ಲೈಫ್ ಸ್ಟೈಲ್
ಕನ್ನಡಕದೊಳ್ಗಿಂದ ಕಾಣ್ತಿದೆ ಈ ಅಂದ..!
ಸೀಸನ್ ಯಾವುದೇ ಇರಲಿ, ಸನ್ ಗ್ಲಾಸ್ ಟ್ರಂಕ್ ಮಾತ್ರ ಎವರ್ಗ್ರೀನ್
ಬಿಸಿಲು, ಮಳೆ; ಚಳಿ ಖತುಮಾನ ಏನೇ ಇರಲಿ, ಸನ್ಗ್ಲಾಸ್ ಒಂದು ಸ್ಟೈಲ್ ಸ್ಟೇಟ್ ಮೆಂಟ್ ಆಗಿ ಹೋಗಿದೆ. ಸೆಲಿಬ್ರಿಟಿಗಳಂತೂ ಮೇಕಪ್ ಇಲ್ಲದೆ ಇರಬಹುದು, ಸನ್ ಗ್ಲಾಸ್ ಇಲ್ಲದೆ ಇರುವುದಿಲ್ಲ ನೋಡಿ. ಹಾಗಾದರೆ ಸೆಲಿಬ್ರಿಟಿ ಗಳ 2018ರ ಹಿಟ್ ಲಿಸ್ಟ್ ನ ಅಲಂಕರಿಸಿರುವ ಮೋಸ್ಟ್ ವಾಂಟೆಡ್ ಸನ್ಗ್ಲಾಸ್ ಗಳ ಪಟ್ಟಿ ನಿಮಗಾಗಿ ಇಲ್ಲಿದೆ..
• ಕಣ್ಣು ಕೋರೈಸುವ ಕ್ಯಾಟ್ ಐ ಕಮಾಲ್..!
2017ರ ಫ್ಯಾಷನಬಲ್ ಟ್ರೆಂಡ್ 2018 ಕ್ಕೂ ಮುಂದುವರಿದಿದೆ ಕ್ಯಾಟ್ ಐ ಕ್ರೇಜ್! ಒಮ್ಮೆ ಯಾದರೂ ಟ್ರೈ ಮಾಡಲೇಬೇಕು ಬೇಕು ಎನಿಸುವ ಈ ಕ್ಯಾಟ್ ಐ ಸನ್ಗ್ಲಾಸ್ ಗಳು ನೋಡಲು ವಿಭಿನ್ನ ,ಅತ್ಯಾಕರ್ಷಕ. ಸದ್ಯ ಸೋಷಿಯಲ್ ಮೀಡಿಯಾ ದಲ್ಲಿ ಈ ಕಲರ್ಫುಲ್ ಕ್ಯಾಟ್ ಐ ಚಷ್ಮಾ ಹೆಂಗುಳೆಯರ ಹಾಟ್ ಫೇವರಿಟ್ ಟ್ರೆಂಡ್ ಆಗಿದೆ. ಹಿಂದಿನ ವರ್ಷಕ್ಕೆ ಸ್ವಲ್ಪ ಭಿನ್ನ ವಾಗಿ ಈ ಬಾರಿಯ ಕ್ಯಾಟ್ ಐ ಚಷ್ಮಾ ತೀವ್ರ ಚೀನಾದ ಎಲೆ ಆಕಾರದಲ್ಲಿ..ವಿಶಿಷ್ಟ ವಿನ್ಯಾಸಗಳಲ್ಲಿ ಲಲಿತಾಮಣಿಯರ ಹೃದಯ ಕದ್ದಿದೆ.
• ಮುತ್ತು, ವಜ್ರ ಗಳ ಹರಳಿನ ಸ್ಟೋನ್ ಸ್ಟಡಡ್ ಸನ್ ಗ್ಲಾಸ್ ಗಳು
ಈಗ ವಿಶ್ವ ದೆಲ್ಲೆಡೆ ಎಂಬಲಿಷ್ಡ್ ಸನ್ಗ್ಲಾಸ್ ಗಳದ್ದೇ ಹವಾ. ಕಲರ್ ಕಲರ್ ಕನ್ನಡಕದ ಸುತ್ತಲ ಮುತ್ತು, ಹರಳು, ಮೆಟಾಲಿಕ್ ಡಿಸೈನರ್ ಪೀಸ್ ಗಳಿರುವ ಫಂಕೀ ಕನ್ನಡಕಗಳ ಪ್ರಾಭಲ್ಯತೆ ಫ್ಯಾಷನ್ ಲೋಕದಲ್ಲಿ ಹೆಚ್ಚಾಗಿದೆ. ಪಾಶ್ಚಾತ್ಯ ದೇಶಗಳಲ್ಲಂತೂ ಈ ರೀತಿಯ ಎಂಬಲಿಷ್ಡ್ ಸನ್ಗ್ಲಾಸ್ ಗಳ ಕ್ರೇಜ್ ಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ. ಈ ಬಾರಿಯ 2018 ರ ಸ್ಪ್ರಿಂಗ್ ಸಮ್ಮರ್ ಫ್ಯಾಷನ್ ಗೆ ಇದು ಯುವ ಪೀಳಿಗೆಯ ಫ್ಯಾಷನ್ ಸ್ಟೇಟ್ ಮೆಂಟ್ ಆಗಿಹೋಗಿದೆ.
• ಮತ್ತೆ ಬಂದಿದೆ ದೊಡ್ಡ ಗಾತ್ರದ ಕಾಲಾ ಚಷ್ಮಾ
80 ರ ದಶಕದ ಸಿನಿಮೀಯಾ ಶೈಲಿಯ ದೊಡ್ಡ ದೊಡ್ಡ ಬಳೆ ಗಾತ್ರದ ಓವರ್ ಸೈಜ್ ಸನ್ಗ್ಲಾಸ್ ಗಳು ಫ್ಯಾಷನ್ ಲೋಕದಲ್ಲಿ ಭಾರೀ ಬೇಡಿಕೆ ಯಲ್ಲಿದೆ. ಪುಟ್ಟ ಪುಟ್ಟ ಸುಂದರ ಸುಕೋಮಲ ಕಣ್ಣುಗಳ ರಕ್ಷಣೆ ಗೆ ಹೇಳಿಮಾಡಿಸಿದಂತಿದೆ ಈ ದೊಡ್ಡ ಗಾತ್ರದ ಕಾಲಾ ಚಷ್ಮಾ. ಹಾಲಿವುಡ್, ಬಾಲಿವುಡ್, ಸ್ಯಾಂಡಲ್ ವುಡ್ ನ ತಾರಾಮಣಿಯ ಹಾಟ್ ಫೇವರಿಟ್ ಇದಾಗಿದೆ.
• ವೈರಲ್ ಆಯ್ತು ಕಲರ್ಫುಲ್ ಸನ್ ಗ್ಲಾಸ್ ನ ಜಾದೂ
ಕಲರ್ ಕಲರ್ ಸನ್ ಗ್ಲಾಸ್ ಈಗಿನ ಹೊಸ ಟ್ರೆಂಡ್ ಆಗಿದೆ. ಕೆಂಪು, ಹಳದಿ, ನೇರಳೇ..ನೀಲಿ ಬಣ್ಣದ ಸನ್ಗ್ಲಾಸ್ ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಹಳೆಯ ಕಪ್ಪು ಬಣ್ಣದ ಟ್ರೆಂಡ್ ಅನ್ನು ಈ ರಂಗಬಿರಂಗೀ ಕಲರ್ಫುಲ್ ಸನ್ ಗ್ಲಾಸ್ ಗಳು ನುಂಗಿಹಾಕಿವೆ. ಕಾಲೇಜು ವಿದ್ಯಾರ್ಥಿಗಳು, ಫ್ಯಾಷನ್ ಪ್ರಿಯರು ಈ ರೀತಿಯ ಬಣ್ಣ ಬಣ್ಣದ ಕನ್ನಡಕಗಳಿಗೆ ಮಾರುಹೋಗಿದ್ದಾರೆ.
• 2018 ರ ರಾಂಪ್ ನಲ್ಲಿ ಸೈ-ಫೈ ಸನ್ಗ್ಲಾಸ್ ಗಳ ದರ್ಬಾರು
2018ರ ಸ್ಪ್ರಿಂಗ್ ಸಮ್ಮರ್ ಫ್ಯಾಷನ್ ಫೆಸ್ಟಿವಲ್ ನಲ್ಲಿ ಗಮನ ಸೆಳೆಯುತ್ತಿಯುವ ಮತ್ತೊಂದು ವಿಶಿಷ್ಟ ವಿನ್ಯಾಸಗಳಲ್ಲಿ ” ಸೈ-ಫೈ” ಕನ್ನಡ ವೂ
ಒಂದು. ಸೈಂಟಿಫಿಕ್ ಲುಕ್ ನೀಡುವ ಈ ಕಟ್ಟಡಗಳು, ಬಾಹ್ಯಕಾಶದಲ್ಲಿ ಧರಿಸುವ ಕನ್ನಡ
ಗಳ ಮಾದರಿಯಲ್ಲಿ ವಿನ್ಯಾಸ ಗೊಳಿಸಲಾಗಿದೆ. ಈ ರೀತಿಯ ವಿಚಿತ್ರ ವಿನ್ಯಾಸಗಳು ಯುವ ಪೀಳಿಗೆಗೆ ಬಹಳ ಟ್ರೆಂಡೀ ಎನಿಸುತ್ತದೆ. ಬಹಳ ದುಬಾರಿ ಆದರೂ ಸೋಷಿಯಲ್ ಮೀಡಿಯಾ ದಲ್ಲಿ ಈ ಸೈ-ಫೈ ಸನ್ಗ್ಲಾಸ್ ಗಳು ಭಾರೀ ಸದ್ದು ಮಾಡುತ್ತಿವೆ.
• ಸದ್ದು ಮಾಡುತ್ತಿವೆ ಚೌಕಾಕಾರದ ಸ್ಕ್ವೇರ್ ಸನ್ಗ್ಲಾಸ್ ಗಳು
ಹಿಂದಿನ ವರ್ಷದ ಟಾಪ್ ಟ್ರೆಂಡ್ ಎನ್ನಿಸಿಕೊಂಡ ಚೌಕಾಕಾರದ ಸನ್ಗ್ಲಾಸ್ ಗಳು ಈ ವರ್ಷ ವುಡ್ ತಮ್ಮ ಬೇಡಿಕೆ ಉಳಿಸಿಕೊಂಡಿದೆ. ಸ್ಕ್ವೇರ್ ಶೇಡ್ಸ್
ಮೋಹ ಮಾಸಿಲ್ಲ, ಈಗಲೂ ಪ್ರತಿಷ್ಠಿತ ಕಂಪನಿಗಳ ಬ್ರ್ಯಾಂಡ್ ನ ಚೌಕಾಕಾರದ ಸನ್ಗ್ಲಾಸ್ ಮಾನಿನಿಯಯ ಮುಖಾರವಿಂದವನ್ನು ಅಲಂಕರಿಸಿದೆ.
• ಜಿಯೋಮೆಟ್ರಿಕ್ ವಿನ್ಯಾಸದ ರಂಗಬಿರಂಗೀ ಕನ್ನಡಕ
ಕೇವಲ, ಗೋಲಾಕಾರ ಮತ್ತು ಚೌಕಾಕಾರದ ಸನ್ಗ್ಲಾಸ್ ಗಳು ಮಾತ್ರ ವಲ್ಲದೇ, ವಿವಿಧ ಆಕಾರದ ಫಂಕೀ ಸನ್ಗ್ಲಾಸ್ ಗಳು ಯುವ ಪೀಳಿಗೆಯ ಮನಸ್ಸು ಗೆದ್ದಿದೆ. ಹಾರ್ಟ್, ಪೆಂಟಗನ್, ರೆಕ್ಕೆ, ಹೂ, ಹೀಗೆ ಹಲವಾರು ವಿಚಿತ್ರ ವಿನ್ಯಾಸಗಳು ಸನ್ಗ್ಲಾಸ್ ರೂಪದರ್ಶಿ ತಾಳಿವೆ. ಸದಾ ಹೊಸ ಫ್ಯಾಷನ್ನ ಅನ್ವೇಷಣೆಯಲ್ಲಿ ಇರುವ ಸ್ಟೈಲ್ ಪ್ರಿಯರು ಈ ಸನ್ಗ್ಲಾಸ್ ಗಳಿಗೆ ಮಾರುಹೋಗಿದ್ದಾರೆ.
• ಮಲ್ಟಿಕಲರ್ ಪ್ರೇಮ್ ಸನ್ಗ್ಲಾಸ್ ಗಳ ಮಜಾ ನೇ ಬೇರೆ
ಬ್ಲೂ ಫ್ರೇಮ್, ವೈಟ್ ಫ್ರೇಮ್ , ಮೆಟಾಲಿಕ್, ಹೀಗೇ ಹಲವಾರು ರೀತಿಯ ಫ್ರೇಮ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಒಂದು ವಿಶಿಷ್ಟ ವಿನ್ಯಾಸದಲ್ಲಿ ಮಲ್ಟಿಕಲರ್ ಫ್ರೇಮ್ ಸನ್ಗ್ಲಾಸ್ ಗಳು ತುಂಬಾ ನೇ ಟ್ರೆಂಡೀ ಹಾಗೂ ಕಲರ್ಫುಲ್ ಆಗಿದ್ದು ಸೆಲಿಬ್ರಿಟಿಗಳ ಹಿಟ್ ಲಿಸ್ಟ್ ನ ಅಲಂಕರಿಸಿವೆ.
ಲಾಸ್ಟ್ ಟಿಪ್
• ನಿಮ್ಮ ಮುಖದ ಆಕಾರಕ್ಕೆ ಹೊಂದುವಂತಹ ಸನ್ಗ್ಲಾಸ್ ನನ್ನ ಆಯ್ಕೆ ಮಾಡಿಕೊಳ್ಳಿ.
• ನೆನಪಿರಲಿ, ನೀವು ಧರಿಸುವ ಸನ್ಗ್ಲಾಸ್ ನಿಮ್ಮ ಸ್ಟೈಲ್ ಸ್ಟೇಟ್ ಮೆಂಟ್ ಆಗಿರುತ್ತದೆ.
• ನಿಮ್ಮ ಆಯ್ಕೆ ಯಾವುದೇ ಬಣ್ಣದ, ಆಕಾರದ ಸನ್ಗ್ಲಾಸ್ ಆಗಿದ್ದರೂ ಅದು ನಿಮ್ಮ ಫ್ಯಾಷನ್ ಹಾಗೂ ಸ್ಟೈಲ್ ಅನ್ನು ಎತ್ತಿ ಹಿಡಿಯುವಂತಿರಲಿ.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
ಸುದ್ದಿದಿನ ಡೆಸ್ಕ್:ಬೆಂಗಳೂರಿನಲ್ಲಿ ಪ್ರೀತಿಯೊಂದು ರಕ್ತಸಿಕ್ತ ಅಂತ್ಯ ಕಂಡಿದೆ. ಮದುವೆಗೆ ನಿರಾಕರಿಸಿದ ಪ್ರೇಯಸಿಯನ್ನು ಪ್ರಿಯಕರನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಪೈಪ್ಲೈನ್ ರಸ್ತೆಯಲ್ಲಿ ನಡೆದಿದೆ.
23 ವರ್ಷದ ಅಂಜಲಿ ಕೊಲೆಯಾದ ಯುವತಿಯಾಗಿದ್ದು, ರಾಜೀವ್ ಬಂಧಿತ ಆರೋಪಿ. ಕಳೆದ ಮೂರು-ನಾಲ್ಕು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ಹಿಂದೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಪರಿಚಯವಾಗಿ ಸ್ನೇಹ ಬೆಳೆದು, ಬಳಿಕ ಅದು ಪ್ರೀತಿಗೆ ತಿರುಗಿತ್ತು.
ಆದರೆ ರಾಜೀವ್ಗೆ ಕ್ರಿಮಿನಲ್ ಹಿನ್ನೆಲೆ ಇದ್ದ ಕಾರಣ ಅಂಜಲಿ ಕುಟುಂಬಸ್ಥರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಹಲವು ಬಾರಿ ಕುಟುಂಬಸ್ಥರನ್ನು ಒಪ್ಪಿಸಲು ರಾಜೀವ್ ಪ್ರಯತ್ನಿಸಿದ್ದರೂ ಫಲಿಸಿರಲಿಲ್ಲ. ಇತ್ತೀಚೆಗೆ ಪೋಷಕರ ಒತ್ತಾಯಕ್ಕೆ ಮಣಿದ ಅಂಜಲಿ ರಾಜೀವ್ನಿಂದ ದೂರವಾಗಲು ಆರಂಭಿಸಿದ್ದಳು. ಇಂದು ಸಂಜೆ ಅಂಜಲಿಯನ್ನು ಊಟದ ನೆಪದಲ್ಲಿ ಕರೆಸಿಕೊಂಡಿದ್ದ ರಾಜೀವ್, ಮತ್ತೊಮ್ಮೆ ಮದುವೆ ವಿಚಾರ ಪ್ರಸ್ತಾಪಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಕೋಪಗೊಂಡ ರಾಜೀವ್ ಚಾಕುವಿನಿಂದ ಅಂಜಲಿಯ ಕುತ್ತಿಗೆಗೆ ಇರಿದಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಂಜಲಿಯನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃ*ತಪಟ್ಟಿದ್ದಾಳೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪರಿಶೀಲನೆ ನಡೆಸಿ, ಕೆಲವೇ ನಿಮಿಷಗಳಲ್ಲಿ ಆರೋಪಿ ರಾಜೀವ್ನನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಿಮ್ಮ ಕಥೆಗೆ ಹೊಸ ವೇದಿಕೆ ; ಕಥೆಗಾರರಿಗೆ ಪ್ರಿಯಾ ಸುದೀಪ್ ಆಹ್ವಾನ
ಸುದ್ದಿದಿನ ಡೆಸ್ಕ್:ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಸಂಸ್ಥೆಯಡಿ ಪ್ರಿಯಾ ಸುದೀಪ್ ನಿರ್ಮಿಸಿದ ಮೊದಲ ಚಿತ್ರ ‘ಮ್ಯಾಂಗೋ ಪಚ್ಚ’. ಸಂಚಿತ್ ಸಂಜೀವ್ ಅಭಿನಯದ ಈ ಚಿತ್ರ ಹೆಚ್ಚು ಸದ್ದು ಮಾಡಲಿಲ್ಲ.
ಈ ಸೋಲನ್ನು ಹಿಂದಕ್ಕೆ ಹಾಕಿ, ಪ್ರಿಯಾ ಸುದೀಪ್ ಇನ್ನಷ್ಟು ಹೊಸ ಕಥೆಗಳನ್ನು ತೆರೆಗೆ ತರುವುದಕ್ಕೆ, ಹೊಸ ಚಿತ್ರಗಳನ್ನು ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ. ಕಥೆಗಾರರಿಗೆ ಆಹ್ವಾನ ನೀಡಿದ್ದಾರೆ. ‘ನಾವು ಹುಡುಕುತ್ತಿರುವುದು ಕೇವಲ ಕಥೆಗಳಲ್ಲ. ಮನಸ್ಸುಗಳನ್ನು ಮುಟ್ಟುವ ಭಾವನೆಗಳು, ಚಿಂತನೆಗೆ ಹಚ್ಚುವ ವಿಚಾರಗಳು ಮತ್ತು ಪರದೆಯ ಮೇಲೆ ಹೊಸ ಇತಿಹಾಸ ಬರೆಯುವ ಕಲ್ಪನೆಗಳು.
ನಿಮ್ಮ ಬಳಿ ಮೌಲಿಕ ಕಥೆ-ಚಿತ್ರಕಥೆ ಇದ್ದರೆ ಅಥವಾ ವಿಶಿಷ್ಟ ಕಥಾ ಪರಿಕಲ್ಪನೆ ಇದ್ದರೆ, ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನ ಮತ್ತು ಸೃಜನಾತ್ಮಕತೆಯನ್ನು ಹೊಂದಿರುವ ಲೇಖಕರು, ಕಥೆಗಾರರು ಮತ್ತು ಸೃಜನಶೀಲ ಮನಸ್ಸುಗಳನ್ನು ನಾವು ಸ್ವಾಗತಿಸುತ್ತೇವೆ. ಎಲ್ಲಾ ಪ್ರಕಾರಗಳು ಮತ್ತು ಎಲ್ಲಾ ಮಾದರಿಗಳಲ್ಲಿನ ಕಥಾ ಸಲ್ಲಿಕೆಗಳನ್ನು ನಾವು ಸ್ವಾಗತಿಸುತ್ತೇವೆ. ನಿಮ್ಮ ಕಥೆಯೇ ಮುಂದಿನ ದೊಡ್ಡ ಪ್ರಯಾಣದ ಆರಂಭವಾಗಬಹುದು’ ಎಂದು ಪ್ರಿಯಾ ಸುದೀಪ್, ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಜೊತೆಗೆ ಒಂದು ಮೊಬೈಲ್ ಸಂಖ್ಯೆಯನ್ನು ಸಹ ಹಂಚಿಕೊಂಡಿದ್ದಾರೆ. ಆದರೆ, ಕರೆ ಮಾಡುವಂತಿಲ್ಲ. ಚಾಟ್ ಮಾತ್ರ ಮಾಡಬಹುದು. ಕಥೆಗಳಿದ್ದರೆ 6663307434 ಸಂಖ್ಯೆಯನ್ನು ಸಂಪರ್ಕಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂಕಣ7 days agoದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
-
ದಿನದ ಸುದ್ದಿ4 days agoಚನ್ನಗಿರಿ | ಲವ್ ಮ್ಯಾರೇಜ್ ; ಪೊಲೀಸ್ ಠಾಣೆ ಆವರಣದಲ್ಲೇ ಯುವಕನಿಗೆ ಚಾಕು ಇರಿತ
-
ದಿನದ ಸುದ್ದಿ2 days agoದಾವಣಗೆರೆ | ತಾಪಂ ಅನುದಾನ ದುರುಪಯೋಗ: ಮೂವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ಚುರುಕು
-
ದಿನದ ಸುದ್ದಿ4 days ago
ಮತದಾರರ ಪಟ್ಟಿ ಪರಿಷ್ಕರಣೆ | ಪ್ರತಿಯೊಬ್ಬರ ಮನೆಬಾಗಿಲಿಗೆ ತಲುಪಲಿವೆ ಫಾರಂಗಳು ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ
-
ದಿನದ ಸುದ್ದಿ7 hours agoಮಾಠಾಧೀಶರ ಮೇಲೆ ಹಲ್ಲೆ ; ನಿರ್ಲಕ್ಷಿಸಿದರೆ ದುಷ್ಕೃತ್ಯ ಹೆಚ್ಚಳ ಸಂಭವ; ಕಠಿಣ ಕ್ರಮಕ್ಕೆ ಎಚ್.ಆಂಜನೇಯ ಆಗ್ರಹ






