ದಿನದ ಸುದ್ದಿ
ಕೆಲವು ಕೆ.ಎಸ್.ಆರ್.ಟಿ.ಸಿ ಬಸ್ ಗಳಲ್ಲಿ ‘ವಿದ್ಯಾರ್ಥಿ ಪಾಸ್’ ಗಳಿಗೆ ಮಾನ್ಯತೆ ಇಲ್ಲವೆ..?
ಸುದ್ದಿದಿನ, ವಿಜಯಪುರ: ಇಂಡಿ ತಾಲ್ಲೂಕಿನ ಹೀರೆರೂಗಿ, ಬೊಳೆಗಾವಂ, ತಡವ್ಲಗಾ, ಗುಂಡುತಾಂಡಾ, ಅಥರ್ಗಾ, ನಾಗಠಾಣ, ಹಾಗೂ ಅಲೀಯಾಬಾದದ ವಿದ್ಯಾರ್ಥಿಗಳು, ಜೀಲ್ಲಾ ಮಟ್ಟದಲ್ಲಿ ಉನ್ನತ ಗುಣಮಟ್ಟದ ವಿದ್ಯಾಭ್ಯಾಸ ಮಾಡಬೇಕೆಂದು ಬಯಸುವವರು ಪ್ರತಿದಿನದ ರೊದನೆ ಅನುಭವಿಸುವಂತಾಗಿದೆ.
ನಮ್ಮ ಘನ ಸರ್ಕಾರ ವಿದ್ಯಾರ್ಥಿಗಳಿಗಾಗಿಯೆ ವಿಶೇಷ ಕ್ರಮಗಳನ್ನು ಜಾರಿಗೆಗೊಳ್ಳಿಸುತ್ತಿದೆ. ವಿದ್ಯಾರ್ಥಿಗಳು ದೂರದ ಶಾಲಾ-ಕಾಲೇಜಿಗೆ ಹೋಗಿ ತಮ್ಮ ಶಿಕ್ಷಣವನ್ನು ಮುಂದುವರಿಬೇಕೆಂದು ಕಡಿಮೆ ದರದಲ್ಲಿ ವಿದ್ಯಾರ್ಥಿಪಾಸ್ ಗಳನ್ನು ಕಲ್ಪಿಸ ಬೇಕೆಂದು ಆದೇಶ ನೀಡಿದೆ, ವಿದ್ಯಾರ್ಥಿ ಪಾಸ್ ಎಲ್ಲ ಬಸ್ ಗಳಲ್ಲಿ ಅನುಮತಿ ಇದೆ ಎಂದು ಹೇಳಿದೆ. ಆದರೆ ಇಂಡಿ ವಿಜಯಪುರ ಮಾರ್ಗವಾಗಿ ಸಂಚರಿಸುವ ಏಷ್ಟೊ ಬಸ್ಗಳಲ್ಲಿ ವಿದ್ಯಾರ್ಥಿ ಪಾಸ್ ಗಳಿಗೆ ಅನುಮತಿ ಇಲ್ಲ.
ಯಾಕೆಂದರೆ ಬಸ್ ಗಳಲ್ಲಿ ಭೀಮಾ ಸಾರಿಗೆ (ವಿದ್ಯಾರ್ಥಿಗಳ ಪಾಸಿಗೆ ಅನುಮತಿ ಇಲ್ಲ) ಎನ್ನುವ ನಾಮಫಲಕಗಳೆ ರಾರಾಜಿಸುತ್ತಿವೆ. ಇದರ ವಿಷಯವಾಗಿ ಬಸ್ ನಿರ್ವಾಹರನ್ನು ವಿಚಾರಿಸಿದರೆ ಕೇಲವರು ಎಲ್ಲಾ ಬಸ್ ಗಳಲ್ಲಿವು ವಿದ್ಯಾರ್ಥಿಪಾಸ್ ಗಳಿಗೆ ಅನುಮತಿ ಇವೆ ಅಂದರೆ, ಇನ್ನೂ ಕೇಲವರು ವ್ಯಂಗ್ಯವಾಗಿ ಮಾತನಾಡಿ, ಅಸಭ್ಯವಾಗಿ ವರ್ತಿಸುತ್ತಾರೆ, ಸ್ವತಃ ಚಕರ್ ಹೇಳಿರುವ ಹೇಳಿಕೆ ಇದು. ತೆರಿಗೆ ಕಟ್ಟಬೇಕು ಆದ ಕಾರಣ ಭೀಮಾ ಸಾರಿಗೆ ನಾಮಫಲಕಗಳನ್ನು ಹಾಕಿದ್ದೇವೆ ಅಂದರು.
ಅದಕ್ಕೆ ವಿದ್ಯಾರ್ಥಿಗಳು 103,ಮತ್ತು105 ಎರಡೆ ಬಸ್ ಗಳಿಗೆ ಮಾತ್ರ ಪಾಸ್ ಅನುಮತಿ ಇಲ್ಲ ಅಂತ ಗೋತ್ತು, ಆದರು ಬೇರೆ ಬಸ್ ಗಳಿಗೆ ಭೀಮಾ ಸಾರಿಗೆ ಎಂಬ ನಾಮಫಲಕಗಳು ಯಾಕೆ ಅಂತ ವಿದ್ಯಾರ್ಥಿಗಳು ಪ್ರಶ್ನೇ ಮಾಡಿದರೆ, ಅದಕ್ಕೆ ನೀವು ವಿದ್ಯಾರ್ಥಿಗಳು ಓದುವದನ್ನು ಮೋದಲು ಮಾಡಿ ಅದನ್ನು ಬಿಟ್ಟು ಬೇರೆ ಕೆಲಸ ಮಾಡ ಬೇಡಿ, ನಮ್ಮ ಕೆಲಸ ನಮಗೆ ತಿಳಿದಿದೆ ನೀವು ಹೇಳುವ ಅವಶ್ಯಕತೆ ಇಲ್ಲ ಎಂದು ವ್ಯಂಗ್ಯವಾಗಿ ಚಕರ್ ಮಾತನಾಡಿದರು.
ಚಕರ್ ಹೀಗೆ ಮಾತನಾಡಿದರು ಅಂತ ಕೇಂದ್ರ ಬಸ್ ನಿಲ್ದಾಣದ ಅಧೀಕಾರಿಯಾದ ಬಿಸ್ನಾಳರಿಗೆ ತಿಳಿಸಿದರೆ, ವಿದ್ಯಾರ್ಥಿ ಪಾಸ್ ಗಳು ಎಲ್ಲ ಬಸ್ ಗಳಿಗು ಅನುಮತಿ ಇದೆ, ಯಾರು ಅನುಮತಿ ಇಲ್ಲ ಅನ್ನುವರೋ ಅವರನ್ನು ಬಸ್ ನ ಜೋತೆಗೆ ಕರೆದುಕೊಂಡು ಹೋಗಿ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿರಿ ಎಂದು ಅವರು ಹೇಳುತ್ತಾರೆ. ದೂರು ದಾಖಲಿಸುವುದು ದೊಡ್ಡಸ್ಥೀಕೆ ಅಲ್ಲ. ಅದರಲ್ಲು ಹಳ್ಳಿಯ ಜನರು ಕೇಸು, ಕೋರ್ಟುಗಳಿಗೆಲ್ಲ ಭಯಪಡುತ್ತಾರೆ. ಆದ ಕಾರಣ ಯಾರು ಏನು ಹೇಳುತ್ತಿಲ್ಲ. ವಿದ್ಯಾರ್ಥಿಗಳು ಕೇಳಿದರೆ ವ್ಯಂಗ್ಯವಾಗಿ, ಅಸಬ್ಯವಾಗಿ ವರ್ತಿಸುತ್ತಾರೆ. ಇದರಿಂದಾಗಿ ವಿದ್ಯಾರ್ಥಿಗಳು ಬೇಸತ್ತಿದ್ದಾರೆ.
ಪ್ರತಿ ದಿನವು 9ಗಂಟೆಗೆಲ್ಲ ಶಾಲಾ-ಕಾಲೇಜಿನಲ್ಲಿ ಇರಬೇಕು, ಇಲ್ಲವಾದರೆ ಶಾಲೆ-ಕಾಲೇಜುಗಳಲ್ಲಿ ಗುರುಗಳ ಕಡೆಯಿಂದ ಬೈಯಿಸಿಕೊಳ್ಳ ಬೇಕು, ಅವರು ಕೋಡುವ ಶಿಕ್ಷೆನಾ ಅನುಭವಿಸ ಬೇಕು.ಕೇಲವೊಂದು ದಿನ ಪರೀಕ್ಷೆಗಳು, ಶಾಲಾ-ಕಾಲೇಜುಗಳಲ್ಲಿ ಪ್ರಮುಖವಾದ ಕಾರ್ಯಕ್ರಮಗಳು, ಹಾಗೂ ವಿಶೇಷವಾದ ತರಗತಿಗಳು ಇರುತ್ತವೆ. ತಡವಾಗಿ ಹೋಗಬೇಕಾಗುತ್ತದೆ. ಹೀಗೆ ಮಾಡಿದರೆ ಅವುಗಳಿಂದ ಹಿಂದೆ ಉಳಿಯ ಬೇಕಾಗುತ್ತದೆ.
ಆದ ಕಾರಣ ನಮ್ಮ ವಿಜಯಪುರ ಜಿಲ್ಲೆಯ ಮಾನ್ಯ ಜೀಲ್ಲಾಧೀಕಾರಿಗಳು ವಿದ್ಯಾರ್ಥಿಗಳ ಮೇಲೆ ಪ್ರೀತಿ, ಕಾಳಜಿ, ಧಯೆ, ಕರುಣೆ ಇಟ್ಟು, ವಿದ್ಯಾರ್ಥಿಗಳಿಗೆ ತೋಂದರೆ, ಮೋಸ ಆಗದಂತೆ ಸರಿಯಾದ ರೀತಿಯಲ್ಲಿ ಸೂಕ್ತ ಕ್ರಮವನ್ನು ತೆಗೆದುಕೊಳ್ಳ ಬೇಕಾಗಿ ಕಳಕಳಿಯಿಂದ ಇಂಡಿ ತಾಲ್ಲೂಕು ಹಾಗೂ ಇಂಡಿ ತಾಲ್ಲೂಕಿನ ಹೀರೆರೂಗಿ, ಬೊಳೆಗಾವಂ, ತಡವ್ಲಗಾ, ಗುಂಡುತಾಂಡಾ, ಅಥರ್ಗಾ, ನಾಗಠಾಣ, ಹಾಗೂ ಅಲೀಯಾಬಾದ ಗ್ರಾಮದ ಮಾರ್ವಗವಾಗಿ ಸಂಚರಿಸುವ ಎಲ್ಲಾ ವಿದ್ಯಾರ್ಥಿಗಳು ಕೇಳಿಕೊಳ್ಳುತ್ತಿದ್ದಾರೆ.
ಹೇಳಿಕೆಗಳು
“ನಾನು ಅಥರ್ಗಾ ಗ್ರಾಮದ ವಿದ್ಯಾರ್ಥಿನಿ ನಾನು ಪಿ.ಯು.ಸಿಯಿಂದನು ಅಂದರೆ ಸತತವಾಗಿ 4ವರ್ಷಗಳಿಂದಾನು ಅಥರ್ಗಾ ವಿಜಯಪುರದ ಮಾರ್ಗವಾಗಿ ಸಂಚರಿಸುತ್ತಿದ್ದೆನೆ ಪ್ರತಿ ದಿನವು ಇದೆ ರೀತಿಯ ಗೋಳ್ಳಾಟ ನಡೆದಿದೆ. ಪ್ರತಿ ದಿನ ಬೆಳ್ಳಗೆ 6ರಿಂದ 7:30 ರ ವರೆಗೆ ಮಾತ್ರ ಬಿಡುವಿಲ್ಲದ ಹಾಗೆ ಭೀಮಾಸಾರಿಗೆ ನಾಮಫಲಕಗಳು ರಹಿತ ಬಸ್ ಗಳು ಸಂಚರಿಸುತ್ತವೆ. ಕೇಲವು ಬಾರಿ ಸ್ವಲ್ಪ ತಡಮಾಡಿದರೆ 7:30ರ ಬಸ್ ಹೋರಟು ಹೋಗಿರುತ್ತದೆ. ನಂತರ 7:30 ರಿಂದ 8:15 ವರೆಗೆ ಬಸ್ ಗಳಿಲ್ಲ. ಇದ್ದರು ಸತತವಾಗಿ 3 ಬಸ್ ಗಳು ಭೀಮಾ ಸಾರಿಗೆ ನಾಮಫಲಕಗಳೊಂದಿಗೆ ಬರುತ್ತವೆ. ಆದ್ದ ಕಾರಣ ಇದಕ್ಕೆ ಸಂಭಂದ ಪಟ್ಟ ಅಧೀಕಾರಿಗಳು ಅಥವಾ ಮಾನ್ಯ ಜೀಲ್ಲಾಧೀಕಾರಿಗಳು ಈ ಸಮಸ್ಯೆಯನ್ನು ಬಗೆ ಹರಿಸುತ್ತಾರೆ ಎಂದು ನಂಬಿದ್ದೇವೆ.
|ಅಥರ್ಗಾ ಗ್ರಾಮದ ನೊಂದ ವಿದ್ಯಾರ್ಥಿನಿ
“ನಮ್ಮ ಮಗಳು ಶಿಕ್ಷಣಕ್ಕಾಗಿ ಇಂಡಿಗೆ ಹೋಗುತ್ತಾಳೆ. ಕೇಲವು ದಿನಗಳ ಹಿಂದೆ ಶಾಲೆಯಿಂದ ಮರಳಿ ಬರುವಾಗ ಗೋತ್ತಿಲ್ಲದೆ ಭೀಮಾ ಸಾರಿಗೆ ಎರಿದ್ದಳು, ಎರುವಾಗ ಸುಮ್ಮನಿದ್ದ ನಿರ್ವಾಹಕ ರಸ್ತೆಯ ಮಧ್ಯದಲ್ಲಿ ಇಳಿಸಿದರು. ಆ ದಿನ ರಸ್ತೆ ಮಧ್ಯದಲ್ಲಿ ಇಳಿಸಿದಕ್ಕಾಗಿ ಮತ್ತೆ ನಡೆದು ಕೊಂಡು ಇಂಡಿಗೆ ಹೋಗಿ ಬೇರೆ ಬಸ್ ಹಿಡಿದು ಬರಬೇಕಾದರೆ ರಾತ್ರೆ 8:30 –ಕ್ಕೂ ಅಧಿಕ ಸಮಸವಾಗಿತ್ತು. ನಂತರ ಮರುದಿನ ಇಂಡಿ ಡೀಪುಗೆ ಹೋಗಿ ವಿಚಾರಣೆ ಮಾಡಿದೆವು. ಅಂದಿನಿಂದ ನಮ್ಮ ಮಗಳು ವಿದ್ಯಾರ್ಥಿಗಳ ನಿಲಯದಲ್ಲಿ ಉಳಿದು ವಿದ್ಯಾಭ್ಯಾಸ ಮಾಡುತ್ತಿದ್ದಾಳೆ.
|ಅಥರ್ಗಾ ಗ್ರಾಮದ ಪೋಷಕರು
–ಕಾಂಚನಾ. ಬಸವರಾಜ. ಪೂಜಾರಿ
ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿನಿ
ಪತ್ರಿಕೊಧ್ಯಮ ಮತ್ತು ಸಮೂಹ ಸಂವಹನ ವಿಭಾಗ
ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ತೊರವಿ, ವಿಜಯಪುರ
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
2027ರ ಜನಗಣತಿ ನಡೆಸಲು ಬಜೆಟ್ ಅಂಗೀಕಾರ
ಸುದ್ದಿದಿನ,ದೆಹಲಿ:2027ರ ಜನಗಣತಿಯನ್ನು ನಡೆಸಲು ಸಂಪುಟವು 11 ಸಾವಿರದ 718 ಕೋಟಿ ರೂಪಾಯಿಗಳ ಬಜೆಟ್ಅನ್ನು ಅಂಗೀಕರಿಸಿದೆ. ಈ ಕುರಿತು ಮಾಹಿತಿ ನೀಡಿದ ಸಚಿವರು, 2027ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು ಎಂದು ಹೇಳಿದರು.
ಇದು ಮೊದಲ ಡಿಜಿಟಲ್ ಜನಗಣತಿಯಾಗಲಿದೆ. 2027 ರ ಜನಗಣತಿಯು ಒಟ್ಟಾರೆ 16ನೇ ಮತ್ತು ಸ್ವಾತಂತ್ರ್ಯದ ನಂತರದ 8 ನೇ ಜನಗಣತಿಯಾಗಲಿದೆ. ಭಾರತದ ಜನಗಣತಿಯನ್ನು ವಿಶ್ವದ ಅತಿದೊಡ್ಡ ಆಡಳಿತಾತ್ಮಕ ಮತ್ತು ಸಂಖ್ಯಾಶಾಸ್ತ್ರೀಯ ಕ್ರಮವೆಂದು ಪರಿಗಣಿಸಲಾಗಿದೆ ಎಂದು ಅವರು ತಿಳಿಸಿದರು.
ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು 2026ರ ಹಂಗಾಮಿಗೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಗೆ ಅನುಮೋದನೆ ನೀಡಿದೆ. ಬೆಳೆಗಾರರಿಗೆ ಲಾಭದಾಯಕ ಬೆಲೆಗಳನ್ನು ಒದಗಿಸುವ ಸಲುವಾಗಿ, ಸರ್ಕಾರವು 2018-19 ರ ಕೇಂದ್ರ ಬಜೆಟ್ನಲ್ಲಿ ಎಲ್ಲಾ ಕಡ್ಡಾಯ ಬೆಳೆಗಳ ಎಂಎಸ್ಪಿ ಅನ್ನು ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಮಟ್ಟದಲ್ಲಿ ನಿಗದಿಪಡಿಸಲಾಗುವುದು ಎಂದು ಘೋಷಿಸಿತ್ತು. ಮಿಲ್ಲಿಂಗ್ ಕೊಬ್ಬರಿಗೆ ಎಂಎಸ್ಪಿಯನ್ನು ಕ್ವಿಂಟಲ್ಗೆ 445 ರೂಪಾಯಿಗಳಿಂದ 12 ಸಾವಿರದ 27 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಮತ್ತು ಅದೇ ಅವಧಿಗೆ ಉಂಡೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ 2026ರ ಹಂಗಾಮಿಗೆ ಕ್ವಿಂಟಲ್ಗೆ 400 ರೂಪಾಯಿಗಳಿಂದ 12 ಸಾವಿರದ 500 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
ಹೆಚ್ಚಿನ ಕನಿಷ್ಠ ಬೆಂಬಲ ಬೆಲೆಯು ತೆಂಗಿನ ಬೆಳೆಗಾರರಿಗೆ ಉತ್ತಮ ಲಾಭದಾಯಕ ಆದಾಯವನ್ನು ಖಚಿತಪಡಿಸುವುದಲ್ಲದೆ, ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ತೆಂಗಿನ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕೊಬ್ಬರಿ ಉತ್ಪಾದನೆಯನ್ನು ವಿಸ್ತರಿಸಲು ರೈತರನ್ನು ಪ್ರೋತ್ಸಾಹಿಸುತ್ತದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೋಲ್ಸೇತು ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ; ಸಂಪನ್ಮೂಲಗಳ ನ್ಯಾಯಯುತ ಬಳಕೆಗೆ ಒತ್ತು
ಸುದ್ದಿದಿನ,ದೆಹಲಿ:ಕೇಂದ್ರ ಸರ್ಕಾರವು ’ಕೋಲ್ಸೇತು’ ನೀತಿಯನ್ನು ಅನುಮೋದಿಸಿದೆ. ಇದು ವಿವಿಧ ಕೈಗಾರಿಕಾ ಬಳಕೆಗಳು ಮತ್ತು ರಫ್ತಿಗೆ ಕಲ್ಲಿದ್ದಲು ಸಂಪರ್ಕಗಳ ಹರಾಜಿಗೆ ಹೊಸ ವ್ಯವಸ್ಥೆ ಸೃಷ್ಟಿಸುತ್ತದೆ, ಹಾಗೂ ಸಂಪನ್ಮೂಲಗಳ ನ್ಯಾಯಯುತ ಪ್ರವೇಶ ಮತ್ತು ಅತ್ಯುತ್ತಮ ಬಳಕೆಯನ್ನು ಖಚಿತಪಡಿಸುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು ನಿನ್ನೆ ತಡೆರಹಿತ, ದಕ್ಷ ಮತ್ತು ಪಾರದರ್ಶಕ ಬಳಕೆಗಾಗಿ ಕಲ್ಲಿದ್ದಲು ಸಂಪರ್ಕದ ಹರಾಜು ನೀತಿಗೆ ಅನುಮೋದನೆ ನೀಡಿತು.
ನವದೆಹಲಿಯಲ್ಲಿ ನಿನ್ನೆ ಸಂಜೆ ಸಂಪುಟದ ನಿರ್ಧಾರಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, 2016ರ ಎನ್ಆರ್ಎಸ್ ನಿಯಂತ್ರಿತವಲ್ಲದ ವಲಯದ ಸಂಪರ್ಕ ಹರಾಜು ನೀತಿಯಲ್ಲಿ ’ಕೋಲ್ಸೇತು’ ಎಂಬ ಪ್ರತ್ಯೇಕ ವ್ಯವಸ್ಥೆಯನ್ನು ಸೇರಿಸುವ ಮೂಲಕ ಯಾವುದೇ ಕೈಗಾರಿಕಾ ಬಳಕೆ ಮತ್ತು ರಫ್ತಿಗೆ ದೀರ್ಘಾವಧಿಯವರೆಗೆ ಹರಾಜು ಆಧಾರದ ಮೇಲೆ ಕಲ್ಲಿದ್ದಲು ಸಂಪರ್ಕಗಳ ಹಂಚಿಕೆಗೆ ಈ ನೀತಿಯು ಅವಕಾಶ ನೀಡುತ್ತದೆ ಎಂದು ಹೇಳಿದರು.
ಕಲ್ಲಿದ್ದಲು ಅಗತ್ಯವಿರುವ ಯಾವುದೇ ದೇಶೀಯ ಖರೀದಿದಾರರು ಅಂತಿಮ ಬಳಕೆಯನ್ನು ಲೆಕ್ಕಿಸದೆ ಸಂಪರ್ಕ ಹರಾಜಿನಲ್ಲಿ ಭಾಗವಹಿಸಬಹುದು ಎಂದು ಅವರು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಹಿಳೆಯರ ಪುನರ್ ವಸತಿ ಯೋಜನೆ | ಅರ್ಜಿ ಆಹ್ವಾನ ; ಅವಧಿ ವಿಸ್ತರಣೆ
ಸುದ್ದಿದಿನ,ದಾವಣಗೆರೆ: ಪ್ರಸಕ್ತ ಸಾಲಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಉದ್ಯೋಗಿನಿ, ಚೇತನಾ, ಧನಶ್ರೀ, ಲಿಂಗತ್ವ ಅಲ್ಪ ಸಂಖ್ಯಾತರ ಪುನರ್ವಸತಿ ಯೋಜನೆ ಹಾಗೂ ಮಾಜಿ ದೇವದಾಸಿ ಮಹಿಳೆಯರ ಪುನರ್ ವಸತಿ ಯೋಜನೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸುವ ಅವಧಿಯನ್ನು 15 ಜನವರಿ 2026 ರವರೆಗೆ ವಿಸ್ತರಿಸಲಾಗಿದೆ ಎಂದು ಇಲಾಖೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoಯಮ ಸ್ವರೂಪಿ ಗ್ಯಾಸ್ ಗೀಸರ್ ಬಳಸೋ ಮುನ್ನ ಎಚ್ಚರ ; ಇವಿಷ್ಟನ್ನು ಪಾಲಿಸಿ ಅಪಾಯ ತಡೆಗಟ್ಟಿ
-
ದಿನದ ಸುದ್ದಿ5 days agoಬೆಂಬಲ ಬೆಲೆ | ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಪ್ರಾರಂಭ: ಡಿಸಿ ಗಂಗಾಧರಸ್ವಾಮಿ
-
ದಿನದ ಸುದ್ದಿ4 days agoಪತ್ರಿಕೋದ್ಯಮ ಪದವೀಧರರಿಗೆ ಸಿಹಿ ಸುದ್ದಿ | ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ತರಬೇತಿ ; ಅರ್ಜಿ ಆಹ್ವಾನ
-
ದಿನದ ಸುದ್ದಿ3 days agoಅಂಚೆ ಇಲಾಖೆಯಿಂದ ಸೆಲ್ಪ್ ಬುಕ್ಕಿಂಗ್ ಸೌಲಭ್ಯ
-
ದಿನದ ಸುದ್ದಿ2 days agoಮಹಿಳೆಯರ ಪುನರ್ ವಸತಿ ಯೋಜನೆ | ಅರ್ಜಿ ಆಹ್ವಾನ ; ಅವಧಿ ವಿಸ್ತರಣೆ
-
ದಿನದ ಸುದ್ದಿ2 days agoಕೋಲ್ಸೇತು ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ; ಸಂಪನ್ಮೂಲಗಳ ನ್ಯಾಯಯುತ ಬಳಕೆಗೆ ಒತ್ತು
-
ದಿನದ ಸುದ್ದಿ2 days ago2027ರ ಜನಗಣತಿ ನಡೆಸಲು ಬಜೆಟ್ ಅಂಗೀಕಾರ

