ದಿನದ ಸುದ್ದಿ
ಲೋಕರೂಢಿಯ ಮೀರಿ, ನಿರಾಕರಣೆಯೊಳಗಿನ ಸೌಜನ್ಯದ ಧ್ವನಿ ಸೌಂದರ್ಯ
- ಡಾ.ಎನ್.ಕೆ.ಪದ್ಮನಾಭ
ಲೋಕದ ರೂಢಿಗಳ ಮೀರುವುದನ್ನು ಸಾಂಪ್ರದಾಯಿಕ ದೃಷ್ಟಿಕೋನವು ಅಕ್ಷಮ್ಯ ಎಂದು ಪರಿಗಣಿಸುತ್ತದೆ. ಅಷ್ಟೇ ಅಲ್ಲ, ಮೀರಿದರೆ ಆಗುವ ಅಪಾಯಗಳನ್ನೂ ನೆನಪಿಸುತ್ತಾ ಭಯ ಹುಟ್ಟಿಸುತ್ತಾ ಚೌಕಟ್ಟುಗಳ ವ್ಯಾಪ್ತಿಯನ್ನು ಹಿಗ್ಗಿಸುತ್ತದೆ.
ಸ್ಥಗಿತತೆ ಶಾಶ್ವತವಾಗಿರಬೇಕು ಎಂಬ ಹುಮ್ಮಸ್ಸಿನಲ್ಲಿ ಚಲನೆಯ ನಿಜದಜೀವಂತಿಕೆಯನ್ನುಇಲ್ಲವಾಗಿಸುವುದರಕಡೆಗೇಅತ್ಯುತ್ಸಾಹದಲ್ಲಿ ಮುನ್ನಡೆಯುತ್ತಿರುತ್ತದೆ. ಈಗ ಅದರದ್ದು ಕೇವಲ ಅತ್ಯುತ್ಸಾಹವಾಗಿಯಷ್ಟೇ ಉಳಿದಿಲ್ಲ. ಲೋಕರೂಢಿ ಮೀರುವವರನ್ನು ಬಲಿತೆಗೆದುಕೊಳ್ಳುವ ಮತ್ತು ನಿಶ್ಚಲ ಸ್ಥಿತಿಯನ್ನು ಹಿಂದೆಂದಿಗಿಂತಲೂದಟ್ಟವಾಗಿ ಪ್ರತಿಷ್ಠಾಪಿಸುವ ಕ್ರೌರ್ಯದರೂಪವನ್ನೂ ಪಡೆದುಕೊಂಡುಬಿಟ್ಟಿದೆ.
ಈ ಸಾಂಪ್ರದಾಯಿಕ ಜಾಡ್ಯವನ್ನು ಎದುರುಗೊಳ್ಳುವ, ಚಲನೆಯ ಜೀವಂತಿಕೆಗೆ ಜೀವತುಂಬುವ ದಾರಿಅತ್ಯಂತಕಠಿಣವಾದದ್ದು. ಈ ಹಂತದಲ್ಲಿ ಬಂಡಾಯದ ಆಕ್ರಾಮಕ ಆವೇಶಭರಿತಧ್ವನಿ ಮುಖ್ಯವೋಅಥವಾ ಸೌಜನ್ಯದ ಸಂಯಮಪೂರ್ಣ ಪ್ರಖರ ವೈಚಾರಿಕ ವಿವೇಚನೆಯ ಮಾದರಿ ಮಹತ್ವದ್ದೋಎಂಬುದನ್ನು ಸ್ಪಷ್ಟಪಡಿಸಿಕೊಳ್ಳಲೇಬೇಕಾಗುತ್ತದೆ.
ಇಲ್ಲದಿದ್ದರೆ ಸಾಂಪ್ರದಾಯಿಕತೆಯ ವಿಚಿತ್ರ ಹಠದತಕಧಿಮಿಗುಟ್ಟುವಿಕೆ ಮತ್ತಷ್ಟು ಹೆಚ್ಚಾಗುತ್ತದೆ. ಆಕ್ರಾಮಕ ಪರಿಭಾಷೆ ಮತ್ತುಆಕ್ರೋಶಭರಿತಆವೇಶಕ್ಕಿಂತ ಸೌಜನ್ಯದ ಧ್ವನಿಯೊಂದಿಗಿನ ಮನವರಿಕೆಯ ಮಾತೃತ್ವದ ಶೈಲಿಯು ಸಾಮಾಜಿಕ ಚಲನೆಗೆ ಬೇಕಾದ ಪೂರಕ ವಾತಾವರಣ ಸೃಷ್ಟಿಸುತ್ತದೆ.
ಚೇತನ ಸೋಮೇಶ್ವರಅವರ ‘ಲೋಕರೂಢಿಯ ಮೀರಿ’ ಕೃತಿಯೊಳಗೆ ಇಂಥದ್ದೊಂದು ಸದಾಶಯವಿದೆ. ಎ.ಎನ್.ಮೂರ್ತಿರಾವ್ ಎಂಬ ವೈಚಾರಿಕ ವ್ಯಕ್ತಿತ್ವ ಸಾಮಾಜಿಕ ಸಾಂಪ್ರದಾಯಿಕತೆಯನ್ನು ಎದುರುಗೊಂಡ ವಿವೇಚನಾತ್ಮಕ ವೈಚಾರಿಕ ಹೆಜ್ಜೆಗಳ ಕುರಿತಾದಪ್ರಸ್ತಾಪವು ಈ ಕೃತಿಯ ಸದಾಶಯವನ್ನು ಇನ್ನಷ್ಟು ಅಧಿಕೃತಗೊಳಿಸುವಲ್ಲಿ ಯಶಸ್ವಿಯಾಗಿದೆ. ಸದ್ಯದ ಕಾಲವು ಚಲನೆಗೆ ಹೊರಳಿಕೊಳ್ಳುವ ದಾರಿಯಾವುದಾಗಿರಬೇಕುಎಂಬುದನ್ನು ಮನಗಾಣಿಸುವಲ್ಲಿಯೂಗೆದ್ದಿದೆ.
ಈ ಕೃತಿಯೊಳಗೇ ಅಡಕವಾಗಿರುವ ‘ಲೋಕರೂಢಿ ಮೀರುವ’ ಸದಾಶಯಕ್ಕೆ ಸದ್ಯದ ವೈಚಾರಿಕ ಬಿಕ್ಕಟ್ಟುಗಳ ಸ್ವರೂಪವನ್ನು ಬದಲಿಸುವ ಶಕ್ತಿ ಇದೆ. ವಾಚಾಳಿತನದ ಗೀಳಿನ ಪರಿಭಾಷೆಯನ್ನೇ ಬಹುದೊಡ್ಡ ಬಂಡಾಯ ಎಂಬ ತಪ್ಪುಕಲ್ಪನೆಯನ್ನುಇಲ್ಲವಾಗಿಸುವಂಥಮಾರ್ಗದರ್ಶಿಸೂತ್ರ ಹೊಳೆಸುವ ಗುಣಲಕ್ಷಣವಿದೆ. ಬಂಡಾಯ ಕ್ಕಿಂತ ತಿಳಿವ ತಿಳಿಗೊಳಿಸುವ ಕಾಳಜಿಯುತ ತಿಳುವಳಿಕೆಯ ಅಗತ್ಯವನ್ನು ಪ್ರತಿಪಾದಿಸುವ ನೋಟಕ್ರಮವಿದೆ. ‘ದೇವರ’ ಅಸ್ತಿತ್ವ ಅಥವಾಧರ್ಮವಲ್ಲದ ‘ಧರ್ಮ’ – ಇವೆರಡರ ನಿರಾಕರಣೆಯೊಳಗೂ ಅಡಗಿರಬಹುದಾದ ಸೌಜನ್ಯದಧ್ವನಿಸೌಂದರ್ಯವನ್ನುಕಾಣಿಸುವ ನಿಜದ ಬೆಳಕಿದೆ.
ಲೋಕರೂಢಿಯನ್ನು ಮೀರುವುದುಅಗತ್ಯ ಮಾತ್ರವಲ್ಲ, ಅನಿವಾರ್ಯತೆಯೂ ಹೌದು ಎಂಬುದನ್ನುಚೇತನ ಸೋಮೇಶ್ವರ ಅವರು ಆಪ್ತವಾಗಿ ಸ್ಪಷ್ಟಪಡಿಸುತ್ತಾರೆ. ಎ.ಎನ್.ಮೂರ್ತಿರಾವ್ಅವರಂಥ ಪ್ರಖರ ವೈಚಾರಿಕ ಶಕ್ತಿಯನ್ನು ಪಿ.ಎಚ್.ಡಿ ಸಂಶೋಧನೆಯ ಕೇಂದ್ರವಾಗಿಸಿಕೊಳ್ಳುವುದೂ ಒಂದು ಬಗೆಯ ಮೀರುವಕ್ರಮವೇಆಗಿದೆ.
ಉನ್ನತ ಶಿಕ್ಷಣ ವ್ಯವಸ್ಥೆಯ ಒಳಗೇ ಇರುವಕ್ಲೀಷಾ ಚೌಕಟ್ಟುಗಳನ್ನು ಒಡೆಯುವ ಮತ್ತು ಆ ಮೂಲಕ ವಿಶ್ವವಿದ್ಯಾಲಯಗಳೊಳಗಿನ ಸವಕಲು ರೂಢಿಗಳನ್ನು ಮೀರುವದಾರಿಯನ್ನೂತಮ್ಮ ಸಂಶೋಧನಾ ಪ್ರಬಂಧದ ಮೂಲಕ ಅವರು ಕಾಣಿಸಿದ್ದಾರೆ. ಇದನ್ನುಕೃತಿರೂಪದಲ್ಲಿ ಹೊರತಂದು ಸಾಮಾಜಿಕ ಚಲನೆಯ ಹಾದಿಯನ್ನು ‘ಅವಧಿ’ಯಜಿ.ಎನ್.ಮೋಹನ್ಅವರು ಅಧಿಕೃತಗೊಳಿಸಿದ್ದಾರೆ. ಈ ಹೆಜ್ಜೆಯು ಸಾಮಾಜಿಕ ಚಲನೆಯ ‘ಅವಧಿ’ಯನ್ನು ವಿಸ್ತರಿಸಿದ್ದರ ಸಂಕೇತವೂ ಹೌದು.
ಎಲ್ಲಾ ಕಾಲಗಳಲ್ಲೂ ವಿಜೃಂಭಿಸುವ ಲೋಕರೂಢಿಗಳೊಳಗಿನ ಟೊಳ್ಳುತನವನ್ನು ಪ್ರಶ್ನಿಸಿ ಅವುಗಳಿಗೆ ಪರ್ಯಾಯವಾದ ಆಲೋಚನೆಗಳನ್ನು ಹೊಳೆಸುವ ಪ್ರಯತ್ನಗಳು ನಡೆಯುತ್ತಲೇಇರುತ್ತವೆ. ಅವುಗಳಿಗೆ ಸಿಗುವ ಪ್ರತಿಸ್ಪಂದನೆ ಯಾವುದೇ ರೀತಿಯದ್ದೇ ಇರಲಿ, ಅವುಗಳು ತದನಂತರದ ಕಾಲಘಟಕ್ಕೆ ಬೇಕಾಗುವ ಮಾದರಿಗಳನ್ನು ಒದಗಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಸಾಹಿತ್ಯ ಮತ್ತು ಕಲಾ ಮಾಧ್ಯಮಗಳು ಇಂಥ ಮಾದರಿಗಳನ್ನು ಮುನ್ನೆಲೆಗೆತರುತ್ತವೆ. ಇವುಗಳ ಅಭಿವ್ಯಕ್ತಿಯು ಲೋಕೋದ್ಧಾರದ ನಿಜದದಾರಿಯನ್ನುಕಾಣಿಸುವ ಹೊಣೆಗಾರಿಕೆಯನ್ನುಅತ್ಯಂತ ಶ್ರದ್ಧೆಯಿಂದ ನಿರ್ವಹಿಸಿದೆ.
ಅಧಿಕಾರ ವ್ಯವಸ್ಥೆ, ರಾಜಕೀಯ ವಲಯ ಮತ್ತುರಂಜನೀಯಉದ್ಯಮದೇವರು, ಧರ್ಮ ಮತ್ತು ಮನುಷ್ಯ ಸಂಕುಚಿತತೆಯನ್ನೇತನ್ನ ಲಾಭಕ್ಕೆ ಬಳಸಿಕೊಂಡಾಗಲೆಲ್ಲಾ ಸಾಹಿತ್ಯ ಮತ್ತು ಕಲೆ ವಿವೇಚನೆಯಕಡೆಗೆ ಸಮಾಜವನ್ನು ಮುನ್ನಡೆಸುವಂಥ ಕಾಣ್ಕೆಗಳನ್ನು ನೀಡಿವೆ.
ಎ.ಎನ್.ಮೂರ್ತಿರಾವ್ಅವರ ಬರಹಗಳ ಹಿಂದಿನ ಸ್ಫೂರ್ತಿ ಈ ತರಹದ ಕಾಣ್ಕೆಗಳೇ. ಇವುಗಳನ್ನು ಗ್ರಹಿಸಿ ಒಂದು ಸ್ಪಷ್ಟ ವಿವೇಚನಾತ್ಮಕ ನಿಲುವು ತಳೆಯುವುದಕ್ಕೆ ‘ಲೋಕರೂಢಿಯ ಮೀರಿ’ ಕೃತಿ ನೆರವಾಗುತ್ತದೆ. ಈ ಕಾಣ್ಕೆಗಳನ್ನು ಸದ್ಯದ ವೈರುಧ್ಯಗಳ ನಡುವೆ ನೋಡುವ, ಆ ಮೂಲಕ ವ್ಯಕ್ತಿಗತವಾಗಿ ಸ್ಪಷ್ಟಗೊಳ್ಳುವುದಕ್ಕೆ ಚೇತನ ಸೋಮೇಶ್ವರಅವರ ವಿಶ್ಲೇಷಣೆಯಕ್ರಮವುಓದುಗರನ್ನು ಸಿದ್ಧಪಡಿಸುತ್ತದೆ.
ಈಗ ಅಧಿಕಾರ ಕೇಂದ್ರಗಳು ಮತ್ತು ಅವುಗಳನ್ನು ಪ್ರತಿನಿಧಿಸುವವರು ‘ಅಜ್ಜ ನೆಟ್ಟಆಲದ ಮರ’ದಆಶ್ರಯ ಪಡೆದುಅದರ ನೆರಳಿನ ಕೆಳಗೆ ವಿಕೃತಿಯ ಬಿಂಬಗಳನ್ನು ಮೂಡಿಸುತ್ತಲೇಇದ್ದಾರೆ. ಒಂದು ಕಡೆಗೆ ದೇವರು, ಧರ್ಮದಕುರಿತ ನಂಬಿಕೆಯಜಗತ್ತು. ಇನ್ನೊಂದುಕಡೆಗೆ ಇವುಗಳನ್ನು ನಿರಾಕರಿಸುವ ವೈಚಾರಿಕ ಲೋಕ. ಇವೆರಡನ್ನೂ ಪರಸ್ಪರ ವಿರೋಧಾತ್ಮಕವಾಗಿ ನೋಡಬೇಕೇ ಅಥವಾ ಒಂದನ್ನೊಂದು ಅನುಸಂಧಾನಗೊಳಿಸಿಕೊಂಡು ವರ್ತಮಾನವನ್ನು ಸುಂದರವಾಗಿಸಿಕೊಳ್ಳುವುದರ ಕಡೆಗೆಗಮನಹರಿಸಬೇಕೇ ಎಂಬ ದ್ವಂದ್ವಕ್ಕೆ ಈ ಕೃತಿ ಪರಿಹಾರ ಹೇಳುತ್ತದೆ.
ನಂಬಿಕೆ ಮತ್ತು ವೈಚಾರಿಕತೆಇವೆರಡರ ನಡುವಿನ ಅನುಸಂಧಾನಾತ್ಮಕ ನಿಕಷವು ಸಮಾಜಕ್ಕೆ ಬೇಕಾದ ಒಳನೋಟಗಳನ್ನು ಕಟ್ಟಿಕೊಳ್ಳಲು ಸಹಾಯಕವಾಗುತ್ತದೆ. ವಚನ, ದಾಸ ಮತ್ತುತತ್ವಪದ ಸಾಹಿತ್ಯ ಪ್ರತಿಪಾದಿಸಿದ್ದು ಈ ತರಹದ ಒಳನೋಟಗಳನ್ನೇ. ನಂಬಿಕೆ ಮೌಢ್ಯಕ್ಕೆತಿರಗುದ ಹಾಗೆ ನೋಡಿಕೊಂಡ ಒಳನೋಟಗಳಿವು. ಇವನ್ನು ಸರಿಯಾಗಿ ಅರ್ಥೈಸಿಕೊಂಡ ಕಾರಣಕ್ಕಾಗಿಯೇ ಈ ದೇಶವು ವೈವಿಧ್ಯತೆಯ ನೆಲೆಯಾಗಿದೆ. ಇದನ್ನು ಗೊತ್ತುಮಾಡಿಕೊಳ್ಳುವುದಕ್ಕೆ ಈ ಕೃತಿಒತ್ತಾಸೆ ಮೂಡಿಸುತ್ತದೆ.
ದೇವಾಲಯಗಳು, ಧರ್ಮಗಳನ್ನು ಆಧರಿಸಿಕೊಂಡು ಪ್ರತಿಷ್ಠಾಪಿತವಾಗುವ ಸಾಮಾಜಿಕ-ದೈವಿಕ ಸಂಸ್ಥೆಗಳು ನಿಜವಾದ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವಾಗ ಲೋಕರೂಢಿಗಳನ್ನೇ ಆಶ್ರಯಿಸುತ್ತವೆ. ಬಹುಹಿಂದಿನಿಂದಲೂ ನಡೆದುಕೊಂಡು ಬಂದ ಸಾಂಪ್ರದಾಯಿಕ ವಿಧಿವಿಧಾನಗಳನನ್ನು ವೈಭವೀಕರಿಸಿ ದೇವರ ಪರಿಕಲ್ಪನೆಯನ್ನು ಮೌಢ್ಯಕ್ಕೆತಿರುಗಿಸುತ್ತವೆ.
ನಿಷ್ಠುರ ವಿಚಾರವಾದಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತುಧರ್ಮನಿಷ್ಠ ಮಹಾತ್ಮಾಗಾಂಧೀಜಿ ಅವರ ನಡುವಿನ ಸಂವಾದ ನಂಬಿಕೆಯಜಗತ್ತನ್ನುಗ್ರಹಿಸುವ ಮಾದರಿಯನ್ನು ಸೃಷ್ಟಿಸಿದೆ. ನಂಬಿಕೆಯಜಗತ್ತಿನ ಬೆಂಬಲದಲ್ಲಿಜನರಉದ್ಧಾರದ ಆದರ್ಶೀಕೃತ ಆಲೋಚನೆ ಗಾಂಧೀಜಿಅವರದ್ದಾಗಿತ್ತು.
ವಾಸ್ತವವಾದಿ ಅಂಬೇಡ್ಕರ್ಅವರ ವೈಚಾರಿಕತೆಯು ನಂಬಿಕೆಯಜಗತ್ತು ಯಥಾಸ್ಥಿತಿವಾದವನ್ನು ಮುಂದುವರೆಸುವಂಥದ್ದು ಎಂಬುದನ್ನು ಪ್ರತಿಪಾದಿಸಿತ್ತು. ಈಗ ಅಂಬೇಡ್ಕರ್ ಅವರ ಗ್ರಹಿಕೆಯಂತೆಯೇ ನಂಬಿಕೆಯ ಜಗತ್ತು ಉಳ್ಳವರ ಸ್ವತ್ತಾಗಿದೆ. ಜಾತಿ ಪ್ರಾಬಲ್ಯದ ಬೇರುಗಳನ್ನು ಗಟ್ಟಿಗೊಳಿಸಿದೆ.
ಅಸಮಾನತೆಯನ್ನುಇನ್ನಷ್ಟು ವಿಸ್ತರಿಸುತ್ತಲೇ ಇದೆ. ಸಾಮಾಜಿಕ ಸ್ಥಗಿತತೆಯನ್ನು ಪೋಷಿಸುತ್ತಲೇಇದೆ. ಇಂಥ ಸಂದರ್ಭದಲ್ಲಿ ‘ಲೋಕರೂಢಿಯ ಮೀರಿ’ ಕನ್ನಡದ ದೃಷ್ಟಿಕೋನವನ್ನು ಎತ್ತರಿಸುವ ಪ್ರಜ್ಞೆಯಾಗುತ್ತದೆ. ಸಾಮಾಜಿಕ ಚಲನೆಗೆ ಬೇಕಾಗುವ ಮುನ್ನುಡಿಯಾಗುತ್ತದೆ.
ಮೂರ್ತಿರಾಯರಚಿಂತನೆಯನ್ನು ವಿಶ್ಲೇಷಿಸುತ್ತಾಚೇತನ ಸೋಮೇಶ್ವರಅವರುಅನನ್ಯ ಹೊಳಹುಗಳನ್ನು ಹೊಳೆಸುವ ಮಾದರಿಕೃತಿಯನ್ನು ರಚಿಸಿದ್ದಾರೆ. ‘ಲೋಕರೂಢಿಯ ಮೀರಿ’ ಶೀರ್ಷಿಕೆಯ ಅನನ್ಯಾರ್ಥಅನ್ವರ್ಥಕತೆಗೆ ಸಾಕ್ಷಿಯಾಗಿಇಲ್ಲಿಯ ವಿವಿಧ ಅಧ್ಯಾಯಗಳಿವೆ. ಬಹುತೇಕ ಸಂಶೋಧನಾ ಪ್ರಬಂಧಗಳಲ್ಲಿರುವಂತೆ ಇಲ್ಲಿಹಿಂದಿನ ಚಿಂತನೆಗಳ ಕುರಿತಾದ ರೆಫರೆನ್ಸ್ಗಳ ಹೊರೆಗಳಿಲ್ಲ.
ಮೂರ್ತಿರಾಯರು ಮತ್ತು ಹಿಂದಿನ ಚಿಂತನೆಯ ಕ್ರಮಗಳನ್ನು ತಮ್ಮನಿಲುವುಗಳ ಸಮರ್ಥನೆಗೆ ಎಷ್ಟು ಬೇಕೋ ಅಷ್ಟು ಬಳಸಿಕೊಂಡು ಓದುಗರು ಈ ಕ್ಷಣಕ್ಕೆ ಹೇಗೆ ಯೋಚಿಸಬೇಕುಎನ್ನುವುದರಕಡೆಗೇ ಗಮನ ಕೇಂದ್ರೀಕರಿಸುತ್ತಾರೆ. ಅಭಿಮಾನಪೂರ್ವಕಆರಾಧನಾ ಮನೋಭಾವದ ಬದಲು ಮೂರ್ತಿರಾಯರ ಜೀವಧ್ವನಿಯಾಗಿದ್ದ ಚಿಕಿತ್ಸಕ ದೃಷ್ಟಿಕೋನವನ್ನೇ ಆಧರಿಸಿಕೊಂಡು ಚೇತನ ಸೋಮೇಶ್ವರಕೃತಿಯ ಒಳನೋಟಗಳನ್ನು ಕಟ್ಟಿದ್ದಾರೆ.
ಅವರು ಸಂಸ್ಕೃತಿಯನ್ನುಇಲ್ಲಿ ಮೌಲ್ಯನಿಷ್ಠ ಪರಿಕಲ್ಪನೆಯನ್ನಾಗಿಇಲ್ಲಿ ಬಿಂಬಿಸಿದ್ದಾರೆ. ಒಳಿತಿನ ಪರವಾಗಿ ನಿಂತು ಜಾತ್ಯಾತೀತವಾಗುವ ದಾರಿಯಾವುದು ಎಂಬುದನ್ನು ಮನಗಾಣಿಸಿದ್ದಾರೆ. ಮತ-ಧರ್ಮಗಳು ಜೀವಪರ ವೈಶಿಷ್ಟ್ಯವನ್ನು ಹಿಡಿದಿಟ್ಟಿದ್ದಾರೆ. ಸ್ವಾತಂತ್ರ್ಯದ ಒಳಗೇ ಇರುವಜೀವಂತಿಕೆಯನ್ನುಕಾಣಿಸುತ್ತಾರೆ.
ಸಮಾನತೆಯಗಮ್ಯವೇ ನಿರ್ಣಾಯಕಎಂಬುದನ್ನು ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ. ಇಡೀ ಶೈಕ್ಷಣಿಕ ವ್ಯವಸ್ಥೆಯುಜ್ಞಾನದ ಮಹಾಮಾರ್ಗವಾಗಿ ಪುನರುತ್ಥಾನಗೊಳ್ಳುವ ಬಗೆಯನ್ನು ಚಿತ್ರಿಸಿದ್ದಾರೆ. ಅಲ್ಲದೇ ಈ ಮಹಾಮಾರ್ಗ ಲೋಕರೂಢಿಯೊಳಗಿನ ಮಿತಿಗಳನ್ನು ಮೀರುವ ವಿವೇಚನಾತ್ಮ ವೈಚಾರಿಕತೆಯನ್ನು ತಂದುಕೊಳ್ಳುವ ಪ್ರೇರಣೆಯೂ ಹೌದುಎಂದುದೃಢೀಕರಿಸುತ್ತಾರೆ. ಇವೆಲ್ಲ ಆಶಯಗಳು ಎ.ಎನ್. ಮೂರ್ತಿರಾಯರಚಿಂತನೆಯನ್ನು ಹೊಸ ಕಾಲದಲ್ಲಿ ಹೇಗೆ ಅನ್ವಯಿಸಿಕೊಳ್ಳಬೇಕು ಎಂಬುದನ್ನು ಹೇಳಿಕೊಡುತ್ತವೆ.
ಈ ಕೃತಿಯನ್ನುಯಾಕೆಓದಬೇಕು? ಓದಲೇಬೇಕು.
ದೇವರು, ಧರ್ಮವನ್ನು ಸ್ವಯಂ ಲಾಭಕ್ಕೆ ಬಳಸಿಕೊಳ್ಳುವ ಹುನ್ನಾರಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ, ನಂಬಿಕೆಯಜಗತ್ತನ್ನು ಕೈಗೊಂಬೆಯಾಗಿಸಿಕೊಂಡ ನಾಯಕರೆನ್ನಿಸಿಕೊಂಡ ನಾಯಕರಲ್ಲದವರ ಇಮೇಜಿನೊಳಗಿನ ಬಾಲಿಶತನವನ್ನುಅರಿಯುವುದಕ್ಕೆ. ದೇವರು ಎಂಬ ಅಮೂರ್ತ ಪರಿಕಲ್ಪನೆಯನ್ನು ಮಾನವೀಯಗೊಳಿಸಿಕೊಂಡು ಅದಕ್ಕೆಜೀವಪರತೆಯಜೀವಂತಿಕೆಯನ್ನು ತಂದುಕೊಳ್ಳುವುದಕ್ಕೆ.
ಅಸಮಾನತೆಯ ಅಂಶಗಳನ್ನೇ ಆಧರಿಸಿಕೊಂಡು ಸಂಘರ್ಷವನ್ನುಖಾಯಂ ಆಗಿರಿಸಿದ ವಿಧ್ವಂಸಕ ಶಕ್ತಿಗಳ ಹೆಜ್ಜೆಗಳನ್ನು ಗುರುತಿಸುವುದಕ್ಕೆ. ಎಲ್ಲಕ್ಕಿಂತ ಹೆಚ್ಚಾಗಿ ತರಹೇವಾರಿ ಮಿತಿಗಳೊಂದಿಗಿನ ಹತ್ತುಹಲವು ಲೋಕರೂಢಿಗಳನ್ನು ಮೀರಿ ನಿರ್ದಿಗಂತವಾಗಿಏರುವುದಕ್ಕೆ. ಅನಿಕೇತನದ ಹಾದಿಯಲ್ಲಿ ಸುದೀರ್ಘ ಪ್ರಯಾಣ ಕೈಗೊಳ್ಳುವುದಕ್ಕಾಗಿ.
(ವಿಳಾಸ:
ಡಾ.ಎನ್.ಕೆ.ಪದ್ಮನಾಭ
ಸಹಾಯಕ ಪ್ರಾಧ್ಯಾಪಕರು
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಎಸ್.ಡಿ.ಎಂ ಸ್ನಾತಕೋತ್ತರಕೇಂದ್ರ
ಉಜಿರೆ )
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಪಾಕ್ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ
ಸುದ್ದಿದಿನ,ಜಮ್ಮುಕಾಶ್ಮೀರ: ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಮತ್ತೆ ಡ್ರೋನ್ ಹಾರಾಟದ ಆತಂಕ ಎದುರಾಗಿದೆ. ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್ನಲ್ಲಿ ಪಾಕಿಸ್ತಾನ ಮೂಲದ್ದೆಂದು ಶಂಕಿಸಲಾದ ಡ್ರೋನ್ವೊಂದು ಕಾಣಿಸಿಕೊಂಡಿರುವುದು ಭದ್ರತಾ ಪಡೆಗಳನ್ನು ಅಲರ್ಟ್ ಮಾಡಿದೆ. ಗಡಿಯಾಚೆಯಿಂದ ನಡೆಯಬಹುದಾದ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ತಡೆಯಲು ಸೇನೆ ಹಾಗೂ ಭದ್ರತಾ ಪಡೆಗಳು ನಿಗಾ ಮತ್ತಷ್ಟು ಬಿಗಿಗೊಳಿಸಿವೆ.
ಹೈಲೈಟ್ಸ್ |
|
http://Visit : www.suddidina.com
ಬೆಹ್ರೂಟಿ ಗ್ರಾಮದ ಬಳಿ ಕಾಣಿಸಿಕೊಂಡ ಶಂಕಿತ ಡ್ರೋನ್
ಶುಕ್ರವಾರ ಸಂಜೆ ಬಾಲಕೋಟೆ ಪ್ರದೇಶದ ಬೆಹ್ರೂಟಿ ಗ್ರಾಮದ ಸಮೀಪ ಆಕಾಶದಲ್ಲಿ ಶಂಕಿತ ಡ್ರೋನ್ ಹಾರಾಟ ನಡೆಸಿರುವುದು ಸ್ಥಳೀಯರ ಹಾಗೂ ಭದ್ರತಾ ಪಡೆಗಳ ಗಮನಕ್ಕೆ ಬಂದಿದೆ. ಬಳಿಕ ಅದು ಮಂಗಲ್ನಾರ್-ದಬ್ರೋಟ್ ಪ್ರದೇಶದತ್ತ, ಅಂದರೆ ಗಡಿ ಪ್ರದೇಶದ ಸಮೀಪಕ್ಕೆ ತೆರಳಿ ಪಾಕಿಸ್ತಾನದ ದಿಕ್ಕಿನಲ್ಲಿ ವಾಪಸ್ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ರೋನ್ ಕಾಣಿಸಿಕೊಂಡ ಮಾಹಿತಿ ಸಿಗುತ್ತಿದ್ದಂತೆ LoC ವ್ಯಾಪ್ತಿಯಲ್ಲಿ ಭದ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ಬೆಳಗ್ಗೆಯಿಂದಲೇ ಸರ್ಚ್ ಆಪರೇಷನ್ ಆರಂಭಿಸಲಾಗಿದ್ದು, ಡ್ರೋನ್ ಮೂಲಕ ಯಾವುದೇ ವಸ್ತು, ಶಸ್ತ್ರಾಸ್ತ್ರ ಅಥವಾ ಅನುಮಾನಾಸ್ಪದ ಸಾಮಗ್ರಿಗಳನ್ನು ಕೆಳಗೆ ಇಳಿಸಲಾಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.
3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಶೋಧ
ಡ್ರೋನ್ ಆತಂಕದ ನಡುವೆಯೇ ಜಮ್ಮು-ಕಾಶ್ಮೀರದ ಉಧಂಪುರ, ಕಥುವಾ ಮತ್ತು ರಾಜೌರಿ ಜಿಲ್ಲೆಗಳ ವಿಶಾಲ ಅರಣ್ಯ ಪ್ರದೇಶಗಳಲ್ಲೂ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ತೀವ್ರಗೊಳಿಸಿವೆ.
ಉಧಂಪುರ-ಕಥುವಾ ಅರಣ್ಯ ಪ್ರದೇಶದ ಖುಬನ್, ನಾಗೈನ್, ಖ್ಟ್ರೈಲ್, ಗೋಡು ಫಲಾಲ್, ಪದೇತಾರ್, ಚೋರ್ ಮೊಟ್ಟು, ಕಿಯಾ, ಖೇಬಾ, ಭೇದ್, ಮಾರ್ತಾ ಹಾಗೂ ಜೋಫರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೊಲೀಸರು, ಸೇನೆ ಮತ್ತು ಅರೆಸೇನಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ.
ರಾಜೌರಿಯಲ್ಲಿ ಶಸ್ತ್ರಸಜ್ಜಿತರ ಶಂಕೆ
ರಾಜೌರಿ ಜಿಲ್ಲೆಯ ಗೈಬಾಸ್, ಮಿಥಿಯಾನಿ, ಮೊಗ್ಲಾ ಮತ್ತು ನಾರ್ಲಾ ಪ್ರದೇಶಗಳಲ್ಲೂ ಪ್ರತ್ಯೇಕ ಸರ್ಚ್ ಆಪರೇಷನ್ ಕೈಗೊಳ್ಳಲಾಗಿದೆ. ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಸಂಚರಿಸುತ್ತಿರುವುದನ್ನು ಗ್ರಾಮಸ್ಥರು ಗಮನಿಸಿ ಭದ್ರತಾ ಪಡೆಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಮಾಹಿತಿ ಆಧರಿಸಿ ಭದ್ರತಾ ಪಡೆಗಳು ವ್ಯಾಪಕ ಶೋಧ ನಡೆಸಿದರೂ, ಇದುವರೆಗೆ ಯಾವುದೇ ಶಂಕಿತ ವ್ಯಕ್ತಿಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಡಿಯಲ್ಲಿ ಹೆಚ್ಚಿದ ಕಣ್ಗಾವಲು
ಡ್ರೋನ್ ಹಾರಾಟ ಹಾಗೂ ಅರಣ್ಯ ಪ್ರದೇಶಗಳಲ್ಲಿ ಶಂಕಿತ ವ್ಯಕ್ತಿಗಳ ಚಲನವಲನದ ಮಾಹಿತಿ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೂ ತಕ್ಷಣ ಮಾಹಿತಿ ನೀಡುವಂತೆ ಸ್ಥಳೀಯರಿಗೂ ಸೂಚನೆ ನೀಡಲಾಗಿದೆ.
ಪ್ರಸ್ತುತ ಕಾರ್ಯಾಚರಣೆಯ ಪ್ರಮುಖ ಉದ್ದೇಶ ಗಡಿಯಾಚೆಯಿಂದ ಸಂಭವಿಸಬಹುದಾದ ಒಳನುಸುಳುವಿಕೆ ಅಥವಾ ಅನುಮಾನಾಸ್ಪದ ಸಾಗಾಟವನ್ನು ತಡೆಯುವುದು ಮತ್ತು ಪ್ರದೇಶದಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ.

ದಿನದ ಸುದ್ದಿ
ವೈದ್ಯಕೀಯ ಕಾಲೇಜುಗಳ ಹಾಸ್ಟೆಲ್ ಕ್ಯಾಂಟೀನ್ಗಳಿಗೆ ಅಧಿಕಾರಿಗಳ ಶಾಕ್! 34 ಕ್ಯಾಂಟೀನ್ ಪರಿಶೀಲನೆ, 5ಕ್ಕೆ ನೋಟಿಸ್
ಸುದ್ದಿದಿನ,ಬೆಂಗಳೂರು: ವೈದ್ಯಕೀಯ ಕಾಲೇಜುಗಳ ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಆಹಾರದ ಗುಣಮಟ್ಟ ಹಾಗೂ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಆಹಾರ ಸುರಕ್ಷತಾ ಇಲಾಖೆ ವಿಶೇಷ ಪರಿಶೀಲನೆ ನಡೆಸಿದೆ. ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳ ಹಾಸ್ಟೆಲ್ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು 34 ಕ್ಯಾಂಟೀನ್ಗಳಿಗೆ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಆಹಾರ ಸುರಕ್ಷತಾ ನಿಯಮಗಳ ಪಾಲನೆಯಲ್ಲಿ ಲೋಪದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ 5 ಕ್ಯಾಂಟೀನ್ಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಹೈಲೈಟ್ಸ್ |
|
http://Visit : www.suddidina.com
ಕ್ಯಾಂಟೀನ್ಗಳಲ್ಲಿ ಆಹಾರ ಸುರಕ್ಷತೆಗೆ ಒತ್ತು
ವೈದ್ಯಕೀಯ ಕಾಲೇಜುಗಳ ಹಾಸ್ಟೆಲ್ಗಳಲ್ಲಿ ನೂರಾರು ವಿದ್ಯಾರ್ಥಿಗಳು ಪ್ರತಿನಿತ್ಯ ಕ್ಯಾಂಟೀನ್ ಆಹಾರವನ್ನೇ ಅವಲಂಬಿಸಿರುತ್ತಾರೆ. ಹೀಗಾಗಿ ಆಹಾರದ ಗುಣಮಟ್ಟ, ಅಡುಗೆಮನೆಯ ಸ್ವಚ್ಛತೆ, ಆಹಾರ ಪದಾರ್ಥಗಳ ಸಂಗ್ರಹಣೆ, ಲೇಬಲಿಂಗ್ ಹಾಗೂ ಅವಧಿ ಪರಿಶೀಲನೆ ಅತ್ಯಂತ ಮಹತ್ವದ್ದಾಗಿದೆ.
ಈ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ವಿವಿಧ ವೈದ್ಯಕೀಯ ಕಾಲೇಜುಗಳ ಹಾಸ್ಟೆಲ್ ಕ್ಯಾಂಟೀನ್ಗಳನ್ನು ಪರಿಶೀಲಿಸಿ, ಆಹಾರ ತಯಾರಿಕೆಯಿಂದ ಹಿಡಿದು ಪದಾರ್ಥಗಳ ಸಂಗ್ರಹಣೆವರೆಗೆ ಹಲವು ಅಂಶಗಳನ್ನು ಪರಿಶೀಲಿಸಿದ್ದಾರೆ. ನಿಯಮ ಪಾಲನೆಯಲ್ಲಿ ವ್ಯತ್ಯಾಸ ಕಂಡುಬಂದ ಕ್ಯಾಂಟೀನ್ಗಳಿಗೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ.
ಅವಧಿ ಮೀರಿದ ರವೆ, ಹಾಲು ಪತ್ತೆ
ಪರಿಶೀಲನೆ ವೇಳೆ ಒಂದು ಕ್ಯಾಂಟೀನ್ನಲ್ಲಿ ಲೇಬಲಿಂಗ್ಗೆ ಸಂಬಂಧಿಸಿದ ಉಲ್ಲಂಘನೆಗಳು ಬೆಳಕಿಗೆ ಬಂದಿವೆ. ಇದೇ ವೇಳೆ ಅಡುಗೆ ಮನೆಯಲ್ಲಿ ಸಂಗ್ರಹಿಸಿಡಲಾಗಿದ್ದ 07 ಕೆ.ಜಿ. ಅವಧಿ ಮೀರಿದ ರವೆ ಹಾಗೂ 08 ಲೀಟರ್ ಅವಧಿ ಮೀರಿದ ಹಾಲು ಪತ್ತೆಯಾಗಿದೆ.
ವಿದ್ಯಾರ್ಥಿಗಳ ಸೇವನೆಗೆ ಬಳಸುವ ಆಹಾರ ಪದಾರ್ಥಗಳು ಅವಧಿ ಮೀರಿದ ಬಳಿಕವೂ ಅಡುಗೆಮನೆಯಲ್ಲಿ ಸಂಗ್ರಹಿಸಿರುವುದು ಗಂಭೀರ ಲೋಪವಾಗಿದೆ. ಅಧಿಕಾರಿಗಳು ಈ ಪದಾರ್ಥಗಳನ್ನು ತಕ್ಷಣ ಜಪ್ತಿ ಮಾಡಿಕೊಂಡಿದ್ದು, ಸಂಬಂಧಿತ ಕ್ಯಾಂಟೀನ್ ವಿರುದ್ಧ ಮುಂದಿನ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ
ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿರುವ ಸಂಬಂಧಿತ ಆಹಾರ ಉದ್ದಿಮೆದಾರರ ವಿರುದ್ಧ ಅನ್ವಯವಾಗುವ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಮಾನದಂಡಗಳ ಕಾಯ್ದೆ ಹಾಗೂ ನಿಯಮಗಳ ಅಡಿಯಲ್ಲಿ ಪ್ರಕರಣ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ.
ಈ ಪ್ರಕರಣಗಳನ್ನು ಸಕ್ಷಮ ಪ್ರಾಧಿಕಾರವಾದ ಅಪರ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರುಪಡಿಸಲು ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆಹಾರ ಸುರಕ್ಷತೆ ಇಲಾಖೆ ಆಯುಕ್ತ ಕೆ. ಶ್ರೀನಿವಾಸ್ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಆರೋಗ್ಯಕ್ಕೆ ಆದ್ಯತೆ
ವೈದ್ಯಕೀಯ ವಿದ್ಯಾರ್ಥಿಗಳು ಆರೋಗ್ಯ ಕ್ಷೇತ್ರದ ಭವಿಷ್ಯದ ಪ್ರಮುಖ ಭಾಗವಾಗಿರುವ ಹಿನ್ನೆಲೆಯಲ್ಲಿ, ಅವರ ಹಾಸ್ಟೆಲ್ ಆಹಾರದ ಗುಣಮಟ್ಟದ ಬಗ್ಗೆ ಇಲಾಖೆ ಹೆಚ್ಚಿನ ನಿಗಾ ವಹಿಸಿರುವುದು ಮಹತ್ವ ಪಡೆದಿದೆ. ಮುಂದಿನ ದಿನಗಳಲ್ಲೂ ಇಂತಹ ಪರಿಶೀಲನೆಗಳು ಮುಂದುವರಿಯುವ ಸಾಧ್ಯತೆ ಇದ್ದು, ಕ್ಯಾಂಟೀನ್ ನಿರ್ವಹಣೆ ಮಾಡುವವರು ಆಹಾರ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವಿದೆ.

ದಿನದ ಸುದ್ದಿ
ಪ್ರಮುಖ 8 ಕ್ಲಬ್ಗಳ ಮೇಲೆ ದಿಢೀರ್ ದಾಳಿ; ನಿಯಮ ಉಲ್ಲಂಘನೆಗೆ ನೋಟಿಸ್
ಸುದ್ದಿದಿನ,ಬೆಂಗಳೂರು: ನಗರದ ಪ್ರತಿಷ್ಠಿತ ಕ್ಲಬ್ಗಳಲ್ಲಿಯೂ ಆಹಾರ ಸುರಕ್ಷತೆ ಮತ್ತು ನೈರ್ಮಲ್ಯ ನಿಯಮಗಳ ಉಲ್ಲಂಘನೆ ಕಂಡುಬಂದಿರುವುದು ಆತಂಕ ಮೂಡಿಸಿದೆ. ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಅಧಿಕಾರಿಗಳು ನಗರದ ಪ್ರಮುಖ 8 ಕ್ಲಬ್ಗಳ ಮೇಲೆ ಮಂಗಳವಾರ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ ವೇಳೆ ಹಲವು ಗಂಭೀರ ಲೋಪಗಳು ಬೆಳಕಿಗೆ ಬಂದಿವೆ. ಆಹಾರ ಸಂಗ್ರಹಣಾ ಸ್ಥಳದಲ್ಲಿ ಅಶುಚಿತ್ವ, ಜಿರಳೆ ಹಾಗೂ ಇತರೆ ಕೀಟಗಳ ಹಾವಳಿ, ಅಸಮರ್ಪಕ ಆಹಾರ ಸಂಗ್ರಹಣೆ ಮತ್ತು ಅವಧಿ ಮೀರಿದ ಪದಾರ್ಥಗಳು ಪತ್ತೆಯಾಗಿವೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ಹಾಗೂ ನಿಯಮಗಳು-2011ರ ಅನ್ವಯ ಅಧಿಕಾರಿಗಳ ತಂಡಗಳನ್ನು ರಚಿಸಲಾಗಿತ್ತು. ಬೌರಿಂಗ್ ಕ್ಲಬ್, ಸೆಂಚುರಿ ಕ್ಲಬ್, ಕೆಎಸ್ಸಿಎ ಕ್ಲಬ್, ಕ್ಯಾಥೋಲಿಕ್ ಕ್ಲಬ್, ಟೆನ್ನಿಸ್ ಕ್ಲಬ್, ವಿಜಯನಗರ ಕ್ಲಬ್, ಮಹಾಲಕ್ಷ್ಮಿ ಲೇಔಟ್ ಕ್ಲಬ್ ಮತ್ತು ಮಲ್ಲೇಶ್ವರ ಕ್ಲಬ್ಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದರು.
http://Visit : www.suddidina.com
ಬೇಳೆಕಾಳಿನಲ್ಲಿ ಹುಳು, ದಾಸ್ತಾನು ಕೇಂದ್ರದಲ್ಲಿ ಜಿರಳೆ
ಬೌರಿಂಗ್ ಕ್ಲಬ್ನಲ್ಲಿ ಬೇಳೆಕಾಳುಗಳಲ್ಲಿ ಹುಳುಗಳು ಕಂಡುಬಂದಿದ್ದು, ದಾಸ್ತಾನು ಕೇಂದ್ರದಲ್ಲಿ ಅಶುಚಿತ್ವ ಹಾಗೂ ಜಿರಳೆಗಳಿರುವುದು ಪತ್ತೆಯಾಗಿದೆ. ಸೆಂಚುರಿ ಕ್ಲಬ್ನಲ್ಲಿಯೂ ಕೀಟಗಳ ಹಾವಳಿ ಮತ್ತು ನೈರ್ಮಲ್ಯದ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಎರಡೂ ಕ್ಲಬ್ಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ.
ಕೆಎಸ್ಸಿಎ ಕ್ಲಬ್ನಲ್ಲೂ ಹಲವು ಲೋಪ
ಕೆಎಸ್ಸಿಎ ಕ್ಲಬ್ನಲ್ಲಿ ಸಿಬ್ಬಂದಿಯ ವೈಯಕ್ತಿಕ ಸ್ವಚ್ಛತೆ, ಆಹಾರ ಪೊಟ್ಟಣಗಳ ಲೇಬಲಿಂಗ್ ಸೇರಿದಂತೆ ಹಲವು ನಿಯಮ ಉಲ್ಲಂಘನೆಗಳು ಕಂಡುಬಂದಿವೆ. ಅಸಮರ್ಪಕ ಒಳಚರಂಡಿ ವ್ಯವಸ್ಥೆ, ಶೀತಲೀಕರಣ ಘಟಕದಲ್ಲಿನ ಅನೈರ್ಮಲ್ಯ ಹಾಗೂ ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರವನ್ನು ಪ್ರತ್ಯೇಕವಾಗಿ ಸಂಗ್ರಹಿಸದಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಪಾತ್ರೆ ತೊಳೆಯಲು ಬಿಸಿನೀರಿನ ವ್ಯವಸ್ಥೆಯ ಕೊರತೆಯೂ ಕಂಡುಬಂದಿದೆ.
ಅವಧಿ ಮೀರಿದ ಅಣಬೆ ಪತ್ತೆ
ಕ್ಯಾಥೋಲಿಕ್ ಕ್ಲಬ್ನಲ್ಲಿ ಅವಧಿ ಮೀರಿದ 10 ಪ್ಯಾಕೇಟ್ ಅಣಬೆಗಳು ಪತ್ತೆಯಾಗಿವೆ. ಆಹಾರ ಪದಾರ್ಥಗಳ ಮೇಲೆ ಅಗತ್ಯ ಲೇಬಲ್ಗಳಿಲ್ಲದಿರುವುದು ಹಾಗೂ ಸ್ವಚ್ಛತೆಯ ಕೊರತೆಯ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ. ಟೆನ್ನಿಸ್ ಕ್ಲಬ್ನಲ್ಲಿ ಆಹಾರ ನಿರ್ವಹಣಾ ಸಿಬ್ಬಂದಿ ವೈದ್ಯಕೀಯ ಪ್ರಮಾಣಪತ್ರ ಹೊಂದಿರದಿರುವುದು ಕಂಡುಬಂದಿದೆ.
ವಿಜಯನಗರ, ಮಹಾಲಕ್ಷ್ಮಿ ಲೇಔಟ್ ಮತ್ತು ಮಲ್ಲೇಶ್ವರ ಕ್ಲಬ್ಗಳಲ್ಲಿಯೂ ಆಹಾರ ಪದಾರ್ಥಗಳ ಅವಧಿ ಕುರಿತ ಲೇಬಲಿಂಗ್ ಕೊರತೆ ಹಾಗೂ ಸ್ವಚ್ಛತೆ-ನೈರ್ಮಲ್ಯದ ಸಮಸ್ಯೆಗಳು ಪತ್ತೆಯಾಗಿವೆ.
ಹೋಟೆಲ್ಗಳಿಗೂ ಕಟ್ಟುನಿಟ್ಟಿನ ಸೂಚನೆ
ಕ್ಲಬ್ಗಳ ಜೊತೆಗೆ ಹೋಟೆಲ್ಗಳು ಹಾಗೂ ಇತರೆ ಆಹಾರ ಉದ್ಯಮಗಳಲ್ಲಿನ ಲೋಪಗಳ ಬಗ್ಗೆಯೂ ಇಲಾಖೆ ಗಮನಹರಿಸಿದೆ. ಮುಂದಿನ 15 ದಿನಗಳಲ್ಲಿ ಹೋಟೆಲ್ ಅಸೋಸಿಯೇಷನ್, ರೆಸ್ಟೋರೆಂಟ್ ಅಸೋಸಿಯೇಷನ್ ಮತ್ತು ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರೊಂದಿಗೆ ಸಭೆ ನಡೆಸಲು ನಿರ್ಧರಿಸಲಾಗಿದೆ. ಅಡುಗೆಮನೆ ನಿರ್ವಹಣೆ, ಆಹಾರ ತಯಾರಿ ಮತ್ತು ನೈರ್ಮಲ್ಯ ಕುರಿತು ಮಾರ್ಗಸೂಚಿ ಹಾಗೂ ತರಬೇತಿ ನೀಡುವ ಚಿಂತನೆಯೂ ಇದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

-
ಅಂತರಂಗ6 days agoಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
-
ದಿನದ ಸುದ್ದಿ3 days agoವಂಚನೆ | ಪ್ರಭಾರ ಕಾರ್ಯಪಾಲಕ ಅಭಿಯಂತರ ಸೋಮ್ಲನಾಯ್ಕ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ4 days agoಭರವಸೆ ಕೊಟ್ಟು ಯುವಜನರನ್ನು ಮನೆಗೆ ಕಳುಹಿಸಿದ ಸರ್ಕಾರಕ್ಕೆ ಈಗ ಪ್ರತಿಭಟನೆಯ ಬಿಸಿ: ಸೆ.5ಕ್ಕೆ ದೆಹಲಿಯಲ್ಲಿ CJP ಬೃಹತ್ ಮೆರವಣಿಗೆ!
-
ದಿನದ ಸುದ್ದಿ4 days agoKPSC ಪರೀಕ್ಷಾ ಹಗರಣ: 329 ಅಭ್ಯರ್ಥಿಗಳಿಗೆ CID ನೋಟಿಸ್, IAS ಅಧಿಕಾರಿ ವಿರುದ್ಧ ED ಆರೋಪ
-
ದಿನದ ಸುದ್ದಿ3 days agoಇಂಗ್ಲಿಷ್ ಕಲಿಯಲು ಬಂದ ಜಪಾನ್ ಯುವಕ ಜೈಲು ಸೇರಿದ ; 75000 ಪರಿಹಾರ ಪಡೆದ
-
ದಿನದ ಸುದ್ದಿ4 days agoಸರ್ವರ್ ಡೌನ್, ಅಧಿಕಾರಿಗಳ ವಿಳಂಬ: ‘ಎ-ಖಾತೆ’ಗಾಗಿ ಕಾದು ಕುಳಿತ 60 ಸಾವಿರಕ್ಕೂ ಹೆಚ್ಚು ಅರ್ಜಿದಾರರು!
-
ದಿನದ ಸುದ್ದಿ4 days ago₹25 ಕೋಟಿ ಮೌಲ್ಯದ ಬಿಡಿಎ ಆಸ್ತಿ ವಶಕ್ಕೆ: ರಾಜಾಜಿನಗರ ಬಡಾವಣೆಯಲ್ಲಿ ಅನಧಿಕೃತ ನಿರ್ಮಾಣಕ್ಕೆ ಬಿತ್ತು ಬೀಗ
-
ದಿನದ ಸುದ್ದಿ4 days agoಭದ್ರಾ ಡ್ಯಾಂ ನೀರು ಹರಿಸುವಂತೆ ಆಗ್ರಹಿಸಿ ಕರೆ ನೀಡಿದ್ದ ದಾವಣಗೆರೆ ಬಂದ್ ನೀರಸ


