ದಿನದ ಸುದ್ದಿ
ಮೈ ಟಿಪ್ಪು ಸುಲ್ತಾನ್ ಭೋಲ್ ರಹಾ ಹೂಂ..!
- ವಿವೇಕಾನಂದ. ಹೆಚ್.ಕೆ.
ಅರೆ ಇಸ್ಕಿ, ರೀ ಸಾಮಿ,
ಇದು 2019,
ನಮ್ದುಕೆ ಸತ್ತಿದ್ದು 1799.
ಈಗ ನೀವು ನಂದು ಹೆಸರು ಹಿಡ್ಕೊಂಡು ಜಗಳ ಆಡ್ತಿದೀರೀ. ನಿಮ್ದುಕೆ ನಾಚ್ಕೆ ಆಗೋದಿಲ್ಲ. ಆವತ್ತು ನಾನು ನಮ್ನಪ್ಪ ಹೆಂಗೋ ನಮ್ಗೆ ಬೇಕಾದಂಗೆ ನಮ್ಗೆ ತಿಳ್ದಂಗೆ ಬದುಕುದ್ವೀ. ನಿಮ್ಮನ್ನ ಕೇಳಿ ಬದ್ಕೋಕೆ ಆಗುತ್ತೇ….
ನಾನು ಮುಸಲ್ಮಾನ್,
ಎಲ್ಲದೂ ಅಲ್ಲಾದು ಕೃಪೆ.ನಿಮ್ಗೆ ಇದ್ದಂಗೆ ನಂಗೂನು ಆಸೆ ಇರೋದಿಲ್ಲೇ. ನಂಗೂ ರಾಜ ಆಗ್ಬೇಕು ಅಂತ ಆಸೆ ಇತ್ತು. ಅದ್ಕೆ ನಾನು ನಮ್ಮಪ್ಪ ಪೈಟ್ ಮಾಡಿದ್ವಿ. ಅರೆ ಆವಾಗ ತಾಖತ್ ಇದ್ದವ್ರು ಎಲ್ರೂ ಹಂಗೆ ಮಾಡ್ತಿದ್ರು. ನಾವು ಮಾಡುದ್ವಿ.
ಅರೆ ಇಸ್ಕಿ, ಕ್ಯಾರೇ ಹೋ,
ಪ್ರಜಾಭುತ್ವಕೀ, ಡೆಮಾಕ್ರಸೀಕೀ, ಸಂಧಾನಾಕಿ ಸಂವಿಧಾನಾಕೀ ಅದೂ ಇರೋವಾಗ್ಲೇ ನಿಮ್ದು ಎಂಎಲ್ಏಗಳು ನಮಕ್ ಹರಾಮ್ ಕೆಲ್ಸ ಮಾಡ್ತಿಲ್ವೇ, ದುಡ್ಡು ಕೊಟ್ಟು ಹೆಂಡಾಕೆ ಕೊಟ್ಟು, ಸೀರೆ ಪಂಚೆ ಕೊಟ್ಟು ಓಟ್ ತಗಂಡ್ತಿಲ್ಲೇ, ಆ ಕಡೆ ಈ ಕಡೆ ಕೋತಿ ತರಾ ಜಂಪ್ ಮಾಡ್ತಿಲ್ಲೇ, ಜನಕ್ಕೆ ಮೋಸ ಮಾಡಿ ದುಡ್ಡು ನುಂಗ್ತಿಲ್ಲೇ, ಆಗ್ದೇ ಇರೋರ್ಗೆ ಹೊಡಿಸ್ತಿಲ್ಲೇ, ದುಡ್ಗೆ ತಗಂಡು ಸರ್ಕಾರ ಬೀಳಿಸ್ತಿಲ್ಲೇ…..
ನಂಗೆ ಮಾತ್ರ ನಮಕ್ ಹರಾಮ್ ಅಂತಿರೀ.
ಅಲ್ರೀ, ನಿಮ್ದುಕೆ ದೇವೇಗೌಡ, ಯಡಿಯೂರಪ್ಪ, ಸಿದ್ದರಾಮಯ್ಯ ಅವರ ಮಕ್ಕಳ್ಗೆ ರಾಜಕೀಯದಲ್ಲಿ ಮುಂದೆ ತಂದಿಲ್ಲೇ. ಕರ್ನಾಟಕದಲ್ಲಿ ಬೇರೆ ಯಾರೂ ಇಲ್ವಾ, ಎಲ್ಲಾ ಸತ್ತು ಹೋಗಿದಾರಾ…
ಅಪ್ಪ ಮಕ್ಕಳು ಅಳಿಯ ಸೊಸೆ ಮಾತ್ರ ರಾಜಕೀಯಕ್ಕೆ ಬರ್ಬೇಕು. ಇದೇನು ನಮ್ದು ಕಾಲ್ದಂಗೆ ತಾಖತ್ ಇರೋ ರಾಜರ್ದು ಆಡಳಿತಾ. ಮಾತ್ಗೆ ಹೇಳ್ದೆ ನೀವೇ ಯೋಚ್ನೆ ಮಾಡಿ.
ಅಲ್ರೀ ನಾನು ನಿಮ್ಮ ದೇವಸ್ಥಾನಕ್ಕೆ ಹೊಡ್ದೆ ನಿಜ, ಹಂಗೆ ಹೆಲ್ಪೂನು ಮಾಡಿದ್ದೀನಿ. ನೋಡ್ರಿ ನಮ್ದು ಇಸ್ಲಾಂ ಧರ್ಮ. ಅದಕ್ಕೆ ನಾನು ಸಪೋರ್ಟ್ ಮಾಡ್ದೆ. ಯಾಕೆ ಆ ಬಿಳಿ ಚರ್ಮದವರು ನಿಮ್ದು ಕಿತ್ತೂರು ಚೆನ್ನಮ್ಮ, ಲಕ್ಷೀಬಾಯಿ, ಆಜಾದ್, ಭಗತ್ ಸಿಂಗ್ ಎಲ್ರೂಗೂ ಸಾಯಿಸಿಲ್ವೇ, ಎಲ್ಲಿಂದಲೋ ಬಂದ ಆ ಕಳ್ನನ್ಮಮಕ್ಳು ನನ್ನೂ ಸಾಯಿಸಿದ್ರು, ನನ್ನ ಮಕ್ಕಳ್ಗೂ ಜೈಲಿಗೆ ಹಾಕಿದ್ರು.
ನೀವೂನು ನಮ್ದು ಮಸೀದಿಗೆ ಒಡ್ದಾಕ್ಜಿದ್ರಿ ಜ್ಞಾಪಕಕ್ಜೆ ಐತೆ, ಅಯೋದ್ಯಾದಾಗ. ಅಲ್ವಾ. ಹಂಗೆ ನಾನು ನನ್ಗೆ ಆಪೋಸ್ ಮಾಡ್ದೋರ್ಗೆ ಸಾಯುಸ್ದೆ. ಅದು ತಪ್ಪಾ….
ಇಂದ್ರಾಗಾಂಧಿ ಸತ್ತಾಗ ಸಿಖ್ಖರನ್ನ ಸಾಯಿಸಿಲ್ವ, ಗುಜರಾತಲ್ಲಿ ಸಾಬರನ್ನ ಸಾಯಿಸಿಲ್ವ, ಇಂಗ್ಲೀಷೋರು ಜಲಿಯನ್ ವಾಲಾಬಾಗ್ ನಲ್ಲಿ ಎಷ್ಟೊಂದು ಜನ್ರನ್ನ ಸಾಯಿಸಿಲ್ವಾ, ಹಂಗೇ ನೋಡ್ರಿ ಅವರವರ ಕಾಲದಲ್ಲಿ ಏನೇನೂ ಆಗಿರುತ್ತೆ. ಒಳ್ಳೇದು ಕೆಟ್ಟದ್ದು. ಅದೇ ಇತ್ಯಾಸ. ಅದನ್ನ ಹೆಂಗಿದೆಯೋ ಹಂಗೇ ಓದ್ಸಿ…
ನಾನು ತುಂಬಾ ಒಳ್ಳೆಯವನು ಅಂತಾ ಹೇಳ್ತಾ ಇಲ್ಲ. ನೀವೆಲ್ಲಾ ನಂಗೆ ನೆನಪ್ಸಕಳ್ಳಿ ಅಂತಾನೂ ಕೇಳ್ತಾ ಇಲ್ಲ. ಇವಾಗ ನನ್ದು ಹುಟ್ದಾಬ್ವಾನೋ ಸತ್ತಾಬ್ಬಾನೋ ಮಾಡಿದ್ರೆ ಏನ್ ಪ್ರಯೋಜನ. ಸಾಮಿ ನಾನು ನನ್ ಮಕ್ಳು ಮೊಮ್ಮಕ್ಳು ಎಲ್ಲಾ ಸತ್ತೋಗಿದೀವಿ.
ಈವಾಗ ನೀವು ಬದ್ಕಿರೋರು. ಏನೋ ಈವಾಗ ಇರೋರು ಭಾಳ ಬುದ್ದಿವಂತ್ರಂತೆ.
ಚೆನ್ನಾಗಿ ಬದ್ಕಿ.
ನೋಡಿ, ನೀವೇ ನಮ್ದುಕೆ ಹೆಸ್ರು ಹೇಳಿ ಕಿತ್ತಾಡ್ ಬ್ಯಾಡ್ರಿ. ಇಷ್ಟ ಇರೋರು ನೆನಪಿಸ್ಕಳ್ರಿ, ಇಲ್ದೇ ಇರೋರು ಬಿಟ್ಟಾಕಿ.
ಇತ್ಯಾಸ್ದಾಗ ಒಳ್ಳೇದು ಕೆಟ್ಟದ್ದು ಇನ್ನೂ ಏನೇನೋ ನೆಡ್ದೈತೆ. ಒಳ್ಳೇದು ಮಾತ್ರ ತಗಳ್ಳಿ. ನಿಮ್ಗೆ ಗೊತ್ತಿಲ್ದೆ ಮಣ್ಣಾಗಿ ಹೋಗಿರೋ ಎಷ್ಟೋ ಇಷ್ಯಾ ಐತೆ.
ಆ ಇಷ್ಯಾ ಯಾವೊತ್ತೋ ಆಚೆ ಬರೊಲ್ಲಾ..
ಅಂದಂಗೆ, ನಮ್ ರಾಜರ್ರು ಅದೇ ಒಡೆಯರ್ ಅವರಿಗೆ ಕೇಳ್ದೆ ಅಂತೇಳಿ. ಏನೋ ಆವಾಗ ನೆಡಿದಿದ್ದು ನಡೆದೋಯ್ತು. ಕ್ಷಮ್ಸಿಬಿಡಿ. ಹಳೇ ಕಾಲಕ್ಕಿಂತ ಹೊಸ ಕಾಲ ಚೆನ್ನಾಗಿರ್ಬೇಕು. ನಮ್ ಕಾಲ್ದಾಗ ಲೈಪ್ ಎಂಜಾಯ್ ಮಾಡಾಕೆ ಆಗ್ತಾ ಇರ್ಲಿಲ್ಲ. ಬರೀ ಯುದ್ಧ ಯುದ್ಧ ಯುದ್ಧ. ಆದ್ರೆ ಈಗ ನಿಮ್ಗೆ ಎಲ್ಲಾ ಸೌಕರ್ಯ ಐತೆ. ಖುಷಿ ಖುಷಿಯಾಗಿರ್ರಿ.
ನಂಗೇ ಸತ್ ಮ್ಯಾಲೆ ಗೊತ್ತಾಯ್ತು. ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಎಲ್ಲಾ ಸುಳ್ಳು. ಬದ್ಕಿರೋವಾಗ ನಾವೇ ಗಾಂಚಾಲಿ ಮಾಡ್ಕೊಂದು ಇದೆಲ್ಲಾ ಸ್ಪಷ್ಟಿ ಮಾಡ್ಕೊಂಡ್ವಿ. ಸತ್ ಮ್ಯಾಲೆ ಎಲ್ಲಾ ಒಂದೇ. ಮಣ್ಣಾಗೋದು.
ಇರ್ಲಿ, ನಿಮ್ಗೆ ಕೈ ಮುಗ್ದು ಕೇಳ್ಜೋತೀನಿ. ನನ್ ಹೆಸ್ರು ಹೇಳ್ಕೊಂಡು ರಾಜಕೀಯ ಮಾಡಬ್ಯಾಡ್ರಿ. ಉತ್ತರ ಕರ್ನಾಟಕದಾಗ ನೆರೆ ಹಾವಳಿ ಬಂದು ಜನ ತುಂಬಾ ಕಷ್ಟ ಪಡ್ತಿದಾರಂತೆ. ದಯಮಾಡಿ. ಅವರ ಕಡೆ ಗಮನ ಕೊಡಿ. ಸತ್ ಇರೋ ನನ್ನನ್ನ ಹಿಡ್ಕೊಂಡು ಯಾಕ್ ನೇತಾಡ್ತೀರೀ..
ಎಲ್ರಿಗೂ ಒಳ್ಳೇದಾಗ್ಲಿ, ನಾನು ಹೋಗ್ ಬತ್ತೀನಿ…
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ
ಸುದ್ದಿದಿನ,ದಾವಣಗೆರೆ: ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾವನೆ ಎನ್ಎಚ್ ಎಂ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಮಧ್ಯಸ್ತಿಕೆ ವಹಿಸಿ ಸರಿಪಡಿಸಲು ಶಿಪಾರಸ್ಸು ಮಾಡಬೇಕು. ಈ ಬಗ್ಗೆ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಪ್ರಸ್ತಾಪ ಮಾಡಬೇಕೆಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸುಮಾರು 30 ಸಾವಿರ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಸಿಬ್ಬಂದಿಗಳಿಗೆ ನೇಮಕಾತಿ ಮತ್ತು ವರ್ಗಾವಣೆ ಒಳಗೊಂಡು ಮಾನವ ಸಂಪನ್ಮೂಲ (HR Policy) ನೀತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕಳೆದ ಅ.28ರಂದು ಆದೇಶ ಹೊರಡಿಸಿ, ಅಭಿಯಾನ ನಿರ್ದೇಶಕರು, ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಮುಖ್ಯ ಆರ್ಥಿಕ ಅಧಿಕಾರಿಗಳಿಗೆ ವರದಿ ನೀಡಲು ಸೂಚನೆ ನೀಡಿದ್ದಾರೆ.
ಈ ವಿಷಯದ ಬಗ್ಗೆ ಈಗಾಗಲೇ ಅಭಿಯಾನ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಗುತ್ತಿಗೆ ನೌಕರರ ವೃಂದವಾರು ಸಂಘಟನೆಗಳ ಅಭಿಪ್ರಾಯ ನೀಡಲಾಗಿದೆ. ಎಲ್ಲಾ ಸಂಘಟನೆಗಳು ಈ ಒಂದು ಹೊಸ ಸಿಬ್ಬಂದಿಗಳಿಗೆ ಮಾರಕ ಇರುವಂತಹ ಮಾನವ ಸಂಪನ್ಮೂಲ ನೀತಿಯನ್ನು ಜಾರಿಗೊಳಿಸಲು ವಿರೋಧ ವ್ಯಕ್ತಪಡಿಸಿವೆ.
ಸರ್ಕಾರ ಈಗ ನೀಡುತ್ತಿರುವ ಕಡಿಮೆ ವೇತನದಲ್ಲಿ ಈ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಿಬ್ಬಂದಿಗಳಿಗೆ ಖಾಯಂ ಸಿಬ್ಬಂದಿಗಳಂತೆ ಕಡ್ಡಾಯ ವರ್ಗಾವಣೆ ಮಾಡಿದರೆ ಈ ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ? ಮೂರು ಮೂರು ತಿಂಗಳಿಗೊಮ್ಮೆ ವೇತನ ಆಗುತ್ತಿದ್ದು ಬೇರೆ ಜಿಲ್ಲೆಗೆ ಕಡ್ಡಾಯ ವರ್ಗಾವಣೆ ಮಾಡಿದ್ದರೆ ಮನೆ ಬಾಡಿಗೆ ಕಟ್ಟಲಾಗದೇ ಬೀದಿಗೆ ಬರಬೇಕಿದೆ ಎಂದು ಶಾಸಕರಿಗೆ ಮನವರಿಕೆ ಮಾಡಿದರು.
ಒಂದು ವೇಳೆ ಇಂತಹ ಕ್ರಮ ಕೈಗೊಂಡರೆ ಖಾಯಂ ಸಿಬ್ಬಂದಿಗಳಿಗೆ ನೀಡಿದಂತೆ ಎಲ್ಲಾ ಸೌಕರ್ಯ ಹಾಗೂ ಖಾಯಂ ಸೇರಿದಂತೆ ವೇತನ ಹೆಚ್ಚಳ ಮಾಡಿ, ಟಿಎ, ಡಿಎ, ಎಚ್ ಆರ್ ಎ ನೀಡಿ ಇಂತಹ ಆದೇಶ ಮಾಡಬೇಕು. ಸಿಬ್ಬಂದಿಗಳಿಗೆ ಬೆನ್ನು ತಟ್ಟಿ ಕೆಲಸ ಮಾಡಿಸಿಕೊಳ್ಳಬೇಕು.ಅದು ಬಿಟ್ಟು ಹೊಟ್ಟೆ ಮೇಲೆ ಹೊಡೆಯುವಂತಹ ಯಾವುದೇ ಆದೇಶ ಹೊರಡಿಸುವುದು ಎಷ್ಟು ಸರಿ ಎಂದು ಸಿಬ್ಬಂದಿಗಳು ಪ್ರಶ್ನೆ ಮಾಡಿದ್ದಾರೆ.
ಪ್ರಧಾನ ಕಾರ್ಯದರ್ಶಿಗಳ ಈ ಒಂದು ಪತ್ರ 30 ಸಾವಿರ ನೌಕರರಿಗೆ ಆತಂಕ ಸೃಷ್ಟಿ ಮಾಡಿದೆ. ಇದು ಈ ವರ್ಷದಲ್ಲಿ ಮೊದಲ ಸಾರಿ ಅಲ್ಲದೆ ಇದೇ ವರ್ಷ ಸಾಕಷ್ಟು ಮಾನಸಿಕ ಒತ್ತಡ ಹೆಚ್ಚಳವಾಗಿರುವ ಅನೇಕ ಆದೇಶ ಮಾಡಿದ್ದಾರೆ.
ಪ್ರತಿ ವರ್ಷ ಏಪ್ರಿಲ್ ಒಂದನೇ ತಾರೀಖು ಎಲ್ಲಾ ನೌಕರರಿಗೆ ಒಂದು ದಿವಸ ವಿರಾಮ ನೀಡಿ ಮುಂದುವರೆಸುತ್ತಿದ್ದು 2005 ರಿಂದ ಸುಮಾರು 20 ವರ್ಷಗಳವರೆಗೆ ಈ ಪದ್ಧತಿ ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಏಕಾಏಕಿ ಕೇವಲ 15 ದಿವಸ ವಿಸ್ತರಣೆ ನೀಡಿ, ತದನಂತರ ಒಂದು ತಿಂಗಳು ವಿಸ್ತರಣೆ ನೀಡಿ ಆಮೇಲೆ ಮೂರು ತಿಂಗಳ ವಿಸ್ತರಣೆ ನೀಡಿ ತದನಂತರ ಸಿಬ್ಬಂದಿಗಳಿಗೆ ಕರ್ತವ್ಯದಿಂದ ವಿಮುಕ್ತಿಗೊಳಿಸುವ ಆದೇಶ ನೀಡಿದ್ದು ನಮ್ಮ ಸಂಘಟನೆಯಿಂದ ಕೋರ್ಟ್ ನಲ್ಲಿ ದಾವೆ ಹೂಡಿದ್ದು ಇದೆ, ಕಳೆದ 8 ತಿಂಗಳಲ್ಲಿ ವೇತನ ಪಡೆಯಲು ಸರಿಯಾಗಿ ಅನುದಾನ ಬಿಡುಗಡೆ ಆಗದೇ ಸಿಬ್ಬಂದಿಗಳು ಪರದಾಡುವಂತಾಗಿದೆ. ಈ ಬಗ್ಗೆ ಸದನದಲ್ಲಿ ಗಮನ ಸೆಳೆದು ನಮಗೆ ನ್ಯಾಯ ಕೊಡಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಾ.ಮಂಜುನಾಥ್, ಸುನೀಲ್, ಸುರೇಶ್, ಮಹಾಲಿಂಗಪ್ಪ, ಬಸವರಾಜ್, ದೊಡ್ಡಮನಿ, ಡಾ.ರೇಣುಕಾ, ಇನ್ನಿತರರಿದ್ದರು.”
- ಪ್ರಧಾನ ಕಾರ್ಯದರ್ಶಿಗಳ ಆದೇಶ ರದ್ದುಗೊಳಿಸಲು ಎನ್ ಎಚ್ ಎಂ ಸಿಬ್ಬಂದಿಗಳು ಆಗ್ರಹ
- ಈ ಬಗ್ಗೆ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಲು ಶಾಸಕ ಕೆ.ಎಸ್.ಬಸವಂತಪ್ಪಗೆ ಸಿಬ್ಬಂದಿಗಳ ಮನವಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ
ಸುದ್ದಿದಿನ,ದಾವಣಗೆರೆ:ನಗರದ ಜಯದೇವ ವೃತ್ತದಲ್ಲಿರುವ ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿಯಿಂದ ಗುರುವಾರ (ಡಿಸೆಂಬರ್.4) ಕನ್ನಡ ಚಳವಳಿಯ ಕಚೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಟಿ ಶಿವಕುಮಾರ್ ಅವರು ಇಮ್ಮಡಿ ಪುಲ್ಲಕೇಶಿ ಸಾಮ್ರಾಟ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ನಂತರ ಜಿಲ್ಲಾಧ್ಯಕ್ಷರಾದ ಶಿವರತನ್ ಮಾತನಾಡಿ ,ನಾಡಿನ ಇತಿಹಾಸ ಪುಟಗಳಲ್ಲಿ ಕಣ್ಮರೆಯಾಗಿರುವ ಕನ್ನಡದ ಶ್ರೇಷ್ಠ ಸಾಮ್ರಾಟರಲ್ಲಿ ಇಮ್ಮಡಿ ಪುಲಿಕೇಶಿ ಅಗ್ರ ಸ್ಥಾನ ಪಡೆದಿದ್ದಾರೆ. ಇಂತಹ ಮಹಾನ್ ಸಾಮ್ರಾಟರನ್ನ ನೆನಪಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿಯನ್ನು ನಾವೆಲ್ಲರೂ ಹೊರಬೇಕಾಗಿದೆ ಎಂದರು.
ಭಾರತೀಯ ನೌಕಾಪಡೆಯ ಪಿತಾಮಹ ಎಂದೇ ಕರೆಯಲಾಗುವ ಇಮ್ಮಡಿ ಪುಲಿಕೇಶಿ ಸಾಮ್ರಾಟರ ಜನ್ಮದಿನದ ಪ್ರಯುಕ್ತ ಭಾರತೀಯ ನೌಕಾಪಡೆ ದಿನಾಚರಣೆಯೆoದು ಆಚರಿಸುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ.
ಬೇರೆಲ್ಲ ಜಯಂತಿಗಳನ್ನು ಆಚರಿಸುವ ಸರ್ಕಾರಗಳು ಇಮ್ಮಡಿ ಪುಲಿಕೇಶಿ ಜಯಂತಿಯನ್ನು ಕಡ್ಡಾಯವಾಗಿ ಎಲ್ಲೆಡೆ ಆಚರಿಸಲು ಆಡಳಿತಾತ್ಮಕವಾಗಿ ಜಾರಿಗೊಳಿಸಲು ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
ಮಹಿಳಾ ಅಧ್ಯಕ್ಷೆ ಶುಭಮಂಗಳ ಅವರು ಸಿಹಿ ವಿತರಿಸಿದರು. ಕನ್ನಡ ಚಳವಳಿಯ ಹಿರಿಯ ಹೋರಾಟಗಾರರು , ಕನ್ನಡ ಚಳವಳಿಯ ಮಾಜಿ ಅಧ್ಯಕ್ಷರಾದ ಬಂಕಾಪುರ ಚನ್ನಬಸಪ್ಪ, ದಾ.ಹ. ಶಿವಕುಮಾರ್. ಈಶ್ವರ್. ಪ್ರಕಾಶ್. ವಾರ್ತಾ ಇಲಾಖೆ ನಿವೃತ್ತ ಬಿ.ಎಸ್. ಬಸವರಾಜ್ ಹಾಗೂ ಹಲವಾರು ಕನ್ನಡಪರ ಹೋರಾಟಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಕ್ರಮಿಸುತ್ತಿರುವ ಅರ್ಹ ಸಂಘ, ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳನ್ನೊಳಗೊಂಡಂತೆ ಕ್ರೀಡೆ, ಕಲೆ, ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಮಹಿಳೆಯರು ಹಾಗೂ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಆತ್ಮಸ್ಥೆರ್ಯದಿಂದ ಹೋರಾಡಿ ಜೀವನೋಪಾಯದಿಂದ ಪಾರು ಮಾಡಿದಂತಹ ಮಹಿಳೆಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಹ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿಯನ್ನು ಉಪನಿರ್ದೇಶಕರು ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದಾವಣಗೆರೆ ಪಡೆದು ಅಗತ್ಯ ದಾಖಲೆಗಳೊಂದಿಗೆ ಡಿಸೆಂಬರ್ 24 ರೊಳಗಾಗಿ ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸರ್ಕಾರಿ ಬಾಲಕರ ಬಾಲಮಂದಿರ ಕಟ್ಟಡ, 14ನೇ ಮುಖ್ಯ ರಸ್ತೆ, ಕುವೆಂಪುನಗರ, ಎಂ.ಸಿ.ಸಿ, ‘ಬಿ’ ಬ್ಲಾಕ್, ದಾವಣಗೆರೆ ದೂ.ಸಂ:08192-264056 ಸಲ್ಲಿಸಬೇಕೆಂದು ಇಲಾಖೆಯ ಉಪನಿರ್ದೇಶಕರಾದ ರಾಜಾನಾಯ್ಕ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days agoದಾವಣಗೆರೆ | ಜಿಲ್ಲಾ ಪಂಚಾಯಿತಿ ಸಿ.ಇ.ಒ ಗಿತ್ತೆ ಮಾಧವ್ ವಿಠ್ಠಲ್ ರಾವ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ5 days agoದುಡಿಯುವ ವರ್ಗಕ್ಕೆ ಸ್ಥಳದಲ್ಲೇ ಉಚಿತ ಚಿಕಿತ್ಸೆ : ಶಾಸಕ ಕೆ.ಎಸ್.ಬಸವಂತಪ್ಪ ‘ಸಂಚಾರಿ ಆರೋಗ್ಯ ಘಟಕ’ಕ್ಕೆ ಚಾಲನೆ
-
ದಿನದ ಸುದ್ದಿ5 days agoಜಿಎಂ ವಿಶ್ವವಿದ್ಯಾಲಯ ರಂಗೋತ್ಸವ -2025 | ವಿದ್ಯಾರ್ಥಿಗಳ ಪ್ರತಿಭೆ ಅನಾವರಣ : ಸ್ಪರ್ಧೆಯಲ್ಲಿ ರಂಗ ಪ್ರೇಮ, ನಟನಾ ಚತುರತೆ ಬೆರಗು
-
ದಿನದ ಸುದ್ದಿ5 days agoಉಳಿಕೆ ಸರ್ಕಾರಿ ನಿವೇಶನ ಇಲಾಖೆಗಳ ವಿವಿಧ ಉದ್ದೇಶಿತ ಕಟ್ಟಡಗಳಿಗೆ ಹಂಚಿಕೆ: ಡಿಸಿ ಜಿ.ಎಂ.ಗಂಗಾಧರಸ್ವಾಮಿ
-
ದಿನದ ಸುದ್ದಿ5 days agoಸಹಾಯಧನಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ2 days agoಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ
-
ದಿನದ ಸುದ್ದಿ3 days agoದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ2 days agoದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ

