ದಿನದ ಸುದ್ದಿ
ಎಲ್ಲಾ ಬುದ್ಧರುಗಳ ಬೋಧನೆಯ ತಿರುಳೆ ಈ ಗಾಥೆ..!
- ಶಿವಸ್ವಾಮಿ, ಬೌದ್ಧುಪಾಸಕರು
“ಸಬ್ಬ ಪಾಪಸ್ಸ ಅಕರಣಂ,
ಕುಸಲಸ್ಸ ಉಪಸಂಪದಾ,
ಸಚಿತ್ತ ಪರಿಯೋದಪನಂ,
ಏತಂ ಬುದ್ಧಾನಸಾಸನಂ “
– ಧಮ್ಮಪದ, -183.
ಈ ಗಾಥೆಯು ಒಬ್ಬ ಸಾಧಕನು ಅಷ್ಟಾಂಗ ಮಾರ್ಗವನ್ನು ತನ್ನ ನಿತ್ಯಜೀವನದಲ್ಲಿ ಹೇಗೆ ಪಾಲಿಸಬೇಕೆಂಬುದನ್ನು ಹೇಳುತ್ತದೆ.
‘ಸಬ್ಬ ಪಾಪಸ್ಸ ಅಕರಣಂ‘ – ಕೆಟ್ಟದನ್ನು ಮಾಡದಿರುವುದು ಅಂದರೆ ಸರಿಯಾದ ಮಾತಾನ್ನಾಡುವ,ಸರಿಯಾದ ಕೆಲಸವನ್ನು ಮಾಡುವ ಮತ್ತು ಸರಿಯಾದ ಜೀವನೋಪಾಯದ ವಿಚಾರಕ್ಕೆ ಸಂಬಂಧಿಸಿದೆ.ಯಾರು ಮಾತು,ಕೃತಿ ಮತ್ತು ಸಂಪಾದನೆಯಲ್ಲಿ ಕೆಡಕನ್ನು ಮಾಡುವುದಿಲ್ಲವೋ ಅವರು ಶೀಲವನ್ನು ಪಾಲಿಸುತ್ತಾರೆ.
‘ಕುಸಲಸ್ಸ ಉಪಸಂಪದಾ‘, ಕುಶಲವನ್ನು ಸಂಪಾದಿಸುವುದು ಧ್ಯಾನಕ್ಕೆ (ಸಮಾಧಿ) ಸಂಬಂದಿಸಿರುವುದು ಸರಿಯಾದ ಪ್ರಯತ್ನ,ಸರಿಯಾದ ಮಾನಸಿಕ ಜಾಗ್ರತೆ ಮತ್ತು ಸರಿಯಾದ ಏಕಾಗ್ರತೆ ಒಳಗೊಂಡಿದೆ. ಯಾರು ಸಮತಾ ಧ್ಯಾನದ ಮೂಲಕ ಮನಸ್ಸನ್ನ ತರಬೇತಿಗೊಳಿಸಿಕೊಳ್ಳುತ್ತಾರೊ ಅವರು ಅನಂದವನ್ನು ಬೆಳೆಸಿಕೊಳ್ಳುತ್ತಾರೆ.ಆ ಮೂಲಕ ಚೇತೋ ವಿಮುಕ್ತಿಯನ್ನು ( ಮನಸ್ಸಿನಿಂದ ಬಿಡುಗಡೆ) ಪಡೆಯುತ್ತಾರೆ.
‘ಸಚಿತ್ತ ಪರಿಯೋದಪನಂ‘, ಮನಸ್ಸನ್ನು ಪರಿಶುದ್ಧಗೊಳಿಸಿಕೊಳ್ಳುವುದು ಪ್ರಜ್ಞೆಗೆ ಸಂಬಂಧಪಟ್ಟಿದೆ. ಈ ಪ್ರಜ್ಞೆಯಲ್ಲಿ ಸರಿಯಾದ ದೃಷ್ಟಿ ಮತ್ತು ಸರಿಯಾದ ಸಂಕಲ್ಪ ಅಥವಾ ಆಲೋಚನೆ ಸೇರಿಕೊಂಡಿವೆ. ಯಾರು ವಿಪಸ್ಸನ ಧ್ಯಾನದ ಮೂಲಕ ಮನಸ್ಸನ್ನು ವಿಕಸನಗೊಳಿಸುತ್ತಾರೊ ಅವರು ಎಷ್ಟೇ ಸೂಕ್ಷ್ಮ ವಿರುವ ಮಾನಸಿಕ ಕೊಳಕುಗಳನ್ನು ಬುಡಮೇಲು ಮಾಡಿ ಆ ಮೂಲಕ ಮನಸ್ಸು ಪರಿವರ್ತನೆಯಾಗಿ ಸಂಸಾರ ಬಂಧನದಿಂದ (ಮತ್ತೆ ಮತ್ತೆ ಹುಟ್ಟುವ) ಬಿಡುಗಡೆ ಹೊಂದುತ್ತಾರೆ.
ಶೀಲ ಸಮಾಧಿ ಪ್ರಜ್ಞೆ ಈ ಮೂರನ್ನು ಸಾಧನೆಯಲ್ಲಿ ತರುವುದೆಂದರೆ ಮೂರು ರೀತಿಯ ಭಿನ್ನವಾಗಿದೆ ಮಾನಸಿಕ ಕ್ರಿಯೆಗಳು ಮತ್ತು ಬದುಕಿನ ರೀತಿಗಳಾಗಿವೆ.ಇವು ಯಾವುವೆಂದರೆ ಸಿಕ್ಖಾ (ತರಬೇತಿ), ಭಾವನಾ (ಮನಸ್ಸಿನ ಬೆಳವಣಿಗೆ) ಮತ್ತು ವಿಶುದ್ಧಿ (ಮನಸ್ಸಿನ ಶುದ್ಧೀಕರಣ) ಸಿಕ್ಖಾ ಎಂದರೆ ಶೀಲದ ಮೂಲಕ ತನ್ನನ್ನು ತಾನೇ ತಯಾರು ಮಾಡಿಕೊಳ್ಳುವುದು – ಅದು ಪಂಚಶೀಲಗಳು ಮತ್ತು ಅಷ್ಟಶೀಲಗಳು ದಶಶೀಲಗಳು ಹಾಗೆಯೇ 227 ಭಿಕ್ಕು ನಿಯಮಗಳು ಅಥವಾ ಸನ್ಯಾಸಿ ನಿಯಮಗಳು.
ಒಬ್ಬನು ತನ್ನನ್ನು ಕಮ್ಮ ವಾಚಾ,ಕಮ್ಮ ಕಮ್ಮಂತ, ಕಮ್ಮ ಆಜೀವ(ಮಾತು ಕ್ರಿಯೆ ಜೀವನೋಪಾಯ) ಶೀಲಗಳ ಮೂಲಕ ಗುಣವರ್ಧನೆ ಮತ್ತು ನೈತಿಕ ಬಲವನ್ನು ಹೊಂದುತ್ತಾನೆ.ಶೀಲವನ್ನು ಶ್ರಿಮಂತಗೊಳಿಸಿದಷ್ಟೂ ಆತನ ನಡವಳಿಕೆ ಶುದ್ಧವಾಗಿ ಮನಸ್ಸು ಪರಿಶುದ್ಧವಾಗುತ್ತದೆ.
ಯಾರು ಧ್ಯಾನದಲ್ಲೇ ಸಾಧನೆಗೈದು ಮುಂದುವರಿಯುತ್ತಾರೊ ಅವರು ಮಾನಸಿಕ ಏಕಾಗ್ರತೆಯನ್ನು ಬೆಳೆಸಿಕೊಳ್ಳುತ್ತಾರೆ.ಈ ಮೂಲಕ ಮಾನಸಿಕ ಸ್ಥಿತಿಗಳಿಗೂ ಮೀರಿದ ಸಮಾಧಿ ಸ್ಥಿತಿ ಅಥವಾ ಜಾನದ ಹಂತಕ್ಕೆ ತಲುಪುತ್ತಾರೆ. ಬೌದ್ಧ ಧಮ್ಮದಲ್ಲಿ 40 ಕ್ಕೂ ಹೆಚ್ಚು ರೀತಿಯ ಧ್ಯಾನಗಳಿವೆ ಪ್ರಮುಖವಾದವು ಸಮತಾ ಮತ್ತು ವಿಪಸ್ಸನಾ,ಸಮತಾ ಧ್ಯಾನವು ಸಮಾಧಿಯ ವಿವಿಧ ಸ್ತರಗಳಿಗೆ ಕೊಂಡೊಯ್ದು ಮನಸ್ಸನ್ನು ಉನ್ನತ ಸ್ಥಿತಿಗಳಿಗೆ ಕರೆದೊಯ್ಯುತ್ತದೆ,ಮನಸ್ಸು ಎಲ್ಲ ರೀತಿಯ ಮಾನಸಿಕ ಅಡೆತಡೆಗಳಿಂದ ಅಂದರೆ ಧ್ಯಾನ ಶೀಲ ಪಾರಮಾರ್ಥಿಕ ಬೆಳವಣಿಗೆಗೆ ಅಡ್ಡಿ ಬರುವ ಸಂಗತಿಗಳಿಂದ ಮುಕ್ತವಾಗುತ್ತದೆ.ಹೀಗೆ ಒಬ್ಬನು ಉತ್ತಮ ಸ್ಥಿತಿಗಳತ್ತ ಸಾಗುತ್ತಾನೆ.
ಈ ಮಾನಸಿಕ ಅಡೆತಡೆಗಳು ಇಂದ್ರಿಯ ಸಂಬಂಧ ಆಸೆಗಳು,ದ್ವೇಷ, ಸೋಮಾರಿತನ, ಅಶಾಂತಿ ಅನುಮಾನ.ಒಮ್ಮೆ ಮನಸ್ಸು ಅಡೆತಡೆಗಳಿಂದ ಹೊರತಾದಲ್ಲಿ ಚಿತ್ತವಿಶುದ್ಧಿಯಾಗುತ್ತದೆ.ಮನಸ್ಸೊಂದೇ ಶುದ್ಧಿಯಾಗುವುದರಿಂದ ಸಂಸಾರಿಕ ತಾಪತ್ರಯಗಳಿಂದ ಮುಕ್ತಿ ದೊರಕದು.ಉತ್ತಮ ಮಾನಸಿಕ ಸ್ಥಿತಿಗಳನ್ನು ಬೆಳೆಸಿಕೊಳ್ಳುವುದರ ಮೂಲಕ ಒಬ್ಬನು ಹಲವಾರು ಲೋಕೋತ್ತರ ಶಕ್ತಿಗಳನ್ನು ಅಥವಾ ಜ್ಞಾನದ ಸ್ಥಿತಿಗಳನ್ನು ಪಡೆಯುತ್ತಾನೆ.
ಯಾರು ಸಮತಾ ಧ್ಯಾನಕ್ಕಿಂತ ಭಿನ್ನವಾದ ವಿಪಸ್ಸನಾ ಧ್ಯಾನದಲ್ಲಿ ಸಾಧನೆಗೈಯುತ್ತಾರೊ ಅವರು ವಾಸ್ತವತೆಗಳ ವಿಭಿನ್ನ ಹಂತಗಳನ್ನು ಬೆಳೆಸಿಕೊಳ್ಳುತ್ರಾರೆ. ಧ್ಯಾನಾವಸ್ಥೆಯ ಈ ವಿವಿಧ ಮಜಲುಗಳು ಮಾನಸಿಕ ಕೊಳಕುಗಳನ್ನು ಬುಡಮೇಲು ಮಾಡಿ ಮನಸ್ಸನ್ನು ಪರಿಶುದ್ಧಗೊಳಿಸುವುದಲ್ಲದೆ ಪರಿವರ್ತನೆಯನ್ನು ಮಾಡುತ್ತವೆ. ಪರಿವರ್ತಿತಗೊಂಡ ಮನಸ್ಸು ಲೋಕೀಯ ಚಿತ್ತದಿಂದ ಲೋಕೋತ್ತರ ಚಿತ್ತಸ್ಥಿತಿಗೆ ಹೊಗುತ್ತದೆ.
4 ರೀತಿಯ ಲೋಕೋತ್ತರ ಚಿತ್ತ ಸ್ಥಿತಿಗಳಿವೆ;ಅಂದರೆ ಧ್ಯಾನದ ಉನ್ನತ ಸ್ಥಿತಿಯನ್ನು ಮೀರಿರುವ ನಿಬ್ಬಾಣವನ್ನು ಮುಟ್ಟಿರುವ ಚಿತ್ತ ಸ್ಥಿತಿ,ಕಾಮಲೋಕ (ಇಂದ್ರಿಯ ಸಂಬಂಧ ಆಸೆಗಳಿಂದ ಕೂಡಿದ ವಲಯ) ರೂಪಲೋಕ (ಸೂಕ್ಷ್ಮ ವಸ್ತುಗಳಿಂದ ಕೂಡಿದ ವಲಯ) ಅರೂಪ ಲೋಕ (ರೂಪರಹಿತ ಸಂಗತಿಗಳಿಂದ ಕೂಡಿದ ವಲಯ) ಈ ಮೂರು ರೀತಿಯ ಅಸ್ತಿತ್ವಗಳಿಂದ ಕೂಡಿದ ಲೋಕೀಯ ಚಿತ್ತಸ್ಥಿತಿಯನ್ನು ಮೀರಿರುವ ಲೋಕೋತ್ತರ ಚಿತ್ತ.
ತಾನೇ ತನ್ನ ಅಕುಶಲ ಕರ್ಮಗಳಿಂದ (ಪಾಳಿಯಲ್ಲಿ ಕಮ್ಮಗಳು )ಸೃಷ್ಟಿಸಿಕೊಂಡ ಸಂಯೋಜನೆಗಳನ್ನು ನಾಶಮಾಡಿಕೊಂಡ ಮೇಲೆ ಮನಸ್ಸು ಮೇಲೆ ಹೇಳಿದ ಮೂರು ಅಸ್ತಿತ್ವ ವಲಯಗಳನ್ನು ಮೀರುತ್ತಾ ಬಿಡುಗಡೆಯತ್ತಾ ಪಯಣಿಸುತ್ತಾದೆ.ಈ ಸಂಯೋಜನೆಗಳೇ ಮುಂದಿನ ಹುಟ್ಟಿಗೆ ಅಥವಾ ಪುನಬ್ಭವಕ್ಕೆ ಕೊಂಡಿಯಾಗುತ್ತವೆ.ಒಮ್ಮೆ ಈ ಸಂಯೋಜನೆಗಳು ಮುರಿದವೆಂದರೆ ಮನಸ್ಸು ಪ್ರಾಪಂಚಿಕ ಅಸ್ತಿತ್ವದಿಂದ ವಿಮುಕ್ತಿಗೊಳ್ಳುತ್ತದೆ.4 ಲೋಕೋತ್ತರ ಫಲ ಚಿತ್ತದಿಂದ ಉದ್ಭವವಾಗುವ 4 ಹಂತಗಳ ಬಿಡುಗಡೆ ಇದೆ.ಈ 4 ಲೋಕೋತ್ತರ ಸ್ಥಿತಿಗಳ ಸಂಯೋಜನೆಗಳನ್ನು ನಾಶ ಮಾಡುತ್ತಾ ಹೋಗುತ್ತದೆ ಈ ಮೂಲಕ ಮನಸ್ಸು ಬಿಡುಗಡೆಗೊಂಡು ಪರಿಶುದ್ಧವಾಗುತ್ತದೆ.
ಕೊನೆಯ ಸಾಲು “ಏತಂ ಬುದ್ಧಾನುಸಾಸನಂ” ಇದರಲ್ಲಿ 3 ರೀತಿಯ ತರಬೇತಿ ಭೋಧನೆ ಇದೆ
ಅವು ಸಿಕ್ಖಾ (ಮನಸ್ಸಿನ ತರಬೇತಿ),
ಭಾವನ (ಮನಸ್ಸಿನ ಬೆಳವಣಿಗೆ), ಮತ್ತು ವಿಶುದ್ಧಿ (ಪರಿಶುದ್ಧಿ) ಇವೇ ಎಲ್ಲಾ ಬುದ್ಧರುಗಳ ಭೋಧನೆಯ ತಿರುಳು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಇಂಗ್ಲೀಶ್ ಪಠ್ಯಕ್ರಮ ಕಾರ್ಯಗಾರ
ಸುದ್ದಿದಿನ,ದಾವಣಗೆರೆ:ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ದಾವಣಗೆರೆ ವಿಶ್ವವಿದ್ಯಾಲಯದ ಇಂಗ್ಲೀಷ್ ಪ್ರಾಧ್ಯಾಪಕರ ವೇದಿಕೆಯ (FODCET) ಸಂಯುಕ್ತ ಆಶ್ರಯದಲ್ಲಿ “ರಾಜ್ಯ ಶಿಕ್ಷಣ ನೀತಿ (S.E.P) ಇಂಗ್ಲೀಷ್ ಪಠ್ಯಕ್ರಮ” ಕುರಿತ ಒಂದು ದಿನದ ಕಾರ್ಯಗಾರವನ್ನು ದಿನಾಂಕ 02-03-2026 ರಂದು ಉದ್ಘಾಟಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಕರಿಬಸಪ್ಪ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ದಾವಣಗೆರೆ ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನ್ ಡಾ. ಲೋಕೇಶ್ ಎಂ.ಯು. ಭಾಗವಹಿಸಿ, ಎಸ್.ಇ.ಪಿ ಪಠ್ಯಕ್ರಮದ ಉದ್ದೇಶ, ವಿನ್ಯಾಸ ಮತ್ತು ಪರಿಣಾಮಕಾರಿತ್ವದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂಗ್ಲೀಷ್ ವಿಭಾಗದ ಸಂಯೋಜಕರಾದ ಡಾ. ಫಕ್ಕೀರೇಶ ಹಳ್ಳಳ್ಳಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು.
ಈ ಕಾರ್ಯಗಾರದಲ್ಲಿ ದಾವಣಗೆರೆ ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲಾ ಸರ್ಕಾರಿ, ಖಾಸಗಿ ಅನುದಾನಿತ ಹಾಗೂ ಅನುದಾನರಹಿತ ಪದವಿ ಕಾಲೇಜುಗಳಲ್ಲಿ ಇಂಗ್ಲೀಷ್ ಭಾಷೆ ಮತ್ತು ಸಾಹಿತ್ಯ ಬೋಧಿಸುವ ಪ್ರಾಧ್ಯಾಪಕರು ಭಾಗವಹಿಸಿ, ಪಠ್ಯಕ್ರಮದ ಅನುಷ್ಠಾನ, ಬೋಧನಾ ವಿಧಾನಗಳು ಹಾಗೂ ಮೌಲ್ಯಮಾಪನ ಕ್ರಮಗಳ ಕುರಿತು ವಿಚಾರ ವಿನಿಮಯ ನಡೆಸಿದರು.ಸ.ಪ್ರ.ದ. ಮಹಿಳಾ ಕಾಲೇಜಿನಲ್ಲಿ ಇಂಗ್ಲೀಷ್ ಪಠ್ಯಕ್ರಮ ಕುರಿತ ಮಹತ್ವದ ಕಾರ್ಯಗಾರ ಯಶಸ್ವಿ.
ವೇದಿಕೆಯಲ್ಲಿ ಪ್ರಾಧ್ಯಾಪಕರಾದ ಡಾ. ಜಯಪ್ಪ, ಡಾ. ಭೀಮಪ್ಪ, ಡಾ. ಮಹೇಶ್ ನಾಯ್ಕ್, ಡಾ.ಮಧುಸೂದನ್, ಡಾ. ವಿಜಯಕುಮಾರ್, ಡಾ. ನಾಗನಗೌಡ ಹಾಗೂ ಡಾ. ಶಿವರಾಜ್, ಡಾ. ತ್ರಿವೇಣಿ, ಡಾ. ಶಶಿಕಲಾ ಉಪಸ್ಥಿತರಿದ್ದರು.
ಐ ಕ್ಯೂ ಏ ಸಿ ಸಂಯೋಜಕರು ಮತ್ತು ಆಂಗ್ಲ ವಿಭಾಗದ ಮುಖ್ಯಸ್ಥರಾದ ಡಾ. ಭೀಮಪ್ಪ ಎಂ ಪಿ ಕಾರ್ಯಕ್ರಮದ ಕುರಿತು ಪ್ರಸ್ತಾಪಿಸಿ ಮತ್ತು ಸ್ವಾಗತಿಸಿದರು, ಇತಿಹಾಸ ವಿಭಾಗದ ಮುಖ್ಯಸ್ಥರು ವಂದಿಸಿದರು ಮತ್ತು ಪ್ರೂ. ಮಂಜುನಾಥ ಜಿ ಕಾರ್ಯಕ್ರಮವನ್ನು ನಿರೂಪಿಸಿದರು.
ಇಂಗ್ಲೀಷ್ ಮೇಜರ್ ನಲ್ಲಿ ರ್ಯಾಂಕ್ ಪಡೆದವಿದ್ಯಾರ್ಥಿನಿಯರನ್ನು ಇಂಗ್ಲಿಷ್ ವಿಭಾಗದಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮೆಗಾ ಉದ್ಯೋಗ ಮೇಳ ವಿದ್ಯಾಭ್ಯಾಸದೊಂದಿಗೆ ಕೌಶಲ್ಯತೆಗೂ ಆದ್ಯತೆ ನೀಡಿ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್
ಸುದ್ದಿದಿನ,ದಾವಣಗೆರೆ:ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸದ ಜೊತೆಗೆ ಕೌಶಲ್ಯ ಶಿಕ್ಷಣಕ ಕಲಿಸಬೇಕು. ಯುವ ಜನತೆ ವಿದ್ಯಾರ್ಥಿ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಸೋಮವಾರ(ಫೆ.23) ರಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಷ್ಟಿçÃಯ ಗ್ರಾಮೀಣ ಜೀವನೋಪಾಯ ಅಭಿಯಾನ, ಮಹಾನಗರಪಾಲಿಕೆ, ಜಿಲ್ಲಾ ಕೌಶಲ್ಯಾ ಮಿಷನ್, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು
ಯುವನಿಧಿ ಯೋಜನೆಯಡಿ ರಾಜ್ಯದಲ್ಲಿ 3,62,000 ಅಭ್ಯರ್ಥಿಗಳು ನೋಂದಾಯಿಸಿಕೊAಡಿದ್ದು, ಜಿಲ್ಲೆಯಲ್ಲಿ 10,404 ಪದವಿಧರರು, 226 ಡಿಪ್ಲೋಮ ಆದವರು ಯುವನಿಧಿಯ ಸೌಲಭ್ಯ ಪಡೆಯುತ್ತಿದ್ದಾರೆ. ಇದರಲ್ಲಿ 2326 ಯುವಕ, ಯುವತಿಯರಿಗೆ ಬೇರೆ ಬೇರೆ ಉದ್ಯೋಗ ಮೇಳದಲ್ಲಿ ಉದ್ಯೋಗ ದೊರತಿದೆ. 2024-25ನೇ ಸಾಲಿನಲ್ಲಿ ಸುಮಾರು 33 ಕೋಟಿ, 22 ಲಕ್ಷ ಹಣ ಸಂದಾಯವಾಗಿದೆ. ರಾಜ್ಯದಲ್ಲಿ ಕೌಶಲ್ಯಾಭಿವೃದ್ದಿ ಯೋಜನೆಯಡಿ 17,715 ಅಭ್ಯರ್ಥಿಗಳಿಗೆ ತರಬೇತಿ ನೀಡಿದ್ದು, 2376 ಅಭ್ಯರ್ಥಿಗಳಿಗೆ ಉದ್ಯೋಗ ದೊರತಿದೆ.
ಜೊತೆಗೆ ಪದವಿ ಉತ್ತೀರ್ಣ ವಿದ್ಯಾರ್ಥಿಗಳು ಸಿವಿಲ್ ಸರ್ವಿಸಸ್ ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ ನೀಡಲಾಗುತ್ತಿದೆ. ಒಟ್ಟಾರೆ ಯುವಜನತೆಗೆ ಐಎಎಸ್, ಕೆಎಎಸ್ ಈ ರೀತಿಯ ಉದ್ಯೋಗಾವಕಾಶಗಳು ಸಿಗುವಂತಾಗಲು ಎಸ್ಎಸ್ ಕೇರ್ ಟ್ರಸ್ಟ್ ನಿಂದ ತರಬೇತಿ ನೀಡಲಾಗುತ್ತಿದೆ.
ಯುವಕರು ಸ್ಕೂಲ್, ಕಾಲೇಜ್ಗೆ ಬಂದಾಗ ಅಲ್ಲಿರುವಂತಹ ವಿದ್ಯಾರ್ಥಿಗಳು ಸ್ಪೋರ್ಟ್ಸ್, ಕಲ್ಚರಲ್ ಆಕ್ಟಿವಿಟೀಸ್, ಜೊತೆಗೆ ಆನ್ಲೈನ್ ಕೋರ್ಸ್ಗಳಲ್ಲಿ ಭಾಗವಹಿಸಬೇಕು.
ಯಾವುದೇ ಕಂಪನಿಯ ಲಿಖಿತ ಪರೀಕ್ಷೆಗೆ ಹಾಜರಾದಾಗ ನಿಮ್ಮಲ್ಲಿ ಏನು ಲೋಪದೋಷ ಹೇಳಿದ್ರು, ಯಾವ ರೀತಿ ನೀವು ಮತ್ತೊಮ್ಮೆ ನಿಮ್ಮ ತಪ್ಪನ್ನು ಸರಿ ಮಾಡಿಕೊಳ್ಳಬಹುದು ಎನ್ನುವುದನ್ನು ಅರಿತು ಸಂದರ್ಶನ ಎದುರಿಸಬೇಕೆಂದರು.
ಉದ್ಯೋಗ ಮೇಳದಲ್ಲಿ ನೀಡಿದ ಪ್ರಮಾಣ ಪತ್ರ ಪಡೆದು ಆಯ್ಕೆಯಾದ ಕಂಪನಿಗೆ ವರದಿ ಮಾಡಿಕೊಳ್ಳಲು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಮಾತನಾಡಿ ಎಲ್ಲರಿಗೂ ಸರ್ಕಾರವೇ ಉದ್ಯೋಗ ನೀಡಲು ಆಗುವುದಿಲ್ಲ. ಜನರು ಸ್ವಯಂ ಬದುಕು ಕಟ್ಟಿಕೊಂಡು, ಉದ್ಯೋಗದಾತರಾಗಿ ಹೊರಹೊಮ್ಮಬೇಕು. ಶಿಕ್ಷಣ, ಜ್ಞಾನದ ಜೊತೆ ಕೌಶಲ್ಯತೆ ರೂಢಿಸಿಕೊಳ್ಳಬೇಕು. ಒಂದು ದೇಶದ ಪ್ರಗತಿ ಹಾಗೂ ಅಭಿವದ್ಧಿಗೆ ಯುವ ಶಕ್ತಿ ಪ್ರಮುಖವಾಗಿದ್ದು, ಉದ್ಯೋಗ ಮೇಳದಿಂದ ಯುವಕರಿಗೆ ಹೆಚ್ಚು ಲಾಭ ದೊರೆಯಲಿದೆ. ಇದರಿಂದ ಬದುಕು ಕಟ್ಟಿಕೊಂಡು ಯಶಸ್ಸು ಗಳಿಸಲು ಶ್ರಮಿಸಬೇಕು ಎಂದರು. ಯುವಕರು ದೇಶದ ಸಂಪತ್ತು. ಪ್ರತಿಯೊಬ್ಬರೂ ಯಾವುದಾದರೂ ಒಂದು ವೃತ್ತಿ ಮಾಡಬೇಕು. ಇದರಿಂದ ನಿಮ್ಮ ಭವಿಷ್ಯ ಉತ್ತಮವಾಗುತ್ತದೆ ಎಂದರು.
ಉದ್ಯೋಗದಾತ ಕಂಪನಿಗಳು ಕಾಲೇಜು ಆವರಣದಲ್ಲೇ ಮೇಳ ಆಯೋಜಿಸಿ, ಅಭ್ಯರ್ಥಿಗಳ ಸಂದರ್ಶನ ನಡೆಸಿ, ಅರ್ಹರಿಗೆ ಉದ್ಯೋಗ ನೀಡುತ್ತಿವೆ. ಇದು ವಿದ್ಯಾವಂತ ಬಡ ನಿರುದ್ಯೋಗಿಗಳಿಗೆ ಅನುಕೂಲವಾಗಿದೆ ಎಂದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವಕರು ಕೇವಲ ಪದವಿ ಪಡೆದರೆ ಸಾಲದು, ತಾಂತ್ರಿಕ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು. ಬದ್ಧತೆ, ಸಮಯಪ್ರಜ್ಞೆ ಮತ್ತು ಆತ್ಮವಿಶ್ವಾಸವಿದ್ದರೆ ಯಾವುದೇ ಉದ್ಯೋಗವನ್ನು ಪಡೆಯಬಹುದು ಎಂದು ಯುವಜನತೆಗೆ ಕರೆ ನೀಡಿದರು. ತರಬೇತಿಯು ಹೆಚ್ಚು ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡುವಲ್ಲಿ ಯಶಸ್ವಿಯಾಗಿವೆ ಎಂದು ಅವರು ತಿಳಿಸಿದರು.
ಮೋನಿಕಾ, ಚಂದನಾ, ಸಿಂಚನಾ, ಸುಶೀಲಾ, ವಿನೂತ, ಸಾನಿಯಾ, ಶರತ್, ಅಶ್ವಿನಿ ಇನ್ನೂ ಕೆಲವು ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಆದೇಶ ಪ್ರತಿಯನ್ನು ನೀಡಿದರು.
ಮೇಳದ ಪ್ರಮುಖ ಅಂಕಿ-ಅAಶಗಳು: ಭಾಗವಹಿಸಿದ ಕಂಪನಿಗಳು: 50ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು, 61 ವಿಶೇಷ ಚೇತನ ಅಭ್ಯರ್ಥಿಗಳು ಒಳಗೊಂಡು 1944 ಉದ್ಯೋಗಾಕಾಂಕ್ಷಿಗಳು, ಆಯ್ಕೆ ಹಂತ ತಲುಪಿದವರು: 421 ಅಭ್ಯರ್ಥಿಗಳು, ಸ್ಥಳದಲ್ಲೇ ನೇಮಕಾತಿ: 421 ಅಭ್ಯರ್ಥಿಗಳಿಗೆ ಅಂತಿಮ ನೇಮಕಾತಿ ಆದೇಶ ಪಡೆದಿರುತ್ತಾರೆ. ಹಾಗೂ 555 ಅಭ್ಯರ್ಥಿಗಳು ಶಾರ್ಟ್ ಲಿಸ್ಟ್ ಆಗಿ 2ನೇ ಹಂತದ ಸಂದರ್ಶನ ಅರ್ಹತೆ ಪಡೆದಿರುತ್ತಾರೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲ್ರಾವ್ ಪ್ರಾಸ್ತವಿಕ ನುಡಿಗಳಾನ್ನಾಡಿದರು.
ದೂಡಾ ಅಧ್ಯಕ್ಷರಾದ ದಿನೇಶ್.ಕೆ.ಶೆಟ್ಟಿ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಕೌಸರ್ ರೇಷ್ಮಾ, ಜಿಲ್ಲಾ ಗ್ಯಾರಂಟಿ ಯೋಜನೆಯ ಅಧ್ಯಕ್ಷರಾದ ಬಸವರಾಜ.ಟಿ.ಶಾಮನೂರು, ಉಪಾಧ್ಯಕ್ಷರಾದ ಮಂಜಣ್ಣ, ಪ್ರಾಂಶುಪಾಲರಾದ ಬಸವರಾಜ ತಹಶೀಲ್ದಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಚಂದ್ರ, ಜಿ.ಪಂ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಫೆಬ್ರವರಿ ಮಾಹೆಗೆ ಪಡಿತರ ಹಂಚಿಕೆ
ಸುದ್ದಿದಿನ,ದಾವಣಗೆರೆ:ಫೆಬ್ರವರಿ-26ರ ಮಾಹೆಗೆ ಅನ್ವಯವಾಗುವಂತೆ ವಿವಿಧ ವರ್ಗದ ಪಡಿತರ ಚೀಟಿದಾರರಿಗೆ ಪಡಿತರ ಹಂಚಿಕೆ ಮಾಡಲಾಗಿದೆ.
ಅಂತ್ಯೋದಯ ಕಾರ್ಡದಾರರಿಗೆ 1 ರಿಂದ 3 ಸದಸ್ಯರಿರುವ ಕಾರ್ಡಿಗೆ 35 ಕೆ.ಜಿ ಅಕ್ಕಿ, 4 ಸದಸ್ಯರಿರುವ ಪ್ರತಿ ಕಾರ್ಡಿಗೆ 40 ಕೆ.ಜಿ ಅಕ್ಕಿ, 5 ಸದಸ್ಯರಿರುವ ಪ್ರತಿ ಕಾರ್ಡಿಗೆ 50 ಕೆ.ಜಿ ಅಕ್ಕಿ, 6 ಸದಸ್ಯರಿರುವ ಪ್ರತಿ ಕಾರ್ಡಿಗೆ 60 ಕೆ.ಜಿ ಅಕ್ಕಿ, 7 ಸದಸ್ಯರಿರುವ ಪ್ರತಿ ಕಾರ್ಡಿಗೆ 70 ಕೆ.ಜಿ ಅಕ್ಕಿ, 8 ಸದಸ್ಯರಿರುವ ಪ್ರತಿ ಕಾರ್ಡಿಗೆ 80 ಕೆ.ಜಿ ಅಕ್ಕಿ, 9 ಸದಸ್ಯರಿರುವ ಪ್ರತಿ ಕಾರ್ಡಿಗೆ 90 ಕೆ.ಜಿ, 10 ಸದಸ್ಯರಿರುವ ಪ್ರತಿ ಕಾರ್ಡಿಗೆ 100 ಕೆ.ಜಿ ಅಕ್ಕಿಯನ್ನು ನೀಡಲಾಗುವುದು.
ಪೋರ್ಟಬಿಲಿಟಿ ಜಾರಿಯಲ್ಲಿರುವುದರಿಂದ ಯಾವುದೇ ಅಂತರ್ ರಾಜ್ಯ ಅಥವಾ ಜಿಲ್ಲೆಯ ಪಡಿತರ ಚೀಟಿಗಳಿಗೆ ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಉಚಿತವಾಗಿ ಪಡೆಯಲು ಅವಕಾಶವಿರುತ್ತದೆ ಎಂದು ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


