Connect with us

ದಿನದ ಸುದ್ದಿ

ಮೈ ಟಿಪ್ಪು ಸುಲ್ತಾನ್ ಭೋಲ್ ರಹಾ ಹೂಂ..!

Published

on

  • ವಿವೇಕಾನಂದ. ಹೆಚ್.ಕೆ.

ರೆ ಇಸ್ಕಿ, ರೀ ಸಾಮಿ,
ಇದು 2019,
ನಮ್ದುಕೆ ಸತ್ತಿದ್ದು 1799.

ಈಗ ನೀವು ನಂದು ಹೆಸರು ಹಿಡ್ಕೊಂಡು ಜಗಳ ಆಡ್ತಿದೀರೀ. ನಿಮ್ದುಕೆ ನಾಚ್ಕೆ ಆಗೋದಿಲ್ಲ. ಆವತ್ತು ನಾನು ನಮ್ನಪ್ಪ ಹೆಂಗೋ ನಮ್ಗೆ ಬೇಕಾದಂಗೆ ನಮ್ಗೆ ತಿಳ್ದಂಗೆ ಬದುಕುದ್ವೀ. ನಿಮ್ಮನ್ನ ಕೇಳಿ ಬದ್ಕೋಕೆ ಆಗುತ್ತೇ….

ನಾನು ಮುಸಲ್ಮಾನ್,
ಎಲ್ಲದೂ ಅಲ್ಲಾದು ಕೃಪೆ.ನಿಮ್ಗೆ ಇದ್ದಂಗೆ ನಂಗೂನು ಆಸೆ ಇರೋದಿಲ್ಲೇ. ನಂಗೂ ರಾಜ ಆಗ್ಬೇಕು ಅಂತ ಆಸೆ ಇತ್ತು. ಅದ್ಕೆ ನಾನು ನಮ್ಮಪ್ಪ ಪೈಟ್ ಮಾಡಿದ್ವಿ. ಅರೆ ಆವಾಗ ತಾಖತ್ ಇದ್ದವ್ರು ಎಲ್ರೂ ಹಂಗೆ ಮಾಡ್ತಿದ್ರು. ನಾವು ಮಾಡುದ್ವಿ.

ಅರೆ ಇಸ್ಕಿ, ಕ್ಯಾರೇ ಹೋ,
ಪ್ರಜಾಭುತ್ವಕೀ, ಡೆಮಾಕ್ರಸೀಕೀ, ಸಂಧಾನಾಕಿ ಸಂವಿಧಾನಾಕೀ ಅದೂ ಇರೋವಾಗ್ಲೇ ನಿಮ್ದು ಎಂಎಲ್ಏಗಳು ನಮಕ್ ಹರಾಮ್ ಕೆಲ್ಸ ಮಾಡ್ತಿಲ್ವೇ, ದುಡ್ಡು ಕೊಟ್ಟು ಹೆಂಡಾಕೆ ಕೊಟ್ಟು, ಸೀರೆ ಪಂಚೆ ಕೊಟ್ಟು ಓಟ್ ತಗಂಡ್ತಿಲ್ಲೇ, ಆ ಕಡೆ ಈ ಕಡೆ ಕೋತಿ ತರಾ ಜಂಪ್ ಮಾಡ್ತಿಲ್ಲೇ, ಜನಕ್ಕೆ ಮೋಸ ಮಾಡಿ ದುಡ್ಡು ನುಂಗ್ತಿಲ್ಲೇ, ಆಗ್ದೇ ಇರೋರ್ಗೆ ಹೊಡಿಸ್ತಿಲ್ಲೇ, ದುಡ್ಗೆ ತಗಂಡು ಸರ್ಕಾರ ಬೀಳಿಸ್ತಿಲ್ಲೇ…..

ನಂಗೆ ಮಾತ್ರ ನಮಕ್ ಹರಾಮ್ ಅಂತಿರೀ.
ಅಲ್ರೀ, ನಿಮ್ದುಕೆ ದೇವೇಗೌಡ, ಯಡಿಯೂರಪ್ಪ, ಸಿದ್ದರಾಮಯ್ಯ ಅವರ ಮಕ್ಕಳ್ಗೆ ರಾಜಕೀಯದಲ್ಲಿ ಮುಂದೆ ತಂದಿಲ್ಲೇ. ಕರ್ನಾಟಕದಲ್ಲಿ ಬೇರೆ ಯಾರೂ ಇಲ್ವಾ, ಎಲ್ಲಾ ಸತ್ತು ಹೋಗಿದಾರಾ…

ಅಪ್ಪ ಮಕ್ಕಳು ಅಳಿಯ ಸೊಸೆ ಮಾತ್ರ ರಾಜಕೀಯಕ್ಕೆ ಬರ್ಬೇಕು. ಇದೇನು ನಮ್ದು ಕಾಲ್ದಂಗೆ ತಾಖತ್ ಇರೋ ರಾಜರ್ದು ಆಡಳಿತಾ. ಮಾತ್ಗೆ ಹೇಳ್ದೆ ನೀವೇ ಯೋಚ್ನೆ ಮಾಡಿ.

ಅಲ್ರೀ ನಾನು ನಿಮ್ಮ ದೇವಸ್ಥಾನಕ್ಕೆ ಹೊಡ್ದೆ ನಿಜ, ಹಂಗೆ ಹೆಲ್ಪೂನು ಮಾಡಿದ್ದೀನಿ. ನೋಡ್ರಿ ನಮ್ದು ಇಸ್ಲಾಂ ಧರ್ಮ. ಅದಕ್ಕೆ ನಾನು ಸಪೋರ್ಟ್ ಮಾಡ್ದೆ. ಯಾಕೆ ಆ ಬಿಳಿ ಚರ್ಮದವರು ನಿಮ್ದು ಕಿತ್ತೂರು ಚೆನ್ನಮ್ಮ, ಲಕ್ಷೀಬಾಯಿ, ಆಜಾದ್, ಭಗತ್ ಸಿಂಗ್ ಎಲ್ರೂಗೂ ಸಾಯಿಸಿಲ್ವೇ, ಎಲ್ಲಿಂದಲೋ ಬಂದ ಆ ಕಳ್ನನ್ಮಮಕ್ಳು ನನ್ನೂ ಸಾಯಿಸಿದ್ರು, ನನ್ನ ಮಕ್ಕಳ್ಗೂ ಜೈಲಿಗೆ ಹಾಕಿದ್ರು.
ನೀವೂನು ನಮ್ದು ಮಸೀದಿಗೆ ಒಡ್ದಾಕ್ಜಿದ್ರಿ ಜ್ಞಾಪಕಕ್ಜೆ ಐತೆ, ಅಯೋದ್ಯಾದಾಗ. ಅಲ್ವಾ. ಹಂಗೆ ನಾನು ನನ್ಗೆ ಆಪೋಸ್ ಮಾಡ್ದೋರ್ಗೆ ಸಾಯುಸ್ದೆ. ಅದು ತಪ್ಪಾ….

ಇಂದ್ರಾಗಾಂಧಿ ಸತ್ತಾಗ ಸಿಖ್ಖರನ್ನ ಸಾಯಿಸಿಲ್ವ, ಗುಜರಾತಲ್ಲಿ ಸಾಬರನ್ನ ಸಾಯಿಸಿಲ್ವ, ಇಂಗ್ಲೀಷೋರು ಜಲಿಯನ್ ವಾಲಾಬಾಗ್ ನಲ್ಲಿ ಎಷ್ಟೊಂದು ಜನ್ರನ್ನ ಸಾಯಿಸಿಲ್ವಾ, ಹಂಗೇ ನೋಡ್ರಿ ಅವರವರ ಕಾಲದಲ್ಲಿ ಏನೇನೂ ಆಗಿರುತ್ತೆ. ಒಳ್ಳೇದು ಕೆಟ್ಟದ್ದು. ಅದೇ ಇತ್ಯಾಸ. ಅದನ್ನ ಹೆಂಗಿದೆಯೋ ಹಂಗೇ ಓದ್ಸಿ…

ನಾನು ತುಂಬಾ ಒಳ್ಳೆಯವನು ಅಂತಾ ಹೇಳ್ತಾ ಇಲ್ಲ. ನೀವೆಲ್ಲಾ ನಂಗೆ ನೆನಪ್ಸಕಳ್ಳಿ ಅಂತಾನೂ ಕೇಳ್ತಾ ಇಲ್ಲ. ಇವಾಗ ನನ್ದು ಹುಟ್ದಾಬ್ವಾನೋ ಸತ್ತಾಬ್ಬಾನೋ ಮಾಡಿದ್ರೆ ಏನ್ ಪ್ರಯೋಜನ. ಸಾಮಿ ನಾನು ನನ್ ಮಕ್ಳು ಮೊಮ್ಮಕ್ಳು ಎಲ್ಲಾ ಸತ್ತೋಗಿದೀವಿ.
ಈವಾಗ ನೀವು ಬದ್ಕಿರೋರು. ಏನೋ ಈವಾಗ ಇರೋರು ಭಾಳ ಬುದ್ದಿವಂತ್ರಂತೆ.
ಚೆನ್ನಾಗಿ ಬದ್ಕಿ.

ನೋಡಿ, ನೀವೇ ನಮ್ದುಕೆ ಹೆಸ್ರು ಹೇಳಿ ಕಿತ್ತಾಡ್ ಬ್ಯಾಡ್ರಿ. ಇಷ್ಟ ಇರೋರು ನೆನಪಿಸ್ಕಳ್ರಿ, ಇಲ್ದೇ ಇರೋರು ಬಿಟ್ಟಾಕಿ.
ಇತ್ಯಾಸ್ದಾಗ ಒಳ್ಳೇದು ಕೆಟ್ಟದ್ದು ಇನ್ನೂ ಏನೇನೋ ನೆಡ್ದೈತೆ. ಒಳ್ಳೇದು ಮಾತ್ರ ತಗಳ್ಳಿ. ನಿಮ್ಗೆ ಗೊತ್ತಿಲ್ದೆ ಮಣ್ಣಾಗಿ ಹೋಗಿರೋ ಎಷ್ಟೋ ಇಷ್ಯಾ ಐತೆ.
ಆ ಇಷ್ಯಾ ಯಾವೊತ್ತೋ ಆಚೆ ಬರೊಲ್ಲಾ..

ಅಂದಂಗೆ, ನಮ್ ರಾಜರ್ರು ಅದೇ ಒಡೆಯರ್ ಅವರಿಗೆ ಕೇಳ್ದೆ ಅಂತೇಳಿ. ಏನೋ ಆವಾಗ ನೆಡಿದಿದ್ದು ನಡೆದೋಯ್ತು. ಕ್ಷಮ್ಸಿಬಿಡಿ. ಹಳೇ ಕಾಲಕ್ಕಿಂತ ಹೊಸ ಕಾಲ ಚೆನ್ನಾಗಿರ್ಬೇಕು. ನಮ್ ಕಾಲ್ದಾಗ ಲೈಪ್ ಎಂಜಾಯ್ ಮಾಡಾಕೆ ಆಗ್ತಾ ಇರ್ಲಿಲ್ಲ. ಬರೀ ಯುದ್ಧ ಯುದ್ಧ ಯುದ್ಧ. ಆದ್ರೆ ಈಗ ನಿಮ್ಗೆ ಎಲ್ಲಾ ಸೌಕರ್ಯ ಐತೆ. ಖುಷಿ ಖುಷಿಯಾಗಿರ್ರಿ.

ನಂಗೇ ಸತ್ ಮ್ಯಾಲೆ ಗೊತ್ತಾಯ್ತು. ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಎಲ್ಲಾ ಸುಳ್ಳು. ಬದ್ಕಿರೋವಾಗ ನಾವೇ ಗಾಂಚಾಲಿ ಮಾಡ್ಕೊಂದು ಇದೆಲ್ಲಾ ಸ್ಪಷ್ಟಿ ಮಾಡ್ಕೊಂಡ್ವಿ. ಸತ್ ಮ್ಯಾಲೆ ಎಲ್ಲಾ ಒಂದೇ. ಮಣ್ಣಾಗೋದು.

ಇರ್ಲಿ, ನಿಮ್ಗೆ ಕೈ ಮುಗ್ದು ಕೇಳ್ಜೋತೀನಿ. ನನ್ ಹೆಸ್ರು ಹೇಳ್ಕೊಂಡು ರಾಜಕೀಯ ಮಾಡಬ್ಯಾಡ್ರಿ. ಉತ್ತರ ಕರ್ನಾಟಕದಾಗ ನೆರೆ ಹಾವಳಿ ಬಂದು ಜನ ತುಂಬಾ ಕಷ್ಟ ಪಡ್ತಿದಾರಂತೆ. ದಯಮಾಡಿ. ಅವರ ಕಡೆ ಗಮನ ಕೊಡಿ. ಸತ್ ಇರೋ ನನ್ನನ್ನ ಹಿಡ್ಕೊಂಡು ಯಾಕ್ ನೇತಾಡ್ತೀರೀ..

ಎಲ್ರಿಗೂ ಒಳ್ಳೇದಾಗ್ಲಿ, ನಾನು ಹೋಗ್ ಬತ್ತೀನಿ…

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ಹೆಚ್. ಕೇಶವ ವಿರುದ್ಧ ಲೋಕಾಗೆ ದೂರು

Published

on

ಸುದ್ದಿದಿನ,ಶಿವಮೊಗ್ಗ:ಎಸ್.ಜೆ.ಎಂ ವಿದ್ಯಾಪೀಠ (ರಿ), ಚಿತ್ರದುರ್ಗ ಇಲ್ಲಿ ಬ್ಯಾಕ್‌ಲಾಗ್ ಅಡಿಯಲ್ಲಿ ನೇಮಕ ಮಾಡಿಕೊಳ್ಳಲಾದ ಹುದ್ದೆಗಳನ್ನು ಇಲಾಖಾ ತನಿಖೆ ನಡೆಸುವಂತೆ ಕೋರಿ ಅರ್ಜಿ ಸಲ್ಲಿಸಿ 2 ತಿಂಗಳು ಕಳೆದರೂ ಯಾವುದೇ ತನಿಖಾ ವರದಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ನಿರ್ಲಕ್ಷ್ಯ ತೋರಿದ ಕಾಲೇಜು ಶಿಕ್ಷಣ ಇಲಾಖೆ, ಶಿವಮೊಗ್ಗ ಇಲ್ಲಿಯ ಜಂಟಿ ನಿರ್ದೇಶಕರಾದ ಶ್ರೀ ಕೇಶವ ಹೆಚ್. ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಎಸ್.ಜೆ.ಎಂ ವಿದ್ಯಾಪೀಠ (ರಿ), ಚಿತ್ರದುರ್ಗ ಇಲ್ಲಿ 2022ನೇ ಸಾಲಿನಲ್ಲಿ ಬ್ಯಾಕ್‌ಲಾಗ್ ಅಡಿಯಲ್ಲಿ ಅರ್ಥಶಾಸ್ತç (ಎಸ್.ಟಿ), ರಾಜ್ಯಶಾಸ್ತç (ಎಸ್.ಸಿ), ಗ್ರಂಥಪಾಲಕರು (ಎಸ್.ಟಿ) ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಇಲ್ಲಿ ಅಂತಿಮವಾಗಿ ಆಯ್ಕೆ ಮಾಡಿಕೊಳ್ಳಲಾದ ನೇಮಕಾತಿ ಪ್ರಕ್ರಿಯೆಯು ಪಾರದರ್ಶಕವಾಗಿ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿ ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ, ಶಿವಮೊಗ್ಗ ಇವರಿಗೆ ದಿನಾಂಕ: 24-11-2025 ರಂದು ಅರ್ಜಿ ಸಲ್ಲಿಸಿ, ಬ್ಯಾಕ್ ಲಾಗ್ ನೇಮಕಾತಿಯ ಬಗ್ಗೆ ತನಿಖೆ ನಡೆಸಿ, ತನಿಖಾ ವರದಿಯನ್ನು ನೀಡುವಂತೆ ಕೋರಲಾಗಿತ್ತು.

ಅರ್ಜಿ ಸಲ್ಲಿಸಿ ಒಂದು ತಿಂಗಳಾದರೂ ಯಾವುದೇ ಮಾಹಿತಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ಇರುವ ಕಾರಣ ಜ್ಞಾಪನ ನೀಡಿ 7 ದಿನಗಳ ಒಳಗಾಗಿ ತನಿಖಾ ವರದಿಯನ್ನು ನೀಡುವಂತೆ ವಿನಂತಿಸಲಾಗಿತ್ತು. ಆದರೆ ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ, ಶಿವಮೊಗ್ಗ ಇವರು ಅರ್ಜಿ ಸಲ್ಲಿಸಿ 2 ತಿಂಗಳಾದರೂ ಕನಿಷ್ಠ ಹಿಂಬರಹವನ್ನಾದರೂ ನೀಡದೆ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಕರ್ತವ್ಯ ಲೋಪ ಎಸಗಿದ ಕಾರಣ ಕರ್ತವ್ಯ ಲೋಪದ ಅಡಿಯಲ್ಲಿ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದೇವದಾಸಿ ಪುನರ್‍ವಸತಿ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ದೇವದಾಸಿ ಪುನರ್‍ವಸತಿ ಯೋಜನೆಯಡಿ ತಾತ್ಕಾಲಿಕವಾಗಿ ಖಾಲಿ ಇರುವ ಹುದ್ದೆಗೆ ನೇರ ತಾತ್ಕಾಲಿಕ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಇಲಾಖೆ, 14ನೇ ಮುಖ್ಯ ರಸ್ತೆ, ಕುವೆಂಪು ನಗರ, ಎಮ್.ಸಿ.ಸಿ ‘ಬಿ’ ಬ್ಲಾಕ್, ದಾವಣಗೆರೆ ಇಲ್ಲಿ ಅರ್ಜಿಗಳನ್ನು ಪಡೆದು ಫೆಬ್ರವರಿ 12 ರೊಳಗಾಗಿ ಕಚೇರಿ ಸಲ್ಲಿಸಬೇಕು.

ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ಯೋಜನಾಧಿಕಾರಿಗಳ ಹುದ್ದೆ ಸಂಖ್ಯೆ-1, ನಿವೃತ್ತ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ಎಂಎಸ್‍ಡಬ್ಲ್ಯೂ, ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಮನಃಶಾಸ್ತ್ರದಲ್ಲಿ ಎಂ.ಎಸ್ಸಿ, ಜೊತೆಗೆ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.

ಚನ್ನಗಿರಿ ತಾಲ್ಲೂಕು ಯೋಜನಾ ಅನುಷ್ಟಾನಾಧಿಕಾರಿಗಳು ಹುದ್ದೆ ಸಂಖ್ಯೆ-1, ಬಿಎಸ್‍ಡಬ್ಲ್ಯೂ, ಬಿಎ ಇನ್ ಸೋಶಿಯಲಾಜಿ, ಎಂಎಸ್‍ಸಿ ಇನ್ ಸೈಕೋಲಾಜಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು. ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.

ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ದಾಖಲಾಧಿಕಾರಿಗಳ ಹುದ್ದೆ ಸಂಖ್ಯೆ-1, ಬಿಕಾಂ ಪದವಿ ಅಥವಾ ತತ್ಸಮಾನ ಪದವಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ಜ್ಞಾನವನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08192-222117 ಸಂಪರ್ಕಿಸಬಹುದೆಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಭರತ ಹುಣ್ಣಿಮೆ ಪ್ರಯುಕ್ತ 25 ಹೆಚ್ಚುವರಿ ವಿಶೇಷ ವಾಹನ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ದಾವಣಗೆರೆ : ಜನವರಿ 31 ರಿಂದ ಫೆಬ್ರವರಿ 2 ರವರೆಗೆ ಹರಪನಹಳ್ಳಿ ತಾಲ್ಲೂಕು ಉಚ್ಚಂಗಿದುರ್ಗದಲ್ಲಿ ಜರುಗಲಿರುವ  ಭಾರತ ಹುಣ್ಣಿಮೆಗಾಗಿ ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ವಿಭಾಗದ ಘಟಕಗಳಿಂದ ರಾಜ್ಯದಾದ್ಯಂತ ಬರುವ ಭಕ್ತಾಧಿಗಳ ಅನುಕೂಲಕ್ಕಾಗಿ 25 ಹೆಚ್ಚುವರಿ ವಿಶೇಷ ವಾಹನ ಕಾರ್ಯಾಚರಣೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

Continue Reading

Trending