ಬಹಿರಂಗ
ಆಷಾಢ ಪೂರ್ಣಿಮೆ ಮತ್ತು ಧಮ್ಮಚಕ್ಕಪವತ್ತನದಿನ
ಜುಲೈ 05 ಆಷಾಢ ಪೂರ್ಣಿಮೆಯ ಪ್ರಯುಕ್ತ
- ಶಿವಸ್ವಾಮಿ
ಗುರು ಎಂದರೆ ವ್ಯಕ್ತಿಯಲ್ಲ ಒಂದು ಶಕ್ತಿ ಕತ್ತಲೆಯ ಕಳೆದು ಸುಜ್ಞಾನದ ಬೆಳಕಿನಡೆಗೆ ಕರೆದುಕೊಂಡು ಹೋಗುವ ಶಬ್ದವೇ “ಗುರು “
–ಗೌತಮ ಬುದ್ಧ
ಭಾರತದ ಮೂಲನಿವಾಸಿಗಳ ಪಾಲಿಗೆ ಮಾತ್ರ ಆಷಾಢ ಮಾಸವು ಅನಿಷ್ಟ, ಅಶುಭ, ಈ ತಿಂಗಳಿನಲ್ಲಿ ಯಾವುದೇ ಶುಭಕಾರ್ಯಗಳನ್ನು ಮಾಡಬಾರದು, ಜಾತಿ ಧರ್ಮ ಶಾಸ್ತ್ರ ಪುರಾಣ ದೇವರು, ಪೂಜೆ ಪುನಸ್ಕಾರಗಳ ಹೆಸರಿನಲ್ಲಿ ಭಯದ ಉತ್ಪಾಧಕರೆನಿಸಿಕೊಂಡವರು ಸುಳ್ಳುಗಳನ್ನೇ ಸತ್ಯವೆಂದು ನಂಬಿಸಿ ಮಾನಸಿಕ ಗುಲಾಮಗಿರಿಗೆ ತಳ್ಳಿ ಇಲ್ಲಿನ ಮೂಲನಿವಾಸಿಗಳ ಮೆದುಳಿಗೆ ಬ್ರಾಹ್ಮಣ್ಯವೆಂಬ ಬೇಡಿಯನ್ನು ತೊಡಿಸಿ ಅದರಿಂದ ಹೊರಬರದಂತೆ ವಿಲ ವಿಲ ಹೊದ್ದಾಡುವಂತೆ ಮಾಡಿ, ತಾವುಗಳು ಮಾತ್ರ ತಮ್ಮ ಮದುವೆ ಮುಂಜಿ ಕಾರ್ಯಗಳನ್ನು ಕಡಿಮೆ ಖರ್ಚಿನಲ್ಲಿ ಮಾಡಿಕೊಳ್ಳುತ್ತಾರೆ.
ಆದರೆ, ಅವರಿಗೆ ಈ ಆಷಾಡ ಮಾಸದಿಂದ ಯಾವ ತೊಂದರೆಯು ಆಗುವುದಿಲ್ಲ, ಆಷಾಢ ಮಾಸ ಅಶುಭವೆಂದು ಇತಿಹಾಸದ ಕತ್ತಲ ಗರ್ಭದಲ್ಲಿ ಹೂತಿಟ್ಟು ನಮ್ಮ ಪೂರ್ವಿಕರ ಇತಿಹಾಸವು ನಮಗೆ ತಿಳಿಯದಂತೆ ಮಾಡಿದ್ದಾರೆ ಅದಕ್ಕೆ ಬಾಬಾಸಾಹೇಬರು ಹೇಳಿದ್ದು “ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು” ಅಂತ ಬಂಧುಗಳೇ ಸತ್ಯವನ್ನು ಸತ್ಯವೆಂದು ಸುಳ್ಳನ್ನು ಸುಳ್ಳೆಂದು ಸಾರಿದ ನಿಜವಾದ ಭಾರತೀಯಾರಾದ ನಾವು ಇತಿಹಾಸವನ್ನು ತಿಳಿದುಕೊಳ್ಳೋಣ.
ಎಲ್ಲಾ ತಿಂಗಳುಗಳಂತೆಯೇ ಆಷಾಡ ಮಾಸದಲ್ಲಿ ಸೂರ್ಯ ಚಂದ್ರರು ಬೆಳಗುತ್ತಾರೆ, ಮಳೆ ಸುರಿಯುತ್ತದೆ, ಗಿಡಮರಗಳು ಚಿಗುರುತ್ತವೆ, ಗಾಳಿ ಬೀಸುತ್ತದೆ, ಹೂವುಗಳು ಮೊಗ್ಗಾಗಿ ಅರಳಿ ಪರಿಮಳವನ್ನು ಬೀರುತ್ತ ಪ್ರಕೃತಿ ಎಂದಿನಂತೆ ತನ್ನ ಕೆಲಸದಲ್ಲಿ ನಿರತವಾಗಿರುತ್ತದೆ.
ಆದರೆ ಭಾರತದ ಮೂಲನಿವಾಸಿಗಳ ಪಾಲಿಗೆ ಮಾತ್ರ ಆಷಾಢ ಮಾಸವು ಅನಿಷ್ಟ, ಅಶುಭ ಈ ತಿಂಗಳಿನಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದೆಂದು ಜಾತಿ ಧರ್ಮ ಶಾಸ್ತ್ರ ಪುರಾಣ ದೇವರು ದಿಂಡರುಗಳ ಹೆಸರಲ್ಲಿ ಭಯದ ಉತ್ಪಾಧಕರೆನಿಸಿಕೊಂಡ ವೈದಿಕ ಮಹಾಶೆಯರು ಸುಳ್ಳುಗಳನ್ನೇ ಸತ್ಯವೆಂದು ನಂಬಿಸಿ ಮಾನಸಿಕ ಗುಲಾಮಗಿರಿಗೆ ತಳ್ಳಿ ಇಲ್ಲಿನ ಮುಗ್ಧ ಜನರ ಮೆದುಳಿಗೆ ಬ್ರಾಹ್ಮಣ್ಯವೆಂಬ ಬೇಡಿಯನ್ನು ತೊಡಿಸಿ ಅದರಿಂದ ಹೊರ ಬರಲಾಗದಂತೆ ವಿಲ ವಿಲ ಹೊದ್ದಾಡುವಂತೆ ಮಾಡಿ, ತಾವುಗಳು ಮಾತ್ರ ತಮ್ಮ ತಮ್ಮ ಮದುವೆ ಮುಂಜಿ ಇನ್ನಿತರ ಶುಭ ಕಾರ್ಯಗಳನ್ನು ಕಡಿಮೆ ಖರ್ಚಿನಲ್ಲಿ ಹೊರೆಯಾಗದಂತೆ ಮಾಡಿಕೊಳ್ಳುತ್ತಾರೆ.ಆದರೆ, ಅವರಿಗೆ ಈ ಆಷಾಡ ಮಾಸದಿಂದ ಯಾವ ತೊಂದರೆಯು ಆಗುವುದಿಲ್ಲ.
ಆಷಾಢ ಮಾಸದಲ್ಲಿ ಧೋ..ಎಂದು ಸುರಿಯುವ ಜಿಟಿ ಜಿಟಿ ಮಳೆರಾಯನ ಹರ್ಷಕೆ ಇಳೆ ತಂಪಾಗಿ ಹಚ್ಚ ಹಸಿರಿನ ಸೀರೆಯನುಟ್ಟು ಭೂತಾಯಿ ಕಂಗೊಳಿಸುತ್ತಿರುವ ಆಷಾಡ ಮಾಸವನ್ನು ವಿಪ್ರರೆತಕೆ ಅನಿಷ್ಟ ಅಶುಭವೆಂದರು.. !?
ಬುದ್ಧ ಪೂರ್ವದಲ್ಲಿ ಶತಶತಮಾನಗಳಿಂದ ಇಡೀ ವ್ಯವಸ್ಥೆಯನ್ನೇ ತಮ್ಮ ಧಾರ್ಮಿಕ ಕಪಿಮುಸ್ಷ್ಠಿಯಲ್ಲಿ ಮೌಢ್ಯವನ್ನೇ ಬಿತ್ತುತ್ತಾ ಜಾತಿ ಧರ್ಮ, ಮರ್ಮ ಕರ್ಮ, ಸ್ವರ್ಗ ನರಕವೆಂಬ ಕಾಣದ ಕಲ್ಪನೆಯ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಮುಗ್ಧ ಜನರನ್ನು ಬಂಧಿಸಿ ತಾವು ಮಾತ್ರ ಶ್ರೇಷ್ಠ ಇತರರು ಕನಿಷ್ಠವೆಂದು ಮೌಢ್ಯವನ್ನೇ ಬಂಡವಾಳ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತಿದ್ದ ವೈದಿಕರಿಗೆ ಸೆಡ್ಡು ಹೊಡೆದ ಸಿದ್ಧಾರ್ಥ ಗೌತಮರು ಈ ಆಷಾಢ ಪೂರ್ಣಿಮೆಯಂದೇ ಜ್ಞಾನೋದಯವಾಗಿ ಬೋಧಿಯನ್ನು ಪಡೆದು ಬುದ್ಧರಾಗುತ್ತಾರೆ.
ನಂತರ ತಾವು ಪಡೆದು ಅನುಭವಿಸಿದ ಅಂತಿಮ ಸತ್ಯದ ಧಮ್ಮಮಾರ್ಗವನ್ನು ಇತರರಿಗೂ ಹಂಚಬೇಕೆಂದು ನಿಶ್ಚಯಿಸಿ ಯಾರಿಗೆ ಮೊದಲು ಧಮ್ಮವನ್ನು ಬೋಧಿಸಬೇಕೆಂದು ಯೋಚಿಸುವಾಗ ತಾನು ಕಠಿಣ ತಪಸ್ಸನ್ನು ಮಾಡುವಾಗ ತನ್ನೊಂದಿಗಿದ್ದ ಐದು ಜನ ಸಮಣ ಭಿಕ್ಕುಗಳು ನೆನಪಿಗೆ ಬಂದು ಅವರನ್ನು ಹುಡುಕುತ್ತಾ ಸಾರಾನಾಥದ ಇಸಿಪತನದ ಜಿಂಕೆವನಕ್ಕೆ ಬಂದು ತಮ್ಮ ಪ್ರಥಮ ಧಮ್ಮೋಪದೇಶವನ್ನು ನೀಡುವುದರ ಮೂಲಕ ಧಮ್ಮ ಪ್ರಸಾರದ ಚಕ್ರವನ್ನು ಉರುಳಿ ಬಿಡುತ್ತಾರೆ ಇದನ್ನು ಧಮ್ಮ ಚಕ್ಕ ಪವತ್ತನ ಸುತ್ತ ಎಂದೂ…ಇದೇ ದಿನವನ್ನು ಧಮ್ಮ ಚಕ್ಕ ಪವತ್ತನ ದಿನವೆಂದು ಕರೆಯುತ್ತಾರೆ.
ಧಮ್ಮಚಕ್ಕಪವತ್ತನ(ಸುತ್ತ) ದಿನ
ಗೌತಮರು ಭೋಧಿ ಪಡೆದು ಬುದ್ಧರಾದ ಮೇಲೆ ತಮ್ಮ ಮೊದಲ ಧಮ್ಮೋಪದೇಶವನ್ನು (ಧಮ್ಮಚಕ್ಕ ಪವತ್ತನ ಸುತ್ತ )ತನ್ನ ಶಿಷ್ಯರಾದ ಕೊಂಡಣ್ಣ, ಭದ್ದಿಯಾ, ವಪ್ಪ, ಮಹಾನಾಮ, ಅಸ್ಸಜ್ಜಿ, ಎಂಬ ಐದು ಜನ ಭಿಕ್ಕುಗಳಿಗೆ ಬೋಧಿಸಿದರು ಇದು ಧಮ್ಮ ಚಕ್ಕ ಪವತ್ತನ ಸುತ್ತವೆಂದೇ ಪ್ರಸಿದ್ದಿ ಪಡೆದು ಇಲ್ಲಿಂದಲೇ ಬುದ್ಧರ ಧಮ್ಮ ಚಕ್ರವು ಉರುಳಲಾರಂಭಿಸಿತು, ಬುದ್ಧರ ಹೃದಯದಲ್ಲಿ ಮಿಂಚಿದ ಜ್ಞಾನದ ಧರ್ಶನವೇ ಈ ಸುತ್ತದ ಸಾರವಾಗಿದೆ ಇದನ್ನು ಚತುರಾರ್ಯ ಸತ್ಯಗಳು ಅಥವಾ ನಾಲ್ಕು ಆರ್ಯ ಸತ್ಯಗಳೆಂದು ಕರೆಯುತ್ತಾರೆ.
ಪಾಳಿಯಲ್ಲಿ “ಚರಿತ ಭಿಕ್ಖವೇ ಚಾರಿಕಂ ಬಹುಜನ ಹಿತಾಯ ಬಹುಜನ ಸುಖಾಯ ಲೋಕಾನು ಕಂಪಾಯ ಅತ್ತಾಯ ಹಿತಾಯ ಸುಖಾಯ ದೇವಾ ಮನಸ್ಸಂ” ಕನ್ನಡದಲ್ಲಿ ನಾನೊಂದು ಧಮ್ಮ ಚಕ್ರ, ಮಾನವ ಚಕ್ರ, ಸಂಸಾರವೆಂಬ ಚಕ್ರವನ್ನು ಉರುಳಿಬಿಟ್ಟಿದ್ದೇನೆ, ಅದು ಬಹುಜನರ ಹಿತಕ್ಕಾಗಿ ಬಹುಜನರ ಸುಖಕ್ಕಾಗಿ ಲೋಕದ ಮೇಲೆ ಕರುಣೆ ನೆಲೆಗೊಳಿಸುವುದಾಗಿದೆ.
ಅದು ತನ್ನ ಹಿತಸುಖಕ್ಕಾಗಿ ದೇವಾ ಮಾನವರ ಹಿತಸುಖಕ್ಕಾಗಿ ಉರುಳಿಬಿಡಲಾಗಿದೆ.
4 ಆರ್ಯ ಸತ್ಯಗಳು
01. ದುಃಖ್ಖ ಸತ್ಯ
ಲೋಕದಲ್ಲಿ ದುಃಖ್ಖವಿದೆ ಹುಟ್ಟು ದುಃಖ್ಖ, ರೋಗ ದುಃಖ್ಖ, ವಯಸ್ಸಾಗುವುದು ದುಃಖ್ಖ, ಸಾವು ದುಃಖ್ಖ.ದೈಹಿಕ ಮತ್ತು ಮಾನಸಿಕ ನೋವು ಯಾತನೆ ಕೊರಗು ಇದೆಲ್ಲವೂ ದುಖ್ಖವೇ.
02. ದುಃಖ್ಖಕ್ಕೆ ಕಾರಣ ಸತ್ಯ
ದುರಾಸೆ ಅಥವಾ ತೃಷ್ಣೆ
ಮೂರು ವಿಧವಾದ ತೃಷ್ಣೆಗಳಿವೆ
- ಕಾಮ ತೃಷ್ಣೆ
ಪಂಚ ಇಂದ್ರಿಯಗಳ ವಿಷಯಗಳನ್ನು ಅನುಭವಿಸಬೇಕೆನ್ನುವ ಇಚ್ಛೆಯೇ ಕಾಮತೃಷ್ಣೆ
- ಭಾವತೃಷ್ಣೆ
ನಾನು ಶಾಶ್ವತವಾಗಿ ಜೀವಿಸಬೇಕೆಂಬುದು ಮತ್ತು ನಾನು ಶ್ರೀಮಂತನಾಗಿ ಸದಾ ಭೋಗಜೀವನದಲ್ಲಿರಬೇಕೆಂಬುದೇ ಆಗಿದೆ
- ವಿಭವ ತೃಷ್ಣೆ
ನಾನು ಈ ಪ್ರಪಂಚದಲ್ಲಿ ನಾನು ಇರಲೇಬಾರದೆಂಬ ಹತಾಶೆಯ ಮನಸ್ಥಿತಿ.
03. ದುಃಖ್ಖ ನಿರೋಧ ಸತ್ಯ
ಈ ಲೋಕದಲ್ಲಿ ದುಃಖ್ಖವಿದೆ, ದುಃಖ್ಖಕ್ಕೆ ಕಾರಣವು ಇದೆ, ಎಂದಮೇಲೆ ದುಃಖ್ಖ ನಿರೋಧದ ಮೂಲಗಳಾದ ಅಜ್ಞಾನ ಮತ್ತು ದುರಾಸೆಗಳಿಂದ ಹೊರ ಬಂದರೆ ದುಖ್ಖವೂ ದೂರವಾಗುತ್ತದೆ.
04. ದುಃಖ್ಖ ನಿರೋಧ ಗಾಮಿನಿ ಪಟಿಪದ
(ದುಃಖ್ಖ ನಿರೋಧಕ್ಕೆ ಕೊಂಡೊಯ್ಯುವ ಮಾರ್ಗ)
ನಾಲ್ಕನೇ ಸತ್ಯವಾದ ದುಃಖ್ಖ ನಿರೋಧ ಮಾರ್ಗ ಅಥವಾ ಆರ್ಯ ಅಷ್ಟಾಂಗ ಮಾರ್ಗ ಅಥವಾ ಮಧ್ಯಮ ಮಾರ್ಗ,ಪಂಚ ಇಂದ್ರಿಯಗಳ ಸುಖಕ್ಕಾಗಿ ಭೋಗಜೀವನದಲ್ಲಿ ತೊಡಗಿರುವುದು ಮತ್ತು ನೋವಿನಿಂದ ಕೂಡಿದ ಕಠಿಣ ತಪಸ್ಸು ಅಥವಾ ದೇಹ ದಂಡನೆ ಎಂಬ ಎರಡು ಅತಿರೇಖಾ ಮಾರ್ಗಗಳನ್ನು ಬುದ್ಧ ಕೈ ಬಿಟ್ಟಿದ್ದೆ ಅಲ್ಲದೆ ಸುಖ ಶಾಂತಿ ಪ್ರಜ್ಞೆಯ ಮಾರ್ಗವಾದ ಮನುಷ್ಯರನ್ನು ನಿಬ್ಬಾಣದ ಸತ್ಯದ ಕಡೆಗೆ ಕರೆದೊಯ್ಯುವ ಮಾರ್ಗ ಕಂಡು ಹಿಡಿದರು ಅದುವೇ ಬುದ್ಧರ ಮಧ್ಯಮ ಮಾರ್ಗ ಅಥವಾ ಆರ್ಯ ಅಷ್ಟಾಂಗ ಮಾರ್ಗ.
ಅಷ್ಟಾಂಗ ಮಾರ್ಗ
ಬುದ್ಧರ ಧಮ್ಮ ಚಕ್ರದ 8 ಅಂಶಗಳು ದುಃಖ್ಖ ನಿವಾರಣೆಗಾಗಿ ಇರುವ ಮಧ್ಯಮ ಮಾರ್ಗವಾಗಿದೆ
1.ಸರಿಯಾದ ದೃಷ್ಟಿ
2.ಸರಿಯಾದ ಯೋಚನೆ
3.ಸರಿಯಾದ ಮಾತು
4.ಸರಿಯಾದ ಕೆಲಸ
5.ಸರಿಯಾದ ಜೀವನೋಪಾಯ
6.ಸರಿಯಾದ ಪ್ರಯತ್ನ
7.ಸರಿಯಾದ ಎಚ್ಚರಿಕೆ
8.ಸರಿಯಾದ ಏಕಾಗ್ರತೆ
ನಿಮಗೆ ನೀವೇ ಬೆಳಕಾಗಿ, ನಿಮಗೆ ನೀವೇ ಶ್ರಮಿಸಬೇಕು. ತಥಾಗತರು ಕೇವಲ ಮಾರ್ಗದಾತರಷ್ಟೇ, ಬುದ್ಧರ ಅಷ್ಟಾಂಗ ಮಾರ್ಗದ ಉಪದೇಶವು ಇಲ್ಲಿಯೇ ಈಗಲೇ ಪರಮಸುಖವನ್ನು ಪಡೆಯಲು ದಾರಿದೀಪವಾಗಿದೆ ಜಾತಿ ಮತ ಧರ್ಮಗಳ ಬೇಧವಿಲ್ಲದೆ ಸರ್ವರು ಈ ಮಾರ್ಗದಲ್ಲಿ ನಡೆದು ಬುದ್ಧರ ಬೋಧನೆಯಂತೆ ದುಃಖ್ಖದಿಂದ ಮುಕ್ತರಾಗಬಹುದು.
ನಾಲ್ಕು ಆರ್ಯ ಸತ್ಯಗಳನ್ನು ವಿಶ್ಲೇಷಿಸಿದಾಗ 24 ಅಂಶಗಳು ಕಂಡು ಬರುತ್ತವೆ ಆದ್ದರಿಂದ ಬುದ್ಧರು ಬೋಧಿಸಿದ ಈ ಸ್ಥಳದಲ್ಲಿ ಸಾಮ್ರಾಟ್ ಅಶೋಕ ಚಕ್ರವರ್ತಿಯು ಸ್ಟಂಭವನ್ನು ಸ್ಥಾಪಿಸಿ ಅದರ ಮೇಲೆ 4 ದಿಕ್ಕುಗಳಲ್ಲಿ ಸತ್ಯದ ಧಮ್ಮದ ಸಂದೇಶಗಳು ಸಿಂಹಗರ್ಜನೆಯಂತೆ ಹರಡಲಿ ಎಂದು 4 ಸಿಂಹ ಮತ್ತು 24 ಅರೆಗಳುಳ್ಳ ಧಮ್ಮಚಕ್ರವನ್ನು ಕೆತ್ತಿಸಿದರು ಅವುಗಳೇ ನಮ್ಮ ರಾಷ್ಟ್ರ ಲಾಂಛನವಾಗಿ ಸ್ವತಂತ್ರ ಸಮಾನತೆ ನ್ಯಾಯ ಸಹೋದರತೆಯ ಸಂಕೇತವಾಗಿ ಸದಾ ನಮ್ಮನ್ನು ನೆರಳಿನಂತೆ ಹಿಂಬಾಲಿಸುತ್ತವೆ.
ಹೀಗೆ ಭಗವಾನ್ ಬುದ್ಧರು ಧಮ್ಮಚಕ್ಕ ಪವತ್ತನ ಸುತ್ತವನ್ನು ಬೋಧಿಸುತ್ತಾರೆ, ಈ ದಿನವೂ ಜುಲೈ ತಿಂಗಳು ಆಷಾಡ ಮಾಸದ ಪೂರ್ಣಿಮೆಯಂದೇ ಬರುವುದರಿಂದ ಜಗತ್ತಿನಲ್ಲೆಡೆ ಇರುವ ಬೌದ್ಧರು ಧಮ್ಮ ಚಕ್ಕ ಪವತ್ತನಾ ದಿನವೆಂದು ತಮ್ಮ ತಮ್ಮ ಮನ ಮನೆಗಳಲ್ಲಿ ದೊಡ್ಡ ಹಬ್ಬದಂತೆ ಸಡಗರ ಸಂಭ್ರಮದಿಂದ ಆಚರಿಸಿ ಸರ್ವ ಜೀವಿಗಳಿಗೂ ಗುರುವಾಗಿ ಧಮ್ಮೋಪದೇಶ ನೀಡಿದ ಬುದ್ಧ ಗುರುವಿಗೆ ವಂದಿಸುತ್ತಾರೆ.
ಅದೇ ದಿನ ಮಹಾಮಾಯೆಯು ಗರ್ಭ ಧರಿಸಿದ ದಿನ, ಅದೇ ದಿನ ಸಿದ್ಧಾರ್ಥ ಗೌತಮರು ಗೃಹತ್ಯಾಗ ಮಾಡಿದ ದಿನ, ಅದೇ ದಿನ ಬೌದ್ಧ ಭಿಕ್ಕುಗಳಿಗೆ ವರ್ಷ ವಾಸ ಪ್ರಾರಂಭದ ದಿನ ಅಂದರೆ ಬೌದ್ಧ ಭಿಕ್ಕುಗಳು ಮಳೆಗಾಲದಲ್ಲಿ ಜುಲೈ, ಆಗಸ್ಟ್, ಸೆಪ್ಟೆಂಬರ್ ಮೂರು ತಿಂಗಳುಗಳ ಕಾಲ ಒಂದೇ ಸ್ಥಳದಲ್ಲಿ ಉಳಿದುಕೊಂಡು ಧಮ್ಮ ಶಮಣ ಮಾಡುವರು.
ಭಾರತದಲ್ಲಿ ಮಾತ್ರ ವೈದಿಕ ಮನುವಾದಿಗಳು ಗುರುಪೂರ್ಣಿಮೆಯೆಂದು ಆಚರಿಕೊಂಡು ಬರುತ್ತಲೇ ಇದ್ದಾರೆ ವೈದಿಕ ಪುರೋಹಿತರೆನಿಸಿಕೊಂಡವರು ಮಾತ್ರ ಶುಭ ಕಾರ್ಯಗಳನ್ನು ಮಾಡಬಹುದು, ಇತರೇ ಸಮುದಾಯಗಳು ಶುಭಕಾರ್ಯಗಳನ್ನು ಮಾಡಿದರೆ ಅವರಿಗೆ ಅನಿಷ್ಟ ಅಶುಭವಾಗುತ್ತದೆ ಹೇಗಿದೆ ನೋಡಿ ಮನುವಾದಿಗಳ ಆಷಾಡ ಮಾಸದ ಆಷಾಡ ಭೂತಿತನದ ಒಳಮರ್ಮ!?
ಬೌದ್ಧರಿಗೆ ಪ್ರತಿ ಹುಣ್ಣಿಮೆಯು ಶುಭಸೂಚಕವಾದರೆ, ಇತರರಿಗೆ ಹೇಗೆ ಅಶುಭವಾಗುತ್ತದೆ? ಆಷಾಢವು ಅಶುಭ ಮಾಸವೆಂದು ಇತಿಹಾಸದ ಕತ್ತಲ ಗರ್ಭದಲ್ಲಿ ಹೂತಿಟ್ಟು ನಮ್ಮ ಪೂರ್ವಿಕರ ಇತಿಹಾಸವು ನಮಗೆ ತಿಳಿಯದಂತೆ ಮಾಡಿದ್ದಾರೆ ಅದಕ್ಕೆ ಬಾಬಾಸಾಹೇಬರು ಹೇಳಿದ್ದು “ಇತಿಹಾಸ ಮರೆತವರು ಇತಿಹಾಸ ಸೃಷ್ಷ್ಠಿಸಲಾರರು”ಅಂತ ಆದರೆ ಆಷಾಡ ಮಾಸವು ಸಮಸ್ತ ಭಾರತೀಯರಿಗೆ ಜ್ಞಾನದ ಭಾಗಿಲನ್ನು ತೆರೆದ ತಿಂಗಳು, ಸತ್ಯವನ್ನು ಸತ್ಯವೆಂದು ಸುಳ್ಳನ್ನು ಸುಳ್ಳೆಂದು ಸಾರಿದ ಭಾರತೀಯರಾದ ನಾವುಗಳು ಬಹುಜನರಿಗೆ ನಿಜವಾದ ಇತಿಹಾಸವನ್ನು ತಿಳಿಸೋಣ.
ವೈದಿಕರಿಂದ ಸೃಷ್ಟಿಯಾದ ಅಸಮಾನತೆಯ ಕತ್ತಲ ಕೂಪದ ಈ ನೆಲದಲ್ಲಿ ಮಹಾ ಕಾರುಣಿಕನ ಮಾನವೀಯ ಲೋಕದ ಧಮ್ಮಚಕ್ರವು ಉರುಳಿ ಸಾಮಾನ್ಯರಿಂದಿಡಿದು ಸಾಮ್ರಾಟ್ ಅಶೋಕರಂತಹ ಆಳರಸರ ಮನಕ್ಕೆ ಬುದ್ಧತ್ವವು ಹೊಕ್ಕಿ ಮಾನವೀಯ ಮನುಷ್ಯರಾಗುತ್ತಾರೆ, ಇದರಿಂದ ಮೌಢ್ಯವನ್ನೇ ಬಂಡವಾಳ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತಿದ್ದ ವೈದಿಕರು ನಿರುದ್ಯೋಗಿಗಳಾಗುತ್ತಾರೆ ತಮ್ಮ ನಿರುದ್ಯೋಗಕ್ಕೆ ಕಾರಣವಾದ ಆಷಾಡ ಮಾಸವು ಅನಿಷ್ಟ ಅಶುಭವೆಂದು ಜನರು ತಿರಸ್ಕರಿಸುವಂತೆ ಮಾಡಿ ಯಶಸ್ವಿಯಾಗುತ್ತಾರೆ.
ಬುದ್ಧರೆಂಬ ಅರಿವಿನ ಹಣತೆಯಿಂದ ಆಷಾಢಮಾಸದ ತಿಂಗಳು ಸಕಲ ಜೀವರಾಶಿಗಳಿಗೂ ಶ್ರೇಶ್ಟವಾದರೆ ವೈದಿಕ ಪುರೋಹಿತರ ದೃಷ್ಟಿಯಲ್ಲಿ ಮಾತ್ರ ಕನಿಷ್ಠವಾಗುತ್ತದೆ ಕುಟಿಲತೆಯಿಂದ ಅಧಿಕಾರವನ್ನು ಕಸಿದುಕೊಂಡು ತಮ್ಮದೇ ಸಾಮ್ರಾಜ್ಯವನ್ನು ಸ್ಥಾಪಿಸಿ ಬುದ್ಧ ಧಮ್ಮವನ್ನು ಈ ನೆಲದಿಂದಲೇ ಓಡಿಸಿದ ವೈದಿಕರು ತಾವು ಬರೆದುದೆಲ್ಲವನ್ನು ಕಾನೂನನ್ನಾಗಿಸಿ ಇದರ ವಿರುದ್ಧ ಯಾರು ಪ್ರಶ್ನಿಸಬಾರದೆಂದು ಇಲ್ಲಿನ ಮೂಲನಿವಾಸಿಗಳ ಮೇಲೆ ಧಾರ್ಮಿಕ ಗುಲಾಮಗಿರಿಯನ್ನೇರಿ ಅದನ್ನು ಒಪ್ಪಿಕೊಳ್ಳುವಂತೆ ಮಾಡಿರುವುದು ಈ ದೇಶದ ದುರಂತವೇ ಸರಿ.
ಸರ್ವರೂ ಕತ್ತಲೆಯಿಂದ ಬೆಳಕಿನ ಕಡೆ ಬರುವಂತಾಗಲಿ ಇಡೀ ವಿಶ್ವವು ಎಲ್ಲಾ ರೋಗ ರುಜಿನಗಳಿಂದ ಮುಕ್ತವಾಗಿ ಸುಖದಿಂದ ಜೀವಿಸುವಂತಾಗಲಿ
ಸರ್ವರಿಗೂ ಬುದ್ಧಗುರು ಮೊದಲ ಧಮ್ಮೋಪದೇಶ ನೀಡಿದ ದಿನವಾದ ಆಷಾಡ ಮಾಸದ ಹುಣ್ಣಿಮೆಯ ಧಮ್ಮ ಚಕ್ರ ಪರಿವರ್ತನಾ ದಿನದ ಶುಭಾಶಯಗಳು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
Mysuru Dasara Elephants: ದಸರಾ ಗಜಪಡೆಯ ತೂಕ ಪರೀಕ್ಷೆ: ಶ್ರೀಕಂಠ ಭಾರೀ ಗಜ, ಏಕಲವ್ಯಕ್ಕೆ 2ನೇ ಸ್ಥಾನ; ಅಂಬಾರಿ ಆನೆ ಆಯ್ಕೆ ಇನ್ನೂ ಬಾಕಿ
ಸುದ್ದಿದಿನ,ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳಿಗೆ ಸಾಂಪ್ರದಾಯಿಕ ತೂಕ ಪರೀಕ್ಷೆ ನಡೆಸಲಾಗಿದೆ. ಈ ಬಾರಿ ಮತ್ತಿಗೋಡು ಶಿಬಿರದ 57 ವರ್ಷದ ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಗಜಪಡೆಯಲ್ಲೇ ಅತ್ಯಂತ ಭಾರವಾದ ಆನೆಯಾಗಿ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ. ಭೀಮನಕಟ್ಟೆ ಶಿಬಿರದ 41 ವರ್ಷದ ಏಕಲವ್ಯ 5,600 ಕೆಜಿ ತೂಗಿ ಎರಡನೇ ಸ್ಥಾನದಲ್ಲಿದ್ದಾನೆ.
ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್ನಲ್ಲಿ ಭಾನುವಾರ ಬೆಳಗ್ಗೆ ಎಲ್ಲ 9 ಆನೆಗಳ ತೂಕ ಪರೀಕ್ಷೆ ನಡೆಸಲಾಯಿತು. ಕಳೆದ ವರ್ಷ ಭೀಮ ಮತ್ತು ಅಭಿಮನ್ಯು ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದರು. ಆದರೆ ಈ ಬಾರಿ ಇವರಿಬ್ಬರನ್ನೂ ದಸರಾಗೆ ಕರೆತಂದಿಲ್ಲ. ಹೀಗಾಗಿ ಶ್ರೀಕಂಠನ ತೂಕವೇ ಈ ವರ್ಷದ ಗಜಪಡೆಯ ಗಮನ ಸೆಳೆದಿದೆ.
ಹೈಲೈಟ್ಸ್: 57 ವರ್ಷದ ಶ್ರೀಕಂಠನೇ ಗಜಪಡೆಯ ತೂಕದ ಬಾದ್ಷಾ |
|
http://Visit : www.suddidina.com
ಗಂಡಾನೆಗಳ ತೂಕ 5 ಸಾವಿರ ಕೆಜಿಗೂ ಅಧಿಕ
ಈ ಬಾರಿಯ ಮೊದಲ ಹಂತದ ಗಜಪಡೆಯ ವಿಶೇಷತೆಯೆಂದರೆ ಬಹುತೇಕ ಗಂಡಾನೆಗಳು 5 ಸಾವಿರ ಕೆಜಿಗೂ ಹೆಚ್ಚು ತೂಕ ಹೊಂದಿರುವುದು. ಆದರೆ ಆನೆಗಳ ತೂಕ ಹೆಚ್ಚಿಸುವುದೇ ಅರಣ್ಯ ಇಲಾಖೆಯ ಮುಖ್ಯ ಗುರಿಯಲ್ಲ. ಬದಲಿಗೆ ಅವುಗಳ ಆರೋಗ್ಯ, ದೈಹಿಕ ಸಾಮರ್ಥ್ಯ ಮತ್ತು ತಾಲೀಮಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಅವರ ಪ್ರಕಾರ, ಆನೆಗಳ ತೂಕದ ಆಧಾರದ ಮೇಲೆ ಅವುಗಳಿಗೆ ನೀಡಬೇಕಾದ ಆಹಾರದ ಪ್ರಮಾಣ ಮತ್ತು ಪೌಷ್ಟಿಕ ಆಹಾರವನ್ನು ನಿರ್ಧರಿಸಲಾಗುತ್ತದೆ. ಪ್ರತಿಯೊಂದು ಆನೆಯ ದೈಹಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾಲೀಮು ರೂಪಿಸಲಾಗುತ್ತದೆ.
9 ಆನೆಗಳ ತೂಕದ ಆಧಾರದಲ್ಲೇ ಆಹಾರ
ದಸರಾ ಗಜಪಡೆಯಲ್ಲಿರುವ ಆನೆಗಳ ಆರೋಗ್ಯ ಕಾಪಾಡುವುದು ಪ್ರಮುಖ ಆದ್ಯತೆಯಾಗಿದೆ. ತೂಕ ಪರೀಕ್ಷೆಯ ಮೂಲಕ ಆನೆಗಳ ದೈಹಿಕ ಸ್ಥಿತಿಯ ಬಗ್ಗೆ ಅಗತ್ಯ ಮಾಹಿತಿ ಪಡೆಯಲಾಗುತ್ತದೆ. ಅದರ ಆಧಾರದ ಮೇಲೆ ಪೌಷ್ಟಿಕ ಆಹಾರ, ದಿನನಿತ್ಯದ ಚಟುವಟಿಕೆ ಹಾಗೂ ತಾಲೀಮಿನಲ್ಲಿ ಅಗತ್ಯ ಬದಲಾವಣೆ ಮಾಡಲಾಗುತ್ತದೆ.
ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಈಗಿರುವ ಎಲ್ಲ ಆನೆಗಳೂ ಅಂಬಾರಿ ಹೊರುವ ಸಾಮರ್ಥ್ಯ ಹೊಂದಿವೆ. ಅನುಭವಿ ಆನೆಗಳಾಗಿರುವುದರಿಂದ ಅಂತಿಮ ತಾಲೀಮು ಅತ್ಯಂತ ಮಹತ್ವ ಪಡೆಯಲಿದೆ.
ಅಂಬಾರಿ ಆನೆ ಯಾರು? ಕುತೂಹಲ
ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾರು ಎಂಬ ಕುತೂಹಲ ಈಗಾಗಲೇ ಹೆಚ್ಚಾಗಿದೆ. ಕೇವಲ ತೂಕದ ಆಧಾರದ ಮೇಲೆ ಅಂಬಾರಿ ಆನೆಯನ್ನು ಆಯ್ಕೆ ಮಾಡುವುದಿಲ್ಲ. ಆನೆಯ ಆರೋಗ್ಯ, ಸಾಮರ್ಥ್ಯ, ಅನುಭವ, ತಾಲೀಮು ಮತ್ತು ಅಂತಿಮ ಹಂತದ ಪ್ರದರ್ಶನವನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.
ಮೊದಲ ಹಂತದ ತಾಲೀಮು ಮುಗಿದ ಬಳಿಕ ನಡೆಯುವ ಅಂತಿಮ ತಾಲೀಮಿನ ನಂತರವೇ ಚಿನ್ನದ ಅಂಬಾರಿ ಹೊರುವ ಆನೆಯನ್ನು ಅಂತಿಮಗೊಳಿಸಲಾಗುತ್ತದೆ. ಹೀಗಾಗಿ ಶ್ರೀಕಂಠ ತೂಕದಲ್ಲಿ ನಂಬರ್ 1 ಆಗಿದ್ದರೂ, ಅಂಬಾರಿ ವಿಚಾರದಲ್ಲಿ ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ.
ಆನೆಗಳ ಬಳಿ ಸಾರ್ವಜನಿಕರಿಗೆ ನಿರ್ಬಂಧ
ದಸರಾ ಆನೆಗಳ ವೀಕ್ಷಣೆಗೆ ಯಾವುದೇ ಟಿಕೆಟ್ ವ್ಯವಸ್ಥೆ ಮಾಡಿಲ್ಲ ಎಂದು ಡಿಸಿಎಫ್ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಆನೆಗಳ ಬಳಿ ತೆರಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ದಸರಾ ಆನೆಗಳ ಕುರಿತು ಸುಳ್ಳು ಮಾಹಿತಿ ಹರಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.
“ಆನೆಗಳಿಗೆ ಹಂತ ಹಂತವಾಗಿ ತಾಲೀಮು ಮಾಡಲಾಗುತ್ತದೆ. ಸದ್ಯಕ್ಕೆ ಎಲ್ಲ ಆನೆಗಳ ಆರೋಗ್ಯ ಚೆನ್ನಾಗಿದೆ. ಅಂತಿಮ ಹಂತದ ತಾಲೀಮಿನ ಬಳಿಕ ಅಂಬಾರಿ ಹೊರುವ ಆನೆ ಆಯ್ಕೆ ಮಾಡಲಾಗುವುದು.”
– ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್
ದಸರಾ ಗಜಪಡೆಯ ತೂಕದ ವಿವರ
- ಶ್ರೀಕಂಠ: 5,790 ಕೆಜಿ
- ಏಕಲವ್ಯ: 5,600 ಕೆಜಿ
- ಧನಂಜಯ: 5,530 ಕೆಜಿ
- ಮಹೇಂದ್ರ: 5,490 ಕೆಜಿ
- ಪ್ರಶಾಂತ: 5,205 ಕೆಜಿ
- ಗೋಪಿ: 5,170 ಕೆಜಿ
- ಶ್ರೀರಾಮ: 4,820 ಕೆಜಿ
- ಲಕ್ಷ್ಮೀ: 3,990 ಕೆಜಿ
- ಕಾವೇರಿ: 3,075 ಕೆಜಿ

ದಿನದ ಸುದ್ದಿ
ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್ಮೆಂಟ್ಗೆ ‘ಡೆಮಾಲಿಷನ್’ ಶುರು!
ಕೂಡ್ಲುಗೇಟ್ನ ಎಸ್ಎನ್ಎನ್ ರಾಜ್ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ
ಸುದ್ದಿದಿನ,ಬೆಂಗಳೂರು: ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್ನ ಎಸ್ಎನ್ಎನ್ ಎಸ್ಟೇಟ್ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್ಎನ್ಎನ್ ರಾಜ್ ಕಾರ್ಪ್ ಸಂಸ್ಥೆಯು ಎಚ್ಎಸ್ಆರ್ ಲೇಔಟ್ನಲ್ಲಿರುವ ತನ್ನ ಎಸ್ಎನ್ಎನ್ ರಾಜ್ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್ಮೆಂಟ್ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.
₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ
ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ
ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್ಎನ್ಎನ್ ಅಪಾರ್ಟ್ಮೆಂಟ್ ನಿರ್ದೇಶಕ ಅನೂಜ್ ತಿಳಿಸಿದ್ದಾರೆ. ಫ್ಲ್ಯಾಟ್ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.
ಅದೇ ಜಾಗದಲ್ಲಿ ಹೊಸ ಅಪಾರ್ಟ್ಮೆಂಟ್ ನಿರ್ಮಾಣ
ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್ಮೆಂಟ್ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್ಗಳು ಮುಂಗಡವಾಗಿ ಬುಕ್ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.
ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.

ದಿನದ ಸುದ್ದಿ
ಪಾಕ್ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ
ಸುದ್ದಿದಿನ,ಜಮ್ಮುಕಾಶ್ಮೀರ: ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಮತ್ತೆ ಡ್ರೋನ್ ಹಾರಾಟದ ಆತಂಕ ಎದುರಾಗಿದೆ. ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್ನಲ್ಲಿ ಪಾಕಿಸ್ತಾನ ಮೂಲದ್ದೆಂದು ಶಂಕಿಸಲಾದ ಡ್ರೋನ್ವೊಂದು ಕಾಣಿಸಿಕೊಂಡಿರುವುದು ಭದ್ರತಾ ಪಡೆಗಳನ್ನು ಅಲರ್ಟ್ ಮಾಡಿದೆ. ಗಡಿಯಾಚೆಯಿಂದ ನಡೆಯಬಹುದಾದ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ತಡೆಯಲು ಸೇನೆ ಹಾಗೂ ಭದ್ರತಾ ಪಡೆಗಳು ನಿಗಾ ಮತ್ತಷ್ಟು ಬಿಗಿಗೊಳಿಸಿವೆ.
ಹೈಲೈಟ್ಸ್ |
|
http://Visit : www.suddidina.com
ಬೆಹ್ರೂಟಿ ಗ್ರಾಮದ ಬಳಿ ಕಾಣಿಸಿಕೊಂಡ ಶಂಕಿತ ಡ್ರೋನ್
ಶುಕ್ರವಾರ ಸಂಜೆ ಬಾಲಕೋಟೆ ಪ್ರದೇಶದ ಬೆಹ್ರೂಟಿ ಗ್ರಾಮದ ಸಮೀಪ ಆಕಾಶದಲ್ಲಿ ಶಂಕಿತ ಡ್ರೋನ್ ಹಾರಾಟ ನಡೆಸಿರುವುದು ಸ್ಥಳೀಯರ ಹಾಗೂ ಭದ್ರತಾ ಪಡೆಗಳ ಗಮನಕ್ಕೆ ಬಂದಿದೆ. ಬಳಿಕ ಅದು ಮಂಗಲ್ನಾರ್-ದಬ್ರೋಟ್ ಪ್ರದೇಶದತ್ತ, ಅಂದರೆ ಗಡಿ ಪ್ರದೇಶದ ಸಮೀಪಕ್ಕೆ ತೆರಳಿ ಪಾಕಿಸ್ತಾನದ ದಿಕ್ಕಿನಲ್ಲಿ ವಾಪಸ್ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ರೋನ್ ಕಾಣಿಸಿಕೊಂಡ ಮಾಹಿತಿ ಸಿಗುತ್ತಿದ್ದಂತೆ LoC ವ್ಯಾಪ್ತಿಯಲ್ಲಿ ಭದ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ಬೆಳಗ್ಗೆಯಿಂದಲೇ ಸರ್ಚ್ ಆಪರೇಷನ್ ಆರಂಭಿಸಲಾಗಿದ್ದು, ಡ್ರೋನ್ ಮೂಲಕ ಯಾವುದೇ ವಸ್ತು, ಶಸ್ತ್ರಾಸ್ತ್ರ ಅಥವಾ ಅನುಮಾನಾಸ್ಪದ ಸಾಮಗ್ರಿಗಳನ್ನು ಕೆಳಗೆ ಇಳಿಸಲಾಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.
3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಶೋಧ
ಡ್ರೋನ್ ಆತಂಕದ ನಡುವೆಯೇ ಜಮ್ಮು-ಕಾಶ್ಮೀರದ ಉಧಂಪುರ, ಕಥುವಾ ಮತ್ತು ರಾಜೌರಿ ಜಿಲ್ಲೆಗಳ ವಿಶಾಲ ಅರಣ್ಯ ಪ್ರದೇಶಗಳಲ್ಲೂ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ತೀವ್ರಗೊಳಿಸಿವೆ.
ಉಧಂಪುರ-ಕಥುವಾ ಅರಣ್ಯ ಪ್ರದೇಶದ ಖುಬನ್, ನಾಗೈನ್, ಖ್ಟ್ರೈಲ್, ಗೋಡು ಫಲಾಲ್, ಪದೇತಾರ್, ಚೋರ್ ಮೊಟ್ಟು, ಕಿಯಾ, ಖೇಬಾ, ಭೇದ್, ಮಾರ್ತಾ ಹಾಗೂ ಜೋಫರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೊಲೀಸರು, ಸೇನೆ ಮತ್ತು ಅರೆಸೇನಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ.
ರಾಜೌರಿಯಲ್ಲಿ ಶಸ್ತ್ರಸಜ್ಜಿತರ ಶಂಕೆ
ರಾಜೌರಿ ಜಿಲ್ಲೆಯ ಗೈಬಾಸ್, ಮಿಥಿಯಾನಿ, ಮೊಗ್ಲಾ ಮತ್ತು ನಾರ್ಲಾ ಪ್ರದೇಶಗಳಲ್ಲೂ ಪ್ರತ್ಯೇಕ ಸರ್ಚ್ ಆಪರೇಷನ್ ಕೈಗೊಳ್ಳಲಾಗಿದೆ. ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಸಂಚರಿಸುತ್ತಿರುವುದನ್ನು ಗ್ರಾಮಸ್ಥರು ಗಮನಿಸಿ ಭದ್ರತಾ ಪಡೆಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಮಾಹಿತಿ ಆಧರಿಸಿ ಭದ್ರತಾ ಪಡೆಗಳು ವ್ಯಾಪಕ ಶೋಧ ನಡೆಸಿದರೂ, ಇದುವರೆಗೆ ಯಾವುದೇ ಶಂಕಿತ ವ್ಯಕ್ತಿಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಡಿಯಲ್ಲಿ ಹೆಚ್ಚಿದ ಕಣ್ಗಾವಲು
ಡ್ರೋನ್ ಹಾರಾಟ ಹಾಗೂ ಅರಣ್ಯ ಪ್ರದೇಶಗಳಲ್ಲಿ ಶಂಕಿತ ವ್ಯಕ್ತಿಗಳ ಚಲನವಲನದ ಮಾಹಿತಿ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೂ ತಕ್ಷಣ ಮಾಹಿತಿ ನೀಡುವಂತೆ ಸ್ಥಳೀಯರಿಗೂ ಸೂಚನೆ ನೀಡಲಾಗಿದೆ.
ಪ್ರಸ್ತುತ ಕಾರ್ಯಾಚರಣೆಯ ಪ್ರಮುಖ ಉದ್ದೇಶ ಗಡಿಯಾಚೆಯಿಂದ ಸಂಭವಿಸಬಹುದಾದ ಒಳನುಸುಳುವಿಕೆ ಅಥವಾ ಅನುಮಾನಾಸ್ಪದ ಸಾಗಾಟವನ್ನು ತಡೆಯುವುದು ಮತ್ತು ಪ್ರದೇಶದಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ.

-
ದಿನದ ಸುದ್ದಿ3 days agoಬರ ನಿರ್ವಹಣೆಗೆ ಸಚಿವ ಸಂಪುಟ ಉಪಸಮಿತಿ ಸಭೆ – ದಾವಣಗೆರೆಯಲ್ಲಿ ಕುಡಿಯುವ ನೀರು, ಮೇವು ಕೊರತೆ ಬಗ್ಗೆ ಸಚಿವ ಮಲ್ಲಿಕಾರ್ಜುನ್ ಪ್ರಸ್ತಾಪ
-
ದಿನದ ಸುದ್ದಿ2 days agoಡಿಕೆಶಿ ಸರ್ಕಾರಕ್ಕೆ 100 ದಿನಗಳ ಸಂಭ್ರಮ – `ದೃಢ ಕರ್ನಾಟಕದ ಸಂಕಲ್ಪ’ ಕಾರ್ಯಕ್ರಮಕ್ಕೆ ವಿಧಾನಸೌಧ ಸಜ್ಜು
-
ದಿನದ ಸುದ್ದಿ2 days agoರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ – 20 ಸಾವಿರ ಕೋಟಿ ರೂ. ವೆಚ್ಚದ 8 ಬಹು ಟ್ರ್ಯಾಕಿಂಗ್ ಯೋಜನೆಗಳಿಗೆ ಕೇಂದ್ರದ ಅಸ್ತು!
-
ದಿನದ ಸುದ್ದಿ2 days agoಬಿಎಂಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಇನ್ಮುಂದೆ ಓಲಾ, ಉಬರ್ ಆ್ಯಪ್ನಲ್ಲೇ ಬಿಎಂಟಿಸಿ ಬಸ್ ಟ್ರ್ಯಾಕಿಂಗ್ ಮತ್ತು ಟಿಕೆಟ್ ಬುಕಿಂಗ್!
-
ದಿನದ ಸುದ್ದಿ2 days ago5 ವರ್ಷದಿಂದ PFಗೆ ಹಣ ಜಮಾ ಮಾಡಿಲ್ಲ, ಬಡ್ಡಿ ಸಿಗುತ್ತಾ? ಇಲ್ಲಿದೆ EPFO ನಿಯಮದ ಸ್ಪಷ್ಟ ಮಾಹಿತಿ!
-
ದಿನದ ಸುದ್ದಿ2 days agoಗೃಹ ಜ್ಯೋತಿ ಯೋಜನೆಗೆ 3 ವರ್ಷಗಳ ಸಂಭ್ರಮ – 1.65 ಕೋಟಿ ಕುಟುಂಬಗಳ ಬದುಕಿಗೆ ಬೆಳಕು!
-
ದಿನದ ಸುದ್ದಿ3 days agoಭದ್ರೆ ಆಗಮನದಿಂದ ರೈತರಲ್ಲಿ ಹೊಸ ಭರವಸೆ – ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ
-
ದಿನದ ಸುದ್ದಿ3 days agoವಿಶೇಷ ಚೇತನ ಮಕ್ಕಳು ದೇವರ ಮಕ್ಕಳು – ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್


