Connect with us

ದಿನದ ಸುದ್ದಿ

ಲೋಕರೂಢಿಯ ಮೀರಿ, ನಿರಾಕರಣೆಯೊಳಗಿನ ಸೌಜನ್ಯದ ಧ್ವನಿ ಸೌಂದರ್ಯ

Published

on

  • ಡಾ.ಎನ್.ಕೆ.ಪದ್ಮನಾಭ

ಲೋಕದ ರೂಢಿಗಳ ಮೀರುವುದನ್ನು ಸಾಂಪ್ರದಾಯಿಕ ದೃಷ್ಟಿಕೋನವು ಅಕ್ಷಮ್ಯ ಎಂದು ಪರಿಗಣಿಸುತ್ತದೆ. ಅಷ್ಟೇ ಅಲ್ಲ, ಮೀರಿದರೆ ಆಗುವ ಅಪಾಯಗಳನ್ನೂ ನೆನಪಿಸುತ್ತಾ ಭಯ ಹುಟ್ಟಿಸುತ್ತಾ ಚೌಕಟ್ಟುಗಳ ವ್ಯಾಪ್ತಿಯನ್ನು ಹಿಗ್ಗಿಸುತ್ತದೆ.

ಸ್ಥಗಿತತೆ ಶಾಶ್ವತವಾಗಿರಬೇಕು ಎಂಬ ಹುಮ್ಮಸ್ಸಿನಲ್ಲಿ ಚಲನೆಯ ನಿಜದಜೀವಂತಿಕೆಯನ್ನುಇಲ್ಲವಾಗಿಸುವುದರಕಡೆಗೇಅತ್ಯುತ್ಸಾಹದಲ್ಲಿ ಮುನ್ನಡೆಯುತ್ತಿರುತ್ತದೆ. ಈಗ ಅದರದ್ದು ಕೇವಲ ಅತ್ಯುತ್ಸಾಹವಾಗಿಯಷ್ಟೇ ಉಳಿದಿಲ್ಲ. ಲೋಕರೂಢಿ ಮೀರುವವರನ್ನು ಬಲಿತೆಗೆದುಕೊಳ್ಳುವ ಮತ್ತು ನಿಶ್ಚಲ ಸ್ಥಿತಿಯನ್ನು ಹಿಂದೆಂದಿಗಿಂತಲೂದಟ್ಟವಾಗಿ ಪ್ರತಿಷ್ಠಾಪಿಸುವ ಕ್ರೌರ್ಯದರೂಪವನ್ನೂ ಪಡೆದುಕೊಂಡುಬಿಟ್ಟಿದೆ.

ಈ ಸಾಂಪ್ರದಾಯಿಕ ಜಾಡ್ಯವನ್ನು ಎದುರುಗೊಳ್ಳುವ, ಚಲನೆಯ ಜೀವಂತಿಕೆಗೆ ಜೀವತುಂಬುವ ದಾರಿಅತ್ಯಂತಕಠಿಣವಾದದ್ದು. ಈ ಹಂತದಲ್ಲಿ ಬಂಡಾಯದ ಆಕ್ರಾಮಕ ಆವೇಶಭರಿತಧ್ವನಿ ಮುಖ್ಯವೋಅಥವಾ ಸೌಜನ್ಯದ ಸಂಯಮಪೂರ್ಣ ಪ್ರಖರ ವೈಚಾರಿಕ ವಿವೇಚನೆಯ ಮಾದರಿ ಮಹತ್ವದ್ದೋಎಂಬುದನ್ನು ಸ್ಪಷ್ಟಪಡಿಸಿಕೊಳ್ಳಲೇಬೇಕಾಗುತ್ತದೆ.

ಇಲ್ಲದಿದ್ದರೆ ಸಾಂಪ್ರದಾಯಿಕತೆಯ ವಿಚಿತ್ರ ಹಠದತಕಧಿಮಿಗುಟ್ಟುವಿಕೆ ಮತ್ತಷ್ಟು ಹೆಚ್ಚಾಗುತ್ತದೆ. ಆಕ್ರಾಮಕ ಪರಿಭಾಷೆ ಮತ್ತುಆಕ್ರೋಶಭರಿತಆವೇಶಕ್ಕಿಂತ ಸೌಜನ್ಯದ ಧ್ವನಿಯೊಂದಿಗಿನ ಮನವರಿಕೆಯ ಮಾತೃತ್ವದ ಶೈಲಿಯು ಸಾಮಾಜಿಕ ಚಲನೆಗೆ ಬೇಕಾದ ಪೂರಕ ವಾತಾವರಣ ಸೃಷ್ಟಿಸುತ್ತದೆ.

ಚೇತನ ಸೋಮೇಶ್ವರಅವರ ‘ಲೋಕರೂಢಿಯ ಮೀರಿ’ ಕೃತಿಯೊಳಗೆ ಇಂಥದ್ದೊಂದು ಸದಾಶಯವಿದೆ. ಎ.ಎನ್.ಮೂರ್ತಿರಾವ್ ಎಂಬ ವೈಚಾರಿಕ ವ್ಯಕ್ತಿತ್ವ ಸಾಮಾಜಿಕ ಸಾಂಪ್ರದಾಯಿಕತೆಯನ್ನು ಎದುರುಗೊಂಡ ವಿವೇಚನಾತ್ಮಕ ವೈಚಾರಿಕ ಹೆಜ್ಜೆಗಳ ಕುರಿತಾದಪ್ರಸ್ತಾಪವು ಈ ಕೃತಿಯ ಸದಾಶಯವನ್ನು ಇನ್ನಷ್ಟು ಅಧಿಕೃತಗೊಳಿಸುವಲ್ಲಿ ಯಶಸ್ವಿಯಾಗಿದೆ. ಸದ್ಯದ ಕಾಲವು ಚಲನೆಗೆ ಹೊರಳಿಕೊಳ್ಳುವ ದಾರಿಯಾವುದಾಗಿರಬೇಕುಎಂಬುದನ್ನು ಮನಗಾಣಿಸುವಲ್ಲಿಯೂಗೆದ್ದಿದೆ.

ಈ ಕೃತಿಯೊಳಗೇ ಅಡಕವಾಗಿರುವ ‘ಲೋಕರೂಢಿ ಮೀರುವ’ ಸದಾಶಯಕ್ಕೆ ಸದ್ಯದ ವೈಚಾರಿಕ ಬಿಕ್ಕಟ್ಟುಗಳ ಸ್ವರೂಪವನ್ನು ಬದಲಿಸುವ ಶಕ್ತಿ ಇದೆ. ವಾಚಾಳಿತನದ ಗೀಳಿನ ಪರಿಭಾಷೆಯನ್ನೇ ಬಹುದೊಡ್ಡ ಬಂಡಾಯ ಎಂಬ ತಪ್ಪುಕಲ್ಪನೆಯನ್ನುಇಲ್ಲವಾಗಿಸುವಂಥಮಾರ್ಗದರ್ಶಿಸೂತ್ರ ಹೊಳೆಸುವ ಗುಣಲಕ್ಷಣವಿದೆ. ಬಂಡಾಯ ಕ್ಕಿಂತ ತಿಳಿವ ತಿಳಿಗೊಳಿಸುವ ಕಾಳಜಿಯುತ ತಿಳುವಳಿಕೆಯ ಅಗತ್ಯವನ್ನು ಪ್ರತಿಪಾದಿಸುವ ನೋಟಕ್ರಮವಿದೆ. ‘ದೇವರ’ ಅಸ್ತಿತ್ವ ಅಥವಾಧರ್ಮವಲ್ಲದ ‘ಧರ್ಮ’ – ಇವೆರಡರ ನಿರಾಕರಣೆಯೊಳಗೂ ಅಡಗಿರಬಹುದಾದ ಸೌಜನ್ಯದಧ್ವನಿಸೌಂದರ್ಯವನ್ನುಕಾಣಿಸುವ ನಿಜದ ಬೆಳಕಿದೆ.

ಲೋಕರೂಢಿಯನ್ನು ಮೀರುವುದುಅಗತ್ಯ ಮಾತ್ರವಲ್ಲ, ಅನಿವಾರ್ಯತೆಯೂ ಹೌದು ಎಂಬುದನ್ನುಚೇತನ ಸೋಮೇಶ್ವರ ಅವರು ಆಪ್ತವಾಗಿ ಸ್ಪಷ್ಟಪಡಿಸುತ್ತಾರೆ. ಎ.ಎನ್.ಮೂರ್ತಿರಾವ್‌ಅವರಂಥ ಪ್ರಖರ ವೈಚಾರಿಕ ಶಕ್ತಿಯನ್ನು ಪಿ.ಎಚ್.ಡಿ ಸಂಶೋಧನೆಯ ಕೇಂದ್ರವಾಗಿಸಿಕೊಳ್ಳುವುದೂ ಒಂದು ಬಗೆಯ ಮೀರುವಕ್ರಮವೇಆಗಿದೆ.

ಉನ್ನತ ಶಿಕ್ಷಣ ವ್ಯವಸ್ಥೆಯ ಒಳಗೇ ಇರುವಕ್ಲೀಷಾ ಚೌಕಟ್ಟುಗಳನ್ನು ಒಡೆಯುವ ಮತ್ತು ಆ ಮೂಲಕ ವಿಶ್ವವಿದ್ಯಾಲಯಗಳೊಳಗಿನ ಸವಕಲು ರೂಢಿಗಳನ್ನು ಮೀರುವದಾರಿಯನ್ನೂತಮ್ಮ ಸಂಶೋಧನಾ ಪ್ರಬಂಧದ ಮೂಲಕ ಅವರು ಕಾಣಿಸಿದ್ದಾರೆ. ಇದನ್ನುಕೃತಿರೂಪದಲ್ಲಿ ಹೊರತಂದು ಸಾಮಾಜಿಕ ಚಲನೆಯ ಹಾದಿಯನ್ನು ‘ಅವಧಿ’ಯಜಿ.ಎನ್.ಮೋಹನ್‌ಅವರು ಅಧಿಕೃತಗೊಳಿಸಿದ್ದಾರೆ. ಈ ಹೆಜ್ಜೆಯು ಸಾಮಾಜಿಕ ಚಲನೆಯ ‘ಅವಧಿ’ಯನ್ನು ವಿಸ್ತರಿಸಿದ್ದರ ಸಂಕೇತವೂ ಹೌದು.

ಎಲ್ಲಾ ಕಾಲಗಳಲ್ಲೂ ವಿಜೃಂಭಿಸುವ ಲೋಕರೂಢಿಗಳೊಳಗಿನ ಟೊಳ್ಳುತನವನ್ನು ಪ್ರಶ್ನಿಸಿ ಅವುಗಳಿಗೆ ಪರ್ಯಾಯವಾದ ಆಲೋಚನೆಗಳನ್ನು ಹೊಳೆಸುವ ಪ್ರಯತ್ನಗಳು ನಡೆಯುತ್ತಲೇಇರುತ್ತವೆ. ಅವುಗಳಿಗೆ ಸಿಗುವ ಪ್ರತಿಸ್ಪಂದನೆ ಯಾವುದೇ ರೀತಿಯದ್ದೇ ಇರಲಿ, ಅವುಗಳು ತದನಂತರದ ಕಾಲಘಟಕ್ಕೆ ಬೇಕಾಗುವ ಮಾದರಿಗಳನ್ನು ಒದಗಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಸಾಹಿತ್ಯ ಮತ್ತು ಕಲಾ ಮಾಧ್ಯಮಗಳು ಇಂಥ ಮಾದರಿಗಳನ್ನು ಮುನ್ನೆಲೆಗೆತರುತ್ತವೆ. ಇವುಗಳ ಅಭಿವ್ಯಕ್ತಿಯು ಲೋಕೋದ್ಧಾರದ ನಿಜದದಾರಿಯನ್ನುಕಾಣಿಸುವ ಹೊಣೆಗಾರಿಕೆಯನ್ನುಅತ್ಯಂತ ಶ್ರದ್ಧೆಯಿಂದ ನಿರ್ವಹಿಸಿದೆ.

ಅಧಿಕಾರ ವ್ಯವಸ್ಥೆ, ರಾಜಕೀಯ ವಲಯ ಮತ್ತುರಂಜನೀಯಉದ್ಯಮದೇವರು, ಧರ್ಮ ಮತ್ತು ಮನುಷ್ಯ ಸಂಕುಚಿತತೆಯನ್ನೇತನ್ನ ಲಾಭಕ್ಕೆ ಬಳಸಿಕೊಂಡಾಗಲೆಲ್ಲಾ ಸಾಹಿತ್ಯ ಮತ್ತು ಕಲೆ ವಿವೇಚನೆಯಕಡೆಗೆ ಸಮಾಜವನ್ನು ಮುನ್ನಡೆಸುವಂಥ ಕಾಣ್ಕೆಗಳನ್ನು ನೀಡಿವೆ.

ಎ.ಎನ್.ಮೂರ್ತಿರಾವ್‌ಅವರ ಬರಹಗಳ ಹಿಂದಿನ ಸ್ಫೂರ್ತಿ ಈ ತರಹದ ಕಾಣ್ಕೆಗಳೇ. ಇವುಗಳನ್ನು ಗ್ರಹಿಸಿ ಒಂದು ಸ್ಪಷ್ಟ ವಿವೇಚನಾತ್ಮಕ ನಿಲುವು ತಳೆಯುವುದಕ್ಕೆ ‘ಲೋಕರೂಢಿಯ ಮೀರಿ’ ಕೃತಿ ನೆರವಾಗುತ್ತದೆ. ಈ ಕಾಣ್ಕೆಗಳನ್ನು ಸದ್ಯದ ವೈರುಧ್ಯಗಳ ನಡುವೆ ನೋಡುವ, ಆ ಮೂಲಕ ವ್ಯಕ್ತಿಗತವಾಗಿ ಸ್ಪಷ್ಟಗೊಳ್ಳುವುದಕ್ಕೆ ಚೇತನ ಸೋಮೇಶ್ವರಅವರ ವಿಶ್ಲೇಷಣೆಯಕ್ರಮವುಓದುಗರನ್ನು ಸಿದ್ಧಪಡಿಸುತ್ತದೆ.

ಈಗ ಅಧಿಕಾರ ಕೇಂದ್ರಗಳು ಮತ್ತು ಅವುಗಳನ್ನು ಪ್ರತಿನಿಧಿಸುವವರು ‘ಅಜ್ಜ ನೆಟ್ಟಆಲದ ಮರ’ದಆಶ್ರಯ ಪಡೆದುಅದರ ನೆರಳಿನ ಕೆಳಗೆ ವಿಕೃತಿಯ ಬಿಂಬಗಳನ್ನು ಮೂಡಿಸುತ್ತಲೇಇದ್ದಾರೆ. ಒಂದು ಕಡೆಗೆ ದೇವರು, ಧರ್ಮದಕುರಿತ ನಂಬಿಕೆಯಜಗತ್ತು. ಇನ್ನೊಂದುಕಡೆಗೆ ಇವುಗಳನ್ನು ನಿರಾಕರಿಸುವ ವೈಚಾರಿಕ ಲೋಕ. ಇವೆರಡನ್ನೂ ಪರಸ್ಪರ ವಿರೋಧಾತ್ಮಕವಾಗಿ ನೋಡಬೇಕೇ ಅಥವಾ ಒಂದನ್ನೊಂದು ಅನುಸಂಧಾನಗೊಳಿಸಿಕೊಂಡು ವರ್ತಮಾನವನ್ನು ಸುಂದರವಾಗಿಸಿಕೊಳ್ಳುವುದರ ಕಡೆಗೆಗಮನಹರಿಸಬೇಕೇ ಎಂಬ ದ್ವಂದ್ವಕ್ಕೆ ಈ ಕೃತಿ ಪರಿಹಾರ ಹೇಳುತ್ತದೆ.

ನಂಬಿಕೆ ಮತ್ತು ವೈಚಾರಿಕತೆಇವೆರಡರ ನಡುವಿನ ಅನುಸಂಧಾನಾತ್ಮಕ ನಿಕಷವು ಸಮಾಜಕ್ಕೆ ಬೇಕಾದ ಒಳನೋಟಗಳನ್ನು ಕಟ್ಟಿಕೊಳ್ಳಲು ಸಹಾಯಕವಾಗುತ್ತದೆ. ವಚನ, ದಾಸ ಮತ್ತುತತ್ವಪದ ಸಾಹಿತ್ಯ ಪ್ರತಿಪಾದಿಸಿದ್ದು ಈ ತರಹದ ಒಳನೋಟಗಳನ್ನೇ. ನಂಬಿಕೆ ಮೌಢ್ಯಕ್ಕೆತಿರಗುದ ಹಾಗೆ ನೋಡಿಕೊಂಡ ಒಳನೋಟಗಳಿವು. ಇವನ್ನು ಸರಿಯಾಗಿ ಅರ್ಥೈಸಿಕೊಂಡ ಕಾರಣಕ್ಕಾಗಿಯೇ ಈ ದೇಶವು ವೈವಿಧ್ಯತೆಯ ನೆಲೆಯಾಗಿದೆ. ಇದನ್ನು ಗೊತ್ತುಮಾಡಿಕೊಳ್ಳುವುದಕ್ಕೆ ಈ ಕೃತಿಒತ್ತಾಸೆ ಮೂಡಿಸುತ್ತದೆ.

ದೇವಾಲಯಗಳು, ಧರ್ಮಗಳನ್ನು ಆಧರಿಸಿಕೊಂಡು ಪ್ರತಿಷ್ಠಾಪಿತವಾಗುವ ಸಾಮಾಜಿಕ-ದೈವಿಕ ಸಂಸ್ಥೆಗಳು ನಿಜವಾದ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವಾಗ ಲೋಕರೂಢಿಗಳನ್ನೇ ಆಶ್ರಯಿಸುತ್ತವೆ. ಬಹುಹಿಂದಿನಿಂದಲೂ ನಡೆದುಕೊಂಡು ಬಂದ ಸಾಂಪ್ರದಾಯಿಕ ವಿಧಿವಿಧಾನಗಳನನ್ನು ವೈಭವೀಕರಿಸಿ ದೇವರ ಪರಿಕಲ್ಪನೆಯನ್ನು ಮೌಢ್ಯಕ್ಕೆತಿರುಗಿಸುತ್ತವೆ.

ನಿಷ್ಠುರ ವಿಚಾರವಾದಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತುಧರ್ಮನಿಷ್ಠ ಮಹಾತ್ಮಾಗಾಂಧೀಜಿ ಅವರ ನಡುವಿನ ಸಂವಾದ ನಂಬಿಕೆಯಜಗತ್ತನ್ನುಗ್ರಹಿಸುವ ಮಾದರಿಯನ್ನು ಸೃಷ್ಟಿಸಿದೆ. ನಂಬಿಕೆಯಜಗತ್ತಿನ ಬೆಂಬಲದಲ್ಲಿಜನರಉದ್ಧಾರದ ಆದರ್ಶೀಕೃತ ಆಲೋಚನೆ ಗಾಂಧೀಜಿಅವರದ್ದಾಗಿತ್ತು.

ವಾಸ್ತವವಾದಿ ಅಂಬೇಡ್ಕರ್‌ಅವರ ವೈಚಾರಿಕತೆಯು ನಂಬಿಕೆಯಜಗತ್ತು ಯಥಾಸ್ಥಿತಿವಾದವನ್ನು ಮುಂದುವರೆಸುವಂಥದ್ದು ಎಂಬುದನ್ನು ಪ್ರತಿಪಾದಿಸಿತ್ತು. ಈಗ ಅಂಬೇಡ್ಕರ್‌ ಅವರ ಗ್ರಹಿಕೆಯಂತೆಯೇ ನಂಬಿಕೆಯ ಜಗತ್ತು ಉಳ್ಳವರ ಸ್ವತ್ತಾಗಿದೆ. ಜಾತಿ ಪ್ರಾಬಲ್ಯದ ಬೇರುಗಳನ್ನು ಗಟ್ಟಿಗೊಳಿಸಿದೆ.

ಅಸಮಾನತೆಯನ್ನುಇನ್ನಷ್ಟು ವಿಸ್ತರಿಸುತ್ತಲೇ ಇದೆ. ಸಾಮಾಜಿಕ ಸ್ಥಗಿತತೆಯನ್ನು ಪೋಷಿಸುತ್ತಲೇಇದೆ. ಇಂಥ ಸಂದರ್ಭದಲ್ಲಿ ‘ಲೋಕರೂಢಿಯ ಮೀರಿ’ ಕನ್ನಡದ ದೃಷ್ಟಿಕೋನವನ್ನು ಎತ್ತರಿಸುವ ಪ್ರಜ್ಞೆಯಾಗುತ್ತದೆ. ಸಾಮಾಜಿಕ ಚಲನೆಗೆ ಬೇಕಾಗುವ ಮುನ್ನುಡಿಯಾಗುತ್ತದೆ.

ಮೂರ್ತಿರಾಯರಚಿಂತನೆಯನ್ನು ವಿಶ್ಲೇಷಿಸುತ್ತಾಚೇತನ ಸೋಮೇಶ್ವರಅವರುಅನನ್ಯ ಹೊಳಹುಗಳನ್ನು ಹೊಳೆಸುವ ಮಾದರಿಕೃತಿಯನ್ನು ರಚಿಸಿದ್ದಾರೆ. ‘ಲೋಕರೂಢಿಯ ಮೀರಿ’ ಶೀರ್ಷಿಕೆಯ ಅನನ್ಯಾರ್ಥಅನ್ವರ್ಥಕತೆಗೆ ಸಾಕ್ಷಿಯಾಗಿಇಲ್ಲಿಯ ವಿವಿಧ ಅಧ್ಯಾಯಗಳಿವೆ. ಬಹುತೇಕ ಸಂಶೋಧನಾ ಪ್ರಬಂಧಗಳಲ್ಲಿರುವಂತೆ ಇಲ್ಲಿಹಿಂದಿನ ಚಿಂತನೆಗಳ ಕುರಿತಾದ ರೆಫರೆನ್ಸ್ಗಳ ಹೊರೆಗಳಿಲ್ಲ.

ಮೂರ್ತಿರಾಯರು ಮತ್ತು ಹಿಂದಿನ ಚಿಂತನೆಯ ಕ್ರಮಗಳನ್ನು ತಮ್ಮನಿಲುವುಗಳ ಸಮರ್ಥನೆಗೆ ಎಷ್ಟು ಬೇಕೋ ಅಷ್ಟು ಬಳಸಿಕೊಂಡು ಓದುಗರು ಈ ಕ್ಷಣಕ್ಕೆ ಹೇಗೆ ಯೋಚಿಸಬೇಕುಎನ್ನುವುದರಕಡೆಗೇ ಗಮನ ಕೇಂದ್ರೀಕರಿಸುತ್ತಾರೆ. ಅಭಿಮಾನಪೂರ್ವಕಆರಾಧನಾ ಮನೋಭಾವದ ಬದಲು ಮೂರ್ತಿರಾಯರ ಜೀವಧ್ವನಿಯಾಗಿದ್ದ ಚಿಕಿತ್ಸಕ ದೃಷ್ಟಿಕೋನವನ್ನೇ ಆಧರಿಸಿಕೊಂಡು ಚೇತನ ಸೋಮೇಶ್ವರಕೃತಿಯ ಒಳನೋಟಗಳನ್ನು ಕಟ್ಟಿದ್ದಾರೆ.

ಅವರು ಸಂಸ್ಕೃತಿಯನ್ನುಇಲ್ಲಿ ಮೌಲ್ಯನಿಷ್ಠ ಪರಿಕಲ್ಪನೆಯನ್ನಾಗಿಇಲ್ಲಿ ಬಿಂಬಿಸಿದ್ದಾರೆ. ಒಳಿತಿನ ಪರವಾಗಿ ನಿಂತು ಜಾತ್ಯಾತೀತವಾಗುವ ದಾರಿಯಾವುದು ಎಂಬುದನ್ನು ಮನಗಾಣಿಸಿದ್ದಾರೆ. ಮತ-ಧರ್ಮಗಳು ಜೀವಪರ ವೈಶಿಷ್ಟ್ಯವನ್ನು ಹಿಡಿದಿಟ್ಟಿದ್ದಾರೆ. ಸ್ವಾತಂತ್ರ್ಯದ ಒಳಗೇ ಇರುವಜೀವಂತಿಕೆಯನ್ನುಕಾಣಿಸುತ್ತಾರೆ.

ಸಮಾನತೆಯಗಮ್ಯವೇ ನಿರ್ಣಾಯಕಎಂಬುದನ್ನು ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ. ಇಡೀ ಶೈಕ್ಷಣಿಕ ವ್ಯವಸ್ಥೆಯುಜ್ಞಾನದ ಮಹಾಮಾರ್ಗವಾಗಿ ಪುನರುತ್ಥಾನಗೊಳ್ಳುವ ಬಗೆಯನ್ನು ಚಿತ್ರಿಸಿದ್ದಾರೆ. ಅಲ್ಲದೇ ಈ ಮಹಾಮಾರ್ಗ ಲೋಕರೂಢಿಯೊಳಗಿನ ಮಿತಿಗಳನ್ನು ಮೀರುವ ವಿವೇಚನಾತ್ಮ ವೈಚಾರಿಕತೆಯನ್ನು ತಂದುಕೊಳ್ಳುವ ಪ್ರೇರಣೆಯೂ ಹೌದುಎಂದುದೃಢೀಕರಿಸುತ್ತಾರೆ. ಇವೆಲ್ಲ ಆಶಯಗಳು ಎ.ಎನ್. ಮೂರ್ತಿರಾಯರಚಿಂತನೆಯನ್ನು ಹೊಸ ಕಾಲದಲ್ಲಿ ಹೇಗೆ ಅನ್ವಯಿಸಿಕೊಳ್ಳಬೇಕು ಎಂಬುದನ್ನು ಹೇಳಿಕೊಡುತ್ತವೆ.
ಈ ಕೃತಿಯನ್ನುಯಾಕೆಓದಬೇಕು? ಓದಲೇಬೇಕು.

ದೇವರು, ಧರ್ಮವನ್ನು ಸ್ವಯಂ ಲಾಭಕ್ಕೆ ಬಳಸಿಕೊಳ್ಳುವ ಹುನ್ನಾರಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ, ನಂಬಿಕೆಯಜಗತ್ತನ್ನು ಕೈಗೊಂಬೆಯಾಗಿಸಿಕೊಂಡ ನಾಯಕರೆನ್ನಿಸಿಕೊಂಡ ನಾಯಕರಲ್ಲದವರ ಇಮೇಜಿನೊಳಗಿನ ಬಾಲಿಶತನವನ್ನುಅರಿಯುವುದಕ್ಕೆ. ದೇವರು ಎಂಬ ಅಮೂರ್ತ ಪರಿಕಲ್ಪನೆಯನ್ನು ಮಾನವೀಯಗೊಳಿಸಿಕೊಂಡು ಅದಕ್ಕೆಜೀವಪರತೆಯಜೀವಂತಿಕೆಯನ್ನು ತಂದುಕೊಳ್ಳುವುದಕ್ಕೆ.

ಅಸಮಾನತೆಯ ಅಂಶಗಳನ್ನೇ ಆಧರಿಸಿಕೊಂಡು ಸಂಘರ್ಷವನ್ನುಖಾಯಂ ಆಗಿರಿಸಿದ ವಿಧ್ವಂಸಕ ಶಕ್ತಿಗಳ ಹೆಜ್ಜೆಗಳನ್ನು ಗುರುತಿಸುವುದಕ್ಕೆ. ಎಲ್ಲಕ್ಕಿಂತ ಹೆಚ್ಚಾಗಿ ತರಹೇವಾರಿ ಮಿತಿಗಳೊಂದಿಗಿನ ಹತ್ತುಹಲವು ಲೋಕರೂಢಿಗಳನ್ನು ಮೀರಿ ನಿರ್ದಿಗಂತವಾಗಿಏರುವುದಕ್ಕೆ. ಅನಿಕೇತನದ ಹಾದಿಯಲ್ಲಿ ಸುದೀರ್ಘ ಪ್ರಯಾಣ ಕೈಗೊಳ್ಳುವುದಕ್ಕಾಗಿ.

(ವಿಳಾಸ:
ಡಾ.ಎನ್.ಕೆ.ಪದ್ಮನಾಭ
ಸಹಾಯಕ ಪ್ರಾಧ್ಯಾಪಕರು
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಎಸ್.ಡಿ.ಎಂ ಸ್ನಾತಕೋತ್ತರಕೇಂದ್ರ
ಉಜಿರೆ )

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದಾವಣಗೆರೆ | ಇಂದು ಕರೆಂಟ್ ಇರಲ್ಲ

Published

on

ಸುದ್ದಿದಿನ,ದಾವಣಗೆರೆ:ಬೆಸ್ಕಾಂ ಜಗಳೂರು ಉಪವಿಭಾಗದ ವ್ಯಾಪ್ತಿಯಲ್ಲಿ ತುರ್ತು ಜಂಗಲ್ ಕಟಿಂಗ್ ಮತ್ತು ಫೀಡರ್‌ಗಳ ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಮೇ 26 ರಂದು ಬೆಳಿಗ್ಗೆ 09-00 ರಿಂದ ಸಂಜೆ 05-00 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಕೊರಚರ ಹಟ್ಟಿ ಸರ್ಕಲ್, ಅಂಜನೆಯ ಬಡಾವಣೆ, ಶಕ್ತಿ ನಗರ, ಭಗೀರಥ ಲೇಔಟ್ ಸರ್ಕಲ್, ಕೊಟ್ಟುರೇಶ್ವರ ಬಡಾವಣೆ, , ಡಿ.ಸಿ.ಎಂ ಎಬಿಸಿ ಬ್ಲಾಕ್, ರಾಜೇಂದ್ರ ಬಡಾವಣೆ, ಭೂಮಿಕಾ ನಗರ, ಎಸ್.ಎಸ್ ಹೈ-ಟೆಕ್ ಮೇನ್ ರೋಡ್, ಶೇಶಾಂ ಲೇಔಟ್, ಹೊಂ ಟೈಲಾರ್ ರೋಡ್, ಬನಶಂಕರಿ ದೇವಸ್ಥಾನ, ಶ್ರೀರಾಮ್ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು, ಎಮ್.ಸಿ.ಸಿ. ಎ ಬ್ಲಾಕ್, ನಿಜಲಿಂಗಪ್ಪ ಲೇಔಟ್, ಅಶ್ವಿನಿ ಆರ್ಯುವೇಧಿಕ್ ಆಸ್ಪತ್ರೆ, ಜೊಲ್ಲಿಗುರು ಕಾಂಪೌಡ್, ಮುದ್ದೊಳ್ಳಿ ತೋಟ, ನರಹರಿಶೇಟ ಕಲ್ಯಾಣ ಮಂದಿರ, ಪೊಲೀಸ್ ಹಳೆಯ ವಸತಿ ಗೃಹಗಳು, ವಿನೋಬ ನಗರ 1ನೇ ಮತ್ತು 2ನೇಯ ಮುಖ್ಯ ರಸ್ತೆ ಚರ್ಚ್ ರಸ್ತೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಹಾಗೂ ಬೆಳಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ಬಿದರಕೆರೆ ವಿದ್ಯುತ್ ವಿತರಣಾ ಕೇಂದ್ರಕ್ಕೆ ಒಳಪಡುವ ಎಫ್- ಕಟ್ಟಿಗೆಹಳ್ಳಿ, ಎನ್‌ಜೆವೈ (NJY) ಜಗಳೂರು ವಿದ್ಯುತ್ ವಿತರಣಾ ಕೇಂದ್ರಕ್ಕೆ ಒಳಪಡುವ ಅರಿಶಿನಗುಂಡಿ ಹಾಗೂ ಜ್ಯೋತಿಪುರ ಎನ್‌ಜೆವೈ (NJY) 11ಕೆವಿ ಮಾರ್ಗಗಳು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಅಲ್ಪಸಂಖ್ಯಾತರ ಇಲಾಖೆ ನಿರ್ದೇಶಕ ಜಿಲಾನಿ ಎಚ್. ಮೊಕಾಶಿ ವಿರುದ್ಧ ಲೋಕಾಗೆ ದೂರು

Published

on

ಸುದ್ದಿದಿನ,ದಾವಣಗೆರೆ:ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ಇಲಾಖೆಯ ನಿಯಮಾನುಸಾರ ಬಯೋಟ್ರಿಕ್ ಹಾಜರಾತಿ ಅಳವಡಿಸಿಕೊಳ್ಳದೆ ಸರ್ಕಾರಕ್ಕೆ ವಂಚಿಸಿರುವ ಬಗ್ಗೆ ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕರಾದ ಜಿಲಾನಿ ಎಚ್. ಮೊಕಾಶಿ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರತಿದಿನದ ಹಾಜರಾತಿಯನ್ನು ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯ ಮೂಲಕ ಕಡ್ಡಾಯವಾಗಿ ನಿರ್ವಹಿಸಲು ದಿನಾಂಕ: 12-07-2022 ರಂದು ನಿರ್ದೇಶಕರು, ಅಲ್ಪಸಂಖ್ಯಾತರ ನಿರ್ದೇಶನಾಲಯ, ಬೆಂಗಳೂರು ಇವರು ಸುತ್ತೋಲೆ ಹೊರಡಿಸಿದ್ದಾರೆ.

ಸದರಿ ಸುತ್ತೋಲೆಯಲ್ಲಿ ‘ಎಲ್ಲಾ ನಿಲಯಪಾಲಕರು/ ಮೇಲ್ವಿಚಾರಕರು ಬೆಲಗ್ಗೆ ತಿಂಡಿ ಸಮಯದಲ್ಲಿ ಹಾಗೂ ರಾತ್ರಿ ಊಟದ ಸಮಯದಲ್ಲಿ ವಸತಿ ಶಾಲೆ/ಕಾಲೇಜು ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿ ಕಡ್ಡಾಯವಾಗಿ ಹಾಜರಿದ್ದು, ವಿದ್ಯಾರ್ಥಿಗಳ ಬಯೋಮೆಟ್ರಿಕ್ ಹಾಜರಾತಿಯನ್ನು ಪಡೆಯತಕ್ಕದ್ದು’ ಎಂಬುದಾಗಿ ಸೂಚಿಸಲಾಗಿದೆ.

‘ಬಯೋಮೆಟ್ರಿಕ್ ಹಾಜರಾತಿ ಪಡೆಯದೆ ಆಹಾರ ವೆಚ್ಚ ಭರಿಸಿದ್ದಲ್ಲಿ ಸಂಬAಧಪಟ್ಟ ನಿಲಯಪಾಲಕರು, ಅಲ್ಪಸಂಖ್ಯಾತರ ತಾಲ್ಲೂಕು ವಿಸ್ತರಣಾಧಿಕಾರಿಗಳು/ ಪ್ರಾಂಶುಪಾಲರು, ಜಿಲ್ಲಾ ಅಧಿಕಾರಿಗಳನ್ನು ನೇರವಾಗಿ ಹೊಣೆಗಾರರನ್ನಾಗಿ ಮಾಡಿ ಅವರ ಮೇಲೆ ಶಿಸ್ತಿನ ಕ್ರಮ ಜರುಗಿಸಲಾಗುವುದು’ ಎಂಬುದಾಗಿ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿರುತ್ತದೆ.

ಆದರೆ ದಾವಣಗೆರೆ ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳದೆ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿರುವ ಮಾಹಿತಿ ಆಧಾರದಲ್ಲಿ ದಿನಾಂಕ: 28-11-2025 ರಂದು ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ದಾವಣಗೆರೆ ಇವರಿಗೆ ದಿನಾಂಕ: 28-11-2025 ರಂದು ದೂರು ನೀಡಿ ‘ದಾವಣಗೆರೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆ ಹಾಗೂ ವಸತಿ ನಿಲಯಗಳಲ್ಲಿ ಅಳವಡಿಸಿರುವ ಬಯೋಮೆಟ್ರಿಕ್ ಹಾಜರಾತಿ ನಿರ್ವಹಣೆಯನ್ನು ತನಿಖೆಗೆ ಒಳಪಡಿಸುವಂತೆ’ ಕೋರಲಾಗಿತ್ತು.

ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ದಾವಣಗೆರೆ ಇವರು ನೀಡಿದ ಹಿಂಬರಹದಲ್ಲಿ ‘ಈ ಸಂಬAಧ ಜಿಲ್ಲೆಯ ಕೆಲವು ವಸತಿ ನಿಲಯಗಳಲ್ಲಿ ಬಯೋಮೆಟ್ರಿಕ್ ಯಂತ್ರದಲ್ಲಿನ ತಾಂತ್ರಿಕ ದೋಷದಿಂದ ವಿದ್ಯಾರ್ಥಿಗಳ ಹಾಜರಾತಿಯನ್ನು ದಾಖಲಿಸಲು ಸಾಧ್ಯವಾಗಿರುವುದಿಲ್ಲವೆಂದು ಹಾಗೂ ಮತ್ತೆ ಕೆಲವು ವಸತಿ ಶಾಲೆ ಮತ್ತು ವಸತಿ ನಿಲಯಗಳಿಗೆ ಹೊಸ ಬಯೋಮೆಟ್ರಿಕ್ ಯಂತ್ರವನ್ನು ಪೂರೈಕೆ ಮಾಡುವಂತೆ ಪ್ರಾಂಶುಪಾಲರುಗಳು ಮತ್ತು ತಾಲ್ಲೂಕು ವಿಸ್ತರಣಾಧಿಕಾರಿಗಳು ಕೋರಿರುವ ಪತ್ರವನ್ನು ಲಗತ್ತಿಸಿ’ ನಿರ್ದೇಶಕರು, ಅಲ್ಪಸಂಖ್ಯಾತರ ನಿರ್ದೇಶಕರು, ಬೆಂಗಳೂರು ಇವರಿಗೆ ಪತ್ರ ಬರೆಯಲಾಗಿದೆ ಎಂಬುದಾಗಿ ತಿಳಿಸಿರುತ್ತಾರೆ.

ಆದ ಕಾರಣ ದಿನಾಂಕ: 17-02-2026 ರಂದು ನಿರ್ದೇಶಕರು, ಅಲ್ಪಸಂಖ್ಯಾತರ ನಿರ್ದೇಶನಾಲಯ, ಬೆಂಗಳೂರು ಇವರಿಗೆ ದೂರು ನೀಡಿ ದಾವಣಗೆರೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆ ಹಾಗೂ ವಸತಿ ನಿಲಯಗಳಲ್ಲಿ ಇಲಾಖೆಯ ನಿಯಮಾನುಸಾರ ಬಯೋಟ್ರಿಕ್ ಹಾಜರಾತಿ ಅಳವಡಿಸಿಕೊಳ್ಳದೆ ಸರ್ಕಾರಕ್ಕೆ ವಂಚಿಸಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಕೈಗೊಂಡ ಕ್ರಮದ ವರದಿಯನ್ನು ಒಂದು ತಿಂಗಳ ಒಳಗಾಗಿ ನೀಡುವಂತೆ ಸಾರ್ವಜನಿಕ ಹಿತಾಸಕ್ತಿ ಅಡಿಯಲ್ಲಿ ಕೋರಲಾಗಿತ್ತು. ಆದರೆ ದೂರು ನೀಡಿ 3 ತಿಂಗಳು ಕಳೆದರೂ ಅಲ್ಪಸಂಖ್ಯಾತರ ನಿರ್ದೇಶನಾಲಯ ನಿರ್ದೇಶಕರಾದ ಜಿಲಾನಿ ಎಚ್. ಮೊಕಾಶಿ ಇವರು ಯಾವುದೇ ಕ್ರಮ ಕೈಗೊಳ್ಳದ ಕಾರಣ ಕರ್ತವ್ಯ ಲೋಪದ ಅಡಿಯಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬಳ್ಳಾರಿ ಗಾಂಧಿನಗರ ಠಾಣೆಯ ವ್ಯಾಪ್ತಿ ಜೂಜಾಟ | ಠಾಣೆಯ ಅಧಿಕಾರಿಗಳು ಮೌನ ; ಕ್ರಮ ಕೈಗೊಳ್ತಾರಾ ಎಸ್ ಪಿ..?

Published

on

ಗಿರೀಶ್ ಬಳ್ಳಾರಿ

ಸುದ್ದಿದಿನ,ಬಳ್ಳಾರಿ:ನಗರದ ಗಾಂಧಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ರಾತ್ರಿ 10 ಗಂಟೆಯ ನಂತರ ಕೊಂಡಯ್ಯ ಫ್ಯಾಕ್ಟರಿಯ ಹುಸೇನ್ ನಗರದ ಜಾಲಿ ಬೇಲಿಯ ಒಳಭಾಗದಲ್ಲಿ ಅಕ್ರಮವಾಗಿ ಇಸ್ಪೀಟ್ ಆಡುತ್ತಿದ್ದಾರೆ ಜೊತೆಗೆ ಆ ಪ್ರದೇಶಕ್ಕೆ ಹೋಗುವ ಈ ಜೂಜಾಟ ಆಡುವವರು ಬೈಕ್ ಗಳ ಶಬ್ದ ಮಾಡಿಕೊಂಡು, ಮನೆಗಳಲ್ಲಿ ಇರುವ ಮಹಿಳೆಯರಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ ಎನ್ನುವ ಆರೋಪ ಸ್ಥಳೀಯ ನಿವಾಸಿಗಳಿಂದ ಕೇಳಿ ಬಂದಿದೆ.

ಇನ್ನು ಈ ಇಸ್ಪೀಟ್ ಜೂಜಾಟ ಆಡಿಸುತ್ತಿರುವ ವ್ಯಕ್ತಿಗಳು ದುಬ್ಬ ರಾಜು, ದಾದು ಮತ್ತು ಜಾನಿ, ರಘು ಎಂದು ತಿಳಿದು ಬಂದಿದೆ. ಇನ್ನು ಗಾಂಧಿನಗರ ಠಾಣೆಯ ಸಿಪಿಐ ಮತ್ತು ಪಿ.ಎಸ್.ಐ ಮತ್ತು ಕ್ರೈಂ ಸಿಬ್ಬಂದಿಗಳಿಗೆ ಮಾಹಿತಿ ಇದ್ದರು ಅವರಿಂದ ಹಣ ಪಡೆದುಕೊಂಡು ಈ ಜೂಜಾಟ ಆಡಿಸುತ್ತಿರುವ ಮಾಹಿತಿ ಸಹ ಲಭ್ಯವಾಗಿದೆ.

ಸಾಧಿಕ್ ಪೊಲೀಸರಿಗೆ ಸಾಥ್

ಇನ್ನು ಸಾಧಿಕ್ ಎನ್ನುವ ವ್ಯಕ್ತಿ ಗಾಂಧಿನಗರ ಠಾಣೆಯ ಅನೇಕ ಪೊಲೀಸರಿಗೆ ಪರಿಚಯ ಇದ್ದಾನೆ ಅಂತ ಹೇಳಿ ಜನ ಸಾಮಾನ್ಯರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಮಾಡಿ ಅವರ ವಿರುದ್ಧ ಠಾಣೆಯಲ್ಲಿ ಕೇಸ್ ಹಾಕಿಸುತ್ತೇನೆ ಎಂದು ಹಣ ವಸೂಲಿ ಸಹ ಮಾಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ.

ಇನ್ನು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ನ ಪನ್ನಿಕರ್ ಪೊಲೀಸ್ ಠಾಣೆಯ ಸಿಪಿಐ ಮತ್ತು ಪಿಎಸ್ಐ ಮತ್ತು ಸಿಬ್ಬಂದಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾರೋ ಕಾದು ನೋಡಬೇಕಿದೆ. ಇನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ ಅವರು ಕರೆಯನ್ನು ಸ್ವೀಕರಿಸಿಲಿಲ್ಲ.

“ಇನ್ನು ಗಾಂಧಿನಗರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರವಿಚಂದ್ರ ಅವರಿಗೆ ದೂರವಾಣಿ ಮೂಲಕ ಮಾತನಾಡಿಸಿದಾಗ ನಮ್ಮ ಗಮನಕ್ಕೆ ಇಲ್ಲ, ಗೋತ್ತಾದ್ರೆ ರೈಡ್ ಮಾಡುತ್ತೇವೆ ಎಂದರು.”

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending