Connect with us

ದಿನದ ಸುದ್ದಿ

ನನಗಾಗಿ ನಿಮ್ಮ ಚಪ್ಪಾಳೆ ಬೇಕಿಲ್ಲ, ಬದಲಿಗೆ ಹೀಗೆ ಮಾಡಿ : ಹಿರಿಯ ವೈದ್ಯೆಯ ಸಾತ್ವಿಕ ಆಕ್ರೋಶ

Published

on

ಡಾ. ಮನಿಶಾ ಬಣಗಾರ್
  • ಹೈದರಾಬಾದ್ ನಲ್ಲಿ ಹಿರಿಯ ವೈದ್ಯೆಯಾಗಿರುವ ಡಾ. ಮನಿಶಾ ಬಣಗಾರ್ ಅವರು ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಂಡಿರುವ ಈ ಸಂದೇಶವು ಕೇಂದ್ರ ಸರ್ಕಾರವು ಅತ್ಯಂತ ಹೊಣೆಗೇಡಿಯಾಗಿ ವರ್ತಿಸಿರುವ ಕುರಿತ ಸಾತ್ವಿಕ ಆಕ್ರೋಶವಾಗಿದೆ. ಆ ಹಿರಿಯ ವೈದ್ಯರ ಸಂದೇಶದ ಕನ್ನಡ ಅನುವಾದ ಇಲ್ಲಿದೆ.

ಪ್ರಿಯ ಭಾರತೀಯರೇ,

ಮೋದಿ-ಬಿಜೆಪಿಯ ಗಂಟಾಲಜಿಯ ಜ್ಞಾನಕ್ಕೆ ಕಿವಿಗೊಡದಿರಿ, ದಯವಿಟ್ಟು ನನಗಾಗಿ ಚಪ್ಪಾಳೆ ಹೊಡೆಯಬೇಡಿ!! ನಾನೊಬ್ಬ ವೈದ್ಯೆ, ನನಗಾಗಿ ನೀವು ಚಪ್ಪಾಳೆ ಹೊಡೆಯಬೇಕೆಂದು ನಾನು ಬಯಸುವುದಿಲ್ಲ. ಕಳೆದೆರಡು ದಶಕಗಳಿಂದಲೂ ತೀವ್ರ ಸೋಂಕಿಗೆ ಒಳಗಾಗಿ ನನ್ನಲ್ಲಿಗೆ ಬರುವ ಅದೆಷ್ಟೋ ರೋಗಿಗಳಿಗೆ ನಾನು ಚಿಕಿತ್ಸೆ ನೀಡಿದ್ದೇನೆ, ಈಗ ಕೊರೊನಾ ಆವರಿಸಿಕೊಂಡಿರುವ ಹೊತ್ತಿನಲ್ಲೂ ಸಹ ಅದನ್ನು ಮುಂದುವರೆಸುವವಳಿದ್ದೇನೆ.

ಆದರೆ ಮಾರ್ಚ್ 22ರಂದು ಯಾರಿಂದಲೂ ನಾನು ಚಪ್ಪಾಳೆಗಳನ್ನು ಇಷ್ಟ ಪಡುವುದಿಲ್ಲ.
ಬದಲಿಗೆ, ಮೂಲಭೂತ ಹಕ್ಕುಗಳನ್ನು ಹೊಂದಿರುವ ಜವಾಬ್ದಾರಿಯುತ ನಾಗರಿಕರಾಗಿ ನೀವು ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ತುರ್ತಾಗಿ ಆಗಬೇಕಿರುವ ಕೆಲಸಗಳಿಗಾಗಿ ಆಗ್ರಹಪಡಿಸಬೇಕು ಎಂದು ಬಯಸುತ್ತೇನೆ.

  • ಎಷ್ಟು ವಿಕೋಪ ಪರಿಹಾರ ನಿಧಿಯನ್ನು ನಿಗದಿಪಡಿಸಿದ್ದೀರಿ ಎಂದು ಘೋಷಿಸಿ ಮತ್ತು ಎಲ್ಲರಿಗೂ ವೈದ್ಯಕೀಯ ಸಹಾಯ ಹಾಗೂ ವೈದ್ಯಕೀಯ ಕಾರ್ಯತಂತ್ರವೇನು ಎಂದು ತಿಳಿಸಬೇಕು.
  • ಸರ್ದಾರ್ ಪಟೇಲ್ ಪ್ರತಿಮೆಗೆ ವಿನಿಯೋಗಿಸಿದ ಹಣದ ಕನಿಷ್ಟ ಎರಡು ಪಟ್ಟು ಹಣವನ್ನಾದರೂ ಕೊರೊನಾ ವೈರಸ್ ತಡೆಯಲು ಕೂಡಲೇ ಮೀಸಲಿಡಬೇಕು ಎಂದು ಒತ್ತಾಯಿಸಿ.
  • ಮೋದಿ ಸಂಕಷ್ಟದಿಂದ ರಕ್ಷಿಸಿದ ಇಲ್ಲವೇ ಜನರ ತೆರಿಗೆಯ ಬೊಕ್ಕಸದಿಂದ ಅಪಾರ್ ಹಣದ ಬೇಲೌಟ್ ನೀಡಿ ಉಳಿಸಿರುವ ಕಾರ್ಪೊರೇಟ್ ದೊರೆಗಳು ಮತ್ತು ಮೋದಿಯವರ ಪರಮಾಪ್ತ ಉದ್ಯಮಿಗಳು ಈಗ ದೇಶಕ್ಕಾಗಿ ಸಹಾಯ ಹಸ್ತ ಚಾಚಲು ಕೇಳಿಕೊಳ್ಳಲು ತಿಳಿಸಿ.
  • ತಿರುಪತಿ, ಪದ್ಮನಾಭನ್, ಶಿರಡಿ, ಸಿದ್ದಿವಿನಾಯಕ, ಪುರಿ ಮೊದಲಾದ ಗುಡಿ ಗುಂಡಾರಗಳಲ್ಲಿ ದಾಸ್ತಾನು ಇಟ್ಟಿರುವ ರಾಶಿ ರಾಶಿ ಚಿನ್ನ ಬೆಳ್ಳಿಯನ್ನು ಸಾರ್ವಜನಿಕ ಸಂಪತ್ತು ಎಂದು ಘೋಷಿಸಿ ಇಂದು ಎದುರಾಗಿರುವ ವಿಪತ್ತಿನ ಸಮಯದಲ್ಲಿ ಉಪಯೋಗಿಸಲು ಮೋದಿಯವರಿಗೆ ತಿಳಿಸಿ.
  • ನಿಮ್ಮ ಚಪ್ಪಾಳೆ ಬದಿಗಿರಿಸಿ ಕನಿಷ್ಠ ಇಲ್ಲಿಂದ ಆರಂಭಿಸಿ. ಯಾವುದೇ ನೆಪ ಹೇಳಿ ನನಗಾಗಿ ಚಪ್ಪಾಳೆ ತಟ್ಟಬೇಡಿ.

ವೈದ್ಯೆ ಮನಿಶಾ ಬಣಗಾರ್ ಅವರ ಫೇಸ್‌ಬುಕ್‌ ಲಿಂಕ್

https://www.facebook.com/profile.php?id=100004202117248

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ ನಡೆದ ಕೊಲೆಗಳೆಷ್ಟು ? ಅತ್ಯಾಚಾರಗಳೆಷ್ಟು ಗೊತ್ತಾ?

Published

on

ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಹಾದಿ ಬೀದಿಯಲ್ಲಿ ಹತ್ಯೆಗಳು ಆಗುತ್ತಿವೆ. ಬೆಂಗಳೂರು ನಗರದಲ್ಲಿ ಮಾದಕ ವಸ್ತುಗಳ ದಂಧೆ ಅವ್ಯಾಹತವಾಗಿದೆ.

ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ 430 ಹತ್ಯೆಗಳು ಮತ್ತು 198ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ರಾಜ್ಯಗೃಹ ಇಲಾಖೆ ಕಾರ್ಯನಿರ್ವಹಿಸುತ್ತಿದೆಯೋ ಅಥವಾ ನಿದ್ದೆ ಮಾಡುತ್ತಿದೆಯೋ ? ಎಂದು ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಪ್ರಶ್ನಿಸಿದೆ.ಇದೇ ವೇಳೆ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ಅಪರಾಧ ಪ್ರಮಾಣ ಹೆಚ್ಚಳವಾಗಿರುವುದರಿಂದ ಕೂಡಲೇ ಈ ಬಗ್ಗೆ ಕ್ರಮವಹಿಸಬೇಕೆಂದು ಆಗ್ರಹಿಸಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಬಿಜೆಪಿ ನಿಯೋಗ ದೂರು ನೀಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬಿಜೆಪಿ ಆರೋಪದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ : ಗೃಹ ಸಚಿವ ಡಾ. ಜಿ.ಪರಮೇಶ್ವರ್

Published

on

ಸುದ್ದಿದಿನ, ತುಮಕೂರು : ರಾಜ್ಯದಲ್ಲಿ ಜನರು ಶಾಂತಿ ಮತ್ತು ನೆಮ್ಮದಿಯಿಂದ ಬದುಕಲು ಯಾವುದೇ ಕ್ರಮ ತೆಗೆದುಕೊಳ್ಳಲು ಸಿದ್ಧ. ಬಿಜೆಪಿ ಆರೋಪದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಶಾಂತಿಯನ್ನು ಕದಡಲು ಎಷ್ಟು ಪ್ರಯತ್ನ ನಡೆಸಿದರೂ ಅದನ್ನು ನಿಯಂತ್ರಿಸುವ ಶಕ್ತಿ ನಮ್ಮ ಸರ್ಕಾರಕ್ಕಿದೆ ಎಂದು ತಿರುಗೇಟು ನೀಡಿದರು. ರಾಜ್ಯದಲ್ಲಿ ಅಪರಾಧ ಪ್ರಕರಣ ಹೆಚ್ಚಳವಾಗುತ್ತಿರುವ ಬಗ್ಗೆ ಪೊಲೀಸ್ ಅಧಿಕಾರಿಗಳೊಂದಿಗೆ ಕೂಲಂಕುಷವಾಗಿ ಚರ್ಚಿಸಿ, ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಜಿ. ಪರಮೇಶ್ವರ್ ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಿಧಾನ ಪರಿಷತ್ ಚುನಾವಣೆ ; 91 ನಾಮಪತ್ರಗಳು ಪುರಸ್ಕೃತ

Published

on

ಸುದ್ದಿದಿನ ಡೆಸ್ಕ್ : ಕರ್ನಾಟಕ ವಿಧಾನ ಪರಿಷತ್‌ನ ಚುನಾವಣೆಗೆ ಸಂಬಂಧಪಟ್ಟಂತೆ ಒಟ್ಟು 91ನಾಮಪತ್ರಗಳು ಪುರಸ್ಕೃತಗೊಂಡಿವೆ. ಈಶಾನ್ಯ ಪದವಿಧರ ಕ್ಷೇತ್ರಕ್ಕೆ ಒಟ್ಟು 26 ನಾಮಪತ್ರಗಳು ಪುರಸ್ಕೃತಗೊಂಡಿದೆ.

ಅದೇ ರೀತಿ ಕರ್ನಾಟಕದ ಆಗ್ನೇಯಾ ಶಿಕ್ಷಕರ ಕ್ಷೇತ್ರಕ್ಕೆ 15, ಬೆಂಗಳೂರು ಪದವೀಧರರ ಕ್ಷೇತ್ರಕ್ಕೆ 16, ಕರ್ನಾಟಕ ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ 9, ಕನಾಟಕ ನೈಋತ್ಯ ಪದವೀಧರ ಕ್ಷೇತ್ರಕ್ಕೆ12 ಹಾಗೂ ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಒಟ್ಟು 13 ನಾಮಪತ್ರಗಳು ಪುರಸ್ಕೃತಗೊಂಡಿವೆ ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending