Connect with us

ಲೈಫ್ ಸ್ಟೈಲ್

ಕನ್ನಡಕದೊಳ್ಗಿಂದ ಕಾಣ್ತಿದೆ ಈ ಅಂದ..!

Published

on

ಸೀಸನ್ ಯಾವುದೇ ಇರಲಿ, ಸನ್ ಗ್ಲಾಸ್ ಟ್ರಂಕ್ ಮಾತ್ರ ಎವರ್ಗ್ರೀನ್ 

ಬಿಸಿಲು, ಮಳೆ; ಚಳಿ ಖತುಮಾನ ಏನೇ ಇರಲಿ, ಸನ್ಗ್ಲಾಸ್ ಒಂದು ಸ್ಟೈಲ್ ಸ್ಟೇಟ್ ಮೆಂಟ್ ಆಗಿ ಹೋಗಿದೆ. ಸೆಲಿಬ್ರಿಟಿಗಳಂತೂ ಮೇಕಪ್ ಇಲ್ಲದೆ ಇರಬಹುದು, ಸನ್ ಗ್ಲಾಸ್ ಇಲ್ಲದೆ ಇರುವುದಿಲ್ಲ ನೋಡಿ. ಹಾಗಾದರೆ ಸೆಲಿಬ್ರಿಟಿ ಗಳ 2018ರ ಹಿಟ್ ಲಿಸ್ಟ್ ನ ಅಲಂಕರಿಸಿರುವ ಮೋಸ್ಟ್ ವಾಂಟೆಡ್ ಸನ್ಗ್ಲಾಸ್ ಗಳ ಪಟ್ಟಿ ನಿಮಗಾಗಿ ಇಲ್ಲಿದೆ..

• ಕಣ್ಣು ಕೋರೈಸುವ  ಕ್ಯಾಟ್ ಐ ಕಮಾಲ್..!

2017ರ ಫ್ಯಾಷನಬಲ್ ಟ್ರೆಂಡ್ 2018 ಕ್ಕೂ ಮುಂದುವರಿದಿದೆ ಕ್ಯಾಟ್ ಐ ಕ್ರೇಜ್! ಒಮ್ಮೆ ಯಾದರೂ ಟ್ರೈ ಮಾಡಲೇಬೇಕು ಬೇಕು ಎನಿಸುವ ಈ ಕ್ಯಾಟ್ ಐ ಸನ್ಗ್ಲಾಸ್ ಗಳು ನೋಡಲು ವಿಭಿನ್ನ ,ಅತ್ಯಾಕರ್ಷಕ. ಸದ್ಯ ಸೋಷಿಯಲ್ ಮೀಡಿಯಾ ದಲ್ಲಿ ಈ ಕಲರ್ಫುಲ್ ಕ್ಯಾಟ್ ಐ ಚಷ್ಮಾ ಹೆಂಗುಳೆಯರ ಹಾಟ್ ಫೇವರಿಟ್ ಟ್ರೆಂಡ್ ಆಗಿದೆ. ಹಿಂದಿನ ವರ್ಷಕ್ಕೆ ಸ್ವಲ್ಪ ಭಿನ್ನ ವಾಗಿ ಈ ಬಾರಿಯ ಕ್ಯಾಟ್ ಐ ಚಷ್ಮಾ ತೀವ್ರ ಚೀನಾದ ಎಲೆ ಆಕಾರದಲ್ಲಿ..ವಿಶಿಷ್ಟ ವಿನ್ಯಾಸಗಳಲ್ಲಿ ಲಲಿತಾಮಣಿಯರ ಹೃದಯ ಕದ್ದಿದೆ.

• ಮುತ್ತು, ವಜ್ರ ಗಳ ಹರಳಿನ ಸ್ಟೋನ್ ಸ್ಟಡಡ್ ಸನ್ ಗ್ಲಾಸ್ ಗಳು

ಈಗ ವಿಶ್ವ ದೆಲ್ಲೆಡೆ ಎಂಬಲಿಷ್ಡ್ ಸನ್ಗ್ಲಾಸ್ ಗಳದ್ದೇ ಹವಾ. ಕಲರ್ ಕಲರ್ ಕನ್ನಡಕದ ಸುತ್ತಲ ಮುತ್ತು, ಹರಳು, ಮೆಟಾಲಿಕ್ ಡಿಸೈನರ್ ಪೀಸ್ ಗಳಿರುವ ಫಂಕೀ ಕನ್ನಡಕಗಳ ಪ್ರಾಭಲ್ಯತೆ ಫ್ಯಾಷನ್ ಲೋಕದಲ್ಲಿ ಹೆಚ್ಚಾಗಿದೆ. ಪಾಶ್ಚಾತ್ಯ ದೇಶಗಳಲ್ಲಂತೂ ಈ ರೀತಿಯ ಎಂಬಲಿಷ್ಡ್ ಸನ್ಗ್ಲಾಸ್ ಗಳ ಕ್ರೇಜ್ ಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ. ಈ ಬಾರಿಯ 2018 ರ ಸ್ಪ್ರಿಂಗ್ ಸಮ್ಮರ್ ಫ್ಯಾಷನ್ ಗೆ ಇದು ಯುವ ಪೀಳಿಗೆಯ ಫ್ಯಾಷನ್ ಸ್ಟೇಟ್ ಮೆಂಟ್ ಆಗಿಹೋಗಿದೆ.

• ಮತ್ತೆ ಬಂದಿದೆ ದೊಡ್ಡ ಗಾತ್ರದ ಕಾಲಾ ಚಷ್ಮಾ

80 ರ ದಶಕದ ಸಿನಿಮೀಯಾ ಶೈಲಿಯ ದೊಡ್ಡ ದೊಡ್ಡ ಬಳೆ ಗಾತ್ರದ ಓವರ್ ಸೈಜ್ ಸನ್ಗ್ಲಾಸ್ ಗಳು ಫ್ಯಾಷನ್ ಲೋಕದಲ್ಲಿ ಭಾರೀ ಬೇಡಿಕೆ ಯಲ್ಲಿದೆ. ಪುಟ್ಟ ಪುಟ್ಟ ಸುಂದರ ಸುಕೋಮಲ ಕಣ್ಣುಗಳ ರಕ್ಷಣೆ ಗೆ ಹೇಳಿಮಾಡಿಸಿದಂತಿದೆ ಈ ದೊಡ್ಡ ಗಾತ್ರದ ಕಾಲಾ ಚಷ್ಮಾ. ಹಾಲಿವುಡ್, ಬಾಲಿವುಡ್, ಸ್ಯಾಂಡಲ್ ವುಡ್ ನ ತಾರಾಮಣಿಯ ಹಾಟ್ ಫೇವರಿಟ್ ಇದಾಗಿದೆ.

• ವೈರಲ್ ಆಯ್ತು ಕಲರ್ಫುಲ್ ಸನ್ ಗ್ಲಾಸ್ ನ ಜಾದೂ

ಕಲರ್ ಕಲರ್ ಸನ್ ಗ್ಲಾಸ್ ಈಗಿನ ಹೊಸ ಟ್ರೆಂಡ್ ಆಗಿದೆ. ಕೆಂಪು, ಹಳದಿ, ನೇರಳೇ..ನೀಲಿ ಬಣ್ಣದ ಸನ್ಗ್ಲಾಸ್ ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಹಳೆಯ ಕಪ್ಪು ಬಣ್ಣದ ಟ್ರೆಂಡ್ ಅನ್ನು ಈ ರಂಗಬಿರಂಗೀ ಕಲರ್ಫುಲ್ ಸನ್ ಗ್ಲಾಸ್ ಗಳು ನುಂಗಿಹಾಕಿವೆ. ಕಾಲೇಜು ವಿದ್ಯಾರ್ಥಿಗಳು, ಫ್ಯಾಷನ್ ಪ್ರಿಯರು ಈ ರೀತಿಯ ಬಣ್ಣ ಬಣ್ಣದ ಕನ್ನಡಕಗಳಿಗೆ ಮಾರುಹೋಗಿದ್ದಾರೆ.

• 2018 ರ ರಾಂಪ್ ನಲ್ಲಿ  ಸೈ-ಫೈ ಸನ್ಗ್ಲಾಸ್ ಗಳ ದರ್ಬಾರು

2018ರ ಸ್ಪ್ರಿಂಗ್ ಸಮ್ಮರ್ ಫ್ಯಾಷನ್ ಫೆಸ್ಟಿವಲ್ ನಲ್ಲಿ ಗಮನ ಸೆಳೆಯುತ್ತಿಯುವ ಮತ್ತೊಂದು ವಿಶಿಷ್ಟ ವಿನ್ಯಾಸಗಳಲ್ಲಿ ” ಸೈ-ಫೈ” ಕನ್ನಡ ವೂ
ಒಂದು. ಸೈಂಟಿಫಿಕ್ ಲುಕ್ ನೀಡುವ ಈ ಕಟ್ಟಡಗಳು, ಬಾಹ್ಯಕಾಶದಲ್ಲಿ  ಧರಿಸುವ ಕನ್ನಡ
ಗಳ ಮಾದರಿಯಲ್ಲಿ ವಿನ್ಯಾಸ ಗೊಳಿಸಲಾಗಿದೆ. ಈ ರೀತಿಯ ವಿಚಿತ್ರ ವಿನ್ಯಾಸಗಳು ಯುವ ಪೀಳಿಗೆಗೆ ಬಹಳ ಟ್ರೆಂಡೀ ಎನಿಸುತ್ತದೆ. ಬಹಳ ದುಬಾರಿ ಆದರೂ ಸೋಷಿಯಲ್ ಮೀಡಿಯಾ ದಲ್ಲಿ ಈ ಸೈ-ಫೈ ಸನ್ಗ್ಲಾಸ್ ಗಳು ಭಾರೀ ಸದ್ದು ಮಾಡುತ್ತಿವೆ.

• ಸದ್ದು ಮಾಡುತ್ತಿವೆ ಚೌಕಾಕಾರದ ಸ್ಕ್ವೇರ್ ಸನ್ಗ್ಲಾಸ್ ಗಳು

ಹಿಂದಿನ  ವರ್ಷದ ಟಾಪ್ ಟ್ರೆಂಡ್ ಎನ್ನಿಸಿಕೊಂಡ ಚೌಕಾಕಾರದ ಸನ್ಗ್ಲಾಸ್ ಗಳು ಈ ವರ್ಷ ವುಡ್ ತಮ್ಮ ಬೇಡಿಕೆ ಉಳಿಸಿಕೊಂಡಿದೆ. ಸ್ಕ್ವೇರ್ ಶೇಡ್ಸ್
ಮೋಹ ಮಾಸಿಲ್ಲ, ಈಗಲೂ ಪ್ರತಿಷ್ಠಿತ ಕಂಪನಿಗಳ ಬ್ರ್ಯಾಂಡ್ ನ ಚೌಕಾಕಾರದ ಸನ್ಗ್ಲಾಸ್ ಮಾನಿನಿಯಯ ಮುಖಾರವಿಂದವನ್ನು ಅಲಂಕರಿಸಿದೆ.

• ಜಿಯೋಮೆಟ್ರಿಕ್ ವಿನ್ಯಾಸದ ರಂಗಬಿರಂಗೀ ಕನ್ನಡಕ

ಕೇವಲ, ಗೋಲಾಕಾರ ಮತ್ತು ಚೌಕಾಕಾರದ ಸನ್ಗ್ಲಾಸ್ ಗಳು ಮಾತ್ರ ವಲ್ಲದೇ, ವಿವಿಧ ಆಕಾರದ ಫಂಕೀ ಸನ್ಗ್ಲಾಸ್ ಗಳು ಯುವ ಪೀಳಿಗೆಯ ಮನಸ್ಸು ಗೆದ್ದಿದೆ. ಹಾರ್ಟ್, ಪೆಂಟಗನ್, ರೆಕ್ಕೆ, ಹೂ, ಹೀಗೆ ಹಲವಾರು ವಿಚಿತ್ರ ವಿನ್ಯಾಸಗಳು ಸನ್ಗ್ಲಾಸ್ ರೂಪದರ್ಶಿ ತಾಳಿವೆ. ಸದಾ ಹೊಸ ಫ್ಯಾಷನ್ನ ಅನ್ವೇಷಣೆಯಲ್ಲಿ ಇರುವ ಸ್ಟೈಲ್ ಪ್ರಿಯರು ಈ ಸನ್ಗ್ಲಾಸ್ ಗಳಿಗೆ ಮಾರುಹೋಗಿದ್ದಾರೆ.

• ಮಲ್ಟಿಕಲರ್ ಪ್ರೇಮ್ ಸನ್ಗ್ಲಾಸ್ ಗಳ ಮಜಾ ನೇ ಬೇರೆ

ಬ್ಲೂ ಫ್ರೇಮ್, ವೈಟ್ ಫ್ರೇಮ್ , ಮೆಟಾಲಿಕ್, ಹೀಗೇ ಹಲವಾರು ರೀತಿಯ ಫ್ರೇಮ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಒಂದು ವಿಶಿಷ್ಟ ವಿನ್ಯಾಸದಲ್ಲಿ ಮಲ್ಟಿಕಲರ್ ಫ್ರೇಮ್ ಸನ್ಗ್ಲಾಸ್ ಗಳು ತುಂಬಾ ನೇ ಟ್ರೆಂಡೀ ಹಾಗೂ ಕಲರ್ಫುಲ್ ಆಗಿದ್ದು ಸೆಲಿಬ್ರಿಟಿಗಳ ಹಿಟ್ ಲಿಸ್ಟ್ ನ ಅಲಂಕರಿಸಿವೆ.

ಲಾಸ್ಟ್ ಟಿಪ್

• ನಿಮ್ಮ ಮುಖದ ಆಕಾರಕ್ಕೆ  ಹೊಂದುವಂತಹ ಸನ್ಗ್ಲಾಸ್ ನನ್ನ ಆಯ್ಕೆ ಮಾಡಿಕೊಳ್ಳಿ.

• ನೆನಪಿರಲಿ, ನೀವು ಧರಿಸುವ ಸನ್ಗ್ಲಾಸ್ ನಿಮ್ಮ ಸ್ಟೈಲ್ ಸ್ಟೇಟ್ ಮೆಂಟ್ ಆಗಿರುತ್ತದೆ.

• ನಿಮ್ಮ ಆಯ್ಕೆ  ಯಾವುದೇ ಬಣ್ಣದ, ಆಕಾರದ ಸನ್ಗ್ಲಾಸ್ ಆಗಿದ್ದರೂ ಅದು ನಿಮ್ಮ ಫ್ಯಾಷನ್ ಹಾಗೂ  ಸ್ಟೈಲ್ ಅನ್ನು ಎತ್ತಿ ಹಿಡಿಯುವಂತಿರಲಿ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ

Photo Gallery | ಚನ್ನಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಜಾನಪದ ಉತ್ಸವ-2025

Published

on

Photo Gallery: ಚನ್ನಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಜಾನಪದ ಉತ್ಸವ-2025'

ಚನ್ನಗಿರಿ:ಪಟ್ಟಣದ ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ (ಮಾರ್ಚ್-22) ‘ಜಾನಪದ ಉತ್ಸವ – 2025″ ಅದ್ದೂರಿಯಾಗಿ ನಡೆಯಿತು.

ಜಾನಪದ ತಜ್ಞ, ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಬಸವರಾಜ ನೆಲ್ಲಿಸರ, ಅವರು ಉತ್ಸವಕ್ಕೆ ಚಾಲನೆ ನೀಡಿದರು.

ಎತ್ತಿನ ಬಂಡಿಯಲ್ಲಿ ಅಧ್ಯಾಪಕರು, ಅತಿಥಿಗಳ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ನೀರು ತುಂಬಿದ ಪೂರ್ಣ ಕುಂಭಗಳನ್ನು ಹೊತ್ತು ಅತಿಥಿಗಳನ್ನು ಸ್ವಾಗತಿಸಿದರು.
 

ಅಂದು ಕಾಲೇಜಿನಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ವರ್ಷದಲ್ಲಿ ಬರುವ ಯುಗಾದಿ, ಸಂಕ್ರಾಂತಿ, ಶಿವರಾತ್ರಿ, ಕ್ರಿಸ್ ಮಸ್, ರಂಜಾನ್, ದಸರಾ, ಭೂಮಿ ಹುಣ್ಣಿಮೆ, ರಾಶಿ ಪೂಜೆ ಸೇರಿದಂತೆ, ಬಳೆಗಾರ, ಕಣಿಹೇಳುವ, ಚೌಕಾಬಾರಾ, ಗುರುಕುಲ, ಆಯುರ್ವೇದ, ಗೋ ಪೂಜೆ ಎಲ್ಲವೂ ಜಾನಪದ ಸಂಸ್ಕೃತಿಯನ್ನು ಪುನರ್ ನಿರ್ಮಾಣಮಾಡಿದ್ದವು.

ಉತ್ಸವದಲ್ಲಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು, ಪಂಚೆ, ಅಂಗಿ, ಕುರ್ತಾ, ಲಂಗಾದಾವಣಿ, ಸೀರೆ ಉಟ್ಟು ,ಬುರ್ಕಾ, ತೊಟ್ಟು ಸಡಗರ ಸಂಭ್ರಮದಿಂದ ಕುಣಿದಾಡಿದರು.

ರಾಮನವಮಿಯ ಬೆಲ್ಲದ ಪಾನಕ – ಕೋಸಂಬರಿ, ಕ್ರಿಸ್ಮಸ್ ನ ಕೇಕ್, ರಂಜಾನ್ ಹಬ್ಬದ ಇಪ್ತಾರ್ ಕೂಟದ ಫಲಾಹಾರ, ಗಣಪತಿ ಹಬ್ಬದ ಕಡುಬು, ಯುಗಾದಿಯ ಹೋಳಿಗೆ, ಭೂಮಿ‌ಪೂಜೆಯ ಪಾಯಸ ಹೀಗೆ ವಿವಿಧ ಬಗೆಯ ತಿಂಡಿತಿನಿಸುಗಳು 30 ಜಿಲ್ಲೆಗಳ ವಿಶೇಷ ಖಾಧ್ಯಗಳು ಹಬ್ಬದ ಸಡಗರವನ್ನು ಇಮ್ಮಡಿಗೊಳಿಸಿದವು.

 

ವಸ್ತು ಪ್ರದರ್ಶನ

 

ಸುಮಾರು ವರ್ಷಗಳ ಹಿಂದೆ ಬಳಕೆಯಲ್ಲಿದ್ದ ಬೀಸು ಕಲ್ಲು, ಒನಕೆ, ಸೌದೆ ಒಲೆ, ಕೊಡಲಿ, ಮಚ್ಚು, ಬರ್ಜಿ, ಚನ್ನೆಮಣೆ, ಕೀಲುಗೊಂಬೆ, ಪಾರಂಪರಿಕ ಔಷಧಿ, ಕುಡುಗೋಲು, ಬಂಡಿ,ನಾಣ್ಯಗಳು,ಸೇರು, ಒಳಕಲ್ಲು, ಶಹನಾಯಿ,ಮಜ್ಜಿಗೆಯ ಕಡೆಗೋಲು, ತಾಳ, ಹಾರ್ಮೊನಿಯಂ, ಗಂಡುಕೊಡಲಿ,ಶಾವಿಗೆ ಒತ್ತು,ಹುತ್ತದ ಮಾದರಿ,ವಿಭಿನ್ನ ಬಗೆಯ ರಂಗವಲ್ಲಿ, ವಿವಿಧ ಧಾನ್ಯದ ರಾಶಿ,ಕಳಸ, ದಸರಾ ಗೊಂಬೆಗಳು, ನವರಾತ್ರಿಯ ಮಾತೃದೇವತೆ, ಕುರಾನ್ ಪ್ರತಿ, ಜಾನಮಾಜ್,ಕ್ರಿಸ್ತನ ಜನನದ ಗೋದರಿ, ಶಿಲುಬೆಗೇರಿಸಲ್ಪಟ್ಟ ಕ್ರಿಸ್ತನ ಮಾದರಿ ಚಿತ್ರಗಳು ವಸ್ತುಪ್ರದರ್ಶನದಲ್ಲಿದ್ದವು.

 

ದೇಸೀ ಆಟಗಳು

 

ದೇಸೀ ಆಟಗಳಾದ ಹಗ್ಗ ಜಗ್ಗಾಟ, ಲಗೋರಿ, ಬುಗುರಿ, ಕುಂಟೋಬಿಲ್ಲೆ ಹಾಗೂ ಜನಪದ ನೃತ್ಯ-ಹಾಡು ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಸಂತಸದಿಂದ ಭಾಗವಹಿಸಿದರು.

ಉತ್ಸವದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಬಿ.ಜಿ.ಅಮೃತೇಶ್ವರ ಅವರು ವಹಿಸಿಕೊಂಡಿದ್ದರು. ಹಾಗೂ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಪಕ ಹಾಗೂ ಸಾಂಸ್ಕೃತಿಕ ವೇದಿಕೆ ಸಂಚಾಲಕರಾದ ಷ್ಮುಖಪ್ಪ ಕೆ.ಹೆಚ್, ಐಕ್ಯುಎಸಿ ಸಂಚಾಲಕ ಪ್ರೊ.ವಿಜಯ್ ಕುಮಾರ್, ಉತ್ಸವದ ಕ್ರೀಡೆಗಳ ಆಯೋಜಕ ಹಾಗೂ ದೈಹಿಕ ನಿರ್ದೇಶಕರಾದ ಕಲ್ಲೇಶಪ್ಪ ಎಸ್.ಜಿ ಹಾಗೂ ಕಾಲೇಜಿನ ಎಲ್ಲಾ ಅಧ್ಯಾಪಕರು ಹಾಗೂ ಬೋಧಕೇತರ ಸಿಬಂದಿಗಳು ಮತ್ತು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಭಾಗವಹಿಸಿದ್ದರು.

Janapada Utsava Channagiri Govt collage (24)
Continue Reading

ದಿನದ ಸುದ್ದಿ

ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಅಗತ್ಯ : ಪ್ರಾಚಾರ್ಯ ಎಂ.ನಾಸಿರುದ್ದೀನ್

Published

on

ಸುದ್ದಿದಿನ,ಚಿತ್ರದುರ್ಗ: ಜಗತ್ತಿನಲ್ಲಿ ಭೂಮಿಯ ಮೇಲೆ ಸಕಲ ಜೀವರಾಶಿಗಳು ಬದುಕಲು ಅವಕಾಶವಿದ್ದು ಪರಿಸರ ಸಂರಕ್ಷಣೆ ಮಾಡುವುದರ ಮೂಲಕ ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.

ನಗರದ ಡಯಟ್ ಆವರಣದಲ್ಲಿರುವ 50 ಕ್ಕೂ ಹೆಚ್ಚು ಮರಗಳಲ್ಲಿ ಪಕ್ಷಿಗಳಿಗೆ ಆಹಾರ, ನೀರು ಪೂರೈಕೆ ವ್ಯವಸ್ಥೆ ಮಾಡಿ ಮಾತನಾಡಿದ ಅವರು ಪ್ರಸ್ತುತ ಸಂದರ್ಭದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು ಪಕ್ಷಿಗಳಿಗೆ ನೀರು ಮತ್ತು ಆಹಾರವನ್ನು ಪೂರೈಕೆ ಮಾಡುವ ಮೂಲಕ ಪಕ್ಷಿಗಳ ಬಗ್ಗೆ ಕಾಳಜಿಯೊಂದಿಗೆ ಸಂರಕ್ಷಿಸುವ ಭಾವನೆ ಬೆಳೆಸಿಕೊಳ್ಳಬೇಕು ಎಂದರು. ನಮ್ಮ ಮನೆಗಳ ಮೇಲ್ಚಾವಣಿಯಲ್ಲಿ ನೀರು, ಆಹಾರ ವ್ಯವಸ್ಥೆ ಮಾಡುವುದರಿಂದ ಪಕ್ಷಿಗಳನ್ನು ಸಂರಕ್ಷಿಸಲು ಅನುಕೂಲವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಉಪನ್ಯಾಸಕ ಆರ್.ನಾಗರಾಜು ಕಚೇರಿ ಸಿಬ್ಬಂದಿ ವರ್ಗದವರು ಇದ್ದರು.

ಫೋಟೋ: ನಗರದ ಡಯಟ್ ಆವರಣದಲ್ಲಿರುವ 50 ಕ್ಕೂ ಹೆಚ್ಚು ಮರಗಳಲ್ಲಿ ಪ್ರಾಚಾರ್ಯ ಎಂ.ನಾಸಿರುದ್ದೀನ್ ಪಕ್ಷಿಗಳಿಗೆ ಆಹಾರ, ನೀರು ಪೂರೈಕೆ ವ್ಯವಸ್ಥೆ ಮಾಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕವಿತೆ | ಮತ್ತಿನ ಕುಣಿಕೆ

Published

on

  • ಗುರು ಸುಳ್ಯ

ನಿದೆರೆಗೆ ದೂಡದ ಮದಿರೆಯ
ಅನುಭವ
ಸದಾ ಸಂಕಟಗಳ ಹೆರುವ
ಮತ್ತಿನ ಕುಣಿಕೆ

ನನ್ನ ಮಡಿಲ ಮೇಲೆ ನನ್ನದೇ
ಒಡಲು ಮಲಗಿರಲು
ಮಲಗಲು ಹಂಬಲಿಸುವ
ಮಗುವಿನ ಮನದೊಳಗೆ
ಚಾದರವಿಲ್ಲದೆ ಅಳುವ ರಸ್ತೆಯ
ಬದಿಗಳು ಚಲಿಸುತ್ತಿದೆ

ಅಪ್ಪನ ಕೈ ಹಿಡಿದು
ಅಮ್ಮನ ಕೆನ್ನೆಯ ಮೇಲೆ
ನಡೆದ ನೆನಪುಗಳು
ಆದ ಅಪಘಾತಗಳ ಆಳ
ಅಳೆಯುತ್ತಿವೆ…

ಶತ ಪ್ರಯತ್ನ ಪಟ್ಟರೂ
ತಪ್ಪದ ದಾರಿಗೆ
ಡಾಂಬರು ಹಾಕಿಸಿದವರ
ರಾಜಕೀಯವನ್ನು ಎದುರಿಸುತ್ತಲೇ
ಹಡೆಯಬೇಕಿದೆ ಮುಂದಿನ ದಾರಿಯ

ತಿರುವುಗಳಲ್ಲಿ ಕೈ ಹಿಡಿದು
ಮೆಲ್ಲನೆ ಕರೆದೊಯ್ಯುವ
ಕವಿತೆಗಳನ್ನು
ಎಲ್ಲೆಂದರಲ್ಲಿ ಬಿಟ್ಟು ಬಿಡಲು
ಸಾಧ್ಯವಾಗುತ್ತಿಲ್ಲ

ಉಸಿರ ನಾದದಲ್ಲಿ
ತೇಯ್ದ ಗಂಧ,
ಆಟ ನಿಲ್ಲಲು ಬಿಡದೆ
ಗಮಗಮಿಸುತ್ತಿದೆ..
ಪ್ರವಾಹದಲ್ಲಿ ಕೊಚ್ಚಿಹೋಗುವ
ಮುನ್ಸೂಚನೆಯಿಲ್ಲದೇ
ಮೊದಲ ಮಳೆಯಲ್ಲಿ ನೆನೆದು
ಚಪ್ಪಲಿಗೆ ಅಂಟಿದ ಮಣ್ಣಿನ ಘಮದಂತೆ.
(ಕವಿತೆ – ಗುರು ಸುಳ್ಯ)

ಕವಿ : ಗುರು ಸುಳ್ಯ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ4 hours ago

ಇ-ಸ್ವತ್ತು ಸಮಸ್ಯೆ ಪರಿಹಾರಕ್ಕಾಗಿ‌‌ ಕಾರ್ಯನಿರ್ವಹಣಾ ಸಮಿತಿ ರಚನೆ

ಸುದ್ದಿದಿನಡೆಸ್ಕ್:ಗ್ರಾಮೀಣಾಭಿವೃದ್ಧಿ ಇಲಾಖೆಯ ನಿರ್ದೇಶಕರ ಅಧ್ಯಕ್ಷತೆಯಲ್ಲಿ, 12 ಜನ ಅಧಿಕಾರಿಗಳನ್ನು ಒಳಗೊಂಡ, ಇ-ಸ್ವತ್ತು ಕಾರ್ಯನಿರ್ವಹಣಾ ಸಮಿತಿ ರಚಿಸಲಾಗಿದೆ ಎಂದು, ಪಂಚಾಯತ್‌ರಾಜ್ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ. ಇದನ್ನೂ...

ದಿನದ ಸುದ್ದಿ19 hours ago

‘ವಿದ್ಯಾಸಿರಿ’ ಯೋಜನೆಯಡಿ ವಿದ್ಯಾರ್ಥಿ ವೇತನ ಪರಿಷ್ಕರಣೆಗೆ ಒತ್ತು : ಸಿಎಂ ಸಿದ್ದರಾಮಯ್ಯ

ಸುದ್ದಿದಿನಡೆಸ್ಕ್:ಬೆಂಗಳೂರಿನ ಕೆಂಗೇರಿಯಲ್ಲಿ ನೂತನವಾಗಿ ನಿರ್ಮಿಸಿರುವ ಕಲಿದೇವ ಸಮುದಾಯ ಭವನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಲೋಕಾರ್ಪಣೆಗೊಳಿಸಿದರು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಲ್ಲ ಸಮುದಾಯಗಳ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು...

ದಿನದ ಸುದ್ದಿ1 day ago

ಚನ್ನಗಿರಿ | ಮುಸ್ಲಿಂ ಮಹಿಳೆ ಮೇಲೆ ಹಲ್ಲೆ ; ಕಾನೂನು ಮೂಲಕ ಪರಿಹಾರ ಕಂಡುಕೊಳ್ಳಿ : ಡಿವೈಎಸ್ಪಿ ಸ್ಯಾಮ್ ವರ್ಗೀಸ್ ಎಚ್ಚರಿಕೆ

ಸುದ್ದಿದಿನ,ಚನ್ನಗಿರಿ:ಇತ್ತೀಚಿಗೆ ತಾವರೆಕೆರೆಯಲ್ಲಿ ನಡೆದ ಘಟನೆ ಕಾನೂನು ಬಾಹಿರವಾಗಿದ್ದು, ಮುಖಂಡರುಗಳು ತಮ್ಮ ಗ್ರಾಮ ಹಾಗೂ ಪಟ್ಟಣಗಳ ವ್ಯಾಪ್ತಿಯಲ್ಲಿ ಯಾವುದೇ ಘಟನೆ ನಡೆದಿದ್ದರೆ ಕಾನೂನಿನ ಮೂಲಕ ಪರಿಹಾರವನ್ನು ಕಂಡುಕೊಳ್ಳಬೇಕೇ ವಿನಃ...

ದಿನದ ಸುದ್ದಿ1 day ago

ದಾವಣಗೆರೆ | ಮೌಲಾನಾ ಅಜಾದ್ ಮಾದರಿ ಶಾಲೆಗೆ 6ನೇ ತರಗತಿಗೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ದಾವಣಗೆರೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಶಾಲೆಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಈ ಶಾಲೆಗಳಲ್ಲಿ ಅಲ್ಪಸಂಖ್ಯಾತ ವರ್ಗದ...

ರಾಜಕೀಯ1 day ago

ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿಗೆ ಪ್ರತಿಭಾನ್ವಿತ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳನ್ನು ಪ್ರತಿಷ್ಠಿತ ಶಾಲೆಗಳಿಗೆ 6 ನೇ ತರಗತಿಗೆ ಅರ್ಹತಾ ಪರೀಕ್ಷೆಯ ಮೂಲಕ ಆಯ್ಕೆ ಮಾಡಲು ದಾವಣಗೆರೆ ಜಿಲ್ಲೆ ವ್ಯಾಪ್ತಿಯಲ್ಲಿ ಆನ್‍ಲೈನ್...

ದಿನದ ಸುದ್ದಿ1 day ago

ದಾವಣಗೆರೆ | ಪ್ರಾಂಶುಪಾಲರ ಹುದ್ದೆಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ: ಕರ್ನಾಟಕ ರಾಜ್ಯ ಪೊಲೀಸ್ ವೆಲ್‍ಫೇರ್ ಅಂಡ್ ಎಜುಕೇಷನ್ ಟ್ರಸ್ಟ್ ದಾವಣಗೆರೆ ರೇಂಜ್ ಅಡಿಯಲ್ಲಿನ ಹರಿಹರ ತಾಲ್ಲೂಕು ಕೊಂಡಜ್ಜಿಯ ಪಬ್ಲಿಕ್ ಶಾಲೆಯಲ್ಲಿನ ಪ್ರಾಂಶುಪಾಲರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ....

ದಿನದ ಸುದ್ದಿ1 day ago

ದಾವಣಗೆರೆ | ಮೊಬೈಲ್ ಕ್ಯಾಟೀನ್ ; ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ಎಸ್‍ಸಿಎಸ್‍ಪಿ, ಟಿಎಸ್‍ಪಿ ಯೋಜನೆ ಅಡಿಯಲ್ಲಿ ಪರಿಶಿಷ್ಟ ಪಂಗಡ ಸಣ್ಣ ಉದ್ಯಮಿದಾರರನ್ನು ಉತ್ತೇಜಿಸಲು ಒಂದು ತಿಂಗಳ ಕೌಶಲ್ಯಾಭಿವೃದ್ದಿ ತರಬೇತಿ ನೀಡಿ ಹಾಗೂ ತರಬೇತಿ ಪಡೆದ ಅರ್ಹ...

ದಿನದ ಸುದ್ದಿ2 days ago

ಅಂಬೇಡ್ಕರ್ ಸ್ಮರಣೆಯಿಂದ ದೇಶ ಪ್ರಗತಿಪರವಾಗಲು ಸಾಧ್ಯ : ಸಹಾಯಕ ಪ್ರಾಧ್ಯಾಪಕ ಷಣ್ಮುಖಪ್ಪ ಕೆ.ಎಚ್

ಸುದ್ದಿದಿನ,ಚನ್ನಗಿರಿ:ಶತಶತಮಾನದಿಂದಲೂ ಭಾರತ ದೇಶದಲ್ಲಿರುವ ಜಾತಿ ವ್ಯವಸ್ಥೆಯನ್ನ ಮೀರಿ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಹೊಂದಲು ಡಾ.ಬಿ.ಆರ್.ಅಂಬೇಡ್ಕರ್ ಅವರ ಶ್ರಮ ಹಾಗೂ ಹೋರಾಟವನ್ನು ನಾವುಗಳು ಸ್ಮರಿಸಿಕೊಳ್ಳಬೇಕಾಗಿದೆ ಎಂದು ಸಹಾಯಕ...

ದಿನದ ಸುದ್ದಿ3 days ago

ಚನ್ನಗಿರಿ | ಮುಸ್ಲಿಂ ಮಹಿಳೆ ಮೇಲೆ ಹಲ್ಲೆ ; ಆರು ಮಂದಿ ಬಂಧನ

ಸುದ್ದಿದಿನ,ದಾವಣಗೆರೆ: ಚನ್ನಗಿರಿ ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ವಿವಾಹೇತರ ಸಂಬಂಧದ ಆರೋಪದ ಮೇಲೆ ಜಾಮಿಯಾ ಮಸೀದಿಯ ಹೊರಗೆ ಮುಸ್ಲಿಂ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಪೊಲೀಸರು...

ದಿನದ ಸುದ್ದಿ3 days ago

ಸುದ್ದಿದಿನ.ಕಾಂ ಫಲಶೃತಿ | ಕಬ್ಬಿಣ ಬಿಸಾಡಿ ಓಡಿ ಹೋದ ಶಾಸಕರ ಆಪ್ತರು ; ಗೇಟ್ ಗೆ ಡಿಕ್ಕಿ, ಕ್ಯಾಮರಾಗಳಲ್ಲಿ ಸೆರೆ

ಗಿರೀಶ್ ಕುಮಾರ್ ಗೌಡ,ಬಳ್ಳಾರಿ ಸುದ್ದಿದಿನಡೆಸ್ಕ್:ಗೇಟ್ ಗೆ ಡಿಕ್ಕಿ ಹೊಡೆದು ಟನ್ ಗಟ್ಟಲೇ ಹೆಚ್ಚಿನ ಕಬ್ಬಿಣ ಬಿಸಾಕಿ ಓಡಿ ಹೋಗಿದ್ದಾರೆ ಪ್ರಭಾವಿ ರಾಜಕೀಯ ನಾಯಕನ ಹಿಂಬಾಲಕರು ಎನ್ನುವ ಮಾಹಿತಿ...

Trending