ದಿನದ ಸುದ್ದಿ
ಆಸೆಯೇ ದುಃಖಕ್ಕೆ ಕಾರಣ ಇದು ಎಷ್ಟು ಸರಿ..?
- ಶಿವಸ್ವಾಮಿ,ಬೌದ್ಧ ಉಪಾಸಕರು
ಆಸೆಯೇ ದುಃಖ್ಖಕ್ಕೆ ಕಾರಣ ಎಂದೂ ಯಾರಾದ್ರೂ ಥಟ್!ಅಂತಾ ! ಹೇಳಿದರೆ ಮನಸ್ಸಿಗೆ ಮೊದಲು ಬರುವವರೇ ಬುದ್ಧ. ಹಾಗಾದರೆ ಮನುಷ್ಯನಾದವನು ಆಸೆಗಳನ್ನು ಹೊಂದಾಬಾರದೆ? ಆಸೆಗಳಿಲ್ಲಾದಿದ್ದರೆ ಮನುಷ್ಯ ಜೀವಿಸುವುದಾದರೂ ಏತಕ್ಕೆ? ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ, ಪ್ರತಿಯೊಬ್ಬರೂ ಬದುಕಬೇಕಾದ ರೇ ತಮ್ಮದೇ ಆದ ಆಸೆಗಳನ್ನು ಹೊಂದುತ್ತಾರೆ.
ಆದರೆ ತಮ್ಮ ಅತಿಯಾದ ಆಸೆಗಳಿಗೆ ಮಿತಿ ಇರಬೇಕಷ್ಟೇ !ಅತಿಯಾದರೆ ಅಮೃತವು ವಿಷವಾಗುತ್ತದೆ ಎಂಬಂತೆ ಜೀವನದಲ್ಲಿ ಸಮಸ್ಥಿತಿಯಿಂದ ಇರಬೇಕಾಗುತ್ತದೆ, ಆಸೆಯೇ ದುಃಖ್ಖಕ್ಕೆ ಕಾರಣವೆಂದು ಭಗವಾನ್ ಬುದ್ಧ ಹೇಳಿದರೆಂದು ಹಲವರು ಹೇಳುತ್ತಲೇ ಬಂದಿದ್ದಾರೆ, ಆದರೆ ಯಾವುದೇ ತ್ರಿಪಿಟಕಗಳಲ್ಲಿ ಕಂಡು ಬರುವುದಿಲ್ಲ, ಆದ್ದರಿಂದ “ಆಸೆಯೇ ದುಃಖ್ಖಕ್ಕೆ ಕಾರಣ” ಇದು ಸಮರ್ಪಕವಾದ ಹೇಳಿಕೆಯಲ್ಲ, ಪಾಳಿ ಭಾಷೆಯಲ್ಲಿ ತನ್ಹಾ ಎಂಬ ಪದವನ್ನು ಬಳಸುತ್ತಾರೆ.
ಇದು ಆಸೆಗೆ ಪರ್ಯಾಯ ಪದವಲ್ಲ ಇದಕ್ಕೆ ಇಂಗ್ಲಿಷ್ನಲ್ಲಿ ಆಸೆಗೆ ಹತ್ತಿರವಾದ Craving ಎಂಬ ಪದವನ್ನು ಬಳಸುತ್ತಾರೆ Craving ಎಂದರೆ ದುರಾಸೆ ಅಥವಾ ತೃಶ್ನೆ ಎಂದಾಗುತ್ತದೆ “ಆದ್ದರಿಂದ ದುರಾಸೆಯೇ ದುಃಖ್ಖಕ್ಕೆ ಕಾರಣವೆನ್ನಬಹುದು” . ಲೋಕದಲ್ಲಿ ದುಃಖ್ಖವಿದೆ, ದುಃಖ್ಖಕ್ಕೆ ಕಾರಣವು ಇದೆ, ದುಃಖ್ಖ ನಿರೋಧ, ದುಃಖ್ಖ ನಿರೋಧ ಮಾರ್ಗ ಎಂಬ ನಾಲ್ಕು ಆರ್ಯ ಸತ್ಯಗಳ ಮೂಲಕ, ನೈತಿಕತೆಯ ಆಧಾರದ ಮೇಲೆ ತನ್ನ ಅನುಭವದ ಮೂಲಕ ಮಾನವ ಪರವಾದ ಸತ್ಯವನ್ನು ಕಂಡು ಹಿಡಿದ ಅದೇ ನಿಜವಾದ ಬುದ್ಧನ ಧಮ್ಮ
4 ಆರ್ಯ ಸತ್ಯಗಳು
1.ದುಃಖ್ಖ
ಲೋಕದಲ್ಲಿ ದುಃಖ್ಖವಿದೆ ಹುಟ್ಟು ದುಃಖ್ಖ, ರೋಗ ದುಃಖ್ಖ, ವಯಸ್ಸಾಗುವುದು ದುಃಖ್ಖ, ಸಾವು ದುಃಖ್ಖ, ಬಯಸಿದ್ದು ಸಿಗದಿದ್ದರೆ ದುಃಖ್ಖ, ನೋವು, ಯಾತನೆ, ಕೊರಗು, ದೈಹಿಕವಾಗಿರಲಿ ಮಾನಸಿಕವಾಗಿರಲಿ ಅದೆಲ್ಲಾ ದುಃಖ್ಖ,.
2.ದುಃಖ್ಖಕ್ಕೆ ಕಾರಣ
ದುರಾಸೆ ಅಥವಾ ತೃಶ್ನೆ ಮೂರು ವಿಧವಾದ ದುರಾಸೆ ಅಥವಾ ತೃಶ್ನೆಗಳಿವೆ.
ಅ. ಕಾಮ ತೃಶ್ನೆ : ಪಂಚ ಇಂದ್ರಿಯಗಳ ವಿಷಯಗಳನ್ನು ಅನುಭವಿಸಬೇಕೆನ್ನುವ ಇಚ್ಛೆಯೇ ಕಾಮ ತೃಶ್ನೆ.
ಬ. ಭವ ತೃಶ್ನೆ : ನಾನು ಶಾಶ್ವತವಾಗಿ ಜೀವಿಸಬೇಕೆಂಬುದೇ ಭವ ತೃಶ್ನೆ, ನಾನು ದೊಡ್ಡ ಶ್ರೀಮಂತನಾಗಬೇಕು, ಸದಾ ಭೋಗಜೀವನದಲ್ಲಿರ ಬೇಕೇಂಬುದೇ ಆಗಿದೆ.
ಕ. ವಿಭವ ತೃಶ್ನೆ : ನಾನು ಈ ಪ್ರಪಂಚದಲ್ಲಿ ಇರಲೇಭಾರದು ಎಂಬ ಹತಾಶೆಯ ಸ್ಥಿತಿ.
3. ದುಃಖ್ಖ ನಿರೋಧ
ಲೋಕದಲ್ಲಿ ದುಃಖ್ಖವಿದೆ, ದುಃಖ್ಖ ಕ್ಕೆ ಕಾರಣವು ಇದೆ, ಎಂದ ಮೇಲೆ ದುಃಖ್ಖ ನಿರೋಧವು ಸಾಧ್ಯವಿದೆ ದುಃಖ್ಖ ನಿರೋಧದ ಮೂಲಗಳಾದ ಅಜ್ಞಾನ ಮತ್ತು ದುರಾಸೆಗಳಿಂದ ಹೊರ ಬಂದರೆ ದುಃಖ್ಖವು ದೂರವಾಗುತ್ತದೆ.
4.ದುಃಖ್ಖ ನಿರೋಧ ಮಾರ್ಗ
ನಾಲ್ಕನೇ ಆರ್ಯ ಸತ್ಯವೇ ದುಃಖ್ಖ ನಿರೋಧ ಮಾರ್ಗ ಅಥವಾ ಅಷ್ಠ ಮಾರ್ಗ ಅಥವಾ ಮದ್ಯಮ ಮಾರ್ಗ, ಪಂಚ ಇಂದ್ರಿಯಗಳ ಸುಖಕ್ಕಾಗಿ ಭೋಗಜೀವನದಲ್ಲಿ ತೊಡಗುವುದು ಮತ್ತು ನೋವಿನಿಂದ ಕೂಡಿದ ಕಠಿಣ ತಪಸ್ಸು ದೇಹ ದಂಡನೆ ಎಂಬ ಎರಡು ಅತೀರೇಖಾ ಮಾರ್ಗಗಳನ್ನು ಬುದ್ಧ ಕೈಬಿಟ್ಟಿದ್ದೆ ಅಲ್ಲದೆ ಸುಖ ಶಾಂತಿ ಪ್ರಜ್ಞೆಯ ಮಾರ್ಗವಾದ ಮನುಷ್ಯರನ್ನು ನಿಬ್ಬಾಣದ ಕಡೆಗೆ ಕರೆದೊಯ್ಯುವ ಮಾರ್ಗ ಕಂಡು ಹಿಡಿದರು ಅದುವೇ ಮದ್ಯಮ ಮಾರ್ಗ ಅಥವಾ ಅಷ್ಟಮಾರ್ಗ.
ದುಃಖ್ಖ ನಿವಾರಣೆಗಾಗಿ ಮದ್ಯಮ ಮಾರ್ಗವು 8 ಅಂಶಗಳನ್ನು ಹೊಂದಿದೆ.
- ಸರಿಯಾದ ದೃಷ್ಟಿ
- ಸರಿಯಾದ ಸಂಕಲ್ಪ
- ಸರಿಯಾದ ಮಾತು
- ಸರಿಯಾದ ಕೆಲಸ
- ಸರಿಯಾದ ಜೀವನೋಪಾಯ
- ಸರಿಯಾದ ಪ್ರಯತ್ನ
- ಸರಿಯಾದ ಅರಿವು
- ಸರಿಯಾದ ಏಕಾಗ್ರೆತೆ
ಪ್ರಕೃತಿಗೆ ಹತ್ತಿರವಾದ, ತಮ್ಮ ಅನುಭವದ ಮೂಲಕ ಕಂಡು ಕೊಂಡ ಬುದ್ಧರ ಅಂತಿಮ ಸತ್ಯವೇ ಅವರ ಧಮ್ಮ, ಧಮ್ಮ ಎಂಬ ಪಾಳಿ ಪದಕ್ಕೆ ಧರ್ಮ ಎಂಬ ಪದವು ಪದವಲ್ಲ, ಧಮ್ಮವೆಂದರೆ ಸರ್ವರ ಹಿತ ಸರ್ವರ ಸುಖ,’ನಾನು ಹೇಳಿದೆ ಎಂದೂ ಒಪ್ಪಿಕೊಳ್ಳಬೇಡಿ, ಬನ್ನೀ… ನಿಮ್ಮ ಅನುಭವದ ಮೂಲಕ ಇಲ್ಲಿ ಈಗಲೇ ಪರೀಕ್ಷಿಸಿ ಇಷ್ಟವಾದರೆ ಒಪ್ಪಿಕೊಳ್ಳಿ, ಇಲ್ಲಾವಾದರೆ ಬಿಟ್ಟುಬಿಡಿ ಎಂಬ ಮಾತನ್ನು ಬುದ್ಧರನ್ನು ಬಿಟ್ಟರೆ ಜಗತ್ತಿನ ಯಾವ ಧರ್ಮಗುರುಗಳು ಹೇಳಿರುವುದು ಕಂಡು ಬರುವುದಿಲ್ಲ.
ಮುಂದುವರಿದು ನಾನು
ದೇವಾಮಾನವನಲ್ಲ, ಯಾವುದೇ ನಾನು ಮುಕ್ತಿಧಾತನಲ್ಲ, ಕೇವಲ ಮಾರ್ಗಧಾತನಷ್ಟೇ, ನಿಮಗೆ ನೀವೇ ಬೆಳಕಾಗಿ, ಎಂದೂ ನೈತಿಕತೆಯ ಸತ್ಯದ ನಡೆ, ಕತ್ತಲಿನಿಂದ ಬೆಳಕಿನಡೆ, ಅಸತ್ಯದಿಂದ ಸತ್ಯದ ಕಡೆಗೆ ಕರೆದೊಯ್ಯುವ ಜ್ಞಾನದ ದೀಪವೇ ಬುದ್ಧರ ಧಮ್ಮ, ಬುದ್ಧರ ನಂತರ ಉತ್ತರಾಧಿಕಾರಿ ಯಾರು? ಎಂಬ ಶಿಷ್ಯ ಆನಂದನ ಪ್ರಶ್ನೆಗೆ ಉತ್ತರವಾಗಿ ಭಗವಾನ್ ಬುದ್ಧರು “ಧಮ್ಮಕ್ಕೆ ಧಮ್ಮವೇ ಉತ್ತರಾಧಿಕಾರಿ”ಎಂದೂ ಇಡೀ ವಿಶ್ವವನ್ನು ಧಮ್ಮವೇ ಮುನ್ನಡೆಸಲಿದೆ ಎಂದರು. ಬಹುಜನರಿಗೆ ಹಿತವಾದ, ಬಹುಜನರಿಗೆ ಸುಖವಾದ, ಲೋಕಕ್ಕೆ ಧಮ್ಮವನ್ನು ನೀಡಿ ಇಡೀ ಜಗತ್ತಿಗೆ ಬೆಳಕಾಗಿ ಇಂದಿಗೂ ಪ್ರಜ್ವಲಿಸುತಿದ್ದಾರೆ. ಬಂಧುಗಳೇ ಇಂದು ಅವರ ಜನ್ಮದಿನ, ಅವರ ತತ್ವ ಸಿದ್ಧಾಂತಗಳು ಸರ್ವರಿಗೂ ದಾರಿ ದೀಪಾವಾಗಿ, ಇಡೀ ವಿಶ್ವವು ಸುಖ ಶಾಂತಿ ನೆಮ್ಮದಿಯಿಂದ ನೆಲಸುವಂತಾಗಲಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಹಳೆ ಪಿಂಚಣಿ ಪದ್ಧತಿ ಮರುಜಾರಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ನಿರ್ಣಯ
ಸುದ್ದಿದಿನಡೆಸ್ಕ್:ಹಳೆ ಪಿಂಚಣಿ ಪದ್ಧತಿ ಮರು ಜಾರಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ವಿವಿಧ ಹಂತಗಳಲ್ಲಿ ಹೋರಾಟ ಸೇರಿದಂತೆ ಇನ್ನಿತರೆ ನಿರ್ಣಯಗಳಿಗೆ ಬೆಂಬಲ ಸೂಚಿಸಲು ದಾವಣಗೆರೆಯಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸಭೆ ನಿರ್ಧರಿಸಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ತಿಳಿಸಿದ್ದಾರೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗದು ರಹಿತ ಚಿಕಿತ್ಸೆ ಯೋಜನೆಯ ತ್ವರಿತ ಜಾರಿಗೆ ಒತ್ತಾಯಿಸುವುದು, 2026ಕ್ಕೆ ಕೇಂದ್ರ ಸರ್ಕಾರದ ಮಾದರಿ ವೇತನಕ್ಕಾಗಿ ಹೋರಾಟ ರೂಪಿಸುವುದು ಮುಖ್ಯ ಉದ್ದೇಶವಾಗಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಿ ಆಂಡ್ ಆರ್ ನಿಯಮಕ್ಕೆ ತಿದ್ದುಪಡಿ ತರುವಂತೆ ಆಗ್ರಹಿಸಿ, ನಡೆಸಲಾಗುವ ಹೋರಾಟವನ್ನು ಬೆಂಬಲಿಸುವುದು, ವೈದ್ಯಕೀಯ ವೆಚ್ಚ ಮರುಪಾವತಿ ಬಿಲ್ಗಳಿಗೆ ಶೀಘ್ರವೇ ಹಣ ಬಿಡುಗಡೆ ಮಾಡಿಸುವ ನಿರ್ಣಯಗಳನ್ನು ಕೈಗೊಳ್ಳಲಾಯಿತು ಎಂದು ಸಿ.ಎಸ್.ಷಡಕ್ಷರಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವಕ್ಕೆ ಬೈಲಹೊಂಗಲದಲ್ಲಿ ಚಾಲನೆ
ಸುದ್ದಿದಿನಡೆಸ್ಕ್:ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ-2025ಕ್ಕೆ ಇಂದು ಮುಂಜಾನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ರಾಯಣ್ಣನ ಜನ್ಮಸ್ಥಳ ಸಂಗೊಳ್ಳಿಯಲ್ಲಿ ಅದ್ದೂರಿ ಚಾಲನೆ ನೀಡಲಾಯಿತು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಲಾಗಿರುವ ಉತ್ಸವವು ಪ್ರತಿವರ್ಷದಂತೆ ಸಾಂಪ್ರದಾಯಿಕವಾಗಿ ಆರಂಭಗೊಂಡಿದೆ. ಸಂಗೊಳ್ಳಿಯ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಹಿರೇಮಠದ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಪ್ರಾತಃಕಾಲದ ಪೂಜೆ ಸಲ್ಲಿಸಲಾಯಿತು.
ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಜ್ಯೋತಿಯನ್ನು ಸ್ವಾಗತಿಸಿದರು. ಉಪ ವಿಭಾಗಾಧಿಕಾರಿ ಪ್ರಭಾವತಿ ಫಕ್ಕೀರಪುರ, ಸಂಗೊಳ್ಳಿ ರಾಯಣ್ಣ ಸ್ಮಾರಕ ಭವನದ ಆವರಣದಲ್ಲಿ ಕಿತ್ತೂರು ಸಂಸ್ಥಾನದ ಧ್ವಜಾರೋಹಣ ನೆರವೇರಿಸಿದರು. ಬಳಿಕ ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ, ಜಾನಪದ ಕಲಾವಾಹಿನಿಗೆ ಚಾಲನೆ ನೀಡಿದರು.
ಪೂರ್ಣ ಕುಂಭ ಹೊತ್ತ ಮಹಿಳೆಯರು, ಪೂಜಾ ಕುಣಿತ, ನಂದಿಕೋಲು, ವೀರಗಾಸೆ, ಡೊಳ್ಳು, ಬೊಂಬೆ ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಉತ್ಸವಕ್ಕೆ ಮೆರುಗು ತಂದಿತು. ಸಂಗೊಳ್ಳಿ ರಾಯಣ್ಣ ಸ್ಮಾರಕದ ಬಳಿಯಿಂದ ಆರಂಭಗೊಂಡ ಕಲಾವಾಹಿನಿಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಇಂದು ಸಂಜೆ 8 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಉತ್ಸವದ ಅಧಿಕೃತ ಉದ್ಘಾಟನೆ ನೆರವೇರಿಸಲಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕಾರ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ನಾಳೆ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ವೀರರ ಸ್ಮರಣಾರ್ಥ ದೀಪೋತ್ಸವ, ರಾಯಣ್ಣನ ಕುರಿತಾದ ವಿಚಾರ ಸಂಕಿರಣ, ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ಸೇರಿದಂತೆ ಇತರೆ ಸ್ಪರ್ಧೆಗಳು ನಡೆಯಲಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ನಾಳೆಯಿಂದ ಜಗಳೂರಿನಲ್ಲಿ ಜಿಲ್ಲಾ 14 ನೇ ಕನ್ನಡ ಸಾಹಿತ್ಯ ಸಮ್ಮೇಳನ
ಸುದ್ದಿದಿನ,ದಾವಣಗೆರೆ:ಜಗಳೂರು ಪಟ್ಟಣದಲ್ಲಿ ಜನವರಿ 11 ಮತ್ತು 12 ರಂದು ಜಗಳೂರು ಪಟ್ಟಣದ ಬಯಲು ರಂಗಮಂದಿರದಲ್ಲಿ ಜಿಲ್ಲಾ 14 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ.
ಜನವರಿ 11 ರಂದು ಬೆಳಿಗ್ಗೆ 8 ಗಂಟೆಗೆ ಅಪರ ಜಿಲ್ಲಾಧಿಕಾರಿ ಪಿ ಎನ್ ಲೋಕೇಶ್ ರಾಷ್ಟ್ರ ಧ್ವಜಾರೋಹಣ ನೆರೆವೇರಿಸುವರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ. ವಾಮದೇವಪ್ಪ ಪರಿಷತ್ತಿನ ಧ್ವಜಾರೋಹಣ ನೆರೆವೇರಿಸುವರು.ಜಗಳೂರು ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ನಾಡ ಧ್ವಜಾರೋಹಣ ನೆರೆವೇರಿಸುವರು. ನವಚೇತನ ಶಾಲೆಯ ವಿದ್ಯಾರ್ಥಿಗಳಿಂದ ರಾಷ್ಟ್ರಗೀತೆ, ನಾಡಗೀತೆ ಹಾಡುವರು.
ಅಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ತಾಯಿ ಭುವನೇಶ್ವರಿ ಮತ್ತು ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡುವರು.
ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಚಂದ್ರ, ಪಟ್ಟಣ ಪಂಚಾಯಿತಿಯ ಉಪಾಧ್ಯಕ್ಷರಾದ ಲೋಕಮ್ಮ ಜೆ ಸಿ ಓಬಣ್ಣ, ಡಿ.ಡಿ.ಪಿ.ಯು ಕರಿಸಿದ್ದಪ್ಪ ಎಸ್.ಜಿ, ಡಿ.ಡಿ.ಪಿ.ಐ ಕೋಟ್ರೇಶ್.ಜಿ, ಜಗಳೂರು ವೃತ್ತ ನಿರೀಕ್ಷಕರು ಶ್ರೀನಿವಾಸರಾವ್, ತಾಲ್ಲೂಕು ಪಂಚಾಯಿತಿ, ಸಿ.ಇ.ಓ ಕೆಂಚಪ್ಪ, ಜಗಳೂರು ಬಿ.ಇ.ಓ ಹಾಲಮೂರ್ತಿ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಬೀರೇಂದ್ರ ಕುಮಾರ್ ಭಾಗವಹಿಸುವರು. ಮೆರವಣಿಗೆ ತಾಲೂಕು ಕಚೇರಿಯಿಂದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತ, ಗಾಂಧಿ ವೃತ್ತ, ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಿಂದ ಬಯಲು ರಂಗಮಂದಿರವರೆಗೆ ತಾಯಿ ಭುವನೇಶ್ವರಿ ಮೆರವಣಿಗೆ ನಡೆಯುತ್ತದೆ.
ಡೊಳ್ಳು ಕುಣಿತ,ಹಗಲುವೇಷ, ಬೊಂಬೆ ಮೇಳ, ಉರುಮೆ, ತಪ್ಪಡಿ, ಕಹಳೆ, ವೀರಗಾಸೆ, ಕರಡಿ ಮಜಲು, ನಂದಿಧ್ವಜ, ಭಜನೆ, ಕೋಲಾಟ, ಎತ್ತಿನಗಾಡಿಗಳ ಮೆರವಣಿಗೆ, ಮಹಿಳೆಯರಿಂದ ಪೂರ್ಣಕುಂಭ, ಇಲಾಖೆಗಳ ಸ್ತಬ್ಧ ಚಿತ್ರಗಳು ಇತ್ಯಾದಿ.
ಬೆಳಿಗ್ಗೆ 11 ಗಂಟೆಗೆ ಸಮ್ಮೇಳನದ ಉದ್ಘಾಟನಾ ಸಮಾರಂಭವನ್ನು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಸಾಹಿತಿಗಳಾದ ಡಾ.ಪುರುಷೋತ್ತಮ ಬಿಳಿಮಲೆ ಉದ್ಘಾಟಿಸುವರು. ಜಗಳೂರು ಶಾಸಕರಾದ ಬಿ.ದೇವೆಂದ್ರಪ್ಪ ಅಧ್ಯಕ್ಷತೆ ವಹಿಸುವರು.
ಸಂಸ್ಕøತಿ ಚಿಂತಕರು ಸಾಹಿತಿಗಳಾದ ಡಾ.ಎ.ಬಿ.ರಾಮಚಂದ್ರಪ್ಪ ಸಮ್ಮೇಳನಾಧ್ಯಕ್ಷರಾಗಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ವಾಮದೇವಪ್ಪ ಆಶಯ ನುಡಿಗಳಾನ್ನಾಡುವರು. ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ಮಹಲಿಂಗರಂಗ ವೇದಿಕೆಯನ್ನು ಉದ್ಘಾಟಿಸುವರು. ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಚಿನ್ನಹಗರಿಯ ನುಡಿ ತೇರು ಸ್ಮರಣ ಸಂಚಿಕೆಯ ಲೋಕಾರ್ಪಣೆ ಮಾಡುವರು. ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ ಜೆ.ಎಂ ಇಮಾಮ್ ಮಹಾದ್ವಾರವನ್ನು ಉದ್ಘಾಟಿಸುವರು.
ಕ.ಸಾ.ಪ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಅವರು ವಿದ್ಯಾರತ್ನ ಡಾ.ಟಿ.ತಿಪ್ಪೇಸ್ವಾಮಿ ಸಭಾಂಗಣವನ್ನು ಉದ್ಘಾಟಿಸುವರು. ನಿಕಟ ಪೂರ್ವ ಸಮ್ಮೇಳಧ್ಯಕ್ಷರಾದ ಪ್ರೊ.ಸಿ.ವಿ ಪಾಟೀಲ್ ಕನ್ನಡ ಧ್ವಜ ಹಸ್ತಾಂತರ ಮಾಡುವರು. ಜಗಳೂರು ಕ್ಷೇತ್ರದ ಮಾಜಿ ಶಾಸಕರಾದ ಟಿ.ಗುರುಸಿದ್ದನಗೌಡ, ಎಸ್.ವಿ ರಾಮಚಂದ್ರಪ್ಫ, ಹೆಚ್.ಪಿ.ರಾಜೇಶ್ ಕೃತಿಗಳ ಲೋಕಾರ್ಪಣೆ ಮಾಡುವರು.
ವಿಧಾನ ಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್ ಪ್ರೊ.ಎಸ್.ಬಿ ರಂಗನಾಥ್ ಪುಸ್ತಕ ಮಳಿಗೆ ಉದ್ಘಾಟಿಸುವರು. ಜಗಳೂರು ಪಟ್ಟಣದ ಅಧ್ಯಕ್ಷರಾದ ಕೆ.ಎಸ್ ನವೀನ್ ಕುಮಾರ್ ಡಾ.ಎಂ.ಜಿ.ಈಶ್ವರಪ್ಪ ವಸ್ತು ಪ್ರದರ್ಶನ ಮಳಿಗೆ ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪ, ಹೊನ್ನಾಳಿ ಶಾಸಕರಾದ ಡಿ.ಜಿ.ಶಾಂತನಗೌಡ, ಹರಿಹರ ಶಾಸಕರಾಧ ಬಿ.ಪಿ ಹರೀಶ್, ಚನ್ನಗಿರಿ ಶಾಸಕರಾದ ಬಸವರಾಜ ವಿ. ಶಿವಗಂಗ, ಬ್ರಾಹ್ಮಣ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಅಸಗೋಡು ಜಯಸಿಂಹ, ತಾಂಡ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಎನ್ ಜಯದೇವ ನಾಯ್ಕ, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್ ನವೀನ್, ನಾ.ರವಿಕುಮಾರ, ಡಿ.ಟಿ.ಶ್ರೀನಿವಾಸ್, ಡಾ.ಚಿದಾನಂದ ಎಂ.ಗೌಡ, ಜಿ.ಸ.ನೌ ಸಂಘದ ಅಧ್ಯಕ್ಷರಾದ ವೀರೇಶ್ ಎಸ್ ಒಡೇನಪುರ, ಜಿಲ್ಲಾ ವರದಿಗಾರರ ಕೂಟ ನಾಗರಾಜ್.ಎಸ್ ಬಡದಾಳ್, ಯುವ ಮುಖಂಡರಾದ ಕೆ.ಪಿ ಪಾಲಯ್ಯ, ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷರಾದ ಮಂಜುನಾಥ ಕುರ್ಕಿ, ತಾ.ಸ.ನೌ ಸಂಘದ ಎ.ಎಲ್ ತಿಪ್ಪೇಸ್ವಾಮಿ, ಕಾರ್ಯಕಾರಿ ಸಮಿಯಿಯ ಅಧ್ಯಕ್ಷರಾದ ಜಿ.ರುದ್ರಯ್ಯ, ಪ್ರಗತಿಪರ ಕೃಷಿಕರು ಕಲ್ಲೇರುದ್ರೇಶ್ ಪಾಲ್ಗೋಳ್ಳುವರು.
ಮಧ್ಯಾಹ್ನ 2 ಗಂಟೆಗೆ ಗೋಷ್ಠಿ-1ರಲ್ಲಿ. ಸಾಹಿತ್ಯ ಮತ್ತು ಸಾಮಾಜಿಕ ನೆಲೆಗಳು, ಮಧ್ಯಾಹ್ನ 3:45 ಕ್ಕೆ ಗೋಷ್ಠಿ -2ರಲ್ಲಿ ಸೌಹಾರ್ದತೆ- ಸಮಾನತೆ-ಸಾಮಾಜಿಕ ನ್ಯಾಯ, ಗೋಷ್ಠಿ-3ರಲ್ಲಿ ಸಂಜೆ 5.30ಕ್ಕೆ ದಾವಣಗೆರೆ ಜಿಲ್ಲೆಯ ಐತಿಹಾಸಿಕ ನೆಲೆಗಳು, ಗೋಷ್ಠಿಗಳು ನಡೆಸಲಾಗುವುದು.
ಸಂಜೆ 6:15 ಗಂಟೆಗೆ ಜಗಳೂರು ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷರುಗಳಿಗೆ ಸನ್ಮಾನ ಕಾರ್ಯಕ್ರಮ ಇರುತ್ತದೆ. ನಂತರ ಡಾ. ಶುಭಾ ಮರವಂತೆ, ಗಂಗಾವತಿ ಪ್ರಾಣೇಶ್ ಮತ್ತು ತಂಡದವರಿಂದ ಹಾಸ್ಯ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುತ್ತವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ6 days ago
ವಿಜಯನಗರ | ನಿಲ್ಲದ ಅಕ್ರಮ ಕಲ್ಲು ಗಣಿಗಾರಿಕೆ ; ಕಣ್ಣುಮುಚ್ಚಿಕುಳಿತ ಅಧಿಕಾರಿಗಳು
-
ದಿನದ ಸುದ್ದಿ5 days ago
ಸಂತೇಬೆನ್ನೂರು | ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ವಿಶ್ವಮಾನವ ದಿನಾಚರಣೆ’
-
ದಿನದ ಸುದ್ದಿ2 days ago
ನಾಳೆಯಿಂದ ಜಗಳೂರಿನಲ್ಲಿ ಜಿಲ್ಲಾ 14 ನೇ ಕನ್ನಡ ಸಾಹಿತ್ಯ ಸಮ್ಮೇಳನ
-
ದಿನದ ಸುದ್ದಿ10 hours ago
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವಕ್ಕೆ ಬೈಲಹೊಂಗಲದಲ್ಲಿ ಚಾಲನೆ
-
ದಿನದ ಸುದ್ದಿ9 hours ago
ಹಳೆ ಪಿಂಚಣಿ ಪದ್ಧತಿ ಮರುಜಾರಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ನಿರ್ಣಯ