ರಾಜಕೀಯ
ಆದರೆ ಒಂದಂತೂ ಸತ್ಯ…
ಇಂದು ಬೆಳಿಗ್ಗೆ ಬಿಜೆಪಿ ಬೆಂಬಲಿಗನೊಬ್ಬ ಇನ್ ಬಾಕ್ಸ್ ನಲ್ಲಿ ಬಂದು After long time how is the Josh? ಇಡೀ ದೇಶ ಮೋದಿಜಿ ಗೆಲುವಿಗೆ ಸಂತೋಷ ಪಡ್ತಿದೆ, ನೀವು ಬನ್ನಿ ಎಂದು ಆಹ್ವಾನಿಸಿದ. ಬಹುಶ ಆ ವ್ಯಕ್ತಿ ಹಿಂದೆ ಯಾವಾಗಲೋ ನನ್ನೊಂದಿಗೆ ವಾದ ನಡೆಸಿರಬಹುದು. ನನಗೆ ಸರಿಯಾಗಿ ನೆನಪಿಲ್ಲ…
ಆತ ಈ ಮೆಸೇಜ್ ಹಾಕಿದ ನಂತರ ಸುಮಾರು ಹೊತ್ತು ಚಾಟ್ ನಡೆಯಿತು. ನನ್ನ ಕೆಲವು ಉತ್ತರ ನೋಡ ಅವನು, “ಕೋಪದಲ್ಲಿ ಏನೇನೋ ಮಾತಾಡ್ತೀರಾ, ಸ್ವಲ್ಪ ದಿನ ಹೋಗಲಿ, ಯೋಚನೆ ಮಾಡಿ… ಬಿಜೆಪಿಗೆ ಬನ್ನಿ ನಿಮಗೂ ಒಳ್ಳೆಯದಾಗಲಿ” ಅಂತ ಕೇಳಿಕೊಂಡ.
ಕೊನೆಯಲ್ಲಿ ನಾನು ಒಂದು ಮಾತು ಹೇಳಿದೆ.
“ಬ್ರದರ್, ನಿಮ್ಮಲ್ಲಿ ಮನುಷ್ಯತ್ವ, ಪ್ರಾಮಾಣಿಕತೆ, ಒಳ್ಳೆಯತನ, ಪ್ರಜಾಪ್ರಭುತ್ವ ಚಿಂತನೆ, ದೇಶದ ಆರ್ಥಿಕ ಸಾಮಾಜಿಕ ಪ್ರಗತಿ ಬಗ್ಗೆ ಕಾಳಜಿ, ಇಷ್ಟೂ ಇರುವುದು ನಿಜವಾಗಿದ್ದರೆ ಇನ್ನೂ ಮೂರೇ ವರ್ಷದಲ್ಲಿ ಬಿಜೆಪಿ ಬಿಟ್ಟು ಬರುತ್ತೀರಿ. ಆದರೆ ನಿಮ್ಮೊಳಗೆ ಅಪ್ರಾಮಾಣಿಕತೆ, ಭ್ರಷ್ಟತೆ, ಕೋಮು ದ್ವೇಷ ಇತ್ಯಾದಿ ಇದ್ದರೆ ಏನೂ ಮಾಡಕಾಗಲ್ಲ, ಆಲ್ ದ ಬೆಸ್ಟ್, ಒಳ್ಳೆಯದಾಗಲಿ” ಎಂದೆ.
2002ರಲ್ಲಿ ಮೋದಿಯ ಕ್ರಿಮಿನಲ್ ಕೆಲಸಗಳನ್ನು ಓದಿ, ಕೇಳಿದಾಗಿನಿಂದಲೂ ನಿರ್ದಿಷ್ಟವಾಗಿ ನರೇಂದ್ರ ಮೋದಿಯನ್ನಿ ವಿರೋಧಿಸುತ್ತಾ ಬಂದಿರುವ ಹಾಗೂ ಅದಕ್ಕಿಂತ ಮೊದಲೇ ಬಿಜೆಪಿ ಮತ್ತು ಸಂಘಪರಿವಾರವನ್ನು ಸೈದ್ಧಾಂತಿಕ ಕಾರಣಕ್ಕಾಗಿ ವಿರೋಧಿಸುವ ನನ್ನನ್ನು ಅಥವಾ ನನ್ನಂತಹ ಹಲವರನ್ನು ಈ ಗೆಳೆಯನಂತವರು ತಪ್ಪಾಗಿ “ಮಹಾಘಟಬಂಧನ್” ನಾಯಕರ ಫಾಲೋವರ್ ಎಂದುಕೊಂಡುಬಿಟ್ಟಿರುತ್ತಾರೆ. ಹಾಗಾಗಿಯೇ ನಾವು ಅವರಿಗೆ ಭ್ರಷ್ಟರ ಪರ ಬ್ಯಾಟಿಂಗ್ ಮಾಡುವವರಾಗಿ ಕಾಣುತ್ತೇವೆ. ಪಾಪ ಅದು ಅವರ ತಿಳುವಳಿಕೆಯ ಮಿತಿ.
“ಮಹಾಘಟಬಂಧನ್ ನಾಯಕರೆಲ್ಲಾ ಭ್ರಷ್ಟರು ಮತ್ತು ಸ್ವಾರ್ಥಿಗಳು ಮೋದಿ ಮಾತ್ರ ಒಳ್ಳೆಯ ವ್ಯಕ್ತಿ” ಎಂಬ ಕಟ್ಟುಕತೆಯನ್ನು ಮುಗ್ಧವಾಗಿ ನಂಬಿಕೊಂಡಿರುವ ಇಂತಹ ಯುವಕರು ಈಗ ಅಡಿಗಡಿಗೂ ಸಿಗುತ್ತಾರೆ. ಇವರಲ್ಲಿ ಅನೇಕರು ನಿಜಕ್ಕೂ ತಮ್ಮನ್ನು ತಾವು ಒಳ್ಳೆಯದರ ಪರವಾಗಿ ನಿಂತವರು ಎಂದು ನಂಬಿಕೊಂಡವರೂ ಹೌದು.
ನಾವು ಈಗ ಕೇಳಿಕೊಳ್ಳಬೇಕಾದ ನಿಜವಾದ ಪ್ರಶ್ನೆ ಇದು. ದೇಶದಾದ್ಯಂತ ಬಿಜೆಪಿ ಇಂತಹುದೇ ಮನಸ್ಥಿತಿಯನ್ನು ಹೊಸ ತಲೆಮಾರಿನ ಯುವಕರಲ್ಲಿ ಬಿತ್ತಿದ್ದು ಹೇಗೆ? ಕಳೆದ ಐದು ವರ್ಷಗಳಲ್ಲಿ ಅಗಾಧ ಮಟ್ಟದಲ್ಲಿ ಜನರಿಗೆ ತೊಂದರೆ ಆಗುವ ನೀತಿಗಳನ್ನೇ ಜಾರಿಗೊಳಿಸಿದರೂ, ದೇಶದ ಆರ್ಥಿಕತೆಯನ್ನೇ ಬಿಕ್ಕಟ್ಟಿನ ಸ್ಥಿತಿಗೆ ತಂದಿಟ್ಟಿದ್ದರೂ ಸಹ ಇದಾವುದರ ನೋವು ಸಂಕಟಗಳೂ ಅರಿವಾಗದಂತೆ 16-25 ವರ್ಷದೊಳಗಿನ ಯುವ ಸಮೂಹವನ್ನು ಇವರು ಪ್ರಭಾವಿಸಿದ್ದು ಹೇಗೆ? ಇದಕ್ಕಾಗಿ ಅವರು ನಡೆಸಿದ್ದ ತಂತ್ರಗಳೇನು? ಕೃತಿಯೇ ಇಲ್ಲದೇ ಮಾತಿನಿಂದಲೇ ಮೋದಿ ದೇಶವನ್ನು ವಂಚಿಸಲು ಸಾಧ್ಯವಾದದ್ದು ಹೇಗೆ?
ಬಹಳ ಮುಖ್ಯವಾಗಿ ಮೋದಿ ಪಡೆ ಇಷ್ಟೆಲ್ಲಾ ಮಾಡುತ್ತಿದ್ದಾಗ ಅದಕ್ಕೆ ಪ್ರತಿಯಾಗಿ ನಾವೆಲ್ಲಾ ಸೇರಿ ಯಾವ ಬಗೆಯ ನರೆಟಿವ್ ಕಟ್ಟಬೇಕಿತ್ತು…? ಕೇವಲ ಪ್ರತಿಕ್ರಿಯಾತ್ಮಕ ಕೆಲಸ, ಮಾತುಗಳಿಗೇ ನಮ್ಮನ್ನು ನಾವು ಸೀಮಿತಗೊಳಿಸಿಕೊಂಡದ್ದು ಇಂದಿನ ಸ್ಥಿತಿಗೆ ಕಾರಣವಲ್ಲವೇ? ಯುವಜನರು ಆತುಕೊಂಡಿರುವ ಹುಸಿ “ದೇಶಭಕ್ತಿ” ಯನ್ನು ಮೀರಿ ದೇಶದ ಒಳಿತಿಗಾಗಿ ಆಲೋಚಿಸುವ ಯಾವ ಕಾರ್ಯಕ್ರಮಗಳ ನಮ್ಮ ಬಳಿ ಇದ್ದವು?/ಇವೆ? ಅಥವಾ ದೇಶದ ಜನರ ಒಳಿತಿಗೂ ದೇಶಭಕ್ತಿಗೂ ಇರುವ ಸಂಬಂಧವನ್ನು ಸರಿಯಾಗಿ ಎತ್ತಿ ಹೇಳಲಾಗದ ಮಿತಿ ಯಾವದು? ಇವೆಲ್ಲಾ ಉತ್ತರ ಕಂಡುಕೊಳ್ಳಬೇಕಾದ ಪ್ರಶ್ನೆಗಳು.
ಮುಂದಿನ ದಿನಗಳು ಈ ದೇಶದ ರೈತರಿಗೆ, ಕಾರ್ಮಿಕರಿಗೆ, ವಿದ್ಯಾರ್ಥಿ ಯುವಜನರಿಗೆ, ದಲಿತ, ಮುಸ್ಲಿಮರಿಗೆ, ಕ್ರೈಸ್ತರಿಗೆ, ಮಹಿಳೆಯರಿಗೆ, ಜನರ ಪರವಾಗಿ ದನಿ ಎತ್ತುವವರಿಗೆ ಎಂತಹ ಸನ್ನಿವೇಶ ತರಲಿವೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.
ಆದರೆ ಒಂದಂತೂ ಸತ್ಯ….ಮೋದಿ ಸರ್ಕಾರ ಅತಿ ಬೇಗನೇ ದೇಶದ ಆರ್ಥಿಕತೆಯನ್ನು ತೀವ್ರ ಬಿಕ್ಕಟ್ಟಿಗೆ ತಳ್ಳಲಿದೆ. ಇದರ ಕಾರ್ಪೊರೇಟ್ ತುಷ್ಟೀಕರಣ ರಭಸವಾಗಿ ನಡೆದಷ್ಟೂ ಸಂಕಷ್ಟಗಳ ಸರಮಾಲೆ ದೇಶದ ರೈತ ಕಾರ್ಮಿಕರಿಗೆ ಸುತ್ತಿಕೊಳ್ಳಲಿದೆ… ಸಂಸತ್ ಸದಸ್ಯರೆಲ್ಲಾ ಮೋದಿ ಮತ್ತು ಅಮಿತ್ ಷಾ ಗಳ ಹಾಗೂ ಅಂಬಾನಿ ಆದಾನಿಗಳ ಗುಲಾಮರಾಗಿರುವಾಗ ಸಂಸತ್ತು ಎಂದು ಪ್ರಜಾಪ್ರಭುತ್ವದ ಬದಲು ಸರ್ವಾಧಿಕಾರ ಮತ್ತು ಗುಲಾಮಗಿರಿಯ ರಕ್ಷಕನಾಗಿ ಬದಲಾಗಲಿದೆ.
ಅಂತಹ ಪರಿಸ್ಥಿತಿಯಲ್ಲಿ ಜನರನ್ನು ನಿಜ ಸಮಸ್ಯೆಗಳಿಂದ ದಿಕ್ಕಿತಪ್ಪಿಸುವ ನಾನಾ ಬಗೆಯ ದ್ವೇಷಕಾರಿ, ದಮನಕಾರಿ, ಉನ್ಮಾದಕಾರಿ ನೀತಿಗಳು ಈಗಾಗಲೇ ಬಿಜೆಪಿ ಜೋಳಿಗೆಯಲ್ಲಿ ಇವೆ. ಅಯೋಧ್ಯೆ ವಿವಾದದಿಂದ ಹಿಡಿದು, ಕಾಶ್ಮೀರ, ಆರ್ಟಿಕಲ್ 370, ಆರ್ಟಿಕಲ್ 42, ಸಮಾನ ನಾಗರಿಕ ಸಂಹಿತೆ, ಇತ್ಯಾದಿ ಯಾವುದೇ ವಿಷಯವಾದರೂ ಸಾಕು.ಬೆಂಕಿ ಹಚ್ಚಲು.
ದೇಶದ ನಿಜ ಸಮಸ್ಯೆಗಳನ್ನು ಯಾರೂ ಪ್ರಶ್ನಿಸದಂತೆ ಮಾಡಲು, ಜನರ ಸಂಕಷ್ಟಗಳೇ ಮರೆಮಾಚುವಂತೆ ಮಾಡಲು ಹಿಂದೂ-ಮುಸ್ಲಿಂ ದ್ವೇಷವನ್ನು ಯಾವ ರೀತಿ ಬೇಕಾದರೂ, ಯಾವ ಕ್ಷಣ ಬೇಕಾದರೂ ಉತ್ತೇಜಿಸಬಲ್ಲ ಮಶಿನರಿ ಇವರ ಬಳಿ ಸನ್ನದ್ಧವಾಗಿದೆ.
ಖಂಡಿತವಾಗಿ ಬಂದೊದಗಲಿರುವ ಅಂತಹ ಸನ್ನಿವೇಶಗಳನ್ನು ಎದುರಿಸಲು ದೇಶದ ಬಗೆಗೆ ಕಾಳಜಿ ಇರುವ ಜನರ ಬಳಿ ಇರುವ ಜನಹಿತದ ತಂತ್ರಗಳೇನು? ಅವರ ಕ್ರಿಯೆಗೆ ನಮ್ಮ ಪ್ರತಿಕ್ರಿಯೆ ಮಾದರಿಯಿಂದ ಬಹಳ ಸಮಯ ಲಾಭ ಪಡೆಯುವುದು ಅವರೇ ಹೊರತು ನಾವಲ್ಲ.
ಭಾರತದ ಅನನ್ಯ ಕೂಡುಸಂಸ್ಕೃತಿಯ ರಕ್ಷಣೆಗೆ, ಈ ದೇಶದ ರೈತ, ಕಾರ್ಮಿಕರ, ದಲಿತ, ಅಲ್ಪಸಂಖ್ಯಾತ, ಮಹಿಳೆಯರೆಲ್ಲರ ರಕ್ಷಣೆಗೆ, ನಾಡಿನ ವೈವಿಧ್ಯಮಯ ಜನ ಸಂಸ್ಕೃತಿಯ ಉಳಿವಿಗೆ pro active, ಕೆಲಸಗಳಿಗೆ ನಾವು ಮುಂದಾಗದಿದ್ದರೆ ಮುಂದಿನ ಪೀಳಿಗೆಗಳು ನಮ್ಮನ್ನು ಕ್ಷಮಿಸುವುದಿಲ್ಲ.
ಅವನು ಕಾಂಗ್ರೆಸ್, ಇವನು ಕಮ್ಯುನಿಸ್ಟ್, ಅವನು ಬಿಎಸ್ಪಿ ಇತ್ಯಾದಿ ಸಂಕುಚಿತ ಗೂಡುಗಳಿಂದ ಹೊರಬಂದು ಈ ಭಾರತವನ್ನು ರಕ್ಷಿಸಬೇಕಾದ ದೊಡ್ಡ ಕೈಂಕರ್ಯದಲ್ಲಿ ಒಬ್ಬೊಬ್ಬರೂ ದಂಡನಾಯಕರಾಗಬೇಕಾದ ಹೊತ್ತು ಇದು. ನಿಜದೇಶಪ್ರೇಮಿಗಳಾಗಿ ಮೈಮರೆಯದೇ ತೊಡಗಿಸಿಕೊಳ್ಳುವ ಸಮಯ ಇದು.
ರಾಹುಲ್ ಗಾಂಧಿಗೋ, ದೇವೇ ಗೌಡ್ರಿಗೋ, ಮಮತಾ, ಮಾಯಾವತಿ, ಕೇಜ್ರಿವಾಲ್ ಅಥವಾ ಮತ್ಯಾರಿಗೋ ಮಾಡಬೇಕಾದ ಕೆಲಸವಲ್ಲ. ಇಡೀ ಜಗತ್ತಿನಲ್ಲಿ ಅತ್ಯದ್ಭುತ ಜನಸಂಸ್ಕೃತಿಯನ್ನು, ಬುದ್ಧನ ಕಾಲದಿಂದಲೂ ಸಮತೆ, ಪ್ರಜಾಪ್ರಭುತ್ವಗಳ ಉದಾತ್ತ ಮೌಲ್ಯಗಳನ್ನು ರೂಪಿಸಿದ ಈ ಮಹಾನ್ ದೇಶವನ್ನು ಆ ಮೌಲ್ಯಗಳೊಂದಿಗೆ ಉಳಿಸಿಕೊಳ್ಳಬೇಕಾದ ಹೊಣೆ ಇದು.
– ಹರ್ಷಕುಮಾರ್ ಕುಗ್ವೆ
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ
ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.
ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.
ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಡಿಕೇರಿಯಲ್ಲಿ ನಡೆದ ಜನಧ್ವನಿ-2 ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದೆ.
ಸಂವಿಧಾನಕ್ಕೆ ಅಪಾಯ ಎಂದರೆ ದೇಶದ ಮಹಿಳೆಯರು, ಬಡವರು, ಮಧ್ಯಮ ವರ್ಗದವರು, ಶೂದ್ರರು, ಶ್ರಮಿಕರ ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ.
ಭಾರತದಲ್ಲಿ ಪ್ರಜಾತಂತ್ರ ಅಪಾಯದಲ್ಲಿದೆ. ಇದನ್ನು ಉಳಿಸುವ ಅನಿವಾರ್ಯತೆ ನಮ್ಮೆಲ್ಲರ ಮುಂದಿದೆ. ಈ ಲೋಕಸಭಾ ಚುನಾವಣೆ ನಮಗೊಂದು… pic.twitter.com/UapeRxBcZP
— Siddaramaiah (@siddaramaiah) April 14, 2024
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ವಿವಿಧ ಜಿಲ್ಲೆಗಳಲ್ಲಿ ಡಾ. ಬಾಬು ಜಗಜೀವನ್ ರಾಮ್ 117ನೇ ಜನ್ಮ ದಿನಾಚರಣೆ
ಸುದ್ದಿದಿನ ಡೆಸ್ಕ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಾ. ಬಾಬು ಜಗಜೀವನ್ ರಾಮ್ ಅವರ 117ನೇ ಜನ್ಮ ದಿನಾಚರಣೆ ಪ್ರಯುಕ್ತ ವಿಧಾನ ಸೌದದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ್ಪ, ಹಿರಿಯ ಶಾಸಕ ಈ. ತುಕಾರಾಮ್, ಮಾಜಿ ಸಚಿವ ಹೆಚ್.ಆಂಜನೇಯ, ವಿಧಾನ ಪರಿಷತ್ ಸದಸ್ಯ ಸುದಾಮ ದಾಸ್, ಮಹಿಳಾ ಆಯೋಗದ ಅದ್ಯಕ್ಷೆ ಡಾ. ನಾಗಲಕ್ಷ್ಮಿ ಸೇರಿ ಹಲವರು ಉಪಸ್ಥಿತರಿದ್ದರು. ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ ರಾಂ ಅವರ ಜನ್ಮ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು.
ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಜಗಜೀವನರಾಂ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಮಂಡ್ಯದ ಡಿಸಿ ಪಾರ್ಕ್ ಎದುರು ಇರುವ ಜಗಜೀವನ್ರಾಮ್ ಪ್ರತಿಮೆಗೆ ಜಿಲ್ಲಾಡಳಿತದ ವತಿಯಿಂದ ಮಾಲಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಎಸ್ಪಿ ಎನ್.ಯತೀಶ್ ಸೇರಿದಂತೆ ಅಧಿಕಾರಿಗಳ ವರ್ಗ ಹಾಗೂ ಜಗಜೀವನ್ರಾಮ್ ಅನುಯಾಯಿಗಳು ಭಾಗವಹಿಸಿದ್ದರು.
ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಬಾಬು ಜಗಜೀವನ ರಾಂ ಅವರ ಅವರ 117ನೇ ಜಯಂತಿಯನ್ನು ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾಂಕೇತಿಕವಾಗಿ ಆಚರಿಸಲಾಯಿತು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಾಬು ಜಗಜೀವನ್ ರಾಂ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಇಂದು ಚುನಾವಣಾ ಆಯೋಗ ಸಮಾವೇಶ
ಸುದ್ದಿದಿನ ಡೆಸ್ಕ್ : ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ 11 ರಾಜ್ಯಗಳ ನಗರ ಪಾಲಿಕೆ ಆಯುಕ್ತರು ಮತ್ತು ಆಯ್ದ ಜಿಲ್ಲಾ ಚುನಾವಣಾ ಅಧಿಕಾರಿಗಳೊಂದಿಗೆ ಕೇಂದ್ರ ಚುನಾವಣಾ ಆಯೋಗ ಇಂದು ದೆಹಲಿಯಲ್ಲಿ ಸಮಾವೇಶ ನಡೆಸಲಿದೆ.
ಈ ಸಮಾವೇಶದಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಚರ್ಚಿಸಲಾಗುವುದು ಮತ್ತು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಡಿಮೆ ಮತದಾನದ ಸಮಸ್ಯೆಯನ್ನು ಪರಿಹರಿಸಲು ಉದ್ದೇಶಿತ ಮತ್ತು ನಿರ್ದಿಷ್ಟ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಲಾಗುವುದು.
ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಹೈದರಾಬಾದ್, ಅಹಮದಾಬಾದ್, ಪುಣೆ, ಥಾಣೆ, ನಾಗ್ಪುರ, ಪಾಟ್ನಾ ಸಾಹಿಬ್, ಲಖನೌ ಮತ್ತು ಕಾನ್ಪುರ ನಗರ ಪಾಲಿಕೆಯ ಆಯುಕ್ತರು ಮತ್ತು ಬಿಹಾರ ಮತ್ತು ಉತ್ತರದ ಆಯ್ದ ಜಿಲ್ಲಾ ಚುನಾವಣಾ ಅಧಿಕಾರಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತರುಗಳಾದ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243