Connect with us

ಸಿನಿ ಸುದ್ದಿ

ವರನಟ ಡಾ.ರಾಜಕುಮಾರ ‘ಒಂದು ಜಾಗತಿಕ ವಿಸ್ಮಯ’..!

Published

on

  • ನಿಜಲಿಂಗಯ್ಯ ಹಾಲದೇವರಮಠ

(ಲೇಖನ ಭಾಗ-2)


  • 12ನೆಯ ಶತಮಾನದಲ್ಲಿ ಒಂದು ಪುಟ್ಟ ಮಗು ಕನ್ನಡ ಭಾಷೆಯ ವಿರೋಧಿಗಳ ವಿರುದ್ಧ ಧ್ವನಿ ಎತ್ತಿತ್ತು. ಅಲ್ಲಿಂದಲೇ ಕನ್ನಡ ಚಳುವಳಿ ಉಗಮವಾದದ್ದು ನಂತರ ಆ ಮಗು ಪ್ರಾಪ್ತಕ್ಕೆ ಬಂದಾಗ ವಚನ ಸಾಹಿತ್ಯದ ಮೂಲಕ ಸಮಾಜದ ಮೌಢ್ಯವನ್ನು ನಿವಾರಿಸುವಲ್ಲಿ ಶ್ರಮಿಸಿದ ವ್ಯಕ್ತಿಯೇ ನಮ್ಮ ಬಸವಣ್ಣ. ಹನ್ನೆರಡನೇ ಶತಮಾನ ಕಳೆದು 20ನೇ ಶತಮಾನಕ್ಕೆ ಅಡಿ ಇಟ್ಟಿದ್ದೇವೆ. ಈ ಆಧುನಿಕ ಯುಗದಲ್ಲಿ ಕಲಾ ಲೋಕದ ಮೂಲಕ ನಾಡು-ನುಡಿಗೆ ಸಂಸ್ಕೃತಿಗೆ ಶ್ರೇಷ್ಠ ಸೇವೆಗೈದು ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ ತೀಡಿ ಅದರ ಉನ್ನತಿಗೆ ಶ್ರಮಿಸಿದ ವ್ಯಕ್ತಿಯೇ ರಾಜಣ್ಣ. ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಇಪ್ಪತ್ತನೇ ಶತಮಾನದಲ್ಲಿ ರಾಜಣ್ಣ”

ಮಹಾಕವಿ ಸಿದ್ಧಯ್ಯ ಪುರಾಣಿಕರು


ತಿಹಾಸದಲ್ಲಿ 12ನೇ ಶತಮಾನದ ಬಸವಯುಗದಷ್ಟೇ ಪ್ರಖರವಾದದ್ದು ಇಪ್ಪತ್ತನೇ ಶತಮಾನದ ರಾಜಯುಗ. ಬಸವಣ್ಣನಂತೆ ರಾಜಣ್ಣನವರು ಕ್ರಾಂತಿಕಾರಿ ಬದಲಾವಣೆಯ ಕರ್ಮಯೋಗಿ. ಕನ್ನಡ ಸಮಾಜವನ್ನು ಒಂದುಗೂಡಿಸಿದ ಮಹಾಚೇತನ. ಕಲಾಜ್ಯೋತಿಯಿಂದ ಮಾನವ ಜ್ಯೋತಿ ಬೆಳಗಿಸಿದ ನಂದಾದೀಪ. ತಮ್ಮ ಕಾಯಕದಲ್ಲಿಯೇ ಕೈಲಾಸ ಕಂಡ ಅವರು ಕಾಯಕ ತತ್ವದ ಕರ್ಮಾನುಷ್ಠಾನಿ. ಸಂಸ್ಕೃತಿ ಮತ್ತು ಮಾನವತ್ವಗಳ ಮಹತ್ವವನ್ನು ಮನದಟ್ಟು ಮಾಡಿಕೊಟ್ಟು ಶತಮಾನಗಳಿಂದ ಹೆಪ್ಪುಗಟ್ಟಿದ್ದ ಮೌಢ್ಯಚಿಂತನೆಗಳನ್ನು ತಮ್ಮ ಪಾತ್ರಗಳ ಮೂಲಕ ಕಡೆದು ನವನೀತ ತೆಗೆದ ವಿಚಾರಶೀಲ.

ಸಮಾಜದ ಮೇಲು-ಕೀಳು, ಹಿಂಸೆ, ಅನ್ಯಾಯ, ಅನೀತಿ, ಬಡತನ, ಶೋಷಣೆ, ಜಾತೀಯತೆ, ಪಾಶ್ಚಾತ್ಯ ಸಂಸ್ಕೃತಿಯ ಹೀನ ಪ್ರಭಾವ ಮೊದಲಾದ ಸಮಾಜದ ಓರೆ-ಕೋರೆಗಳನ್ನು ತಮ್ಮ ಕಲಾ ಜೀವನದಿಂದಲೇ ತಿದ್ದಿ ತೀಡಿ ಮಾನವ ಜಗತ್ತಿಗೆ ವಿಶ್ವಮಾನವ ಸಂದೇಶ ಸಾರಿದ ವಿಶ್ವನಟ. ಕಾಳಸಂತೆ ಎಂಬ ಕಲೆಯನ್ನು ಕಿತ್ತುಹಾಕಿ ಕಲೆಗೆ ಕಿಮ್ಮತ್ತು ತಂದುಕೊಟ್ಟ ಕಲಾಯೋಗಿ. “ಕಲೆಯು ಕಲೆಗಾಗಿ ಅಲ್ಲ; ದಾನವನನ್ನು ಮಾನವನನ್ನಾಗಿ, ಮಾನವನನ್ನು ಮಹಾದೇವನನ್ನಾಗಿ ಮಾಡುವುದೇ ಕಲೆಯ ನಿಜವಾದ ಗುರಿ” ಎಂಬುದನ್ನು ರಾಜಕುಮಾರ್ ತಮ್ಮ ಸೇವೆಯಿಂದ ಸಾಧಿಸಿ ತೋರಿಸಿದ್ದಾರೆ.

ಈ ಮಹಾನುಭಾವರ ಕಲಾವಂತಿಕೆ, ಸಂಸ್ಕೃತಿ, ಮಾನವತೆ, ವಿನಯತೆ, ಸಾಮಾಜಿಕ ಚಿಂತನೆಗಳು ಎಂದೆಂದಿಗೂ ಪ್ರಸ್ತುತವಾಗಿವೆ. ರಾಜಕುಮಾರ ತತ್ವಗಳು ಕಾಲ, ದೇಶ, ಭಾಷೆ, ಜಾತಿಗಳನ್ನು ಗೆದ್ದುನಿಂತಿವೆ. ಅವು ನಿತ್ಯನೂತನ, ಸತ್ಯ ದರ್ಶನವಾಗಿವೆ. ವರಕವಿ ಬೇಂದ್ರೆಯವರು ಬೆಳಕನ್ನು ಕುರಿತು “ಇದು ಬರೀ ಬೆಳಗಲ್ಲೋ ಅಣ್ಣ” ಅನ್ನುವಂತೆ ವರನಟ ರಾಜಕುಮಾರ ಚಿತ್ರಗಳು “ಬರೀ ಚಿತ್ರವಲ್ಲೋ ಅಣ್ಣ” ಎಂಬಂತಿವೆ. ಅವುಗಳಲ್ಲಿ ಜಗತ್ತೇ ಅಡಗಿದೆ. ವರನಟರು ತಮ್ಮ ನೂರಾರು ಪಾತ್ರಗಳಲ್ಲಿ ಸಾವಿರಾರು ವೇಷಭೂಷಣಗಳಲ್ಲಿ ವಿಶ್ವ ದರ್ಶನವನ್ನೇ ಮಾಡಿಸಿದ್ದಾರೆ.

ಅವರ ಭಾವಚಿತ್ರವನ್ನೊಮ್ಮೆ ಗಮನವಿಟ್ಟು ನೋಡಿದರೆ ಕರ್ನಾಟಕ ದರ್ಶನವೇ ಆಗುತ್ತದೆ. ಅವರ ಚಿತ್ರಗಳಲ್ಲಿ ಭಾರತೀಯ ಪರಂಪರೆ ಕರ್ನಾಟಕದ ಸಂಸ್ಕೃತಿಯಿದೆ, ಕನ್ನಡಿಗರ ಭವಿಷ್ಯವಿದೆ, ಮಾನವ ಕಲ್ಯಾಣ ಅಡಗಿದೆ, ಬದುಕುವ ಕಲೆಯಿದೆ, ವಿಶ್ವಮಾನವ ಸಂದೇಶವಿದೆ, ಪರಿಪೂರ್ಣ ಮನುಷ್ಯತ್ವವಿದೆ, ಮಾತಾ-ಪಿತೃ ಭಕ್ತಿ, ಹೆಣ್ಣಿಗೆ ಗೌರವ ಸ್ಥಾನವಿದೆ, ಕೆಳವರ್ಗದ ಜಾತಿಯವರ ನೋವಿದೆ, ಆ ನೋವಿಗೆ ಸಾಂತ್ವನವಿದೆ, ಅನುಭಾವ, ಆಧ್ಯಾತ್ಮ, ತಪಸ್ಸಿದೆ, ಜ್ಞಾನ ಸರಸ್ವತಿಗೆ ಪೂಜ್ಯತೆ ಇದೆ, ಬುದ್ಧ, ಬಸವ, ಗಾಂಧಿ, ಕಾರ್ಲ್ ಮಾರ್ಕ್ಸ್, ಲೋಹಿಯಾ ತತ್ವಗಳು ಸಾಕಾರಗೊಂಡಿವೆ.

ಪರಮಹಂಸ ವಿವೇಕಾನಂದರ ಅಧ್ಯಾತ್ಮದ ತಾತ್ಪರ್ಯವು ಅವರ ವಿಭಿನ್ನ ಪಾತ್ರ ವೈವಿಧ್ಯತೆ ಮತ್ತು ಬದುಕಿನಲ್ಲಿ ಸೂಸಾಡಿದೆ, ಶತಮಾನಗಳವರೆಗೂ ಯಾವುದೇ ಪೀಳಿಗೆಯ ಜನರಿಗೂ ಬೇಕಾದ ಸಾರ್ವಕಾಲಿಕ ಮಾರ್ಗದರ್ಶನಗಳಿವೆ, ಬಡತನ, ಅವಿದ್ಯಾವಂತಿಕೆ, ಕೆಳವರ್ಗದ ಅವಮಾನಗಳ ಹಿನ್ನೆಲೆಯಿಂದ ಬಂದವನು ಸಾಧಿಸಿದ ಸಾಹಸಗಾಥೆಗಳಿವೆ, ಏನಾದರೂ ಆಗುವದಕ್ಕಿಂತ ಮೊದಲು ಮಾನವನಾಗುವ ಸಂದೇಶವಿದೆ, ಶಾಲಾ ಶಿಕ್ಷಣದ ಅವಶ್ಯಕತೆಯೇ ಇಲ್ಲದೆ ಜೀವನದಲ್ಲಿ ಬಂಗಾರದ ಮನುಷ್ಯನಾಗುವ ರಾಜಪಥವಿದೆ, “ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಿಕೊಳ್ಳಬೇಡಿರೋ ಹುಚ್ಚಪ್ಪಗಳಿರಾ” ಎಂದು ಜಗತ್ತಿಗೆ ಸಾರಲಾಗಿದೆ.

ಈ ಮೂಲಕ ಚಿತ್ರೋದ್ಯಮವೆಂಬ ವಾಣಿಜ್ಯ ಕ್ಷೇತ್ರವನ್ನು ಸಾಂಸ್ಕೃತಿಕ ಕ್ಷೇತ್ರವನ್ನಾಗಿ ಕಟ್ಟಿದ ಸಾಂಸ್ಕೃತಿಕ ಶಿಲ್ಪಿ. ಅವರ ಪೌರಾಣಿಕ, ಭಕ್ತಿ ಪ್ರಧಾನ, ಐತಿಹಾಸಿಕ, ಜಾನಪದ, ಸಾಮಾಜಿಕ, ಹಿಚ್ ಕಾಕ್, ಜೇಮ್ಸ್ ಬಾಂಡ್ ಯಾವುದೇ ಪಾತ್ರವಿರಲಿ, ಸಂಭಾಷಣೆಯಿರಲಿ, ಗೀತೆಯಿರಲಿ ಎಲ್ಲದರಲ್ಲೂ ಸಂಸ್ಕೃತಿಯು ಪ್ರತಿಧ್ವನಿಸುತ್ತಿತ್ತು. ಮಾಜಿ ಪ್ರಧಾನಿ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿಯವರು “ರಾಜಕುಮಾರ್ ಭಾರತದ ಸಂಸ್ಕೃತಿಯ ಸಂಪತ್ತು” ಎಂದು ಹೇಳಿದ ಮಾತು ಸ್ತುತ್ಯಾರ್ಹ. ಚಿತ್ರಗಳಲ್ಲಿ ಅದೆಷ್ಟೋ ನಾಟಕಗಳಲ್ಲಿ ಎಲ್ಲೂ ಅವಾಚ್ಯ ಪದಗಳ ಬಳಕೆಯಾಗಿಲ್ಲ, ಎಲ್ಲೂ ಧೂಮಪಾನ, ಮದ್ಯಪಾನಕ್ಕೆ ಅವಕಾಶವಿಲ್ಲದಂತೆ, ಹೆಣ್ಣಿಗೆ, ಸರಸ್ವತಿಗೆ ಅವಮಾನವಾಗದಂತೆ ಜಾಗೃತ ವಹಿಸುತ್ತಿದ್ದ ದಾರ್ಶನಿಕ ನಟ.

ಇತರೆ ಭಾರತೀಯ ನಟರಂತೆ ಬೇರೆ ಬೇರೆ ಪಾತ್ರಗಳನ್ನು ನಿರ್ವಹಿಸಬಹುದಿತ್ತು. ಆದರೆ ಅದೆಲ್ಲಕ್ಕಿಂತ ಅವರಿಗೆ ಸಾಮಾಜಿಕ ಕಳಕಳಿಯಿತ್ತು. ನಾನು ನುಡಿದಂತೆ ಜನ ನಡೆಯುತ್ತಾರೆ ಎಂಬ ಜವಾಬ್ದಾರಿ ಇತ್ತು. ಆದ್ದರಿಂದ ಅವರು ಮಾಡುವ ಪಾತ್ರಗಳು ಅವರ ಮಾತುಗಳು ನವ ಸಮಾಜದ ನಿರ್ಮಾಣಕ್ಕೆ ಆಶಯಗಳಾಗಿದ್ದವು. ಈ ದೃಷ್ಟಿಯಲ್ಲಿ ರಾಜಕುಮಾರ ಒಂದು ಶಾಲೆಯಾಗಿ ಕೆಲಸ ಮಾಡಿದ ಕಲಾವಿದ. ಅವರ ಚಿತ್ರ ಜೀವನದ ಮೂಲಕ ಶಿಕ್ಷಣ ಪಡೆದವನು ಸಂಸ್ಕಾರ ಜೀವಿಯಾಗಿ ಹೊರಬರುತ್ತಾನೆ. ಅವನು ಉನ್ನತ ಯಶಸ್ಸು ಮತ್ತು ಉತ್ತಮ ಸಾಂಸ್ಕೃತಿಕ ಮೌಲ್ಯಗಳೊಂದಿಗೆ ಹೊರಬಂದು ಸಮಾಜಕ್ಕೆ ಉಪಕಾರಿಯಾಗಿ ಬಾಳುತ್ತಾನೆ.

ಈ ಪರಿದೃಷ್ಟಿಯಲ್ಲಿ “ರಾಜಕುಮಾರ ಒಬ್ಬ ಲೋಕ ಶಿಕ್ಷಕ, ಮಹಾನಾಡೋಜ, ಆಚಾರ್ಯ ಶ್ರೇಷ್ಠ.” ಅವರ ಮಾತು ಶುದ್ಧವಾಗಿತ್ತು, ನಡೆ ಶುದ್ಧವಾಗಿತ್ತು, ಮನಸ್ಸು ಶುದ್ಧವಾಗಿತ್ತು, ಜ್ಞಾನ ಶುದ್ಧವಾಗಿತ್ತು. ವರನಟರು ಶುದ್ಧತೆಗಾಗಿ ಬಾಳಿದರು, ಶುದ್ಧತೆಗಾಗಿ ನಟಿಸಿದರು, ಶುದ್ಧತೆಗಾಗಿ ಲೋಕವನ್ನು ನಡೆಸಿದರು ಅವರ ಕಂಡ ಶುದ್ಧತೆಯಲ್ಲಿ ಮಾನವತೆ ಇತ್ತು. ಅದನ್ನೇ ಬಿತ್ತಿದರು, ಬೆಳೆದರು, ಹಂಚಿದರು. ಬದುಕಿದರೆ ಅವರಂತೆ ಬದುಕಬೇಕೆಂದು ಬದುಕಿ ತೋರಿಸಿದರು.

ರಾಜಣ್ಣನವರು ವಚನಕಾರ ದೇವರ ದಾಸಿಮಯ್ಯನ ಉಕ್ತಿಯಂತೆ “ಕರಿಯನ್ನು ಬೇಡಲಿಲ್ಲ, ಸಿರಿಯನ್ನು ಬೇಡಲಿಲ್ಲ, ಹಿರಿದಪ್ಪ ರಾಜ್ಯವನ್ನು ಬೇಡಲಿಲ್ಲ, ಶರಣರ ಸೂಳ್ಳುಡಿಯನ್ನು ಬೇಡಿದರು.” ಅಭಿಮಾನಿ ದೇವರುಗಳೇ ಅವರಿಗೆ ಶರಣರಂತಿದ್ದರು. ಅವರ ಸೂಳ್ಳುಡಿಗಳು ವಾಕ್ ಶುದ್ದಿಯ ದೀಪಗಳಾಗಿದ್ದವು. ಅವರ ಮನಸ್ಸು ಅನ್ಯವಿಷಯಕ್ಕೆಳಸದಂತೆ ಸದಾ ಶುದ್ದಿಯ ತೀರ್ಥವಾಹಿನಿಯಾಗಿತ್ತು. ಬುದ್ಧ, ಗಾಂಧೀಜಿ, ಕುವೆಂಪು ಕನಸಿನ ಸಮಾಜ; ಮಾನವ ದೇವನಾಗುವ ಪರಿ ರಾಜಕುಮಾರ ಜೀವನವೇ ಆಗಿತ್ತು”.

“ವರನಟರ ಮುಂದೆ ನರನಟರು ವಿದ್ಯೆತೋರಬಾರದು” ಎಂಬ ಮಾತು ಇತರ ಭಾರತೀಯ ನಟರ ಸಂದರ್ಭದಲ್ಲಿ ರಾಜಕುಮಾರ ಅವರ ಘನತೆಯನ್ನು, ತೂಕವನ್ನು ಹೆಚ್ಚಿಸುತ್ತದೆ. ಏನೇನೋ ಹೇಳಿದವರಿದ್ದಾರೆ, ಅದಕ್ಕೆ ವಿರುದ್ಧವಾಗಿ ಬದುಕಿದವರಿದ್ದಾರೆ, ಎಷ್ಟೋ ಭಾರತೀಯ ನಟರು ರಾಜಕೀಯದ ಕೊಚ್ಚೆಯಲ್ಲಿ ಮಿಂದು ಮುಳುಗಿ ಹೋದರು, ಅನೇಕರು ಕಲೆಯನ್ನು ಮನರಂಜನೆಯ ಸರಕು ಎಂದು ತಿಳಿದರು.

ಹಲವರು ವ್ಯವಹಾರದಲ್ಲಿ ತೊಡಗಿಕೊಂಡರು, ತಮ್ಮನ್ನು ನಂಬಿದ ಅಭಿಮಾನಿಗಳನ್ನು ರಾಜಕೀಯಕ್ಕೆ ಬಳಿಸಿಕೊಂಡರು. ಇಂಥಹವರೆಲ್ಲರ ಮಧ್ಯೆ ಪಲ್ಲಟವಾಗದ ಕಲಾ ಪ್ರವಾದಿ ವರನಟರಿದ್ದಾರೆ. ಮಾನವನಿಂದ ಘಟಿಸುವ ಪ್ರಕೃತಿಸಹಜ ತಪ್ಪುಗಳನ್ನು ವರನಟರು ಮರುಕಳಿಸದಂತೆ ತಮ್ಮನ್ನು ಪರಿಶೋಧಿಸುಕೊಳ್ಳುತ್ತಾ, ಪರಿಶುದ್ಧಿಸಿಕೊಳ್ಳುತ್ತಾ ಸಾಗಿದರು, ಅವರು ಶ್ರದ್ಧೆಯಿಂದ ನಟಿಸಿದರು, ಸರಳವಾಗಿ ಬದುಕಿದರು, ತಮಗನಿಸಿದ್ದನ್ನು ಮಾತ್ರ ಮಾಡಿದರು, ವಿನಯವನ್ನು ಕಲಿಸಿಕೊಟ್ಟರು, ಬದುಕುವುದನ್ನು ಕಲಿಸಿಕೊಟ್ಟರು.

ಆ ಕಾಲದಿಂದ ಈ ಕಾಲಕ್ಕೆ ಬದಲಾಗದೆ ಉಳಿದ ಅಪರೂಪದ ಜೀವ, ಎಲ್ಲ ಜನರೇಷನ್ನಿನ ಜನತೆಯನ್ನು ಪ್ರಭಾವಿಸುವ ಭಾರತದ ಏಕೈಕ ರೋಲ್ ಮಾಡೆಲ್. ಆದ್ದರಿಂದಲೇ ಸ್ವತಂತ್ರ ಭಾರತದ ಇತಿಹಾಸದಲ್ಲಿ ರಾಜಕುಮಾರ್ ಅವರನ್ನು ಮೀರಿಸುವ ಮಾತು ಒತ್ತಟ್ಟಿಗಿರಲಿ ಸರಿಗಟ್ಟುವವರು ಇಲ್ಲ ಎಂಬುವುದನ್ನು ಸಾರ್ವತ್ರಿಕವಾಗಿ ಸತ್ಯವಾಗಿ ಒಪ್ಪಿಕೊಳ್ಳಲಾಗಿದೆ. ಅವರು “ನ ಭೂತೋ ನ ಭವಿಷ್ಯತಿ” ಎನ್ನುವಷ್ಟು ತಮಗೊಂದು ಪರ್ಯಾಯವಿಲ್ಲದಂತೆ ಬೆಳೆದು ನಿಂತಿದ್ದಾರೆ.

ಭಾರತದಲ್ಲಿ ರಾಜಕುಮಾರ ಮುಂಚೆ ಕಪೂರ್ ಮನೆತನದವರಿದ್ದರು, ಕುಮಾರತ್ರಯರು ಬಂದರು, ಖನ್ನಾ, ಖಾನ್ ಗಳು ಬಂದರು, ಎಂ.ಜಿ.ಆರ್ , ಎನ್.ಟಿ.ಆರ್ , ಎ.ಎನ್.ಆರ್, ಶಿವಾಜಿ ಬಂದರು, ಇಂದು ಬಚ್ಚನ್, ರಜನಿಕಾಂತ್ ವಂಶಸ್ಥರಿದ್ದಾರೆ. ಆದರೆ ವರನಟ ರಾಜಕುಮಾರ್ ಅವರನ್ನು ಸರಿಗಟ್ಟುವ ಅಥವಾ ಮೀರಿಸುವ ನಟ ಭಾರತದ ಯಾವುದೇ ಭಾಷೆಯಲ್ಲಿ ಇದುವರೆಗೂ ಬಂದಿಲ್ಲ.

ಆದ್ದರಿಂದಲೇ ಪರಿಪೂರ್ಣವಾಗಿ ಭಾರತರತ್ನಕ್ಕೆ ಅರ್ಹರಾಗಬಲ್ಲ ಭಾರತದ ಏಕೈಕ ನಟರೆಂದರೆ ಅದು ರಾಜಕುಮಾರ್ ಮಾತ್ರ. ಇದನ್ನು ಅನ್ಯಭಾಷೆಯ ನಟರು, ವಿದ್ವಾಂಸರು, ಚಿತ್ರ ವಿಮರ್ಶಕರು ಒಪ್ಪಿಕೊಂಡಿದ್ದಾರೆ. ಆದರೆ ರಾಜಕೀಯ ಪಟ್ಟಭದ್ರ ಹಿತಾಸಕ್ತಿಗಳಿಂದ ರಾಜಕುಮಾರ್ ಒಬ್ಬ ಅವಿದ್ಯಾವಂತ, ಕೆಳವರ್ಗದವರು ಎಂಬ ಕಾರಣಕ್ಕೆ ತುಳಿಯಲ್ಪಟ್ಟುದು ದುರಂತ. ಈ ಅಮಾನವತೆ ಇಂದಿಗೂ ಸಕ್ರಿಯವಾಗಿದೆ.

ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ನಿಧನರಾಗಿ 35 ವರ್ಷಗಳ ಬಳಿಕ ಭಾರತರತ್ನ ನೀಡಿದ ನಮ್ಮ ದೇಶ ಸಾಂಸ್ಕೃತಿಕ ಶಿಲ್ಪಿ ಡಾ. ರಾಜಕುಮಾರ್ ಅವರಿಗೆ ಭಾರತರತ್ನ ನೀಡಲು ಎಷ್ಟು ವರ್ಷಗಳನ್ನು ಕಾಯಬೇಕಾಗಬಹುದೋ?
ಇಂಥ ನಿರ್ವಿಕಾರ ನಿರಾಡಂಬರ ನಿರ್ಲಿಪ್ತರಾಗಿ ಇಡೀ ರಾಷ್ಟ್ರವೇನು, ಜಗತ್ತೇ ನಿಬ್ಬೆರಗಾಗುವಂತೆ ಬದುಕಿ, ಸಾಧಿಸಿದ ಸರ್ವನಾಂಪ್ರಿಯ, ಲೋಕಮಿತ್ರ, ಪ್ರಶ್ನಾತೀತ, ಪಕ್ಷಾತೀತ ವಿಶ್ವನಟ ಡಾ.ರಾಜಕುಮಾರ್ ಭಾರತದ ಪಾಲಿಗೆ ಅನರ್ಘ್ಯರತ್ನ. ಆದ್ದರಿಂದಲೇ “ಗಾಂಧೀಜಿಯವರು ನೊಬೆಲ್ ಗಿಂತ ದೊಡ್ಡವರು; ರಾಜಕುಮಾರ ಭಾರತರತ್ನಕ್ಕಿಂತ ದೊಡ್ಡವರು”

ನಿಜಲಿಂಗಯ್ಯ ಹಾಲದೇವರಮಠ (ರಾಜಸುತ)
(2012ರ ಡಿಸೆಂಬರ್ ಅವಧಿಯಲ್ಲಿ ನನ್ನ ಲಗ್ನ ಪತ್ರಿಕೆಯಲ್ಲಿ ವರನಟ ರಾಜಕುಮಾರ ಕುರಿತು ಬರೆದ ಲೇಖನದ ಆಯ್ದ ಭಾಗ-2)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮತ್ತೆ ತಾಯಿಯಾಗಬೇಕು : ನಟಿ ಸಮಂತಾ

Published

on

ಸುದ್ದಿದಿನಡೆಸ್ಕ್:ಇತ್ತೀಚೆಗೆ ನಟಿ ಸಮಂತಾ ಅವರ ಕಮೆಂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆ ಹೇಳಿಕೆಗಳ ಮೇಲೆ ನಾನಾ ರೀತಿಯ ಅನುಮಾನಗಳೂ ವ್ಯಕ್ತವಾಗಿವೆ.

ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಸದ್ಯ ಸಮಂತಾ ಸತತ ಚಿತ್ರಗಳಲ್ಲಿ ಬ್ಯುಸಿಯಾಗಿರುವುದು ಗೊತ್ತೇ ಇದೆ. ಇತ್ತೀಚಿಗೆ ಸಮಂತಾ ಅವರ ವೆಬ್ ಸಿರೀಸ್ ವಿಚಾರಕ್ಕೆ ಸುದ್ದಿಯಾಗಿದ್ದರು. ನಟಿಯ ಇತ್ತೀಚಿನ ವೆಬ್ ಸಿರೀಸ್ ಸಿಟಾಡೆಲ್ ಸಖತ್ ಸುದ್ದಿಯಾಗಿದೆ. ಸದ್ಯ ಈ ವೆಬ್ ಸೀರೀಸ್ ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ ಎಂದು ತಿಳಿದುಬಂದಿದೆ. ಈ ವೆಬ್ ಸರಣಿಯ ಪ್ರಚಾರದ ವೇಳೆ ಮಾಡಿದ ಕಾಮೆಂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಇದರ ಭಾಗವಾಗಿ ಸಮಂತಾ ರಾಜ್ ಮತ್ತು ಡಿಕೆ ಸಂದರ್ಶನವೊಂದರಲ್ಲಿ ಹೇಳಿದ್ದು ದಿ ಫ್ಯಾಮಿಲಿ ಮ್ಯಾನ್ 2 ಚಿತ್ರೀಕರಣದ ವೇಳೆ ನಾನು ಹಲವು ಭಾವನೆಗಳಿಗೆ ಒಳಗಾಗಿದ್ದೆ ಎಂದು ಸಮಂತಾ ಹೇಳಿದ್ದಾರೆ. ಅಲ್ಲದೇ ಅವರ ನಿರ್ದೇಶನದಲ್ಲಿ ನಟಿಸುವುದು ಕಷ್ಟ ಎಂದಿದ್ದಾರೆ. ನಂತರ ಅದೇ ಸಂದರ್ಶನದಲ್ಲಿ ನಟಿ ಬೇರೆ ವಿಚಾರವನ್ನೂ ಹೇಳಿದ್ದಾರೆ.

ಹನಿ ಬನ್ನಿ ವೆಬ್ ಸರಣಿಯಲ್ಲಿ ತಾಯಿ ಪಾತ್ರದ ಬಗ್ಗೆ ಮಾತನಾಡುತ್ತಾ, ಅವರು ಸಂವೇದನಾಶೀಲ ಕಾಮೆಂಟ್​ಗಳನ್ನು ಮಾಡಿದ್ದಾರೆ. ನನಗೆ ತಾಯಿಯಾಗುವ ಕನಸು ಇದೆ. ನಾನು ತಾಯಿಯಾಗಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.

ಇದಕ್ಕಾಗಿ ತಡವಾಗಿದೆ ಎಂದು ಅವರು ಭಾವಿಸುವುದಿಲ್ಲ. ನಾನು ಜೀವನದಲ್ಲಿ ತುಂಬಾ ಖುಷಿಯಾಗಿದ್ದೇನೆ ಎಂದು ಸಮಂತಾ ಹೇಳಿದ ಮಾತುಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಆದರೆ ಸಮಂತಾ ಈ ಕಾಮೆಂಟ್ ಮಾಡಿದ ನಂತರ ಮತ್ತೊಮ್ಮೆ ಅವರ ಎರಡನೇ ಮದುವೆಯ ಸುದ್ದಿಗೆ ವೇಗ ಸಿಕ್ಕಿದೆ. ಈ ಹಿಂದೆ ರಾಜ್ ಹಾಗೂ ಡಿಕೆಶಿಯಲ್ಲಿ ರಾಜ್ ನನ್ನು ಪ್ರೀತಿಸುತ್ತಿದ್ದು, ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂದು ಹೇಳಲಾಗಿತ್ತು.

ಆದರೆ ಇದೀಗ ಸಮಂತಾ ಎರಡನೇ ಮದುವೆಯ ಸುದ್ದಿ ಮುನ್ನೆಲೆಗೆ ಬಂದಿದ್ದು, ಮತ್ತೆ ತಾಯಿಯಾಗಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಇದರೊಂದಿಗೆ ರಾಜ್ ಎರಡನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಗೆ ವೇಗ ಸಿಕ್ಕಿದೆ. ಈ ಸುದ್ದಿಯಲ್ಲಿನ ಸತ್ಯಗಳ ಹೊರತಾಗಿ, ಈ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಹಾಟ್ ಟಾಪಿಕ್ ಆಗಿದೆ. ಈ ಸುದ್ದಿಗೆ ಸಮಂತಾ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡೋಣ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸಿಕ್ಕಾಬಟ್ಟೆ ಸಾಲ, ಸಾಲು ಸಾಲು ಚೆಕ್‌ಬೌನ್ಸ್‌ ಕೇಸ್‌ ; ನಿರ್ದೇಶಕ ಗುರುಪ್ರಸಾದ್ ಸಾವಿಗೆ ಕಾರಣವಾಯ್ತಾ..!?

Published

on

ಸುದ್ದಿದಿನಡೆಸ್ಕ್:ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ʻಮಠʼ ಗುರುಪ್ರಸಾದ್‌ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ.

ಗುರುಪ್ರಸಾದ್‌ ಮೇಲೆ ಸಾಲು ಸಾಲು ಚೆಕ್‌ಬೌನ್ಸ್‌ ಕೇಸ್‌ಗಳಿದ್ದವು. ಸಿಕ್ಕ ಸಿಕ್ಕವರ ಬಳಿ ಸಾಲ ಮಾಡಿಕೊಂಡಿದ್ದರು. ಶ್ರೀನಿವಾಸ್‌ ಗೌಡ ಎಂಬುವರ ಜೊತೆ ಹಣದ ವ್ಯವಹಾರಕ್ಕೆ ಕಿರಿಕ್‌ ಕೂಡ ಆಗಿತ್ತು. ಗುರುಪ್ರಸಾದ್‌ಗೆ ಅಭಿಮಾನಿಯಾಗಿದ್ದ ಶ್ರೀನಿವಾಸ್‌ ಗೌಡ 25 ಲಕ್ಷ ಹಣ ನೀಡಿದ್ದರು. ಗುರುಪ್ರಸಾದ್‌ ಬರವಣಿಗೆ ಮೆಚ್ಚಿ ಜೊತೆಯಲ್ಲೇ ಇದ್ದರು ಶ್ರೀನಿವಾಸ್‌ ಗೌಡ.

ಹಣ ವಾಪಸ್‌ ಕೊಡಲಾಗದೇ ಕಿರಿಕ್‌ ಮಾಡಿಕೊಂಡಿದ್ದರು ನಿರ್ದೇಶಕ ಗುರುಪ್ರಸಾದ್‌ ಅವರು. ಈ ಬಗ್ಗೆ ಕೋರ್ಟ್‌ ಮೆಟ್ಟಿಲೇರಿದ್ದ, ಗುರುಪ್ರಸಾದ್‌ ವಿರುದ್ದ ಕಾನೂನು ಸಮರ ಸಾರಿದ್ದರು. ಅಕ್ಟೋಬರ್‌ 24ರಂದು ಇದ್ದ ಕೋರ್ಟ್‌ವಿಚಾರಣೆಗೂ ಹಾಜರಾಗಿರಲಿಲ್ಲ ಗುರುಪ್ರಸಾದ್‌. ಮೆಡಿಕಲ್‌ ರಿಪೋರ್ಟ್‌ ನೀಡಿ ವಿಚಾರಣೆ ಮುಂದೂಡಿಸಿಕೊಂಡಿದ್ದರು.

ನಿನ್ನೆ ಅಂದರೆ ನವೆಂಬರ್‌ 2ಕ್ಕೆ ಗುರುಪ್ರಸಾದ್‌ ಹುಟ್ಟುಹಬ್ಬ ಇತ್ತು. ಶುಭಾಶಯ ಕೋರಲು ಕರೆಮಾಡಿದವರಿಗೂ ನಾಟ್‌ ರೀಚಬಲ್‌ ಬಂದಿತ್ತು ಮೊಬೈಲ್‌.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

‘ಮಠ’ ಸಿನೆಮಾ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ..!

Published

on

ಸುದ್ದಿದಿನಡೆಸ್ಕ್:ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ʻಮಠʼ ಗುರುಪ್ರಸಾದ್‌ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ.

52 ವರ್ಷದ ಕನಕಪುರ ಮೂಲದ ಗುರುಪ್ರಸಾದ್‌ ಇನ್ನಿಲ್ಲಾ.. ತುಮಕೂರು ರಸ್ತೆಯ ಅಪಾರ್ಟ್‌ಮೆಂಟ್‌ನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಲದ ಸುಳಿಗೆ ಸಿಲುಕಿದ್ದ ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಠ ಸಿನಿಮಾ ಮೂಲಕ ನಿರ್ದೇಶಕರಾಗಿ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದರು. ಮಠ, ಎದ್ದೇಳು ಮಂಜುನಾಥ್‌ ಚಿತ್ರದ ಮೂಲಕ ಮನೆಮಾತಾಗಿದ್ದರು.

ನಿರ್ದೇಶಕ ʻಮಠʼ ಗುರುಪ್ರಸಾದ್‌ ಅವರು ನವೆಂಬರ್ 02, 1972 ರಂದು ರಾಮನಗರದಲ್ಲಿ ಜನಿಸಿದ್ದರು, ಅಂದರೆ ನಿನ್ನೆ ನಿರ್ದೇಶಕ ಗುರುಪ್ರಸಾದ್‌ ಹುಟ್ಟುಹಬ್ಬ ಇತ್ತು, ನಿನ್ನೆ ಬರ್ತ್‌ ಡೇ ವಿಶ್‌ ಮಾಡಲು ಕರೆಮಾಡಿದವರಿಗೆ ನೋ ಆನ್ಸರ್‌ ಅಂತ ಬರುತ್ತಿತ್ತು, ನಿರ್ದೇಶಕ ಗುರುಪ್ರಸಾದ್‌ ಅವರ ಮೊಬೈಲ್‌ ನಾಟ್‌ ರೀಚಬಲ್‌ ಆಗಿತ್ತು, ಗುರುಪ್ರಸಾದ್‌ ತಮ್ಮ ಜನ್ಮದಿನಕ್ಕೆ ಮುನ್ನವೇ ಜೀವನಕ್ಕೆ ಅಂತ್ಯ ಹಾಡಿಕೊಂಡಿದ್ದಾರೆ. ಬರ್ತಡೇಗೂ ಮುನ್ನವೇ ಡೆತ್ ಡೇ ಮಾಡಿಕೊಂಡ ಗುರುಪ್ರಸಾದ್..!

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending