿಂದೆ ಇರುವುದು ವಿ.ಡಿ.ಸಾವರ್ಕರ್ ಪ್ರತಿಪಾದಿಸಿದ ಎರಡು-ರಾಷ್ಟ್ರಗಳ ಸಿದ್ಧಾಂತ.
ಸಿ.ಎ.ಬಿ. ಮತ್ತು ಎನ್.ಆರ್.ಸಿ.ಯ ಎರಡು ಕಡೆಗಳಿಂದ ಸುತ್ತುವರೆಯುವ ತಂತ್ರವನ್ನು ಬಿಜೆಪಿ-ಆರೆಸ್ಸೆಸ್ನ ಸಂಕುಚಿತ ರಾಜಕಾರಣಕ್ಕೆ ಹೊಂದುವಂತೆ ಕೋಮು ಆತಂಕಗಳನ್ನು ಹೆಚ್ಚಿಸಲು ಮತ್ತು ಒಂದು ಹೊಸ ವಿಭಜನಕಾರೀ ಅಜೆಂಡಾವನ್ನು ಸೃಷ್ಟಿಸಲು ಉಪಯೋಗಿಸಲಾಗುತ್ತದೆ.
ಈ ಪೌರತ್ವ ತಿದ್ದುಪಡಿ ಮಸೂದೆಗೆ ಸುಪ್ರಿಂ ಕೋರ್ಟಿನಲ್ಲಿ ಸವಾಲು ಹಾಕಬೇಕು. ಹಾಗೆ ಮಾಡುತ್ತಲೇ, ಸಿ.ಎ.ಬಿ.-ಎನ್.ಆರ್.ಸಿ.ಗೆ ಸಂಬಂಧಪಟ್ಟಂತೆ ಬಿಜೆಪಿಯ ದುಷ್ಟತಂತ್ರಗಳನ್ನು ಬಯಲಿಗೆಳೆಯಲು ವ್ಯಾಪಕವಾದ ಪ್ರಚಾರಾಂದೋಲನವನ್ನು ನಡೆಸಬೇಕು.
(ಈ ವಾರದ ಜನಶಕ್ತಿ ವಾರ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ
ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.
ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.
ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಡಿಕೇರಿಯಲ್ಲಿ ನಡೆದ ಜನಧ್ವನಿ-2 ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದೆ.
ಸಂವಿಧಾನಕ್ಕೆ ಅಪಾಯ ಎಂದರೆ ದೇಶದ ಮಹಿಳೆಯರು, ಬಡವರು, ಮಧ್ಯಮ ವರ್ಗದವರು, ಶೂದ್ರರು, ಶ್ರಮಿಕರ ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ.
ಭಾರತದಲ್ಲಿ ಪ್ರಜಾತಂತ್ರ ಅಪಾಯದಲ್ಲಿದೆ. ಇದನ್ನು ಉಳಿಸುವ ಅನಿವಾರ್ಯತೆ ನಮ್ಮೆಲ್ಲರ ಮುಂದಿದೆ. ಈ ಲೋಕಸಭಾ ಚುನಾವಣೆ ನಮಗೊಂದು… pic.twitter.com/UapeRxBcZP
— Siddaramaiah (@siddaramaiah) April 14, 2024
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ವಿವಿಧ ಜಿಲ್ಲೆಗಳಲ್ಲಿ ಡಾ. ಬಾಬು ಜಗಜೀವನ್ ರಾಮ್ 117ನೇ ಜನ್ಮ ದಿನಾಚರಣೆ
ಸುದ್ದಿದಿನ ಡೆಸ್ಕ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಾ. ಬಾಬು ಜಗಜೀವನ್ ರಾಮ್ ಅವರ 117ನೇ ಜನ್ಮ ದಿನಾಚರಣೆ ಪ್ರಯುಕ್ತ ವಿಧಾನ ಸೌದದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ್ಪ, ಹಿರಿಯ ಶಾಸಕ ಈ. ತುಕಾರಾಮ್, ಮಾಜಿ ಸಚಿವ ಹೆಚ್.ಆಂಜನೇಯ, ವಿಧಾನ ಪರಿಷತ್ ಸದಸ್ಯ ಸುದಾಮ ದಾಸ್, ಮಹಿಳಾ ಆಯೋಗದ ಅದ್ಯಕ್ಷೆ ಡಾ. ನಾಗಲಕ್ಷ್ಮಿ ಸೇರಿ ಹಲವರು ಉಪಸ್ಥಿತರಿದ್ದರು. ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ ರಾಂ ಅವರ ಜನ್ಮ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು.
ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಜಗಜೀವನರಾಂ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಮಂಡ್ಯದ ಡಿಸಿ ಪಾರ್ಕ್ ಎದುರು ಇರುವ ಜಗಜೀವನ್ರಾಮ್ ಪ್ರತಿಮೆಗೆ ಜಿಲ್ಲಾಡಳಿತದ ವತಿಯಿಂದ ಮಾಲಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಎಸ್ಪಿ ಎನ್.ಯತೀಶ್ ಸೇರಿದಂತೆ ಅಧಿಕಾರಿಗಳ ವರ್ಗ ಹಾಗೂ ಜಗಜೀವನ್ರಾಮ್ ಅನುಯಾಯಿಗಳು ಭಾಗವಹಿಸಿದ್ದರು.
ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಬಾಬು ಜಗಜೀವನ ರಾಂ ಅವರ ಅವರ 117ನೇ ಜಯಂತಿಯನ್ನು ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾಂಕೇತಿಕವಾಗಿ ಆಚರಿಸಲಾಯಿತು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಾಬು ಜಗಜೀವನ್ ರಾಂ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಇಂದು ಚುನಾವಣಾ ಆಯೋಗ ಸಮಾವೇಶ
ಸುದ್ದಿದಿನ ಡೆಸ್ಕ್ : ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ 11 ರಾಜ್ಯಗಳ ನಗರ ಪಾಲಿಕೆ ಆಯುಕ್ತರು ಮತ್ತು ಆಯ್ದ ಜಿಲ್ಲಾ ಚುನಾವಣಾ ಅಧಿಕಾರಿಗಳೊಂದಿಗೆ ಕೇಂದ್ರ ಚುನಾವಣಾ ಆಯೋಗ ಇಂದು ದೆಹಲಿಯಲ್ಲಿ ಸಮಾವೇಶ ನಡೆಸಲಿದೆ.
ಈ ಸಮಾವೇಶದಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಚರ್ಚಿಸಲಾಗುವುದು ಮತ್ತು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಡಿಮೆ ಮತದಾನದ ಸಮಸ್ಯೆಯನ್ನು ಪರಿಹರಿಸಲು ಉದ್ದೇಶಿತ ಮತ್ತು ನಿರ್ದಿಷ್ಟ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಲಾಗುವುದು.
ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಹೈದರಾಬಾದ್, ಅಹಮದಾಬಾದ್, ಪುಣೆ, ಥಾಣೆ, ನಾಗ್ಪುರ, ಪಾಟ್ನಾ ಸಾಹಿಬ್, ಲಖನೌ ಮತ್ತು ಕಾನ್ಪುರ ನಗರ ಪಾಲಿಕೆಯ ಆಯುಕ್ತರು ಮತ್ತು ಬಿಹಾರ ಮತ್ತು ಉತ್ತರದ ಆಯ್ದ ಜಿಲ್ಲಾ ಚುನಾವಣಾ ಅಧಿಕಾರಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತರುಗಳಾದ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243